Wednesday, February 11, 2026
Wednesday, February 11, 2026
Home Blog Page 83

S.N. Channabasappa ನಾಗರೀಕರ ಸಮಸ್ಯೆಗಳ ಬಗ್ಗೆ ಶಿವಮೊಗ್ಗದ ಶಾಸಕ ಚನ್ನಬಸಪ್ಪ ಅವರಿಂದ ಅಧಿಕಾರಿಗಳೊಂದಿಗೆ ಮುಖಾಮುಖಿ ಚರ್ಚೆ

0

S.N. Channabasappa ಶಾಸಕರ ಕಚೇರಿ ‘ಕರ್ತವ್ಯ ಭವನ’ದಲ್ಲಿ ನಡೆದ ಸಭೆಯಲ್ಲಿ ನಾಗರೀಕರ ಹಿತರಕ್ಷಣಾ ವೇದಿಕೆ, ಮೆಸ್ಕಾಂ ಹಾಗೂ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ವಿವಿಧ ಸಾರ್ವಜನಿಕ ಸಮಸ್ಯೆಗಳ ಕುರಿತು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ವಿಸ್ತೃತವಾಗಿ ಚರ್ಚಿಸಿದರು.

ಸಭೆಯಲ್ಲಿ ವಿಶೇಷವಾಗಿ ನಗರದ ವಿವಿಧ ಕಡೆಗಳಲ್ಲಿ ನಿಷ್ಕ್ರಿಯಗೊಂಡಿರುವ ವಿದ್ಯುತ್ ಕಂಬಗಳನ್ನು ಸುರಕ್ಷಿತವಾಗಿ ಸ್ಥಳಾಂತರಿಸುವುದು, ಹಾಗೂ ಕುಡಿಯುವ ನೀರಿನ ಸರಬರಾಜು ಸಂಬಂಧಿತ ಸಮಸ್ಯೆಗಳನ್ನು ತುರ್ತಾಗಿ ಪರಿಹರಿಸುವ ಕ್ರಮಗಳ ಕುರಿತು ವಿವರವಾದ ಸಂವಾದ ನಡೆಸಿದರು.

S.N. Channabasappa ನಾಗರೀಕರ ದಿನನಿತ್ಯದ ಜೀವನಕ್ಕೆ ನೇರವಾಗಿ ಸಂಬಂಧಿಸಿದ ಈ ವಿಷಯಗಳನ್ನು ಶೀಘ್ರದಲ್ಲಿ ಬಗೆಹರಿಸಿ, ಉತ್ತಮ ಸಾರ್ವಜನಿಕ ವ್ಯವಸ್ಥೆಯನ್ನು ಒದಗಿಸುವತ್ತ ಸಂಬಂಧಿತ ಇಲಾಖೆಗೆ ಸೂಕ್ತ ಆದೇಶಗಳನ್ನು ನೀಡಿದರು.

ಗ್ರಾಮಸ್ಥರಿಂದಲೇ ಗೌಡಕೊಪ್ಪ- ದೊಡ್ಲಿಮನೆ ಸಂಪರ್ಕ ರಸ್ತೆ ನಿರ್ಮಾಣ

0

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಕೊಡೂರು ಮತ್ತು ಮುಂಬರು ಗ್ರಾಮ ಪಂಚಾಯಿತಿಯ ಗೌಡಕೊಪ್ಪ ದೊಡ್ಲಿ ಮನೆ ಗ್ರಾಮದಲ್ಲಿ ಗ್ರಾಮಸ್ಥರು ತಾವೇ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದಾರೆ.
ಗ್ರಾಮದಲ್ಲಿ 50ಕ್ಕೂ ಹೆಚ್ಚು ಕುಟುಂಬಗಳು ವಾಸಿಸುತ್ತಿದ್ದರೂ, ಸರ್ಕಾರದ ಮೂಲಸೌಕರ್ಯಗಳು ಸಿಗುತ್ತಿಲ್ಲ. ರಾಜಕೀಯ ನಾಯಕರಿಂದ ಬೇಸತ್ತು, ಗ್ರಾಮಸ್ಥರೇ ಮುಂಬರುವ ಚುನಾವಣೆಗಳಲ್ಲಿ ಮತದಾನ ಬಹಿಷ್ಕರಿಸಿದ್ದಾರೆ.

ಜಿಲ್ಲಾಧಿಕಾರಿಗಳು ಈ ಪ್ರದೇಶಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಮೂಲಸೌಕರ್ಯ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ. ತಪ್ಪಿದ್ದಲ್ಲಿ ಮುಂಬರುವ ದಿನಗಳಲ್ಲಿ ತಶಿಲ್ದಾರ್ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

Karnataka State Commission for Women ಮಾತೃತ್ವದ ಶಕ್ತಿಯಿಂದ ಹೆಣ್ಣು,ಸಮಾಜದಲ್ಲಿ ಸುಶಿಕ್ಷಿತಳಾಗಿ ಬದಲಾವಣೆ ತರಬೇಕು- ಡಾ.ನಾಗಲಕ್ಷ್ಮೀ ಚೌಧರಿ

0

Karnataka State Commission for Women ಹೆಣ್ಣು ಮಾತೃತ್ವದ ಅದಮ್ಯ ಶಕ್ತಿ ಯಾಗಿದ್ದು , ಶಿಕ್ಷಣವೆಂಬ ಅಸ್ತ್ರವನ್ನು‌ ಹೊಂದಿ ಸಮಾಜದಲ್ಲಿ ಉತ್ತಮ ಬದಲಾವಣೆ ತರಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಡಾ.ನಾಗಲಕ್ಷ್ಮಿ ಚೌಧರಿ ವಿದ್ಯಾರ್ಥಿನಿಯರಿಗೆ ಕರೆ ನೀಡಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ, ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಪದವಿ ಮತ್ತು ಕಾಲೇಜು ಶಿಕ್ಷಣ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಸೋಮವಾರ ನಗರದ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಲಾಗಿದ್ದ ಕಾಲೇಜು ವಿದ್ಯಾರ್ಥಿನಿಯರೊಂದಿಗಿನ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಶಿಕ್ಷಣ ಬಹಳ ದೊಡ್ಡ ಶಕ್ತಿ ಮತ್ತು ಶಸ್ತ್ರ. ಇದರಿಂದ ಮಾತ್ರ ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯವಾಗಿದ್ದು ನೀವೆಲ್ಲಾ ಸುಶಿಕ್ಷಿತರಾಗಿ ಬದಲಾವಣೆ ತರಬೇಕೆಂದರು.
ಡಾ.ಅಂಬೇಡ್ಕರ್ ರವರ ಧ್ಯೇಯವಾಕ್ಯಗಳಾದ ಶಿಕ್ಷಣ, ಸಂಘಟನೆ, ಹೋರಾಟ ನಮಗೆಲ್ಲ ಬಹು ಮುಖ್ಯವಾಗಿದ್ದು ಶಿಕ್ಷಣ ಪಡೆದು, ಸಂಘಟಿತರಾಗಿ‌ ನಮ್ಮ ಹಕ್ಕುಗಳಿಗಾಗಿ ನಾವು ಹೋರಾಡಬೇಕು
ಯಾವ ಹಕ್ಕುಗಳಿಗಾಗಿ ನಾವು ಹೋರಾಡುತ್ತೀವೋ ಅದು ಲಭಿಸುತ್ತದೆ.
ನನ್ನ ತಂದೆ ನನಗೆ ಶಿಕ್ಷಣ ನೀಡದಿದ್ದರೆ ನಾನಿಂದು ಈ ಸ್ಥಾನದಲ್ಲಿ‌ ಇರಲು ಸಾಧ್ಯವಾಗುತ್ತಿರಲಿಲ್ಲ ಎಂದ ಅವರು ಹೆಣ್ಣುಮಕ್ಕಳೆಲ್ಲ ಶಿಕ್ಷಿತರಾಗಬೇಕು. ಒಂದು ಗುರಿ ಹೊಂದಬೇಕು. ಸ್ವಾಮಿ ವಿವೇಕಾನಂದರು ಹೇಳಿದ ಹಾಗೆ ಪ್ರತಿ ದಿನ ಆ ಗುರಿಯ ಕನಸು ಕಾಣಬೇಕು, ಅದಕ್ಕಾಗಿ ಶ್ರಮ ಪಡಬೇಕು. ಶ್ರಮ ಇದ್ದರೆ ಮಾತ್ರ ಫಲ. ಕಷ್ಟಪಟ್ಟರೆ ಏನಾನ್ನಾದರೂ ಸಾಧಿಸಬಹುದು ಎಂದರು.
ಯುವಜನತೆಗೆ ಮೊಬೈಲ್ ಇಂದು ನಿಜವಾದ ಸವಾಲು ಆಗಿದೆ. ಮೊಬೈಲ್ ನ ಗುಲಾಮ ನೀವಾಗಬಾರದು. ಅಗತ್ಯಕ್ಜಿಂತ ಹೆಚ್ಚು ಅದನ್ನು ಬಳಸಿದರೆ ನಿಮ್ಮ ಗುರಿ ಸಾಧಿಸಲು ಸಾಧ್ಯವಿಲ್ಲ. ಕನಿಷ್ಟ 3 ಗಂಟೆ ಕಾಲ ಪ್ರತಿಯೊಬ್ಬ ವಿದ್ಯಾರ್ಥಿಗಳು ಓದಬೇಕು.ಅರಿವು ಬದುಕು, ಅಜ್ಞಾನ ಸಾವು. ಶಿಕ್ಷಣದ ಜೊತೆ ಸೇವಾ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು.
ಸಂವಾದದ ವೇಳೆ ವಿದ್ಯಾರ್ಥಿನಿಯರು ರಾಜಕೀಯ ಕ್ಷೇತ್ರದ ಬಗ್ಗೆ ಋಣಾತ್ಮಕ ನಿಲುವು ತೋರಿದಾಗ ಅಧ್ಯಕ್ಷರು, ರಾಜಕಾರಣ ಒಂದು
ಸಾಮಾಜಿಕ ಜವಾಬ್ದಾರಿ. ಜನರ ಬದುಕನ್ನು ಬದಲಾಯಿಸಲು ರಾಜಕಾರಣಕ್ಕೆ ಬರಬೇಕೆಂದು ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದು, ಹೆಣ್ಣು ಮಕ್ಕಳು ರಾಜಕಾರಣಕ್ಕೆ ಬರಬೇಕು. ರಾಜಕಾರಣ ಪ್ರಗತಿಯ ಬೀಗವಾಗಿದ್ದು ಹೆಣ್ಣು ಮಕ್ಕಳು ಸಕ್ರಿಯವಾಗಿ ಪಾಲ್ಗೊಂಡರೆ ಮಾತ್ರ ಈ ಪ್ರಗತಿ ಸಾಧ್ಯವಾಗುತ್ತದೆ. ನೀವು ಸಮಾಜದಲ್ಲಿ ಏನಾಗುತ್ತಿದೆ ಎಂದು ತಿಳಿದುಕೊಳ್ಳಬೇಕು. ‌ಸರ್ಕಾರದ ಸವಲತ್ತುಗಳ ಬಗ್ಗೆ ತಿಳಿದುಕೊಳ್ಳಬೇಕೆಂದು ತಿಳಿಸಿದರು.
Karnataka State Commission for Women ಯಾರೇ ಆಗಲಿ ತಪ್ಪು ಮಾಡುವುದು ಸಹಜ. ತಿದ್ದಿಕೊಂಡು ಸಾಧಿಸುವೆಡೆ ಮುನ್ನಡೆಯಬೇಕು. ಹೆಣ್ಣಿಗೆ ಬಹಳ ಶಕ್ತಿ ಇದೆ. ನಾವು ನಡೆಯುವ ಹಾದಿಯಲ್ಲಿ ಕಲ್ಲು, ಮುಳ್ಳು, ಹೂವು ಎಲ್ಲವೂ ಇರುತ್ತದೆ. ಅದೆಲ್ಲವನ್ನು ದಾಟಿ ಸಾಗಬೇಕು.
ವಿದ್ಯಾರ್ಥಿಗಳಾದ ನೀವು ಜಿಲ್ಲೆಯ ಸಮಸ್ಯೆಗಳ‌ ಕುರಿತು ಜಿಲ್ಲಾಧಿಕಾರಿ, ಎಸ್ ಪಿ, ಸಿಇಓ, ಜಿಲ್ಲೆಯ ವಿವಿಧ ಅಧಿಕಾರಿಗಳಿಗೆ ತಿಳಿಸಬೇಕು.
ಸೈಬರ್ ಜಗತ್ತು ಒಂದು ಬಹಳ ದೊಡ್ಡ ಅಭದ್ರತೆ ಸೃಷ್ಟಿಸಿದೆ. ಫೇಕ್ ಅಕೌಂಟ್ ಮೂಲಕ ಹೆಣ್ಣು ಮಕ್ಕಳಿಗೆ ದಾಳ ಹಾಕಿ ಬಲೆಗೆ ಸೆಳೆದು ಕೂಪಕ್ಕೆ ತಳ್ಳಲಾಗುತ್ತಿದೆ. ಸೈಬರ್ ಕ್ರೈಂ ಜಗತ್ತು ವಿಚಿತ್ರವಾಗಿದ್ದು ಬಹಳ ಜಾಗೃತರಾಗಿರಬೇಕು. ಸೈಬರ್ ಕ್ರೈಮ್ ಗೆ ಸಂಬಂಧಿಸಿದಂತೆ ಬ್ಲಾಕ್ಮೇಲ್ ಇತರೆ ಸಮಸ್ಯೆಗಳಿದ್ದರೆ ದೂರು ನೀಡಬೇಕು. ಧೈರ್ಯವಾಗಿ ಎದುರಿಸಬೇಕು. ಜೀವ ಕಳೆದುಕೊಳ್ಳಬಾರದು. ಸೈಬರ್ ಕ್ರೈಮ್ ಸಹಾಯವಾಣಿ ಸಂಖ್ಯೆ 1930 ಗೆ ಅಥವಾ 112 ಗೆ ಕರೆ ಮಾಡಬೇಕು. ಈಗಲೇ ಎಲ್ಲರೂ ಸುರಕ್ಷಾ ಆಪ್ ಡೌನ್ ಲೋಡ್ ಮಾಡಿಕೊಳ್ಳಬೇಕು. ವಿದ್ಯಾರ್ಥಿನಿಯರು ಬಹಳ ಎಚ್ಚರಿಕೆಯಿಂದ ಇರಬೇಕು ಎಂದು ಕಿವಿ ಮಾತು ಹೇಳಿದ ಅವರು ವಿದ್ಯಾರ್ಥಿನಿಯರೊಂದಿಗೆ ಪ್ರೇರಣಾತ್ಮಕವಾಗಿ ಸಂವಾದ ನಡೆಸಿದರು.
ಸಂವಾದದ ವೇಳೆ ವಿದ್ಯಾರ್ಥಿನಿಯರು ಸೈಬರ್ ದೂರಿನ ಬಗ್ಗೆ , ವಸತಿ ನಿಲಯದಲ್ಲಿ ಸೀಟ್ ಸಿಗದಿರುವ ಬಗ್ಗೆ ಹಾಗೂ ವಿದ್ಯಾರ್ಥಿ ವೇತನ ಬಾರದಿರುವ ಬಗ್ಗೆ ದೂರಿದರು.
ಕಾರ್ಯಕ್ರಮದಲ್ಲಿ‌ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ‌ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಶಶಿರೇಖಾ, ಪ್ರಾದೇಶಿಕ ಕಾಲೇಜು ಶಿಕ್ಷಣ ಇಲಾಖೆ ಸಹಾಯಕ‌ ನಿರ್ದೇಶಕಿ ಯಶೋಧ, ಉಪನ್ಯಾಸಕ ಚಂದ್ರಮೋಹನ್, ಇತರೆ ಅಧಿಕಾರಿಗಳು, ವಿವಿಧ ಕಾಲೇಜುಗಳ‌ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

Shree Kshetra Dharmasthala Gramabhivriddhi Trust ಸ್ತ್ರೀ ಸ್ವಾವಲಂಬನೆ ಮತ್ತು ಗ್ರಾಮಾಭಿವೃದ್ಧಿಗಳು ರಾಷ್ಟ್ರೋನ್ನತಿಗೆ ಅವಶ್ಯ- ಶಾಸಕ ಬಿ.ಪಿ.ಹರೀಶ್

0

Shree Kshetra Dharmasthala Gramabhivriddhi Trust ಸ್ತ್ರೀ ಸ್ವಾವಲಂಬನೆ ಹಾಗೂ ಗ್ರಾಮಾಭಿವೃದ್ಧಿ ಇವು ಸಾಮಾಜಿಕ ಸಬಲೀಕರಣದೊಂದಿಗೆ ರಾಷ್ಟ್ರೋನ್ನತಿಗೂ ಅವಶ್ಯ ಎಂದು ಹರಿಹರ ಕ್ಷೇತ್ರದ ಶಾಸಕ ಬಿ ಪಿ ಹರೀಶ್ ಅಭಿಪ್ರಾಯಪಟ್ಟರು.

ಅವರು ಹರಿಹರ ತಾಲೂಕು ಬೆಳ್ಳೂಡಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ವತಿಯಿಂದ ಏರ್ಪಾಡಾಗಿದ್ದ ಸಾಮೂಹಿಕ ಸಹಸ್ರ ಬಿಲ್ವಾರ್ಚನೆ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಸರ್ಕಾರದ ಯೋಜನೆಗಳನ್ನು ಸಾಮಾನ್ಯರಿಗೂ ಪ್ರಾಮಾಣಿಕವಾಗಿ ಮುಟ್ಟಿಸುವ ಒಳ್ಳೆಯ ಕಾರ್ಯವನ್ನು ಸಹಾ ಧರ್ಮಸ್ಥಳ ಸಂಸ್ಥೆ ಮಾಡುತ್ತಿದ್ದು ಇದಕ್ಕೆ ಕಪ್ಪು ಚುಕ್ಕಿ ಇಡಲು ಮುಂದಾದವರು ಈಗ ಪಶ್ಚಾತ್ತಾಪ ಪಡುವಂತಾಗಿದೆ ಎಂದರು.

ಗ್ರಾಮಗಳ ಸಾಮಾನ್ಯ ಮಹಿಳೆಯರಿಗೂ ಪ್ರಾಮಾಣಿಕ ಬ್ಯಾಂಕಿಂಗ್ ವ್ಯವಸ್ಥೆಯ ಜ್ಞಾನವನ್ನು ಧರ್ಮಸ್ಥಳ ಸಂಸ್ಥೆ ನೀಡಿದೆ ಎಂದರು.

ಧಾರ್ಮಿಕ ಪ್ರವಚನ ನೀಡಿದ ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ್ ರವರು ಸಾಮೂಹಿಕವಾಗಿ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ‘ನಾನು’ ಎಂಬುವ ಅಹಂಭಾವ ದೂರವಾಗಿ ‘ನಾವು’ ಎಂಬುವ ವಿಶಾಲ ಮನೋಭಾವ ಮೂಡುತ್ತದೆ, ಇದು ಸಾಮಾಜಿಕ ಸಾಮರಸ್ಯಕ್ಕೆ ಸಹಕಾರಿ ಎಂಬುದನ್ನು ಸ್ವಾರಸ್ಯಕರ ಉದಾಹರಣೆಗಳ ಮೂಲಕ ವಿವರಿಸುತ್ತಾ ಬೆಳ್ಳೂಡಿ, ಭಾನುವಳ್ಳಿ ರಾಮತೀರ್ಥ ಗ್ರಾಮಗಳ ಐತಿಹಾಸಿಕ ಮಹತ್ವಗಳು ಶಾಸನಗಳಲ್ಲಿ ಉಲ್ಲೇಖವಾಗಿರುವುದನ್ನು ಸಹ ವಿವರಿಸಿದರು.

ಧರ್ಮಸ್ಥಳ ಸಂಸ್ಥೆಯ ವತಿಯಿಂದ ರಾಜ್ಯದಲ್ಲಿ 6 ಲಕ್ಷಕ್ಕೂ ಹೆಚ್ಚು ಸ್ವಸಹಾಯ ಸಂಘಗಳಿದ್ದು 50 ಲಕ್ಷಕ್ಕೂ ಹೆಚ್ಚು ಸದಸ್ಯರುಗಳಿದ್ದಾರೆ ಬಡ ಮತ್ತು ಮಧ್ಯಮ ವರ್ಗದ ಬಹುತೇಕ ಮಹಿಳಾ ಸದಸ್ಯರು ಆರ್ಥಿಕ ಸಬಲರಾಗಲು ಇದು ಕಾರಣವಾಗಿದೆ ಎಂದು ಮಂಜುನಾಥ್ ಹೇಳಿದರು.

ಮುಖ್ಯ ಅತಿಥಿಗಳಾಗಿ ಮಾತನಾಡಿದ ದಾವಣಗೆರೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಎಸ್ ವೀರೇಶ್ ಹನಗವಾಡಿ ಭಾರತದ ಆರ್ಥಿಕ ಶಕ್ತಿ ಅಷ್ಟೇ ಅಲ್ಲದೇ ಕೌಟುಂಬಿಕ ವ್ಯವಸ್ಥೆಯೂ ವಿಶ್ವದಲ್ಲೇ ಭಾರತದಲ್ಲಿ ಗಟ್ಟಿಯಾಗಿದೆ, ಇದಕ್ಕೆ ಜನರಲ್ಲಿನ ಭಕ್ತಿ ಶ್ರದ್ಧೆ ನಂಬಿಕೆಗಳು ಕಾರಣವಾಗಿವೆ ಎಂದರು.

ಬಿಜೆಪಿ ಯುವ ಮುಖಂಡ ಚಂದ್ರಶೇಖರ ಪೂಜಾರ್ ಮಾತನಾಡಿ ನೆಮ್ಮದಿ ಹಾಗೂ ಭರವಸೆಯ ಬದುಕಿಗೆ ದೈವ ಶ್ರದ್ಧೆಯು ಅವಶ್ಯ ಎಂದರು. ಕಾಂಗ್ರೆಸ್ ಯುವ ಮುಖಂಡ ಎನ್ ಹೆಚ್ ಶ್ರೀನಿವಾಸ ನಂದಿಗಾವಿ ಮಾತನಾಡಿ ಪೂಜೆ ಪುನಸ್ಕಾರಗಳಿಂದ ಆತ್ಮಸ್ಥೈರ್ಯವು ವೃದ್ಧಿಯಾಗುತ್ತದೆ ಎಂದರು.

ಟ್ರಸ್ಟಿನ ಯೋಜನಾಧಿಕಾರಿ ನಂದಿನಿ ಶೇಟ್ ಪ್ರಾಸ್ತಾವಿಕ ನುಡಿಗಳನಾಡುತ್ತಾ ಶ್ರೀ ಕ್ಷೇತ್ರ ಧರ್ಮಸ್ಥಳ ಸಂಸ್ಥೆಯು ಜ್ಞಾನವಿಕಾಸ, ಮಧ್ಯವರ್ಜನ, ಕೆರೆಗಳ ಪುನರ್ ನಿರ್ಮಾಣ, ನಿರ್ಗತಿಕರಿಗೆ ಮಾಸಾಶನ, ಬಡವರಿಗೆ ಗೃಹ ನಿರ್ಮಾಣ ಮುಂತಾಗಿ 80ಕ್ಕೂ ಹೆಚ್ಚು ಜನಪರ ಯೋಜನೆಗಳನ್ನು ಪ್ರಾಮಾಣಿಕವಾಗಿ ನಡೆಸಿಕೊಂಡು ಬರುತ್ತಿದೆ ಎಂದರು.

Shree Kshetra Dharmasthala Gramabhivriddhi Trust ಬೆಳ್ಳೂಡಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶ್ರೀಮತಿ ಪಾರ್ವತಮ್ಮನವರ ಅಧ್ಯಕ್ಷತೆಯಲ್ಲಿ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ದಾವಣಗೆರೆ ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ರವಿಶಂಕರ್, ಶಾಲಾ ಸಲಹಾ ಸಮಿತಿ ಅಧ್ಯಕ್ಷ ಹನುಮಂತ ಗೌಡ್ರು, ಭಾನುವಳ್ಳಿ ಗ್ರಾಮದ ಮುಖಂಡ ಶಂಕರೇಗೌಡರು, ರಾಮತೀರ್ಥ ಗ್ರಾಮದ ಮುಖಂಡ ಶ್ರೀನಿವಾಸ್ ಮೂರ್ತಿ, ಗ್ರಾಮ ಪಂಚಾಯಿತಿ ಸದಸ್ಯ ಶಿವಣ್ಣ, ಲೋಕೇಶ್, ಸುರೇಶ್ ಆಚಾರ್, ಸುನೀತಮ್ಮ, ಭಾರತೀ, ಗೀತಮ್ಮ, ಶಂಕರಪ್ಪ, ರುದ್ರೇಶ್ ಮುಂತಾದವರು ಗ್ರಾಮ ಪಂಚಾಯಿತಿ ಸದಸ್ಯರುಗಳು, ಪೂಜಾ ಸಮಿತಿಯ ಸದಸ್ಯರುಗಳು, ಒಕ್ಕೂಟಗಳ ಅಧ್ಯಕ್ಷರು ಪದಾಧಿಕಾರಿಗಳು ಉಪಸ್ಥಿತರಿದ್ದು ದೇವರಾಜ್ ನಿರೂಪಿಸಿದರೆ ಬಿಂದು ಮತ್ತು ತೇಜಸ್ವಿನಿ ಪ್ರಾರ್ಥನೆ ಹಾಡಿದರು.

ಉಮೇಶ್ ಸ್ವಾಗತ ಕೋರಿದರು. ಪಟೇಲ್ ಗುರುಬಸಪ್ಪ ಪ್ರೌಢಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಂದನೆಗಳನ್ನು ವೀರೇಶ್ ಪೂಜಾರ್ ಸಮರ್ಪಿಸಿದರು. ಮಕ್ಕಳಿಂದ ನೃತ್ಯಪ್ರಸ್ತುತಿಯು ಆಕರ್ಷಕವಾಗಿ ನೆರವೇರಿತು.

National Health Campaign ಕುಷ್ಠರೋಗ ಸಾಮಾಜಿಕ ಕಳಂಕವಲ್ಲ.ಆರಂಭದಲ್ಲೇ ಪತ್ತೆಹಚ್ಚಿದಲ್ಲಿ ಸೂಕ್ತ ಚಿಕಿತ್ಸೆಯಿಂದ ಗುಣಸಾಧ್ಯ,- ಡಾ. ನಟರಾಜ್

0

National Health Campaign ಕುಷ್ಠರೋಗವನ್ನು ಒಂದು ಸಾಮಾಜಿಕ ಕಳಂಕವಾಗಿ ಬಿಂಬಿಸಲಾಗುತ್ತಿದ್ದು, ಈ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ. ಹಾಗೂ ಈ ರೋಗವನ್ನು ಶೀಘ್ರವಾಗಿ ಪತ್ತೆ ಹಚ್ಚುವ ಮೂಲಕ ಇದಕ್ಕೆ ಸೂಕ್ತ ಚಿಕಿತ್ಸೆ ಪಡೆದು ಕುಷ್ಟರೋಗವನ್ನು ತಡೆಗಟ್ಟಬಹುದಾಗಿದೆ ಎಂದು ಡಿಹೆಚ್‌ಓ ಡಾ.ನಟರಾಜ್ ಕೆ.ಎಸ್.ತಿಳಿಸಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದೊಂದಿಗೆ ಜಿಲ್ಲಾ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕುಷ್ಠರೋಗ ಪ್ರಕರಣ ಪತ್ತೆ ಹಚ್ಚುವ ಅಭಿಯಾನ-2025 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುಷ್ಠರೋಗವು ಎಂ.ಲೆಪ್ರೆ ಎಂಬ ರೋಗಾಣುವಿನಿಂದ ಬರುವ ಕಾಯಿಲೆಯಾಗಿದ್ದು, ಈ ರೋಗದಿಂದ ಉಂಟಾಗುವ ಅಂಗವಿಕಲತೆಯಿಂದ ಇದಕ್ಕೆ ಸಾಮಾಜಿಕ ಕಳಂಕ ಅಂಟಿದೆ.
ದೇಹದ ಮೇಲೆ ತಿಳಿ ಬಿಳಿ ಅಥವಾ ತಾಮ್ರ ಬಣ್ಣದ ಮಚ್ಚೆಗಳು, ಕೈ ಅಥವಾ ಕಾಲುಗಳಲ್ಲಿ ಸ್ಪರ್ಶಜ್ಞಾನವಿಲ್ಲದಿರುವುದು, ಜೋಮು ಹಿಡಿಯುವುದು, ಮುಖ ಮತ್ತು ಕಿವಿಯ ಮೇಲೆ ಎಣ್ಣೆಯಂತಹ ಹೊಳಪುಗಳು ಕಂಡುಬರುವುದು ಈ ರೋಗದ ಲಕ್ಷಣಗಳಾಗಿದ್ದು, ಈ ರೋಗವು ಮೂಗಿನ ದ್ರವದಿಂದ ಹಾಗೂ ಉಸಿರಿನ ಮೂಲಕ ಆರೋಗ್ಯವಂತನಿಗೆ ಹರಡಲಿದೆ.

ಈ ರೋಗವು ವಂಶಪಾರಂಪರ್ಯವಲ್ಲ ಹಾಗೂ ಪಾಪ-ಶಾಪಗಳಿಂದ ಬರುವುದಿಲ್ಲ ಎಂದು ಮಾಹಿತಿ ನೀಡಿದರು.

ದೇಹದಲ್ಲಿ ತಿಳಿಬಿಳಿ ಮಚ್ಚೆಗಳು ಕಂಡು ಬಂದಲ್ಲಿ ಅದನ್ನು ಗುಪ್ತವಾಗಿರಿಸದೆ ವೈದ್ಯರಿಗೆ ತೋರಿಸಬೇಕು. ಆ ಮೂಲಕ ರೋಗದ ಪ್ರಾರಂಭಿಕ ಹಂತದಲ್ಲೆ ಚಿಕಿತ್ಸೆ ಪಡೆದು ಅಂಗವಿಕಲತೆಯನ್ನು ತಡೆಗಟ್ಟಬಹುದಾಗಿದೆ.
ಈ ರೋಗವನ್ನು ಬಹು ಔಷಧಿ ಚಿಕಿತ್ಸೆಯಿಂದಲೂ ಕೂಡ ಸಂಪೂರ್ಣವಾಗಿ ಗುಣಪಡಿಸಬಹುದಾಗಿದ್ದು, 6 ಅಥವಾ 12 ತಿಂಗಳ ಕಾಲ ಮನೆಯಲ್ಲೇ ಚಿಕಿತ್ಸೆ ಪಡೆದುಕೊಳ್ಳಬಹುದು.

National Health Campaign ಈಗಾಗಲೇ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಈ ರೋಗಕ್ಕೆ ಬಹು ಔಷಧಿಗಳನ್ನು ಉಚಿತವಾಗಿ ನೀಡಲಾಗುತ್ತಿದೆ ಎಂದರು.
ಡಿಎಲ್ ಓ ಡಾ. ಕಿರಣ್ ಮಾತನಾಡಿ, ಕುಷ್ಠರೋಗ ನಿರ್ಮೂಲನೆ ಬಹುಮುಖ್ಯ ಕಾರ್ಯಕ್ರಮವಾಗಿದ್ದು, ಆದಷ್ಟು ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚಿ ಅವರಿಗೆ ಚಿಕಿತ್ಸೆ ನೀಡುವ ಕೆಲಸ ಮಾಡಲಾಗುತ್ತಿದೆ. ಮನೆ ಮನೆಗೆ ಭೇಟಿ ನೀಡುವ ಆಶಾ ಕಾರ್ಯಕರ್ತರು ವ್ಯಕ್ತಿಯ ದೇಹದಲ್ಲಿ ಯಾವುದೇ ರೀತಿಯ ತಿಳಿ ಬಿಳಿ ಮಚ್ಚೆ ಹಾಗೂ ಚರ್ಮದಲ್ಲಿ ಕಾಯಿಲೆ ಕಂಡು ಬಂದಲ್ಲಿ ಕೂಡಲೇ ವೈದ್ಯರ ಬಳಿ ತೋರಿಸಿಕೊಂಡು‌ ಚಿಕಿತ್ಸೆ ಪಡೆಯಬೇಕು ಎಂದರು.

ಜಿಲ್ಲೆಯಲ್ಲಿ ಇಂದಿನಿಂದ 14 ದಿನಗಳ ಕಾಲ ಕುಷ್ಠರೋಗ ನಿರ್ಮೂಲನಾ ಕಾರ್ಯಕ್ರಮ ನಡೆಯಲಿದ್ದು, 133 ಹಳ್ಳಿಗಳು, 71,662 ಮನೆಗಳು ಹಾಗೂ 3,06,052 ಜನರನ್ನು ಪರೀಕ್ಷೆಗೆ ಒಳಪಡಿಸಿ ಕುಷ್ಠರೋಗ ಪ್ರಕರಣಗಳನ್ನು ಪತ್ತೆ ಹಚ್ಚುವ ಗುರಿಯನ್ನು ಹೊಂದಿದ್ದೇವೆ ಎಂದರು.

ಈ ವೇಳೆ ಆಶಾ ಕಾರ್ಯಕರ್ತರು ಹಾಗೂ ಸ್ವಯಂ ಸೇವಕರು ಮನೆ ಮನೆಗೆ ಭೇಟಿ ನೀಡಿ ಕುಷ್ಠರೋಗ ಪ್ರಕರಣವನ್ನು ಪತ್ತೆ ಹಚ್ಚುವ ಹಾಗೂ ಅದರ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯ ಮಾಡಿದರು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಚಂದ್ರಶೇಖರ್, ಬಾಪೂಜಿನಗರದ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಆರ್ಷಿಯಾ ಅಂಜುಂ, ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಆಶಾ ಕಾರ್ಯಕರ್ತರು ಹಾಗೂ ಸ್ವಯಂ ಸೇವರು ಹಾಜರಿದ್ದರು.

McGann District Hospital ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಶಿಶು ಜನನಕ್ಕೆ ಲಂಚ, ಮಹಿಳಾ ಆಯೋಗದ ಮುಂದೆ ರೋಗಿಗಳ ಅಳಲು

0

McGann District Hospital ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಭ್ರಷ್ಟಚಾರ ತಾಂಡವವಾಡುತ್ತಿದೆ.

ಮೆಗ್ಗಾನ್ ಆಸ್ಪತ್ರೆಯಲ್ಲಿ ಮಕ್ಕಳು ಹುಟ್ಟಿದ್ರೆ ದುಡ್ಡು ಕೊಡಬೇಕು ಎಂದು ತಿಳಿದುಬಂದಿದೆ.ಗಂಡಾದ್ರೆ 2500 ಸಾವಿರ ಹೆಣ್ಣಾದ್ರೆ 2000 ಸಾವಿರ ಲಂಚ ನೀಡಬೇಕಂತೆ.

ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಮುಂದೆ ರೋಗಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

McGann District Hospital ತಾಯಿ ಕಾರ್ಡ್ ಲ್ಲಿ ಹಣ ಇಟ್ಟು ಕೊಡಬೇಕು ಎಂದು ರೋಗಿಗಳು ಆರೋಪಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ಮೆಗ್ಗಾನ್ ಅಸ್ಪತ್ರೆ ಭೇಟಿ ನೀಠಿದ ವೇಳೆ ಈ ಘಟನೆ ನಡೆದಿದೆ.
ದುಡ್ಡಿಲ್ಲದೇ ಏನು ಕೆಲಸ ನಡೆಯುದಿಲ್ಲ ಎಂದು ರೋಗಿಗಳು ಹೇಳಿದ್ದಾರೆ.

Akashavani ಶಿವಮೊಗ್ಗದ ಸುಗುಣಾ ಸತೀಶ್ ಅವರಿಗೆ “ಅಪರ್ಣಾ ನಿರೂಪಣಾ ರತ್ನ” ರಾಜ್ಯಮಟ್ಟದ ಪ್ರಶಸ್ತಿ

0

Akashavani ದೂರದರ್ಶನ ಚಂದನ ಮತ್ತು ಆಕಾಶವಾಣಿಯ ವಾರ್ತಾವಾಚಕರು ಹಾಗೂ ನಿರೂಪಕರಾದ ಶ್ರೀಮತಿ ಸುಗುಣಾ ಸತೀಶ್ ಅವರು “ಅಪರ್ಣ ನಿರೂಪಣಾ ರತ್ನ” ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀಮತಿ ಸುಗುಣಾ ಸತೀಶ್ ಅವರು ನಿರೂಪಣಾ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನು ಗುರುತಿಸಿ ಮತ್ತು ಅವರ ನಿರೂಪಣಾ ಕೌಶಲ್ಯವನ್ನು ಪರಿಗಣಿಸಿ,
ಬೆಂಗಳೂರಿನ ಸ್ಪಾರ್ಕ್ ಅಕಾಡೆಮಿ ಮತ್ತು ಸೂರ್ಯ ಫೌಂಡೇಶನ್( ರಿ). ಸಂಸ್ಥೆ ” ಅಪರ್ಣ ನಿರೂಪಣಾ ರತ್ನ” ರಾಜ್ಯಮಟ್ಟದ ಪ್ರಶಸ್ತಿ ನೀಡಿ ಗೌರವಿಸಿದೆ.
Akashavani ಬೆಂಗಳೂರಿನ ಶಿಕ್ಷಕರ ಸದನದಲ್ಲಿ ಭಾನುವಾರ ನಡೆದ ರಾಜ್ಯಮಟ್ಟದ ಶಿಕ್ಷಕರ ಸಮ್ಮೇಳನ 2025 ರಲ್ಲಿ ಸೂರ್ಯ ಫೌಂಡೇಶನ್(ರಿ ) ಮತ್ತು ಸ್ಪಾರ್ಕ್ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷರಾದ ಶ್ರೀ ಸೋಮೇಶ್ವರ ನವೋದಯ, ಚಲನಚಿತ್ರ ನಟರಾದ ಶ್ರೀ ಸಾಯಿಪ್ರಕಾಶ್, ನಿಶ್ಚಿತ ಫೌಂಡೇಶನ್ ನ ಅಧ್ಯಕ್ಷರು ಮತ್ತು ಭಾರತೀಯ ಜನತಾ ಪಕ್ಷದ ಮಹಿಳಾ ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ನಿಶ್ಚಿತ, ಕರ್ನಾಟಕ ರಾಜ್ಯ ಶಿಕ್ಷಕರ ಪ್ರತಿಭಾ ಪರಿಷತ್ ಅಧ್ಯಕ್ಷರಾದ ಶ್ರೀ ಮಹೇಶ್ ಪಿ, ಹಾಗೂ ಲೇಖಕರು, ಮನೋಪ್ರೇರಣಾ ತರಬೇತುದಾರರು ಮತ್ತು ಉತ್ಪಾದಕತೆ ತಜ್ಞರಾದ ಶ್ರೀ ವೇಣು ಸಿ ವಿ, ಮತ್ತು ಇನ್ನಿತರ ಗಣ್ಯರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು.

ತೀರ್ಥಹಳ್ಳಿಯಲ್ಲಿ ಅನಾಮಧೇಯ ವ್ಯಕ್ತಿಯ ಶವ ಪತ್ತೆ

0

ತೀರ್ಥಹಳ್ಳಿ ಪಟ್ಟಣದ ಕುಶಾವತಿಯ ಆಂಜನೇಯ ದೇವಸ್ಥಾನದ ಸಮೀಪದಲ್ಲಿ ಅನಾಮಧೇಯ ವ್ಯಕ್ತಿಯೋರ್ವನ ಶವ ಪತ್ತೆಯಾಗಿದೆ.

ಆಂಜನೇಯ ದೇವಸ್ಥಾನದ ಸಮೀಪದ ಶೇಡ್ ಪಕ್ಕ ಮಲಗಿರುವ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ. ವ್ಯಕ್ತಿಯ ಜೇಬಲ್ಲಿ ಇರುವ ಫೋನ್ ನಂಬರ್ ಗಳಿಗೆ ಕರೆ ಹೋಗುತ್ತಿಲ್ಲ ಎಂಬ ಮಾಹಿತಿ ಲಭ್ಯವಾಗಿದ್ದು ಅದರಲ್ಲಿರುವ ಆಧಾರ್ ಕಾರ್ಡ್ ಸಹ ಸಂಪೂರ್ಣ ಹರಿದು ಹೋಗಿದೆ.

ಹಾಗಾಗಿ ಆದರೆ ಅದರಲ್ಲಿ ಹೆಸರು ಸುರೇಶ ಅಂತ ಇದ್ದು ಊರಿನ ಹೆಸರು ಕೊಪ್ಪಳ ಎಂದು ಇದೆ.

ಆತನ ವಯಸ್ಸು ಅಂದಾಜು 40 ವರ್ಷ ಎಂದು ಅಂದಾಜಿಸಲಾಗಿದ್ದು ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Klive Special Article ನಿಮ್ಮೂರಿನ ಇತಿಹಾಸ ನಿಮಗೆಷ್ಟು ಗೊತ್ತು? ಬೆಳಗುತ್ತಿ ಅರಸರು ಭಾಗ 2

0

Klive Special Article ಚೆಲುವರಂಗಪ್ಪನು ದಿಡಗೂರಿನಿಂದ ಬೆಳಗುತ್ತಿಯನ್ನು ಆಳ್ವಿಕೆ ನಡೆಸಿದ, ದಿಡಗೂರು 150ವರ್ಷಗಳ ಕಾಲ‌ರಾಜಧಾನಿಯಾಗಿದ್ದು ಮೊದಲು ಹೊನ್ನಾಳಿ ನಂತರ ಬೆಳಗುತ್ತಿ ಗೆ ಸ್ಥಳಾಂತರವಾಯಿತು. ರಂಗಪ್ಪನು ದಿಡಗೂರಿನಿಂದ ಆಳ್ವಿಕೆ ಮಾಡುವಾಗ ಕ್ರಿ.ಶ.‌1361 ರಲ್ಲಿ ಹೊನ್ನಾಳಿ ಕೋಟಯನ್ನು ಕಟ್ಟಲು ಆರಂಭಿಸಿ ಕ್ರಿ.ಶ.1381 ರಲ್ಲಿ ಮುಗಿಸಿ ನಂತರ ಚಂದ್ರ ಗುತ್ತಿ, ಕವಲೇದುರ್ಗ, ಉಡುಗಣಿ ಯಲ್ಲೂ ಕೋಟೆ ನಿರ್ಮಿಸಿದನು.‌ಇವನು ಹಲವಾರು ಅಗ್ರಹಾರ ನಿರ್ಮಿಸಿ ಜಮೀನಿಗೆ ಕಂದಾಯವನ್ನು ನಿಗದಿಗೊಳಿಸಿ ರಾಯರೇಖೆ ಎಂಬ ಕಂದಾಯವನ್ನು ಜಾರಿಗೆ ತಂದನು. ಇವನು ಕ್ರಿ.ಶ. 1361ರಿಂದ ಕ್ರಿ.ಶ.‌1383 ರವರೆಗೆ ಆಡಳಿತ ನಡೆಸಿದನು. ಇವನ ನಂತರ ಕ್ರಿ.ಶ.‌1383 ರಿಂದ ಕ್ರಿ.ಶ.‌ 1456 ರ ವರೆಗೆ ಮಾರಭೂಪ, ಸುರಭೂಪ, ದೇವರಾಯ, ಅಭ್ರಮಾಧವರು ಬೆಳಗುತ್ತಿ ಯಿಂದ ಆಳುತ್ತಿದ್ದರು, ಅಭ್ರಮಾಧವನ ಮಗನಾದ ಬೆವುಲೆ ವೆಂಕಟಾದ್ರಿಯು (ಕ್ರಿ.ಶ.‌1460ರಿಂದ ಕ್ರಿ.ಶ. 1487 ರ ವರೆಗೆ )ಇಕ್ಕೇರಿಯಲ್ಲಿ ಅಘೋರೇಶ್ವರ ನ ದೇವಾಲಯ ಕಟ್ಟಿಸಿದ್ದನೆಂದು ಹೇಳಲಾಗಿದ್ದು ಇದರ ಬಗ್ಗೆ ತೆಲುಗು ಶಾಸನವೊಂದು ತಿಳಿಸುತ್ತದೆ (ನಂತರ ಇದನ್ನು ಕೆಳದಿಯ ದೊಡ್ಡ ಸಂಕಣ್ಣನಾಯಕರು ಜೀರ್ಣೋದ್ಧಾರ ಮಾಡಿ ಹೊಸ ಮೂರ್ತಿಯನ್ನು ಸ್ಥಾಪಿಸುತ್ತಾರೆ)( ಕೆ.ನೃ.ವಿ) . ವೆಂಕಟಾದ್ರಿ ಯ ತರುವಾಯ ರಾಮರಾಯನು(ಕೋಟೆ), ಕ್ರಿ.ಶ. 1460 ರಿಂದ ಕ್ರಿ.ಶ.‌1515 ರ ವರೆಗೆ ಆಳ್ವಿಕೆ ನಡೆಸಿದ. ‌ಆಗ ಬೆಳಗುತ್ತಿ ಮತ್ತು ಹೊನ್ನಾಳಿ ಯಲ್ಲಿ ಎರಡು ಅರಸು ಮನೆತನಗಳ ಆಡಳಿತ ನಡೆಯುತ್ತಿತ್ತು, ಇದನ್ನು ಒಪ್ಪದ ಆನೆಗೊಂದಿಯ ಪ್ರೌಢದೇವರಾಯನು ಹೊನ್ನಾಳಿ ಯನ್ನು ವಶಪಡಿಸಿಕೊಂಡು ರಾಮರಾಯನೇ(ಕೋಟೆ) ಬೆಳಗುತ್ತಿ ಯ ಅಧಿಕೃತ ಅರಸನೆಂದು ಮನ್ನಣೆಮಾಡಿದನು.

ರಾಮರಾಯ(ಕೋಟೆ) ನ ನಂತರ ಅವನ ಮಗನಾದ ಯಲ್ಲಣ್ಣನು ಕ್ರಿ.ಶ. 1516 ರಿಂದ ಕ್ರಿ.ಶ.‌ 1551 ರ ವರೆಗೆ ಆಳಿದನೆಂದು ಕುದುರೆ ರಾಯರ ವೃತ್ತಾಂತದಲ್ಲಿದೆ. ಕೈಫಿಯತ್ತಿನಲ್ಲಿ ಯಲ್ಲಣ್ಣನ‌ ಹೆಸರನ್ನು ಕೈಬಿಟ್ಟು ದಾಸಪ್ಪ ನೆಂಬುವವನ ಹೆಸರು ಸೇರಿಸಲಾಗಿದೆ.

ಬೆಳಗುತ್ತಿಯ ಇತಿಹಾಸದಲ್ಲೇ ಒಂದು ರೋಚಕ ತಿರುವು ಪಡೆದು ವಿಜಯನಗರದ ಅರಸ ತಿರುಮಲರಾಯನನ್ನು ಬೀಜಾಪುರದವರು ಸೋಲಿಸಿ ವಿಜಯನಗರಕ್ಕೆ ವಾರಸುದಾರ ಇಲ್ಲದಿದ್ದಾಗ ವಿಜಯನಗರದ ಮಂತ್ರಿಗಳು ಬೆಳಗುತ್ತಿ ಗೆ ಬಂದು ವೆಂಕಟರಾಯನನ್ನು (ಯಲ್ಲಣ್ಣ / ದಾಸಪ್ಪನ ಮಗ) ವಿಜಯನಗರದ ಆಡಳಿತಕ್ಕಾಗಿ ಆನೆಗೊಂದಿಯಲ್ಲಿ ವೀರವೆಂಕಟರಾಯನಿಗೆ ಪಟ್ಟಾಭಿಷೇಕ ಮಾಡಿದರು. ಹೀಗೆ ಬೆಳಗುತ್ತಿ ಅರಸ ವಂಶದವರಿಂದ ವಿಜಯನಗರದ ರಾಜವಂಶವು ಮತ್ತೆ ಬೆಳಗಿಸಿದ್ದು ಬೆಳಗುತ್ತಿ. ಇದಕ್ಕೆ ಪೂರಕವೆಂಬಂತೆ ಬೆಳಗುತ್ತಿ ಅರಸನು ತನ್ನ ಕೈಕೆಳಗಿನ ನಾಯಕರಾದ ಹಾಲಪ್ಪನಿಗೆ ಆಯನೂರು, ಗಂಗೂರು, ಅಣ್ಣಿಗೇರಿ(ಆನವೇರಿ)ಯನ್ನೂ, ಬೊಮ್ಮಣ್ಣನಿಗೆ ಕುಂಸಿಯನ್ನೂ, ಕೆಂಗ ಹನುಮಂತ ನಾಯಕನಿಗೆ ಸಂತೆಬೆನ್ನೂರು, ಹೊಸೂರು, ಚಿನ್ನಿಕಟ್ಟೆ ಯನ್ನು ಜಾಗೀರಾಗಿ ನೀಡಿದನು.

Klive Special Article (ಸಾಗರದ ಕೈಫಿಯತ್ತಿನಲ್ಲಿ ದೊಡ್ಡ ಸಂಕಣ್ಣನಾಯಕರು ಪೈಠಣದಿಂದ(ಮಹಾರಾಷ್ಟ್ರ)/ದಿಂದ ವೀರಭದ್ರನ (ಅಘೋರನ) ಪಟ ಬರಸಿಕೊಂಡು ಇಕ್ಕೇರಿಗೆ ಬಂದು ಅಘೋರ, ವೀರಭದ್ರ ಮೂರ್ತಿಯನ್ನು ಮೂವತ್ತೆರಡು ಹಸ್ತ(ಅಂದಿನಕಾಲದ ಅಳತೆಯ ಪ್ರಮಾಣ) ಆಯುಧ ವಿಶಿಷ್ಟ ವಾಗಿ ಶಿಲ್ಪಶಾಸ್ತ್ರ ದ ಮೇರೆಗೆ ಲಿಂಗಪ್ರತಿಷ್ಠೆ ಮಾಡಿದನೆಂದೂ ತಿಳಿದಿದ್ದು, ವೆಂಕಟಾದ್ರಿ ಯು ಕಟ್ಟಿಸಿದ್ದ ದೇವಾಲಯ ಹಾಳುಬಿದ್ದಾಗ ದೊಡ್ಡಸಂಕಣ್ಣನಾಯಕರು ಹೊಸದಾಗಿ ಪ್ರತಿಷ್ಠೆ ಮಾಡಿಸಿ ಹೊಂಬುಜದ ವಕಪ್ಪಯ್ಯನಿಂದ ಮಂಟಪವನ್ನು ನಿರ್ಮಿಸಿದನೆಂದು ಉಲ್ಲೇಖವಾಗಿದೆ).

ಮುಂದುವರೆಯುತ್ತದೆ.

ದಿಲೀಪ್ ನಾಡಿಗ್
ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ (ನೋಂ), ಶಿವಮೊಗ್ಗ.
6361124316.

ಶ್ರೀ ಮೈಲಾರೇಶ್ವರ ದೇಗುಲದಲ್ಲಿ ಸುಬ್ರಹ್ಮಣ್ಯ ಷಷ್ಠಿ ಕಾರ್ತೀಕ ದೀಪೋತ್ಸವ

0

ಶಿವಮೊಗ್ಗ ನಗರದ ಶ್ರೀ ಮೈಲಾರೇಶ್ವರ ಸನ್ನಿಧಿಯಲ್ಲಿ ಸುಬ್ರಹ್ಮಣ್ಯ ಸೃಷ್ಟಿಯ ಪ್ರಯುಕ್ತ ನವೆಂಬರ್ 26, 27ರಂದು ಕಾರ್ತಿಕ ದೀಪೋತ್ಸವ 26ನೇ ಬುಧವಾರ ಬೆಳಿಗ್ಗೆ 9:00 ಗಂಟೆಯಿಂದ ಬಂಡರ ಕುಟ್ಟುವುದು ಹಾಗೂ ಬೀಸುವ ಕಾರ್ಯಕ್ರಮ ಇರುತ್ತದೆ. ಮಡಿಯಿಂದ ಕಾರ್ಯಕ್ರಮಕ್ಕೆ ಭಾಗವಹಿಸಿ 27ರ ಗುರುವಾರ ಸಂಜೆ ಪೂಜಾ ಕಾರ್ಯಕ್ರಮ ಹಾಗೂ ಬಂಡರ ಮತ್ತು ಪ್ರಸಾದ ವಿತರಣೆ ಮಾಡಲಾಗುತ್ತದೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ದೇವರ ಕೃಪೆಗೆ ಪಾತ್ರರಾಗಬೇಕಾಗಿ ವಿನಂತಿ ಶ್ರೀ ಮೈಲಾರೇಶ್ವರ ದೇವಸ್ಥಾನದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಮತ್ತು ಶ್ರೀ ಏಳು ಕೋಟಿ ಗೊರವರು ತಿಳಿಸಿದ್ದಾರೆ.