Wednesday, May 6, 2026
Wednesday, May 6, 2026
Home Blog Page 35

Sharada Pooryanayak ಸಮುದಾಯ ಆರೋಗ್ಯ ಕೇಂದ್ರಗಳ ತಜ್ಞವೈದ್ಯರ ವರ್ಗಾವಣೆ ಅವೈಜ್ಞಾನಿಕ- ಶಾಸಕಿ ಶಾರದಾ ಪೂರ್ಯಾನಾಯಕ್

0

Sharada Pooryanayak ಶಿವಮೊಗ್ಗ ತಾಲೂಕು ಹೊಳಲೂರು, ಆಯನೂರು ಹಾಗೂ ಹೊಳೆಹೊನ್ನೂರಿನ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ತಜ್ಞ ವೈದ್ಯರನ್ನು ಅವೈಜ್ಞಾನಿಕವಾಗಿ ವರ್ಗಾವಣೆ ಮಾಡಿದ್ದು ಇದನ್ನ ಖಂಡಿಸಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ವತಿಯಿಂದ ಇಂದು ಶಿವಮೊಗ್ಗ ಜಿಲ್ಲಾ ಡಿಸಿ ಕಚೇರಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಲಾಯಿತು.

ಹಾಗೂ ಕಾರ್ಯನಿರ್ವಹಿಸುತ್ತಿದ್ದ ವೈದ್ಯರನ್ನು ಮರು ನಿಯೋಜನೆ ಮಾಡುವಂತೆ ಮನವಿ ಪತ್ರವನ್ನು ಡಿಸಿ ಅವರಿಗೆ ಜೆಡಿಎಸ್ ಪಕ್ಷದ ಮುಖಂಡರ ಸಮ್ಮುಖದಲ್ಲಿ ನೀಡಲಾಯಿತು.

Sharada Pooryanayak ಈ ಸಂದರ್ಭದಲ್ಲಿ ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಾಮಕೃಷ್ಣರವರು, ಜೆಡಿಎಸ್ ಗ್ರಾಮಾಂತರದ ಅಧ್ಯಕ್ಷರಾದ ಕಾಸೆಟ್ಟಿ ಸತೀಶ್ ರವರು,ಜೆಡಿಎಸ್ ಗ್ರಾಮಾಂತರದ ಕಾರ್ಯಾಧ್ಯಕ್ಷರಾದ ಸೋಮಿನಕೊಪ್ಪ ಕಾಂತರಾಜ್ ಅವರು ಹಾಗೂ ಜೆಡಿಎಸ್ ಪಕ್ಷದ ಮುಖಂಡರುಗಳು ಹಾಗೂ ಕಾರ್ಯಕರ್ತರುಗಳು ಉಪಸ್ಥಿತರಿದ್ದರು.

Priyank Kharge ಕುಡಿಯುವ ನೀರಿನ ತುರ್ತು ಕಮಗಾರಿಗೆ ಎಲ್ಲ ಜಿಲ್ಲೆಗಳಿಗೆ ₹60 ಕೋಟಿ ಹಂಚಿಕೆ- ಪ್ರಿಯಾಂಕ್ ಖರ್ಗೆ.

0

Priyank Kharge ಗ್ರಾಮೀಣ ಕುಡಿಯುವ ನೀರಿನ ಸಮಸ್ಯೆ ಎದುರಿಸಲು ನಮ್ಮ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

◆ ರಾಜ್ಯದ 20 ಜಿಲ್ಲೆಗಳ 60 ತಾಲ್ಲೂಕುಗಳಲ್ಲಿನ 324 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಇವುಗಳ ಪೈಕಿ 76 ಗ್ರಾಮಗಳಿಗೆ 76 ಟ್ಯಾಂಕರ್‌ಗಳ ಮುಖಾಂತರ ಹಾಗೂ 248 ಗ್ರಾಮಗಳಿಗೆ 280 ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆ ಪಡೆದು ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ.

◆ ತುರ್ತು ಕಾಮಗಾರಿಗಳನ್ನು ನಿರ್ವಹಿಸಲು ಈಗಾಗಲೇ 60 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ, ಮಾರ್ಚ್ 2026ರಲ್ಲಿ ಟಾಸ್ಕ್ ಫೋರ್ಸಿನಡಿ ಮುಂದುವರೆದ ಕಾಮಗಾರಿಗಳ ಬಾಕಿ ಬಿಲ್ ಪಾವತಿಗೆ ಹೆಚ್ಚುವರಿಯಾಗಿ 48 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಬಿಡುಗಡೆ ಮಾಡಲಾಗಿದೆ ಹಾಗೂ ಶುದ್ದ ಕುಡಿಯುವ ನೀರಿನ ಘಟಕಗಳ ದುರಸ್ತಿಗಾಗಿ 14.50 ಕೋಟಿ ರೂ.ಗಳನ್ನು ಜಿಲ್ಲೆಗಳಿಗೆ ಹಂಚಿಕೆ ಮಾಡಲಾಗಿದೆ.

◆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು ಸರಬರಾಜು ನಿರಾತಂಕವಾಗಿರಬೇಕೆಂಬ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿಗಳ ಸಿಇಒಗಳು ಸೇರಿದಂತೆ ತಾಲ್ಲೂಕು ಹಾಗೂ ಗ್ರಾಮ ಪಂಚಾಯತಿ ಮಟ್ಟದಲ್ಲಿ ಅಧಿಕಾರಿಗಳು ನಿರಂತರವಾಗಿ ನಿಗಾ ಇರಿಸಿದ್ದು ಪರಿಶೀಲನ ಸಭೆಗಳನ್ನು ನಡೆಸುತ್ತಿದ್ದಾರೆ, ಆದ್ಯತಾ ಕ್ರಮಗಳನ್ನು ಕೈಗೊಳ್ಳುವ ಮೂಲಕ ಗ್ರಾಮೀಣ ಕುಡಿಯುವ ನೀರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

◆ ಗ್ರಾಮಗಳು ಹಾಗೂ ಜನವಸತಿ ಪ್ರದೇಶಗಳಲ್ಲಿನ ಎಲ್ಲಾ ಕುಡಿಯುವ ನೀರಿನ ಮೂಲಗಳ ಸಂಭಾವ್ಯ ಗುಣಮಟ್ಟದ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ, ಗುಣಮಟ್ಟದಲ್ಲಿ ಅನುಮಾನ ಕಂಡುಬಂದ ನೀರಿನ ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಮರುಪರೀಕ್ಷೆಗೆ ಒಳಪಡಿಸಿ ಗುಣಮಟ್ಟವನ್ನು ಖಚಿತಪಡಿಸಿಕೊಂಡು ಕಲುಷಿತ ನೀರಿಗೆ ಪರ್ಯಾಯವಾಗಿ ಇತರೆ ಮೂಲಗಳಿಂದ ಕುಡಿಯುವ ನೀರನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

Priyank Kharge ◆ ಬೇಸಿಗೆಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿನ ಹಲವು ಜಲಮೂಲಗಳು ಬತ್ತಿಹೋಗುವುದರಿಂದ ಹಾಗೂ ಕೊಳವೆ ಬಾವಿಗಳ ಇಳುವರಿ ಕಡಿಮೆಯಾಗುತ್ತಿರುವುದರಿಂದ ಕೆಲವೊಂದು ಜನವಸತಿ ಪ್ರದೇಶಗಳಲ್ಲಿ ಉಂಟಾಗಿರುವ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಲು ತುರ್ತಾಗಿ ಕುಡಿಯುವ ನೀರಿನ ಕಾಮಗಾರಿಗಳನ್ನು ಕೈಗೊಳ್ಳಲು ಕ್ರಮ ವಹಿಸಲಾಗಿದೆ.

◆ ಖಾಸಗಿ ಬೋರ್‌ವೆಲ್‌ಗಳನ್ನು ಬಾಡಿಗೆ ಪಡೆಯುವುದು
◆ ಟ್ಯಾಂಕರ್‌ ಮೂಲಕ ನೀರನ್ನು ಸರಬರಾಜು ಮಾಡುವುದು
◆ ಕೊಳವೆ ಬಾವಿಗಳನ್ನು ಫ್ಲಶಿಂಗ್‌ ಮತ್ತು ಆಳಗೊಳಿಸುವುದರೊಂದಿಗೆ ನೀರಿನ ಲಭ್ಯತೆ ಖಾತರಿಪಡಿಸಿಕೊಳ್ಳುವುದು
◆ ಅನಿವಾರ್ಯ ಸಂದರ್ಭದಲ್ಲಿ ಮಾತ್ರ ಕೊಳವೆಬಾವಿಗಳನ್ನು ಕೊರೆಯುವುದು
◆ ಪ್ರತಿ 2ನೇ ಹಾಗೂ 4ನೇ ಸೋಮವಾರದಂದು ಪಿಡಿಒಗಳೊಂದಿಗೆ ಜಿ.ಪಂ ಸಿಇಒಗಳು ಕುಡಿಯುವ ನೀರಿನ ಕುರಿತು ಸಭೆ
◆ 24/7 ಕಂಟ್ರೋಲ್‌ ರೂಮ್‌ ಮತ್ತು ಕ್ಷಿಪ್ರ ಕಾರ್ಯಪಡೆ ರಚನೆ
ಇವು ನಮ್ಮ ಇಲಾಖೆ ಕೈಗೊಂಡಿರುವ ತುರ್ತು ಕ್ರಮಗಳು.

Babu Jagjivanram ಆಹಾರ ಸ್ವಾವಲಂಬನೆಯತ್ತ ದೇಶ ಮುನ್ನಡೆಸಿದ ಬಾಬು ಜಗಜೀವನರಾಂ ಕೊಡುಗೆ ಸ್ಮರಣೀಯ- ಬಿ.ವೈ.ರಾಘವೇಂದ್ರ.

0

Babu Jagjivanram  ಸ್ವಾತಂತ್ರ್ಯ ಹೋರಾಟಗಾರ, ಧೀಮಂತ ನಾಯಕ, ಮಾಜಿ ಉಪ ಪ್ರಧಾನಿ, ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್‌ ರಾಮ್‌ ಅವರ ಜನ್ಮದಿನದ ಸ್ಮರಣೆಗಳು.

ಭಾರತದ ಹಸಿರು ಕ್ರಾಂತಿಯ ಹರಿಕಾರರಾಗಿ ದೇಶವನ್ನು ಆಹಾರ ಸ್ವಾವಲಂಬನೆಯತ್ತ ಮುನ್ನಡೆಸಿದ ಇವರ ಸಾಧನೆ ಸದಾ ಸ್ಮರಣೀಯ.

Babu Jagjivanram  ಸಾಮಾಜಿಕ ಸಮಾನತೆ ಮತ್ತು ಶೋಷಿತ ವರ್ಗಗಳ ಏಳಿಗೆಗಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಇವರ ಆದರ್ಶಗಳು ನಮಗೆಲ್ಲರಿಗೂ ದಾರಿದೀಪ.

ಶಿವಮೊಗ್ಗದಲ್ಲಿ ವಿಶಿಷ್ಟವಾಗಿ ನಡೆದ ವಿದ್ಯಾ ಸಂಗಮ

0

ನ್ಯೂಸ್ 18 ನೆಟ್ ವರ್ಕ್ ಮತ್ತು Ad6 advertising ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 4ರ ಶನಿವಾರದಂದು ಶಿವಮೊಗ್ಗದ ಪೊಲೀಸ್ ಸಭಾಭವನದಲ್ಲಿ ನಡೆದ ವಿದ್ಯಾ ಸಂಗಮ ಕಾರ್ಯಕ್ರಮದಲ್ಲಿ ಎಂಡಿಎಫ್ ಸ್ವತಂತ್ರ ಪದವಿ ಪೂರ್ವ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದರು. ರಾಜ್ಯದ ನಾನಾ ಭಾಗಗಳಿಂದ ಸುಮಾರು 35ಕ್ಕೂ ಹೆಚ್ಚು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದವು. ವಿವಿಧ ಪದವಿಗಳ , ಉನ್ನತ ಶಿಕ್ಷಣದ ಸಂಸ್ಥೆಗಳು ಪ್ರತಿನಿಧಿಗಳು ಭಾಗವಹಿಸಿ ಸ್ನಾತಕೋತ್ತರ ಪದವಿ ಶಿಕ್ಷಣದ ಸಾಧ್ಯತೆಗಳ ಬಗ್ಗೆ ಮಾಹಿತಿ ನೀಡಿದರು. ವಿಜ್ಞಾನದ ವಿದ್ಯಾರ್ಥಿಗಳಿಗೆ ಸಿಇಟಿ ಮಾಕ್ ಟೆಸ್ಟ್ ನಡೆಸಲಾಯಿತು. ಎಲ್ ಬಿ ಕಾಲೇಜಿನ ಹಳೆಯ ವಿದ್ಯಾರ್ಥಿ ಮತ್ತು ಹಾಲಿ ಎಂ ಡಿ ಎಫ್ ನಿರ್ದೇಶಕರಾಗಿರುವ ನ್ಯೂಸ್ 18 ನೆಟ್ವರ್ಕ್ ನ ಎಡಿಟೋರಿಯಲ್ ಚೀಫ್ ದಕ್ಷಿಣ ಭಾರತದ ಮುಖ್ಯಸ್ಥ ಡಿ.ಪಿ.ಸತೀಶ್ , ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಡಾ ಎಚ್ ಎಮ್ ಶಿವಕುಮಾರ್ ಹಾಗೂ ಇತರ ಪದಾಧಿಕಾರಿಗಳು ಮತ್ತು ಕಾಲೇಜಿನ ಪ್ರಾಚಾರ್ಯರಾದ ಡಾ ಜಗದೀಶ್ ಎಂ ಭಂಡಾರಿ ಅವರುಗಳ ಮಾರ್ಗದರ್ಶನದಲ್ಲಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು. ನ್ಯೂ ಸ್ 18 ಜಿಲ್ಲಾ ವರದಿಗಾರ ವಿನಯ್ ಪುರದಾಳು ಉಪನ್ಯಾಸಕ ವರ್ಗದ ಶ್ರೀಮತಿ ರೇಖಾ ಜಿ, ಕುಮಾರಿ ಶಾರಿಕಾ ಮತ್ತು ಅನುಷಾ ಭಾಗವಹಿಸಿದ್ದರು.

2026 ನೆ ವಾರ್ಷಿಕ ” ಡಾ.ಬಾಬು ಜಗಜೀವನ ರಾಂ ಪ್ರಶಸ್ತಿ ಘೋಷಣೆ. ಐವರು ಸಾಧಕರಿಗೆ ಗೌರವ

0

ಹಸಿರು ಕ್ರಾಂತಿಯ ಹರಿಕಾರ ಹಾಗೂ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್ ಅವರ 119ನೇ ಜನ್ಮ ದಿನಾಚರಣೆ ಯ ಸುಸಂದರ್ಭದಲ್ಲಿ, ಕರ್ನಾಟಕ ಸರ್ಕಾರವು 2026ನೇ ಸಾಲಿನ ಪ್ರತಿಷ್ಠಿತ ಡಾ. ಬಾಬು ಜಗಜೀವನ ರಾಮ್ ಪ್ರಶಸ್ತಿಯನ್ನು ಘೋಷಿಸಿದೆ.

ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಶೋಷಿತರ ಪರವಾಗಿ ಮತ್ತು ಕಲೆ, ಸಾಹಿತ್ಯ ಹಾಗೂ ಸಮಾಜ ಸೇವಾ ಕ್ಷೇತ್ರದಲ್ಲಿ ಅನನ್ಯ ಸಾಧನೆ ಮಾಡಿದ ಐವರು ಗಣ್ಯರನ್ನು ಈ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಮಾಜ ಕಲ್ಯಾಣ ಇಲಾಖೆಯ ವತಿಯಿಂದ ರಚಿಸಲಾಗಿದ್ದ ಉನ್ನತ ಮಟ್ಟದ ಆಯ್ಕೆ ಸಮಿತಿಯು ಶಿಫಾರಸು ಮಾಡಿದ ಅರ್ಹ ಸಾಧಕರ ಪಟ್ಟಿಗೆ ಸರ್ಕಾರವು ಅನುಮೋದನೆ ನೀಡಿ 2026 ನೇ ಮಾರ್ಚ್ 31 ರಂದು ಆದೇಶ ಹೊರಡಿಸಿದೆ.

ಪ್ರಶಸ್ತಿ ಪುರಸ್ಕøತರಿಗೆ ತಲಾ ರೂ. 5.00 ಲಕ್ಷ ನಗದು ಬಹುಮಾನ ಹಾಗೂ 20 ಗ್ರಾಂ ಚಿನ್ನದ ಪದಕ ನೀಡಿ ಗೌರವಿಸಲಾಗುವುದು.

ಪ್ರಶಸ್ತಿ ಪುರಸ್ಕøತರ ವಿವರ:

ಶ್ರೀಮತಿ ಚಂದ್ರಮ್ಮ (ಬೆಂಗಳೂರು ಕೇಂದ್ರ):

ಬೆಂಗಳೂರಿನ ಭುವನೇಶ್ವರಿ ನಗರದ ನಿವಾಸಿಯಾದ ಇವರು, ಸಂಘಟನೆ, ಸಾಮಾಜಿಕ ಹೋರಾಟ ಹಾಗೂ ಭೂ ಆಂದೋಲನ ಕ್ಷೇತ್ರಗಳಲ್ಲಿ ಸಲ್ಲಿಸಿದ ಸುದೀರ್ಘ ಸೇವೆಯನ್ನು ಗುರುತಿಸಿ ಈ ಗೌರವಕ್ಕೆ ಪಾತ್ರರಾಗಿದ್ದಾರೆ.

ಶ್ರೀ ಡಿಂಗ್ರಿ ನರಸಪ್ಪ (ಕಲಬುರಗಿ ವಿಭಾಗ):

ರಾಯಚೂರು ಜಿಲ್ಲೆಯ ಆಶಾಪುರ ನಿವಾಸಿಯಾದ ಇವರು, ಜಾನಪದ ಕಲಾ ಕ್ಷೇತ್ರದಲ್ಲಿ ಸಲ್ಲಿಸಿದ ಅಪಾರ ಕೊಡುಗೆಗಾಗಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಶ್ರೀ ಸರಜೂ ಕಾಟ್ಕರ್ (ಬೆಳಗಾವಿ ವಿಭಾಗ) :

ಬೆಳಗಾವಿಯ ಮಹಾಂತೇಶನಗರದ ನಿವಾಸಿಯಾದ ಇವರು, ಪತ್ರಿಕೋದ್ಯಮ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಸಾಧಕರಾಗಿದ್ದಾರೆ.

ಶ್ರೀ ನಾರಾಯಣ (ಮೈಸೂರು ವಿಭಾಗ) :

ಮೈಸೂರಿನ ಮಾಜಿ ಮೇಯರ್ ಆಗಿರುವ ಇವರು, ಆಡಳಿತ ಮತ್ತು ಸಮಾಜ ಸೇವೆಯಲ್ಲಿನ ತಮ್ಮ ದಕ್ಷ ಹಾಗೂ ಜನಪರ ಕಾರ್ಯಗಳಿಗಾಗಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಶ್ರೀ ನರಸೀಯಪ್ಪ (ಬೆಂಗಳೂರು ವಿಭಾಗ) :

ತುಮಕೂರಿನ ಮಾಜಿ ನಗರಸಭೆ ಸದಸ್ಯರಾದ ಇವರು, ಜನಸಾಮಾನ್ಯರ ಪರವಾದ ಹೋರಾಟ ಮತ್ತು ಸಂಘಟನಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಕ್ಕಾಗಿ ಆಯ್ಕೆಯಾಗಿದ್ದಾರೆ.

ಸಮಾರಂಭದ ವಿವರ:

ಡಾ. ಬಾಬು ಜಗಜೀವನ್ ರಾಮ್ ಅವರ ಜನ್ಮದಿನವಾದ ಏಪ್ರಿಲ್ 05, 2026 ರಂದು ಬೆಂಗಳೂರಿನ ವಿಧಾನಸೌಧ ಪೂರ್ವ ದ್ವಾರದ ಭವ್ಯ ಮೆಟ್ಟಿಲುಗಳ ಮೇಲೆ ಆಯೋಜಿಸಲಾಗುವ ವಿಶೇಷ ಕಾರ್ಯಕ್ರಮದಲ್ಲಿ ಈ ಎಲ್ಲಾ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು ಎಂದು ಸಮಾಜ ಕಲ್ಯಾಣ ಇಲಾಖೆಯ ಅಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

S.N. Channabasappa ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು- ಎಸ್.ಎನ್.ಚನ್ನಬಸಪ್ಪ

0

S.N. Channabasappa ಕುಡಿಯುವ ನೀರಿನ ಪಂಪ್ ಹೌಸ್‌ಗೆ ಶಾಸಕ ಎಸ್.ಎನ್. ಚನ್ನಬಸಪ್ಪ ಭೇಟಿ: ನೀರು ಸರಬರಾಜು ವ್ಯತ್ಯಯ ಸರಿಪಡಿಸಲು ಅಧಿಕಾರಿಗಳಿಗೆ ಸೂಚನೆ.

“ನಗರದ ಜನತೆಗೆ ಕುಡಿಯುವ ನೀರಿನ ಸೌಲಭ್ಯದಲ್ಲಿ ಯಾವುದೇ ವ್ಯತ್ಯಯವಾಗಬಾರದು. ಅಧಿಕಾರಿಗಳು ಸ್ಥಳದಲ್ಲೇ ಇದ್ದು ಸಮಸ್ಯೆ ಬಗೆಹರಿಸಬೇಕು,” ಎಂದು ನಿರ್ದೇಶಿಸಿದರು.

ಶಾಸಕರ ಸೂಚನೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಅಧಿಕಾರಿಗಳು, ಮುಂದಿನ ಎರಡು ದಿನಗಳಲ್ಲಿ ನೀರು ಸರಬರಾಜಿನಲ್ಲಿ ಉಂಟಾಗಿರುವ ಎಲ್ಲಾ ತಾಂತ್ರಿಕ ಅಡಚಣೆಗಳನ್ನು ಪರಿಹರಿಸುವ ಭರವಸೆಯನ್ನು ನೀಡಿದ್ದಾರೆ.

S.N. Channabasappa ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆಯ ಮಾಜಿ ಸದಸ್ಯರಾದ ಶ್ರೀ ಪ್ರಭಾಕರ್ ಪಿ, ಜಲಮಂಡಳಿ ಹಾಗೂ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ತಾಂತ್ರಿಕ ಸಿಬ್ಬಂದಿ ಉಪಸ್ಥಿತರಿದ್ದರು.

ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಧಿಸಿರುವ ತೆರಿಗೆಗೆ ವಿನಾಯಿತಿ ನೀಡದಿದ್ದರೆ ತೀವ್ರ ಪ್ರತಿಭಟನಾ ಕ್ರಮ- ಎನ್.ಕೆ.ಜಗದೀಶ್

0

ರಾಜ್ಯದಲ್ಲಿ ಎಲೆಕ್ಟ್ರಿಕ್ ವಾಹನಗಳಿಗೆ ತೆರಿಗೆ ವಿಧಿಸಿರುವ ಸರ್ಕಾರದ ಕ್ರಮವನ್ನು ಶಿವಮೊಗ್ಗ ಬಿಜೆಪಿ ಜಿಲ್ಲಾಧ್ಯಕ್ಷರಾದ ಜಗದೀಶ್ ಎನ್.ಕೆ ತೀವ್ರವಾಗಿ ಖಂಡಿಸಿದ್ದಾರೆ.

ಪರಿಸರ ಸ್ನೇಹಿ ವಾಹನಗಳ ಬಳಕೆಯನ್ನು ಉತ್ತೇಜಿಸಬೇಕಾದ ಸಮಯದಲ್ಲಿ ಸರ್ಕಾರವೇ ಅವುಗಳ ಮೇಲೆ ಹೆಚ್ಚುವರಿ ತೆರಿಗೆ ಭಾರ ಹಾಕುತ್ತಿರುವುದು ದುಃಖಕರ ಬೆಳವಣಿಗೆ ಎಂದು ಅವರು ತಿಳಿಸಿದ್ದಾರೆ. ಶುದ್ಧ ಇಂಧನದ ಬಳಕೆಯನ್ನು ಪ್ರೋತ್ಸಾಹಿಸಬೇಕಾದ ಸಂದರ್ಭದಲ್ಲಿ ಇಂತಹ ಕ್ರಮಗಳು ರಾಜ್ಯದ ಪರಿಸರ ನೀತಿಗೆ ಹಿನ್ನಡೆಯಾಗುತ್ತವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜ್ಯದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆಗಳ ಆರ್ಥಿಕ ಹೊರೆ ತಾಳಲಾಗದೆ ತೆರಿಗೆಗಳ ಮೂಲಕ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ ಎಂದು ಆರೋಪಿಸಿದ ಅವರು, “ಗ್ಯಾರಂಟಿಗಳ ಹೆಸರಿನಲ್ಲಿ ಭರವಸೆ ನೀಡಿದ ಸರ್ಕಾರವೇ ಈಗ ಜನರ ಮೇಲೆ ಹೆಚ್ಚುವರಿ ಬಾಧೆ ಹಾಕುತ್ತಿದೆ” ಎಂದು ಟೀಕಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ಲೈಫ್‌ಟೈಮ್ ಟ್ಯಾಕ್ಸ್ ವಿಧಿಸುವುದು ಜನಸಾಮಾನ್ಯರಿಗೆ, ವಿಶೇಷವಾಗಿ ಮಧ್ಯಮ ವರ್ಗಕ್ಕೆ ಆರ್ಥಿಕ ಒತ್ತಡ ಉಂಟುಮಾಡಲಿದೆ. ಇದರಿಂದ ಹಸಿರು ತಂತ್ರಜ್ಞಾನಗಳ ಸ್ವೀಕಾರಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅವರು ಎಚ್ಚರಿಸಿದ್ದಾರೆ.

ಇದಲ್ಲದೆ, ಈ ಕ್ರಮದಿಂದ ಜನರು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳತ್ತ ಮುಖ ಮಾಡುವ ಪರಿಸ್ಥಿತಿ ಉಂಟಾಗಬಹುದು. ಇದು ಪರಿಸರ ಸಂರಕ್ಷಣೆಯ ಗುರಿಗಳಿಗೆ ವಿರುದ್ಧವಾಗಿದ್ದು, ಸರ್ಕಾರದ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ ಎಂದು ಜಗದೀಶ್ ಎನ್.ಕೆ ಹೇಳಿದ್ದಾರೆ.

ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಆದ್ಯತೆ ನೀಡುವ ಬದಲು ತೆರಿಗೆ ಸಂಗ್ರಹಣೆಯತ್ತ ಹೆಚ್ಚು ಗಮನ ಹರಿಸಲಾಗುತ್ತಿದೆ ಎಂದು ಅವರು ದೂರಿದ್ದು, ರಸ್ತೆ, ಕುಡಿಯುವ ನೀರು, ಉದ್ಯೋಗ ಸೃಷ್ಟಿ ಸೇರಿದಂತೆ ಅನೇಕ ಮೂಲಭೂತ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಕಾಣುತ್ತಿಲ್ಲ ಎಂದು ತಿಳಿಸಿದ್ದಾರೆ.

“ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಮರುಳುಗೊಳಿಸಿ, ನಂತರ ತೆರಿಗೆಗಳ ಮೂಲಕ ಅವರ ಮೇಲೆಯೇ ಹೊರೆ ಹಾಕುವ ನೀತಿ ಅನುಸರಿಸಲಾಗುತ್ತಿದೆ” ಎಂದು ಕಟುವಾಗಿ ಟೀಕಿಸಿರುವ ಅವರು, ಸರ್ಕಾರ ಪರಿಸರ ಸಂರಕ್ಷಣೆ ಹಾಗೂ ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರವನ್ನು ತಕ್ಷಣ ಪುನರ್‌ಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ.

ಎಲೆಕ್ಟ್ರಿಕ್ ವಾಹನಗಳ ಮೇಲೆ ವಿಧಿಸಿರುವ ತೆರಿಗೆಗೆ ಸರ್ಕಾರ ವಿನಾಯಿತಿ ನೀಡದಿದ್ದರೆ, ಮುಂದಿನ ದಿನಗಳಲ್ಲಿ ಜಿಲ್ಲಾ ಬಿಜೆಪಿ ವತಿಯಿಂದ ತೀವ್ರ ಹೋರಾಟ ನಡೆಸುವುದಾಗಿ ಶಿವಮೊಗ್ಗ ಜಿಲ್ಲಾಧ್ಯಕ್ಷ ಜಗದೀಶ್ ಎನ್.ಕೆ ಎಚ್ಚರಿಕೆ ನೀಡಿದ್ದಾರೆ. ಜನಸಾಮಾನ್ಯರ ಹಿತಾಸಕ್ತಿಗೆ ವಿರುದ್ಧವಾಗಿರುವ ಈ ಕ್ರಮವನ್ನು ಸರ್ಕಾರ ತಕ್ಷಣ ಹಿಂಪಡೆಯಬೇಕು, ಇಲ್ಲವಾದರೆ ಬೀದಿಗಿಳಿದು ಪ್ರತಿಭಟನೆ ನಡೆಸಲು ಹಿಂಜರಿಯುವುದಿಲ್ಲ ಎಂದು ಅವರು ತಿಳಿಸಿದ್ದಾರೆ.

ಶಾಲಾ ವಿದ್ಯಾರ್ಥಿಗಳಿಗೆ ಏಪ್ರಿಲ್ 10 ರತನಕ ಬಸ್ ಪಾಸ್ ಅವಧಿ ವಿಸ್ತರಣೆ

0

ಶಾಲಾ ವಿದ್ಯಾರ್ಥಿಗಳಿಗೆ ನೀಡಿರುವ ಬಸ್‌ ಪಾಸ್‌ ಅವಧಿಯನ್ನು ಏಪ್ರಿಲ್‌ 10ರ ವರೆಗೆ ಕೆಎಸ್‌ಆರ್‌ಟಿಸಿ ವಿಸ್ತರಿಸಿದೆ.

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಏ. 10ರ ವರೆಗೆ ತರಗತಿಗಳು ಇವೆ. ಪಾಸ್‌ ಅವಧಿ ಮಾರ್ಚ್‌ 31ಕ್ಕೆ ಕೊನೆಗೊಂಡಿದೆ. 10 ದಿನ ಹಣ ಪಾವತಿಸಿ, ಬಸ್‌ಗಳಲ್ಲಿ ಸಂಚರಿಸುವುದು ಕಷ್ಟಸಾಧ್ಯ. ಹೀಗಾಗಿ ಸಾರಿಗೆ ನಿಗಮವು ಒಂದನೇ ತರಗತಿಯಿಂದ 9ನೇ ತರಗತಿಯವರೆಗಿನ ವಿದ್ಯಾರ್ಥಿಗಳು ಅದೇ ಪಾಸ್‌ ತೋರಿಸಿ ಹತ್ತು ದಿನ ಸಂಚರಿಸಲು ಅವಕಾಶ ಕಲ್ಪಿಸಿದೆ.

ಏಪ್ರಿಲ್ 1 ರಿಂದ 15 ವರೆಗೆ ” ಸ್ವಯಂ ಗಣತಿ” ಗೆ ಅವಕಾಶ. ಸಾರ್ವಜನಿಕರಿಗೆ ಇಲ್ಲಿದೆ ಮಾಹಿತಿ

0

ಭಾರತದ ಜನಗಣತಿ-2027ರ ಅಂಗವಾಗಿ
ದಿ: 1-04-2026 ರಿಂದ 15-04-2026 ರವರೆಗೆ
‘ಸ್ವಯಂ ಗಣತಿ’ ಗೆ ಅವಕಾಶ ಕಲ್ಪಿಸಲಾಗಿದೆ.
ಸ್ವಯಂ ಜನಗಣತಿ (Self-Enumeration) ಎಂಬುದು ಡಿಜಿಟಲ್ ಜನಗಣತಿಯ ಒಂದು ಪ್ರಮುಖ ಭಾಗವಾಗಿದೆ.
ಏನಿದು ಸ್ವಯಂ ಜನಗಣತಿ?
ಹಿಂದೆ ಜನಗಣತಿ ಮಾಡುವವರು ಮನೆಗೆ ಬಂದು ಮಾಹಿತಿ ಪಡೆದು ಫಾರಂ ತುಂಬುತ್ತಿದ್ದರು. ಆದರೆ ಈಗ ನಾಗರಿಕರು ತಾವಾಗಿಯೇ ಆನ್‌ಲೈನ್ ಪೋರ್ಟಲ್ ಮೂಲಕ ತಮ್ಮ ಕುಟುಂಬದ ವಿವರಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ. ಇದನ್ನೇ ‘ಸ್ವಯಂ ಜನಗಣತಿ’ ಎಂದು ಕರೆಯಲಾಗುತ್ತದೆ.
ಇದು ಹೇಗೆ ಕೆಲಸ ಮಾಡುತ್ತದೆ?
ನೋಂದಣಿ: ನಾಗರಿಕರು ಜನಗಣತಿಯ ಅಧಿಕೃತ ಪೋರ್ಟಲ್‌ಗೆ ಭೇಟಿ ನೀಡಿ ತಮ್ಮ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಲಾಗಿನ್ ಆಗಬೇಕು.
ಮಾಹಿತಿ ಸಲ್ಲಿಕೆ: ಕುಟುಂಬದ ಸದಸ್ಯರು, ಶಿಕ್ಷಣ, ಉದ್ಯೋಗ, ಮತ್ತು ಮನೆಯ ಸೌಲಭ್ಯಗಳ ಬಗ್ಗೆ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ ಫಾರ್ಮ್ ಭರ್ತಿ ಮಾಡಬೇಕು.
ಕೋಡ್ ಸ್ವೀಕೃತಿ: ನೀವು ಮಾಹಿತಿಯನ್ನು ಸಲ್ಲಿಸಿದ ನಂತರ, ನಿಮ್ಮ ಮೊಬೈಲ್‌ಗೆ ಒಂದು ಉಲ್ಲೇಖ ಸಂಖ್ಯೆ (Reference Number) ಬರುತ್ತದೆ.
ಗಣತಿದಾರರಿಗೆ ಸಲ್ಲಿಕೆ: ಜನಗಣತಿ ಅಧಿಕಾರಿಗಳು (Enumerators) ನಿಮ್ಮ ಮನೆಗೆ ಬಂದಾಗ, ನೀವು ಈ ಉಲ್ಲೇಖ ಸಂಖ್ಯೆಯನ್ನು ಅವರಿಗೆ ನೀಡಿದರೆ ಸಾಕು. ಅವರು ಮತ್ತೆ ಎಲ್ಲ ಪ್ರಶ್ನೆಗಳನ್ನು ಕೇಳುವ ಅಗತ್ಯವಿರುವುದಿಲ್ಲ.
ಕರ್ನಾಟಕದಲ್ಲಿ ಮೊದಲ ಹಂತದ ‘ಮನೆಗಳ ಪಟ್ಟಿ ಮತ್ತು ಮನೆ ಗಣತಿ’ ಪ್ರಕ್ರಿಯೆಯು ದಿನಾಂಕ 16.04.2026 ರಿಂದ 15.05.2026 ರವೆರೆಗೆ ನಡೆಯಲಿದ್ದು
ಒಟ್ಟು 30 ದಿನಗಳ ಕಾಲ ನಡೆಯುವ ಈ ಗಣತಿಯಲ್ಲಿ ಮನೆಗಳ ಸ್ಥಿತಿಗತಿ, ಲಭ್ಯವಿರುವ ಸೌಲಭ್ಯಗಳು ಹಾಗೂ ಆಸ್ತಿಪಾಸ್ತಿಗಳ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ.

ಸ್ವಯಂ ಗಣತಿ ಮಾಡುವ ವಿಧಾನ:
ಅಧಿಕೃತ ಪೋರ್ಟಲ್‌ನಲ್ಲಿ ಮೊಬೈಲ್ ಸಂಖ್ಯೆಯೊಂದಿಗೆ ಲಾಗಿನ್ ಆಗುವುದು.
ನಿಮ್ಮ ಸ್ಥಳವನ್ನು ಆಯ್ಕೆ ಮಾಡಿ, ನಕ್ಷೆಯಲ್ಲಿ ಮನೆಯನ್ನು ಗುರುತಿಸುವುದು.
ಅಗತ್ಯ ಮಾಹಿತಿಯನ್ನು ಭರ್ತಿ ಮಾಡಿ ಸಬ್ಮಿಟ್ ಮಾಡುವುದು.
ಸಲ್ಲಿಕೆಯ ನಂತರ ಲಭಿಸುವ SE ID(ಎಸ್ಇ ಐಡಿ) ಅನ್ನು ಸುರಕ್ಷಿತವಾಗಿಟ್ಟುಕೊಳ್ಳುವುದು. ಹಾಗೂ ಗಣತಿದಾರರು ಭೇಟಿ ನೀಡಿದಾಗ ಅವರಿಗೆ ತೋರಿಸಬೇಕು.
ಗಣತಿದಾರರು ಮತ್ತು ಮೇಲ್ವಿಚಾರಕರ ಕ್ಷೇತ್ರ ಭೇಟಿ :
ಏಪ್ರಿಲ್ 16ರಿಂದ ಮೇ 15ರವರೆಗೆ ಗಣತಿದಾರರು ಪ್ರತಿಯೊಂದು ಮನೆಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಸ್ವಯಂ ಗಣತಿ ಮಾಡಿಕೊಂಡವರು ತಮ್ಮಲ್ಲಿರುವ ಎಸ್ ಇ‌ ಐಡಿ ಅನ್ನು ಗಣತಿದಾರರಿಗೆ ತೋರಿಸಿ ದತ್ತಾಂಶವನ್ನು ಪರಿಶೀಲಿಸಿಕೊಳ್ಳಬಹುದು. ಒಂದು ವೇಳೆ ಸ್ವಯಂ ಗಣತಿ ಮಾಡದಿದ್ದಲ್ಲಿ, ಗಣತಿದಾರರೇ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಾಹಿತಿಯನ್ನು ಸಂಗ್ರಹಿಸುತ್ತಾರೆ.
ಸಾರ್ವಜನಿಕರು, ಅಧಿಕಾರಿಗಳು, ಮತ್ತು ಸಿಬ್ಬಂದಿಗಳು https://se.census.gov.in ವೆಬ್‌ಸೈಟ್‌ಗೆ ಭೇಟಿ ನೀಡಿ ಸ್ವಯಂ‌ ಗಣತಿಯಲ್ಲಿ ಭಾಗವಹಿಸುಂತೆ ಜಿಲ್ಲಾಡಳಿತ ಕೋರಿದೆ.
ಹೆಚ್ಚಿನ ಮಾಹಿತಿಗಾಗಿ ಸ್ಥಳೀಯ ತಾಲೂಕು ಆಡಳಿತ, ಸ್ಥಳೀಯ ಸಂಸ್ಥೆ ಅಥವಾ ಜಿಲ್ಲಾಡಳಿತದ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದ್ದಾರೆ.

Klive Special Article ಶ್ರೀಬಿಷ್ಟಪ್ಪಯ್ಯನವರು

0

ಲೇ: ಪ್ರಸಾದ್ ಶ್ರೀವತ್ಸ.

Klive Special Article ಭಾರತವೆಂದರೆ ಅದು ಕೇವಲ ದೇಶವಲ್ಲ ಅದೆಷ್ಟೋ ಅಮೂಲ್ಯ ರತ್ನಗಳ ರತ್ನಾಕರ. ರಾಜಕೀಯ, ಇತಿಹಾಸ, ತರ್ಕ, ಶಾಸ್ತ್ರ, ವೇದ, ಉಪನಿಷತ್ ಹಾಗೆಯೇ ತಾತ್ತ್ವಿಕ ರಾಷ್ಟ್ರ. ಒಮ್ಮೆ ಭಾರತದ ಹಿರಿಮೆಯನ್ನು ಕಂಡು ದೊಡ್ಡ ತಾತ್ವಿಕರಿದ್ದಾರೆ ಎಂದು ಬಂದ ‘ಪಾಲ್ ಬ್ರಂಟನ್‌’ಯಾವುದೇ ಅಧ್ಯಾತ್ಮ‌ ಸಾಧಕರನ್ನು ಕಾಣದೇ, “shit..! Every begger is the saint in india” ಎಂದು ನಿರಾಶನಾಗಿ, ಹಿಂತಿರುಗುವಾಗ ಮಹರ್ಷಿ ರಮಣರನ್ನು ಕಂಡು, ಅವರ ಆಧ್ಯಾತ್ಮಿಕ ಸಂಪತ್ತನ್ನು ಕಂಡು ವಿದೇಶದಲ್ಲಿ ಭವ್ಯ ಭಾರತದ ಆಧ್ಯಾತ್ಮಿಕ ಹಿರಿಮೆಯನ್ನು ಸಾರಿದೆ.

ಅವನು‌ ಹಾಗೆ ಹೇಳಿದ್ದರಲ್ಲಿ ಅರ್ಥವಿದೆ. ಏಕೆಂದರೆ ಭಾರತವು ಆಗ ಆರ್ಥಿಕವಾಗಿ ಬಡರಾಷ್ಟ್ರವಾಗಿತ್ತು. ಬಡತನ ಅಧ್ಯಾತ್ಮದ ತವರು ಎಂಬ ನಾಣ್ಣುಡಿಯಿದೆ. ಅದಕ್ಕೆ ಪೂರಕವಾಗಿ ನಮ್ಮಲ್ಲಿ ಹೆಚ್ಚು ಸಾಧು ಸಂತರು ಕೇವಲ ಕಾಷಾಯಧಾರಿಗಳಾಗಿ, ಕೌಪೀನಧಾರಿಗಳಾಗಿ ಕಂಡರೆ ಇನ್ನೂ ಹಲವರು ಹುಚ್ಚರಂತೆ ಎಲ್ಲರಿಗೆ ಬೈಯ್ಯುತ್ತಾ, ಕೆಲವೊಮ್ಮೆ ಮೌನಿಗಳಾಗಿ, ಅರ್ಥವೇ ಆಗದಂತಹ ಅವಧೂತರು ಕಾಣ ಸಿಗುವುದು ಭಾರತದಲ್ಲಿ ಮಾತ್ರ. ಏಕೆಂದರೆ ಅಲೌಕಿಕ ಸಂಪತ್ತಿನ ಅನಾವರಣವಾಗುವುದು ಇಲ್ಲಿಯೇ…. ಸಹಜವಾಗಿ ಮನುಷ್ಯನಿಗೆ ನಿಜವಾದ ಸಂತೋಷ ಕೊಡುವ ವಸ್ತು ಯಾವುದು ಎಂದರೆ ಹಲವು ಉತ್ತರಗಳು ಬರುತ್ತವೆ.‌ದುಡ್ಡು, ಅಂತಸ್ತು,‌ಅಧಿಕಾರ, ಪದವಿ ಹೀಗೆ ಆದರೆ ಒಂದು ರೀತಿಯಲ್ಲಿ ಇದೆಲ್ಲವೂ ಹಂಗು ಹಾಗೂ ಒಮ್ಮೆ ಇಲ್ಲದಂತಾದಾಗ ದುಃಖ ಸಮುದ್ರದ ಅಲೆಯಂತೆ ಅಪ್ಪಳಿಸಿ ನಮ್ಮನ್ನು ಬೀಳಿಸಿಬಿಡುತ್ತದೆ. ಇದಕ್ಕೆ ಭರತನ ಭ್ರಾತೃತ್ವ, ಪಾಂಡವರ ವನವಾಸ, ಹನುಮನ ಭಕ್ತಿ ಎಲ್ಲವೂ ಒಟ್ಟಿಗೆ ಕಂಡು ದತ್ತ ಅವಧೂತನಿಂದ ಪ್ರಾರಂಭವಾಗಿ, ಸಾವಿರಾರು ಕಂಡರಿಯದ, ಕೇಳರಿಯದ ನಿಗೂಢವಾಸದಲ್ಲಿರುವ ಇಂದಿಗೂ ಸಾವಿರಾರು ವರ್ಷಗಳಿಂದ ಬದುಕಿರುವ ಸಾಧನೆ ಮಾಡುತ್ತಿರುವ ಮುನಿಗಳನ್ನು ನಾವು ಹಿಮಾಲಯದ ತಪ್ಪಲಿನಲ್ಲಿ ಕಾಣಬಹುದು… ಆದರೆ ಅವರನ್ನು ಸಂಧಿಸಲು ನಮ್ಮಿಂದ ಅಸಾಧ್ಯ ಎಂಬ ಮಾತೂ ಕೂಡಾ ಹಲವರಿಂದ ಕೇಳಿದ್ದೇನೆ.

ಈ ಅವಧೂತನೆಂದರೆ ಯಾರು ಎಂದು ನೋಡುತ್ತಿರುವಾಗ ಬ್ರಹ್ಮಾನಂದದಲ್ಲಿ ಯಾವಾಗಲೂ ಜ್ಞಾನಸಿಂಧುವಾಗಿ, ಮಾತನಾಡಿದಲ್ಲಿ ಕೇವಲ ತತ್ತ್ವವಿಚಾರ, ಪ್ರತಿಯೊಬ್ಬರೂ ತಲೆಬಾಗಿ ಅವನಲ್ಲಿ‌ ಜಾಗ್ರತರಾಗುವಂತಹ ಹಾಗೂ ಆಧ್ಯಾತ್ಮಿಕತೆಯೆಲ್ಲ ಪೊಳ್ಳು ಎನ್ನುವವರಿಗೆ ಅರೆಹುಚ್ಚರಂತೆ ಕಾಣುವ, ಉಪನಿಷತ್‌ಗಳಲ್ಲಿ ಬ್ರಹ್ಮ ಎಂದರೇನು ಎಂದು ತಿಳಿಸುವ, ಯಾವಾಗಲೂ ಬಾಲ-ಭಾವದಲ್ಲಿರುವ, ತನ್ನ ಮುಗ್ಧ ನಗೆಯಿಂದ ಜಗತ್ತು ಸೆಳೆಯುತ್ತಾ ತಮ್ಮ ದೇಹದ ಅಸ್ತಿತ್ವ ಹೋದ‌ ಮೇಲೆಯೂ ಪ್ರಭಾವ ಬೀರುವವರು.

ಮೊದಲಿನಿಂದ ನನ್ನ ಅಪ್ಪನೊಡನೆ ಬೆಳೆದ ನಾನು ಆಗಾಗ ಅವರು ತಿಳಿಸುತ್ತಿದ್ದ, ಅವರ ಗುರುಗಳ ಬಗ್ಗೆ ಕೇಳಿದ್ದೆ. ಆಗ ನಾನಿನ್ನೂ ಹತ್ತು-ಹನ್ನೆರಡು ವಯಸಿನವನಾದ್ದರಿಂದ ನನಗೆ ಅದರ ಅರ್ಥವಾಗಿರಲಿಲ್ಲ. ಅವರೊಟ್ಟಿಗೆ ಹಸು ಮೇಯಿಸಲು ಹೋಗುತ್ತಿದ್ದುದು ಕೂಡಾ ಅಧ್ಯಾತ್ಮ ಲೋಕದ ಹಲವಾರು ಅಚ್ಚರಿಗಳನ್ನು ತಿಳಿಯಲೇ ಎಂದರೆ ತಪ್ಪಾಗಲಾರದು. ಹೀಗಿರುವಾಗ ಒಮ್ಮೆ ಅವರು ಅವರ ಸ್ನೇಹಿತರಿಗೆ ಅವಧೂತ ಬಿಷ್ಟಪ್ಪಯ್ಯನವರ ಬಗ್ಗೆ ಮಾತನಾಡಿದ್ದು ಕೇಳಿದೆ.

ಈಗಿನ ರಾಯಲ ಸೀಮೆ ಅಥವಾ ಸೀಮಾಂಧ್ರದ ಗಡಿಯ ಹದಿನಾಲ್ಕು ಹಳ್ಳಿಗಳ ಒಡೆಯರಾಗಿದ್ದ ಅವರು. ಜೀವನ ಶೈಲಿಯಲ್ಲಿ ಮಹಾರಾಜನನ್ನೂ ಮೀರಿಸುವವರು. ಸ್ವಾತಂತ್ರ್ಯ ಪೂರ್ವದಲ್ಲಿ ಅವರಿಗಿದ್ದ ಆಸ್ತಿಗಳನ್ನು ಕೇಳಿದರೆ ಇಂದಿನ ವಿಶ್ವದ ಬಿಲೇನಿಯರ್ ಕೂಡಾ ಅವರ ಸರಿಸಮಾನವಿಲ್ಲ. ಐದು ಸಾವಿರ ಕುರಿಗಳು, ಒಂದು-ಒಂದೂವರೆ ನೂರು ಹಸುಗಳು, ಸುಮಾರು ಮೂರು ಸಾವಿರ‌ ಎಕರೆ ಭೂಮಿಯ ಒಡೆಯರು. ಮೂರು ಅಂತಸ್ತಿನ ಮಾಳಿಗೆ ಮನೆ, ಹತ್ತಾರು ಆಳುಕಾಳು, ಸುಖವಾದ ಸಂಸಾರ. ಅಷ್ಟೇ ದಾನ-ಧರ್ಮ ಕೂಡಾ ಅಲ್ಲಿ ನಡೆಯುತ್ತಿತ್ತು. ಹೀಗೇ ಅವರ ದರ್ಬಾರ ನಡೆಯುತ್ತಿರಲು ಒಂದು ದಿನ ಇದ್ದಕ್ಕಿದ್ದಂತೆ ಅವರ ಕುರಿ ಮತ್ತು ಹಸುಗಳು ಅಷ್ಟೂ ಸತ್ತು ಹೋಗುತ್ತವೆ. ಇದರ ವ್ಯಾಕುಲತೆಯಲ್ಲಿದ್ದಾಗಲೇ ಅವರ ತೋಟ, ಗದ್ದೆಗಳು ಹಾಳಾಗುತ್ತವೆ. ಅಂಥ ಸಂದರ್ಭದಲ್ಲಿ ಅವರು ತಮ್ಮ ಮನೆಯಲ್ಲಿ ಊಟ ಮುಗಿಸಿ ಚಿಂತಾಕ್ರಾಂತರಾಗಿ ತೂಗುಯ್ಯಾಲೆಯ ಮೇಲೆ ಕುಳಿತಿದ್ದಾಗ, ಅವರ ಪತ್ನಿ ತಾಂಬೂಲವನ್ನು ಅವರಿಗೆ ನೀಡುತ್ತಿದ್ದರು. ಮಧ್ಯಾಹ್ನ 12-12.30 ರ ಸಮಯ. ಮನೆ ಬಾಗಿಲಿಗೆ ಒಬ್ಬ ದಾಸಯ್ಯ ಬರುತ್ತಾನೆ. ಸಾಮಾನ್ಯವಾಗಿ ಅವರು ಇತ್ತೀಚೆಗೆ ಬರುವುದಿಲ್ಲ. ಹಾಗೂ ಎಲ್ಲಿಯೂ ಕಾಣ ಸಿಗುವುದಿಲ್ಲ. ಬಂದ ದಾಸಯ್ಯ ಗೋವಿಂದ ಕೀರ್ತನೆಯನ್ನು ಹಾಡುತ್ತಾನೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು. ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು- ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ಹಾಡಿದ ತಕ್ಷಣ ಬಿಷ್ಟಪ್ಪಯ್ಯನವರು ಎಚ್ಚರಾಗಿ. ಇನ್ನೊಮ್ಮೆ ಹೇಳಲು ದಾಸಯ್ಯ ಹಾಡಿದ ಇದೇ ರೀತಿ ಮೂರು-ನಾಲ್ಕು ಬಾರಿ ಹಾಡಿಸಿ ಪತ್ನಿಗೆ ಹೇಳಿದರು “ಅವನಿಗೆ ಏನಾದರೂ ಕೊಡು” ಐಶ್ವರ್ಯವಂತರಿಗೆ ಬರವೇ…? ಯಥೇಚ್ಚ ಭಿಕ್ಷೆ ನೀಡಿದರು. ಅವನು‌ ಮುಂದೆ ಹೋದ.

Klive Special Article ನಂತರ ಇವರು ಒಮ್ಮೆ ” ಮಂಚ ಬಾರದು ಮಡದಿ ಬಾರಳು ಕಂಚು ಕನ್ನಡಿ ಬಾರದು ” ಎನ್ನುತ್ತಾ ಮನೆಯನ್ನೂ, ಒಡವೆ ವಸ್ತುಗಳನ್ನೂ ನೋಡಿ ತಲೆಕೊಡವಿ ನಕ್ಕು, ಅವರ‌ ಕೈ-ಕೊರಳಿನಲ್ಲಿದ್ದ ಎಲ್ಲ ವಸ್ತುಗಳನ್ನೂ ಬಿಚ್ಚಿಟ್ಟು, ” ಸಂಚಿತಾರ್ಥದ ಧನವು ಬಾರದು ಮುನ್ನ ಮಾಡಿದ ಕರ್ಮವು” ಎನ್ನುತ್ತಾ ಜೇಬಿನಲ್ಲಿದ್ದ ದುಡ್ಡನ್ನು ಕೆಳಗಿಟ್ಟು ” ಗೋವಿಂದ ಹರಿ ಗೋವಿಂದ ಗೋವಿಂದ ನಾರಾಯಣ ” ಎಂದು ನಾನಸ್ಮರಣೆ ಮಾಡುತ್ತಾ ಹೊರಟು ಹೋದವರು ಮತ್ತೆ ಮನೆಗೆ ಬರಲೇ ಇಲ್ಲ. ದೊಡ್ಡ ಅವಧೂತರಾಗಿ ಹಲವರಿಗೆ ಮನೋಭೀಷ್ಟಗಳನ್ನೀಡೇರಿಸಿದರು.

ಭಾಗವತದಲ್ಲಿ ಉದ್ಧವನಿಗೆ ” ಯಸ್ಯಾನುಗ್ರಹಮಿಚ್ಛಾಮಿ ತಸ್ಯ ಸರ್ವಂ ಹರಾಮ್ಯಹಮ್ ” ಎಂದು ಕೃಷ್ಣನು ತಿಳಿಸುತ್ತಾನೆ. ಆದ್ದರಿಂದ ಕಷ್ಟಗಳು ಬರುವಾಗ ಭಗವಂತನ ನೆನಪಾಗಬೇಕು, ಅವನಿಗೆ ಹತ್ತಿರವಾಗಬೇಕು ಎಂಬುದು ನಮ್ಮ ಬುದ್ಧಿಗೆ ಗೋಚರವಸಗಬೇಕು. ಅವಧೂತರಲ್ಲಿಯೂ ಹೊಟ್ಟೆಪಾಡಿನವರು ಬಹಳ ಕಾಣಿಸುತ್ತಾರೆ. ಮೋಸ ಹೋಗುವ ಸಾಧ್ಯತೆಯಿರುತ್ತದೆ. ಆದ್ಧರಿಂದ ಅವಧೂತರೆಂದು ನಂಬಿ ಹೋಗುವ ಮೊದಲು ಅವಧೂತರು ಹೇಗಿರುತ್ತಾರೆ ಎಂದು ತಿಳಿದು ನಂತರ ಹೆಜ್ಜೆಯಿಡಬೇಕು. ಅದರ ಅನುಭವವಾದ ಮೇಲೆಯೇ ನಾನು ಕೂಡಾ ನಂಬಿದ್ದೇನೆ..