ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆ (R-WBCIS) 2024-25 ಕ್ಕೆ ಸಂಬಂಧಿಸಿದ ಸೂಚನೆ
ಮುಖ್ಯ ವಿವರಗಳು:
- ಯಾವ ಬೆಳೆಗಳಿಗೆ ವಿಮೆ
- ಅಡಿಕೆ: ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು
- ಕಾಳುಮೆಣಸು: ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು
- ಶುಂಠಿ: ಶಿವಮೊಗ್ಗ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು
- ಮಾವು: ಶಿವಮೊಗ್ಗ, ಸೊರಬ ಮತ್ತು ಶಿಕಾರಿಪುರ ತಾಲ್ಲೂಕುಗಳು
- ಯಾರು ನೊಂದಾಯಿಸಬಹುದು
- ಅಡಿಕೆ,ಮಾವು,ಶುಂಠಿ, ಕಾಳುಮೆಣಸು ಬೆಳೆದಿರುವ ರೈತರು
- ಈ ಮೊದಲಿನ ಬೆಳೆಗಳಿಗೆ ಬೆಳೆಸಾಲ ಪಡೆದವರು/ಪಡೆಯದವರು ಎಲ್ಲರೂ ವಿಮೆಗೆ ಅರ್ಹರು
- ಬೆಳೆ ಸಾಲ ಪಡೆದ ರೈತರಿಗೆ ವಿಮೆ ಕಡ್ಡಾಯ, ಸಾಲ ಪಡೆಯದ ರೈತರು ಸ್ವಯಂಪ್ರೇರಿತರಾಗಿ ಮಾಡಬಹುದು,
- ಬೇಕಾದ ದಾಖಲೆಗಳು
ಆರ್ಜಿ ಜೊತೆ ಪಹಣಿ,ಬ್ಯಾಂಕ್ ಪಾಸ್ಬುಕ್,ಆಧಾರ್ ಕಾರ್ಡ್, ಸ್ವಯಂ ಘೋಷಿತ ಬೆಳೆ ವಿವರ ಇಟ್ಟುಕೊಂಡು ಬ್ಯಾಂಕ್/ಸಮೀಪದ ಸಾಮಾನ್ಯ ಸೇವಾ ಕೇಂದ್ರ (CSC)/ಗ್ರಾಮ ಒನ್ ಕೇಂದ್ರದಲ್ಲಿ ನೊಂದಾಯಿಸಿಕೊಳ್ಳಬೇಕು. - ಕೊನೆಯ ದಿನಾಂಕ: 31-07-2026
- ವಿಮಾ ಕಂತಿನ ವಿವರ
ಕ್ರ.ಸಂ ಬೆಳೆ ಪ್ರತಿ ಹೆಕ್ಟೇರ್ಗೆ ವಿಮಾ ಮೊತ್ತ ಪ್ರತಿ ಹೆಕ್ಟೇರ್ಗೆ ಕಂತು ರೈತರು ಪಾವತಿಸಬೇಕಾದ ಕಂತು
1 ಅಡಿಕೆ 1,28,000/- 6400.00 2560.00
2 ಕಾಳುಮೆಣಸು 47,000/- 4230.00 1692.00
3 ಮಾವು 80,000/- 8000.00 4000.00
4 ಶುಂಠಿ 1,30,000/- 6500.00 2600.00
ಗುಂಟೆಗೆ ಲೆಕ್ಕ: ಅಡಿಕೆ ₹64, ಕಾಳುಮೆಣಸು ₹42.30, ಮಾವು ₹80, ಶುಂಠಿ ₹65 - ಪರಿಹಾರ ಹೇಗೆ: ಮಳೆ, ಭೂಕುಸಿತ, ಬರ ಇತ್ಯಾದಿ ಹವಾಮಾನ ವೈಪರೀತ್ಯದಿಂದ ಬೆಳೆ ನಷ್ಟವಾದರೆ,ಕರ್ನಾಟಕ ರಾಜ್ಯ ನೈಸರ್ಗಿಕ ಉಸ್ತುವಾರಿ ಕೇಂದ್ರದ ದತ್ತಾಂಶ ಆಧರಿಸಿ ಪರಿಹಾರ ನೀಡಲಾಗುತ್ತದೆ. Term sheet, Pay out structure ಪ್ರಕಾರ ಪಾವತಿ.
ಸಂಪರ್ಕ: ಹೆಚ್ಚಿನ ಮಾಹಿತಿಗೆ ಹತ್ತಿರದ ಬ್ಯಾಂಕ್, ರೈತ ಸಂಪರ್ಕ ಕೇಂದ್ರ ಅಥವಾ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ ಸಂಪರ್ಕಿಸಿ.
“ರೈತರೇ ಬನ್ನಿ, ಹೆಚ್ಚಿನ ಸಂಖ್ಯೆಯಲ್ಲಿ ನೊಂದಾಯಿಸಿಕೊಳ್ಳಿ”
