Gurudutt Hegde ಬಾಲ್ಯಾವಸ್ಥೆಯ ಹಾಗೂ ಕಿಶೋರಾವಸ್ಥೆಯ ಕಾರ್ಮಿಕ (ನಿಷೇಧ ಮತ್ತು ನಿಯಂತ್ರಣ) ಕಾಯ್ದೆ 1986ರ ಕಲಂ ಹಾಗೂ 17ರಡಿ ನೇಮಕಗೊಂಡ ಅಧಿಕಾರಿಗಳಿಗೆ ಈ ಕಾಯ್ದೆಯನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಜಿಲ್ಲಾ ಪಂಚಾಯತ್ನ ನಜೀರ್ ಸಾಬ್ ಸಭಾಂಗಣದಲ್ಲಿ ಡಿ.23 ರಂದು ಬೆಳಿಗ್ಗೆ 10 ಗಂಟೆಗೆ ಕಾರ್ಯಾಗಾರವನ್ನು ಆಯೋಜಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ತಿಳಿಸಿದ್ದಾರೆ.
Bhadravati News ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ: ತಹಶೀಲ್ದಾರ್ ಪ್ರಕಟಣೆ.
BhadravatiNews ಮಾನ್ಯ ಭಾರತ ಚುನಾವಣಾ ಆಯೋಗ, ನವದೆಹಲಿ ಹಾಗೂ ಮಾನ್ಯ ಮುಖ್ಯ ಚುನಾವಣಾಧಿಕಾರಿಗಳು, ಬೆಂಗಳೂರು ರವರ ನಿರ್ದೇಶನದ ಮೇರೆಗೆ ಮುಂಬರುವ ದಿನಗಳಲ್ಲಿ ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ ಕಾರ್ಯ(ಎಸ್ಐಆರ್-ಸ್ಪೆಷಲ್ ಇಂಟೆನ್ಸಿವ್ ರಿವಿಷನ್) ಪ್ರಾರಂಭವಾಗಲಿದ್ದು, ಇದಕ್ಕೆ ಪೂರಕವಾಗಿ 112-ಭದ್ರಾವತಿ ವಿಧಾನ ಸಭಾ ಕ್ಷೇತ್ರದಲ್ಲಿ 2002 ಮತ್ತು 2025ರ ಮತದಾರರ ಪಟ್ಟಿಯ ಮ್ಯಾಪಿಂಗ್ ಮತ್ತು ಪ್ರೋಜಿನಿ (ಸಂತತಿ ಸೇರ್ಪಡೆ-18 ವರ್ಷ ಮೇಲ್ಪಟ್ಟ 40 ವರ್ಷದೊಳಗಿನ ಮತದಾರರು) ಕಾರ್ಯ ನಡೆಯುತ್ತಿದೆ.
BhadravatiNews 2002 ರಲ್ಲಿ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2025 ರ ಮತದಾರರ ಪಟ್ಟಿಯೊಂದಿಗೆ ಗುರುತಿಸಿ ಮ್ಯಾಪಿಂಗ್ ಮತ್ತು ಪ್ರೊಜಿನಿ ಕಾರ್ಯ ನಡೆಸಬೇಕಾಗಿರುತ್ತದೆ. ಆದ್ದರಿಂದ 112-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದಲ್ಲಿರುವ ಮತದಾರರು ತಾವು ಮತದಾನ ಮಾಡುವ ಕೇಂದ್ರದಲ್ಲಿ ಬಿ.ಎಲ್.ಓ ರವರನ್ನು ಭೇಟಿಯಾಗಿ ಪ್ರಸ್ತುತ ತಮ್ಮ ಮತದಾರರ ಗುರುತಿನ ಚೀಟಿಯೊಂದಿಗೆ 2002 ರಲ್ಲಿ ನೀವು ಮತದಾನ ಮಾಡಿದ ಗುರುತಿನ ಚೀಟಿ, ಮತದಾನ ಮಾಡಿದ ಮತಕ್ಷೇತ್ರ, ಮತದಾನ ಕೇಂದ್ರ, ಕ್ರಮ ಸಂಖ್ಯೆಯನ್ನು ಸಂಬAಧಪಟ್ಟ ಬಿ.ಎಲ್.ಓ ರವರಿಗೆ ತಿಳಿಸಿ ಅಥವಾ ಹಾಜರುಪಡಿಸಿ ಮ್ಯಾಪಿಂಗ್ ಮಾಡಿಸಿಕೊಳ್ಳಲು ಈ ಮೂಲಕ 112-ಭದ್ರಾವತಿ ವಿಧಾನ ಸಭಾ ಮತಕ್ಷೇತ್ರದ ಮತದಾರರಲ್ಲಿ ಸಹಾಯಕ ಮತದಾರರ ನೊಂದಣಾಧಿಕಾರಿ 112-ಭದ್ರಾವತಿ ವಿಧಾನ ಸಭಾ ಕ್ಷೇತ್ರ ಹಾಗೂ ತಹಶೀಲ್ದಾರ್, ಭದ್ರಾವತಿ ತಾಲ್ಲೂಕು ಇವರು ಕೋರಿದ್ದಾರೆ.
Doddapete Police Station ವ್ಯಕ್ತಿ ಕಾಣೆಯಾಗಿದ್ದಾರೆ.ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆ
Doddapete Police Station ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 1ನೇ ಕ್ರಾಸ್ ವಾಸಿ, ಸಿಟಿ ಸೆಂಟ್ರಲ್ನಲ್ಲಿ ಕಾಫಿ ಶಾಪ್ ಅಂಗಡಿ ಮಾಲೀಕರಾದ ಐಶ್ವರ್ಯ ಎಂಬುವವರ ಪತಿ ಸಚಿನ್ ಬಿನ್ ನಂಜುAಡಪ್ಪ ಎಂಬುವವರು ಹೊಳೆಹೊನ್ನೂರು ಗ್ರಾಮದಲ್ಲಿ ಫರ್ಟಿಲೈಜರ್ ಅಂಗಡಿ ಇಟ್ಟುಕೊಂಡಿದ್ದು, ಡಿ. 14 ರಂದು ಸಂಜೆ 7.30ಕ್ಕೆ ಹೊರಗಡೆ ಹೋಗಿ ಬರುತ್ತೇನೆಂದು ಹೋದವರು ಈತನಕ ವಾಪಾಸ್ಸಾಗಿರುವುದಿಲ್ಲ. ಈತನ ಚಹರೆ 5.5 ಅಡಿ ಎತ್ತರ, ಕೋಲುಮುಖ, ಗೋಧಿ ಮೈಬಣ್ಣ, ದಪ್ಪ ಗಡ್ಡ ಮೀಸೆ ಬಿಟ್ಟಿರುತ್ತಾರೆ. ಕನ್ನಡ ಭಾಷೆ ಮಾತನಾಡುತ್ತಾರೆ. ಮನೆಯಿಂದ ಹೋಗುವಾಗ ಕೇಸರಿ ಬಣ್ಣದ ಶರ್ಟ್ ಹಾಗೂ ಕಪ್ಪು ಬಣ್ಣದ ನೈಟ್ ಪ್ಯಾಂಟ್ ಧರಿಸಿರುತ್ತಾರೆ.
Doddapete Police Station ಈತನ ಬಗ್ಗೆ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9620348689 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ
S. Rudregowda ಯೋಗ-ಧ್ಯಾನಗಳು ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಒಗ್ಗೂಡಿಸುತ್ತದೆ- ಎಸ್.ರುದ್ರೇಗೌಡ
S. Rudregowda ಕುಟುಂಬದ ಶಾಂತಿ, ನೆಮ್ಮದಿ ಜತೆಯಲ್ಲಿ ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ಯೋಗ ಮತ್ತು ಧ್ಯಾನ ಪ್ರಕ್ರಿಯೆ ಸಹಕಾರಿಯಾಗುತ್ತದೆ ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ರುದ್ರೇಗೌಡ ಹೇಳಿದರು.
ಅಂತರಾಷ್ಟ್ರೀಯ ಯೋಗ ಧ್ಯಾನ ದಿನಾಚರಣೆ ಅಂಗವಾಗಿ ಶಿವಗಂಗಾ ಯೋಗ ಕೇಂದ್ರ ಕೃಷಿ ನಗರ, ಎಲ್ಬಿಎಸ್ ನಗರ, ಅಶ್ವತ್ಥ್ ನಗರಗಳ ಯೋಗಶಾಖೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಹುತೇಕ ರಾಷ್ಟ್ರಗಳ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ಅಶಕ್ತತೆ, ಒತ್ತಡ, ಘರ್ಷಣೆ, ಹಿಂಸೆ, ಅನಿಶ್ಚಿತತೆ ಮತ್ತು ಭಾವನಾತ್ಮಕ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಯೋಗ, ಧ್ಯಾನಗಳ ಆಚರಣೆಯಿಂದ ಪ್ರತಿಯೊಬ್ಬ ವ್ಯಕ್ತಿಯ ದೇಹ, ಮನಸ್ಸು, ಬುದ್ಧಿ ಚಿತ್ತಗಳಲ್ಲಿ ಪ್ರೀತಿ, ಪ್ರೇಮ, ಸ್ನೇಹ, ಸಹಬಾಳ್ವೆ, ನಂಬಿಕೆ ಮತ್ತು ಜೀವನಕ್ಕೆ ಅಗತ್ಯವಿರುವ ಎಲ್ಲ ಮೌಲ್ಯಗಳನ್ನು ಒಗ್ಗೂಡಿಸುತ್ತದೆ ಎಂದು ತಿಳಿಸಿದರು.
ಶಿವಗಂಗಾ ಯೋಗಕೇಂದ್ರವು ಯೋಗಾಚಾರ್ಯ ಡಾ. ಸಿ.ವಿ.ರುದ್ರಾರಾಧ್ಯ ಅವರ ನೇತೃತ್ವದ ತಂಡ ಕಾರ್ಯೋನ್ಮುಖರಾಗಿರುವುದು ಶ್ಲಾಘನೀಯ ಎಂದು ಹೇಳಿದರು.
S. Rudregowda ವಿರಕ್ತ ಮಠದ ಹಾಲಯ್ಯ ಮಾತನಾಡಿ, ಧ್ಯಾನದಿಂದ ನಮ್ಮ ದೇಹದಲ್ಲಿ ಆಗುವ ಸೂಕ್ಷ್ಮ ಬದಲಾವಣೆಗಳನ್ನು ವೈಜ್ಞಾನಿಕವಾಗಿ ವಿವರಿಸಿದರು. ಶಿವಗಂಗಾ ಯೋಗಕೇಂದ್ರದ ಕಾರ್ಯಾಧ್ಯಕ್ಷ ಡಾ. ಸಿ.ವಿ.ರುದ್ರಾರಾಧ್ಯ ಮಾತನಾಡಿ, ನಗರದ ವಿವಿಧೆಡೆಗಳಲ್ಲಿ ಸಾರ್ವಜನಿಕರಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದರು.
ಶಿವಗಂಗಾ ಯೋಗಕೇಂದ್ರದ ಕಾರ್ಯದರ್ಶಿ ಎಚ್.ಎಂ.ಚಂದ್ರಶೇಖರಯ್ಯ ಕಾರ್ಯಕ್ರಮ ನಿರೂಪಿಸಿದರು. ಶಿವಗಂಗಾ ಯೋಗಕೇಂದ್ರದ ಪೋಷಕ ಪರಮೇಶ್, ಜಿ.ಎಸ್.ಓಂಕಾರ್, ನೀಲಕಂಠರಾವ್, ಜಿ.ವಿಜಯಕುಮಾರ್, ವಿಜಯ ಬಾಯರ್, ಅನಿಲ್ಕುಮಾರ್, ಪ್ರೊ. ಸುರೇಶ್, ಕಾಟನ್ ಜಗದೀಶ್, ಕೃಷ್ಣಮೂರ್ತಿ, ನಾಗರತ್ನ ಚಂದ್ರಶೇಖರಯ್ಯ, ಜ್ಯೋತಿ, ರುದ್ರೇಶ್, ರವಿ ಹಾಗೂ ಯೋಗ ಶಿಬಿರಾರ್ಥಿಗಳು ಹಾಜರಿದ್ದರು.
Rotary Club Shimoga Midtown ಪಲ್ಸ್ ಪೊಲಿಯೋ ಚಟುವಟಿಕೆಗೆ ಅಧೀಕೃತ ಚಾಲನೆ
Rotary Club Shimoga Midtown ಇಂದು ಶಿವಮೊಗ್ಗದ ರವೀಂದ್ರ ನಗರದ ರೋಟರಿ ಶಿವಮೊಗ್ಗ ಪೂರ್ವ ಕಚೇರಿಯಲ್ಲಿ ಮಕ್ಕಳಿಗೆ ಪೋಲಿಯೋ ಹನಿ ಹಾಕುವ ಮೂಲಕ ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಲಾಯಿತು.
“ಆರೋಗ್ಯವಂತ ನಾಳೆಗಾಗಿ, ಇಂದೇ ಎರಡು ಹನಿ ಲಸಿಕೆ ಹಾಕಿಸಿ.”
Rotary Club Shimoga Midtown ಪೋಲಿಯೋ ಮುಕ್ತ ಸಮಾಜ ನಿರ್ಮಾಣಕ್ಕಾಗಿ ಪೋಷಕರು ತಮ್ಮ ೫ ವರ್ಷದೊಳಗಿನ ಮಕ್ಕಳಿಗೆ ತಪ್ಪದೇ ಲಸಿಕೆ ಹಾಕಿಸಿ ಸಹಕರಿಸಬೇಕೆಂದು ಈ ಮೂಲಕ ವಿನಂತಿಸಲಾಯಿತು.
ಈ ಸಂದರ್ಭದಲ್ಲಿರೋಟರಿ ವಿಜಯ್ ಕುಮಾರ್, ಧನಂಜಯ್ ಅವರು, ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.
Kasturba Balika Pre-Graduate College ಶ್ರೀಮತಿ ರುಕ್ಸನಾ ಫಿರ್ದೋಸ್ ಖಾನಂ ಅವರಿಗೆ ಪಿ ಹೆಚ್ ಡಿ
Kasturba Balika Pre-Graduate College ನಗರದ ರಾಷ್ಟ್ರೀಯ ಶಿಕ್ಷಣ ಸಮಿತಿಯ ಕಸ್ತೂರಬಾ ಬಾಲಿಕ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿರುವ ರುಕ್ಸನಾ ಫಿರ್ದೋಸ್ ಖಾನಮ್ ರವರಿಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಶ್ರೀ ಡಾ. ಕೆ. ನಾರಾಯಣಸ್ವಾಮಿ ಇವರ ಮಾರ್ಗದರ್ಶನದಲ್ಲಿ “ಕನ್ನಡ – ಉರ್ದು ದ್ವಿಭಾಷಿಕತೆಯ ” ಅಧ್ಯಯನ(ಶಿವಮೊಗ್ಗ ಪರಿಸರವನ್ನು ಅನುಲಕ್ಷಿಸಿ)ಎಂಬ ವಿಷಯದ ಮಹಾ ಪ್ರಬಂದಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾಲಯ ಪಿ. ಹೆಚ್. ಡಿ. ಪದವಿಯನ್ನು ಪ್ರಧಾನ ಮಾಡಿದರು.
ರುಕ್ಸನಾ ಫಿರ್ದೋಸ್ ಖಾನಂ ಅವರು ಮಾಜಿ ಶಿವಮೊಗ್ಗ ಜಿಲ್ಲಾ ವಕ್ಫ್ ಅಧ್ಯಕ್ಷ ಹಬೀಬ್ ಉಲ್ಲಾ ರವರ ಧರ್ಮ ಪತ್ನಿ ಯಾಗಿದ್ದಾರೆ.
women & child welfare Shivamogga ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಾಗಿ ಕಾರ್ಯನಿರ್ವಹಿಸಲು ಅರ್ಜಿ ಆಹ್ವಾನ.
women & child welfare Shivamogga ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ಪೋಕ್ಸೋ ಕಾಯ್ದೆಯಡಿ ಸಂತ್ರಸ್ತ ಮಕ್ಕಳಿಗೆ ಬೆಂಬಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸಲು ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅಭ್ಯರ್ಥಿಗಳು ಮಕ್ಕಳೊಂದಿಗೆ ಕೆಲಸ ಮಾಡುವಲ್ಲಿ ಕನಿಷ್ಠ 3 ವರ್ಷಗಳ ಅನುಭವದೊಂದಿಗೆ ಸಮಾಜ ಕಾರ್ಯ ವಿಷಯದಲ್ಲಿ ಪದವಿಯನ್ನು ಹೊಂದಿರಬೇಕು. ಮಕ್ಕಳ ಆರೈಕೆ ಕ್ಷೇತ್ರದಲ್ಲಿ ಮಕ್ಕಳೊಂದಿಗೆ ಕೆಲಸ ಮಾಡುವ ಅಧಿಕಾರಿಗಳು ಮತ್ತು ಮಕ್ಕಳ ಹಕ್ಕುಗಳ ಕ್ಷೇತ್ರದಲ್ಲಿ ಕೆಲಸ ಮಾಡುವ ಯಾವುದೇ ಸಂಸ್ಥೆಗಳು ಅರ್ಜಿ ಸಲ್ಲಿಸಬಹುದಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕ್ಷೇತ್ರ ಕಾರ್ಯವನ್ನು ಮಾಡಲು ಮತ್ತು ಅಪರಾಧ ನ್ಯಾಯ ವ್ಯವಸ್ಥೆಯ ಮೂಲಕ ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಸಹಾಯ ಮಾಡಲು ತರಬೇತಿ women & child welfare Shivamogga ನೀಡಲಾಗುವುದು. ಪ್ರತಿ ಪ್ರಕರಣಕ್ಕೆ ರೂ. 3000/- ಗಳ ಸಂಭಾವನೆ ನೀಡಲಾಗುವುದು.
ನಿಗದಿತ ನಮೂನೆ ಅರ್ಜಿಯನ್ನು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಸರ್ಕಾರಿ ವೀಕ್ಷಣಾಲಯ ಕಟ್ಟಡ, 100 ಅಡಿ ರಸ್ತೆ, ಆಲ್ಕೋಳ, ಶಿವಮೊಗ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಪ್ರಮಾಣ ಪತ್ರಗಳೊಂದಿಗೆ ಸಲ್ಲಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Yakshagana prasanga ಎಲ್ಲರ ಗಮನ ಸೆಳೆದ ಮಕ್ಕಳ ಯಕ್ಷಗಾನ ಪ್ರಸಂಗ” ದ್ರುಪದ ಗರ್ವಭಂಗ”
Yakshagana prasanga ನಮ್ಮ ಭಾರತ ಸನಾತನ ಸಂಸ್ಕೃತಿಯ ನೆಲೆವೀಡು. ಭಗವಂತ ತನ್ನಲ್ಲಿನ ನೂರಾರು ವಿಚಾರ- ಕಲೆ -ವಿಜ್ಞಾನ ಇತ್ಯಾದಿಗಳ ಪ್ರಕಟೀಕರಣಕ್ಕೆ ಭಾರತವನ್ನೇ ಆರಿಸಿಕೊಂಡಿದ್ದಾನೆ ಎಂಬುದು ನಿರ್ವಿವಾದ. ಭಗವಂತ ಕೊಟ್ಟ ಇಂತಹ ಅತ್ಯುಚ್ಚ ವರಗಳನ್ನು – ಸಂಗೀತ ,ಯಕ್ಷಗಾನ ,ಭರತನಾಟ್ಯ ಹಾಗೂ ನೃತ್ಯದ ವಿವಿಧ ಪ್ರಕಾರಗಳು, ಶಿಲ್ಪಕಲೆ, ವರ್ಣ ಚಿತ್ರಕಲೆ- ಇತ್ಯಾದಿಗಳನ್ನು ಯಥಾವತ್ತಾಗಿ ಹಾಗೂ ಹೆಚ್ಚು ಬೆಳೆಸುತ್ತಾ ಉಳಿಸಿಕೊಂಡು ಹೋಗುವುದು ನಮ್ಮದೇ ಜವಾಬ್ದಾರಿ. ಮಹರ್ಷಿ ವಾಲ್ಮೀಕಿ ಅವರ ಪ್ರಕಾರ ಒಂದು ರಾಷ್ಟ್ರ ರಾಮರಾಜ್ಯವಾಗಬೇಕಾದರೆ ರಾಜ- ಪ್ರಜೆ ಇಬ್ಬರದೂ ಸಮಾನ ಜವಾಬ್ದಾರಿ. ಇಲ್ಲಿ ನಾವು ರಾಜನನ್ನು ಒಳಗೊಳ್ಳದೆ ಪ್ರಜೆಗಳಿಂದಲೇ ಸಂಸ್ಕೃತಿಗಳನ್ನು ಉಳಿಸುವ ವಿಚಾರವನ್ನು ಅಷ್ಟೇ ಮಾತನಾಡುತ್ತಿದ್ದೇವೆ.
ಮಾನನೀಯ ಅಜಿತ ಕುಮಾರರ ಸ್ಮರಣಾರ್ಥವಾಗಿ ಈ ಯಕ್ಷಗಾನ ಕಾರ್ಯಕ್ರಮ ಆಯೋಜಿಸಲ್ಪಟ್ಟಿತು. ಮಾನ್ಯರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಆಜೀವ ಪ್ರಚಾರಕರು. ಇವರು ಬಿಇ ಎಲೆಕ್ಟ್ರಿಕಲ್ ಮತ್ತು ಬಿಇ ಮೆಕ್ಯಾನಿಕಲ್ ಪದವಿಗಳಲ್ಲಿ ಸ್ವರ್ಣ ಪದಕ ವಿಜೇತರು. ನಂತರ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿ ದೇಶಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟವರು. ಶಾರೀರಿಕ ಶಿಕ್ಷಣದಲ್ಲಿ ಇವರೊಬ್ಬ ಧೀಮಂತ ಎನ್ನಬಹುದು. ಯೋಗ ನಿಯುದ್ಧಗಳು ಸಂಘ ಶಿಕ್ಷಣದಲ್ಲಿ ಸಮಾವೇಶಗೊಂಡಿದ್ದು ಇವರ ಪ್ರಯತ್ನದಿಂದಲೇ. ಬೆಂಗಳೂರಿನಲ್ಲಿರುವ ಶಾರೀರಿಕ ಶಿಕ್ಷಾ ಕೇಂದ್ರ ಇವರ ಕಲ್ಪನೆಯ ಕೂಸು. ಈಗ ಇದು ರಾಷ್ಟ್ರೋತ್ಥಾನ ಯೋಗ ಮತ್ತು ರಿಸರ್ಚ್ ಸೆಂಟರ್ ಎಂಬ ಹೆಸರಿನಲ್ಲಿ ಕಾರ್ಯನಿರ್ವಹಿಸುತ್ತಿದೆ.
ಅತ್ಯಂತ ಕಠಿಣ ಶಿಸ್ತು ಬದ್ಧ ವ್ಯಕ್ತಿತ್ವ ಇವರದು. ತಾವು ಪಾಲಿಸುವುದಲ್ಲದೆ ತನ್ನೊಡನಿರುವ ಎಲ್ಲರೂ ಇದನ್ನು ಪಾಲಿಸುವುದರ ಬಗೆಗೆ ಆಸಕ್ತರಾಗಿದ್ದರು. ಆದರೆ ಅಷ್ಟೇ ವಾತ್ಸಲ್ಯ ಪ್ರೀತಿ ತುಂಬಿದ ಬಾಹುಬಲಿಯಂತಹ ತೇಜಸ್ವಿ ವ್ಯಕ್ತಿತ್ವದವರು ಇವರು. ಒಮ್ಮೆ ಇವರೊಡನೆ ವ್ಯವಹರಿಸಿದವರು ಅವರನ್ನು ಅಭಿಮಾನಿಸದಿರಲು, ಗೌರವಿಸದಿರಲು ಕಾರಣವೇ ಇಲ್ಲ ಎನ್ನುವಂತಹ ತೇಜಸ್ಸು ಇವರದು. ಇದು ಅವರನ್ನು ಬಲ್ಲ ಬಹು ಮಂದಿಯ ಅಭಿಪ್ರಾಯ.
Yakshagana prasanga ದೇಶ ಸೇವೆಯ ಬಗೆಗೆ ಆಸಕ್ತಿಯುಳ್ಳ, ಒಂದಿಷ್ಟು ವರ್ಷಗಳನ್ನಾದರೂ ದೇಶಕ್ಕಾಗಿ ಮುಡುಪಾಗಿಡುವ ಆಸಕ್ತಿಯುಳ್ಳ ತರುಣ ತರುಣಿಯರಿಗಾಗಿ ಹಿಂದೂ ಸೇವಾ ಪ್ರತಿಷ್ಠಾನ ಎಂಬ ಪ್ರಕಲ್ಪ ಒಂದನ್ನು ಪ್ರಾರಂಭಿಸಿದವರಲ್ಲಿ ಇವರೂ ಒಬ್ಬರು. ಪೇಜಾವರ ಮಠದ ಶ್ರೀ ವಿಶ್ವೇಶ್ವರ ತೀರ್ಥರವರ ಬಳಿ, ಸಂಘದ ಹಿರಿಯರ ಬಳಿ ನಿರಂತರ ಚರ್ಚೆ ವಿಚಾರ ವಿನಿಮಯದ ನಂತರ ಪ್ರಾರಂಭವಾದ ಪ್ರಕಲ್ಪ ಇದು. ಈಗ ಇದರ ಅಡಿಯಲ್ಲಿ ಅನೇಕ ಚಟುವಟಿಕೆಗಳು ನಡೆಯುತ್ತಿವೆ ನೆಲೆ ಈ ಚಟುವಟಿಕೆಗಳಲ್ಲಿ ಒಂದು.
ಮೊದಲು ಚಿಂದಿ ಆಯುವ ಅನಾಥ ಗಂಡು, ಹೆಣ್ಣು ಮಕ್ಕಳ ಸಂಸ್ಕಾರ, ಆಹಾರ, ವಿದ್ಯಾಭ್ಯಾಸಗಳ ದೃಷ್ಟಿಯಿಂದ ಪ್ರಾರಂಭಗೊAಡ ಈ ನೆಲೆ ಪರಿಕಲ್ಪನೆ ಇಂದು ಆರ್ಥಿಕವಾಗಿ ಸಬಲರಲ್ಲದ , ಪೂರ್ಣ ಸಂಸ್ಕಾರಗಳನ್ನು ನೀಡಲು ಅಸಾಧ್ಯವಾದ ಕುಟುಂಬಗಳ ಮಕ್ಕಳು ಮತ್ತು ಏಕ ಪೋಷಕರಿರುವ ಮಕ್ಕಳು ಇತ್ಯಾದಿ, ಅವಶ್ಯಕತೆ ಇರುವ ಮಕ್ಕಳಿಗಾಗಿ ಕಾರ್ಯನಿರ್ವಹಿಸುತ್ತಿದೆ. ಇಂದು ಇದು ನೆಲೆ ಫೌಂಡೇಶನ್ ಎಂಬ ಒಂದು ಪ್ರಕಲ್ಪದಡಿ ಕಾರ್ಯನಿರತವಾಗಿದೆ. ಶಿವಮೊಗ್ಗದ ಮಾಧವನೆಲೆ ಇಂದು ಹೆಣ್ಣು ಮಕ್ಕಳ ಆಧಾರ ಸಂಸ್ಥೆಯಾಗಿದೆ. ಸುಮಾರು ೨೯ ಹೆಣ್ಣು ಮಕ್ಕಳು, ೬ನೇ ತರಗತಿಯಿಂದ ಪದವಿ ವಿದ್ಯಾಭ್ಯಾಸದವರೆಗೆ ಇಲ್ಲಿ ಆಶ್ರಯ ಪಡೆದು ಶಿಕ್ಷಣ ಮುಂದುವರೆಸುತ್ತಿದ್ದಾರೆ. ಸಂಸ್ಕಾರ, ವಿದ್ಯಾಭ್ಯಾಸ ಒಟ್ಟಿಗೆ ಇಲ್ಲಿ ಅವರಿಗೆ ದೊರೆಯುತ್ತಿದೆ.
ಸ್ವರ್ಗೀಯ ಅಜಿತ ಕುಮಾರರ ಪುಣ್ಯತಿಥಿ ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವಾ ದಿನದ ನಿಮಿತ್ತವಾಗಿ ಡಿಸೆಂಬರ್ ೧೩ ಶನಿವಾರದಂದು ದ್ರುಪದ ಗರ್ವಭಂಗ ಎಂಬ ಯಕ್ಷಗಾನ ಪ್ರದರ್ಶನ ನಡೆಯಿತು. ಇದು ನಾವು ಮೊದಲೇ ಹೇಳಿದ ಸಂಸ್ಕೃತಿಯ ಕಲೆಯ ಉಳಿವಿನ ವಿಚಾರದಲ್ಲಿ ಒಂದು ಭಾಗ.
ಮಾಧವ ನೆಲೆ ಮಕ್ಕಳಿಂದ ಪ್ರದರ್ಶಿಸಲಾದ ದ್ರುಪದ ಗರ್ವಭಂಗ ಯಕ್ಷಗಾನ ಪ್ರಸಂಗವು ಕೇವಲ ಒಂದು ಕಲಾ ಕಾರ್ಯಕ್ರಮವಾಗಿರದೆ, ಪೌರಾಣಿಕ ಮೌಲ್ಯಗಳು, ಮಾನವೀಯ ಭಾವನೆಗಳು ಮತ್ತು ಸಂಸ್ಕೃತಿಯ ಸೊಗಡನ್ನು ಒಂದೇ ವೇದಿಕೆಯಲ್ಲಿ ಜೀವಂತಗೊಳಿಸಿದ ಅಪರೂಪದ ಅನುಭವವಾಗಿತ್ತು. ಇನ್ನೂ ಕಲಿಕೆಯ ಹಂತದಲ್ಲಿರುವ ಪುಟ್ಟ ಮಕ್ಕಳಿಂದ ಇಂತಹ ಗಂಭೀರ ಪ್ರಸಂಗವನ್ನು ಈ ಮಟ್ಟದಲ್ಲಿ ರೂಪಿಸುವುದು ಸ್ವತಃ ಒಂದು ಸಾಧನೆಯೇ ಸರಿ.
ಪ್ರಸಂಗದ ಆರಂಭದಲ್ಲೇ ಭೀಷ್ಮರ ಸಮ್ಮುಖದಲ್ಲಿ ನಡೆಯುವ ದುರ್ಯೋಧನ ಮತ್ತು ಅರ್ಜುನರ ನಡುವಿನ ಜಗಳ ಪ್ರೇಕ್ಷಕರ ಗಮನ ಸೆಳೆಯಿತು. ಅಹಂಕಾರ, ಅಸೂಯೆ ಮತ್ತು ಶೌರ್ಯದ ಮಿಶ್ರ ಭಾವನೆಗಳು ಅವರ ಸಂಭಾಷಣೆಯಲ್ಲಿ ಸ್ಪಷ್ಟವಾಗಿ ಕಾಣಿಸಿಕೊಂಡವು. ಪರಸ್ಪರ ಒಬ್ಬರ ಬಗ್ಗೆ ಒಬ್ಬರು ಚಾಡಿ ಹೇಳಿಕೊಳ್ಳುವ ದೃಶ್ಯಗಳು ತಿಳಿ ಹಾಸ್ಯದ ಸ್ಪರ್ಶ ನೀಡಿದವು. ಭೀಷ್ಮರ ಗಾಂಭೀರ್ಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಮಕ್ಕಳ ನೈಜ ಅಭಿನಯದಿಂದ ಈ ಹಾಸ್ಯ ಇನ್ನಷ್ಟು ಮನಮೋಹಕವಾಗಿ ಮೂಡಿಬಂದಿತು. ಪ್ರೇಕ್ಷಕರು ನಗುತ್ತಲೇ ಕಥೆಯ ಗಂಭೀರತೆಗೆ ಪ್ರವೇಶಿಸಿದರು.
ಭೀಮನಿಗೆ ವಿಷದ ಲಡ್ಡು ತಿನಿಸುವ ಪ್ರಸಂಗ ಅತ್ಯಂತ ಭಾವನಾತ್ಮಕವಾಗಿತ್ತು. ಕುತಂತ್ರದ ಸಂಕೇತವಾಗಿ ಆ ದೃಶ್ಯ ಮಕ್ಕಳ ಮುಖಭಾವ, ದೇಹಚಲನೆ ಮತ್ತು ಸಂಭಾಷಣೆಯಲ್ಲಿ ಸ್ಪಷ್ಟವಾಗಿ ವ್ಯಕ್ತವಾಯಿತು. ಭೀಮನ ಸರಳತೆ, ಸಹೋದರರ ಮೇಲಿನ ನಂಬಿಕೆ ಮತ್ತು ಅದಕ್ಕೆ ಎದುರಾಗುವ ದ್ರೋಹ, ಜೊತೆಯಲ್ಲಿಯೇ ತಿಳಿಯಾದ ಹಾಸ್ಯ– ಈ ಎಲ್ಲ ಅಂಶಗಳು ಪ್ರೇಕ್ಷಕರ ಮನಸ್ಸನ್ನು ಗೆದ್ದಿತು. ಪುಟ್ಟ ಮಕ್ಕಳು ಈಷ್ಟು ಗಾಢವಾದ ಭಾವನೆಗಳನ್ನು ವೇದಿಕೆಯಲ್ಲಿ ತೋರಿಸಿದುದು ನಿಜಕ್ಕೂ ಅಚ್ಚರಿಯ ವಿಷಯವಾಗಿತ್ತು.
ಗುರುಗಳ ಎದುರು ಅರ್ಜುನ ಮರದ ಮೇಲೆ ಕೃತಕ ಪಕ್ಷಿಯ ಕುತ್ತಿಗೆಗೆ ಬಾಣ ಬಿಡುವ ಪ್ರಸಂಗದಲ್ಲಿ ಏಕಾಗ್ರತೆ, ಶಿಸ್ತು ಮತ್ತು ಗುರಿ ಸಾಧನೆಯ ಮಹತ್ವ ಸುಂದರವಾಗಿ ಮೂಡಿಬಂದಿತು. “ಗುರಿಯೊಂದೇ ಕಣ್ಣಿಗೆ ಕಾಣಬೇಕು” ಎಂಬ ಸಂದೇಶವನ್ನು ಮಕ್ಕಳು ತಮ್ಮ ಅಭಿನಯದ ಮೂಲಕ ಜೀವಂತವಾಗಿ ತೋರಿಸಿದರು. ಈ ದೃಶ್ಯವು ಮಕ್ಕಳ ಮನಸ್ಸಿನಲ್ಲೂ, ಪ್ರೇಕ್ಷಕರ ಮನಸ್ಸಿನಲ್ಲೂ ಶಿಸ್ತು ಮತ್ತು ಸಂಕಲ್ಪದ ಮೌಲ್ಯವನ್ನು ಗಾಢವಾಗಿ ಬಿತ್ತಿತು.
ಏಕಲವ್ಯನ ಪ್ರಸಂಗವು ಕಾರ್ಯಕ್ರಮದ ಅತ್ಯಂತ ಸ್ಪರ್ಶಕ ಕ್ಷಣಗಳಲ್ಲಿ ಒಂದಾಗಿತ್ತು. ಗುರುಭಕ್ತಿಯ ಮಹತ್ವ, ತ್ಯಾಗದ ನೋವು ಮತ್ತು ಮೌನದೊಳಗಿನ ಘನತೆ – ಈ ಎಲ್ಲವೂ ಪುಟ್ಟ ಕಲಾವಿದೆ ಅಭಿನಯದಲ್ಲಿ ಹೃದಯಸ್ಪರ್ಶಿಯಾಗಿ ವ್ಯಕ್ತವಾಯಿತು. ಆ ಕ್ಷಣಗಳಲ್ಲಿ ವೇದಿಕೆಯಲ್ಲಿ ನಿಶ್ಶಬ್ದ ಆವರಿಸಿತು; ಪ್ರೇಕ್ಷಕರ ಕಣ್ಣುಗಳಲ್ಲಿ ಸಹ ಭಾವನೆಯ ನೆರಳು ಕಾಣಿಸಿಕೊಂಡಿತು.
ಪ್ರಸAಗದ ಶಿಖರವಾಗಿ ದ್ರುಪದನ ಗರ್ವ ಮುರಿಯುವ ದೃಶ್ಯ ಮೂಡಿಬಂತು. ಅಧಿಕಾರ, ಅಹಂಕಾರ ಮತ್ತು ಸ್ವಯಂಪ್ರಶAಸೆಯ ಅಂತ್ಯ ಹೇಗೆ ಆಗುತ್ತದೆ ಎಂಬುದನ್ನು ಈ ಪ್ರಸಂಗ ಸ್ಪಷ್ಟವಾಗಿ ಸಾರಿತು. ಧರ್ಮದ ಎದುರು ಗರ್ವ ಶಾಶ್ವತವಾಗಿರಲಾರದು ಎಂಬ ಸಂದೇಶವನ್ನು ಮಕ್ಕಳು ತಮ್ಮ ಪಾತ್ರನಿಷ್ಠ ಅಭಿನಯದ ಮೂಲಕ ಮನಮುಟ್ಟುವಂತೆ ತಲುಪಿಸಿದರು.
ಇನ್ನೂ ಕಲಿಯುತ್ತಿರುವ ಹಂತದಲ್ಲಿರುವ ಮಕ್ಕಳು ಆದರೂ, ಅವರ ಆತ್ಮವಿಶ್ವಾಸ, ವೇಷಭೂಷಣದ ಶಿಸ್ತು, ಹಾವಭಾವಗಳ ನಿಖರತೆ ಮತ್ತು ಯಕ್ಷಗಾನದ ಪರಂಪರಾತ್ಮಕ ಶೈಲಿಗೆ ತೋರಿದ ಗೌರವ ಎಲ್ಲರಿಗೂ ಮೆಚ್ಚುಗೆ ತಂದಿತು. ಕೆಲವೆಡೆ ಅಜಾಗರೂಕತೆ ಇದ್ದರೂ, ಅದರಲ್ಲಿ ಸಹ ಮಕ್ಕಳ ನಿಸ್ವಾರ್ಥ ಪ್ರಯತ್ನ ಮತ್ತು ಕಲಿಯುವ ಹಂಬಲವೇ ಹೆಚ್ಚು ಹೊಳೆಯಿತು.
ಈ ಸಮಗ್ರ ಪ್ರದರ್ಶನದ ಸಿಂಹಪಾಲು ಐನಬ್ಯೆಲು ಪರಮೇಶ್ವರ್ ಹೆಗಡೆ ಅವರಿಗೆ ಸಲ್ಲಬೇಕು. ಮಕ್ಕಳೊಳಗಿನ ಪ್ರತಿಭೆಯನ್ನು ಗುರುತಿಸಿ, ಯಕ್ಷಗಾನದ ಸೂಕ್ಷ್ಮತೆಗಳನ್ನು ಸಹನಶೀಲತೆಯಿಂದ ಕಲಿಸಿ, ಪ್ರತಿಯೊಂದು ಪಾತ್ರಕ್ಕೂ ಜೀವ ತುಂಬಿದ ಅವರ ಮಾರ್ಗದರ್ಶನ ಶ್ಲಾಘನೀಯ. ಕಲೆ ಮೇಲೆ ಅವರಿಗಿರುವ ನಿಷ್ಠೆ ಮತ್ತು ಮಕ್ಕಳ ಮೇಲಿನ ವಿಶ್ವಾಸವೇ ಈ ಯಶಸ್ವಿ ಪ್ರದರ್ಶನದ ಮೂಲವಾಗಿದೆ.
ಒಟ್ಟಾರೆ, ಮಾಧವ ನೆಲೆ ಮಕ್ಕಳಿಂದ ನಡೆದ ದ್ರುಪದ ಗರ್ವಭಂಗ ಯಕ್ಷಗಾನ ಪ್ರದರ್ಶನವು ಮನರಂಜನೆ, ಭಾವನೆ ಮತ್ತು ಮೌಲ್ಯಬೋಧನೆಗಳ ಸಮನ್ವಯದೊಂದಿಗೆ ಮೂಡಿಬಂದ ಒಂದು ಸ್ಮರಣೀಯ ಸಾಂಸ್ಕೃತಿಕ ಕಾರ್ಯಕ್ರಮವಾಗಿತ್ತು. ಇದು ಮಕ್ಕಳಲ್ಲಿ ಕಲೆಯ ಮೇಲಿನ ಪ್ರೀತಿ ಬೆಳೆಸುವುದರ ಜೊತೆಗೆ, ಪ್ರೇಕ್ಷಕರ ಮನಸ್ಸಿನಲ್ಲಿ ಸಂಸ್ಕೃತಿ ಮತ್ತು ಧರ್ಮದ ಮಹತ್ವವನ್ನು ಗಾಢವಾಗಿ ನೆನಪಿಸಿತು. ಕಾರ್ಯಕ್ರಮವನ್ನು ಸಭಿಕರು ಮುಖ್ಯವಾಗಿ ಆಸ್ವಾದಿಸಿದ್ದು ಗೋಚರಿಸಿತು.
ಯಕ್ಷಗಾನದ ಗಂಧವೇ ಇಲ್ಲದ, ಹೊಸದಾಗಿ ಕಲಿಯುತ್ತಿರುವ ಮಕ್ಕಳಿಂದ ಪ್ರದರ್ಶನಗೊಂಡ ಈ ಯಕ್ಷಗಾನ ಪ್ರಸಂಗ, ನಮ್ಮ ಸಂಸ್ಕೃತಿಯನ್ನು ನಾವು ಉಳಿಸಬಲ್ಲೆವು ಎಂಬ ಆತ್ಮವಿಶ್ವಾಸವನ್ನು ಸಮಾಜದಲ್ಲಿ ಖಂಡಿತವಾಗಿ ಜಾಗೃತಗೊಳಿಸುತ್ತಿದೆ.
ನಾಗರತ್ನ ಪ್ರಸನ್ನ
Rudranna Harthikote ಆತಂಕ ಬೇಡ. ಸಕಾಲದಲ್ಲಿ ಮಾಹಿತಿ ಒದಗಿಸಿ- ರುದ್ರಣ್ಣ ಹರ್ತಿಕೋಟೆ.
Rudranna Harthikote ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿದಾರರು ಮಾಹಿತಿ ಕೋರಿ ತಮ್ಮ ಕಚೇರಿಗಳಿಗೆ ಸಲ್ಲಿಸುವ ಅರ್ಜಿಗಳನ್ನು ನಿಗಧಿಪಡಿಸಿದ ಕಾಲಮಿತಿಯೊಳಗಾಗಿ ನಿಯಮಾನುಸಾರ ಸಕಾಲದಲ್ಲಿ ವಿಲೇವಾರಿ ಮಾಡುವಂತೆ ಮಾಹಿತಿ ಆಯೋಗದ ಆಯುಕ್ತ ರುದ್ರಣ್ಣ ಹರ್ತಿಕೋಟೆ ಅವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ನಿಯೋಜಿತ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಸೂಚಿಸಿದರು.
ಅವರು ಇಂದು ಜಿಲ್ಲಾ ಪಂಚಾಯಿತಿಯ ಅಬ್ದುಲ್ ನಜೀರ್ಸಾಬ್ ಸಭಾಂಗಣದಲ್ಲಿ ಕರ್ನಾಟಕ ಮಾಹಿತಿ ಆಯೋಗವು ಜಿಲ್ಲೆಯ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಿವಿಧ ಇಲಾಖೆಗಳ ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಗೆ ಮಾಹಿತಿ ಹಕ್ಕು ಕಾಯ್ದೆಯ ಕುರಿತು ಏರ್ಪಡಿಸಲಾಗಿದ್ದ ಕಾರ್ಯಾಗಾರ ಜಾಗೃತಿ ಕಾರ್ಯಕ್ರಮ ಮತ್ತು ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು.
ವಿವಿಧ ಇಲಾಖೆಗಳ ಜವಾಬ್ದಾರಿಯುತ ಅಧಿಕಾರಿಗಳು ತಮ್ಮ ಕಚೇರಿಯ ಅಧಿಕಾರಿ ಸಿಬ್ಬಂಧಿಗಳ ವಿವರಗಳನ್ನು 4-1ಎ ಮತ್ತು 4-1ಬಿ ನಮೂನೆಗಳನ್ನು ಭರ್ತಿ ಮಾಡಿ ಪ್ರತಿ ವರ್ಷ ಇಲಾಖೆಯ ಜಾಲತಾಣದಲ್ಲಿ ಉನ್ನತೀಕರಿಸಿ ಸಾರ್ವಜನಿಕ ಮಾಹಿತಿಗೆ ಲಭ್ಯವಿರುವಂತೆ ಗಮನಿಸಬೇಕು. ಇದರಿಂದಾಗಿ ಇಲಾಖೆಗೆ ಮಾಹಿತಿ ಕೋರಿ ಬರುವ ಅರ್ಜಿಗಳು ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಲಿವೆ ಎಂದ ಅವರು ಅರ್ಜಿದಾರರು ಅರ್ಜಿ ಸಲ್ಲಿಸಿದ 30 ದಿನಗಳೊಳಗಾಗಿ ತಮ್ಮ ಕಚೇರಿಯಲ್ಲಿ ಲಭ್ಯವಿರುವ ಮಾಹಿತಿಯನ್ನು ಒದಗಿಸಬೇಕೆಂದವರು ಸೂಚಿಸಿದರು.
Rudranna Harthikote ಮಾಹಿತಿ ಹಕ್ಕು ಅಧಿನಿಯಮದ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿರುವಂತೆಯೇ ಇಲಾಖೆಗಳಿಗೆ ಸಲ್ಲಿಕೆಯಾಗುವ ಅರ್ಜಿಗಳಿಗೆ ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳಿಗೆ ಆತಂಕವೂ ಇಲ್ಲದಿಲ್ಲ. ಕಚೇರಿಯಲ್ಲಿ ಇರುವ ಮಾಹಿತಿಯನ್ನು ಅರ್ಜಿದಾರರಿಗೆ ಯಾವುದೇ ಆತಂಕವಿಲ್ಲದೇ ನೀಡಬೇಕು ತಪ್ಪಿದಲ್ಲಿ ಮೇಲ್ಮನವಿ ಪ್ರಾಧಿಕಾರಗಳಲ್ಲಿ ದಂಡನೆಗೆ ಗುರಿಯಾಗುವ ಸಂಭವವಿದೆ ಎಂದವರು ಎಚ್ಚರಿಸಿದರು.
ಮಾಹಿತಿ ಹಕ್ಕು ಅಧಿನಿಯಮದ ವ್ಯವಸ್ಥಿತ ಅನುಷ್ಠಾನದಿಂದ ಆಡಳಿತದಲ್ಲಿ ಪಾರದರ್ಶಕತೆ, ಮುಕ್ತತೆ. ತ್ವರಿತ ಸೇವೆ ಹಾಗೂ ನೌಕರರಲ್ಲಿ ಹೊಣೆಗಾರಿಕೆ ಹೆಚ್ಚಲಿದೆ ಎಂದ ಅವರು, ಕಾಯ್ದೆಯನ್ನು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸುವುದು ಸಾರ್ವಜನಿಕ ಪ್ರಾಧಿಕಾರಗಳ ಜವಾಬ್ದಾರಿಯಾಗಿದೆ ಎಂದವರು ನುಡಿದರು.
ವೈಯಕ್ತಿಕ ದ್ವೇಷ ಕ್ಷುಲ್ಲಕ ಕಾರಣಕ್ಕೆ ಮಾಹಿತಿಹಕ್ಕು ಅಧಿನಿಯಮವನ್ನು ಬಳಸಿಕೊಳ್ಳಬಾರದು ಅಗತ್ಯತೆಗಳಿಗಾಗಿ ನಿಯಮಾನುಸಾರ ಅರ್ಜಿಯನ್ನು ಸಲ್ಲಿಸಿ ಮಾಹಿತಿ ಪಡೆದುಕೊಳ್ಳುವ ಮೂಲಕ ಸಾರ್ವಜನಿಕರು ಅಧಿನಿಯಮದ ಲಾಭ ಪಡೆದುಕೊಳ್ಳುವಂತೆ ಸೂಚಿಸಿದ ಅವರು, ಕಾಯ್ದೆಯ ದುರ್ಬಳಕೆ, ಅಧಿಕಾರಿಗಳ ವಿರುದ್ಧದ ಕ್ರಮಗಳಿಗಾಗಿ ಕಾಯ್ದೆಯನ್ನು ಬಳಸಿಕೊಳ್ಳುವಂತಾಗಬಾರದು ಎಂದರು.
150ಪದಗಳಿಗಿಂತ ಹೆಚ್ಚಿನ ವಿವರಣೆ ಹೊಂದಿರುವ ಅರ್ಜಿಗಳನ್ನು, ಪ್ರಶನೋತ್ತರ ರೂಪದ ಮಾಹಿತಿ ಕೋರಿರುವ ಅರ್ಜಿಗಳನ್ನು, ಅನೇಕ ಪ್ರಶ್ನೆಗಳಿರುವ ಅರ್ಜಿಗಳನ್ನು ಹಿಂಬರಹ ನೀಡಿ, ಹಿಂದಿರುಗಿಸುವಂತೆಯೂ ಅವರು ಅಧಿಕಾರಿಗಳಿಗೆ ಸಲಹೆ ನೀಡಿದರು
ತಾವು ಅಧಿಕಾರ ವಹಿಸಿಕೊಂಡ ಅತ್ಯಲ್ಪ ಅವಧಿಯಲ್ಲಿ ಆಯೋಗದಲ್ಲಿ ಬಾಕಿ ಉಳಿದಿದ್ದ 55000ಅರ್ಜಿಗಳ ವಿಲೇವಾರಿಗೆ ವೇಗ ದೊರೆತಿದೆ. ಈವರೆಗೆ ಅಂದಾಜು 25000ಅರ್ಜಿಗಳನ್ನು ವಿಲೇಗೊಳಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ವಿಲೇಯಾಗದೆ ಉಳಿದಿರುವ ಅರ್ಜಿಗಳನ್ನು ಸಕಾಲದಲ್ಲಿ ವಿಲೇ ಮಾಡಲು ಹಾಗೂ ಅಧಿಕಾರಿಗಳಿಗೆ ಅಧಿನಿಯಮದ ಕುರಿತು ಅರಿವು ಮೂಡಿಸುವಲ್ಲಿ ಆಯೋಗದ ಆಯುಕ್ತರೆಲ್ಲರೂ ನಿರ್ಣಯ ಕೈಗೊಂಡು ಈಗಾಗಲೇ ರಾಜ್ಯದ 19ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಅಧಿಕಾರಿಗಳಿಗೆ ಮಾಹಿತಿ ಕಾರ್ಯಾಗಾರಗಳನ್ನು ಆಯೋಜಿಸಲಾಗುತ್ತಿದೆ ಎಂದರು.
ನಿಯಮ ಪಾಲಿಸದ ಹಾಗೂ ಸಕಾಲದಲ್ಲಿ ಮಾಹಿತಿಯನ್ನು ಅರ್ಜಿದಾರರಿಗೆ ಒದಗಿಸದಿರುವ 10754 ಸಾರ್ವಜನಿಕ ಮಾಹಿತಿ ಅಧಿಕಾರಿಗಳಿಂದ 10. 20ಕೋಟಿ ಮೊತ್ತದ ದಂಡ ವಿಧಿಸಲಾಗಿದೆ. ಈ ಪೈಕಿ 3080 ಅಧಿಕಾರಿಗಳಿಂದ 2.70ಕೋಟಿ ರೂ.ಗಳ ದಂಡ ವಸೂಲಿ ಮಾಡಲಾಗಿದೆ ಶಿವಮೊಗಜಿಲ್ಲೆಯಲ್ಲಿ ಸಕಾಲದಲ್ಲಿ ಮಾಹಿತಿ ಒದಗಿಸದಿರುವ 140ಮಂದಿ ಅಧಿಕಾರಿಗಳಿಗೆ 14.40ಲಕ್ಷ ರೂ.ಗಳ ಡಂಡ ವಿಧಿಸಲಾಗಿದ್ದು, ಆ ಪೈಕಿ 30ಅಧಿಕಾರಿಗಳಿಂದ 4.12ಲಕ್ಷ ರೂ.ಗಳ ಡಂಡ ವಸೂಲಿ ಮಾಡಲಾಗಿದೆ. ದಂಡ ಪಾವತಿ ಮಾಡದಿರುವ ಅಧಿಕಾರಿಗಳಿಗೆ ನಿವೃತ್ತಿಯ ನಂತರದ ಉಪಾಧಾನ ಪಡೆಯುವಲ್ಲಿ ತೀವ್ರ ತರಹದ ಅಡಚಣೆ ಉಂಟಾಗಲಿದೆ ಎಂದ ಅವರು ರಾಜ್ಯದಲ್ಲಿ ಬೆಂಗಳೂರುನಗರ, ಬೆಳಗಾವಿ, ರಾಯಚೂರು ನಂತರದಲ್ಲಿ ಶಿವಮೊಗ್ಗ ಜಿಲ್ಲೆ 22ನೇ ಸ್ಥಾನ ಪಡೆದಿದೆ ಎಂದರು.
ಮಾಹಿತಿಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಕೆಯಾಗುವ ಇಲಾಖೆಗಳಲ್ಲಿ ಗ್ರಾಮೀಣಾಭಿವೃದ್ಧಿ, ಕಂದಾಯ, ನಗರಾಭಿವೃದ್ಧಿ, ಶಿಕ್ಷಣ, ಲೋಕೋಪಯೋಗಿ ಮುಂತಾದ ಇಲಾಖೆಗಳು ಅಗ್ರಪಂಕ್ತಿಯಲ್ಲಿವೆಎಂದರು.
ಮುಂದಿನ ದಿನಗಳಲ್ಲಿ ಅರ್ಜಿ ವಿಲೇಯಾಗದೇ ಉಳಿದಿರುವ ಹಾಗೂ ಮೇಲ್ಮನವಿ ಪ್ರಾಧಿಕಾರಕ್ಕೆ ಬರುವ ಅರ್ಜಿಗಳನ್ನು ಆಯಾ ಜಿಲ್ಲಾ ಕೇಂದ್ರದಲ್ಲಿಯೇ ವಿಲೇವಾರಿ ಮಾಡಲು ಚಿಂತನೆ ನಡೆಸಲಾಗಿದೆ. ಈ ಸಂಬಂಧ ಜನವರಿ ಮೊದಲ ವಾರದಲ್ಲಿ ಬೆಳಗಾವಿಗೆ ಭೇಟಿ ನೀಡಿ, ಅಲ್ಲಿನ ಆಯುಕ್ತರ ಕಚೇರಿ ವರದಿ ಪಡೆದು, ಕ್ರಮ ವಹಿಸಲಾಗುವುದು ಎಂದವರು ನುಡಿದರು.
ಕೆ.ಡಿ.ಪಿ ಸಭೆಗಳಲ್ಲಿ ಮಾಹಿತಿ ಕಾಯ್ದೆಯ ಪ್ರಗತಿ ಪರಿಶೀಲಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲಾ ಸರ್ಕಾರಿ ಕಚೇರಿಗಳಲ್ಲಿ ಮಾಹಿತಿ ಫಲಕ ಅಳವಡಿಸಲು ಸೂಚಿಸಲಾಗಿದೆ. ಸರ್ಕಾರಿ ಪಠ್ಯಕ್ರಮದಲ್ಲಿ ಮಾಹಿತಿ ಕಾಯ್ದೆ ಪಠ್ಯವಿಷಯವನ್ನಾಗಿ ಅಳವಡಿಸಲು ಹಾಗೂ ಇಲಾಖಾ ಪರೀಕ್ಷೆಗಳಲ್ಲಿ ಮಾಹಿತಿಕಾಯ್ದೆಯ ವಿಷಯವನ್ನು ಅಳವಡಿಸುವಂತೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ ಎಂದರು.
ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದ ಮಾಹಿತಿ ಆಯೋಗದ ಆಯುಕ್ತ ಎನ್.ರಾಜಶೇಖರ್ ಅವರು ಮಾತನಾಡಿ, ಮಾಹಿತಿ ಕಾಯ್ದೆ ಪ್ರಬಲವಾದ ಮತ್ತು ಸರಳವಾದ ಕಾಯಿದೆಯಾಗಿದ್ದು ಜನಸ್ನೇಹಿಯಾಗಿದೆ. ಮಾತ್ರವಲ್ಲ ಇದೂ ಕೂಡ ಸಂವಿಧಾನದತ್ತವಾದ ಹಕ್ಕಾಗಿದೆ. ಅಧಿಕಾರಿಗಳು ಕೋರಿಕೆಯ ಅರ್ಜಿಗಳಿಗೆ ಸಕಾಲದಲ್ಲಿ ಮಾಹಿತಿ ಒದಗಿಸುವಂತೆ ಸೂಚಿಸಿದ ಅವರು ಶಿವಮೊಗ್ಗ ಜಿಲ್ಲೆಯಲ್ಲಿ ಅರ್ಜಿಗಳ ವಿಲೇವಾರಿ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಅಧಿಕಾರಿಗಳು ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಗೆ ಸಂಬಂಧಿಸಿದಂತೆ ಎಲ್ಲಾ ಮಾಹಿತಿಯನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸಿದಲ್ಲಿ ಇಲಾಖೆಗೆ ಬರುವ ಅರ್ಜಿಗಳ ಸಂಖ್ಯೆಯಲ್ಲಿ ಇಳಿಮುಖವಾಗಲಿದೆ ಎಂದರು.
ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಬಹುತೇಕ ಇಲಾಖಾ ಅಧಿಕಾರಿಗಳಿಗೆ ಮಾಹಿತಿ ಕಾಯ್ದೆಯ ಅರಿವಿನ ಕೊರತೆ ಇರುವುದನ್ನು ಗಮನಿಸಲಾಗಿದೆ. ಅದಕ್ಕಾಗಿ ಕಾರ್ಯಾಗಾರಗಳನ್ನು ಆಯೋಜಿಸುವ ಹಾಗೂ ಅವರಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ಕುಮಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎನ್ ಹೇಮಂತ್, ಅಪರ ಜಿಲ್ಲಾಧಿಕಾರಿ ಅಭಿಷೇಕ್ ವಿ., ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶ್ರೀಮತಿ ಸುಜಾತಾ ಸೇರಿದಂತೆ ಜಿಲ್ಲೆಯ ಎಲ್ಲಾ ಇಲಾಖೆಗಳ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು, ಸಾರ್ವಜನಿಕ ಮಾಹಿತಿ ಅಧಿಕಾರಿಗಳು, ಮೇಲ್ಮನವಿ ಪ್ರಾಧಿಕಾರಿಗಳು ಉಪಸ್ಥಿತರಿದ್ದರು
DC Office ಡಿಸೆಂಬರ್ 26. ವೆಬೆಕ್ಸ್ ಮೂಲಕ ಪಿಂಚಣಿ ಅದಾಲತ್.
DC Office ಡಿ. 26 ರಂದು ಬೆಳಗ್ಗೆ 11.11ಕ್ಕೆ ಚಿಕ್ಕಮಗಳೂರು ಜಿಲ್ಲಾಧಿಕಾರಿಗಳ ಕಚೇರಿಯ ವಿಡಿಯೋ ಕಾನ್ಪರೆನ್ಸ್ ಸಭಾಂಗಣದಲ್ಲಿ ಪಿಂಚಣೆ ಅದಾಲತ್ ಹಾಗೂ ಮಧ್ಯಾಹ್ನ ಜಿಪಿಎಫ್ ಅದಾಲತ್ ಕಾರ್ಯಕ್ರಮವನ್ನು ವೆಬೆಕ್ಸ್ ಮೂಲಕ ಹಮ್ಮಿಕೊಳ್ಳಲಾಗಿದ್ದು, ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ ಪಿಂಚಣಿದಾರರು ಡಿ.26 ರಂದ ಬೆಳಗ್ಗೆ 11.00ಕ್ಕೆ ಎ.ಸಿ.ಕಚೇರಿ, ಕೆ-ಸ್ವಾನ್ ವಿ.ಸಿ. ಸಭಾಂಗಣದಲ್ಲಿ ಹಾಜರಾಗಿ ರಾಜ್ಯ ಸೇವಾ ಹಾಗೂ ಕುಟುಂಬ ಪಿಂಚಣಿಗೆ ಸಂಬಂಧಿಸಿದ ತಮ್ಮ ಕುಂದು ಕೊರತೆಗಳನ್ನು ತಿಳಿಸಬಹುದಾಗಿದೆ. ಅಥವಾ ಜಿಲ್ಲಾ ಖಜಾನೆಯ ಉಪನಿರ್ದೇಶಕರಿಗೆ ಮುಂಚಿತವಾಗಿ ವಿವರಗಳನ್ನು ನೀಡಬಹುದಾಗಿದೆ ಎಂದು ಜಿಲ್ಲಾ ಖಜಾನೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
