Shivamogga DC ಕರುನಾಡು ಸಂರಕ್ಷಣಾ ವೇದಿಕೆ ಸಂಘಟನೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಪ್ರಭುಲಿಂಗ ಕವಲಿಕಟ್ಟಿ ಅವರಿಗೆ ಅಭಿನಂದಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲೆಯ ಅಭಿವೃದ್ಧಿ ಹಾಗೂ ಅಕ್ರಮಗಳ ಬಗ್ಗೆ ಸಮಾಲೋಚನೆ ಮಾಡಿದರು. ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷ ಶಿವಮೂರ್ತಿ ಎಸ್.ಪಿ, ಪ್ರಧಾನ ಕಾರ್ಯದರ್ಶಿ ಮೂರ್ತಿ ಸಿ, ಮಹಿಳಾ ಪದಾಧಿಕಾರಿಗಳಾದ ವರಮಹಾಲಕ್ಷ್ಮೀ, ರಾಜಮ್ಮ, ಲತಾ, ದೀಪ ಮತ್ತಿರರಿದ್ದರು.
Malenadu Development Foundation ಎಲ್ಲರ ಮನ ಮೆಚ್ಚಿದ ಹರ್ಷದ “ನಾಲಂದೋತ್ಸವ
Malenadu Development Foundation ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ.) ,ಸಾಗರ ಕಾಯಕ ಫೌಂಡೇಶನ್ (ರಿ.), ಸಾಗರ , ಇವರ ಸಂಯುಕ್ತ ಆಶ್ರಯದಲ್ಲಿ,ಗ್ರಾಮ ಪಂಚಾಯಿತಿ ತಾಳಗುಪ್ಪ ಸಹಕಾರದೊಂದಿಗೆ ದು ಅದ್ದೂರಿಯಾಗಿ ನೆರವೇರಿತು.
ಕೇವಲ 7 ದಿನಗಳ ಹಿಂದೆ, ತೆಗೆದುಕೊಂಡ ನಿರ್ಣಯ ಕಾರ್ಯರೂಪಕ್ಕೆ ಬಂದು ಯಶಸ್ವಿಯಾಗಿದ್ದರ ಹಿಂದೆ, ಕಾಯಕ ಫೌಂಡೇಶನ್ (ರಿ.), ಬೆಂಗಳೂರು ಇದರ ಅಧ್ಯಕ್ಷರಾದ ಡಾ.ಮುರಿಗೆಪ್ಪ ಅಂಕದ ವಿಶ್ರಾಂತ ಕುಲಪತಿಗಳು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರೇರಣೆ,
ಮಾರ್ಗದರ್ಶನ, ಕಾಯಕ ಫೌಂಡೇಶನ್ ಕಾರ್ಯದರ್ಶಿಗಳಾದ ಶ್ರೀ ಮಹೇಶ್ ಅಂಕದ ಅವರ ಪ್ರೋತ್ಸಾಹವಿತ್ತು,
MDF ನ ಅಧ್ಯಕ್ಷರಾದ ಶ್ರೀ ಬಿ.ಆರ್.ಜಯಂತ್ ಸರ್, MDF ಕಾರ್ಯದರ್ಶಿಗಳಾದ ಡಾ.
ಶಿವಕುಮಾರ್, ಹೆಚ್ಇವರ ನಿರಂತರ ಕಾಳಜಿಯಿತ್ತು.
ಆತ್ಮ ವಿಶ್ವಾಸದ ನುಡಿ ಕಾರಣವಾಗಿತ್ತು.
ಹೀಗೆ ಪ್ರಾರಂಭವಾದ ನಾಲಂದೋತ್ಸವ ತಯಾರಿಯ ಸಂದರ್ಭದಲ್ಲಿ ವಿದ್ಯಾರ್ಥಿಗಳ ಉತ್ಸಾಹ ಮುಗಿಲು ಮುಟ್ಟಿತ್ತು,
ಸ್ವಲ್ಪ ತರಾತುರಿಯಂತೆ ಅನಿಸಿದರೂ ಅಂದುಕೊಂಡ ಕಾರ್ಯಗಳು ಗುರಿಯ ತಲುಪಿದವು. ವಿಜ್ಞಾನ ವಸ್ತು ಪ್ರದರ್ಶನ ಪ್ರಶಂಸೆಗೆ ಪಾತ್ರವಾಯಿತು .ವಿದ್ಯಾರ್ಥಿಗಳು ಅಲ್ಪ ಅವಧಿಯಲ್ಲಿ ಮೊಬೈಲ್ ನಿಂದ ತಮಗೆ ತಾವೇ ನೃತ್ಯ ತರಬೇತಿ ಮಾಡಿಕೊಂಡು ಚೆನ್ನಾಗಿ ನೃತ್ಯ ಮಾಡಿದರು.
Malenadu Development Foundation ಊಟದ ವ್ಯವಸ್ಥೆಯಲ್ಲಿ ಸ್ವಲ್ಪ ಸುಧಾರಣೆ ಬೇಕಾಗಿತ್ತು ಎನಿಸಿತು, ಶ್ರೀ ಸಂದೇಶ್ ಅವರು ನೀಡಿದ ಲೈಟಿನ ಸರದ ಸಹಾಯದಿಂದ ನಾಲಂದ ಶಾಲೆ ಜಗಮಗಿಸಿತು, BCM ಹಾಸ್ಟೆಲ್ ನ ವಾರ್ಡನ್ ಶ್ರೀ ವೆಂಕಟೇಶ್ ಅವರು ಸ್ವ ಇಚ್ಛೆಯಿಂದ ಭೋಜನಕ್ಕೆ ಜಿಲೇಬಿ ವ್ಯವಸ್ಥೆ ಮಾಡಿಸಿದ್ದರು, ಅಡೆಗೆಯವರಾದ ಶ್ರೀಮತಿ ಶಹಜಾದ್,ನೇತ್ರಾವತಿ , ಸಣ್ಣಜ್ಜಿ
ರುಚಿಯಾಗಿ ಅಡುಗೆ ಮಾಡಿದ್ದರು. ಪೋಷಕರಾದ ಶ್ರೀ ನಾರಾಯಣ ಗುಡ್ಡೇಮನೆ
ಅವರು ನಿರಂತರವಾಗಿ ನಮ್ಮ ಜೊತೆಗಿದ್ದು ನಮ್ಮ ತಯಾರಿಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು, ನಮ್ಮ ಶಾಲೆಯ ಹಿರಿಯ ವಿದ್ಯಾರ್ಥಿ ಸೋಮಶೇಖರ ತಾಳಗುಪ್ಪ ಸಹಭಾಗಿಯಾದರು.BCM ಹಾಸ್ಟೆಲ್ ನ ದೇವರಾಜ್, ಹಾಗೂ ನಿತಿನ್
ವಿದ್ಯಾರ್ಥಿಗಳಲ್ಲಿ ವಿದ್ಯಾರ್ಥಿಗಳಾಗಿ ಬೆರೆತು ಮಕ್ಕಳ ಜೊತೆಗಿದ್ದರು, ನಮ್ಮ ಶಾಲೆಯ ಎಲ್ಲಾ ಶಿಕ್ಷಕರು ಹಾಗೂ ಸಿಬ್ಬಂದಿ ತಮ್ಮ ಪಾಲಿನ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದರು, ಶಾಮಿಯಾನದ ವ್ಯವಸ್ಥೆ ಅಚ್ಚುಕಟ್ಟು ತನದಿಂದ ಕೂಡಿತ್ತು, ಅಡುಗೆ ಮನೆ ಹತ್ತಿರ ,
ಹೆಣ್ಣು ಮಕ್ಕಳ ಶೌಚಾಲಯ ಹಾಗೂ ಪೆಂಡಾಲ್ ಹೊರಗಡೆ ಬೆಳಕಿನ ಅವಶ್ಯಕತೆಯ ಅರಿವಾಯಿತು. ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀ ನಾರಾಯಣ ಬೆಕ್ಕೋಡುಗ್ರಾ.ಪಂ.ಸದಸ್ಯರಾದ ಆಗ್ನೇಲ್ ಡಿಸೋಜಾ ವೇದಿಕೆ ಹಂಚಿಕೊಂಡರು, ಕಾರ್ಯಕ್ರಮದಲ್ಲಿ ಭಾಗಿಯಾದ
ಹಿರಿಯರು, ತಾಯಂದಿರು,ತರುಣರು,ತರುಣಿಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳು ನಾಲಂದೋತ್ಸವ ಚೆನ್ನಾಗಿತ್ತು ಎಂದು ಹೇಳಿದರು
MESCOM ಜನವರಿ.7. ತಾವರೆ ಚಟ್ನಳ್ಳಿ ಸುತ್ತಮುತ್ತ ವಿದ್ಯುತ್ ಸರಬರಾಜು ಇಲ್ಲ, ಮೆಸ್ಕಾಂ ಮಾಹಿತಿ
MESCOM ಶಿವಮೊಗ್ಗ ತಾವರೆಚಟ್ನಹಳ್ಳಿ ವಿವಿ ಕೇಂದ್ರದಿಂದ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿದ್ದು, ಜ.07 ರಂದು ಬೆಳಗ್ಗೆ 09.00 ರಿಂದ ಸಂಜೆ 5.00 ರವರೆಗೆ ಈ ಕೇಂದ್ರದಿಂದ ವಿದ್ಯುತ್ ಸರಬರಾಜು ಪಡೆಯುವ ಕುವೆಂಪುನಗರ, ಮ್ಯಾಕ್ಸ್ ಪೂರ್ಣೋದಯ, ಎನ್.ಇ.ಎಸ್. ಬಡಾವಣೆ, ಡಿ.ವಿ.ಎಸ್. ಕಾಲೋನಿ, ಜ್ಯೋತಿನಗರ, ನವಲೆ ಕೆರೆಹೊಸೂರು, ಇಂದಿರಗಾಂಧಿ ಬಡಾವಣೆ, ಶಿವಬಸವನಗರ, ವೀರಭದ್ರೇಶ್ವರ ಲೇಔಟ್, ಪಿ.ಡಬ್ಲ್ಯೂಡಿ ಲೇಔಟ್, ನವುಲೆ, ಎಲ್.ಬಿ.ಎಸ್.ನಗರ, ಅಶ್ವತ್ನಗರ, ಕೀರ್ತಿನಗರ, ಸವಲಂಗರಸ್ತೆ, ಬಸವೇಶ್ವರನಗರ, ಕೃಷಿನಗರ, ರಾಯಲ್ ಬಡಾವಣೆ, ಅನೂಪ್ ಪಾಟೀಲ್ ಬಡಾವಣೆ, ಪವನಶ್ರೀ ಬಡಾವಣೆ, ಅಮೀರ್ ಅಹಮದ್ ಕಾಲೋನಿ, ವೆಂಕಟಾಪುರ, ದೇವಾಂಗಿ ಸ್ಟೇಜ್ 01, ರೆಡ್ಡಿ ಲೇಔಟ್, ಜೆ.ಎನ್.ಸಿ.ಸಿ. ಕಾಲೇಜ್, ಹಳೆ ಬೊಮ್ಮನಕಟ್ಟೆ, ದೇವಾಂಗಿ ಸ್ಟೇಜ್ 2, ಬೊಮ್ಮಕಟ್ಟೆ ಎ ಯಿಂದಿ ಹೆಚ್ ಬ್ಲಾಕ್ವರೆಗೆ, ಎಂ.ಎನ್.ಕೆ.ಲೇಔಟ್, ಸಾನ್ವಿ ಲೇಔಟ್, ವಿನಾಯಕ ಲೇಔಟ್, ಮಲ್ನಾಡ್ ಕೌಂಟಿ, ಸಾಯಿ ಲೇಔಟ್, ಶಾಂತಿನಗರ, ತಾವರೆಚಟ್ನಹಳ್ಳಿ, ಹೊನ್ನಳ್ಳಿ ರಸ್ತೆ, ಶಾದ್ನಗರ, ಮಲ್ಲಿಕಾರ್ಜುನ ನಗರ, ಸೇವಾಲಾಲ್ ನಗರ, ತರಳಬಾಳು ಬಡಾವಣೆ, ಪೇಸ್ ಕಾಲೇಜ್, ಗುಂಡಪ್ಪ ಶೆಡ್, ದೇವಾಂಗಿ ತೋಟ, ವೆಂಕಟೇಶ್ವರ ಸಾಮಿಲ್, ಯು.ಜಿ.ಡಿ. ಹಾಗೂ ಇನ್ನಿತರೆ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ತಿಳಿಸಿದೆ
Sanjeevini Hall Excellence Unit ಅಬಾಕಸ್ ಸ್ಪರ್ಧೆ, ವಿಜೇತರಿಗೆ ಬಹುಮಾನ ವಿತರಣೆ
Sanjeevini Hall Excellence Unit ಶಿವಮೊಗ್ಗ ನಗರದ ಸಂಜೀವಿನಿ ಹಾಲ್ಎಸ್ಆರ್ ಎಕ್ಸ್ಲೆನ್ಸ್ ಯುನಿಟ್ ವತಿಯಿಂದ ಸಂಜೀವಿನಿ ಹಾಲ್ ಶಿವಮೊಗ್ಗದಲ್ಲಿ ವಿವಿಧ ಶಾಲೆ ಅಬಾಕಸ್ ಸ್ಪರ್ಧೆ ಕಾರ್ಯಕ್ರಮದಲ್ಲಿ ವಿಜೇತ ಮಕ್ಕಳಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು.
Sanjeevini Hall Excellence Unit ಕಾರ್ಯಕ್ರಮದಲ್ಲಿ ಸಂಚಾಲಕಿ ಸುಜಾತ ಬಸವರಾಜ್, ರೇಖಾ ನಾಗರಾಜ್, ಸತ್ಯನಾರಾಯಣ, ಮಾದವ ಮಿಶ್ರ ಸುಷಾ, ತರಬೇತಿ ಶಿಕ್ಷಕರಾದ ಸುನೀತಾ, ತಬ್ಸಮ್, ಶ್ರುತಿ ಸೇರಿದಂತೆ ಇನ್ನಿತರರಿದ್ದರು.
Badravati Police ಭದ್ರಾವತಿಯಿಂದ ಖಾಸೀಂ ಎಂಬ ವ್ಯಕ್ತಿ ನಾಪತ್ತೆ. ಪೊಲೀಸ್ ಪ್ರಕಟಣೆ
Badravati Police ಭದ್ರಾವತಿ ನಗರದ ಖಾಸಿಂ, ಸುಮಾರು 36 ವರ್ಷ ಇವರು 2025 ರ ಡಿ.28 ರಂದು ಗುಜರಿ ವ್ಯಾಪಾರಕ್ಕೆ ಹೋದವರು ಮನೆಗೆ ವಾಪಸ್ ಬಂದಿರುವುದಿಲ್ಲ.
Badravati Police ಕಾಣೆಯಾದ ಖಾಸಿಂ ಸುಮಾರು 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಕೋಲು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಉರ್ದು, ಹಿಂದಿ, ಕನ್ನಡ, ತಮಿಳು ಭಾಷೆ ಮಾತನಾಡುತ್ತಾರೆ. ಎಡ ಕಣ್ಣಿನ ಹುಬ್ಬಿನ ಮೇಲ್ಭಾಗದಲ್ಲಿ ಹಳೆಯ ಗಾಯದ ಗುರುತು ಇದ್ದು, ಮನೆಯಿಂದ ಹೋಗುವಾಗ ಬೂದು ಮತ್ತು ಹಳದಿ ಮಿಶ್ರಿತ ಗೆರೆಗಳುಳ್ಳ ತುಂಬು ತೋಳಿನ ಶರ್ಟ್ ಧರಿಸಿರುತ್ತಾರೆ. ಈತನ ಸುಳಿವು ಯಾರಿಗಾದರೂ ಪತ್ತೆಯಾದಲ್ಲಿ ಹಳೇನಗರ ಪೊಲೀಸ್ ಠಾಣೆ, ಭದ್ರಾವತಿ ಇಲ್ಲಿಗೆ ಸಂಪರ್ಕಿಸಿ ಮಾಹಿತಿ ನೀಡಬೇಕೆಂದು ಕೋರಲಾಗಿದೆ.
H.K. Patil ಶಿವಮೊಗ್ಗಕ್ಕೆ ಸಚಿವ ಹೆಚ್.ಕೆ.ಪಾಟೀಲ್ ಭೇಟಿ ಸುಖಾಗಮನ ಕೋರಿದ ಶಾಸಕ ಚೆನ್ನಿ
Shri H.K. Patil ವಿವಿಧ ಅಧಿಕೃತ ಕಾರ್ಯಕ್ರಮಗಳ ನಿಮಿತ್ತ ನಮ್ಮ ಶಿವಮೊಗ್ಗ ನಗರಕ್ಕೆ ಆಗಮಿಸಿರುವ ರಾಜ್ಯದ ಕಾನೂನು, ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವರಾದ ಮಾನ್ಯ ಶ್ರೀ ಹೆಚ್.ಕೆ. ಪಾಟೀಲ್ ಅವರನ್ನು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಇಂದು ಸೌಹಾರ್ದಯುತವಾಗಿ ಭೇಟಿ ಮಾಡಿ, ಶುಭ ಕೋರಿದರು.
ಈ ಸಂದರ್ಭದಲ್ಲಿ ಶಿವಮೊಗ್ಗದ ಅಭಿವೃದ್ಧಿ ಹಾಗೂ ಪ್ರಚಲಿತ ವಿದ್ಯಮಾನಗಳ ಕುರಿತು ಚರ್ಚಿಸಲಾಯಿತು.
CM Siddaramaiah ಪರಿಸರವನ್ನು ನಾವು ರಕ್ಷಿಸಿದರೆ ಅದಹ ನಮ್ಮನ್ನು ರಕ್ಷಿಸುತ್ತದೆ.ಚಿತ್ರಸಂತೆಯ ಧ್ಯೇಯವಾಕ್ಯ ಅರ್ಥಪೂರ್ಣ- ಸಿದ್ಧರಾಮಯ್ಯ.
CM Siddaramaiah ಬೆಂಗಳೂರಿನ ಕರ್ನಾಟಕ ಚಿತ್ರಕಲಾ ಪರಿಷತ್ ಆವರಣದಲ್ಲಿ ನಡೆದ 23ನೇ ಚಿತ್ರಸಂತೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ಉದ್ಘಾಟಿಸಿ ಮಾತನಾಡಿದರು.
ಮುಖ್ಯಮಂತ್ರಿಯಾಗಿ 8ನೇ ಬಾರಿಗೆ ಚಿತ್ರ ಸಂತೆಯಲ್ಲಿ ಭಾಗವಹಿಸುತ್ತಿದ್ದೇನೆ ಎನ್ನುವುದು ಖುಷಿಯ ವಿಚಾರ. ಕಲಾವಿದರನ್ನು ಪ್ರೋತ್ಸಾಹಿಸುವುದು, ಅವರ ಚಿತ್ರಗಳ ಪ್ರದರ್ಶನ ಹಾಗೂ ಅವುಗಳ ಮಾರಾಟಕ್ಕೆ ವೇದಿಕೆ ಸೃಷ್ಟಿ ಮಾಡುವ ಕೆಲಸವನ್ನು ಚಿತ್ರಕಲಾ ಪರಿಷತ್ತು ಅರವತ್ತು ವರ್ಷಗಳಿಂದ ಮಾಡುತ್ತಾ ಬಂದಿದೆ ಎಂದರು.
ಚಿತ್ರಸಂತೆ ತನ್ನ 23ನೇ ವರ್ಷಕ್ಕೆ ಕಾಲಿಟ್ಟಿದೆ. ಸುಮಾರು 22 ರಾಜ್ಯಗಳು, ನಾಲ್ಕು ಕೇಂದ್ರಾಡಳಿತ ಪ್ರದೇಶಗಳ ಕಲಾವಿದರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ ಎಂದು ತಿಳಿಸಿದರು.
ಪ್ರತಿ ಜಿಲ್ಲೆಯಲ್ಲಿಯೂ ಸಾಧಕರ ವಸ್ತುಸಂಗ್ರಹಾಲಯಕ್ಕೆ ಬೇಡಿಕೆಯಿದ್ದು, ಸರ್ಕಾರ ಅದನ್ನು ಸಕಾರಾತ್ಮಕವಾಗಿ ಸ್ವೀಕಾರ ಮಾಡಲಿದೆ. ಈ ಬಾರಿಯ ಚಿತ್ರಸಂತೆಯ ಧ್ಯೇಯ ವಾಕ್ಯ ಪರಿಸರಕ್ಕೆ ಸಮರ್ಪಿಸಲಾಗಿದೆ. ಪರಿಸರವನ್ನು ನಾವು ರಕ್ಷಿಸಿದರೆ ಅದು ನಮ್ಮನ್ನು ರಕ್ಷಿಸುತ್ತದೆ. ಅದಕ್ಕಾಗಿ ಪರಿಸರದ ಬಗ್ಗೆ ಜ್ಞಾನ ಅಗತ್ಯ. ಈ ಕುರಿತು ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಬೆಂಗಳೂರು ಸೇರಿದಂತೆ ದೇಶದ ಅನೇಕ ರಾಜಧಾನಿಗಳಲ್ಲಿ ಪರಿಸರ ಮಾಲಿನ್ಯ ಹೆಚ್ಚಾಗಿದ್ದು, ದೆಹಲಿಯಲ್ಲಿ ಬದುಕಲು ಸಾಧ್ಯವಿಲ್ಲದ ವಾತಾವರಣ ನಿರ್ಮಾಣವಾಗುತ್ತಿದೆ. ಪರಿಸರದ ರಕ್ಷಣೆ ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
CM Siddaramaiah ಪ್ರತಿ ವರ್ಷ ಮೂರರಿಂದ ಐದು ಕೋಟಿ ಸಸಿಗಳನ್ನು ನೆಡುವ ಕಾರ್ಯಕ್ರಮವನ್ನು ಸರ್ಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ. ಯಾವುದೇ ಪ್ರದೇಶದಲ್ಲಿ ಶೇ. 30ರಷ್ಟು ಕಾಡು ಇರಬೇಕು. ನಮ್ಮಲ್ಲಿ ಶೇಕಡ 20ರಷ್ಟು ಅರಣ್ಯ ಪ್ರದೇಶವಿದೆ. ಇದನ್ನು ಹೆಚ್ಚು ಮಾಡಲು ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗುವುದು. ಸಾಲು ಮರದ ತಿಮ್ಮಕ್ಕನವರಂತೆ ಸಾರ್ವಜನಿಕರು ಗಿಡಗಳನ್ನು ನೆಡಬೇಕು. ಮಕ್ಕಳನ್ನು ಸಾಕಿದಂತೆ ಗಿಡಮರಗಳನ್ನು ಅವರು ಸಾಕಿದ್ದ ಕಾರಣ ಹಲವು ಪ್ರಶಸ್ತಿಗಳು ದೊರೆಯಿತು. ಅವರ ಆತ್ಮಕ್ಕೆ ಶಾಂತಿ ದೊರಕಬೇಕಾದರೆ ನಾವೆಲ್ಲರೂ ಗಿಡ ಬೆಳೆಸುವ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸಿದರು.
ಪರಿಸರ ರಕ್ಷಣೆಗಾಗಿ ಹೋರಾಟವನ್ನೇ ಕೈಗೊಂಡ ಅನೇಕರು ನಮ್ಮ ನಡುವೆಯೇ ಇದ್ದಾರೆ. ಗಿಡ ನೆಡಲು ಬಹಳ ಖರ್ಚು ಆಗುವುದಿಲ್ಲ. ಮನಸ್ಸು ಮಾಡಬೇಕಷ್ಟೆ. ಸರ್ಕಾರ ಕೂಡ ಈ ದಿಕ್ಕಿನಲ್ಲಿ ಹೆಚ್ಚಿನ ಆಸಕ್ತಿ ವಹಿಸಲಿದೆ ಎಂದು ಹೇಳಿದರು.
Shimoga News ಕೃತಕ ಬುದ್ಧಿಮತ್ತೆಯಿಂದ ಸವಾಲುಗಳಿವೆ. ಸ್ವಸಾಮರ್ಥ್ಕಕ್ಕೆ ಕುಂದುಂಟಾಗದಂತೆ ಬಳಸಿ- ಡಾ.ಹೆಚ್.ಬಿ.ಮಂಜುನಾಥ್.
Shimoga News ಕೃತಕ ಬುದ್ಧಿಮತ್ತೆಯಂತಹ ಆಧುನಿಕ ತಂತ್ರಜ್ಞಾನಗಳು ಸವಾಲಾಗಿ ಬಂದರೂ ಸ್ವಸಾಮರ್ಥ್ಯಕ್ಕೆ ಕುಂದುಂಟಾಗದಂತೆ ಬಳಸಿಕೊಳ್ಳಬೇಕು ಎಂದು ಹಿರಿಯ ಪತ್ರಕರ್ತ ಡಾ ಎಚ್ ಬಿ ಮಂಜುನಾಥ ಕರೆಕೊಟ್ಟರು.
ಶ್ರೀ ಸಿದ್ದಗಂಗಾ ವಿದ್ಯಾಸಂಸ್ಥೆಯಲ್ಲಿ ಏರ್ಪಾಡಾಗಿದ್ದ 56ನೇ ವಾರ್ಷಿಕ ಸಂಭ್ರಮದ ಎರಡನೇ ದಿನವಾದ ಇಂದು ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಭಾರತವು ವಿಶ್ವದ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ಭರದಲ್ಲಿ ನಮ್ಮ ಸಾಂಸ್ಕೃತಿಕ ಮೌಲ್ಯಗಳನ್ನು ಅಲಕ್ಷಿಸಬಾರದು, ಭ್ರಷ್ಟಾಚಾರವು ನಮ್ಮ ದೇಶದಲ್ಲಿ ದೊಡ್ಡ ಆಂತರಿಕ ಶತ್ರುವಂತೆ ಕಾಡುತ್ತಿದ್ದು ಯುವ ಪೀಳಿಗೆಯು ಸಾಮಾಜಿಕ ಜೀವನದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆಯನ್ನು ರೂಢಿಸಿಕೊಂಡಲ್ಲಿ ಇದನ್ನು ನಿವಾರಿಸಬಹುದು ಎಂದರು.
Shimoga News ಶೈಕ್ಷಣಿಕವಾಗಿ ಶಿಸ್ತು ಮತ್ತು ಶ್ರದ್ಧೆ, ಕೌಟುಂಬಿಕವಾಗಿ ಪ್ರೀತಿ ಮತ್ತು ವಾತ್ಸಲ್ಯ, ಸಾಮಾಜಿಕವಾಗಿ ನಿಷ್ಠೆ ಮತ್ತು ಪ್ರಾಮಾಣಿಕತೆ ರೂಢಿಸಿಕೊಂಡಲ್ಲಿ ಸಾಧನೆಗಳು ಸುಲಭವಾಗುತ್ತದೆ. ರಾಜ್ಯದ ಸುಮಾರು 5000 ಪದವಿಪೂರ್ವ ಕಾಲೇಜುಗಳಿಂದ ವಾರ್ಷಿಕ ಆರೂವರೆ ಲಕ್ಷದಷ್ಟು ವಿದ್ಯಾರ್ಥಿಗಳು ಪರೀಕ್ಷೆ ಕೈಗೊಳ್ಳುತ್ತಿದ್ದು ಶಾಲಾ ಪರೀಕ್ಷೆಯಲ್ಲಿ ಪ್ರತಿಭೆ ತೋರಿಸುವುದರೊಂದಿಗೆ ಜೀವನ ಪರೀಕ್ಷೆಯಲ್ಲೂ ಸಫಲತೆ ಸಾಧಿಸಬೇಕು, ಐದು ಟ್ರಿಲಿಯನ್ ಡಾಲರ್ಗಳ ಆರ್ಥಿಕ ಶಕ್ತಿಯಾಗುವಲ್ಲಿ ದಾಪುಗಾಲಿಡುತ್ತಿರುವ ಭಾರತದ ಜಿಡಿಪಿಯು ಅಮೆರಿಕಾದ 2.2, ಚೀನಾದ 4.6 ನ್ನೂ ಮೀರಿ 7.00 ಸಮೀಪಿಸುತ್ತಿದೆ, ಭಾರತದಲ್ಲಿ ಹೂಡಿಕೆ ಮಾಡಲು ಬೇರೆ ಬೇರೆ ದೇಶಗಳು ಮುಂದಾಗುತ್ತಿವೆ, ಈ ಸಂದರ್ಭದಲ್ಲಿ ನಮ್ಮ ವಿದ್ಯಾವಂತರು ಉದ್ಯೋಗಕ್ಕಿಂತ ಉದ್ದಿಮೆಯ ಕಡೆ ಗಮನ ನೀಡಬೇಕು ಎಂದರಲ್ಲದೇ ಸಿದ್ದಗಂಗಾ ವಿದ್ಯಾ ಸಂಸ್ಥೆ ಶೈಕ್ಷಣಿಕ ಸಾಧನೆಯೊಂದಿಗೆ ಸಾಂಸ್ಕೃತಿಕ ಮೌಲ್ಯಗಳಿಗೂ ಒತ್ತು ನೀಡುತ್ತಿರುವುದು ಸ್ವಾಗತಾರ್ಹ ಎಂದರು.
ಸಂಸ್ಥೆಯ ನಿರ್ದೇಶಕ ಡಾ. ಡಿ.ಎಸ್. ಜಯಂತ್ ಅಧ್ಯಕ್ಷತೆಯಲ್ಲಿ ಮುಖ್ಯಸ್ಥರಾದ ಶ್ರೀಮತಿ ಜಸ್ಟಿನ್ ಡಿಸೋಜಾ ರವರ ಗೌರವ ಉಪಸ್ಥಿತಿಯಲ್ಲಿ ಮುಖ್ಯ ಅತಿಥಿಗಳಾಗಿ ಉಪನ್ಯಾಸಕರುಗಳಾದ ಬಿ ಎಮ್ ವಿಜಯಕುಮಾರ್, ವನ್ನಂ ಸುಬ್ಬರಾವ್, ಸಂತೋಷ್ ಎಸ್ ಭಾಗವಹಿಸಿದ್ದರು. ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಸುಮಾರು 70 ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಸಾಂಸ್ಕೃತಿಕ ಪ್ರಸ್ತುತಿಗಳು ಸಹ ನೆರವೇರಿದವು. ರೇಖಾ ರಾಣಿ ಕೆ ಎಸ್ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದ ಪೂರ್ವದಲ್ಲಿ ಕು. ಜೀವಾಕ್ಷರಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ ನೆರವೇರಿತು.
Shimoga News ಮೂರುಬಾರಿ ಗೆದ್ದು ಶಾಸಕನಾಗಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿರುವೆ- ಬಿ.ಸ್ವಾಮಿರಾವ್.
Shimoga News ಕರ್ನಾಟಕ ಸಂಘ ಮತ್ತು ವಿಕಾಸರಂಗ ಸಂಯುಕ್ತವಾಗಿ ಕೀರ್ತಿಶೇಷ ಕೆ.ಸಿ.ಪ್ರಭಾಕರ್ ಸ್ಮರಣಾರ್ಥ ಕರ್ನಾಟಕ ಸಂಘದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಹೊಸನಗರ ಕ್ಷೇತ್ರದ ಏಳು ಚುನಾವಣೆಗಳಲ್ಲಿ ನಾನು ಸೋತಿದ್ದು, ಮೂರು ಚುನಾವಣೆಗಳಲ್ಲಿ ಗೆದ್ದು ಶಾಸಕನಾಗಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ್ದೇನೆ. ನಮ್ಮ ಕಾರ್ಯಕ್ಕೆ ಕರ್ನಾಟಕ ಸಂಘ ಮತ್ತು ವಿಕಾಸ ರಂಗ ಸಂಸ್ಥೆಗಳು ಸನ್ಮಾನಿಸುತ್ತಿರುವುದು ಸಂತಸ ತಂದಿದೆ ಎಂದು ತಿಳಿಸಿದರು.
ವಿದ್ಯಾರ್ಥಿ ದೆಸೆಯಲ್ಲಿ ಜ್ಞಾನ ನೀಡಿದ್ದು ಕರ್ನಾಟಕ ಸಂಘ. ನಮ್ಮ ಜ್ಞಾನದಾಹವನ್ನು ತೀರಿಸಿ ಜ್ಞಾನಮಾರ್ಗಕ್ಕೆ ಕರೆದುಕೊಂಡು ಹೋದ ಕರ್ನಾಟಕ ಸಂಘ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಹೆಸರು ಮಾಡಿದ ವಿಕಾಸರಂಗ ಜಂಟಿಯಾಗಿ ಸನ್ಮಾನಿಸುತ್ತಿರುವುದು ನನ್ನ ಜೀವಮಾನದ ಪ್ರಮುಖ ಘಟನೆಯಾಗಿದೆ ಎಂದು ಹೇಳಿದರು.
ಹಿರಿಯ ವಕೀಲ ಬಿ.ಎನ್.ಕೃಷ್ಣಮೂರ್ತಿ, ವೈದ್ಯ ಡಾ. ಚಿಕ್ಕಸ್ವಾಮಿ ಮತ್ತು ಪ್ರೊ. ಎಸ್.ಪಂಚಾಕ್ಷರಿ ಅವರನ್ನು ಸನ್ಮಾನಿಸಲಾಯಿತು. ಬಿ.ಎನ್.ಕೃಷ್ಣಮೂರ್ತಿ ಮಾತನಾಡಿ, ವೃತ್ತಿಜೀವನದ ಆರಂಭದಲ್ಲಿ ಇದ್ದಂತಹ ಪರಿಸ್ಥಿತಿ ಈಗ ಸಮಾಜದಲ್ಲಿ ನೋಡಲು ಸಾಧ್ಯವಿಲ್ಲ. ತನ್ನನ್ನು ತಿದ್ದಿ ಒಬ್ಬ ವಕೀಲನನ್ನಾಗಿ ಮಾಡಿದ ಎಸ್.ನರಸಿಂಹಮೂರ್ತಿ ಅವರನ್ನು ಸದಾ ಸ್ಮರಿಸುತ್ತೇನೆ ಎಂದರು.
ಡಾ. ಚಿಕ್ಕಸ್ವಾಮಿ ಮಾತನಾಡಿ, ವೈದ್ಯಕೀಯ ಕ್ಷೇತ್ರದಲ್ಲಿ ಪ್ರಾಮಾಣಿಕವಾಗಿ ಜನರ ಸೇವೆ ಮಾಡಿದ ತೃಪ್ತಿ ಇದೆ. ಭ್ರಷ್ಟಾಚಾರದ ವಿರುದ್ಧ ದನಿ ಎತ್ತಿ ಸರ್ಕಾರಿ ಸೇವೆಗೆ ರಾಜಿನಾಮೆ ನೀಡಿ ಖಾಸಗಿ ವೈದ್ಯನಾಗಿ ಇಂದಿಗೂ ಸೇವೆ ಸಲ್ಲಿಸುತ್ತಿರುವುದು ಸಮಾಧಾನ ತಂದಿದೆ ಎಂದು ಹೇಳಿದರು.
Shimoga News ಪ್ರೊ. ಪಂಚಾಕ್ಷರಿ ಮಾತನಾಡಿ, ಕುವೆಂಪು ಅವರ ಆಶೀರ್ವಾದದಿಂದ ತಾನು ಮಾಡಿರುವ ಕೆಲಸಕ್ಕೆ ಇಂದು ಸನ್ಮಾನ ನೀಡುತ್ತಿರುವುದು ಹೆಮ್ಮೆ ಎನಿಸಿದೆ ಎಂದರು.
ಕರ್ನಾಟಕ ಸಂಘದ ಅಧ್ಯಕ್ಷ ಎಚ್.ಆರ್.ಶಂಕರ್ನಾರಾಯಣ ಶಾಸ್ತ್ರಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೆ.ಸಿ ಪ್ರಭಾಕರ್ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ನೋಡಿದ್ದೆ. ಅವರು ಬೆಳೆಸಿದ ಪ್ರತಿಭಾರಂಗ ಮತ್ತು ವಿಕಾಸರಂಗ ಸಹ ಅತ್ಯುತ್ತಮವಾಗಿ ಕಾರ್ಯಕ್ರಮಗಳನ್ನು ನಡೆಸಿದ್ದನ್ನು ಗಮನಿಸಿದ್ದೇನೆ ಎಂದರು.
ವಿಕಾಸರಂಗದ ಅಧ್ಯಕ್ಷೆ ಹೆಚ್.ವಿಶಾಲಾಕ್ಷಿ ಮಾತನಾಡಿ, ವಿಕಾಸರಂಗ ಅನೇಕ ಸಾಹಿತ್ಯ, ಸಾಂಸ್ಕೃತಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ ಎಂದರು.
ಮಂಜುನಾಥ್ ಪ್ರಾರ್ಥಿಸಿದರು. ವಿಕಾಸರಂಗದ ಕಾರ್ಯದರ್ಶಿ ಎಸ್.ಎಸ್.ವಾಗೀಶ್ ಸ್ವಾಗತಿಸಿದರು. ಶಾಂತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಕರ್ನಾಟಕ ಸಂಘದ ನಿಕಟಪೂರ್ವ ಅಧ್ಯಕ್ಷ ಎಂ.ಎನ್.ಸುಂದರರಾಜ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಾರ್ಷಲ್ ಶರಾಮ್, ರಾಘವೇಂದ್ರ ಹೊಸೂಡಿ, ಜಿ.ವಿಜಯಕುಮಾರ್ ಮತ್ತು ಪ್ರೊ. ಆಶಾಲತಾ ಇತರರಿದ್ದರು.
Canara Bank ಕೆನರಾ ಬ್ಯಾಂಕ್ ಸ್ವ- ಉದ್ಯೋಗ ತರಬೇತಿ ಕೇಂದ್ರದಲ್ಲಿ ಕುರಿ ಮತ್ತು ಮೇಕೆ ಸಾಕಾಣಿಕೆ ಉಚಿತ ಶಿಬಿರ
Canara Bank ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು ಸೊಣ್ಣಹಳ್ಳಿಪುರದಲ್ಲಿರುವ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆಯಲ್ಲಿ ದಿ:19/01/2026 ರಿಂದ 13 ದಿನಗಳ ಕಾಲ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರಿಗೆ ಕುರಿ ಮತ್ತು ಮೇಕೆ ಸಾಕಾಣಿಕೆ ಉಚಿತ ತರಬೇತಿ ಶಿಬಿರವನ್ನು ಏರ್ಪಡಿಸಿದೆ.
ಸ್ವಯಂ ಉದ್ಯೋಗಿಗಳಾಗಲು ಬಯಸುವ 18 ರಿಂದ 50 ವರ್ಷ ವಯಸ್ಸಿನ ಕರ್ನಾಟಕ ರಾಜ್ಯದ ಯಾವುದೇ ಜಿಲ್ಲೆಯ ನಿರುದ್ಯೋಗಿ ಪುರುಷರು ಹಾಗೂ ಮಹಿಳೆಯರು ಈ ಶಿಬಿರದಲ್ಲಿ ಪಾಲ್ಗೊಳ್ಳಬಹುದಾಗಿದೆ.
ಈ ಶಿಬಿರದ ಸಮಯದಲ್ಲಿ ತರಬೇತಿ, ಊಟ ಹಾಗೂ ವಸತಿ ಸೌಕರ್ಯಗಳು ಉಚಿತವಾಗಿ ಕಲ್ಪಿಸಲಾಗುವುದು.
ಗ್ರಾಮೀಣ ಭಾಗದ ಬಿಪಿಎಲ್ ಅಭ್ಯರ್ಥಿಗಳಿಗೆ ಮೊದಲ ಆದ್ಯತೆಯನ್ನು ನೀಡಲಾಗುವುದು. ಅಭ್ಯರ್ಥಿಗಳು ಸ್ಥಳೀಯ ಭಾಷೆ ಬಲ್ಲವರಾಗಿದ್ದು, ಕನ್ನಡ ಓದಲು ಮತ್ತು ಬರೆಯಲು ತಿಳಿದಿರಬೇಕು. ತರಬೇತಿ ನಂತರ ಕೇಂದ್ರ ಸರ್ಕಾರದ ಗ್ರಾಮೀಣ ಸಚಿವಾಲಯದಿಂದ ಪ್ರಮಾಣ ಪತ್ರವನ್ನು ವಿತರಿಸಲಾಗುವುದು.
Canara Bank ಆಸಕ್ತಿಯುಳ್ಳ ಅಭ್ಯರ್ಥಿಗಳು ಜ 09 ರಂದು ಬೆಳಿಗ್ಗೆ 10.00 ಘಂಟೆಗೆ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಸೊಣ್ಣಹಳ್ಳಿಪುರ, ಹಸಿಗಾಳ(ಅಂಚೆ), ಹೊಸಕೋಟೆ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ ಇಲ್ಲಿ ನಡೆಯುವ ತರಬೇತಿಗೆ ನೇರವಾಗಿ ವಿದ್ಯಾರ್ಹತೆ ಮತ್ತು ವಿಳಾಸ ದಾಖಲಾತಿಗಳೊಂದಿಗೆ ಹಾಜರಾಗುವುದು.
ಸಂದರ್ಶನಕ್ಕೆ ಹಾಜರಾಗಲು ಅಸಾಧ್ಯವಾದಲ್ಲಿ ಜ. 09 ರೊಳಗೆ ಸಂಸ್ಥೆಯನ್ನು ದೂ. ಸಂ.: 8970476050/ 9591514154/ 9686248369/ 6363139123 / 9505894247 ಗಳನ್ನು ಸಂಪರ್ಕಿಸಿ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದೆಂದು ಸಂಸ್ಥೆಯ ನಿರ್ದೇಶಕರು ತಿಳಿಸಿದ್ದಾರೆ.
