ರಾಜ್ಯದಾದ್ಯಂತ ನ.11ರಂದು ಓಬವ್ವ ಜಯಂತಿ ಆಚರಿಸಲು ಸರ್ಕಾರ ಆದೇಶ ಹೊರಡಿಸಿದೆ.
ಚಿತ್ರದುರ್ಗದ ಇತಿಹಾಸದಲ್ಲಿ ಒನಕೆ ಓಬವ್ವಳ ಹೆಸರು ಮರೆಯಲು ಸಾಧ್ಯವಿಲ್ಲ. ನವೆಂಬರ್ 11ರಂದು ಓಬವ್ವನ ಜನ್ಮದಿನವಾದ ಕಾರಣ ಈ ದಿನವೇ ಓಬವ್ವ ಜಯಂತಿಯನ್ನಾಗಿ ಘೋಷಿಸಲಾಗಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಚರಣೆ ನಡೆಯಲಿದೆ.
ಕಿತ್ತೂರು ರಾಣಿ ಚೆನ್ನಮ್ಮ, ರಾಣಿ ಅಬ್ಬಕ್ಕ ಕರ್ನಾಟಕದ ಇತರೆ ರಾಣಿಯರ ಸಾಲಿನಲ್ಲಿ ಓಬವ್ವ ಕೂಡ ಒಬ್ಬಳು ಎಂದು ಪರಿಗಣಿಸಲಾಗಿದೆ.