Breaking News ನವದೆಹಲಿಯಲ್ಲಿ ರಾಜಕೀಯ ಚಟುವಟಿಕೆ ಬಿರುಸಾಗಿ ನಡೆದಿದೆ. ರಾಜ್ಯದ ಕಾಂಗ್ರೆಸ್ ನಾಯಕರು, ಶಾಸಕರು,ಸಚಿವರು , ಸಿದ್ಧರಾಮಯ್ಯ ಬೆಂಬಲಿಗರು,ಡಿ.ಕೆ.ಶಿವಕುಮಾರ್ ಬೆಂಬಲಿಗರು ರಾಷ್ಟ್ರದ ರಾಜಧಾನಿಯಲ್ಲಿ ಬೀಡುಬಿಟ್ಟಿದ್ದಾರೆ.
ಪಕ್ಷದ ಹೈಕಮಾಂಡ್ ನಲ್ಲಿ ಕೇವಲ ರಾಹುಲ್ ಗಾಂಧಿ, ವೇಣುಗೋಪಾಲ್ ಅವರ ಉಪಸ್ಥಿತಿಯ ಸಭೆ ಬಗ್ಗೆ ಉಲ್ಲೇಖಿಸಲಾಗುತ್ತಿದೆ.
ರಾಹುಲ್ ಗಾಂಧಿ ಅವರು ದೆಹಲಿ ರಾಜಕಾರಣಕ್ಕೆ ಪ್ರಮೋಷನ್ ಕೊಡುತ್ತೇವೆ ಬನ್ನಿ ಎಂದು ಸಿದ್ಧರಾಮಯ್ಯನವರಿಗೆಆಫರ್ ನೀಡಿದ್ದಾರಂತೆ.
ಆದರೆ ಇದು ಹಳೇಯ ಸುದ್ದಿ. ಯಾಕೆಂದರೆ ನನಗೆ ರಾಷ್ಡ್ರ ರಾಜಕಾರಣ ಪ್ರವೇಶ ಇಷ್ಟವಿಲ್ಲ ಎಂದು ಸಿದ್ಧರಾಮಯ್ಯ ತಿಳಿಸಿಯಾಗಿದೆ.
ಮಾಧ್ಯಮಗಳಂತೂ ಡಿ.ಕೆ .ಶಿವಕುಮಾರ್ ಸಿಎಂ ಪಟ್ಟ ಅಲಂಕರಿಸುವುದು ಗ್ಯಾರಂಟಿ ಎಮನದು ಸಾರುತ್ತಿವೆ.
ಏತನ್ಮಧ್ಯೆ ಸಿದ್ಧರಾಮಯ್ಯ ಬೆಂಬಲಿಗರು ,ಸಿದ್ಧರಾಮಯ್ಯನವರ ಪರ ರಾಜ್ಯದಾದ್ಯಂತ ಪ್ರತಿಭಟಿಸುವುದಾಗಿ ಹೇಳಿಕೆ ನೀಡಿರುವುದೂ ಹೊಸ ಸಂಚಲನಕ್ಕೆ ಕಾರಣವಾಗಿದೆ.
ಇಷ್ಟಾದರೂ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ತಮ್ಮ ರಾಜೀನಾಮೆಯ ಸುಳಿವನ್ನ ಕಿಂಚಿತ್ತೂ ಬಿಟ್ಟುಕೊಟ್ಟಿಲ್ಲ.
ಆದರೆ ಡಿ.ಕೆ.ಶಿವಕುಮಾರ್ ರಾಜ್ಯ ಕಾಂಗ್ರೆಸ್ ಪಕ್ದಷ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವ ಬಗ್ಗೆ ದಟ್ಟ ,ನಿಖರ ಸುದ್ದಿ ಬರುತ್ತಿದೆ. ಅದಕ್ಕೆ ಪುಷ್ಠಿ ನೀಡುವಂತೆ ಪಕ್ಷದ ಉಸ್ತುವಾರಿ ರಣದೀಪ್ ಸುರ್ಜಿವಾಲ ಬೆಂಗಳೂರಿಗೆ ವಿಮಾನ ಏರಿದ್ದಾರೆ.
ಎಲ್ಲದರ ನಡುವೆ ಸಿದ್ಧರಾಮಯ್ಯನವರ ಭಾರವಾದ ‘ಮೌನ, ‘
ಬದಲಾವಣೆಯ ಬಗ್ಗೆ
ಗ್ಯಾರಂಟಿ ಸುಳಿವು ನೀಡುತ್ತಿದೆ.
Breaking News ದಾಖಲೆ ಅವಧಿಯ ಸಿಎಂ ಪಟ್ಟ ಅನುಭವಿಸಿದ ಸಿದ್ಧರಾಮಯ್ಯನವರ
ದೀರ್ಘ ಆಡಳಿತ ಕೊನೆ ತಲುಪುತ್ತಿರುವಂತಿದೆ.
” ಏನ್ ತೀರ್ಮಾನ ನಾಳೆ ಹೇಳ್ತೀನಿ” ಅಂತ ಪತ್ರಕರ್ತರಿಗೆ ಸಿದ್ಧರಾಮಯ್ಯ ಹೇಳಿದ್ದಾರೆ.
ಮಂತ್ರಿಮಂಡಲದಲ್ಲಿ
ಹುಟ್ಟಿಗೆ ಚಾತಕ ಪಕ್ಷಿಯಂತೆ ಕಾಯುತ್ತಿರುವ ಶಾಸಕರ ಮುಖದಲ್ಲಿ
ಮಿಂಚು ಕಾಣಲಾರಂಭಿಸಿದೆ.
ಸಚಿವ ಪಟ್ಟ ಕಳೆದುಕೊಳ್ಳುವ ಭೀತಿಯೂ ಹಲವು ಹಾಲಿ ಸಚಿವರನ್ನ ಕಾಡುತ್ತಿದೆ.
ಹೊಸ ಸೀಎಂ ,ಸುದ್ದಿಗೆ ಒಂದು ದಿನ ಕಾಯಬೇಕಿದೆ.
