Tuesday, April 21, 2026
Tuesday, April 21, 2026

ಫ್ರೀ ಶಿಪ್ ಕಾರ್ಡ್: ಪ.ಜಾ/ ವರ್ಗ ಗಳ ವಿದ್ಯಾರ್ಥಿಗಳಿಗೆ ಸರಳ ಪ್ರವೇಶಾತಿ

Date:

ಎಸ್ ಸಿ, ಎಸ್ ಟಿ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಫ್ರೀಶಿಪ್ ಕಾರ್ಡ್ ವಿತರಣೆ, ಶುಲ್ಕ ಕಟ್ಟದೆ ಫ್ರೀಶಿಪ್ ಕಾರ್ಡ್ ತೋರಿಸಿದರೆ ಕಾಲೇಜು ಪ್ರವೇಶಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.

ಹಲವು ವಿದ್ಯಾರ್ಥಿಗಳು ಕಾಲೇಜು ಪ್ರವೇಶದ ಸಂದರ್ಭದಲ್ಲಿ ಹಣವಿಲ್ಲದೆ ಇರಬಹುದು. ಇದರಿಂದ ಅನೇಕ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯುತ್ತಾರೆ.ಇದನ್ನು ತಪ್ಪಿಸಲು ಸರಕಾರ ಫ್ರೀಶಿಪ್ ಕಾರ್ಡ್ ಯೋಜನೆ ಜಾರಿಗೆ ತಂದಿದೆ.
ಫ್ರೀಶಿಪ್ ಕಾರ್ಡ್ ಬಡ ಮಕ್ಕಳು ಶಿಕ್ಷಣದಿಂದ ದೂರ ಉಳಿಯದೆ ಇರಲಿ ಎಂಬ ದೃಷ್ಟಿಯಿಂದ ರಚಿಸಲಾದ ಯೋಜನೆಯಾಗಿದೆ. ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ನಂತರ ತಾವು ಪ್ರವೇಶ ಪಡೆದಿರುವ ಕಾಲೇಜಿಗೆ ಹೋಗಿ ಕಾರ್ಡನ್ನು ತೋರಿಸಿದಲ್ಲಿ, ಯಾವುದೇ ಶುಲ್ಕವಿಲ್ಲದೆ ಉಚಿತ ಪ್ರವೇಶ ಪಡೆಯಬಹುದು.

ಕಾಲೇಜಿಗೆ ಸಮಾಜ ಕಲ್ಯಾಣ ಇಲಾಖೆಯು ವಿದ್ಯಾರ್ಥಿವೇತನ ನೀಡಿ, ಏಳು ದಿನಗಳೊಳಗೆ ಶುಲ್ಕ ಕಟ್ಟುವ ಬಗ್ಗೆ ಪ್ರಮಾಣಪತ್ರವನ್ನು ನೀಡಬೇಕಾಗುತ್ತದೆ. ಇದರಿಂದ ಕಾಲೇಜು ಉಚಿತ ಪ್ರವೇಶ ನೀಡಲಿದೆ. ಉಚಿತ ಪ್ರವೇಶ ಪಡೆದ ನಂತರ ಕಾಲೇಜು ಶುಲ್ಕವನ್ನು ಸಮಾಜ ಕಲ್ಯಾಣ ಇಲಾಖೆ ಪಾವತಿಸಲಿದೆ.

ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳು ಎಸ್.ಎಸ್.ಪಿ ಪೋರ್ಟಲ್ ನಲ್ಲಿ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸುತ್ತಾರೆ. ಈ ವೆಬ್ ಪೋರ್ಟಲ್ ನಲ್ಲಿ ಹೋಗಿ ಕಾರ್ಡ್ ಗೆ ಅಪ್ಲೈ ಮಾಡಬೇಕು. ತದನಂತರ ಅದೇ ಪೋರ್ಟಲ್ ನಲ್ಲಿ ಫ್ರೀಶಿಪ್ ಕಾರ್ಡ್ ಡೌನ್ಲೋಡ್ ಮಾಡಿಕೊಳ್ಳಬೇಕು. ಈ ಕಾರ್ಡ್ ಗೆ ವಿದ್ಯಾರ್ಥಿವೇತನದ ನಂಬರ್ ನೀಡಲಾಗಿರುತ್ತದೆ. ಈ ಯೋಜನೆಯಿಂದ ವಿದ್ಯಾರ್ಥಿಗಳು ಶುಲ್ಕ ಪಾವತಿಯ ಸಂಕಷ್ಟದಿಂದ ಪಾರಾಗಬಹುದು.

ಪ್ರಸ್ತುತ ಈ ಕಾರ್ಡ್ ಕೇವಲ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಮಾತ್ರ ಜಾರಿ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೂ ಈ ಯೋಜನೆ ಜಾರಿಗೆ ತರುವ ಸಂಭವವಿದೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ಕ್ರಾಂತಿಕಾರಿ ಬಸವಣ್ಣನವರ ದಾರಿಯಲ್ಲಿ ಸಾಗುವ ಸಂಕಲ್ಪ ಮಾಡೋಣ- ಬಿ.ವೈ.ರಾಘವೇಂದ್ರ

B.Y. Raghavendra ಕಾಯಕ- ದಾಸೋಹ ಮತ್ತು ಸಾಮಾಜಿಕ ನ್ಯಾಯದ ತತ್ವಗಳನ್ನು ಸಾರಿದ...

Bharat Scouts and Guides ಕೃಷಿ ಕ್ಷೇತ್ರ ಮಾಹಿತಿಯಿಂದ ವಿದ್ಯಾರ್ಥಿಗಳು ಪರಿಪೂರ್ಣರಾಗಲು ಸಾಧ್ಯ- ಕೆ.ರವಿ

Bharat Scouts and Guides ಕೃಷಿ ಕ್ಷೇತ್ರದಲ್ಲಿ ಆಗುತ್ತಿರುವ ಪ್ರಗತಿಯ ಬಗ್ಗೆ...

Klive special Article “ಶಂಕರಂ ಲೋಕ ಶಂಕರಂ” ಎನ್.ಜಯಭೀಮ್ ಜೊಯ್ಸ್, ಶಿವಮೊಗ್ಗ

Klive special Article ಶ್ರೀಶಂಕರಾಚಾರ್ಯ ಗುರುಗಳು (ಶ್ರೀಶಂಕರಜಯಂತಿಯ ಸಂದರ್ಭದಲ್ಲಿ)ಪ್ರತಿವರ್ಷ ವೈಶಾಖಮಾಸದ...

RM Manjunath Gowda ಹುಲಿಕಲ್ ಘಾಟಿ ಪ್ರಕರಣ.ಇಂಜಿನಿಯರುಗಳೇ ಹೊಣೆ. ಎಫ್ ಐ ಆರ್ ದಾಖಲಿಸಲು ಎಸ್ ಪಿ.ಅವರಿಗೆ ಮನವಿ ಮಾಡುವೆ- ಆರ್.ಎಂ.ಮಂಜುನಾಥ ಗೌಡ.

RM Manjunath Gowda ಹುಲಿಕಲ್ ಘಾಟಿ ಪ್ರಕರಣದಲ್ಲಿ ಎಫ್ಐಆರ್ ದಾಖಲಾದ ಹಿನ್ನೆಲೆಯಲ್ಲಿ ಮಕೆನಾಡು...