Thursday, May 7, 2026
Thursday, May 7, 2026
Home Blog Page 49

ರಾಷ್ಟ್ರೀಯ ಕರಾಟೆ ಪಂದ್ಯಾವಳಿಗೆ ಶಿವಮೊಗ್ಗದ ಯು.ದೀಕ್ಷಾ ಆಯ್ಕೆ

0

ಉಮೇಶ್ ಎಸ್. ಈ. (ಡಿ.ಎ.ಆರ್ ಎ. ಆರ್. ಎಸ್ ಐ) ಹಾಗೂ ಶೀಲಾವತಿ ಇವರ ಮಗಳಾದ ದೀಕ್ಷಾ ಯು ರವರು ” CBR ರಾಷ್ಟ್ರೀಯ ಕಾನೂನು ಕಾಲೇಜು” ಶಿವಮೊಗ್ಗ ಮೂರನೇ ವರ್ಷದ ಪದವಿ ಪಡೆಯುತ್ತಿದ್ದು. ಮತ್ತು “ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ ಗರಡಿಯಲ್ಲಿ ಕರಾಟೆ ಅಭ್ಯಾಸ ಪಡೆದು ದೀಕ್ಷಾ ಯು ರವರು ಮಾರ್ಚ್ 10 ರಂದು ನಡೆದ ಧಾರವಾಡ ಕಾನೂನು ವಿಶ್ವವಿದ್ಯಾಲಯದಲ್ಲಿ ಇಂಟರ್ ಯುನಿವರ್ಸಿಟಿ ಕರಾಟೆ ಪಂದ್ಯಾವಳಿಯಲ್ಲಿ ಮೈನಸ್ 68 ಕೆಜಿ ಕಮಿಟೆ ವಿಭಾಗದಲ್ಲಿ ಆಯ್ಕೆಯಾಗಿ, “ಮಾರ್ಚ್ 17 ಮತ್ತು 18 ರಂದು ಭೂಪಾಲ್ (M P) ನಲ್ಲಿ ನಡೆದ ಸೇಜ್ ವಿಶ್ವವಿದ್ಯಾನಿಲಯ ಸೌತ್- ವೆಸ್ಟ್ ಇಂಟೆರ್ ಯೂನಿವರ್ಸಿಟಿ ಕರಾಟೆ ಪಂದ್ಯಾವಳಿಯಲ್ಲಿ ಟಾಪ್ 08 ನೇ ಸ್ಥಾನದಲ್ಲಿ ಆಯ್ಕೆಯಾಗಿ ಮತ್ತು ಅಸ್ಸಾಂನಲ್ಲಿ ನಡೆಯಲಿರುವ ಆಲ್ ಇಂಡಿಯಾ ಯೂನಿವರ್ಸಿಟಿ ಬಾಲಕಿಯರ ಕರಾಟೆ ಪಂದ್ಯಾವಳಿಗೆ ಆಯ್ಕೆಯಾಗಿ ರಾಜ್ಯ ಹಾಗೂ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಆಯ್ಕೆಯಾದಂತಹ ಕ್ರೀಡಾಪಟುವಿಗೆ ಸಹ್ಯಾದ್ರಿ ಶಿವಮೊಗ್ಗ ಜಿಲ್ಲಾ ಸ್ಪೋರ್ಟ್ಸ್ ಕರಾಟೆ ಅಸೋಸಿಯೇಷನ್ ನ,
ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾದಂತಹ ಸನ್ ಸೈ ನವೀನ್, ಜಿಲ್ಲಾ ಉಪಾಧ್ಯಕ್ಷರಾದಂತಹ ಸನ್ ಸೈ ಸಾದಿಕ್ ತರಬೇತಿದಾರರ,
ಸನ್ ಸೈ ಮಂಜುನಾಥ್ ಮತ್ತು ಅಪೂರ್ವ, ಮಹಮ್ಮದ್ ಗೌಸ್ ಸಂಸ್ಥೆಯ ಸದಸ್ಯರು ಅಭಿನಂದಿಸಿದ್ದಾರೆ.

District Health and Family Welfare Department ಪ್ರಯೋಗಶಾಲಾ ತಂತ್ರಜ್ಞರು/ ತಜ್ಞವೈದ್ಯರ ಹುದ್ದೆಗೆ ಆಯ್ಕೆ ಪಟ್ಟಿ ಪ್ರಕಟ. ಆಕ್ಷೇಪಣೆಗಳಿಗೆ ಆಹ್ವಾನ.

0

District Health and Family Welfare Department ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿಯಲ್ಲಿ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಅಧೀನದಲ್ಲಿ ಬರುವ ಎನ್.ಪಿ.ಎನ್.ಸಿ.ಡಿ. ಕಾರ್ಯಕ್ರಮದಲ್ಲಿ ಖಾಲಿ ಇರುವ ಪ್ರಯೋಗಶಾಲಾ ತಂತ್ರಜ್ಞರ ಮತ್ತು ಎನ್.ಪಿ.ಹೆಚ್.ಸಿ.ಇ. ಕಾರ್ಯಕ್ರಮದಡಿಯಲ್ಲಿ ತಜ್ಞ ವೈದ್ಯರುಗಳ ಹುದ್ದೆಗಳಿಗೆ ನೇರ ಸಂದರ್ಶನದಲ್ಲಿ ತಾತ್ಕಾಲಿಕ ಆಯ್ಕೆಯಾದವರ ಪಟ್ಟಿಯನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದ್ದು, ಆಕ್ಷೇಪಣೆಗಳಿದ್ದಲ್ಲಿ ಮಾ. 26 ರೊಳಗಾಗಿ ಲಿಖಿತವಾಗಿ ಸಲ್ಲಿಸುವಂತೆ ಜಿಲ್ಲಾ ಸರ್ವೇಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

Shivamogga News ಶಿವಮೊಗ್ಗದಿಂದ ದಂಪತಿ ನಾಪತ್ತೆ. ಶಿವಮೊಗ್ಗ ದೊಡ್ಡಪೇಟೆ ಪೊಲೀಸ್ ಠಾಣೆ ಪ್ರಕಟಣೆಮ

0

Shivamogga News ದೊಡ್ಡಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಭಾರತಿ ಕಾಲೋನಿ 2ನೇ ಕ್ರಾಸ್, ಎನ್.ಟಿ.ರಸ್ತೆ ವಾಸಿ ಶ್ರೀನಿವಾಸ ಮತ್ತು ಜಯಮ್ಮ ದಂಪತಿಗಳು ಜುಲೈ 2024 ರಿಂದ ಕಾಣೆಯಾದವರು ಈತನಕ ವಾಪಾಸ್ಸಾಗಿರುವುದಿಲ್ಲ.

ಶ್ರೀನಿವಾಸರ ಚಹರೆ 5.4 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ ಹೊಂದಿದ್ದು, ಬಲಗೈ ಮೇಲೆ ಜಯಮ್ಮ ಎಂಬ ಹಚ್ಚೆ ಗುರುತು ಇರುತ್ತದೆ. ಕನ್ನಡ ಭಾಷೆ ಮಾತನಾಡುತ್ತಾರೆ. ಜಯಮ್ಮ ಎಂಬುವವರ ಚಹರೆ 5.1 ಅಡಿ ಎತ್ತರ, ಬಿಳಿ ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದು, ಬಲಗೈ ಮೇಲೆ ಶ್ರೀನಿವಾಸ ಎಂಬ ಹಚ್ಚೆ ಗುರುತು ಇರುತ್ತದೆ.

Shivamogga News ಈ ದಂಪತಿಯ ಬಗ್ಗೆ ಸುಳಿವು ಸಿಕ್ಕಲ್ಲಿ ದೊಡ್ಡಪೇಟೆ ಪೊಲೀಸ್ ಠಾಣೆ ದೂ.ಸಂ.: 08182-261414/ 9480803345/ 08182-261413 ಹಾಗೂ ಕಂಟ್ರೋಲ್ ರೂಂ. ನಂ.: 100/112 ಗಳನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

Shivamogga News ಪಂಚಾಂಗ ಶ್ರವಣವು ಪುಣ್ಯಪ್ರದ. ಕೆಟ್ಟಸ್ವಪ್ನವನ್ನು ದೂರಮಾಡುತ್ತದೆ- “ಕಗ್ಗ” ಜಿ.ಎಸ್.ನಟೇಶ್.

0

Shivamogga News ಪಂಚಾಂಗ ಶ್ರವಣದಿಂದ ಪುಣ್ಯ ಪ್ರಾಪ್ತಿ ಆಗುತ್ತದೆ. ನಮ್ಮ ಎಲ್ಲಾ ಕಾರ್ಯಗಳು ಶ್ರವಣದಿಂದ ಆಗುವುದು, ಪಂಚಾಂಗ ಕೇಳುವುದರಿಂದ ನಮ್ಮ ಶತ್ರುಗಳನ್ನು ದೂರ ಮಾಡುತ್ತದೆ. ಗಂಗಾ ಸ್ನಾನ ಮಾಡಿದಷ್ಟು ಮತ್ತು ಗೋ ದಾನ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎಂದು ನಿವೃತ್ತ ಉಪನ್ಯಾಸಕರಾದ ವಿದ್ವಾನ್ ಜಿ.ಎಸ್.ನಟೇಶ್ ಅಭಿಮತ ವ್ಯಕ್ತಪಡಿಸಿದರು.

ಗುರುವಾರ ಸ್ವಾಮಿ ವಿವೇಕಾನಂದ ಬಡಾವಣೆಯ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿ ವತಿಯಿಂದ ಯುಗಾದಿ ಹೊಸ ವರ್ಷದ ಅಂಗವಾಗಿ ಹಮ್ಮಿಕೊಳ್ಳಲಾದ ವರ್ಷದ ಫಲ ಪಂಚಾಂಗ ಶ್ರವಣ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿದ ಅವರು, ಪಂಚಾಂಗ ಶ್ರವಣದಿಂದ ಪುಣ್ಯ ಲಭಿಸುತ್ತದೆ. ಅಲ್ಲದೆ, ಪಂಚಾಂಗ ಶ್ರವಣ ಪುಣ್ಯ ಪ್ರದ, ಕೆಟ್ಟ ಸ್ವಪ್ನಗಳನ್ನು ದೂರ ಮಾಡುತ್ತದೆ, ಆಯುಷ್ಯ ಹೆಚ್ಚಾಗುತ್ತದೆ. ಈ ರೀತಿ ಹಲವಾರು ಸತ್ ಕಾರ್ಯಗಳು ನಡೆಯುವುದರ ಜೊತೆಗೆ ನಮಗೆ ಎಲ್ಲಾ ಫಲ ಲಭಿಸುತ್ತದೆ ಎಂದು ತಿಳಿಸಿದರು.

ಪಂಚಾಂಗವನ್ನು ಕೇವಲ ಈ ಯುಗಾದಿಯಲ್ಲಿ ಶ್ರವಣ ಮಾಡುವುದರ ಜೊತೆಯಲ್ಲಿ ಹಿರಿಯರು ತಿಳಿಸಿದ ಹಾಗೆ ನಿತ್ಯ ಪಂಚಾಂಗ ಶ್ರವಣದಿಂದ ನಮಗೆ ಸನ್ಮಾರ್ಗ ಹಾಗೂ ಸರಿಯಾದ ಮಾಹಿತಿ ದೊರಕುತ್ತದೆ ಎಂದು ತಿಳಿಸಿದರು.

ಜೊತೆಗೆ ರಾಶಿ ಫಲಗಳು ಹಾಗೂ ಮಳೆ ಬೆಳೆ ಹಾಗೂ ಸಾಮಾಜಿಕ ಲೆಕ್ಕಾಚಾರಗಳು ಪಂಚಾಂಗದ ಪ್ರಕಾರ ಮುಂದೆ ಆಗಬಹುದಾದ ಆಗುಹೋಗುಗಳ ಬಗ್ಗೆ ತಿಳಿಸಿದರು.

Shivamogga News ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ಸೇವಾ ಸಮಿತಿಯ ಅಧ್ಯಕ್ಷರಾದ ರಾಮಲಿಂಗಪ್ಪನವರು ಮಾತನಾಡಿ, ನಮ್ಮ ದೇವಸ್ಥಾನದಲ್ಲಿ ಪ್ರತಿಯೊಂದು ಹಬ್ಬ, ಹರಿದಿನಗಳು ವಿಶೇಷ ದಿನಗಳಲ್ಲಿ ಎಲ್ಲಾ ಧಾರ್ಮಿಕ ಕಾರ್ಯಗಳು, ವಿಧಿ ವಿಧಾನಗಳು ಕ್ರಮಬದ್ಧವಾಗಿ ಭಕ್ತರಿಗೆ ದೊರಕುತ್ತದೆ ಎಂದರು.

ಜಿ.ಎಸ್.ನಟೇಶ್ ರವರ ಉಪನ್ಯಾಸ ನಮಗೆ ಆತ್ಮಶಕ್ತಿ, ಸ್ಪೂರ್ತಿ ಹೆಚ್ಚಿಸುತ್ತದೆ. ಈ ವಿಶ್ವಾಸ ಹಾಗೂ ಮಹಾ ಪೂಜೆಯಲ್ಲಿ ಪಾಲ್ಗೊಂಡ ಎಲ್ಲಾ ಭಕ್ತರಿಗೆ ದೇವಸ್ಥಾನದ ಸಮಿತಿಯ ಎಲ್ಲಾ ಪದಾಧಿಕಾರಿಗಳು ಧನ್ಯವಾದ ತಿಳಿಸಿದರು.

ದೇವಸ್ಥಾನದ ಪ್ರಧಾನ ಅರ್ಚಕರಾದ ಸಂದೇಶ ಉಪಾಧ್ಯ ಅವರು ಯುಗಾದಿ ಹಬ್ಬದ ಮಹತ್ವ ತಿಳಿಸಿದರು. ಕಾರ್ಯಕ್ರಮದ ನಂತರ ಎಲ್ಲರಿಗೂ ಮಹಾಮಂಗಳಾರತಿ ಹಾಗೂ ಪ್ರಸಾದ ವಿನಿಯೋಗ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯ್ ಕುಮಾರ್, ನಿರ್ದೇಶಕ ಮಂಜುನಾಥ, ಆಡಳಿತ ಮಂಡಳಿಯ ಪದಾಧಿಕಾರಿಗಳು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Rangayana, Shivamogga ಚಿಣ್ಣರ ಸಿಹಿಮೊಗೆ ಬೇಸಿಗೆ ಶಿಬಿರದಲ್ಲಿ ನಾಟಕ ನಿರ್ದೇಶಕ ಮತ್ತು ಜನಸಹಾಯಕ ನಿರ್ದೇಶಕರ ಆಯ್ಕೆ ಪ್ರಕ್ರಿಯೆಗೆ ಅರ್ಜಿಗಳ ಆಹ್ವಾನ.

0

Rangayana ಶಿವಮೊಗ್ಗ ರಂಗಾಯಣವು ಏ.14 ರಿಂದ ಮೇ.03ರವರೆಗೆ ಆಯೋಜಿಸುತ್ತಿರುವ ಚಿಣ್ಣರ ಸಿಹಿಮೊಗ್ಗೆ-ಮಕ್ಕಳ ಬೇಸಿಗೆ ಶಿಬಿರದಲ್ಲಿ ಮಕ್ಕಳಿಗೆ ರಂಗತರಬೇತಿ, ನಾಟಕ ನಿರ್ದೇಶನ ಮಾಡಲು ರಂಗಭೂಮಿಯ ಹಿನ್ನೆಲೆಯುಳ್ಳ 06 ನಾಟಕ ನಿರ್ದೇಶಕರು ಮತ್ತು 06 ಜನ ಸಹಾಯಕ ನಿರ್ದೇಶಕರ ಆಯ್ಕೆಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಮಾ. 16 ರಿಂದ ಮಾ. 30ರವರೆಗೆ ವಿಸ್ತರಿಸಲಾಗಿದೆ ಎಂದು ರಂಗಾಯಣದ ಆಡಳಿತಾಧಿಕಾರಿ ಡಾ. ಶೈಲಜಾ ಎ.ಸಿ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Rangayana ಹೆಚ್ಚಿನ ಮಾಹಿತಿಗಾಗಿ ರಂಗಾಯಣ, ಶಿವಮೊಗ್ಗ ಕಛೇರಿ, ದೂರವಾಣಿ ಸಂಖ್ಯೆ 08182-256353, 7975229166 ಯನ್ನು ಸಂಪರ್ಕಿಸಬಹುದಾಗಿದೆ.

Breaking News ಮೃಗಾಲಯದಲ್ಲಿ ನೀರಾನೆ ದಾಳಿಗೆ ಡಾ.ಸಮೀಕ್ಷಾ ರೆಡ್ಡಿ‌ ಬಲಿ. ಶಾಸಕ ಚೆನ್ನಿ ಸಂತಾಪ.

0

Breaking News ಶಿವಮೊಗ್ಗದ ತ್ಯಾವರೆಕೊಪ್ಪ ಮೃಗಾಲಯದಲ್ಲಿ ಕರ್ತವ್ಯನಿರತರಾಗಿದ್ದ ಯುವ ಪಶುವೈದ್ಯೆ ಡಾ. ಸಮೀಕ್ಷಾ ರೆಡ್ಡಿ ಅವರು ನೀರಾನೆ ದಾಳಿಯಿಂದ ಮೃತಪಟ್ಟ ಸುದ್ದಿ ಕೇಳಿ ಅತೀವ ನೋವುಂಟಾಗಿದೆ. ಅಸ್ವಸ್ಥ ಪ್ರಾಣಿಗೆ ಚಿಕಿತ್ಸೆ ನೀಡಲು ತೆರಳಿದ್ದ ವೇಳೆ ಸಂಭವಿಸಿದ ಈ ದುರ್ಘಟನೆ ನಿಜಕ್ಕೂ ಅತ್ಯಂತ ಹೃದಯವಿದ್ರಾವಕವಾಗಿದೆ ಎಂದು ಶಿವಮೊಗ್ಗ ಶಾಸಕ
ರಾದ ಎಸ್.ಎನ್. ಚೆನ್ನಬಸಪ್ಪನವರು ಸಂತಾಪ ಸೂಚಿಸಿದ್ದಾರೆ.

Breaking News ವನ್ಯಜೀವಿಗಳ ಸೇವೆಯಲ್ಲಿ ತೊಡಗಿದ್ದ ಒಬ್ಬ ಪ್ರತಿಭಾವಂತ ಯುವ ವೈದ್ಯೆಯನ್ನು ನಾವು ಕಳೆದುಕೊಂಡಿರುವುದು ಜಿಲ್ಲೆಗೆ ಮತ್ತು ಪಶುವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ರಾಜ್ಯ ಸರ್ಕಾರವು ಮೃತರ ಕುಟುಂಬಕ್ಕೆ ತಕ್ಷಣವೇ ಸೂಕ್ತ ಪರಿಹಾರ ಘೋಷಿಸಬೇಕು. ಈ ಘಟನೆಯಲ್ಲಿ ಸುರಕ್ಷತಾ ಲೋಪಗಳಿವೆಯೇ ಎಂಬುದರ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ಕೂಲಂಕುಷ ತನಿಖೆಯಾಗಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಈ ಮೂಲಕ ಆಗ್ರಹಿಸುತ್ತೇನೆ ಎಂದಿದ್ದಾರೆ.

ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಈ ಅಗಲಿಕೆಯ ದುಃಖವನ್ನು ಭರಿಸುವ ಶಕ್ತಿಯನ್ನು ಭಗವಂತ ಅವರ ಕುಟುಂಬದವರಿಗೆ ಕರುಣಿಸಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.

Ugadi ನಮ್ಮೂರಿನ ಯುಗಾದಿ.ಒಂದು ನೆನಪು…ಲೇ: ಎನ್.ಎಸ್.ಕುಮಾರ್.ನಿವೃತ್ತ ನಿರ್ದೇಶಕರು.( ಶಿಕ್ಷಣ ಇಲಾಖೆ).ಶಿವಮೊಗ್ಗ

0

Ugadi ಹಬ್ಬ ಎಂದರೆ ಎಲ್ಲರಿಗೂ ಸಡಗರ ಸಂಭ್ರಮ ಅದರಲ್ಲೂ ನಮ್ಮೂರಿನ ಹಬ್ಬದ ಸಂಭ್ರಮ ಇಂದು ನೆನಪಾಗುತ್ತಿದೆ. ವಿಶೇಷವಾಗಿ ಹೊಸ ವರ್ಷವನ್ನು ಹೊತ್ತು ತರುವ ಯುಗಾದಿ ಹಬ್ಬವು ಎಲ್ಲಾ ಜನರಿಗೂ ಹರುಷ ಉಲ್ಲಾಸ ಸಂತೋಷವನ್ನು ತರುವಂತದ್ದು ಹೊಸ ಬಟ್ಟೆಯನ್ನು ತೊಟ್ಟು ಪ್ರಕೃತಿಯ ಸೌಂದರ್ಯವೂ ಕಂಗೊಳಿಸುತ್ತಾ ಹೊಸ ಚಿಗುರನ್ನು ಆಹ್ವಾನಿಸುತ್ತಾ ಬಾಳಿನ ಬೆಳಕನ್ನು ಕಾಣಲು ಬಯಸುವ ಯುಗಾದಿ ಹಬ್ಬವು ವರ್ಷದುದ್ದಕ್ಕೂ ಸಂತಸವನ್ನು ತರುವಂತದ್ದಾಗಿದೆ.

ಯುಗಾದಿ ಹಬ್ಬದ ಬರುತ್ತಿದೆ ಎಂದು ಮನೆಯನ್ನ ಶುಭ್ರಗೊಳಿಸಿ ಸುಣ್ಣ ಬಣ್ಣ ಬಳಿದು ಮನೆ ಸುಂದರವಾಗಿ ಕಾಣುವಂತೆ ಮಾಡುತ್ತಿದ್ದರು ಅಮಾವಾಸ್ಯೆ ದಿನದಂದು ನಾವುಗಳು ಬೆಳಗ್ಗೆ ಎದ್ದು ಸ್ನಾನ ಮಾಡಿ ಬೇವು ಬೆಲ್ಲವನ್ನು ತೆಗೆದುಕೊಂಡು ಇರುವೆ ಗೂಡನ್ನು ಹುಡುಕುತ್ತಾ ಹೋಗಿ ಅವುಗಳಿಗೆ ಬೇವು ಬೆಲ್ಲದ ಮಿಶ್ರಣವನ್ನು ಹಾಕುತ್ತಿದ್ದೆವು ನಂತರ ಒಣ ಕೊಬ್ಬರಿ ಬಟ್ಟಲಿಗೆ ತೂತು ಮಾಡಿ ದಾರವನ್ನು ಕಟ್ಟಿ ಎರಡು ಕೈಗಳಿಂದ ದಾರವನ್ನು ಎಳೆದು ಕೊಬರಿ ಬಟ್ಟಲನ್ನು ತಿರುಗಿಸುತ್ತಿದ್ದೆವು . ಆನಂತರ ಮನೆಯ ಮುಂದೆ ಸಗಣಿಯಿಂದ ಅಂಗಳವನ್ನ ಬಳಿದು ಸ್ವಚ್ಛಗೊಳಿಸಿ ಮಾವಿನ ಸೊಪ್ಪಿನಿಂದ ಬಾಳೆ ಕಂಬದಿಂದ ಹಾಗೂ ಹೂವಿನ ಹಾರದಿಂದ ಮನೆಯನ್ನು ಶೃಂಗರಿಸಿ ಮನೆಯ ಮುಂದೆ ಜೋಕಾಲಿಯನ್ನ ಕಟ್ಟಿ ಕೆಲವರು ಮರದ ಕೊಂಬೆಗಳಿಗೆ ಜೋಕಾಲಿಯನ್ನು ಕಟ್ಟಿ ಹೊಸ ಬಟ್ಟೆಗಳನ್ನು ತೊಟ್ಟು ಜೋಕಾಲಿ ಆಡುತ್ತಿದ್ದೆವು. ಹೊಸ ಬಟ್ಟೆ ತೊಟ್ಟು ಮನೆ ಮನೆಗೆ ಹೋಗಿ ಬೇವುಬೆಲ್ಲವನ್ನ ಕೊಟ್ಟು ಸಂಭ್ರಮಿಸುತ್ತಿದ್ದೆವು. ಮನೆಯಲ್ಲಿ ಹಬ್ಬದ ಹಿಂದಿನ ದಿನ ಅಭ್ಯಂಜನ ಸ್ನಾನ ಮಾಡಿ ಮನೆಯಲ್ಲಿ ಶಾವಿಗೆ ಬಸಿದು ಅದಕ್ಕೆ ಬೇವು ಬೆಲ್ಲದ ಮಿಶ್ರಣವನ್ನು ಹಾಗೂ ಹಾಲನ್ನು ಹಾಕಿಕೊಂಡು ಊಟ ಮಾಡುತ್ತಿದ್ದೆವು ನಂತರ ಮಾರನೇ ದಿನ ಚಂದ್ರ ಕಾಣುತ್ತಾನೆಂದು ಹೋಳಿಗೆ ಊಟವನ್ನು ಮಾಡುತ್ತಿದ್ದರು ಏಕೆಂದರೆ ಹೋಳಿಗೆ ಊಟ ಮಾಡಿ ಚಂದ್ರನನ್ನು ನೋಡಬೇಕು ಎಂಬ ನಂಬಿಕೆ ಆ ದಿನ ಚಂದ್ರ ಕಾಣದಿದ್ದರೆ ಹೋಳಿಗೆ ಸ್ವಲ್ಪ ಊರ್ಣ ಇಟ್ಟು ಕೊಂಡು ಇರುತ್ತಿದ್ದರು ಮಾರನೇ ದಿನ ಪುನಹ ಹೋಳಿಗೆ ಮಾಡಿ ಚಂದ್ರನನ್ನು ನೋಡಲು ಸಂಜೆ ಹೊತ್ತು ರಾಂಪುರ್ ರಸ್ತೆಯಲ್ಲಿರುವ ಹಳ್ಳದ ಮೇಲೆ ಊರ ಜನರೆಲ್ಲರೂ ಹೊಸ ಬಟ್ಟೆ ತೊಟ್ಟುಕೊಂಡು ಆಕಾಶದಲ್ಲಿ ಚಂದ್ರನನ್ನು ಹುಡುಕುತ್ತಿದ್ದೆವು. ನಾನು ಮೊದಲು ನೋಡಬೇಕು. ನಾನು ಮೊದಲು ನೋಡಬೇಕು ಎಂದು ಎಲ್ಲರೂ ಹುಡುಕುತ್ತಿದ್ದೆವು. ಯಾರಾದರೂ ಮೊದಲು ನೋಡಿದರೆ ತಕ್ಷಣ ನನಗೆ ಕಾಣಿಸಿತು ಎಂದು ಜೋರಾಗಿ ಕೂಗಿ ಹೇಳುತ್ತಿದ್ದರು ಉಳಿದವರು ಎಲ್ಲಿ ಎಲ್ಲಿ ಎಂದು ಕೇಳುತ್ತಿದ್ದರು ಚಂದ್ರನನ್ನು ನೋಡಿದವರು ಕಪ್ಪು ಮೂಡದ ಮೇಲೆ ಕೆಳಗೆ ಅಕ್ಕ ಪಕ್ಕ ಲೈಟ್ ಕಂಬದ ಮೇಲೆ ಸೀದಾ ಎತ್ತರದಲ್ಲಿ ನೋಡಿ ಎಂದು Ugadi ಹೇಳುತ್ತಿದ್ದರು ನಾವೆಲ್ಲ ಹುಡುಕಿ ಚಂದ್ರ ಕಂಡ ತಕ್ಷಣ ಓ ನನಗೂ ಕಾಣಿಸುತ್ತೆ ಎಂದು ಚಂದ್ರನಿಗೆ ಕೈ ಮುಗಿದ ನಮಸ್ಕರಿಸಿ ಅಲ್ಲೇ ಇದ್ದ ಹಿರಿಯರಿಗೆ ಚಂದ್ರ ಕಾಣಿಸುತ್ತಾ ಎನ್ನುತ್ತಾ ಎಲ್ಲರಿಗೂ ಕಾಲಿಗೆ ನಮಸ್ಕರಿಸಿದ್ದೆವು ನಂತರ ನಮ್ಮೂರಿನ ಕಲ್ಲೇಶ್ವರ ದೇವಸ್ಥಾನಕ್ಕೆ ಹೋಗಿ ದೇವರಿಗೆ ನಮಸ್ಕರಿಸಿ ಹಣೆಗೆ ವಿಭೂತಿ ಧರಿಸಿ ಊರಿನಲ್ಲಿರುವ ಮನೆಮನೆಗೆ ಭೇಟಿ ನೀಡಿ ಅಲ್ಲಿರುವ ಹಿರಿಯರಿಗೆ ಚಂದ್ರ ಕಾಣಿಸುತ್ತಾ ಎಂದು ಕೇಳುತ್ತಾ , ಅವರ ಕಾಲಿಗೆ ನಮಸ್ಕರಿಸಿ ಅವರಿಂದ ಬೇವು ಬೆಲ್ಲವನ್ನು ಪಡೆದು ಇಡೀ ಊರೇ ಜನರೆಲ್ಲರೂ ಒಬ್ಬರ ಕಾಲಿನ ಮತ್ತೊಬ್ಬರು ಬೀಳುತ್ತಾ ಹಬ್ಬವನ್ನು ಸಂಭ್ರಮಿಸುತ್ತಿದ್ದೆವು ಊರಿನ ಕೆಲವು ಹಿರಿಯರು ಚಂದ್ರನು ಮೇಲೇರಿದ್ದಾನೆ ಕೆಳಗೆ ಇಳಿದಿದ್ದಾನೆ ಈ ವರ್ಷ ಮಳೆ ಬೆಳೆ ಚೆನ್ನಾಗಿದೆ ಚೆನ್ನಾಗಿಲ್ಲ ಮುಂಗಾರು ಮಳೆ ಹಿಂಗಾರು ಮಳೆ ಜಾಸ್ತಿ ಇದೆ ಅಥವಾ ಕಡಿಮೆ ಇದೆ ಎಂದು ಹಿರಿಯರು ನಾನು ಮಾತುಗಳನ್ನು ಆಡುತ್ತಿದ್ದರು ಆ ದಿನ ಊರಿನ ಜನರೆಲ್ಲರೂ ಊರಿನ ಎಲ್ಲಾ ಹಿರಿಯರಿಗೂ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದುಕೊಳ್ಳುತ್ತಿದ್ದರು ಮದುವೆ ಆಗದವರಿಗೆ ಮುಂದಿನ ಚಂದ್ರಮಾನದೊಳಗೆ ಮದುವೆಯಾಗಲಿ. ಮಕ್ಕಳಾಗದ ಜೋಡಿಗಳಿಗೆ ಮುಂದಿನ ಚಂದ್ರನನ್ನು ನೋಡುವುದರೊಳಗಾಗಿ ಸಂತಾನವಾಗಲಿ ಎಂದು. ಕೆಲಸ ಸಿಗದವರಿಗೆ ಕೆಲಸ ಸಿಗಲಿ ಎಂದು ಅವರವರ ಅವಶ್ಯಕತೆ ತಕ್ಕಂತೆ ಹಿರಿಯರು ಆಶೀರ್ವಾದ ಮಾಡುತ್ತಿದ್ದರು. ಈ ರೀತಿಯಾಗಿ ನಮ್ಮೂರಿನ ಹಬ್ಬವನ್ನು ಸಂಭ್ರಮಿಸಿದ ದಿನಗಳು ನೆನಪಾಗುತ್ತಿದೆ. ಆದರೆ ಇಂದು ನಗರ ಪ್ರದೇಶಗಳಲ್ಲಿ ಹಾಗೂ ಹಳ್ಳಿಗಳಲ್ಲಿಯೂ ಸಹ ಸಂಭ್ರಮ ಕಾಣದಂತಾಗಿದೆ. ನಮ್ಮ ಮಕ್ಕಳಿಗೆ ನಮ್ಮ ಸಂಭ್ರಮದ ದಿನಗಳನ್ನು ಕಥೆ ರೂಪದಲ್ಲಿ ಹೇಳುವಂತೆ ಆಗಿದೆ ಇಂದು ಹಬ್ಬಗಳು ಅದರ ಅರ್ಥವನ್ನು ಕಳೆದುಕೊಳ್ಳುತ್ತಿರುವುದು ಬೇಸರದ ಸಂಗತಿಯಾಗಿದೆ.

ಎನ್ ಎಸ್ ಕುಮಾರ್
ನಿವೃತ್ತ ನಿರ್ದೇಶಕರು
ಶಿಕ್ಷಣ ಇಲಾಖೆ
9448337434

Shimoga News ಗೋಪಾಲ ಗೌಡರು ಶಿವಮೊಗ್ಗ ಜಿಲ್ಲೆಯನ್ನ ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು- ವೈ.ಎಸ್.ವಿ.ದತ್ತ.

0

Shimoga News ನಗರದ ಮಥುರಾ ಪ್ಯಾರಡೈಸ್ ಸಭಾಂಗಣದಲ್ಲಿ ಮಾಜಿ ಶಾಸಕ ಹಾಗೂ ಶಾಂತವೇರಿ ಗೋಪಾಲಗೌಡ ಪ್ರಶಸ್ತಿ ವಿಜೇತ ರಾದ ವೈ ಎಸ್ ವಿ ದತ್ತ ಅವರಿಗೆ ಶಿವಮೊಗ್ಗ ಜಿಲ್ಲಾ ಸರ್ವೋದಯ ಮಂಡಲ, ಭದ್ರಾವತಿ ಶಿವಮೊಗ್ಗ ಆಕಾಶವಾಣಿ ಕೇಳುಗರ ಬಳಗ, ಆರ್ ಜೆ ಬಳಗ, ನನ್ನ ಕನಸಿನ ಶಿವಮೊಗ್ಗ ಸಂಸ್ಥೆಗಳ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಸ್ವಾಗತಿಸಲಾಯಿತು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಂತವೇರಿ ಗೋಪಾಲಗೌಡರು ಈ ನಾಡು ಕಂಡ ಅಪ್ರತಿಮ ಪ್ರಾಮಾಣಿಕ ರಾಜಕಾರಣಿ. ಕಡು ಬಡತನದಿಂದ ಸಾಲ ಸೂಲ ಮಾಡಿ ತನ್ನ ಪ್ರಾಮಾಣಿಕ ರಾಜಕಾರಣದಿಂದ ಕಡು ಬಡವರ ಸೇವೆ ಮಾಡಿದವರು ಕಾಗೋಡು ಸತ್ಯಾಗ್ರಹದ ಹೋರಾಟದ ಮೂಲಕ ಪ್ರಸಿದ್ಧರಾಗಿ ಡಾ ರಾಮಮನೋಹರ ಲೋಹಿಯವರ ಸಮಾಜವಾದಿ ಸಿದ್ಧಾಂತವನ್ನು ಅಪ್ಪಿಕೊಂಡು ಶಿವಮೊಗ್ಗ ಜಿಲ್ಲೆಯನ್ನು ಸಮಾಜವಾದದ ತೊಟ್ಟಿಲನ್ನಾಗಿ ರೂಪಿಸಿದವರು. ಶಾಂತವೇರಿ ಗೋಪಾಲಗೌಡರು ವಿಧಾನಸಭೆಯಲ್ಲಿ ಮಾತನಾಡಲು ನಿಂತರೆ ಇಡೀ ವಿಧಾನಸಭೆ ನಡುಗುತ್ತಿತ್ತು. ಅವರಂತಹ ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿ ಮತ್ತೆ ನೋಡಲು ಸಾಧ್ಯವಿಲ್ಲವಾಗಿದೆ. ಸರ್ಕಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಗೋಪಾಲಗೌಡರ ಹೆಸರನ್ನು ಇಟ್ಟಿರುವುದು ಸೂಕ್ತವಾಗಿದೆ ಎಂದು ಅಭಿಪ್ರಾಯಪಟ್ಟರು. ಅವರು ಬದುಕಿದ್ದರೆ ಅವರಿಗೆ 101 ವರ್ಷ ವಯಸ್ಸು ಆಗುತ್ತಿತ್ತು ಅವರ ಹೆಸರಿನಲ್ಲಿರುವ ಈ ಪ್ರಶಸ್ತಿ ನನಗೆ ಕೊಟ್ಟಿರುವುದನ್ನು ವಿನಮ್ರತೆಯಿಂದ ಸ್ವೀಕರಿಸುತ್ತೇನೆ ಎಂದರು

ಸಂದರ್ಭದಲ್ಲಿ ಮಾತನಾಡಿದ ಹಿರಿಯ ಸಾಹಿತಿ ಎಂ ಎನ್ ಸುಂದರ್ ರಾಜ್ ರವರು ಅವರು ಮೂಲತ ರಾಜಕಾರಣಿಯಾಗಿದ್ದರು ತನ್ನೊಳಗಿನ ಬರಹಗಾರ ಲೇಖಕ ಯಾವಾಗಲೂ ಜಾಗೃತನಾಗಿದ್ದಾನೆ ಇದರಿಂದ ಅವರು ತಮ್ಮ ಪ್ರಾಮಾಣಿಕ ರಾಜಕಾರಣವನ್ನು ಮಾಡಲು ಸಾಧ್ಯವಾಯಿತು ಎಂದು ಅಭಿಪ್ರಾಯಪಟ್ಟರು

ನಂತರ ಮಾತನಾಡಿದ ಜಿಲ್ಲಾ ಸರ್ವೋದಯ ಮಂಡಲದ ಅಧ್ಯಕ್ಷರಾದ ಆರ್ ಮನೋಹರ್ ರವರು ವೈ ಎಸ್ ವಿ ದತ್ತ ರಂತಹ ನೇರ ನಿಷ್ಟುರ ಪ್ರಾಮಾಣಿಕ ಆದರ್ಶ ರಾಜಕಾರಣವನ್ನು ಮಾಡಿಕೊಂಡು ಬಂದವರು ಸಾಮಾಜಿಕ ರಾಜಕೀಯ ಸೇವೆ ಯುವ ರಾಜಕಾರಣಿಗಳಿಗೆ ಮಾದರಿಯಾಗಿದೆ ರಾಜಕೀಯಕ್ಕೆ ಮೌಲ್ಯವನ್ನು ತುಂಬಿಕೊಟ್ಟವರು ಅವರು ಎಂದು ವಿಶ್ಲೇಷಣೆ ಮಾಡಿದರು

Shimoga News ಇದೇ ಸಂದರ್ಭದಲ್ಲಿ ಮಾತನಾಡಿದ ಸರ್ವೋದಯ ಜಿಲ್ಲಾ ಮಂಡಲದ ಕಾರ್ಯದರ್ಶಿಯಾದ ರೊಟೇರಿಯನ್ ಜಿ ವಿಜಯ್ ಕುಮಾರ್ ಅವರು ವೈ ಎಸ್ ವಿ ದತ್ತ ರವರ ಪ್ರಾಮಾಣಿಕ
ರಾಜಕಾರಣ,ಸಾಹಿತ್ಯ,ಲೇಖಕ ಬರಹಗಾರರಾಗಿ ಅವರು ಮಾಡಿದ ಸೇವೆಯನ್ನು ಸ್ಮರಿಸಿದರು. ಈ ಪ್ರತಿಷ್ಠಿತ ಪ್ರಶಸ್ತಿ ಬಂದಿರುವುದು ಅದು ಸಹ ನಮ್ಮ ಶಿವಮೊಗ್ಗ ಜಿಲ್ಲೆಯ ಹೆಮ್ಮೆಯ ರಾಜಕಾರಣಿ ಹೆಸರಿನ ಈ ಪ್ರಶಸ್ತಿಗೆ ಅವರು ಅರ್ಹ ವ್ಯಕ್ತಿ ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ನನ್ನ ಕನಸಿನ ಶಿವಮೊಗ್ಗದ ಎನ್ ಗೋಪಿನಾಥ್ ರವರು ಸುಮಾರು 40 ವರ್ಷದಿಂದ ರಾಜಕಾರಣದಲ್ಲಿದ್ದರು ಸರಳತೆಯಿಂದ ಜೀವಿಸುತ್ತಿದ್ದಾರೆ ಎಂದು ತಿಳಿಸಿದರು

ಇದೆ ಸಂದರ್ಭದಲ್ಲಿ ನನ್ನ ಕನಸಿನ ಶಿವಮೊಗ್ಗ ವೇದಿಕೆಯ ಎನ್ ಗೋಪಿನಾಥ್, ಆಕಾಶವಾಣಿ ಕೇಳುಗರ ಬಳಗದ ಚಿಕ್ಕಪ್ಪ ರಾಮೇಶ್ವರ, ಆಕಾಶವಾಣಿ ಆರ್ ಜೆ ಗಳಾದ ಗಣೇಶ್ ಕೆಂಚನ, ಸರ್ವೋದಯ ಮಂಡಲದ ಬಸವರಾಜಪ್ಪ, ರುದ್ರಪ್ಪ ಚೀಲೂರ್ ರುದ್ರಪ್ಪ ಚೀಲು, ಪ್ರೊಫೆಸರ್ ಸತ್ಯನಾರಾಯಣ, ಬಿಂದು ವಿಜಯ ಕುಮಾರ ಉಪಸ್ಥಿತರಿದ್ದರು

Klive Special Article ಕೆ ಲೈವ್ ವಿಶೇಷ.” ವಿಕ್ರಮ ಮತ್ತು ಶಾಲಿವಾಹನ ಶಕಪುರುಷರು” ಒಂದು ಚಿಂತನೆ.ಲೇ: ದಿಲೀಪ್ ನಾಡಿಗ್,ಶಿವಮೊಗ್ಗ.

0

ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

Klive Special Article ತೈತ್ತಿರೀಯ ಅರಣ್ಯಕದಲ್ಲಿರುವ ಶ್ಲೋಕದಂತೆ “ಕ್ವೇದಮಭ್ರಂ ನಿವಿಶತೇ ಕ್ವಾಯಂ ಸಂವತ್ಸರೋ ಮಿಥಃ|ಕ್ವಾಹಃ ಕ್ವೇಯಂ ದೇವರಾತ್ರೀ ಕ್ವ ಮಾಸಾ ಋತವಃ ಶ್ರಿತಾಃ”||

ಹೇ ಭಗವಂತ ಆಕಾಶದಲ್ಲಿ ಮೋಡಗಳನ್ನು ಹಿಡಿದಿಟ್ಟು ನಿಲ್ಲಿಸಿರುವವರು ಯಾರು? ಸಂವತ್ಸರ ಗಳನ್ನು ನಿಯಮಿಸಿದವರು ಯಾರು? ಹಗಲಿರುಳು ಹೇಗೆ ಸಂಭವಿಸುತ್ತದೆ? ಮಾಸ ಮತ್ತು ಋತುಗಳಿಗೆ ಆಧಾರ ಯಾವುದು?.. ಶಾಲಿವಾಹನ ಶಕೆಯಲ್ಲಿ ಬರುವ ಅರವತ್ತು ಸಂವತ್ಸರದಲ್ಲೊಂದಾದ ಪರಾಭವ ಸಂವತ್ಸರದ ಆಗಮನವಾಗಿದೆ. ವಸಂತದಲ್ಲಿ ಹೊಸ ಚಿಗುರು ಮೂಡುವಂತೆ ಎಲ್ಲರಲ್ಲಿ ಹೊಸ ಬೆಳಕು, ಭರವಸೆ ಮೂಡಲಿ, ಭಾಸ್ಕರನ ಕಿರಣಗಳಂತೆ ಸಾಧನೆಗಳು ಶೋಭಿಸಲಿ, ಬೇವಿನ ಕಹಿಯೂ, ಬೆಲ್ಲದ ಸವಿಯೂ ಸೇರಿದಂತೆ ಸುಖ ದುಃಖ ಗಳು ಸಮವಾಗಿರಲಿ, ಪರಾಭವ ಸಂವತ್ಸರದಲ್ಲಿ ಶತೃಗಳ ಪರಾವಭವವಾಗಲಿ, ಗೆಲುವು ವಿಜೃಂಭಿಸಲಿ, ಭಗವಂತನಿಂದ‌ ರಚಿತವಾದ ಪ್ರಕೃತಿಯ ನಿಯಮದಂತೆ ನಮ್ಮ ನಿಮ್ಮೆಲ್ಲರ ಬದುಕು ಹಸನಾಗಲಿ, ಈ ಪರಾಭವ ಸಂತ್ಸರದಲ್ಲಿ ಆರೋಗ್ಯ, ಆಯುಷ್ಯ, ನೆಮ್ಮದಿ, ಸಂಪತ್ತು ವೃದ್ಧಿಸಲಿ.

ಜಂಬೂದ್ವೀಪದ ಭರತವರ್ಷ, ಭರತಖಂಡದ ಶಕಪುರುಷರಲ್ಲೊಬ್ಬನಾದ ಶಾಲಿವಾಹ‌ನ ಶಕಪುರುಷರುಷನು ಎಲ್ಲರಿಗೂ ಹರ್ಷವನ್ನುಂಟುಮಾಡಲಿ.

ಹೊಸ ಸಂವತ್ಸರ ಪರಾಭವ ಸಂವತ್ಸರದ ಹಾರ್ಧಿಕ ಶುಭಾಶಯ.🌹🌹🌹🙏🙏🙏

ಕಲಿಯುಗದ ಆರು ಶಕಕರ್ತೃರು ಯುಧಿಷ್ಟಿರ, ವಿಕ್ರಮಾದಿತ್ಯ, ಶಾಲಿವಾಹನ, ವಿಜಯಾಭಿನಂದನ, ನಾಗಾರ್ಜುನ ಮತ್ತು ಬಲಿ.

ಕ್ರಿ.ಪೂ 3102ರಲ್ಲಿ ಆರಂಭವಾದ 4,32,000 ವರ್ಷಗಳ ಕಲಿಯುಗದಲ್ಲಿ ಯುಧಿಷ್ಟಿರ ಶಕೆ 3044 ವರ್ಷಗಳು (ಯುಧಿಷ್ಟಿರ ಶಕೆಯ ಒಟ್ಟೂ ಕಾಲ ದ್ವಾಪರ ಯುಗದ 36 + ಕಲಿಯುಗದ 3044 ವರ್ಷಗಳು = 3080 ವರ್ಷ, ಯುಧಿಷ್ಟಿರ ಶಕೆ ಶುರುವಾಗಿದ್ದು ಮಹಾಭಾರತ ಯುದ್ಧ ಮುಗಿದ ನಂತರ ಅರ್ಥಾತ್ ಕ್ರಿ.ಪೂ 3138ರಲ್ಲಿ).

ವಿಕ್ರಮಾದಿತ್ಯನಿಂದ ಶುರುವಾದ ವಿಕ್ರಮಶಕೆಯ ಅವಧಿ 135 ವರ್ಷ. ಅಂದರೆ 3044ನೇ ಕಲಿಯುಗ ವರ್ಷದಿಂದ 3179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಪೂ 57ರಿಂದ ಕ್ರಿ.ಶ 78ರ ತನಕ)

ಶಾಲಿವಾಹನ ಶಕೆಯ ಅವಧಿ 18,೦೦೦ ವರ್ಷಗಳು. 3179ನೇ ಕಲಿಯುಗ ವರ್ಷದಿಂದ 21,179ನೇ ಕಲಿಯುಗ ವರ್ಷದವರೆಗೆ.(ಕ್ರಿ.ಶ 78- ಕ್ರಿ.ಶ 21257)

ಇದಾದ ನಂತರ 1೦,೦೦೦ ವರ್ಷಗಳ ವಿಜಯಾಭಿನಂದನ ಶಕೆ, 4 ಲಕ್ಷ ವರ್ಷಗಳ ನಾಗಾರ್ಜುನ ಶಕೆ, 821 ವರ್ಷಗಳ ಬಲಿ ಶಕೆ ಬರಲಿಕ್ಕಿದೆಯಷ್ಟೆ. ಇವು ಆರನ್ನೂ ಸೇರಿಸಿದರೆ ಅದು ಕಲಿಯುಗದ ಅವಧಿಯಾದ 4,32,000 ವರ್ಷಗಳಾಗುತ್ತದೆ. ಕೊನೆಯ ಮೂರು ಶಕೆಗಳು ಭವಿಷ್ಯತ್ಕಾಲದ್ದಾದ್ದರಿಂದ ಅವುಗಳ ಚಿಂತೆ ಬಿಟ್ಟುಬಿಡೋಣ.

ಜ್ಯೋತಿರ್ವಿಧಾಭರಣದಲ್ಲಿ

ಯುಧಿಷ್ಟೀರೋಭೂ ದ್ಭುವಿ ಹಸ್ತಿನಾಪುರೇ | ತಥೋಜ್ಜಯಿನ್ಯಾಂ ಪುರಿ ವಿಕ್ರಮಾಹವಯಃ ||

ಶಾಲೇಯಧಾರಾಭೃತಿ ಶಾಲಿವಾಹನಃ | ಸುಚಿತ್ರಕೂಟೇ ವಿಜಯಾಭಿನಂದನಃ ||

ನಾಗಾರ್ಜುನೋ ರೋಹಿತಕೇ ಕ್ಷಿತೌ ಬಲಿ | ರ್ಭವಿಷತೀಂದ್ರೋ ಭೃಗುಕಚ್ಛಪತ್ತನೇ ||

ಚಂದ್ರವಂಶದ ಯುಧಿಷ್ಟಿರನ ರಾಜಧಾನಿ ಹಸ್ತಿನಾಪುರ, ಪ್ರಮಾರ ವಂಶದ ವಿಕ್ರಮನದ್ದು ಉಜ್ಜಯಿನೀ, ಅದೇ ವಂಶದ ಶಾಲಿವಾಹನನ ರಾಜಧಾನಿ ಧಾರಾನಗರ. ಗೋಹಿಲ ವಂಶದ ವಿಜಯಾಭಿನಂದನನದ್ದು ಚಿತ್ರಕೂಟ, ಸಿಸೋದರ ಕುಲದ ನಾಗಾರ್ಜುನ ಆಳುವುದು ರೋಹಿತಕದಲ್ಲಿ, ಕಲ್ಕಿವಂಶದ ಬಲಿಯ ರಾಜಧಾನಿ ಭೃಗುಕಚ್ಛ.

ಇದೇ ಕಾಳಿದಾಸ ವಿಕ್ರಮನನ್ನು ಮುಂದಿನ ಶ್ಲೋಕದಲ್ಲಿ ಹೊಗಳಿದ್ದಾನೆ.

ದೀಯತಾಂ ದಶಲಕ್ಷಾಣಿ ಶಾಸನಾನಿ ಚತುರ್ದಶ |

ಹಸ್ತೇ ನ್ಯಸ್ತಚತುಃಶ್ಲೋಕೇ ಉತಾಗಚ್ಛತು ಗಚ್ಛತಃ

ಸರಸ್ವತೀ ಸ್ಥಿತಾ ವಕ್ತ್ರೇ ಲಕ್ಷ್ಮೀಃ ಕರಸರೋರುಹೇ |

ಸರ್ವದಾ ಸರ್ವದೋ ಸೀತಿ ಮಿಥ್ಯಾ ಸಂಸ್ತೂಯಸೇ ಬುಧೈ |

ನಾರಯೋ ಲೇಭಿರೇ ಪೃಷ್ಟಂ ನ ವಕ್ಷಃ ಪರಯೋಷಿತಃ ||

ವಿಕ್ರಮನು ಎಷ್ಟು ದೊಡ್ಡ ವಿದ್ವಜ್ಜನಪೋಷಕನೆಂದರೆ ಕೈಯಲ್ಲಿ ನಾಲ್ಕು ಶ್ಲೋಕಗಳಿದ್ದರೆ ಅವನನ್ನು ಎಂಥ ಸಮಯದಲ್ಲೂ ಭೇಟಿಯಾಗಬಹುದಿತ್ತಂತೆ. ಕವಿಗಳ ಪ್ರತಿ ಶ್ಲೋಕಕ್ಕೂ ಹತ್ತು ಲಕ್ಷ ವರಹಗಳು, ಅದಕ್ಕಾಗಿ ಹದಿನಾಲ್ಕು ಶಾಸನಗಳು ಬಹುಮಾನವಾಗಿ ದೊರೆಯುತ್ತಿದ್ದವು.

ಹೇ ರಾಜನೇ! ಸರಸ್ವತಿಯೇ ನಿನ್ನ ಮುಖ, ಲಕ್ಷ್ಮಿಯೇ ನಿನ್ನ ಕೈಗಳು. ವಿದ್ವಾಂಸರು ನಿನ್ನನ್ನು ಕೇಳಿದ್ದೆಲ್ಲ ಕೊಡುವ ದಾನಿಯೆಂದು ಹೊಗಳುತ್ತಾರೆ. ಅದು ಮಾತ್ರ ಬರಿ ಸುಳ್ಳು. ಶತ್ರುಗಳಿಗೆ ನಿನ್ನ ಬೆನ್ನು, ಮತ್ತು ಪರಸ್ತ್ರೀಯರಿಗೆ ನಿನ್ನ ಎದೆ ಎಂದಿಗೂ ಸಿಗಲಾರದು.

Klive Special Article  ಏಳನೇ ಶತಮಾನದ ಭೋಜರಾಜನನ್ನು ಕುರಿತು ಹದಿನೈದನೇ ಶತಮಾನದಲ್ಲಿ ಬಂದ ಭೋಜಪ್ರಬಂಧದಲ್ಲಿ ಇದೇ ಶ್ಲೋಕಗಳನ್ನು ಬಳಸಿಕೊಳ್ಳಲಾಗಿದೆ ! ವರರುಚಿ, ಭಾಸ, ಮಾಘ, ಭವಭೂತಿ, ದಂಡಿ, ಕಾಳಿದಾಸರು ಸೇರಿ ಸಂಸ್ಕೃತ ಕವಿಗಳನ್ನೆಲ್ಲ ಭೋಜನ ಆಸ್ಥಾನದಲ್ಲಿದ್ದರೆಂಬಂತೆ ಒಟ್ಟಿಗೆ ತುರುಕಿ ಕಲಸುಮೆಲೋಗರಗೊಳಿಸಿದ ಭೋಜಪ್ರಬಂಧವೆಂಬ ಶುದ್ಧ ಕಾಲ್ಪನಿಕ ಕೃತಿಯನ್ನು ಹಿಡಿದುಕೊಂಡು ಇತಿಹಾಸಕಾರರು ಭೋಜನನ್ನೇ ವಿಕ್ರಮಾದಿತ್ಯನನ್ನಾಗಿಸಿದರು. ಭೋಜಪ್ರಬಂಧದ ಅರ್ಧಕ್ಕರ್ಧ ಕಥೆ ೧೩ನೇ ಶತಮಾನದಲ್ಲಿ ರಚಿತವಾದ ಕುಮಾರದಾಸನ ಕುರಿತಾದ ಸಿಂಹಳದ ’ಪೂಜಾವಳಿ’ ಎಂಬ ಕೃತಿಯನ್ನು ಬಳಸಿಕೊಂಡದ್ದು. ಶುದ್ಧ ವೈದಿಕ ಕಾಳಿದಾಸ ಕುರಿಕಾಯುವ ಪೆದ್ದನಾಗಿಬಿಟ್ಟ.

ವಿಕ್ರಮನ ಆಸ್ಥಾನ ಜ್ಯೋತಿಷಿಯಾದ ಶ್ರೀಕೃಷ್ಣಮಿಶ್ರನ ಜ್ಯೋತಿಷ್ಯಫಲರತ್ನಮಾಲಾ ಗ್ರಂಥದಲ್ಲಿ.

ಶ್ರೀವಿಕ್ರಮಾರ್ಕೋ ಜಗತೀತಲೇಸ್ಮಿನ್ | ಜೀಯಾನ್ಮನುಪ್ರಖ್ಯಯಶಾ ನರೇಂದ್ರಃ ||

ಪುಪೋಷ ಯಃ ಕೋಟಿಸುವರ್ಣತೋ ಮಾಂ | ಸಬಾಂಧವಂ ಸಪ್ತತಿ ವತ್ಸರಾಣಿ ||

ನನ್ನನ್ನೂ, ನನ್ನ ಬಂಧುಗಳನ್ನೂ ಎಪ್ಪತ್ತು ವರ್ಷಗಳ ಕಾಲ ಕಾಪಾಡಿದ, ನನಗೆ ಒಂದು ಕೋಟಿ ಸುವರ್ಣ ನಾಣ್ಯಗಳಿಂದ ಕನಕಾಭಿಷೇಕ ನಡೆಸಿದ ಅಭಿನವ ಮನುವಿನಂಥ ವಿಕ್ರಮಾದಿತ್ಯ ಚಕ್ರವರ್ತಿಯು ಯಾವಾಗಲೂ ಶಾಂತಿ ಮತ್ತು ಯಶಸ್ಸಿನಿಂದ ರಾರಾಜಿಸುವಂಥಾಗಲಿ ಎಂದು ಹಾರೈಸುತ್ತಾನೆ.

ವಿಕ್ರಮನು ದಕ್ಷಿಣ ಸಾಗರದಿಂದ ಹಿಮಾಲಯದವರೆಗೂ ಆಡಳಿತ ನಡೆಸಿ, ಶಕರನ್ನು ಒದ್ದೋಡಿಸಿ, ನೇಪಾಳವನ್ನು ಗೆದ್ದು ಅಂಶುವರ್ಮನನ್ನು ಸಾಮಂತನನ್ನಾಗಿಸಿ ವಿಕ್ರಮ ಶಕೆಯನ್ನು ಕ್ರಿ.ಪೂ 57ರಲ್ಲಿ ಸ್ಥಾಪಿಸಿದ. ಇದಾದ ನಂತರ ಉಜ್ಜೈನಿಗೆ ಹಿಂದಿರುಗಿ 7೦ ವರ್ಷಗಳ ಕಾಲ ಕವಿಗಳು, ವಿದ್ವಾಂಸರ ಜೊತೆ ತನ್ನ ಆಸ್ಥಾನದಲ್ಲಿ ಕಾಲಕ್ಷೇಪ ನಡೆಸಿದ. ವಿಕ್ರಮ ಪಟ್ಟಕ್ಕೇರಿದ್ದು 2೦ನೇ ವರ್ಷದಲ್ಲಿ, ನಂತರ 24 ವರ್ಷಗಳ ಕಾಲ ದಂಡಯಾತ್ರೆಯಲ್ಲಿ ಈಡೀ ಭರತಖಂಡವನ್ನು ಗೆದ್ದು ಶಕಸ್ಥಾಪಕನಾಗಿ, ಜ್ಯೋತಿಷ್ಯಫಲರತ್ನಮಾಲದ ರಚನೆಯ ವೇಳೆಗೆ 7೦ ವರ್ಷಗಳನ್ನು ವಿದ್ವಾಂಸರ ಮಧ್ಯೆ ಕಳೆದಿದ್ದ.

ಇದು ಭಾರತದ ಇತಿಹಾಸ,
ಇದು ಶ್ರೇಷ್ಠ ಇತಿಹಾಸ.

ದಿಲೀಪ್ ನಾಡಿಗ್

Kote SeethaRamanjaneya Temple ಇಂದಿನಿಂದ ಕೋಟೆ ಶ್ರೀಸೀತಾರಾಮಾಂಜನೇಯ ಸ್ವಾಮಿ ದೇಗುಲದಲ್ಲಿ ಶ್ರೀರಾಮ ನವಮಿ ಉತ್ಸವಕ್ಕೆ ಚಾಲನೆ

0

Kote SeethaRamanjaneya Temple ಕೋಟೇ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಾಲಯದಲ್ಲಿ ಶ್ರೀ ರಾಮ ನವಮಿ ಉತ್ಸವದ ಭಾಗವಾಗಿ ಪ್ರತಿ ದಿನ ಸಂಜೆ 06.30ಕ್ಕೆ ವಿವಿಧ ಧಾರ್ಮಿಕ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ದೇವರಿಗೆ ವಿಶೇಷ ಅಲಂಕಾರಗಳನ್ನು ಏರ್ಪಡಿಸಲಾಗಿದೆ.

ಮಾ. 19ರ ಗುರುವಾರ ಯುಗಾದಿ ಹಬ್ಬ ಪಂಚಾಂಗ ಶ್ರವಣ ನಡೆಯಲಿದ್ದು, ಮಹಾವಿಷ್ಣುವಿನ ಅಲಂಕಾರವಿದೆ. ಮಾ. 20ರ ಶುಕ್ರವಾರ ಶ್ರೀಮತಿ ಭವಾನಿ ಅನಂತರಾಮ್ ಮತ್ತು ಸಂಗಡಿಗರು, ಮತ್ತೂರು ಇವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, ಹಾಗೂ ದೇವರಿಗೆ ವಿಶ್ವಾಮಿತ್ರ ಯಜ್ಞ ಸಂರಕ್ಷಣೆ ಅಲಂಕಾರ, ಮಾ. 21ರ ಶನಿವಾರ ಕಗ್ಗ ಖ್ಯಾತಿಯ ನಟೇಶ್‌ರವರಿಂದ ಸೀತಾ ಪರಿತ್ಯಾಗ – ಉಪನ್ಯಾಸ, ದೇವರಿಗೆ ಅಹಲ್ಯಾ ಶಾಪ ವಿಮೋಚನೆ ಅಲಂಕಾರವಿದೆ. 22ರ ಭಾನುವಾರ ನಾಗಶ್ರುತಿ ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಸೀತಾ ಕಲ್ಯಾಣ ಅಲಂಕಾರವಿದೆ. ಮಾ. 23ರ ಸೋಮವಾರ ನಡೆಯುವ ಮುದ್ರಿಕಾ ಪ್ರದಾನ ಗಮಕ ವಾಚನದಲ್ಲಿ, ಡಾ. ಸನತ್ ಕುಮಾರ್‌ರವರಿಂದ ವಾಚನ, ಅಚ್ಯುತ ಅವಧಾನಿಯವರಿಂದ ವ್ಯಾಖ್ಯಾನ ನಡೆಯಲಿದೆ.

Kote SeethaRamanjaneya Temple ದೇವರಿಗೆ ಗುಹಾತಿಥ್ಯ ಅಲಂಕಾರವಿದೆ. ಮಾ. ೨೪ರ ಮಂಗಳವಾರ ಸಂಭ್ರಮ ಮತ್ತು ತಂಡದವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತವಿದ್ದು, ದೇವರಿಗೆ ಕಬಂಧ ಬಾಹು ವಧೆ ಅಲಂಕಾರವಿದೆ. ಮಾ. 25ರ ಬುಧವಾರ ನಾದ ಸಂಭ್ರಮ ಕಾರ್ಯಕ್ರಮವಿದ್ದು, ದೇವರಿಗೆ ಶಬರಿ ಅತಿಥ್ಯ ಅಲಂಕಾರವಿದೆ. ಮಾ. 26ರ ಗುರುವಾರ ಶೃಂಗೇರಿ ಹೆಚ್. ಎಸ್. ನಾಗರಾಜ್ ಮತ್ತು ಸಂಗಡಿಗರಿಂದ ಕರ್ನಾಟಕ ಶಾಸ್ತ್ರೀಯ ಕಾರ್ಯಕ್ರಮವಿದ್ದು, ದೇವರಿಗೆ ವಿಭೀಷಣ ಶರಣಾಗತಿ ಅಲಂಕಾರವಿದೆ. ಮಾ. 27ರ ಶುಕ್ರವಾರ ಬೆಳಗ್ಗೆ ಮೂಲ ರಾಮರಿಗೆ ಮಹಾಭಿಷೇಕ, ಸಂಜೆ 5ಕ್ಕೆ ಪಟ್ಟಾಭಿಷೇಕ, ಸಂಜೆ 7ಕ್ಕೆ ಉತ್ಸವ, ರಾವಣ ಸಂಹಾರ ಮತ್ತು ಪುಷ್ಪಕ ವಿಮಾನ ಅಲಂಕಾರ, ಮಾ. 28ರ ಶನಿವಾರ ಸಂಜೆ 7.00ಕ್ಕೆ ಬೆಳ್ಳಿ ಮಂಟಪದಲ್ಲಿ ರಾಜಬೀದಿ ಉತ್ಸವ ನಡೆಯಲಿದೆ.

ಪ್ರತಿದಿನ ಸಂಜೆ 5 ರಿಂದ ವಿವಿಧ ಭಜನಾ ಮಂಡಳಿ ವತಿಯಿಂದ ಸಂಜೆ ಭಜನಾ ಕಾರ್ಯಕ್ರಮವಿದ್ದು, ರಾತ್ರಿ ವಸಂತ ಸೇವೆ (ಪಾನಕ, ಕೋಸಂಬರಿ) ವಿತರಣೆ ನಡೆಯಲಿದೆ.
ಭಕ್ತಾದಿಗಳು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಕೋರಲಾಗಿದೆ.