Monday, June 15, 2026
Monday, June 15, 2026

Royal Diamond English Medium School ಮನೆಯೇ ಮೊದಲ ಪಾಠಶಾಲೆ.ತಾಯಿಯೇ ಮೊದಲ ಗುರು- ವೀಣಾ ನಾಯಕ್

Date:

Royal Diamond English Medium School ಸಿರಿಗನ್ನಡ ವೇದಿಕೆ, ಮಹಿಳಾ ವೇದಿಕೆ, ಶಿವಮೊಗ್ಗದ ವತಿಯಿಂದ ತಾಯಂದಿರ ದಿನಾಚರಣೆಯ ಪ್ರಯುಕ್ತ ಶಿವಮೊಗ್ಗ ನಗರದ ರಾಯಲ್ ಡೈಮಂಡ್ ಆಂಗ್ಲ ಮಾಧ್ಯಮ ಸ್ಕೂಲ್, ವಿನೋಬಾ ನಗರದಲ್ಲಿ ಕವಿಗೋಷ್ಠಿ, ಉಪನ್ಯಾಸ ಹಾಗೂ ಗಾನಸುಧೆ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು.

ಕುಮಾರಿ ಚಿನ್ಮಯಿ ಪ್ರಾರ್ಥಿಸಿದರು. ಕಾರ್ಯಕ್ರಮ ಉದ್ಘಾಟನೆಯನ್ನು ಶ್ರೀಮತಿ ವೀಣಾ ನಾಯಕ್, ಸಂಗೀತ ವಿದುಷಿ, ಶಿವಮೊಗ್ಗ.ಇವರು ನೆರವೇರಿಸಿದರು ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂದು ಹೇಳುತ್ತಾ ತಾಯಿಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು. .

ಶ್ರೀ ನಿರಂಜನ್ ಕುಮಾರ್ ಸ್ವಾಗತಿಸಿದರು. ಶ್ರೀಮತಿ ನಂದಾ ಪ್ರೇಮಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು, ಶ್ರೀ ಗಂಗಾಧರ್ ಪಿ ಬನ್ನಿ ಹಟ್ಟಿ ಇವರಿಂದ ಗಾನಸುಧೆ ಸಂಗೀತ ಕಾರ್ಯಕ್ರಮ ಜರುಗಿತು.

ಮುಖ್ಯ ಅತಿಥಿಗಳಾಗಿ ಶ್ರೀಮತಿ ಪೂಜಾ ನಾಗರಾಜ್, ಕಾರ್ಯದರ್ಶಿಗಳು, ರಾಯಲ್ ಡೈಮಂಡ್ ಇಂಗ್ಲಿಷ್ ಸ್ಕೂಲ್ ಇವರು ಆಗಮಿಸಿದ್ದರು.ತಾಯಿಯ ಹಾಗೂ ಶಿಕ್ಷಕರ ಜವಾಬ್ದಾರಿ ತಿಳಿಸಿ ಸಂಸ್ಕಾರಯುತ ಶಿಕ್ಷಣದಿಂದ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮತಿ ರೇಖಾ ಸುರಭಿ ಆಪ್ತ ಸಮಾಲೋಚಕರು ಇವರು ತಾಯಂದಿರ ಇಂದಿನ ಸವಾಲುಗಳು ಮತ್ತು ಸ್ವಾಸ್ಥ್ಯ ಎನ್ನುವ ವಿಷಯದ ಕುರಿತು ಸುಧೀರ್ಘ ಉಪನ್ಯಾಸ ನೀಡಿದರು.

ಅಧ್ಯಕ್ಷತೆಯನ್ನು ವಹಿಸಿದ್ದ ಶ್ರೀ ಡಾ.ಪರಿಸರ ನಾಗರಾಜ್, ಮುಖ್ಯಸ್ಥರು ಪರಿಸರ ವಿಜ್ಞಾನ ವಿಭಾಗ ಸಹ್ಯಾದ್ರಿ ಕಾಲೇಜ್ ಶಿವಮೊಗ್ಗ ಇವರು ಕವಿಗಳ ಕವನದ ಸಾಹಿತ್ಯ ಹಾಗೂ ವಾಚನವನ್ನು ಮೆಚ್ಚಿಕೊಂಡು, ಇಂತಹ ಇನ್ನಷ್ಟು ಕಾರ್ಯಕ್ರಮಗಳು ನೆರವೇರಲಿ ಎಂದು ಹಾರೈಸಿದರು.

Royal Diamond English Medium School ಕವಿಗೋಷ್ಠಿಯಲ್ಲಿ ಶ್ಯಾಮಲ ರಾಮಕೃಷ್ಣ,ಹಾಲಪ್ಪ ಜೈಲರ್, ನಾಗರತ್ನ ಸುಬ್ರಹ್ಮಣ್ಯ,ಉಮಾ ಗೋಪಾಳ, ಸೌಭಾಗ್ಯ ಜಗನ್ನಾಥ್,ಲಕ್ಷ್ಮಿ ಕುಮಾರ್, ಹು.ಮಾ.ಸತೀಶ್, ಎ.ಎಚ್. ಸುರೇಶ್, ರೇಷ್ಮಾ ಸುರೇಶ್, ಗಂಗಾಧರ್ ಬನ್ನಿಹಟ್ಟಿ, ಚಿನ್ಮಯಿ, ನಳಿನ ಬಾಲಸುಬ್ರಹ್ಮಣ್ಯ,ನಂದಾ ಪ್ರೇಮಕುಮಾರ್ ತಮ್ಮ ಸ್ವರಚಿತ ಕವನಗಳನ್ನು ವಾಚಿಸಿದರು.

ಕಾರ್ಯಕ್ರಮವನ್ನು ಶ್ರೀಮತಿ ನಳಿನ ಬಾಲಸುಬ್ರಹ್ಮಣ್ಯ ಇವರು ನಿರೂಪಿಸಿದರು.

ಶ್ರೀಮತಿ ಜ್ಯೋತಿ ಉಮೇಶ್ ಅವರ ವಂದನಾರ್ಪಣೆ ಯೊಂದಿಗೆ ಕಾರ್ಯಕ್ರಮ ಸಂಪನ್ನಗೊಳಿಸಲಾಯಿತು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar ರಾಜ್ಯದ ಎಲ್ಲಾ ಅಧಿಕಾರಿಗಳು “ಟೀಮ್ ಕರ್ನಾಟಕ” ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ಡಿ.ಕೆ. ಶಿವಕುಮಾರ್

D.K. Shivakumar ರಾಜ್ಯದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ, ಕಾನೂನು...

B.Y. Raghavendra ಕೆರೆ ಬಸವಣ್ಣ ಶೇಡಿನ ಕೆರೆ” ಲೋಕಾರ್ಪಣೆ!

B.Y. Raghavendra ಶ್ರೀ ಡಿ. ಯೇಸು ಪ್ರಕಾಶ್ ಅವರ ಸ್ಮರಣಾರ್ಥ, ಸಾರಾ...

Veerendra Heggade ಕೂಡ್ಲಿಯಲ್ಲಿ ಸಾಮಾಜಿಕಜಾಗೃತಿ ಮೂಡಿಸುವ ಬೀದಿ ನಾಟಕದ ಯಶಸ್ವಿ ಪ್ರದರ್ಶನ

Veerendra Heggade ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...