Thursday, February 12, 2026
Thursday, February 12, 2026
Home Blog Page 92

DVS College of Arts, Science and Commerce ವಿದ್ಯಾರ್ಥಿಗಳು ಸಸ್ಯಶಾಸ್ತ್ರದ ಅರಿವು ಹೊಂದುವುದು ಅವಶ್ಯಕ- ಪ್ರೊ.ಕೆ.ಕೇಶವ್

0

DVS College of Arts, Science and Commerce ಸಸ್ಯ ವೈವಿಧ್ಯತೆಯ ಅರಿವು ಮೂಡಿಸುವುದರಿಂದ ಸಸ್ಯಗಳ ರಕ್ಷಣೆ ಹಾಗೂ ಸಂಶೋಧನೆಗೆ ನೆರವಾಗುತ್ತದೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಅವಶ್ಯಕ ಎಂದು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಪ್ರೊ. ಕೆ.ಕೇಶವ್ ಹೇಳಿದರು.

ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಸಸ್ಯಶಾಸ್ತ್ರ ವಿಭಾಗದ ವತಿಯಿಂದ ಸಸ್ಯ ವರ್ಗೀಕರಣ, ಸಸ್ಯ ಗುರುತಿಸುವುದು ಹಾಗೂ ಹರ್ಬೇರಿಯಂ ತಯಾರಿಕಾ ತಂತ್ರಗಳು ವಿಷಯ ಕುರಿತು ಆಯೋಜಿಸಿದ್ದ ಕಾರ್ಯಾಗಾರದಲ್ಲಿ ಮಾತನಾಡಿದರು.

ಸಸ್ಯಗಳ ವರ್ಗೀಕರಣದಿಂದ ಗಿಡಗಳನ್ನು ಸರಿಯಾಗಿ ಗುರುತಿಸಲು ಸಹಕಾರಿಯಾಗುತ್ತದೆ. ವೈಜ್ಞಾನಿಕ ಹೆಸರುಗಳನ್ನು ತಿಳಿದುಕೊಳ್ಳುವುದರಿಂದ ಜಾಗತಿಕವಾಗಿ ಗುರುತಿಸಲು ನೆರವಾಗುತ್ತದೆ. ವಿದ್ಯಾರ್ಥಿಗಳು ಸಸ್ಯಶಾಸ್ತ್ರದ ಬಗ್ಗೆ ಸಂಪೂರ್ಣ ಮಾಹಿತಿ ಹೊಂದುವುದು ಅವಶ್ಯಕ. ಪ್ರಾಯೋಗಿಕ ಜ್ಞಾನ ಹೊಂದುವುದು ಮುಖ್ಯ ಎಂದು ತಿಳಿಸಿದರು.

ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಪ್ರಾಚಾರ್ಯ ಡಾ. ಎಂ.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳಿಗೆ ದಿನನಿತ್ಯ ಪಠ್ಯದ ಜತೆಗೆ ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವುದರಿಂದ ವಿಷಯಗಳ ಜ್ಞಾನ ವಿಸ್ತಾರವಾಗಲು ಅನುಕೂಲವಾಗುತ್ತದೆ. ಡಿವಿಎಸ್ ಸಂಸ್ಥೆಯು ಪಠ್ಯ ಚಟುವಟಿಕೆಗಳ ಜತೆಯಲ್ಲಿ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆ ದೃಷ್ಟಿಯಿಂದ ವೈವಿಧ್ಯ ಚಟುವಟಿಕೆಗಳನ್ನು ಆಯೋಜಿಸಿ ಮಾರ್ಗದರ್ಶನ ನೀಡುತ್ತಿದೆ ಎಂದು ಹೇಳಿದರು.

ಭಾರತೀಯ ಸಸ್ಯಶಾಸ್ತ್ರ ಸಮೀಕ್ಷೆಯ ಪಶ್ಚಿಮಘಟ್ಟ ಪ್ರಾದೇಶಿಕ ಕೇಂದ್ರದ ರಿಸರ್ಚ್‌ ಅಸೋಸಿಯೇಟ್‌ ಡಾ. ಜಗದೀಶ್ ವಿಷ್ಣು ದಳವಿ ಮತ್ತು ಶೃಂಗೇರಿ ಜೆಸಿಬಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಇ.ಎಸ್.ಕುಮಾರಸ್ವಾಮಿ ಉಡುಪ ಅವರು ಕಾರ್ಯಾಗಾರದ ಮಾಹಿತಿ ನೀಡಿದರು.

DVS College of Arts, Science and Commerce ತರಬೇತಿಯಲ್ಲಿ ಸಸ್ಯ ಗುರುತಿಸುವಿಕೆ, ಮಾದರಿ ಸಂಗ್ರಹಣೆ, ಒಣಗಿಸುವಿಕೆ, ಹರ್ಬೇರಿಯಂ ತಯಾರಿಕೆ ಹಾಗೂ ಟ್ಯಾಕ್ಸಾನಾಮಿಕ್ ಕೀ ಬಳಕೆಯ ಬಗ್ಗೆ ಪ್ರಾಯೋಗಿಕವಾಗಿ ಮಾಹಿತಿ ನೀಡಲಾಯಿತು.

ದೇಶೀಯ ವಿದ್ಯಾ ಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಶುಭಕೋರಿದರು. ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐಕ್ಯೂಎಸಿ ಸಂಯೋಜಕ ಪ್ರೊ. ಎನ್.ಕುಮಾರಸ್ವಾಮಿ, ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಶ್ರೀನಿವಾಸ ಲಮಾಣಿ, ಇತರರಿದ್ದರು.

S. Madhu Bangarappa ನವೆಂಬರ್ 8. ತಾಳಗುಪ್ಪದಲ್ಲಿ ಸಚಿವ ಮಧು ಬಂಗಾರಪ್ಪ ನವರಿಂದ “ಜನಸ್ಪಂದನ”ಕಾರ್ಯಕ್ರಮ

0

S. Madhu Bangarappa ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಸ್. ಮಧು ಬಂಗಾರಪ್ಪರವರು ನ. 18 ರಂದು ಮಧ್ಯಾಹ್ನ 1.30ಕ್ಕೆ ಸಾಗರ ತಾಲೂಕು ತಾಳಗುಪ್ಪ ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆವರಣದಲ್ಲಿ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಸಮಸ್ಯೆಗಳ ಕುರಿತು ಪರಿಹಾರ ನೀಡಲು “ಜನಸ್ಪಂದನಾ “ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ಈ ಕಾರ್ಯಕ್ರಮದಲ್ಲಿ ಸಾಗರ ತಾಲೂಕು ಮಟ್ಟದ ಅಧಿಕಾರಿಗಳು ನಿಗದಿಪಡಿಸಿದ ಸಮಯಕ್ಕೆ ಸರಿಯಾಗಿ ಅಗತ್ಯ ಮಾಹಿತಿಯೊಂದಿಗೆ ತಮ್ಮ ಕಚೇರಿಯ ಯಾವುದೇ ಪ್ರತಿನಿಧಿಯನ್ನು ನಿಯೋಜಸದೆ ತಾವೇ ಖುದ್ದಾಗಿ ತಪ್ಪದೇ ಹಾಜರಿದ್ದು ತಮ್ಮ ಇಲಾಖೆಗೆ ಸಂಬಂಧಪಟ್ಟ ವಿಷಯಗಳ ಕುರಿತು ಸಾರ್ವಜನಿಕರಿಗೆ ಮಾಹಿತಿಯನ್ನು ನೀಡುವಂತೆ ಸಾಗರ ತಾಲೂಕು ತಹಶೀಲ್ದಾರ್‌ರವರು ತಿಳಿಸಿದೆ.

Lions Club Shiralakoppa ವಿಶ್ವ ಮಧುಮೇಹ ದಿನ ಮಕ್ಕಳಿಂದಲೇ ಜಾಗೃತಿ‌ ವಾಕಥಾನ್. ಶಿರಾಳಕೊಪ್ಪದಲ್ಲಿ ಜನಮನ ಸೆಳೆದ ಚಟುವಟಿಕೆ

0

Lions Club Shiralakoppa ಲಯನ್ಸ್ ಕ್ಲಬ್ ಶಿರಾಳಕೊಪ್ಪ, ಶಂಕರ ಕಣ್ಣಿನ ಆಸ್ಪತ್ರೆ ಶಿವಮೊಗ್ಗ, ಸ್ವಾಮಿ ವಿವೇಕಾನಂದ ಶಾಲೆ, ಬಸವೇಶ್ವರ ಪಟ್ಟಣ ಸಹಕಾರ ಬ್ಯಾಂಕ್ ಸಂಯುಕ್ತ ಆಶ್ರಯದಲ್ಲಿ
ವಿಶ್ವ ಮಧುಮೇಹ ದಿನಾಚರಣೆಯನ್ನು ವಿಶೇಷ ವಾಗಿ ಆಚರಿಸಲಾಯಿತು.
ಮಕ್ಕಳ ದಿನಾಚರಣೆ ಪ್ರಯುಕ್ತ ಮಕ್ಕಳೇ ಜಾಗೃತಿ ರಾಯಭಾರಿಗಳಾಗಿ ವಾಕಥಾನ್ ಮೂಲಕ ಮಧುಮೇಹ ಅರಿವು ಮೂಡಿಸುವ ಘೋಷಣೆಯೊಂದಿಗೆ ಬಿತ್ತಿ ಪತ್ರ ವಿತರಿಸಿ ವಿಶಿಷ್ಟ ವಾಗಿ ಎರಡೂ ದಿನಾಚರಣೆ ಮಾಡಲಾಯಿತು.
ವಾಕಥಾನ್ ನಲ್ಲಿ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು, ಲಯನ್ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆ ಸಿಬ್ಬಂದಿ ಉಪಸ್ಥಿತರಿದ್ದರು.
ಆನವಟ್ಟಿ ರಸ್ತೆಯಿಂದ ಬಸವೇಶ್ವರ ಬ್ಯಾಂಕ್ ವರೆಗೆ ಜಾಥಾ ನಡೆಸಿ ನಂತರ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಊರಿನ ಪ್ರಸಿದ್ಧ ವೈದ್ಯ ಡಾ. ಶ್ರೀನಾಥ್ ರವರು ಮಧುಮೇಹದ ಬಗ್ಗೆ ಉಪಯುಕ್ತ ಮಾಹಿತಿಯನ್ನು ನೀಡಿದರು.
Lions Club Shiralakoppa ಲಯನ್ಸ್ ಅಧ್ಯಕ್ಷ ಯೋಗಿರಾಜ್, ಕಾರ್ಯದರ್ಶಿ ರೇಣುಕಯ್ಯ ಸದಸ್ಯರು, ಶಂಕರ ಕಣ್ಣಿನ ಆಸ್ಪತ್ರೆಯ ಅವಿನಾಶ್, ಅರುಣ್, ರವಿಕುಮಾರ್, ಬಸವೇಶ್ವರ ಬ್ಯಾಂಕ್ ನ ಅಧ್ಯಕ್ಷ ನಟರಾಜ್, ನಿರ್ದೇಶಕರು, ಸಿಬ್ಬಂದಿ, ಶಿಕ್ಷಕರು ಹಾಗೂ ಶಾಲಾ ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.

ಶಿವಮೊಗ್ಗ ಸಂಗೊಳ್ಳಿ ರಾಯಣ್ಣ ವೃತ್ತದ ಬಳಿ ಬಸ್- ಬೈಕ್ ಅಪಘಾತ, ಓರ್ವನ ಸಾವು

0

ಶಿವಮೊಗ್ಗದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಸರಣಿ ಅಪಘಾತಗಳು ಸಂಭವಿಸಿದ್ದು,ಸಿಟಿ ಬಸ್ ಒಂದು ಮೂರು ಬೈಕ್ ಗಳಿಗೆ ಗುದ್ದಿದೆ.

ಶಿವಮೊಗ್ಗ ನಗರದ ರಾಗಿಗುಡ್ಡದಿಂದ ಬಂದ ಸಿಟಿ ಬಸ್ ಅಕ್ಕಪಕ್ಕದಲ್ಲಿ ನಿಂತಿದ್ದ ಜನರ ಮೇಲೂ ಬಸ್ ಹರಿದಿದೆ.

ರಾಗಿಗುಡ್ಡದ ಮೂಲಕ ಬಂದ ನಗರ ಸಾರಿಗೆ ವೀರಭದ್ರೇಶ್ವರ ಖಾಸಗಿ ಬಸ್ ಚಾಲಕನ ನಿರ್ಲಕ್ಷತನದಿಂದ ಅಪಘಾತ ಸಂಭವಿಸಿದೆ ಎನ್ನಲಾಗಿದೆ.

ಪಾರ್ಕಿಂಗ್ ಸ್ಥಳದಲ್ಲಿಯೇ ನಿಂತಿದ್ದ ಮೊಹಮದ್ ಅಹಮದ್ (31) ಘಟನೆಯಲ್ಲಿ ಸಾವನ್ನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಪರಿಣಾಮ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಚಿಕಿತ್ಸೆ ಫಲಕಾರಿಯಾಗದೆ ಅಹಮದ್ ಸಾವನ್ನಪ್ಪಿದ್ದಾರೆ.

ಘಟನೆಯಲ್ಲಿ ಬಿಹಾರ ಮೂಲದ ಸುರೇಶ್ ರಾವ್ (50) ಎಂಬ ಗಾಯವಾಗಿದ್ದೂ,
ಗಾಯಳುಗಳನ್ನು ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮತ್ತೋರ್ವ ಬಾಪೂಜಿ ನಗರದ ನಿವಾಸಿ ರೆಹಮಾನ್ ಎಂಬ 40 ವರ್ಷದ ವ್ಯಕ್ತಿಗೆ ಗಾಯಗಳಾಗಿವೆ.

ಪೂರ್ವ ಸಂಚಾರಿ ಪೊಲೀಸ್ ಠಾಣೆ ವ್ಯಪ್ತಿಯಲ್ಲಿ ಘಟನೆ ಜರುಗಿದೆ.

Karnataka State Human Rights Commission ರಾಜ್ಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ಶಿವಮೊಗ್ಗ & ದಾವಣಗೆರೆ ಜಿಲ್ಲೆಗಳಲ್ಲಿ ಸಿಟ್ಟಿಂಗ್ಸ್ ಮಾಹಿತಿ

0

Karnataka State Human Rights Commission ಮಾನವ ಹಕ್ಕುಗಳ ಸಂರಕ್ಷಣೆ ಹಾಗೂ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳಲ್ಲಿ ನೊಂದವರಿಗೆ ಸೂಕ್ತ ನೆರವನ್ನು ಒದಗಿಸುವ ನಿಟ್ಟಿನಲ್ಲಿ 1993ರ ಮಾನವ ಹಕ್ಕುಗಳ ಸಂರಕ್ಷಣಾ ಅಧಿನಿಯಮದ ಅಡಿಯಲ್ಲಿ ಸ್ಥಾಪಿತವಾಗಿದೆ.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು 2025 ನೇ ನವೆಂಬರ್ 18 ರಿಂದ 20 ರವರೆಗೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಸಿಟ್ಟಿಂಗ್ಸ್ ನಡೆಸಲು ಉದ್ದೇಶಿಸಿರುತ್ತದೆ.

ಈ ಸಂದರ್ಭದಲ್ಲಿ ಸದರಿ ಜಿಲ್ಲೆಗಳಿಗೆ ಸಂಬಂಧಿಸಿದಂತೆ ಆಯೋಗದಲ್ಲಿ ನೋಂದಣಿಯಾಗಿರುವ ಪ್ರಕರಣಗಳನ್ನು ಆಯಾಯ ಜಿಲ್ಲೆಗಳಲ್ಲಿ ಇತ್ಯರ್ಥಪಡಿಸಿ, ವಿಲೇ ಮಾಡಿ ಕ್ರಮ ಜರುಗಿಸಲು ಉದ್ದೇಶಿಸಲಾಗಿದೆ. ದೂರುದಾರರು ಹಾಗೂ ಪ್ರತಿವಾದಿ ಪ್ರಾಧಿಕಾರಗಳು ಸದುಪಯೋಗಪಡಿಸಿಕೊಳ್ಳಬಹುದಾಗಿದೆ.

ಮಾನವ ಹಕ್ಕು ಉಲ್ಲಂಘನೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿನ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಆಯಾಯ ಜಿಲ್ಲೆಗಳಲ್ಲಿಯೇ ನಿಗದಿತ ದಿನಾಂಕಗಳಂದು ಸಾರ್ವಜನಿಕರಿಂದ ದೂರುಗಳು ಮತ್ತು ಅಹವಾಲುಗಳನ್ನು ಸಹ ಸ್ವೀಕರಿಸಲು ಉದ್ದೇಶಿಸಲಾಗಿದೆ.

Karnataka State Human Rights Commission ಸಾರ್ವಜನಿಕರು ಆಯಾ ಜಿಲ್ಲೆಗಳಲ್ಲಿ ನಿಗದಿತ ದಿನಾಂಕಗಳಂದು ಆಯೋಗದ ಮಾನ್ಯ ಅಧ್ಯಕ್ಷರು (ಹಂಗಾಮಿ) ಹಾಗೂ ಮಾನ್ಯ ಸದಸ್ಯರನ್ನು ಸಂಪರ್ಕಿಸಿ, ದೂರುಗಳನ್ನು ಸಲ್ಲಿಸಬಹುದಾಗಿದೆ ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗದ ಕಾರ್ಯದರ್ಶಿ (ಪ) ಎ. ದಿನೇಶ್ ಸಂಪತ್‌ ರಾಜ್ ಅವರು ತಿಳಿಸಿದ್ದಾರೆ.

Karnataka Union Of Working Journalists Association ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ,ಜಿಲ್ಲಾ ಶಾಖಾ ಸಮಿತಿ ಆಯ್ಕೆ

0

Karnataka Union Of Working Journalists Association ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಶಿವಮೊಗ್ಗ ಜಿಲ್ಲಾ ಶಾಖೆಯ 2025-2028ರ ಸಾಲಿನ ಕಾರ್ಯಕಾರಿ ಸಮಿತಿಗೆ ನವಂಬರ್ 9 ರಂದು ನಡೆದ ಚುನಾವಣೆಯಲ್ಲಿ ಹೆಚ್.ಯು. ವೈದ್ಯನಾಥ್-ಸಾಪ್ತಾಹಿಕ ಮುಖ್ಯಸ್ಥರು, ನಮ್ಮ ನಾಡು ಪ್ರಾದೇಶಿಕ ಪತ್ರಿಕೆ ಅವರು ಅಧ್ಯಕ್ಷರಾಗಿ , ಆರ್ ಎಸ್ ಹಾಲಸ್ವಾಮಿ ವರದಿಗಾರರು ದೂರದರ್ಶನ ಚಂದನ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ಕೆ ವಿ ಶಿವಕುಮಾರ್ ಸಂಪಾದಕರು ನಮ್ಮನಾಡು ಇವರು ರಾಜ್ಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಜಿಲ್ಲಾ ಕಾರ್ಯಕಾರಿ ಸಮಿತಿಯ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲಾಗಿದ್ದು ,
ವಿವರಗಳು ಇಂತಿದೆ.

ಅಧ್ಯಕ್ಷರು;
ಹೆಚ್.ಯು. ವೈದ್ಯನಾಥ್-ಸಾಪ್ತಾಹಿಕ ಮುಖ್ಯಸ್ಥರು, ನಮ್ಮ ನಾಡು ಪ್ರಾದೇಶಿಕ ಪತ್ರಿಕೆ.

ಉಪಾಧ್ಯಕ್ಷರುಗಳು:

ಕೆ. ಎಸ್. ಹುಚ್ರಾಯಪ್ಪ, ವರದಿಗಾರರು, ಜನಹೋರಾಟ, ಶಿಕಾರಿಪುರ, ಕೆ. ಸತ್ಯನಾರಾಯಣಪ್ಪ, ವರದಿಗಾರರು, ಹೊಸದಿಗಂತ ದಿನಪತ್ರಿಕೆ, ಶಿವಮೊಗ್ಗ, ದೇಶಾದ್ರಿ ಹೊಸ್ಮನಿ, ಸುದ್ದಿ ಸಂಪಾದಕರು, ನಮ್ಮ ನಾಡು ದಿನಪತ್ರಿಕೆ.

ಪ್ರಧಾನ ಕಾರ್ಯದರ್ಶಿ:
ಆರ್. ಎಸ್. ಹಾಲಸ್ವಾಮಿ, ವರದಿಗಾರರು, ದೂರದರ್ಶನ-ಚಂದನ ವಾಹಿನಿ, ಶಿವಮೊಗ್ಗ

ಕಾರ್ಯದರ್ಶಿಗಳು:
ದೀಪಕ್ ಸಾಗರ್, ವರದಿಗಾರರು, ವಿಜಯವಾಣಿ ದಿನಪತ್ರಿಕೆ, ಸಾಗರ,
ರಾಜೇಶ್ ಕಾಮತ್, ವರದಿಗಾರರು, ಸುವರ್ಣ ಟಿವಿ, ಶಿವಮೊಗ್ಗ,
ಕೆ. ಆರ್. ಸೋಮನಾಥ್, ಛಾಯಾಗ್ರಾಹಕರು, ಶಿವಮೊಗ್ಗ ಟೈಮ್ಸ್, ಶಿವಮೊಗ್ಗ

ಖಜಾಂಚಿ:
ಎಸ್. ಆರ್. ರೋಹಿತ್, ಉಪ ಸಂಪಾದಕರು, ನಾವಿಕ ದಿನಪತ್ರಿಕೆ, ಶಿವಮೊಗ್ಗ

ಸಂಘಟನಾ ಕಾರ್ಯದರ್ಶಿಗಳು:
ಗಾ.ರಾ. ಶ್ರೀನಿವಾಸ್, ಸಂಪಾದಕರು, ಸೂರ್ಯಗಗನ ದಿನಪತ್ರಿಕೆ, ಶಿವಮೊಗ್ಗ, ರಾಘವೇಂದ್ರ ಶೆಟ್ಟಿ, ವರದಿಗಾರರು, ಬಳ್ಳಾರಿ ಬೆಳಗಾಯಿತು, ಶಿವಮೊಗ್ಗ

ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರು:
ಕೆ. ವಿ. ಶಿವಕುಮಾರ್, ಸಂಪಾದಕರು, ನಮ್ಮ ನಾಡು ದಿನಪತ್ರಿಕೆ, ಶಿವಮೊಗ್ಗ

ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರುಗಳಾಗಿ

ಆರ್. ಪಿ ಭರತ್‌ರಾಜ್ ಸಿಂಗ್, ಉಪ ಸಂಪಾದಕರು, ಶಿವಮೊಗ್ಗ ಟೆಲೆಕ್ಸ್,
ಎಸ್. ಆರ್. ರಂಜಿತ್, ಸುದ್ದಿ ಸಂಪಾದಕರು, ನಾವಿಕ ದಿನಪತ್ರಿಕೆ,
ರವಿ ಬಿದನೂರು, ವರದಿಗಾರು, ವಿಜಯವಾಣಿ, ಹೊಸನಗರ, ನಾಗರಾಜ ಶೆಣೈ, ಸಂಪಾದಕರು, ಕ್ರಾಂತಿ ಭಗತ್ ದಿನಪತ್ರಿಕೆ, ಶಿವಮೊಗ್ಗ, ಸುಬ್ರಹ್ಮಣ್ಯ ಹೊರಬೈಲು, ವರದಿಗಾರರು, ಹೊಸದಿಗಂತ ದಿನಪತ್ರಿಕೆ,
ಶಿವಮೊಗ್ಗ, ನವೀನ್ ಬಿಲ್ಗುಣಿ, ವರದಿಗಾರು, ವಿಜಯವಾಣಿ, ಶಿವಮೊಗ್ಗ, ಆರುಂಡಿ ಶ್ರೀನಿವಾಸ್ ಮೂರ್ತಿ, ವರದಿಗಾರು, ಶಿವಮೊಗ್ಗ ಸಿಂಹ ದಿನಪತ್ರಿಕೆ,
ಎನ್. ಆರ್. ಕವಿತಾ, ವರದಿಗಾರರು, ಸಂಯುಕ್ತ ಕರ್ನಾಟಕ, ದಿನಪತ್ರಿಕೆ, ಶಿವಮೊಗ್ಗ,
ಅತೀಕ್ ಅಹಮ್ಮದ್ ಕ್ಯಾಮರಾಮೆನ್, ಸುವರ್ಣ ಟೀವಿ, ಶಿವಮೊಗ್ಗ,
ಕೆ. ಎಸ್. ಸುರೇಂದ್ರ, ಸಂಪಾದಕರು, ಸುದ್ದಿಲೈವ್, ಶಿವಮೊಗ್ಗ,
ಜಗದೀಶ್ ಸಂಪಾದಕರು, ಅಮೋಘ ವಾಹಿನಿ, ಶಿವಮೊಗ್ಗ,
ನಾಗರಾಜ ಕಲ್ಕೊಪ್ಪ, ಸಂಪಾದಕರು, ಜೈ ಕರುನಾಡು ದಿನಪತ್ರಿಕೆ, ಶಿವಮೊಗ್ಗ, ನಾಗರಾಜ ಜೈನ್ (ಬಣ್ಣದ ಬಾಬು), ವರದಿಗಾರರು, ಛಲದಂಕ ಮಲ್ಲ, ಸೊರಬ, ಚೈತ್ರ ಸಜ್ಜನ್, ಸಂಪಾದಕರು, ಸಿ – ನ್ಯೂಸ್, ಶಿವಮೊಗ್ಗ, ಜಾಧವ್, ವರದಿಗಾರರು, ನಮ್ಮಕನ್ನಡ ನಾಡು, ಶಿಕಾರಿಪುರ

ಜಿಲ್ಲಾ ಕಾರ್ಯಕಾರಿ ಸಮಿತಿಗೆ ನಾಮ ನಿರ್ದೇಶನ ಸದಸ್ಯರಾಗಿ

ಬಸವರಾಜ ಯರಗನವಿ, ವರದಿಗಾರರು, ಟಿವಿ-೯, ಶಿವಮೊಗ್ಗ,
ಹಾಲೇಶ್, ಶಿವಮೊಗ್ಗ ಟೈಮ್ಸ್, ಶಿವಮೊಗ್ಗ,
ಸತೀಶ್, ಸಂಪಾದಕರು, ಸಾತ್ವಿಕ ನುಡಿ, ಶಿವಮೊಗ್ಗ, ಇಸ್ಮಾಯಿಲ್ ಎಂ. ಕುಟ್ಟಿ, ಪ್ರಧಾನ ವರದಿಗಾರರು, ನ್ಯೂಸ್ ಕರ್ನಾಟಕ, ಶಿವಮೊಗ್ಗ,
ಇವರುಗಳು ನೇಮಕಗೊಂಡಿದ್ದಾರೆ.

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಸಮಿತಿಯ ವಿಶೇಷ ಆಹ್ವಾನಿತರಾಗಿ

Karnataka Union Of Working Journalists Association ವಿ. ಟಿ. ಅರುಣ್, ವರದಿಗಾರರು, ಶಿವಮೊಗ್ಗ ಟೈಮ್ಸ್, ನಿಕಟಪೂರ್ವ ಪ್ರಧಾನ ಕಾರ್ಯದರ್ಶಿ,
ಎಸ್. ಚಂದ್ರಕಾಂತ್, ಸಂಪಾದಕರು, ಶಿವಮೊಗ್ಗ ಟೈಮ್ಸ್, ಶಿವಮೊಗ್ಗ,
ಶೃಂಗೇಶ್, ಸಂಪಾದಕರು, ಜನ ಹೋರಾಟ, ಶಿವಮೊಗ್ಗ, ಪೂರ್ವಾಧ್ಯಕ್ಷರು,
ವೈ. ಕೆ. ಸೂರ್ಯನಾರಾಯಣ, ಸಂಪಾದಕರು, ಎಚ್ಚರಿಕೆ ದಿನಪತ್ರಿಕೆ, ಪೂರ್ವ ಪ್ರಧಾನ ಕಾರ್ಯದರ್ಶಿಗಳು,
ಗಿರೀಶ್ ಉಮ್ರಾಯ್, ವರದಿಗಾರರು, ಆಂದೋಲನ ದಿನಪತ್ರಿಕೆ,
ಅವರುಗಳನ್ನು ನೇಮಿಸಲಾಗಿದೆ

ಭಂಡಿಗಡಿ ಆರ್ ನಂಜುಂಡಪ್ಪ, ಸಂಪಾದಕರು, ವಾಯ್ಸ್ ಆಫ್ ಶಿವಮೊಗ್ಗ ಅವರು ಭಾರತೀಯ ಕಾರ್ಯನಿರತ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಮಂಡಳಿ ಸದಸ್ಯರಾಗಿ ನೇಮಕ ಗೊಂಡಿದ್ದಾರೆ.

Sail- VISL ಜಿಲ್ಲೆಯ ವಿಶೇಷ ಚೇತನ ಮಕ್ಕಳನ್ನ ಸಮಾಜದ ಮುಖ್ಯವಾಹಿನಿಗೆ ತರುವುದು ಸೈಲ್- ವಿಐಎಸ್ಎಲ್ ಧ್ಯೇಯ- ಅನುಪ್ ಕುಮಾರ್

0

Sail- VISL ಚಟುವಟಿಕೆಗಳ ಅಡಿಯಲ್ಲಿ ಭದ್ರಾವತಿಯ ಸರ್ಕಾರಿ ಶಾಲೆಗಳು ಮತ್ತು ತರಂಗ ಕಿವುಡ ಮತ್ತು ಮೂಕ ಶಾಲೆಯ 23 ವಿಶೇಷಚೇತನ ವಿದ್ಯಾರ್ಥಿಗಳಿಗೆ ವಿಶೇಷ ಸಹಾಯ ಸಾಧನಗಳನ್ನು 2025ರ ನವೆಂಬರ್ 14ರಂದು ಮಕ್ಕಳ ದಿನಾಚರಣೆಯಂದು ಸೈಲ್- ವಿಐಎಸ್ಎಲ್ ಭದ್ರಾ ಅತಿಥಿಗೃಹದಲ್ಲಿ ಹಸ್ತಾಂತರಿಸಲಾಯಿತು.

ಶ್ರೀ ಅನುಪ್ ಕುಮಾರ್, ಕಾರ್ಯಪಾಲಕ ನಿರ್ದೇಶಕ, ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ), ಶ್ರೀಮತಿ ಶೋಭಾ ಶಿವಶಂಕರನ್, ಮಹಾಪ್ರಬಂಧಕಿ (ಹಣಕಾಸು ಮತ್ತು ಲೆಕ್ಖ), ಡಾ. ಸುಜೀತ್ ಕುಮಾರ್, ಹೆಚ್ಚುವರಿ ಮುಖ್ಯ ವೈಧ್ಯಾಧಿಕಾರಿಗಳು, ಡಾ. ಎಸ್.ಎನ್. ಸುರೇಶ್, ಉಪಾಧ್ಯಕ್ಷರು ಸೈಲ್ಅಧಿಕಾರಿಗಳ ಸಂಘ, ಶ್ರೀ ಎಮ್.ಎಲ್. ಯೋಗೀಶ, ಕಿರಿಯ ಪ್ರಬಂಧಕ ಶ್ರೀ ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಭದ್ರಾವತಿ, ಶ್ರೀ ತೀರ್ಥಪ್ಪ, ಕ್ಷೇತ್ರ ಸಂಪನ್ಮೂಲ ಸಂಯೋಜಕ ಮತ್ತು ಶ್ರೀ ದಯಾನಂದ ಶಿಕ್ಷಣ ಸಂಯೋಜಕ, ಭದ್ರಾವತಿ ಸೇರಿದಂತೆ ಗಣ್ಯರು ವಿಶೇಷಚೇತನ ಮಕ್ಕಳಿಗೆ ಶ್ರವಣ ಸಾಧನಗಳು, ವೀಲ್‌ಚೇರ್‌ಗಳು, ಒಖ ಕಿಟ್‌ಗಳು, ಅP ಚೇರ್‌ಗಳು, ರೋಲೇಟರ್‌ಗಳನ್ನು ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಅನುಪ್ ಕುಮಾರ್, ‘ಜಿಲ್ಲೆಯ ವಿಶೇಷಚೇತನ ಮಕ್ಕಳ ಮುಖದಲ್ಲಿ ನಗು ಮೂಡಿಸಲು ಮತ್ತು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಸೈಲ್- ವಿಐಎಸ್ಎಲ್ ಎಲ್ಲಾ ಪ್ರಯತ್ನಗಳನ್ನು ಮಾಡಲಿದೆ ಮತ್ತು ಭವಿಷ್ಯದಲ್ಲಿ ಹೆಚ್ಚು ಸಾಮಾಜಿಕವಾಗಿ ಪ್ರಯೋಜನಕಾರಿಯಾದ ಅSಖ ಚಟುವಟಿಕೆಗಳನ್ನು ಯೋಜಿಸಲಾಗುವುದು ಎಂದು ಹೇಳಿದರು.

ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ನಾಗೇಂದ್ರಪ್ಪನವರು ‘ವಿಶೇಷಚೇತನ ಮಕ್ಕಳು ಉತ್ತಮ ಜೀವನ ನಡೆಸಲು ಸಹಾಯಮಾಡುವ ಉಪಕ್ರಮಗಳನ್ನು ಸೈಲ್- ವಿಐಎಸ್ಎಲ್ ಕಳೆದ ಕೆಲವು ವರ್ಷಗಳಿಂದ ಶಿವಮೊಗ್ಗ ಜಿಲ್ಲೆಯಾದ್ಯಂತ ನಿರಂತರವಾಗಿ ಕೊಡುತ್ತಿದ್ದು ಅದಕ್ಕಾಗಿ ಅವರು ಸೈಲ್- ವಿಐಎಸ್ಎಲ್ ಆಡಳಿತ ಮಂಡಳಿಗೆ ಧನ್ಯವಾದ ಅರ್ಪಿಸಿದರು. ಮುಂಬರುವ ದಿನಗಳಲ್ಲಿಯೂ ಸಹ ಇಂತಹ ಹೆಚ್ಚಿನ ಸಹಾಯವನ್ನು ವಿಸ್ತರಿಸಲಾಗುವುದೆಂದು ಆಶಿಸಿದರು.

ಶ್ರೀ ಎಮ್.ಎಲ್. ಯೋಗೀಶ ಸ್ವಾಗತಿಸಿದರು ಮತ್ತು ಕಳೆದ ಮೂರು ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯ 400 ಕ್ಕೂ ಹೆಚ್ಚು ವಿಶೇಷಚೇತನ ವಿದ್ಯಾರ್ಥಿಗಳುಸೈಲ್- ವಿಐಎಸ್ಎಲ್ ಅಡಿಯಲ್ಲಿ ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ವಿಶೇಷ ಸಹಾಯಕ ಸಾಧನಗಳನ್ನು ಪಡೆದಿದ್ದಾರೆ ಎಂದು ತಿಳಿಸಿದರು.

Sail- VISL ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕ (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ವಂದನಾರ್ಪಣೆ ಮಾಡಿದರು.

ಈ ಕಾರ್ಯಕ್ರಮವನ್ನುಸೈಲ್- ವಿಐಎಸ್ಎಲ್ ನ ಅಪೆಕ್ಷ್ ಸಮಿತಿಯು ಸಂಯೋಜಿಸಿತ್ತು.

Children’s Day ಡೆಲ್ಲಿ ವರ್ಡ್ ‌ಶಾಲಾಮಕ್ಕಳಿಂದ ವಿನೂತನ ,ವಿಶೇಷ ರೀತಿಯಲ್ಲಿ ಮಕ್ಕಳ ದಿನಾಚರಣೆ

0

Children’s Day ಮಕ್ಕಳ ದಿನಾಚರಣೆ ಅಂಗವಾಗಿ ಡೆಲ್ಲಿ ವರ್ಡ್ ಶಾಲೆಯ ಮಕ್ಕಳು ಶಿವಮೊಗ್ಗ ನಗರದ ಹಲವು ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಿಗೆ ಭೇಟಿ ನೀಡಿ ಅವರ ಆರೋಗ್ಯ ವಿಚಾರಿಸಿ, ದಿನನಿತ್ಯದ ಅಗತ್ಯ ದಿನಸಿ ವಸ್ತುಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಶಾಲೆಯ ಪ್ರಾಂಶುಪಾಲರಾದ ದಿವ್ಯ ಶೆಟ್ಟಿ, ಶಿಕ್ಷಕರು ಸೇರಿದಂತೆ ಮತ್ತಿತರರಿದ್ದರು.

Klive Special Article ಸಾಮಾಜಿಕ ಕಳಕಳಿಯಲ್ಲಿ ಶೃಂಗದಂತಿದೆ, ಶ್ರೀಶೃಂಗೇರಿ ಜಗದ್ಗುರು ಪೀಠ

0

ಲೇ; ಪ್ರಭಾಕರ ಕಾರಂತ

Klive Special Article ಜಗದ್ಗುರುಗಳಿಂದ ಭಾನುವಾರ ದೆಹಲಿಯ ಶಂಕರ ವಿದ್ಯಾ ಕೇಂದ್ರದಲ್ಲಿ ಕುಂಭಾಭಿಷೇಕ ನಡೆಯಿತು. ಶಾರದಮ್ಮನ ನೂತನ ವಿಗ್ರಹ ಪ್ರತಿಷ್ಠಾ ಕುಂಭಾಭಿಷೇಕದಲ್ಲಿ ಅಧಿಕ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದರು. ಜಗದ್ಗುರುಗಳ ಧರ್ಮ ವಿಜಯ ಯಾತ್ರೆ ಎಂದರೇ ಧಾರ್ಮಿಕ ಕಾರ್ಯಕ್ರಮಗಳು,ಶಾಸ್ತ್ರ ಸಭೆಗಳು,ಅನುಗ್ರಹ ಭಾಷಣ, ದೇವಸ್ಥಾನ ಭೇಟಿ ಮತ್ತು ಹೋಮಹವನಗಳು. ಜಗದ್ಗುರುಗಳು ಹೋಗುವ ಬಹುತೇಕ ಕಡೆಗಳಲ್ಲಿ ಶೃಂಗೇರಿಯ ಶಂಕರಮಠ ಇರುತ್ತದೆ. ಆ ಶಾಖೆಗಳು, ಸಂಸ್ಥೆಗಳು ನಿರಂತರ ಧರ್ಮ ಉಳಿಸುವ ಚಟುವಟಿಕೆಯಲ್ಲಿ ತೊಡಗಿರುತ್ತವೆ.ಗುರುಗಳ ಭೇಟಿ ಅಲ್ಲಿನ ಕಾರ್ಯಕ್ಕೆ ಪುನಶ್ಚೇತನ ನೀಡುತ್ತದೆ.
ಶೃಂಗೇರಿಯ ಮಠದಿಂದ ಉಡುಪಿ ಜೆಲ್ಲೆಯ ಅನೇಕ ಶಾಲಾ ಕಾಲೇಜಿಗೆ ಭೋಜನ ಪ್ರಸಾದ ಬರುತ್ತಿರುವ ಸಂಗತಿಯನ್ನು ಈಚೆಗೆ ಕಮಲಶಿಲೆಯ ಶ್ರೀಮತಿ ಪೂರ್ಣಿಮ ನರಸಿಂಹ ಬರೆದಾಗ ಅನೇಕರಿಗೆ ಇದು ಅಚ್ಚರಿ ತಂದಿದೆ. ಭೋಜನ ಪ್ರಸಾದ ಶಾಲೆಗಳಿಗೆ ಕಳಿಸಲು ಆರಂಭಿಸಿ ಕಾಲು ಶತಮಾನವೇ ಆಗಿದೆ.ಆಗಿನ್ನೂ ಸರ್ಕಾರ ಬಿಸಿಯೂಟ ಯೋಜನೆ ಆರಂಭಿಸಿರಲಿಲ್ಲ. ಚಿಕ್ಕಮಗಳೂರು,ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆಯ ನೂರಾರು ಶಾಲಾ ಕಾಲೇಜಿಗೆ ಸುಮಾರು 20 ಸಹಸ್ರ ಕ್ಕೂ ಹೆಚ್ಚಿನ ಮಕ್ಕಳಿಗೆ ಭೋಜನ ಪ್ರಸಾದ ಕಳಿಸಲಾಗುತ್ತಿದೆ.ಸರ್ಕಾರೀ ಶಾಲೆಗಳೂ ಬಿಸಿಯೂಟದ ಬದಲು ಪ್ರಸಾದ ಭೋಜನವನ್ನೇ ಈ ಪ್ರದೇಶದಲ್ಲಿ ಆಯ್ಕೆ ಮಾಡುತ್ತವೆ. ಶೃಂಗೇರಿಯ ಜಗದ್ಗುರುಗಳಿಂದ ಅನುಗ್ರಹ ಭಾಷಣದಲ್ಲಿ ಮಠ ಭೋಜನ ಕಳಿಸುತ್ತದೆ ಎಂಬ ಮಾತು ಬರುವುದಿಲ್ಲ. ಮಠ ಪ್ರಚಾರ ಮಾಡುವುದಿಲ್ಲ.
Klive Special Article ಈ ಭಾರಿ ಮಹಾಕುಂಭದಲ್ಲಿ ಭೋಜನ ಒದಗಿಸಲು ವಾರಣಾಸಿಯ ಅನ್ನಪೂರ್ಣ ಟ್ರಸ್ಟ್ ಗೆ ಮಠ 50 ಲಕ್ಷರೂ ನೀಡಿತು.ವಾರಣಾಸಿಯ ಬನಾರಸ್ ಹಿಂದೂ ವಿಶ್ವವಿದ್ಯಾಲಯಕ್ಕೆ ವಾರ್ಷಿಕ 25 ಲಕ್ಷ ರೂ ಅನುದಾನ ನೀಡಲಾಗುತ್ತಿದೆ.ಮರು ಮತಾಂತರ ಕಾರ್ಯ ಕೈಗೆತ್ತಿಕೊಂಡ ಕೇರಳದ ಆರ್ಶವಿದ್ಯಾಸಂಸ್ಥೆಗೆ 50 ಲಕ್ಷ ರೂ ನೀಡಿತು. ಸಂಸ್ಥೆಗಳು,ಶಿಕ್ಷಣ ಸಂಸ್ಥೆಗಳು,ದೇವಸ್ಥಾನ ಮರು ನಿರ್ಮಾಣ ಇತ್ಯಾದಿ ಅನೇಕ ಕಾರ್ಯಕ್ಕೆ ಮಠದಿಂದ ಈಛಿನ ವರ್ಷಗಳಲ್ಲಿ ನೂರು ಕೋಟಿ ರೂ ಒದಗಿಸಲಾಗಿದೆ.ಐವತ್ತು ವೇದ ಪಾಠ ಶಾಲೆ ಮಠ ನಡೆಸುತ್ತಿದೆ. ದೇಶಾದ್ಯಂತ ಅನೇಕ ಶಿಕ್ಷಣ ಸಂಸ್ಥೆ ನಡೆಸುತ್ತಿದೆ. ಮಠದ ಬಹುತೇಕ ಶಾಖೆಗಳಲ್ಲಿ ಅವಿರತ ಇಂತಹ ಬಹೂಪಯೋಗಿ ಕಾರ್ಯಕ್ರಮ ನಡೆಸಿಕೊಂಡು ಬರಲಾಗುತ್ತಿದೆ. ದೇಶಾದ್ಯಂತ ಗೋ ಸಂರಕ್ಷಣೆಯ ಸಂಸ್ಥೆಗಳಿಗೆ ವಾರ್ಷಿಕ ಕೋಟ್ಯಂತರ ನೆರವು ಒದಗಿಸಲಾಗುತ್ತಿದೆ.
ಕೇರಳದ ಕಾಲಟಿಯಲ್ಲಿ ಶೃಂಗೇರಿಯ ಶಂಕರಮಠ ಇದೆ.ಅದರ ಆಶ್ರಯದಲ್ಲಿ ಶ್ರೀ ಆದಿಶಂಕರ ಶಿಕ್ಷಣ ಸಮೂಹ ಸಂಸ್ಥೆಗಳಿವೆ. 2018 ರಲ್ಲಿ ಕೇರಳ ಭೀಕರ ಪ್ರವಾಹಕ್ಕೆ ತುತ್ತಾಯಿತು.
ಆಗ ಈ ಸಂಸ್ಥೆಗಳು ಪುನರ್ವಸತಿ ಶಿಭಿರ ಆರಂಭಿಸಿತು. ಈ ಶಿಭಿರದಲ್ಲಿ ನಾಲ್ಕೈದು ಸಹಸ್ರ ಜನ ಆಶ್ರಯ ಪಡೆದರು. ಒಂಬತ್ತು ದಿನ ಕೇವಲ ಅನ್ನಾಹಾರವಲ್ಲದೇ ಆರೋಗ್ಯ ಸೌಲಭ್ಯವನ್ನೂ ಒದಗಿಸಲಾಗಿತ್ತು. ಅಂಬ್ಯುಲೆನ್ಸ್ ದಿನದ 24 ಗಂಟೆಯೂ ಕಾರ್ಯನಿರ್ವಹಿಸಿತು. 500 ಜನ ವಲಸೆ ಕಾರ್ಮಿಕರಿಗೆ ವಸತಿ ನಿರ್ಮಿಸಿಕೊಡಲಾಯಿತು.
ಪ್ರವಾಹ ಇಳಿದ ಮೇಲೆ ಸಂತ್ರಸ್ತರ ಮನೆಗಳನ್ನು ವಾಸಯೋಗ್ಯ ಮಾಡಿಕೊಡಲಾಯಿತು. ಕುಡಿಯುವ ನೀರಿನ ಮೂಲ ಸ್ವಚ್ಛ ಗೊಳಿಸಲಾಯಿತು. ಹೆಚ್ಚಾಗಿ ಬಡವರು ಮತ್ತು ದಲಿತರೇ ಇದ್ದ ಈ ವಸತಿ ಸಂಕೀರ್ಣಗಳ ಸಂತ್ರಸ್ತರ ಮುಂದಿನ ತಕ್ಷಣದ ಬದುಕನ್ನು ಗಮನದಲ್ಲಿಟ್ಟು ಧವಸ ಧಾನ್ಯ, ವಸ್ತ್ರ,ಔಷದ,ಸೇರಿದಂತೆ ದಿನಬಳಕೆಯ ವಸ್ತುಗಳನ್ನು ಒದಗಿಸಲಾಯಿತು. ಇದು ಗುರುಗಳಿರಲಿ ಮಠವೂ ಪತ್ರಿಕೆಗಳಲ್ಲಿ ಸುದ್ದಿ ಬರುವಂತೆ ಮಾಡಲಿಲ್ಲ. ಎಲ್ಲಾ ಸಾರ್ಥಕ ಕಾರ್ಯ ಮುಗಿದ ಮೇಲೆ ಮಠದ ಪತ್ರಿಕೆಯಲ್ಲಿ ಕಡೆಯ ಪುಟಗಳಲ್ಲಿ ಒಂದು ಚಿಕ್ಕ ಸುದ್ದಿ ಪ್ರಕಟಿಸಲಾಯಿತು.
ಮೊನ್ನೆ ಪುಲ್ವಾಮ ದಾಳಿಯಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಎಲ್ಲಾ ಸಂತ್ರಸ್ತರ ಮನೆಗೂ ಶೃಂಗೇರಿಯ ಪ್ರಸಾದ ರೂಪದಲ್ಲಿ ತಲಾ ಎರಡು ಲಕ್ಷರೂ ಒದಗಿಸಲಾಯಿತು. ಪ್ರತಿ ಮನೆಗೂ ಮಠದ ಸಿಬ್ಬಂದಿಯೇ ಚಕ್ ತಲ್ಪಿಸಿದರು. ಹೀಗೆ ಚಕ್ ನೀಡುತ್ತಿರುವ ಫೋಟೋ ಸಹ ಪ್ರಚಾರಕ್ಕೆ ಬರಲಿಲ್ಲ. ಪೂರ್ಣಿಮ ರವರ ಲೇಖನಕ್ಕೆ ಪ್ರತಿಕ್ರಿಯಿಸಿದವರೊಬ್ಬರು ಚಿನ್ನದ ಕಿರೀಟ,ಪಲ್ಲಕ್ಕಿ ಜತೆ ಇಂತಹ ಕಾರ್ಯವೂ ಆಗಲಿ ಎಂದು ಪ್ರತಿಕ್ರಿಯಿಸಿದ್ದರು. ಶೃಂಗೇರಿಯ ಜಗದ್ಗುರುಗಳು ಎಂದೂ ಚಿನ್ನದ ಕಿರೀಟ, ಪಲ್ಲಕ್ಕಿ ಮಾಡಿಸಿಕೊಂಡಿಲ್ಲ.ರಾಜಮಹಾರಾಜರು ನೀಡಿದ ಕಿರೀಟ ಪಲ್ಲಕ್ಕಿ ಅಪರೂಪದ ಸಂಧರ್ಭ ಬಳಸುತ್ತಾರೆ. ಶಾರದಮ್ಮನಿಗೆ ಸ್ವರ್ಣ ಮಂಟಪ,ಸ್ವರ್ಣ ದ್ವಾರ,ಗೋಡೆಗೆ ಸ್ವರ್ಣ ಕವಚ,ಸ್ವರ್ಣ ಕಲಶ, ಚಂದ್ರಮೌಳೀಶ್ವರ ನಿಗೆ ಸ್ವರ್ಣ ಮಂಟಪ ಆಗಿದೆ ನಿಜ.ಅದೆಲ್ಲವೂ ಸ್ವರ್ಣ ಸಿಂಹಾಸನವೂ ಭಕ್ತರು ಅರ್ಪಿಸಿದ್ದು. ಮಹಾಸನ್ನಿಧಾನ ಈಗ ತಮ್ಮ ವರ್ದಂತ್ಯುತ್ಸವದಲ್ಲಿ ಕೂಡ ಪೀತಾಂಬರ ಕಾವಿ ಸಹ ಧರಿಸುವುದಿಲ್ಲ.
ದೇಹಲಿಯ ಶಾರದಮ್ಮನ ಅಲಂಕಾರಕ್ಕೆ ಸಹಸ್ರ ಬಿಳಿ ಕಮಲ ಪುಷ್ಪ ತರಿಸಲಾಗಿತ್ತು. ಸನ್ನಿಧಾನಂಗಳು ಸ್ವತಹ ದೇವಿಯ ಪೂಜೆಯ ಸಂಧರ್ಭ ಅಲಂಕಾರ ಮಾಡುತ್ತಿದ್ದುದನ್ನು ಕಿಕ್ಕಿರಿದು ತುಂಬಿದ್ದ ಭಕ್ತರು ಕಣ್ಣು ತುಂಬಿಕೊಂಡರು. ಲಲಿತಾ ಸಹಸ್ರ ನಾಮಾವಳಿ ಪಠಣದೊಂದಿಗೆ ನಡೆದ ಈ ಪೂಜೆಯನ್ನು ದೆಹಲಿಯ ಭಕ್ತರು ಶ್ರದ್ಧಾಭಕ್ತಿಯಿಂದ ವೀಕ್ಷಿಸಿ ಸಾರ್ಥಕ ಅನುಭವ ಪಡೆದರು.

National Institute of Education ಜೀವನದಲ್ಲಿ ಕುಗ್ಗದೇ ಪರೀಕ್ಷೆಯ ಮುನ್ನ ಓದು,ಶ್ರದ್ಧೆ ಇವುಗಳ ಬಗ್ಗೆ ವಿದ್ಯಾರ್ಥಿಗಳಿಗೆ ದಿಕ್ಸೂಚಿ ಭಗವದ್ಗೀತೆ- ನಾಗರಾಜ್

0

National Institute of Education ವಿದ್ಯಾರ್ಥಿ ಜೀವನಕ್ಕೆ ಭಗವದ್ಗೀತೆ ಯಾವ ರೀತಿ ಸಹಾಯ ಮಾಡುತ್ತದೆ ಪರೀಕ್ಷೆಯಲ್ಲಿ ಪಡೆದ ಅಂಕಗಳು ಹೆಚ್ಚಾದಾಗ ಹಿಗ್ಗದೆ ಕಡಿಮೆಯಾದಾಗ ಕುಗ್ಗದೆ ಸಮ ಸ್ಥಿತಿಯಲ್ಲಿ ಹೇಗೆ ತೆಗೆದುಕೊಂಡು ಅವರು ಜೀವನ ನಡೆಸಬೇಕು, ವಿದ್ಯಾರ್ಥಿಗಳ ಓದಿನಲ್ಲಿ ಶ್ರದ್ಧೆ ಏಕೆ ಬೇಕು, ಎಲ್ಲರ ನಮ್ಮ ಮನಶಾಂತಿಗೆ ಈ ಭಗವದ್ಗೀತೆ ಹೇಗೆ ಸಹಾಯ ಮಾಡುತ್ತದೆ? ಬದುಕಿನಲ್ಲಿ ಸತ್ಯ, ಧರ್ಮ, ಕರ್ಮಗಳು ಯಾವ ರೀತಿ ಪಾತ್ರವಹಿಸುತ್ತದೆ ಹಾಗೆಯೇ ಗೀತೆಯ ಪ್ರಸ್ತುತತೆ ಏನು ಎಂಬುದರ ಕುರಿತು ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಶ್ರೀ ನಾಗರಾಜ್ ಹೇಳಿದ್ದಾರೆ.

ರಾಷ್ಟೀಯ ಪ್ರೌಢಶಾಲೆಯಲ್ಲಿ ಸೋಂದಾ ಸ್ವರ್ಣವಲ್ಲಿ ಮಠದ ಶ್ರೀ ಭಗವದ್ಗೀತೆ ಅಭಿಯಾನದಲ್ಲಿ ವಿದ್ಯಾರ್ಥಿಗಳಿಗೆ ಆಯೋಜಿಸಿದ ತಾಲೂಕು ಮಟ್ಟದ ಸ್ಪರ್ಧೆಗಳನ್ನು ಉದ್ಘಾಟನೆ ಮಾಡಿ ಎಲ್ಲರನ್ನು ಉದ್ದೇಶಿಸಿ ಶ್ರೀ ನಾಗರಾಜ್ ಮಾತನಾಡಿದರು.

ಭಗವದ್ಗೀತೆಯನ್ನು ಹೇಳಿದ ಸಂದರ್ಭ ಯಾವುದು? ಹೇಳಿದ್ದು ಯಾರು? ಯಾಕೆ ಹೇಳಿದ್ದು? ಅನ್ನೋದು ತುಂಬಾ ಮುಖ್ಯ. ಇದು ನೇರವಾಗಿ ಭಗವಂತನಿಂದ ಮನುಷ್ಯರಿಗೆ ಅರ್ಜುನನ ಮೂಲಕ ಉಪದೇಶಿಸಿದ ಜೀವನ ಕ್ರಮ. ಎರಡು ದೊಡ್ಡ ಸೈನ್ಯಗಳ ಮಧ್ಯೆ ಯುದ್ಧ ಪ್ರಾರಂಭವಾಗಬೇಕು ಅನ್ನುವ ಒಂದು ಸಂದರ್ಭದಲ್ಲಿ ಅರ್ಜುನನಿಗೆ ಬರುವ ಅನೇಕ ಸಂದೇಹಗಳು ಅದು ಮನುಷ್ಯರಿಗೂ ಸಹ ಆಪತ್ಕಾಲದಲ್ಲೇ ಸಂದೇಹ ಬರುವ ಹಾಗೆ ಬಂದದ್ದು. ವಿದ್ಯಾರ್ಥಿಗಳಿಗೂ ಸಹ ಪರೀಕ್ಷೆ ಬರುವ ಸಂದರ್ಭದಲ್ಲಿ ಸಂದೇಹ ಹೆಚ್ಚು ಎಂಬ ಹಾಗೆ ಆ ಹೊತ್ತಿನಲ್ಲಿ ಬಂದ ಅನುಮಾನಗಳಾದ ಯುದ್ಧ ಮಾಡಬೇಕಾ? ಬಿಡಬೇಕಾ? ಯಾಕೆ ಮಾಡಬೇಕು? ಈ ಸೈನ್ಯದ ಎದುರಾಳಿಗಳೆಲ್ಲರೂ ನನ್ನ ಗುರು ಹಿರಿಯರು, ಸಂಬಂಧಿಗಳು, ಸ್ನೇಹಿತರು, ಸಹವರ್ತಿಗಳು ಇವರೆಲ್ಲರ ಜೊತೆಗೆ ಯುದ್ಧ ಮಾಡಿ ಅವರನ್ನು ಸೋಲಿಸಿ, ಸಾಯಿಸಿ ನಾನು ಸಾಧಿಸುವುದೇನಿದೆ. ಇದು ಸರಿಯೇ ತಪ್ಪೇ ಎನ್ನುವುದಕ್ಕೆ ಕೃಷ್ಣ ಮಾಡುವಂತಹ ಉಪದೇಶವೇ ಈ ಭಗವದ್ಗೀತೆ. 18 ಅಧ್ಯಾಯಗಳು, ಪ್ರತಿಯೊಂದು ಅಧ್ಯಾಯಗಳಲ್ಲೂ ಒಂದೊಂದು ವಿಷಯಗಳು. National Institute of Education ಇಲ್ಲಿ ಕೃಷ್ಣ ದೇವರು ಎಂದುಕೊಂಡರೆ ಈಗಿನ ಕಾಲದ ಪರಿಸ್ಥಿತಿಗೆ ನಾವು ಅನುಸಂಧಾನ ಮಾಡಿ ಹೇಳುವುದಾದರೆ ಆತ ಬಹುದೊಡ್ಡ ಮನಶಾಸ್ತ್ರಜ್ಞ. ಆತ ಹೇಳದಿರುವ ನೀತಿ ಇಲ್ಲ ಅವನು ಉತ್ತರ ಕೊಡದಿರುವಂತಹ ಸಮಸ್ಯೆಗಳೇ ಇಲ್ಲ, ಎಲ್ಲದಕ್ಕೂ ಎಲ್ಲರಿಗೂ ಸಮಾಧಾನವಾಗುವ ಹಾಗೆ ಅರ್ಥವಾಗುವ ಹಾಗೆ ಅವರ ಜೀವನದಲ್ಲಿ ಅವೆಲ್ಲವನ್ನ ಅನುಸರಿಸಿಕೊಳ್ಳುವಂತೆ ಹೇಳಿದಂತಹ ಉಪದೇಶ ನೀಡಿದ ಬಹುದೊಡ್ಡ ಆದರ್ಶ ಪುರುಷ ಕೃಷ್ಣ. ನಮಗೆ ಕೃಷ್ಣ ಹತ್ತಿರವಾಗಲು ಕಾರಣವೇನೆಂದರೆ ಮನುಷ್ಯನ ರೂಪಕ್ಕೆ ಆತನ ರೂಪ ಬಹಳ ಸಮೀಪ. ಅರ್ಜುನನನ್ನು ಸಾಂಕೇತಿಕವಾಗಿ ಇಟ್ಟುಕೊಂಡು ನಮ್ಮ ಜೀವನ ಕ್ರಮ ಹೇಗಿರಬೇಕು ನಾವೇನು ಮಾಡಬೇಕು ಏನು ಮಾಡಬಾರದು ಯಾವಾಗ ಮಾಡಬೇಕು ಯಾಕೆ ಮಾಡಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ ಸರಳವಾಗಿ ವ್ಯಾಸ ಮಹರ್ಷಿಗಳ ಕೈಯಿಂದ ನಮಗೆ ಇದನ್ನು ಭಗವಂತ ಕೊಡಿಸಿದ್ದಾನೆ. ನಮ್ಮ ದೇಶಕ್ಕೊಂದು ಸಂವಿಧಾನ ಇರುವ ಹಾಗೆ ಇಡೀ ಜಗತ್ತಿಗೆಲ್ಲ ಒಪ್ಪುವಂತಹ ಎಲ್ಲ ವರ್ಗವು ಒಪ್ಪುವಂತಹ, ಸರ್ವರಿಗೂ ಸಮಾನವಾಗಿ ಅನ್ವಯವಾಗುವ ಸಂವಿಧಾನದ ರೀತಿಯಲ್ಲಿ ಇರುವುದು ಈ ಭಗವದ್ಗೀತೆ. ಅದರಂತೆ ಎಲ್ಲರೂ ಸಹ ಇದನ್ನು ಒಪ್ಪಿಕೊಂಡಿದ್ದಾರೆ ಅಭ್ಯಾಸ ಮಾಡುತ್ತಿದ್ದಾರೆ. ಅನುಷ್ಠಾನವನ್ನು ಕೂಡ ಮಾಡುತ್ತಿದ್ದಾರೆ ಹಾಗಾಗಿ ನಾವುಗಳೆಲ್ಲರೂ ಸಹ ಇದನ್ನು ಕಲಿಯಬೇಕು. ಅಭ್ಯಾಸ ಮಾಡಬೇಕು. ಈ ಸಂಸ್ಕೃತಿಯನ್ನು ಮುಂದುವರೆಸುವ ನಿಟ್ಟಿನಲ್ಲಿ ಗುರುಗಳ ಕಾರ್ಯ ಶ್ಲಾಘನೀಯ. ನಾವೆಲ್ಲರೂ ಅದರ ಮಹತ್ವ ಅರಿತು ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂಬುದಾಗಿ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಚಾಲನಾ ಸಮಿತಿಯ ಪ್ರಮುಖರಾದ ಶ್ರೀ. ಪಿ. ಪಿ ಹೆಗ್ಡೆಯವರು ವಹಿಸಿದ್ದರು. ವೇದಿಕೆಯಲ್ಲಿ ಅಭಿಯಾನದ ಪ್ರಧಾನ ಸಂಚಾಲಕರಾದ ಶ್ರೀ ಟಿ. ಜೆ. ಲಕ್ಷ್ಮಿನಾರಾಯಣ, ಶಾಲೆಯ ಮುಖ್ಯಸ್ಥರಾದ ಶ್ರೀ ಚಿಕ್ಕಪೆಂಚಾಲಯ್ಯ ಉಪಸ್ಥಿತರಿದ್ದರು. ಡಾ. ಮೈತ್ರೇಯಿ ಹೆಚ್. ಎಲ್. ಪ್ರಮೋದ್ ಭಟ್ ಡಾ. ಗಣೇಶ್ ಭಟ್ ಹಾಗೂ ಸಮಿತಿಯ ಸದಸ್ಯರು ಉಪಸ್ಥಿತರಿದ್ದರು.
ನಗರದ ಸುಮಾರು 35ಕ್ಕೂ ಹೆಚ್ಚು ಶಾಲೆಗಳಿಂದ ಹಿರಿಯ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ವಿಭಾಗದ ಸುಮಾರು 140 ವಿದ್ಯಾರ್ಥಿಗಳು ಗೀತೆಯ ಕಂಠಪಾಠ, ಭಾಷಣ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು.