Pace college Students Bus Accident ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜೆಡಿಕಟ್ಟೆಯಲ್ಲಿ ಕಳೆದ ಸಂಜೆ ದೊಡ್ಡ ಅನಾಹುತವೊಂದು ತಪ್ಪಿದೆ. ಎದರಿಗೆ ಬಂದ ಲಾರಿಗೆ ಡಿಕ್ಕಿಯಾಗವುದನ್ನು ತಪ್ಪಿಸಲು ಮಂದಾದ ಬಸ್ ಪಕ್ಕದಲ್ಲಿದ್ದ ಟೈಯರ್ ಅಂಗಡಿಗೆ ನುಗ್ಗಿದೆ. ಸಂಜೆ ವೇಳೆ ಕಾಲೇಜು ವಿದ್ಯಾರ್ಥಿಗಳನ್ನು ಕರೆದೊಯುತ್ತಿದ್ದ ಪೇಸ್ ಕಾಲೇಜಿನ ಬಸ್ ಒಂದು ಜೆಡಿಕಟ್ಟೆಗೆ ಬಂರುತ್ತಿದಂತ್ತೆ ಎದುರಿಗೆ ವೇಗವಾಗಿ ಬರುತ್ತಿದ್ದ ಲಾರಿವೊಂದಿಗೆ ಮುಖಾಮುಖಿಡಿಕ್ಕಿಯಾಗುವುದನ್ನು ತಪ್ಪಿಸಲು ಮುಂದಾದ ಬಸ್ ಚಾಲಕ ಎಡಗಡೆ ತೆಗೆದುಕೊಂಡಿದ್ದಾನೆ ಈ ವೇಳೆ, ಚಾಲಕನ ನಿಯಂತ್ರಣ ತಪ್ಪಿ ಪಕ್ಕದಲ್ಲಿ ಇದ್ದ ಅಂಗಡಿಗೆ ನುಗ್ಗಿದೆ. ಇದರ ಪರಿಣಾಮ ಬಸ್ ನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹಲವು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಗೊಂಡ ವಿದ್ಯಾರ್ಥಿಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಸಂಬಂಧ ಭದ್ರಾವತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Pace college Students Bus Accident ಅಂಗಡಿಗೆ ನುಗ್ಗಿದ ಕಾಲೇಜು ಬಸ್.!ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯ.
Date:
