Thursday, May 7, 2026
Thursday, May 7, 2026
Home Blog Page 47

ಮಹಿಳೆಯರ ಸಾಧನೆ ಗುರುತಿಸಿ ಗೌರವಿಸುವುದು ಒಳ್ಳೆಯ ಸಂಪ್ರದಾಯ- ಸಂದೇಶ್ ಉಪಾಧ್ಯ

0

ಮಹಿಳೆಯರ ಸಾಧನೆಯನ್ನು ಗುರುತಿಸಿ ಗೌರವಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ ಹೇಳಿದರು.

ನಾಗಸುಬ್ರಹ್ಮಣ್ಯ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಸದ್ದಿಲ್ಲದೇ ಸೇವೆ ಮಾಡುತ್ತಿರುವ ಸಾಕಷ್ಟು ಜನ ಮಹಿಳೆಯರು ನಮ್ಮಲ್ಲಿ ಇರುತ್ತಾರೆ. ಅವರ ಸೇವೆ ಸಮಾಜಕ್ಕೆ ತುಂಬಾ ಅಗತ್ಯವಾಗಿರುತ್ತದೆ. ಅಂತಹ ಮಹಿಳೆಯರನ್ನು ಗುರುತಿಸಿ ಗೌರವಿಸಿದಾಗ ಸಂಸ್ಥೆಗೆ ಒಳ್ಳೆಯ ಹೆಸರು ಬರುತ್ತದೆ ಎಂದು ತಿಳಿಸಿದರು.

ಮಹಿಳೆಯರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಾಗ ಅವರ ಪ್ರತಿಭೆ ಅನಾವರಣಗೊಳ್ಳುತ್ತದೆ. ಸಮಾಜಮುಖಿಯಾಗಿ ಸಹ ಬೆಳೆಯಲು ಅವಕಾಶ ದೊರಕುತ್ತದೆ. 40 ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಇವರ ಸೇವೆ ಅನನ್ಯ. ಇಂಥವರ ಸಂಖ್ಯೆ ಸಮಾಜದಲ್ಲಿ ಹೆಚ್ಚಾಗಬೇಕು ಎಂದು ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಒಳ್ಳೆಯ ವ್ಯಕ್ತಿಗಳನ್ನು ಗುರುತಿಸಿ ಗೌರವಿಸಿದಾಗ ಸಮಾಜದಲ್ಲಿ ಅಂತಹವರ ಸೇವೆ ಇನ್ನೂ ಹೆಚ್ಚಾಗುತ್ತದೆ ಎಂದು ಹೇಳಿದರು.

ಶ್ರೀ ಶಾರದಾ ಶಂಕರ ಭಜನಾ ಮಂಡಳಿ ವತಿಯಿಂದ ಶಿಕ್ಷಕಿ ರಾಜಲಕ್ಷ್ಮೀ ಅವರನ್ನು ಸನ್ಮಾನಿಸಲಾಯಿತು. ರಾಜಲಕ್ಷ್ಮೀ ಅವರು 3000 ಮಹಿಳೆಯರಿಗೆ ಸೌಂದರ್ಯ ಲಹರಿ, ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ, ಶಿವಾನಂದ ಲಹರಿ ಸ್ತೋತ್ರಗಳನ್ನು ಹೇಳಿಕೊಟ್ಟಿದ್ದಾರೆ. 30ನೇ ವಯಸ್ಸಿನಿಂದ ಈವರೆಗೂ ತರಬೇತಿ ನೀಡುತ್ತಿದ್ದಾರೆ.

ಸನ್ಮಾನಿತ ರಾಜಲಕ್ಷ್ಮೀ ಅವರು ಗೀತೆಗಳನ್ನು ಹಾಡಿದರು. ಶ್ರೀ ಶಾರದಾ ಶಂಕರ ಭಜನಾ ಮಂಡಳಿ ಸದಸ್ಯರು ಇದ್ದರು. ನಾಗಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ರಾಮಲಿಂಗಪ್ಪ, ಚಿತ್ರಲೇಖಾ ಉಪಾಧ್ಯ, ಸುರೇಶ್, ಇನ್ನರ್‌ವ್ಹೀಲ್ ಮಾಜಿ ಅಧ್ಯಕ್ಷೆ ಬಿಂದು ವಿಜಯಕುಮಾರ್ ಹಾಗೂ ವಿವೇಕ್ ಭಾಗವತ್ ಇದ್ದರು.

ಕುಸ್ತಿಪಟುಗಳ ಸಂಘಟನೆಯಿಂದ ಮೆಗ್ಗಾನ್ ಆಸ್ಪತ್ರೆ ರೋಗಿಗಳಿಗೆ ಬ್ರೆಡ್,ಕೇಕ್,ಹಣ್ಣು ಹಂಪಲು ವಿತರಣೆ

0

ಭಾರತೀಯ ಕುಸ್ತಿ ಸಂಘದ ಜಂಟಿ ಕಾರ್ಯದರ್ಶಿ, ಪರಿಸರವಾದಿ, ಮಹಾಲಿಂಗೇಶ್ವರ ಟ್ರಸ್ಟ್ ಅಧ್ಯಕ್ಷ ಮತ್ತು ಕರ್ನಾಟಕ ರಾಜ್ಯ ಕುಸ್ತಿ ಸಂಘದ ಅಧ್ಯಕ್ಷ ಹಾಗೂ ಜಯ ಕರ್ನಾಟಕ ಜನಪರ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಬೆhttps://klive.news/2024/01/14/41395/ಳ್ಳಿ ಪಾಡಿ ಗುಣ ರಂಜನ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಕರ್ನಾಟಕ ರಾಜ್ಯದ್ಯಂತ ಕಾರ್ಯಕರ್ತರು ಮತ್ತು ಅಭಿಮಾನಿಗಳ ಹರ್ಷೋದ್ಗಾರ ದೊಂದಿಗೆ ಬಡ ರೋಗಿಗಳಿಗೆ ಮತ್ತು ಆಶ್ರಮಗಳಿಗೆ ರಾಜ್ಯದ ವಿವಿಧ ಭಾಗಗಳಲ್ಲಿ ಅನ್ನ ಸಂತರ್ಪಣೆ ಹಣ್ಣು ಹಂಪಲು ವಿತರಣೆ ಕಾರ್ಯಕ್ರಮದ ಅಂಗವಾಗಿ ಶಿವಮೊಗ್ಗ ಮೆಗನ್ ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ಡು, ಕೇಕ್, ಹಣ್ಣು ಹಂಪಲುಗಳನ್ನು ನೀಡುವ ಮುಖಾಂತರ ಶಿವಮೊಗ್ಗ ಜಿಲ್ಲಾ ಜಯ ಕರ್ನಾಟಕ ಜನಪರ ವೇದಿಕೆ ವತಿಯಿಂದ ಜನ್ಮದಿನವನ್ನು ಆಚರಿಸಲಾಯಿತು.

ರಾಜ್ಯ ಸಮಿತಿಯ ರಘುವೀರ್ ಸಿಂಗ್,
ಜಿಲ್ಲಾಧ್ಯಕ್ಷ ಸುರೇಶ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಹುಲಿಗಿ ಕೃಷ್ಣ, ಪರಶುರಾಮ್, ನಾಗರಾಜ್, ವಿಜಯಕುಮಾರ್, ನವೀನ್, ಪವನ್, ಶಿಕಾರಿಪುರ ತಾಲೂಕ ಅಧ್ಯಕ್ಷ ಶಿವಯ್ಯ ಎನ್ ಶಾಸ್ತ್ರಿ, ಕಾರ್ಯದರ್ಶಿ ಇಮ್ರಾನ್, ಚಂದ್ರಶೇಖರ, ಶ್ರೀನಿವಾಸ್, ಸ್ಟೆಲ್ಲಾ ಮಾರ್ಟಿನ್, ಅರ್ಚನಾ, ರಂಗನಾಥ್, ಮಂಜುನಾಥ್, ಇನ್ನು ಹಲವರಿದ್ದರು.

Dinesh Gundu Rao ಗೃಹ ಆರೋಗ್ಯ ಯೋಜನೆಯಿಂದ ಗಂಭೀರ ಆರೋಗ್ಯ ಸಮಸ್ಯೆಗಳ ಪತ್ತೆ ಸಾಧ್ಯವಾಗಿದೆ- ಸಚಿವ ದಿನೇಶ್ ಗುಂಡೂರಾವ್

0

Dinesh Gundu Rao ರೋಗ ಬರುವ ಮುನ್ನವೇ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆಗಳನ್ನು ಕೊಂಡೊಯ್ಯುವ ನಮ್ಮ ಸರ್ಕಾರದ ಮಹತ್ವಾಕಾಂಕ್ಷಿ ‘ಗೃಹ ಆರೋಗ್ಯ’ ಯೋಜನೆ ಸಫಲತೆ ಕಂಡಿದೆ. ಆದರೆ, ಆ‌ ವರದಿ ಬೇಸರದ ಸಂಗತಿಗೆ ಹಾಗೂ ಆರೋಗ್ಯದ ಬಗ್ಗೆ ನಮ್ಮ ಗ್ರಾಮೀಣರು ಹೆಚ್ಚು ಆಸಕ್ತಿ ತೋರಬೇಕಾದ ಸಂದರ್ಭಕ್ಕೆ ಕಾರಣವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಇತ್ತೀಚಿನ ನಡೆಸಿದ ತಪಾಸಣಾ ವರದಿಯು ಒಂದು ಆಘಾತಕಾರಿ ಸತ್ಯವನ್ನು ಹೊರಹಾಕಿದ್ದು, ನಗರ ಪ್ರದೇಶಗಳಿಗಿಂತ ಹೆಚ್ಚಾಗಿ ನಮ್ಮ ಗ್ರಾಮೀಣ ಭಾಗದ ಜನರಲ್ಲಿ ರಕ್ತದೊತ್ತಡದ (High BP) ಸಮಸ್ಯೆ ಅತಿಹೆಚ್ಚು ಕಾಣಿಸಿಕೊಳ್ಳುತ್ತಿದೆ.

ರಾಜ್ಯಾದ್ಯಂತ 30 ವರ್ಷ ಮೇಲ್ಪಟ್ಟ ಸುಮಾರು 76 ಲಕ್ಷ ಜನರ ತಪಾಸಣೆ ನಡೆಸಲಾಗಿದ್ದು, ಈ ಪೈಕಿ 35.27 ಲಕ್ಷಕ್ಕೂ ಅಧಿಕ ಮಂದಿ ಹೈ ಬಿ.ಪಿ ಸಮಸ್ಯೆಯಿಂದ ಬಳಲುತ್ತಿರುವುದು ಪತ್ತೆಯಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಈ ಪ್ರಮಾಣ ಶೇ. 19ರಷ್ಟಿದ್ದರೆ, ರಾಜ್ಯದ ಇತರ ಜಿಲ್ಲೆಗಳಲ್ಲಿ ಶೇ. 43.9ರಷ್ಟು ಪ್ರಕರಣಗಳು ದಾಖಲಾಗಿರುವುದು ಆತಂಕದ ಸಂಗತಿಯಾಗಿದೆ.

ಜಿಲ್ಲಾವಾರು ಅಂಕಿ-ಅಂಶಗಳನ್ನು ನೋಡುವುದಾದರೆ ಬೆಳಗಾವಿಯಲ್ಲಿ ಅತಿಹೆಚ್ಚು ಅಂದರೆ 3,86,257 ಪ್ರಕರಣಗಳು ವರದಿಯಾಗಿವೆ.
ಮೈಸೂರಿನಲ್ಲಿ 1,94,712, ತುಮಕೂರಿನಲ್ಲಿ 1,94,191, ಬಳ್ಳಾರಿಯಲ್ಲಿ 1,91,917 ಹಾಗೂ ಧಾರವಾಡದಲ್ಲಿ 1,74,543 ಪ್ರಕರಣಗಳು ಪತ್ತೆಯಾಗಿವೆ. ಈ ಅಂಕಿ-ಅಂಶಗಳು ನಮ್ಮ ‘ಗೃಹ ಆರೋಗ್ಯ’ ಯೋಜನೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಸಾಕ್ಷಿಯಾಗಿವೆ.

Dinesh Gundu Rao ಮನೆ ಮನೆಗೆ ತೆರಳಿ ತಪಾಸಣೆ ನಡೆಸುತ್ತಿರುವುದರಿಂದ ಇಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ನಾವು ಗುರುತಿಸಲು ಸಾಧ್ಯವಾಗಿದೆ.
ನಾಡಿನ ಜನತೆ ಈ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಗೃಹ ಆರೋಗ್ಯ ಯೋಜನೆಯಡಿ ನಿಮ್ಮನ್ನು ಕಾಳಜಿ ಮಾಡಲು ಮತ್ತು ನಿಮಗೆ ಸೂಕ್ತ ಚಿಕಿತ್ಸೆ ಒದಗಿಸಲು ನಾವಿದ್ದೇವೆ. ಆದರೆ, ನೀವು ಸರಿಯಾದ ಆಹಾರ ಸೇವನೆ, ಉತ್ತಮವಾದ ಜೀವನಶೈಲಿಯನ್ನು ರೂಢಿಸಿಕೊಳ್ಳುವ ಮೂಲಕ ನಿಮ್ಮ ಆರೋಗ್ಯ ಸುಧಾರಣೆಗೆ ಗಮನ ನೀಡಬೇಕು ಎಂದು ಸಚಿವರು ತಿಳಿಸಿದ್ದಾರೆ.

CM Siddaramaiah ಮೌಢ್ಯತೆ ವಿರುದ್ಧ ಸಿಡಿದೆದ್ದುಸಮಸಮಾಜದ ಕನಸು ಬಿತ್ತಿದ ಶರಣ ದೇವರ ದಾಸಿಂಯ್ಯ- ಸಿದ್ಧರಾಮಯ್ಯ

0

CM Siddaramaiah ಮೌಢ್ಯ, ಕಂದಾಚಾರಗಳ‌ ಹೆಸರಿನಲ್ಲಿ ತಳ ಸಮುದಾಯಗಳ ಜನರನ್ನು ಶೋಷಣೆಗೊಳಪಡಿಸಿದ್ದ ಸಮಾಜದ ಪಟ್ಟಭದ್ರ ಶಕ್ತಿಗಳ ವಿರುದ್ಧ ಸಿಡಿದೆದ್ದು, ಸಮಸಮಾಜದ ಕನಸು ಬಿತ್ತಿದ ಆದ್ಯ ವಚನಕಾರ ದೇವರ ದಾಸಿಮಯ್ಯನವರು ಎಂದು ಸಿಎಂ ಸಿದ್ದರಾಮಯ್ಯನವರು ಹೇಳಿದ್ದಾರೆ.

ದಾಸಿಮಯ್ಯನವರು ಸೇರಿದಂತೆ ಶರಣರು ಮುನ್ನಡೆಸಿದ ಸಾಮಾಜಿಕ ಹಾಗೂ ಧಾರ್ಮಿಕ ಚಳವಳಿಯು ನೊಂದ ಜೀವಗಳೊಳಗೆ ಪ್ರತಿರೋಧದ ಧ್ವನಿ ಹುಟ್ಟಲು ಪ್ರೇರಣೆಯಾಯಿತು ಎಂದಿದ್ದಾರೆ.

CM Siddaramaiah ವಚನಗಳ ಮೂಲಕ ಅರಿವಿನ ಜ್ಯೋತಿ ಬೆಳಗಿದ ದೇವರ ದಾಸಿಮಯ್ಯನವರನ್ನು ಈ ದಿನ ನೆನೆದು, ನಮಿಸುತ್ತೇನೆ ಎಂದು ಹೇಳಿದ್ದಾರೆ.

Sagara News ಸಾಗರದಲ್ಲಿ “ಕ್ಯಾಂಪಸ್ ಕಟ್ಟೆ”.ಸಾಧಕಿಯರ ಬಗ್ಗೆ ವಿದ್ಯಾರ್ಥಿನಿಯರಿಂದ ಪರಿಚಯ.

0

Sagara News ಮಹಿಳಾ ಸಬಲೀಕರಣ ಪ್ರಾಮುಖ್ಯತೆ ಪಡೆಯುತ್ತಿರುವ ಅದೂ ಮಹಿಳಾ ದಿನಾಚರಣೆಯ ತಿಂಗಳಿನಲ್ಲಿ ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೇಜಿನ ವಿದ್ಯಾರ್ಥಿನಿಯರು ಭದ್ರಾವತಿಯ ಆಕಾಶವಾಣಿ ಕೇಂದ್ರದಿಂದ ಶುಕ್ರವಾರದಂದು ಕಾಲೇಜಿನಲ್ಲಿ ನಡೆಸಿದ ಕ್ಯಾಂಪಸ್ ಕಟ್ಟೆ ಕಾರ್ಯಕ್ರಮದಲ್ಲಿ ಮಹಿಳಾ ಸಾಧಕಿಯರ ಕುರಿತು ಅದ್ಭುತವಾಗಿ ಬೆಳಕು ಚೆಲ್ಲಿದರು. ಸ್ವತಂತ್ರ ಹೋರಾಟ, ರಾಜ್ಯಾಡಳಿತ, ಸಮಾಜ ಸುಧಾರಣೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕಿಯರಾದ ಬೆಳವಡಿ ಮಲ್ಲಮ್ಮ, ಕೆಳದಿ ಚೆನ್ನಮ್ಮ, ರಾಣಿ ಚೆನ್ನ ಭೈರಾದೇವಿ, ಅಕ್ಕಮಹಾದೇವಿ, ಸಾಹಿತಿ ಸಹನಾ ವಿಜಯಕುಮಾರ್, ಸಬಿತಾ ಬನ್ನಾಡಿ ಮತ್ತು ದೀಪಾ ಬಸ್ತಿ ಯವರ ಕೊಡುಗೆ ಮತ್ತು ಸಾಧನೆಗಳ ಕುರಿತು ವಿದ್ಯಾರ್ಥಿನಿಯರು ಮಾತನಾಡಿದರು.
ಭೈರಪ್ಪನವರ ಛಾಯೆಯಂತೆ ಬಿಂಬಿತರಾಗಿರುವ ಮತ್ತು ಮಾನಸ ಪುತ್ರಿ ಎಂದೇ ಕರೆಯಲ್ಪಡುವ ಸಹನಾ ವಿಜಯಕುಮಾರ್ ಅವರ ಬಗ್ಗೆ ಪ್ರಥಮ ಬಿ.ಎ.ವಿದ್ಯಾರ್ಥಿನಿ ಸಂಜನಾ ಮಾತನಾಡಿ ಸಹನಾ ವಿಜಯಕುಮಾರ್ ರವರ ಬರಹದಲ್ಲಿ ಎತ್ತಿರುವ ಪ್ರಶ್ನೆಗಳು, ಅವರ ವೈಚಾರಿಕತೆ ಮತ್ತು ಕಾದಂಬರಿಗಳ ಬಗ್ಗೆ ಸಮಗ್ರವಾಗಿ ವಿವರಿಸಿದರು. ಪೋರ್ಚುಗೀಸರಿಗೆ ಸಿಂಹಸ್ವಪ್ನವಾಗಿದ್ದ ಮತ್ತು ಕಾಳು ಮೆಣಸಿನ ರಾಣಿ ಎಂದೇ ಖ್ಯಾತಿ ಪಡೆದಿದ್ದ ಗೇರುಸೊಪ್ಪದ ಚೆನ್ನ ಭೈರಾದೇವಿ ಕುರಿತು ಪ್ರಥಮ ಬಿ.ಎಸ್ಸಿ. ಯ ಸ್ಮಿತಾ ಎಂ.ಎಸ್ ಮಾತನಾಡಿದರು. ಉತ್ತಮ ಆಡಳಿತಕ್ಕೆ ಹೆಸರಾದ ಮಲೆನಾಡಿನ ರಾಣಿ ಕೆಳದಿ ಚೆನ್ನಮ್ಮನ ಕುರಿತು ಅಂತಿಮ ಬಿ.ಸಿ.ಎ ಯ ಶ್ರಾವ್ಯ ಕೆ.ಎಸ್. ಮಾತನಾಡಿ ಚೆನ್ನಮ್ಮಳ ಧೈರ್ಯ, ಆಡಳಿತ ವೈಖರಿ ಮತ್ತು ಜನಸಾಮಾನ್ಯರೊಂದಿಗಿನ ಸಂಬಂಧವನ್ನು ಸಮಗ್ರವಾಗಿ ವಿವರಿಸಿದರು.
ಕರ್ನಾಟಕದ ವಚನ ಸಾಹಿತ್ಯದಲ್ಲಿ ತನ್ನದೇ ಚಾಪು ಮೂಡಿಸಿದ ಅಕ್ಕಮಹಾದೇವಿಯ ಕುರಿತು ಅಂತಿಮ ಬಿ.ಎಸ್ಸಿ ವಿದ್ಯಾರ್ಥಿನಿ ಚಂದನಾ ಮಾತನಾಡಿ ಕರ್ನಾಟಕದ ಮಹಿಳೆಯರಿಗೆ ಅಕ್ಕಮಹಾದೇವಿ ಒಂದು ಆದರ್ಶ ಮತ್ತು ಭಕ್ತಿಯ ಮೂಲಕ ತನ್ನ ಹೆಸರನ್ನು ಇತಿಹಾಸದಲ್ಲಿ ದಾಖಲಿಸಿದ್ದಾಳೆ ಎಂದು ಅಭಿಪ್ರಾಯಪಟ್ಟಳು.
Sagara News ಕನ್ನಡ ಸಾಹಿತ್ಯದಲ್ಲಿ ತನ್ನದೇ ಹೆಸರು ಮಾಡಿದ ಸಬಿತಾ ಬನ್ನಾಡಿ ಕುರಿತು ಬಿ.ಸಿ.ಎ. ವಿದ್ಯಾರ್ಥಿನಿ ಸದ್ವಿನಿ ಮಾತನಾಡಿ ಅವರ ಲೇಖನ ಮತ್ತು ಬರಹಗಳು ಪ್ರಸ್ತುತತೆಯ ಕೈಗನ್ನಡಿಯಾಗಿವೆ ಮತ್ತು ನವ ಸಾಹಿತ್ಯದ ಹೊಸ ಆಯಾಮಗಳನ್ನು ಬಳಸಿಕೊಂಡು ಸಾಹಿತ್ಯವನ್ನು ರಚಿಸಿದ್ದಾರೆ ಎಂದು ಹೇಳಿದರು. ಕರ್ನಾಟಕದ ಹೆಸರನ್ನು ವಿಶ್ವದಾದ್ಯಂತ ಪರಿಚಯಿಸಿದ ಬುಕರ್ ಪ್ರಶಸ್ತಿಯ ಜೊತೆ ಗುರುತಿಸಿಕೊಂಡ ದೀಪಾ ಬಸ್ತಿ ಅವರ ಬಗ್ಗೆ ಬಿ ಕಾಂ ವಿದ್ಯಾರ್ಥಿನಿ ದಿವ್ಯಶ್ರೀ ಮಾತನಾಡಿದಳು. ಎದೆಯ ಹಣತೆ ತರ್ಜುಮೆಗಾಗಿ ಬುಕರ್ ಪ್ರಶಸ್ತಿ ದೊರೆತಿದ್ದು ಅವರ ಸಾಹಿತ್ಯಕ್ಕೆ ಹಲವಾರು ಮನ್ನಣೆಗಳು ಬಂದಿರುವುದನ್ನು ಸಮಗ್ರವಾಗಿ ವಿವರಿಸಿದರು. ಸೋಶಿಯಲ್ ಮೀಡಿಯಾದ ಈ ಯುಗದಲ್ಲಿ ವಿದ್ಯಾರ್ಥಿಗಳು ಮಹಿಳಾ ಸಾಧಕಿಯರ ಬಗ್ಗೆ ಅಧ್ಯಯನ ಮಾಡಿದ ವಿಷಯ ಮಂಡನೆಯು ಕೇಳುಗರನ್ನು ಆಕರ್ಷಿಸಿದರೆ, ಈ ಅವಕಾಶ ವಿದ್ಯಾರ್ಥಿನಿಯರಿಗೆ ವಿಶೇಷ ಪ್ರೇರಣೆಯನ್ನು ನೀಡಿತು. ವಿದ್ಯಾರ್ಥಿನಿಯರ ಅದ್ಭುತವಾದ ಮಂಡನೆಯನ್ನು ಆಕಾಶವಾಣಿ ಕೇಂದ್ರದ ವಸಿಷ್ಠ ರವರು ಶ್ಲಾಘಿಸಿದರು. ನಮ್ಮ ಕಾಲೇಜಿನ ವಿದ್ಯಾರ್ಥಿನಿಯರಿಗೆ ಅವಕಾಶ ನೀಡಿದ್ದಕ್ಕಾಗಿ ಭದ್ರಾವತಿಯ ಆಕಾಶವಾಣಿ ಕೇಂದ್ರಕ್ಕೆ ಕಾಲೇಜಿನ ಪ್ರಾoಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್. ರವರು ಧನ್ಯವಾದಗಳನ್ನು ಹೇಳಿದರು. ಕಾರ್ಯಕ್ರಮದ ನಿರ್ವಹಣೆಯನ್ನು ಮಾಡಿದ ಭದ್ರಾವತಿ ಆಕಾಶವಾಣಿ ಕೇಂದ್ರದ ಉದ್ಘೋಷಕರಾದ ಡಾ. ಬಸವರಾಜು ಟಿ. ಎನ್.
ರವರು ವಿದ್ಯಾರ್ಥಿನಿಯರ ಆಸಕ್ತಿಯನ್ನು ಮೆಚ್ಚಿ, ಇನ್ನಷ್ಟು ಅವಕಾಶಗಳನ್ನು ಬಳಸಿಕೊಳ್ಳುವoತೆ ತಿಳಿಸಿದರು. ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ನಿರಂಜನ್ ಮೂರ್ತಿ ಟಿ, ಮಂಜುನಾಥ ಎಂ.ಎಲ್ , ರವೀಂದ್ರ , ಆಂಗ್ಲ ವಿಭಾಗದ ಮುಖ್ಯಸ್ಥರಾದ ಡಾ. ಪ್ರಶಾಂತ್ ಮಾಂಡ್ರೆ, ಕ್ಯಾl ನೂತನ ಹೆಚ್.ಡಿ, ವಿನಯ, ಚಂದನ್, ದೇವರಾಜ್ ಕೆ ಮತ್ತು ಕು. ಜೆನಿಫರ್ ಡಿಸೋಜ, ಕು. ನಂದನ ಟೆಂಬೆ ಇವರು ಪಾಲ್ಗೊಂಡಿದ್ದರು.

Bakkeshwara Swamy Rathotsava ದಾವಣಗೆರೆ ಹೃದಯಭಾಗದ ರಾಜಬೀದಿಯ ಏಕೈಕವಾದ ಶ್ರೀಬಕ್ಕೇಶ್ವರ ಮಹಾರಥೋತ್ಸವ. ಲೇ: ಡಾ..ಹೆಚ್.ಬಿ.ಮಂಜುನಾಥ್.

0

Bakkeshwara Swamy Rathotsava ದಾವಣಗೆರೆಯು ಅನಾದಿಕಾಲದಿಂದಲೂ ವ್ಯಾಪಾರೋದ್ಯಮಕ್ಕೆ ಪ್ರಸಿದ್ಧವಾದ ಕೇಂದ್ರವಾಗಿದ್ದು 1801 ರ ವೇಳೆಗೆ ಕೇವಲ ಐದುನೂರು ಮನೆಗಳ ಚಿಕ್ಕ ಊರಾಗಿದ್ದ ದಾವಣಗೆರೆಯು ಪ್ರಮುಖ ವ್ಯಾಪಾರಿ ಕೇಂದ್ರವಾಗಿತ್ತು. ಇಕ್ಕೇರಿಯ ಸಾಗರ ಸೀಮೆಯ ಕಡೆಯಿಂದ ಅಡಕೆ, ಕಾಳುಮೆಣಸು ಮುಂತಾದುವನ್ನು ಖರೀದಿಸಿ ತಂದು ತಮಿಳುನಾಡಿನ ಆರ್ಕಾಟ್ ಸಮೀಪದ ವಲ್ಲಜಪೇಟೆಗೆ ದಾವಣಗೆರೆಯ ವ್ಯಾಪಾರಿಗಳು ಎತ್ತಿನಗಾಡಿಯಲ್ಲಿ ತೆಗೆದುಕೊಂಡು ಹೋಗಿ ಮಾರಾಟ ಮಾಡಿ ಪರದೇಶಗಳಿಂದ ಮದರಾಸಿನ ಮುಖಾಂತರ ವಲ್ಲಜಪೇಟೆಗೆ ಬರುತ್ತಿದ್ದ ವಸ್ತುಗಳನ್ನು ದಾವಣಗೆರೆಗೆ ತಂದು ಮಾರಾಟ ಮಾಡುತಿದ್ದರು ಎಂದು ವಿದೇಶೀ ಯಾತ್ರಿಕ ಫ್ರಾನ್ಸಿಸ್ ಬುಕಾನೆನ್ ದಾಖಲಿಸಿದ್ದಾನೆ. ಮುಂದೆ ದಾವಣಗೆರೆಯ ಇಂತಹ ವ್ಯಾಪಾರೋದ್ಯಮಿಗಳಿಗೆ ಶ್ರೀರಕ್ಷೆಯಾಗಿ ಆಶೀರ್ವದಿಸಿ ಇಲ್ಲಿನ ವಾಣಿಜ್ಯೋದ್ಯಮವನ್ನು ಉತ್ತುಂಗಕ್ಕೇರಿಸಿದ್ದು ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಕೃಪಾಶೀರ್ವಾದ ಎಂದು ಇಂದಿಗೂ ನಂಬಲಾಗುತ್ತಿದೆ.

ಹೆಬ್ಬಾಳು ಮಠದ ರುದ್ರೇಶ್ವರರ ಕೃಪಾಶೀರ್ವಾದದೊಂದಿಗೆ ಗುಮ್ಮನೂರಿನ ಬಸವಲಿಂಗಯ್ಯ ಪಾರ್ವತಮ್ಮನವರ ಗರ್ಭಾಂಬುದಿಯಲ್ಲಿ 1770 ರಲ್ಲಿ ಜನಿಸಿದ ಮಗುವಿಗೆ ಹುಟ್ಟುವಾಗಲೇ ತಲೆಯ ಮೇಲೊಂದು ಬೊಕ್ಕೆ ಇದ್ದುದರಿಂದ “ಬಕ್ಕೇಶ” ಎಂದು ನಾಮಕರಣ ಮಾಡಲಾಯಿತು, ಮುಂದೆ ಜಂಗಮರಾಗಿ ಪರ್ಯಟನ ಮಾಡುತ್ತಾ ಲೀಲಾ ಪವಾಡಗಳನ್ನು ಮೆರೆದ ಬಕ್ಕೇಶ್ವರರು 1802ನೇ ಇಸ್ವಿಯ ಹಾಗೆ ದಾವಣಗೆರೆಗೆ ಬಂದು ಹಳೆ ಊರಿನ ಶ್ರೀ ದುರ್ಗಾಂಬಿಕಾ ದೇವಸ್ಥಾನ ಶ್ರೀ ಹನುಮಂತ ದೇವರ ದೇವಸ್ಥಾನದ ಬಳಿ ಮಠ ಮಾಡಿಕೊಂಡವರು 1853 ರ ಸುಮಾರಿಗೆ ಲಿಂಗೈಕ್ಯರಾದಾಗ ಅವರ ಆಣತಿಯಂತೆ ಸ್ಮಶಾನ ಸದೃಶವಾಗಿದ್ದ ಚೌಕಿ ಗುಂಡಿಯ ಬಳಿ ಅವರ ಕ್ರಿಯಾ ಸಮಾಧಿಯನ್ನು ಮಾಡಲಾಯಿತು. ಈ ಸಂದರ್ಭದಲ್ಲಿ ಚಿತ್ರದುರ್ಗ ಬೃಹನ್ಮಠದ ಜಗದ್ಗುರುಗಳಾಗಿದ್ದ ಸಣ್ಣ ಪಾದದ ಚೆನ್ನವೀರ ಮಹಾಸ್ವಾಮಿಗಳು ಸಹಾ ಸಾನ್ನಿಧ್ಯ ವಹಿಸಿದ್ದರೆಂದು ತಿಳಿದು ಬರುತ್ತದೆ.

1902 ರ ಸುಮಾರಿಗೆ ಮಾಗಾನಹಳ್ಳಿ ಮನೆತನದವರು ಮುಂತಾಗಿ ಭಕ್ತರು ಸೇರಿ ಬಕ್ಕೇಶ್ವರರ ಕ್ರಿಯಾ ಸಮಾಧಿಗೆ ಗುಡಿಯನ್ನು ನಿರ್ಮಿಸಿದರು. 1924 ರಿಂದ ಶ್ರೀ ಬಕ್ಕೇಶ್ವರ ಮಹಾಸ್ವಾಮಿಗಳವರ ರಥೋತ್ಸವ ಆರಂಭವಾಯಿತು. 1925 ರ ಸುಮಾರಿಗೆ ಹಂಜಿಗಿ ಮಠದ ವೀರಭದ್ರಯ್ಯನವರು ಬಕ್ಕೇಶ್ವರರ ಗದ್ದುಗೆಯ ಮೇಲೆ ಪೂಜಾ ಮೂರ್ತಿಯನ್ನು, ಪಾದುಕೆಗಳನ್ನು, ಹಿತ್ತಾಳೆಯ ಆನೆಯನ್ನು, ಗುಡಿಗೆ ಕಬ್ಬಿಣದ ಕಟಾಂಜನವನ್ನು, ಕಾಣಿಕೆ ಡಬ್ಬವನ್ನು ಮಾಡಿಸಿಕೊಟ್ಟರೆಂದು ತಿಳಿದು ಬರುತ್ತದೆ. ಕವಿ, ಪಂಡಿತ, ಗಾನಯೋಗಿ ಶ್ರೀ ಡಾ. ಪುಟ್ಟರಾಜ ಗವಾಯಿಗಳವರ ನಿರ್ದೇಶನದಲ್ಲಿ ಜಗಜ್ಯೋತಿ ಬಸವೇಶ್ವರ ಹಾಗೂ ಶಿವ ಭಕ್ತ ಸಿರಿಯಾಳ ಸಹಾಯಾರ್ಥ ನಾಟಕಗಳು ನೆರವೇರಿ ಬಂದ ಹಣದಿಂದ ಶ್ರೀ ಬಕ್ಕೇಶ್ವರರ ಮೂರ್ತಿಗೆ ಬಂಗಾರದ ಕಿರೀಟವು ಅಲಂಕೃತಗೊಂಡಿತು. ಮುಂದೆ ಕೀರ್ತಿ ಶೇಷ ಶಾಮನೂರು ಶಿವಶಂಕರಪ್ಪನವರವರೆಗೆ ಅನೇಕ ಮಹನೀಯರು ಶ್ರೀ ಬಕ್ಕೇಶ್ವರ ಮಹಾ ಸ್ವಾಮಿಯ ದೇವಸ್ಥಾನದ ಅಭಿವೃದ್ಧಿಗೆ ಅನೇಕ ರೀತಿಯ ದಾನ ದೇಣಿಗೆಗಳನ್ನು ನೀಡಿರುವುದು ತಿಳಿದೇ ಇರುತ್ತದೆ.

Bakkeshwara Swamy Rathotsava ಸ್ಮಶಾನ ಸದೃಶವಾಗಿದ್ದ ಚೌಕಿ ಗುಂಡಿ ಪ್ರದೇಶವು ಶ್ರೀ ಗುರು ಬಕ್ಕೇಶ್ವರರ ಕರ್ತೃಗದ್ದುಗೆಯಾದ ನಂತರ ದೊಡ್ಡ ವ್ಯಾಪಾರೋದ್ಯಮ ಪ್ರದೇಶವಾಗಿ, ‘ಚೌಕಿಪೇಟೆ’ಯಾಗಿ, ದಾವಣಗೆರೆಯ ವಾಣಿಜ್ಯೋದ್ಯಮದ ಹೃದಯ ಭಾಗವೇ ಆಗಿ, ರಾಜಬೀದಿಯೂ ಆಗಿ ಪ್ರಖ್ಯಾತವಾಯಿತು.

ಇಂತಹ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಗಳ ಮಹಾ ರಥೋತ್ಸವವು ಪ್ರತಿ ವರ್ಷ ಚೈತ್ರ ಶುದ್ಧ ಪಂಚಮಿಯ ದಿನದಂದು ನೆರವೇರುತ್ತಿದ್ದು ದಾವಣಗೆರೆಯ ಬಹುತೇಕ ಎಲ್ಲಾ ವಾಣಿಜ್ಯೋದ್ಯಮಿಗಳು, ವ್ಯಾಪಾರಸ್ಥರು, ಎಪಿಎಂಸಿಯ ವರ್ತಕರು, ದಲ್ಲಾಲರು, ಗುಮಾಸ್ತರು, ಕಾರ್ಮಿಕರು, ಹಮಾಲಿಗಳು ಆದಿಯಾಗಿ ಎಲ್ಲರೂ ಕುಟುಂಬ ಸಮೇತ ಬಂದು ರಥೋತ್ಸವದಲ್ಲಿ ಭಾಗವಹಿಸುವುದು ಇಂದಿಗೂ ಮುಂದುವರೆದಿದೆ, ಅಲ್ಲದೆ ಬಕ್ಕೇಶ್ವರರ ಭಕ್ತ ಪರಂಪರೆಯವರು ಹೊರ ರಾಜ್ಯ ಹೊರ ದೇಶಗಳಲ್ಲಿ ನೆಲೆಸಿದ ಅನೇಕರು ಸಹಾ ಈ ರಥೋತ್ಸವದಲ್ಲಿ ಭಾಗವಹಿಸಲು ಬರುತ್ತಾರೆ.

ಶತಮಾನದಷ್ಟು ಹಳೆಯದಾದ ಪ್ರಾಚೀನ ರಥವು ಶಿಥಿಲಾವಸ್ಥೆ ಹೊಂದುತ್ತಿದೆ ಎಂದು ವಿಶೇಷವಾಗಿ ಸಾಂಪ್ರದಾಯಿಕವಾದ ನೂತನ ರಥವನ್ನು ನಿರ್ಮಿಸಲಾಗಿದ್ದು ಇದೇ ಮಾರ್ಚ್ 23 ಸೋಮವಾರ ಸಂಜೆ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯವರ ಮಹಾ ರಥೋತ್ಸವ ನೆರವೇರಿತ್ತಿದ್ದು ಇದು ದಾವಣಗೆರೆ ವ್ಯಾಪಾರೋದ್ಯಮದ ಹೃದಯ ಭಾಗದಂತಿರುವ ರಾಜಬೀದಿ ಚೌಕಿಪೇಟೆಯಲ್ಲಿ ನೆರವೇರುವ ಏಕೈಕ ಮಹಾ ರಥೋತ್ಸವವಾಗಿವೆ. ಮಹಾ ರಥೋತ್ಸವದ ಹಿಂದಿನ ದಿನ ಸ್ವಾಮಿಯ ಗಜವಾಹನೋತ್ಸವವು, ಮಹಾ ರಥೋತ್ಸವದ ಮಾರನೆಯ ದಿನ ನಂದಿವಾಹನೋತ್ಸವವು ಸಹಾ ನೆರವೇರುತ್ತದೆ. ಸ್ವಾಮಿಯ ಮಹಾರಥೋತ್ಸವವಂತೂ
ಪಾರಂಪರಿಕ ಭಕ್ತಿ ಶ್ರದ್ಧಾದಿಗಳಿಂದ ಕೂಡಿ ವೈಭವೋಪೇತವಾಗಿ ನೆರವೇರುವುದನ್ನು ವೀಕ್ಷಿಸುವ ಸದವಕಾಶ ಯಾರೂ
ತಪ್ಪಿಸಿಕೊಳ್ಳಬಾರದು.

-ಡಾ. ಎಚ್. ಬಿ. ಮಂಜುನಾಥ, ಹಿರಿಯ ಪತ್ರಕರ್ತರು-

KFD ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಮಂಗನ ಕಾಯಿಲೆಗೆ ಈ ವರ್ಷಎರಡನೇ ಬಲಿ.

0

KFD ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ತಟ್ಟಿಕೇವಿಯಲ್ಲಿ ಮಂಗನ ಕಾಯಿಲೆಗೆ ಈ ವರ್ಷ ಎರಡನೇ ಸಾವಾಗಿದೆ.

ಅರಳಸುರುಳಿ ಸಮೀಪದ ತಟ್ಟಿಕೇವಿ ಗ್ರಾಮದ ಮಹಿಳೆ ಗುಲಾಬಿ ಶೆಟ್ಟಿ ( 60) ಮಣಿಪಾಲ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.

ರೋಗ
ಉಲ್ಬಣಗೊಂಡ ಸ್ಥಿತಿಯಲ್ಲಿ ಮಂಗಳವಾರ ಸರ್ಕಾರಿ ಜೆಸಿ ಆಸ್ಪತ್ರೆಗೆ ದಾಖಲಾಗಿದ್ದರು.
ಹೆಚ್ಚಿನ ಚಿಕಿತ್ಸೆಗಾಗಿ ಅದೇ ದಿನ ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಚಿಕಿತ್ಸೆ
ಫಲಕಾರಿಯಾಗದೆ ಕಳೆದ ಗುರುವಾರ ಸಾವನ್ನಪ್ಪಿದ್ದಾರೆ.
ಕಿಡ್ನಿ ಸಮಸ್ಯೆ ಕೂಡ ಇತ್ತು ಎಂದು
ಹೇಳಲಾಗಿದೆ. ಈ ಮೊದಲು ಕಟಗಾರು ಆಸ್ಪತ್ರೆ ವ್ಯಾಪ್ತಿಯ ಹೊನ್ನೇಕೇರಿಯ ಯುವಕ ಕೆಎಫ್‌ಡಿ ಸೋಂಕಿನಿಂದ ಸಾವನಪ್ಪಿದ್ದರು.

ತಾಲೂಕಿನಲ್ಲಿ 29 ಪ್ರಕರಣ ದಾಖಲಾಗಿದ್ದು,
ಜನವರಿಯಿಂದ ಈವರೆಗೆ ಇಬ್ಬರು ಮೃತರಾಗಿದ್ದಾರೆ.

KFD ಪ್ರಸ್ತುತ ಸರ್ಕಾರಿ ಜೆಸಿ ಆಸ್ಪತ್ರೆಯಲ್ಲಿ
5 ಮತ್ತು ಮಣಿಪಾಲ ಆಸ್ಪತ್ರೆಯಲ್ಲಿ 3 ಜನರು ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದಾರೆ
ಎಂದು ತಾಲೂಕು ವೈದ್ಯಾಧಿಕಾರಿ ಡಾ. ಅನಿಕೇತನ್‌ ತಿಳಿಸಿದ್ದಾರೆ.

ತೀರ್ಥಹಳ್ಳಿಯ ಜೆಸಿ ಆಸ್ಪತ್ರೆಯಲ್ಲಿ 5
ರೋಗಿಗಳಿದ್ದು, ಗುಣಮುಖರಾಗಿ ಮನೆಗೆ ಹೋಗಿದ್ದ ಇಬ್ಬರು ಮತ್ತೆ ಜ್ವರ ಮರುಕಳಿಸಿದ
ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾರೆ.

Cheetah Attack ಮುತ್ತಗಿ ಗ್ರಾಮದ ರೈತನ ಮೇಲೆ ಚಿರತೆ ಹಠಾತ್ ದಾಳಿ. ಮೆಗ್ಗಾನ್ ಆಸ್ಪತ್ರೆಗೆ ರೈತ ದಾಖಲು.

0

Cheetah Attack ಶಿಕಾರಿಪುರ ತಾಲ್ಲೂಕಿನ ತಡಸನಹಳ್ಳಿ, ಅಡಗಂಟಿ, ಮುತ್ತಗಿ ಗ್ರಾಮದ ರೈತರ ಮೇಲೆ ಚಿರತೆ ದಾಳಿ ನಡೆಸಿದೆ. ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಅಡಗಂಟಿ ಗ್ರಾಮದ ಸುದೀಪ್, ಸಂಜೆ ಮುತ್ತಗಿ ಗ್ರಾಮ ಸಮೀಪದ ಮೆಕ್ಕೆಜೋಳದ ಜಮೀನಿಗೆ ಮೇವು ತರಲು ಹೋಗಿದ್ದಾಗ ಚಿರತೆ ದಿಢೀರ್ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಡಸನಹಳ್ಳಿ ಗ್ರಾಮದ ಮುತ್ತಣ್ಣ ಎಂಬುವರು ಶನಿವಾರ ಬೆಳಿಗ್ಗೆ ಗದ್ದೆಗೆ ನೀರು ಬಿಡುವುದಕ್ಕೆ ತೆರಳಿದ್ದಾಗ ಚಿರತೆ ದಾಳಿ ನಡೆಸಿದೆ. ತೀವ್ರವಾಗಿ ಗಾಯಗೊಂಡಿದ್ದ ಅವರನ್ನೂ ಹೆಚ್ಚಿನ ಚಿಕಿತ್ಸೆಗೆ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಶನಿವಾರ ಸಂಜೆ ತಡಸನಹಳ್ಳಿ, ಅಡಗಂಟಿ ಗ್ರಾಮದ ನಡುವಿನ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದ ಹೂವ್ಯನಾಯ್ಕ ಎಂಬುವರ ಮೇಲೂ ಚಿರತೆ ದಾಳಿ ನಡೆಸಲು ಯತ್ನಿಸಿದ್ದು, ಪ್ರಥಮ ಚಿಕಿತ್ಸೆ ಪಡೆದು ಅವರು ಮನೆಗೆ ತೆರಳಿದ್ದಾರೆ.
ತಡಸನಹಳ್ಳಿ, ಅಡಗಂಟಿ ಗ್ರಾಮದ ಜಮೀನಿನಲ್ಲಿ, ಮುತ್ತಗಿ ಕಿರು ಅರಣ್ಯ ಸೇರಿ ಮೂರು ಕಡೆ ಚಿರತೆ ಸೆರೆಗೆ ಬೋನ್ ಇಡಲಾಗಿದೆ.‌

Cheetah Attack ಚಿರತೆ ಮನುಷ್ಯನ ಮೇಲೆ ದಾಳಿ ಮಾಡುವುದು ಕಡಿಮೆ. ಅದು ಯಾವುದಾದರೂ ರೋಗದಿಂದ ಬಳಲುತ್ತಿರಬಹುದು ಅಥವಾ ವಿಚಲಿತವಾಗಿರುವ ಕಾರಣಕ್ಕೆ ಮನುಷ್ಯರ ಮೇಲೆ ದಾಳಿ ನಡೆಸಿರುವ ಸಾಧ್ಯತೆ ಇದೆ ಎಂದು ವಲಯ ಅರಣ್ಯಾಧಿಕಾರಿ ಜಾವಿದ್ ಅಂಗಡಿ ತಿಳಿಸಿದ್ದಾರೆ.

ಚಿರತೆ ದಾಳಿಯಿಂದಾಗಿ ಜನ ಆತಂಕಕ್ಕೊಳಗಾಗಿದ್ದು, ಜಮೀನಿಗೆ ತೆರಳುವುದಕ್ಕೆ ಹೆದರುತ್ತಿದ್ದಾರೆ. ಕೂಡಲೇ ಚಿರತೆ ಸೆರೆ ಹಿಡಿಯಬೇಕು ಎಂದು ರೈತರು ಒತ್ತಾಯಿಸಿದ್ದಾರೆ. ಜಮೀನಿಗೆ ತೆರಳುವ ಸಮಯದಲ್ಲಿ ರೈತರು ಎಚ್ಚರಿಕೆ ವಹಿಸಬೇಕು ಎಂದು ಅರಣ್ಯ ಇಲಾಖೆ ಸೂಚಿಸಿದೆ.

Yakshagana ವಿದ್ಯಾರ್ಥಿಗಳ ಅಗತ್ಯಕ್ಕೆ ಸ್ಪಂದಿಸುವ ಯಕ್ಷಗಾನ ಕಲಾರಂಗ ಸಂಸ್ಥೆ ಬಿಟ್ಟರೆ ಮತ್ತೊಂದು ಕಂಡಿಲ್ಲ- ಡಾ.ಪಿ.ನಾರಾಯಣ

0

Yakshagana ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ನ ಪ್ರಥಮ ಪಿಯುಸಿಯ ವಿದ್ಯಾರ್ಥಿ ನಿಖಿಲ್ ಎಸ್. (ಶ್ರೀಮತಿ ಕುಸುಮಾ ಮತ್ತು ದಿ. ಶಿವರಾಮ ಇವರ ಪುತ್ರ ಎಸ್.ಎಸ್.ಎಲ್.ಸಿ. ಯಲ್ಲಿ 97.6% ಅಂಕ) ಇವನಿಗೆ ಕುಂದಾಪುರ ತಾಲೂಕಿನ ಜಪ್ತಿಯಲ್ಲಿ ಪಾಂಡೇಶ್ವರ ಮಂಜುನಾಥ ಹೊಳ್ಳ ಅವರ ಸ್ಮರಣಾರ್ಥ ಹಾಗೂ ಸರಸ್ವತಿ ಹೊಳ್ಳರ ಗೌರವಾರ್ಥ, ಅವರ ಪುತ್ರಿಯರ ಪ್ರಾಯೋಜಕತ್ವದಲ್ಲಿ,7 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆ ‘ಮಂಜುನಾಥ ನಿಲಯ’ ವನ್ನು ಸರಸ್ವತಿ ಹೊಳ್ಳರು ಇಂದು (21.3.2026) ಜ್ಯೋತಿ ಬೆಳಗಿಸಿ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿಯವರು ಮಾತನಾಡಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್‌ ಫಲಾನುಭವಿ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಯಾರ ಮುಲಾಜಿಗು ಒಳಗಾಗದೆ ಸ್ವತಃ ಮನೆ ಭೇಟಿ ಮಾಡಿ ನಿರ್ಣಯಿಸುತ್ತದೆ. ವಿದ್ಯಾರ್ಥಿಗಳ ಅಗತ್ಯಕ್ಕೆ ಕೂಡಲೇ ಸ್ಪಂದಿಸುವ ಇನ್ನೊಂದು ಸಂಸ್ಥೆಯನ್ನು ನಾನು ಕಂಡಿಲ್ಲ ಎಂದು ಹೇಳಿದರು. ಶಿವಮೊಗ್ಗದ ಮಾಜಿ ರೋಟರಿ ಗವರ್ನರ್ ಡಾ.ಪಿ.ನಾರಾಯಣ ಮಾತನಾಡಿ, ಕಲಾರಂಗದ ನಾಲ್ಕು ಮುಖಗಳ ಸಾಧನೆಗೆ ಬೆರಗಾಗಿದ್ದೇನೆ. ಕಲಾವಿದರು ಮತ್ತು ವಿದ್ಯಾರ್ಥಿಗಳ ಸಂಕಷ್ಟಕ್ಕೆ ಸಹಾಯ ಮಾಡುವ ಇಂತಹ ಇನ್ನೊಂದು ಸಂಸ್ಥೆ ಇರಲಿಕ್ಕಿಲ್ಲ. ನನ್ನ ಅಣ್ಣನ ಹೆಣ್ಣುಮಕ್ಕಳು ಶೈಕ್ಷಣಿಕವಾಗಿ ಉತ್ತಮ ಸಾಧನೆ ಮಾಡಿ ಒಳ್ಳೆಯ ಉದ್ಯೋಗ ಪಡೆದು ಈ ರೀತಿಯಾಗಿ ಸಮಾಜಪರ ಕಾರ್ಯ ಮಾಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದರು.ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗರು ಯಕ್ಷಗಾನ ಕಲಾರಂಗದ ಪ್ರತಿಯೊಂದು ಕಾರ್ಯಕ್ರಮವು ಅನನ್ಯವಾಗಿರುತ್ತದೆ. ಸದಾ ಕ್ರಿಯಾಶೀಲವಾಗಿರುವ ಈ ಸಂಸ್ಥೆಯ ಕೆಲಸವೇ ಸಮಾಜಕ್ಕೊಂದು ದೊಡ್ಡ ಸಂದೇಶ ಎಂದು ಹೇಳಿದರು. ಡಾ. ಗೀತಾ ಸಾಮಕ್ ನಮ್ಮ ತಂದೆಯವರೇ ನಮಗೆ ಸ್ಫೂರ್ತಿ. ದೃಷ್ಟಿ ತೊಂದರೆ ನಡುವೆಯೂ ಅವರು ಮಾಡುತ್ತಿದ್ದ ಕೃಷಿ ಕಾರ್ಯ ಸಮಾಜಪರ ಕಾಳಜಿಯನ್ನು ನೋಡಿದರೆ ಆಶ್ಚರ್ಯವೆನಿಸುತ್ತದೆ. ಕೃಷಿಯಲ್ಲಿ ಆ ಕಾಲಕ್ಕೆ ಹೊಸ ಹೊಸ ತಂತ್ರಜ್ಞಾನ ಅಳವಡಿಸಿಕೊಂಡು ಮಾದರಿ ಕೃಷಿಕರಾಗಿದ್ದರು. ಕಷ್ಟದಲ್ಲಿರುವವರಿಗೆ ಸದಾ ಸಹಾಯ ಮಾಡುತ್ತಿದ್ದರು.ಹತ್ತಕ್ಕೂ ಮಿಕ್ಕಿ ಮನೆಗಳನ್ನು ನಿರ್ಮಿಸಿ ಕೊಟ್ಟು ಬಡವರಿಗೆ ಆಸರೆಯಾಗಿದ್ದರು. ನಾವು ಐವರು ಹೆಣ್ಣುಮಕ್ಕಳು ಶಿಕ್ಷಣ ಪಡೆದು ಉದ್ಯೋಗಸ್ತರಾಗುವಲ್ಲಿ ಅಮ್ಮನ ಕಾಳಜಿಯು ಅಷ್ಟೇ ಮುಖ್ಯವಾಗಿತ್ತು. ಇಂದು ಅಮ್ಮನ ಕೈಯಿಂದಲೇ Yakshagana ಈ ಮನೆಯನ್ನು ಉದ್ಘಾಟಿಸುವ ಅವಕಾಶ ಪುತ್ರಿಯರಾದ ನಮಗೆ ಧನ್ಯತೆ ತಂದಿದೆ ಎಂದರು. ಹೊಳ್ಳರ ಕುಟುಂಬಕ್ಕೆ ಕಲಾರಂಗದ ಕೆಲಸವನ್ನು ಪರಿಚಯಿಸಿದ ಪಿ. ವಾಸುದೇವ ಕಾರಂತರು ಹಂಚಿನ ಮನೆ ಕುಟುಂಬವೇ ಸಮಾಜಕ್ಕೆ ಆದರ್ಶ. ನಮ್ಮ ಬಂಧುಗಳಾದ ಈ ಹೆಣ್ಣುಮಕ್ಕಳ ಸಾಧನೆ ನಮಗೆಲ್ಲಾ ಅಭಿಮಾನದ ಸಂಗತಿಯಾಗಿದೆ ಎಂದರು. ಉಷಾ ಎನ್. ಹೆಬ್ಬಾರ್, ಡಾ. ಗಣೇಶ್ ಮಧ್ಯಸ್ಥ, ಕಿಶೋರ್ ಶೆಟ್ಟಿ ವೇದಿಕೆಯಲ್ಲಿದ್ದರು. ಸಂಧ್ಯಾ ಶರ್ಮಾ, ರೇಖಾ ಮಕ್ಕಿತ್ತಾಯ, ಡಾ.ತಾರಾ ಕಾರಂತ್, ಡಾ. ಎಸ್.ಜಿ.ಸಾಮಕ್, ನಾಗರಾಜ ಹೆಬ್ಬಾರ್, ಅರವಿಂದ ಶರ್ಮಾ, ಡಾ.ಕೃಷ್ಣಮೂರ್ತಿ ಮಕ್ಕಿತ್ತಾಯ, ಡಾ. ಕೃಷ್ಣ ಕಿರಣ್ ಕಾರಂತ್, ಯಶೋದಾ ಹೊಳ್ಳ ಹಾಗೂ ಸರಸ್ವತಿ ಹೊಳ್ಳರ ಮೊಮ್ಮಕ್ಕಳು ಉಪಸ್ಥಿತರಿದ್ದರು. ಸಂಸ್ಥೆಯ ಸದಸ್ಯರಾದ ಯು.ಎಸ್.ರಾಜಗೋಪಾಲ ಆಚಾರ್ಯ, ಭುವನಪ್ರಸಾದ ಹೆಗ್ಡೆ, ಅನಂತರಾಜ ಉಪಾಧ್ಯಾಯ, ಜಯರಾಮ ಪಡಿಯಾರ್, ರಾಮಚಂದ್ರ ಅಡಿಗ, ನಾಗರಾಜ ಹೆಗಡೆ ಭಾಗವಹಿಸಿದ್ದರು. ಬಿದ್ಕಲ್ ಕಟ್ಟೆ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಕರುಣಾಕರ ಶೆಟ್ಟಿ, ಪಂಚಾಯತ್ ಮಾಜಿ ಅಧ್ಯಕ್ಷರು, ಫಲಾನುಭವಿ ವಿದ್ಯಾರ್ಥಿಗಳ ಬಂಧುಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಅಧ್ಯಕ್ಷ ಎಂ. ಗಂಗಾಧರ ರಾವ್ ಸ್ವಾಗತಿಸಿದರು. ನಾರಾಯಣ ಎಂ. ಹೆಗಡೆ ವಂದಿಸಿದರು. ಕಾರ್ಯದರ್ಶಿ ಮುರಲಿ ಕಡೆಕಾರ್ ಪ್ರಸ್ತಾವನೆಯ ಮಾತುಗಳೊಂದಿಗೆ ಕಾರ್ಯಕ್ರಮ ನಿರೂಪಿಸಿದರು.

Ripponpet News ಪೆಟ್ರೋಲ್ ಕೊರತೆ ಎಂಬ ಸುದ್ದಿ ನಂಬಿ ರಿಪ್ಪನ್ ಪೇಟೆಯ ‘ಬಂಕ್’ ಗಳಿಗೆ ಮುಗಿಬಿದ್ದ ಜನ.

0

Ripponpet News ರಿಪ್ಪನ್‌ಪೇಟೆಯ ಶಿವಮೊಗ್ಗ ರಸ್ತೆಯಲ್ಲಿರುವ ಹೆಚ್‌ಪಿ ಪೆಟ್ರೋಲ್ ಬಂಕ್‌ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಗಾಗಿ ಜನರು ಮುಗಿಬಿದ್ದಿದ್ದು,
ಗಂಟೆಗಳ ಕಾಲ ಸಾಲಿನಲ್ಲಿ ನಿಂತು ಗ್ರಾಹಕರು ಇಂಧನ ಪಡೆದುಕೊಳ್ಳುತ್ತಿರುವ ದೃಶ್ಯ ಕಂಡುಬಂದಿವೆ.

ರಿಪ್ಪನ್‌ಪೇಟೆಯಲ್ಲಿ ಒಟ್ಟು ನಾಲ್ಕು ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ.
ಅವುಗಳಲ್ಲಿ ಮೂರು ಬಂಕ್‌ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಸಂಪೂರ್ಣ ಖಾಲಿ ಎಂಬ ಆತಂಕ ಮೂಡಿದೆ.

Ripponpet News ಈ ಹಿನ್ನೆಲೆ ಶಿವಮೊಗ್ಗ ರಸ್ತೆಯ ಹೆಚ್‌ಪಿ ಬಂಕ್ ನಲ್ಲಿ ಮಾತ್ರ ಇಂಧನ ಲಭ್ಯವಿದ್ದ ಕಾರಣ ಜನರು ದೌಡಾಯಿಸಿದ್ದಾರೆ.

ಕೆಲವರು ಖಾಲಿ ಬಾಟಲ್‌ಗಳು ಹಾಗೂ ಕ್ಯಾನ್‌ಗಳನ್ನು ತಂದು ಹೆಚ್ಚಿನ ಪ್ರಮಾಣದಲ್ಲಿ ಪೆಟ್ರೋಲ್ ಸಂಗ್ರಹ ಮಾಡುತ್ತಿದ್ದಾರೆ.

ಇದರಿಂದ ಇಂಧನ ಕೊರತೆ ಇನ್ನಷ್ಟು ತೀವ್ರವಾಗ ಬಹುದು ಎಂದು ಸ್ಥಳೀಯರು ಆತಂಕಗೊಂಡಿರುವುದು ವ್ಯಕ್ತವಾಗುತ್ತದೆ.