Monday, June 15, 2026
Monday, June 15, 2026

Dr. Dhananjaya Sarji ದಾವಣಗೆರೆ ಉಪಚುನಾವಣೆ ಘಟನೆಗೆ ತೇಪೆ ಹಚ್ಚು ಕೆಲಸ ಈಗ ಕಾಂಗ್ರೆಸ್ ಮಾಡಿದೆ.- ಡಾ.ಧನಂಜಯ ಸರ್ಜಿ

Date:

Dr. Dhananjaya Sarji ಶಿವಮೊಗ್ಗದಲ್ಲಿ ಎಂ ಎಲ್ ಸಿ ಡಾ. ಧನಂಜಯ್ ಸರ್ಜಿ ಅವರು ಶಾಲಾ ಕಾಲೇಜು ವಿದ್ಯಾರ್ಥಿಗಳು ಹಿಜಾಬ್ ಹಾಕಿಕೊಂಡು ಹೋಗುವ ವಿಚಾರದ ಕುರಿತು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದರು.

ಕಾಂಗ್ರೆಸ್ ಮೊದಲಿನಿಂದಲೂ ಒಡೆದಾಳುವ ನೀತಿ ಮಾಡಿಕೊಂಡು ಬಂದಿದೆ. ನೀವೇ ಊಹಿಸಿ ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರಬಹುದು.
ಒಂದು ಶಾಲಾ ಕಾಲೇಜುಗಳಲ್ಲಿ ಓದುವ ಮಕ್ಕಳು ಒಂದೇ ತರ ಯೂನಿಫಮ್ ಹಾಕೊಂಡು ಹೋಗಬೇಕು ಅನ್ನೋದನ್ನ ಹೈ ಕೋರ್ಟ್ ಎತ್ತಿಹಿಡಿದಿದೆ.

ಅದನ್ನು ದಿಕ್ಕರಿಸಿ ಒಂದು ಸಮುದಾಯವನ್ನು ಓಲೈಕೆ ಮಾಡುವುದಕ್ಕೆ ದಾವಣಗೆರೆಯಲ್ಲಿ ನಡೆದ ಘಟನೆಗೆ ತೇಪೆ ಹಚ್ಚುವ ಕೆಲಸ ಮಾಡಿದೆ ಎಂದರು.

ಕಾಂಗ್ರೆಸ್ ಯಾವಾಗಲೂ ಈ ತುಷ್ಟೀಕರಣ ರಾಜಕಾರಣ ಮಾಡಿಕೊಂಡು ಬಂದಿದೆ. ಒಡೆದಾಳುವ ನೀತಿಯಲ್ಲೇ ಕಾಂಗ್ರೆಸ್ ಬೆಳೆದು ಬಂದಿದೆ.
ಎಷ್ಟೋ ಮುಸಲ್ಮಾನ ಹೆಣ್ಣುಮಕ್ಕಳ ಮೇಲೆ ಪರಿಣಾಮ ಬೀರಬಹುದು.
ಎಷ್ಟೋ ಜನ ಹೆಣ್ಣುಮಕ್ಕಳಿಗೆ ಸ್ನೇಹಿತರು ಇರುತ್ತಾರೆ. ಕೆಲವರು ಹಿಜಾಬ್ ಹಾಕುತ್ತಾರೆ ,ಕೆಲವರು ಹಾಕುತ್ತಿಲ್ಲ. ಇದು ಎಷ್ಟು ಡಿಫ್ರೆನ್ಸ್ ಆಗಬಹುದು .ನಾವೇ ಇದನ್ನು ಪ್ರತ್ಯೇಕ ಮಾಡಿದ ಹಾಗೆ ಎಂದರು.

Dr. Dhananjaya Sarji ಕಾಂಗ್ರೆಸ್ ಮುಸಲ್ಮಾನರ ತುಷ್ಟೀಕರಣಕ್ಕೆ ವಿಧ್ಯಾರ್ಥಿಗಳ ಮದ್ಯೆ ದ್ವೇಷ ಬಿತ್ತುತ್ತಿದೆ. ಹಾಗಾದರೆ ಒಬ್ಬರು ಒಬ್ಬರು ಒಂದೊಂದು ಹಿಜಾಬ್ ಕೇಸರಿ ಶಾಲು ಪೇಟಾ ಹೀಗೆ ಹಾಕೊಂಡು ಬರಬಹುದಲ್ಲ… ಕಾಂಗ್ರೆಸ್ ಹೀಗೆ ಮಾಡೋದು ಖಂಡನೀಯ. ಇದನ್ನು ನಾವು ದಿಕ್ಕರಿಸುತ್ತೇವೆ ಮತ್ತು ಹೋರಾಟವನ್ನು ಮಾಡುತ್ತೇವೆ ಎಂದು ಹೇಳಿದರು

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

D.K. Shivakumar ರಾಜ್ಯದ ಎಲ್ಲಾ ಅಧಿಕಾರಿಗಳು “ಟೀಮ್ ಕರ್ನಾಟಕ” ಮನೋಭಾವದಿಂದ ಕಾರ್ಯನಿರ್ವಹಿಸಬೇಕು: ಡಿ.ಕೆ. ಶಿವಕುಮಾರ್

D.K. Shivakumar ರಾಜ್ಯದ ಅಭಿವೃದ್ಧಿ, ಭ್ರಷ್ಟಾಚಾರ ನಿರ್ಮೂಲನೆ, ಶಿಕ್ಷಣ, ಕಾನೂನು...

B.Y. Raghavendra ಕೆರೆ ಬಸವಣ್ಣ ಶೇಡಿನ ಕೆರೆ” ಲೋಕಾರ್ಪಣೆ!

B.Y. Raghavendra ಶ್ರೀ ಡಿ. ಯೇಸು ಪ್ರಕಾಶ್ ಅವರ ಸ್ಮರಣಾರ್ಥ, ಸಾರಾ...

Veerendra Heggade ಕೂಡ್ಲಿಯಲ್ಲಿ ಸಾಮಾಜಿಕಜಾಗೃತಿ ಮೂಡಿಸುವ ಬೀದಿ ನಾಟಕದ ಯಶಸ್ವಿ ಪ್ರದರ್ಶನ

Veerendra Heggade ಶಿವಮೊಗ್ಗ ತಾಲೂಕಿನಲ್ಲಿ ಶ್ರೀ ಕ್ಷೇತ್ರ ಧರ‍್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ...