Saturday, June 27, 2026
Saturday, June 27, 2026

Scouts and Guides ಮಕ್ಕಳ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಯುವ ಆಪತ್ ಮಿತ್ರ ಸಹಕಾರಿ: ಎಸ್.ಜಿ.ಆನಂದ್

Date:

Scouts and Guides ಯುವ ಆಪತ್ ಮಿತ್ರ ಕಾರ್ಯಕ್ರಮದಿಂದ ಮಕ್ಕಳಲ್ಲಿ ಆತ್ಮ ರಕ್ಷಣೆ, ಜೀವನ ಕೌಶಲ್ಯ ಹಾಗೂ ವ್ಯಕ್ತಿತ್ವ ವಿಕಸನ ಮತ್ತು ಮಾನವೀಯ ಮೌಲ್ಯಗಳ ವೃದ್ಧಿಗೆ ಸಹಕಾರಿಯಾಗಲಿದೆ ಎಂದು ಸ್ಕೌಟ್ಸ್ ಅಂಡ್ ಗೈಡ್ಸ್ ಆಯುಕ್ತರಾದ ಎಸ್.ಜಿ.ಆನಂದ್ ಹೇಳಿದರು.

ಶಿವಮೊಗ್ಗ ನಗರದ ಸ್ಕೌಟ್ಸ್ ಭವನದಲ್ಲಿ ನಡೆದ 7 ದಿನಗಳ ಯುವ ಆಪತ್ ಮಿತ್ರ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅಥಿತಿಯಾಗಿ ಆಗಮಿಸಿ ಮಾತನಾಡಿದ ಅವರು, ಇರುವಕ್ಕಿ ಅಗ್ರಿಕಲ್ಚರ್ ಯೂನಿವರ್ಸಿಟಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಯೋಜನೆ ಮತ್ತು ವಿವಿಧ ವಿಪತ್ತುಗಳ ತಿಳುವಳಿಕೆಯನ್ನು ಹೆಚ್ಚಿಸಿ ಮತ್ತು ವಿಪತ್ತುಗಳಿಗೆ ಪ್ರತಿಕ್ರಿಯೆಸಲು ಸಹಾಯಕಾರಿಯಾದ ಜೀವ ಉಳಿಸಲು ತಂತ್ರಗಳನ್ನು ಕಲಿಸಲು ಈ ತರಬೇತಿಯನ್ನು ರಾಷ್ಟ್ರೀಯ ಯುವ ಆಪತ್ ಮಿತ್ರ ಶಿಬಿರದಲ್ಲಿ ತಿಳಿಸಲಾಯಿತು ಎಂದರು.

ಮುಖ್ಯ ಆಯುಕ್ತರಾದ ಶಕುಂತಲಾ ಚಂದ್ರಶೇಖರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಜೂ.20 ರಿಂದ ಜೂ.26 ರವರಗೆ ನಡೆದ ಈ ಶಿಬಿರದಲ್ಲಿ ವಿಪತ್ತು ನಿರ್ವಣೆಯ ಮೂಲ ಪರಿಕಲ್ಪನೆಗಳು, ವಿಪತ್ತು ಸನದ್ಧತೆ, ಭೂಕಂಪನ, ಭೂಕುಸಿತ, ಪ್ರವಾಹ, ಸುನಾಮಿ, ಪ್ರಾಥಮಿಕ ಮಟ್ಟದ ಶೋಧನೆ ಮತ್ತು ರಕ್ಷಣೆ ಆಧಾರಿತ ಆರೋಗ್ಯ ಪ್ರಥಮ ಚಿಕಿತ್ಸೆ, ರಕ್ತಸ್ರಾವ ನಿಯಂತ್ರಣ ಮತ್ತು ಗಾಯದ ಆರೈಕೆ, ಬಿ ಎಲ್ ಎಸ್ ಮತ್ತು ಸಿ ಪಿ ಆರ್, ರೋಗಿಗಳನ್ನು ಎತ್ತುವುದು ಮತ್ತು ಹೋಯುವುದು, ಹಾವು ಕಡಿತ, ಪ್ರಾಣಿ ಕಡಿತ, ಹಗ್ಗ ಬಳಸಿ ರಕ್ಷಣೆ ಮಾಡುವ ತಂತ್ರಗಳು, ಅಗ್ನಿ ಸುರಕ್ಷತೆ ಇನ್ನಿತರೇ ತರಬೇತಿಗಳನ್ನು ಕಲಿಸಲಾಯಿತು. ಇದರ ಜೊತೆಗೆ ಮಾನವೀಯ ಮೌಲ್ಯಗಳ, ವ್ಯಕ್ತಿತ್ವ ವಿಕಾಸನ ಬಗ್ಗೆ ಮಾತನಾಡಿದರು.

Scouts and Guides ಈ ಸಂದರ್ಭದಲ್ಲಿ ಆಯುಕ್ತರಾದ ಕೆ.ರವಿ ಮಾತನಾಡಿ ಮಾನವೀಯ ಮೌಲ್ಯಗಳ ಬಗ್ಗೆ ಹಾಗೂ ಏಳು ದಿನ ನಡೆದ ಶಿಬಿರದ ಕುರಿತು ಮಾತನಾಡಿದರು. ಲಕ್ಷ್ಮಿ ರವಿ ಸ್ವಾಗತಿಸಿದರು, ಕಾರ್ಯದರ್ಶಿ ಚಂದ್ರಶೇಖರಯ್ಯ ವಂದಿಸಿದರು, ಶಿಬಿರದ ವಿದ್ಯಾರ್ಥಿನಿ ಮಾನ್ಯತಾ ಪಾಟೀಲ್ ನಿರೂಪಿಸಿದರು.

ಕಾರ್ಯಕ್ರಮದಲ್ಲಿ ತರಬೇತಿ ಮುಖ್ಯಸ್ಥರಾದ ಶಿವಶಂಕರ್, ಚೂಡಾಮಣಿ ಪವರ್, ಮಲ್ಲಿಕಾರ್ಜುನ ಕಾನೂರ್, ಅಗ್ರಿಕಲ್ಚರ್ ಯೂನಿವರ್ಸಿಟಿ ಕಾಲೇಜ್ ಉಪನ್ಯಾಸಕರು, 180 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಮಾದಕ ವಸ್ತುಗಳ ಸಾಗಾಣೆ ಮತ್ತು ಬಳಕೆ ನಿಯಂತ್ರಣಕ್ಕೆ ಪೊಲೀಸ್‌ ಇಲಾಖೆ ದಿಟ್ಟಕ್ರಮ : ಬಿ.ನಿಖಿಲ್

ಶಿವಮೊಗ್ಗ ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಸಾಗಾಣೆ,...

B.Y. Raghavendra ಶ್ರೀ ಕೆಂಪೇಗೌಡರು ದೂರದೃಷ್ಟಿಯಿಂದ ನಾಡನ್ನು‌ ಕಟ್ಟಿ ಮಾದರಿಯಾಗಿದ್ದಾರೆ : ಬಿ.ವೈ.ರಾಘವೇಂದ್ರ

B.Y. Raghavendra ನಾಡಪ್ರಭು ಶ್ರೀ ಕೆಂಪೇಗೌಡರು ಓರ್ವ ದಕ್ಷ ಆಡಳಿತಗಾರ, ಅಪ್ರತಿಮ...

Samanvaya Trust ವಿ.ಚಂದ್ರಕಲಾ ಅವರಿಗೆ ಸಮನ್ವಯ ಪರಿಸರ ಕುಟುಂಬ ಪ್ರಶಸ್ತಿ

Samanvaya Trust ಪರಿಸರದ ಬಗ್ಗೆ ವಿಶೇಷ ಕಾಳಜಿ ಹೊಂದಿರುವ ವಿನೋಬನಗರ ನಿವಾಸಿ...