ಮಾಜಿ ಸಚಿವರು ಹಾಲಿ ಶಾಸಕರು ಹಾಗೂ ಬಾಪೂಜಿ ಕೋ ಆಪರೇಟಿವ್ ಬ್ಯಾಂಕಿನ ಅಧ್ಯಕ್ಷರೂ ಆಗಿರುವ ಎಸ್ ಎಸ್ ಮಲ್ಲಿಕಾರ್ಜುನ ರವರು ಬ್ಯಾಂಕಿನ ಯುಪಿಐ ಸೇವಾ ಉದ್ಘಾಟನೆಯನ್ನು ನೆರವೇರಿಸುವಾಗ ಉಪಾಧ್ಯಕ್ಷರಾದ ಡಾ.ಎ. ಅರುಣಕುಮಾರ್, ನಿರ್ದೇಶಕರುಗಳಾದ ಡಾ.ಅಥಣಿ ಎಸ್ ವೀರಣ್ಣ, ಡಾ. ಬಿ ಎಸ್ ರೆಡ್ಡಿ, ಡಾ. ಪಿ ಶಶಿಕಲಾ, ಡಾ. ಬಿ ಪೂರ್ಣಿಮಾ, ಡಾ.ಕೆ ಹನುಮಂತಪ್ಪ, ಡಾ. ಹೆಚ್ ಶಿವಪ್ಪ, ಡಾ. ಸಿ ವೈ ಸುದರ್ಶನ್, ಡಾ. ಎಂ ಎಂ ಲಿಂಗರಾಜ, ಕೆ ಬೊಮ್ಮಣ್ಣ, ಡಾ. ಎಸ್ ಸುರೇಂದ್ರ ಶೆಟ್ಟಿ, ಕೆ ಎಸ್ ವೀರೇಶ್, ಜೆ ಅನಿತಾ ಕುಮಾರಿ, ಬ್ಯಾಂಕಿನ ಪ್ರಧಾನ ವ್ಯವಸ್ಥಾಪಕ ಎಂ ಬಸವರಾಜ, ಕಲ್ಲಪ್ಪ, ರವೀಂದ್ರ, ಸ್ವಾಗತ್, ನವೀನ್ ಮುಂತಾದವರು ಅಲ್ಲಿದ್ದರು.
ಈ ಮೊಬೈಲ್ ಬ್ಯಾಂಕಿಂಗ್ ಆಪ್ ಸೇವಾ ವಿಧಾನದಲ್ಲಿ ಗೂಗಲ್ ಪೇ, ವಾಟ್ಸಪ್ ಪೇ, ಫಂಡ್ ಟ್ರಾನ್ಸ್ಫರ್, ಮೂರು ವರ್ಷಗಳ ಸ್ಟೇಟ್ಮೆಂಟ್, ಠೇವಣಿ ಮತ್ತು ಸಾಲ ಖಾತೆಗಳ ವೀಕ್ಷಣೆ, ಎಟಿಎಂ ಕಾರ್ಡ್ ನಿಯಂತ್ರಣ, ಶಾಖೆಗಳ ಲೊಕೇಶನ್ ಮುಂತಾಗಿ ಅನೇಕ ಸೇವೆಗಳು ಲಭ್ಯವಿದೆ ಎಂದು ಎಸ್ ಎಸ್ ಮಲ್ಲಿಕಾರ್ಜುನ ಹೇಳಿದರು.
-ಚಿತ್ರ ಹಾಗೂ ವರದಿ: ಡಾ. ಎಚ್.ಬಿ.ಮಂಜುನಾಥ, ಹಿರಿಯ ಪತ್ರಕರ್ತರು
