ಸಾರ್ವಜನಿಕ ಕ್ಷೇತ್ರವಾದ ಶಿವಮೊಗ್ಗ ನಗರ ನೀರು ಸರಬರಾಜು ಹಾಗೂ ನಗರ ಒಳಚರಂಡಿ ಹಾಗೂ ಜಲ ಮಂಡಳಿ ಇಲಾಖೆಯಲ್ಲಿ ಕೆಲಸ ಮಾಡಿದ ಸರ್ಕಾರಿ ನೌಕರರಂತಹ ಮಿಥುನ್ ರವರು ಶಿವಮೊಗ್ಗ ನಗರದಿಂದ ತುಮಕೂರು ನಗರಕ್ಕೆ ವರ್ಗಾವಣೆಯಾಗಿದ್ದು ಹಾಗೂ ಇತ್ತೀಚೆಗೆ ಒಳಚರಂಡಿ ಮತ್ತು ನಗರ ನೀರು ಸರಬರಾಜು ಇಲಾಖೆಯಲ್ಲಿ ಕೆಲಸ ಮಾಡಿ ನಿವೃತ್ತಿಯಾದಂತಹ ಬಾಬಣ್ಣ ಆರೋಗ್ಯ ಇಲಾಖೆಯಲ್ಲಿ ಎಲ್ಲಾ ವರ್ಗದವರಿಗೂ ಕೆಲಸ ಮಾಡಿ ಸಾಗರದಲ್ಲಿ ಅತ್ಯುತ್ತಮ ಕಾರ್ಯ ದಕ್ಷತೆಯಿಂದ ಕೆಲಸ ಮಾಡಿದ ವೈದ್ಯಕೀಯ ಕ್ಷೇತ್ರದಲ್ಲಿ ಕಳೆದ ವರ್ಷ ಬಿಸಿ ರಾಯ್ ರಾಷ್ಟ್ರಪತಿ ಈ ವರ್ಷ ರಾಜ್ಯ ವೈದ್ಯಶ್ರೀ ಪ್ರಶಸ್ತಿ ಪಡೆದ ಪರಪ್ಪನವರಿಗೆ ಶಿವಮೊಗ್ಗ ಜಿಲ್ಲಾ ಉಪ್ಪಾರ ಸಮಾಜ ವತಿಯಿಂದ ಬಂಗಾರ ಲೇಪಿತ ವೆಂಕಟೇಶ್ವರ ಫೋಟೋಗಳನ್ನು ಹಾಗೂ ಶಾಲು ಹಾರ ಹೊದಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಪ್ರಸ್ತಾವಿಕ ಭಾಷಣ ಕೆ ದೇವೇಂದ್ರಪ್ಪನವರು ಮಾತನಾಡಿದರು. ಅಧ್ಯಕ್ಷತೆಯನ್ನಎಸ್.ಟಿ. ಹಾಲಪ್ಪನವರು ವಹಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷರಾದ ಕುಂಸಿ ಬಾಬಣ್ಣನವರು ಮಾಜಿ ಮೇಯರ್ ಕಂಕರಿ ನಾಗರಾಜ್ ಬೊಮ್ಮನಕಟ್ಟೆ ಮಂಜುನಾಥ್. ಕುಂಶಿ ಮೋಹನ್ ಕಾಶಿಪುರ ವಿಜಯಕುಮಾರ್ ಶಿವಮೊಗ್ಗ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷರಾದ ಮಾಲತೇಶ್, ಕಾರ್ಯದರ್ಶಿ ಮಂಜುಳಮ್ಮ ಅಣ್ಣಪ್ಪನವರು ಹಾಗೂ ಇತರ ಸಮಾಜದ ಮುಖಂಡರು ಭಾಗವಹಿಸಿದ್ದರು.
Klive Special Article ಆಧ್ಯಾತ್ಮಿಕತೆಗೆ ಅನುರೂಪ, ಸಮಾಜ ಸೇವೆಗೆ ಪೂರ್ಣ ಸಮರ್ಪಿತ, ಮೇರುವ್ಯಕ್ತಿ ಡಾ.ಪಿ.ನಾರಾಯಣ್
ಲೇ: ಡಾ.ಮೈತ್ರೇಯಿ ಆದಿತ್ಯ ಪ್ರಸಾದ್.
Klive Special Article ನಮ್ಮ ಶಿವಮೊಗ್ಗ ಅದೆಷ್ಟು ಮಹಾನ್ ವ್ಯಕ್ತಿಗಳಿಗೆ ಜನ್ಮಭೂಮಿ ಕರ್ಮಭೂಮಿಯಾಗಿ ನೆಲೆಸಿದೆಯೋ. ಇತ್ತೀಚೆಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವ ಅನೇಕ ಮಹನೀಯರುಗಳು ಅವರ ವ್ಯಕ್ತಿತ್ವಗಳನ್ನು ನೋಡಿದಾಗ ನಾನಿರುವ ಊರಿನ ಬಗ್ಗೆ ವಿಶೇಷವಾದ ಹೆಮ್ಮೆಯ ಭಾವ ಮೂಡುತ್ತದೆ. ತಮ್ಮ 85ರ ವಸಂತದಲ್ಲೂ ಸದಾ ಕ್ರಿಯಾಶೀಲರಾಗಿರುವ ಡಾ. ಪಿ ನಾರಾಯಣ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿರುವ ಈ ಘಳಿಗೆಯಲ್ಲಿ ಮಹನೀಯರ ಕುರಿತಾಗಿ ನಾನು ಬರೆಯಬೇಕೆನಿಸಿ ಬರೆಯಲಾರಂಭಿಸಿದದೆ.
ವಿದ್ಯಾ ವಿನಯ ಸಂಯುಕ್ತಃ ಶಾಂತಃ ಸತ್ಯಪರಾಯಣಃ l
ದಯಾಳುಃ ಸರ್ವಭೂತೇಷು ಭಿಷಕ್ ಸತ್ಪುರುಷೋ ಮಹಾನ್ ll
ಈ ಮೇಲಿನ ಶ್ಲೋಕವು ವೈದ್ಯನಿಗೆ ಅಗತ್ಯವಿರುವ ನಾಲ್ಕು ಮುಖ್ಯ ಗುಣಗಳನ್ನು ಪ್ರಸ್ತುತಪಡಿಸುತ್ತದೆ. ಅದೇನೆಂದರೆ ವಿದ್ಯೆ ಮತ್ತು ವಿನಯ ಅಂದರೆ ಅಹಂಕಾರವಿಲ್ಲದ ಜ್ಞಾನ, ಶಾಂತ ಸ್ವಭಾವ ಅಂದರೆ ಗಂಭೀರತೆ ಮತ್ತು ಸಮತೋಲತೆ, ಸತ್ಯ ಪಾರಾಯಣತೆ ಅಂದರೆ ನೈತಿಕ ನಿಷ್ಠೆ ಮತ್ತು ನಿಜವಚನ ನಾಲ್ಕನೇದಾಗಿ ದಯಾ ಭಾವನೆ ಅಂದರೆ ಪ್ರತಿಯೊಬ್ಬ ಜೀವಿಯ ನೋವಿನ ಬಗೆಗಿನ ಕರುಣೆ ಹೊಂದಿರುವುದು ಎಂಬುದಾಗಿ. ಇಂತಹ ವೈದ್ಯನು ಕೇವಲ ರೋಗ ಶಮನ ಮಾಡುವವನು ಮಾತ್ರ ಆಗಿರದೇ ಸತ್ಪಗುಣದ ಸಾಕಾರ ಮೂರ್ತಿ. ಹಾಗಾಗಿ ಅವನು ವೈದ್ಯೊ ನಾರಾಯಣೋ ಹರಿಃ. ಅದರಂತೆ ಇಲ್ಲಿ ಹೇಳ ಹೊರಟಿರುವ ವೈದ್ಯರಾದ ಡಾಕ್ಟರ್ ಪಿ ನಾರಾಯಣ್ ರವರು ಸಹ ಹಾಗೆ ಅನುರೂಪರಾಗಿದ್ದಾರೆ. ಇಂಥವರು ಸರಳತೆಗೆ ಆದರ್ಶ, ಸಜ್ಜನತೆಗೆ ಮೂರ್ತಿ ರೂಪ, ಅವರ ಬದುಕೇ ಸಮಾಜಕ್ಕೆ ದಾರಿದೀಪವಾಗಿದೆ.
ನಿಜವಾಗಿಯೂ ನಾರಾಯಣ ಡಾಕ್ಟರ್ ಬಗ್ಗೆ ಹೇಳಲು ಪದಗಳೇ ಸಾಲದು. ಸರಳ ವ್ಯಕ್ತಿತ್ವ ಸಾಮಾನ್ಯರೊಡನೆ ಸಾಮಾನ್ಯರಂತೆ ಬೆರೆತು ಮಾತನಾಡುವ ಹೃದಯ ಶುದ್ಧಿ ಸ್ಮಿತಪೂರ್ವಾಭಿಭಾಷಿಯಾದ ಶ್ರೀ ರಾಮನ ಗುಣ ಇವರದ್ದು. ತಮ್ಮ ಶಾಂತನಡವಳಿಕೆ ಜನರಲ್ಲಿ ಭರವಸೆ ಹುಟ್ಟಿಸುವ ವೈದ್ಯರಾಗಿ ಇವರು ಉನ್ನತ ಹುದ್ದೆಗಿಂತಲೂ ಹೆಚ್ಚಿನದಾಗಿ ಜನರ ಹೃದಯದಲ್ಲಿ ಸ್ಥಾನ ಪಡೆದ ವೈದ್ಯರಾಗಿದ್ದಾರೆ.
ನನ್ನ ಅಜ್ಜನಿಗೆ ಅನಾರೋಗ್ಯವಾದಾಗ ಅವರನ್ನು ಇವರ ಆಸ್ಪತ್ರೆಯಾದ ಶರಾವತಿ ನರ್ಸಿಂಗ್ ಹೋಂಗೆ ಕರೆತಂದರಂತೆ, ಆಗ ಈ ವೈದ್ಯರೇ ನೋಡಿದ್ದರಂತೆ ಎನ್ನುವ ಮಾತು ಶಿವಮೊಗ್ಗದಲ್ಲಿ ಪದವಿ ಓದುತ್ತಿರುವಾಗ ನನಗೂ ಒಮ್ಮೆ ಕುತ್ತಿಗೆ ನೋವಾಗಿ ಇವರ ಬಳಿ ಹೋದಾಗ ನಮ್ಮ ಅಮ್ಮ ಹೇಳಿದ್ದು, ಹಳೆಯ ನೆನಪಾದರೂ ಇತ್ತೀಚೆಗೆ ಮತ್ತೊಮ್ಮೆ ಅವರಿಗೆ ನಾನು ಪರಿಚಿತಳಾದದ್ದು ಶಂಕರ ಮಠದಲ್ಲಿ ನವರಾತ್ರಿಯ ಕಾರ್ಯಕ್ರಮ ಮಾಡಿ ಸೈ ಅನಿಸಿಕೊಂಡು ಹಿತವೆನಿಸಿ ಮತ್ತೆ ನನಗೆ ಶಂಕರ ಜಯಂತಿಯ ಸಂದರ್ಭದಲ್ಲಿ ಆಚಾರ್ಯ ಶಂಕರರ ಕೃತಿಗಳಿಗೆ ಅದರ ಅರ್ಥ ಯಥಾಮತಿ ನಾನು ತಿಳಿದಂತೆ ಹೇಳುವ ಅವಕಾಶ ನೀಡಿದ್ದರು. ಆ ಹೊತ್ತಿನಲ್ಲಿ ಅವರ ಸಮಯ ಪ್ರಜ್ಞೆ ನೋಡಿ ನನಗೆ ಅವರ ಬಗೆಗಿನ ಗೌರವ ಇಮ್ಮಡಿಯಾಯಿತು. ಅವರ ಶಿಸ್ತನ್ನು ಸಹ ಇಲ್ಲಿ ಮರೆಯುವಂತಿಲ್ಲ. ನಂತರ ಹಲವಾರು ಕಾರಣಗಳಿಗೆ ಅವರೊಂದಿಗೆ ಮಾತನಾಡಿದ್ದೇನೆ. ಆಗ ಅವರ ಮೇರು ವ್ಯಕ್ತಿತ್ವ ಕಂಡು ಬೆರಗಾಗಿದ್ದೇನೆ ಇಂತಹ ಸಜ್ಜನರು ಇರುವ ರೀತಿಯ ನಮಗೆಲ್ಲರಿಗೂ ಅನುಕರಣೆ ಯೋಗ್ಯ.
Klive Special Article ಇಂತಹ ಮಹಾನ್ ವ್ಯಕ್ತಿತ್ವದವರು ಇರುವ ಕಾಲಘಟ್ಟದಲ್ಲಿ ನಾವೆಲ್ಲ ಇದ್ದೇವಲ್ಲ ಅನ್ನುವುದೇ ನಮಗೆ ಹೆಮ್ಮೆಪಡುವಂತದ್ದು. ಅವರ ಸಾರ್ಥಕ ಬದುಕು ಮಕ್ಕಳಿಗೆ ಆದರ್ಶ, ವಿದ್ಯಾರ್ಥಿಗಳಿಗೆ ಪ್ರೇರಣೆ ಹಾಗೂ ಎಲ್ಲರಿಗೂ ಮಾನವೀಯತೆಯ ಪಾಠ. 85 ವರ್ಷಗಳ ಈ ದೀರ್ಘಯಾನ ಕೇವಲ ಕಾಲದ ಅಳತೆಗಷ್ಟೇ ಸೀಮಿತವಲ್ಲ ಅದು ಒಬ್ಬ ವ್ಯಕ್ತಿಯ ಆತ್ಮವಿಶ್ವಾಸ, ತಾಳ್ಮೆ ಪ್ರೀತಿಯ, ಸೇವೆಯ ಹಾಗೂ ಮೌಲ್ಯಗಳ ಆಳವಾದ ಪ್ರತಿಬಿಂಬವಾಗಿದೆ. ವಯಸ್ಸು ಬೆಳೆಯುತ್ತಲೇ ಹೋಗುತ್ತದೆ ಆದರೆ ಅದರೊಂದಿಗೆ ನಾವು ಬೆಳೆಸಿಕೊಳ್ಳುವ ಮೌಲ್ಯಗಳು ಸಂಬಂಧಗಳ ಮತ್ತು ಸ್ಮೃತಿಗಳೇ, ಜೀವನವನ್ನು ಸಾರ್ಥಕವಾಗಿಸುತ್ತವೆ ಎನ್ನುವ ಮಾತಿನಂತೆ ಈ ಸಾರ್ಥಕಯಾನಕ್ಕೆ ಶತಶತ ನಮನಗಳನ್ನು ಸಲ್ಲಿಸುತ್ತಾ, ಅವರಿಗಾಗಿ ಆಯೋಜಿತವಾದ ಅಭಿನಂದನೆಯ ಎಲ್ಲ ಕಾರ್ಯಕ್ರಮಗಳು ಸಹ ಅರ್ಥಪೂರ್ಣವೇ ಆಗಿವೆ. ಹಾಗಾಗಿ ಈ ಕಾರ್ಯಕ್ರಮದ ಆಯೋಜಕರಿಗೂ ಸಹ ಅಭಿಮಾನದ ಧನ್ಯವಾದಗಳು ಈ ಮೂಲಕ ಸಲ್ಲಿಸುತ್ತಿದ್ದೇನೆ. ಕಾರಣ ನಿನ್ನೆ ಅವರಿಗಾಗಿ ಸಲ್ಲಿಸಿದ ನಾದ ನಮನದಲ್ಲಿ ಗುರುವಾಯೂರಿನ ಕುಮಾರಿ ಗಂಗಾ ಸಸಿಧರನ್ ತನ್ನ ವಯೋಲಿನ್ ವಾದನದಿಂದ ನಮ್ಮೆಲ್ಲರನ್ನು ನಾದ ಲೋಕಕ್ಕೆ ಕೊಂಡೊಯ್ದು ದಿಗ್ಬ್ರಾಂತರಾಗುವಂತೆ ಮಾಡಿದ್ದಾಳೆ. ಆಕೆಯ ವಿಸ್ಮಯವೆನಿಸುವ ವಯೋಲಿನ್ ನಾದಕ್ಕೆ ನಾವೆಲ್ಲ ಮಾರುಹೋದೆವು. ಹಾಗಾಗಿಯೇ ಹೇಳುತ್ತಿರುವುದು ಎಲ್ಲ ಕಾರ್ಯಕ್ರಮಗಳು ಸಹ ಅರ್ಥಪೂರ್ಣ ಎಂದು ಮತ್ತೊಮ್ಮೆ ಡಾ. ಪಿ ನಾರಾಯಣ್ ರವರಿಗೆ ಶತಶತ ನಮನಗಳನ್ನು ಸಲ್ಲಿಸುತ್ತಾ ಈ ಲೇಖನದ ಮೂಲಕ ಅಭಿನಂದನೆಗಳು ಹಾಗೂ ಅಭಿವಂದನೆಗಳು.
ಡಾ. ಮೈತ್ರೇಯಿ ಆದಿತ್ಯಪ್ರಸಾದ್
ಉಪನ್ಯಾಸಕರು, ಪೇಸ್ ಕಾಲೇಜ್
ಶಿವಮೊಗ್ಗ
National Doctor’s Day ಉಪಯುಕ್ತವಾದ ಆರೋಗ್ಯ ತಪಾಸಣೆ ಉಪಕರಣಗಳನ್ನ ಸಾಧ್ಯವಾದರೆ ಎಲ್ಲಾ ಕುಟುಂಬಗಳು ಇಟ್ಟುಕೊಳ್ಳಬೇಕು – ವೀಣಾ ಸುರೇಶ್
National Doctor’s Day ರಾಷ್ಟ್ರೀಯ ವೈದ್ಯರ ದಿನಾಚರಣೆಯ ಅಂಗವಾಗಿ ಇನ್ನರ್ ವೀಲ್ ಕ್ಲಬ್ ಶಿವಮೊಗ್ಗಪೂರ್ವ ವತಿಯಿಂದ ಆಶ್ರಮವಾಸಿಗಳಿಗೆ ಆಗಾಗ ಆರೋಗ್ಯ ತಪಾಸಣೆ ಮಾಡಿಕೊಳ್ಳಲು ತುಂಬಾ ಅಗತ್ಯವಾಗಿ ಬೇಕಾದ.ಬಿಪಿ ಯಂತ್ರ ಗ್ಲುಕೋಮೀಟರ್. ಮಧುಮೇಹ ತಪಾಸಣೆ ಮಾಡುವ ಸಾಧನ ತೂಕದ ಯಂತ್ರ ಹಾಗೂ ಆಶ್ರಮವಾಸಿಗಳಿಗೆ ಬೇಕಾದ ಅಗತ್ಯ ಸಾಮಗ್ರಿಗಳನ್ನು ವಿತರಿಸಿದರು. ಇದೇ ಸಂದರ್ಭದಲ್ಲಿ ಇನ್ನರ್ ವೀಲ್ ಶಿವಮೊಗ್ಗ ಪೂರ್ವದ ಅಧ್ಯಕ್ಷರಾದವೀಣಾ ಸುರೇಶ್ ಅವರು ಮಾತನಾಡುತ್ತಾ ತುರ್ತು ಪರಿಸ್ಥಿತಿಯಲ್ಲಿ ಕೂಡಲೇ ನಮ್ಮ ದೇಹ ಏರುಪೇರು ಆದಾಗ ತಕ್ಷಣ ಪರೀಕ್ಷೆ ಮಾಡಿಕೊಂಡು ಮುಂದಿನ ತಪಾಸಣೆಗೆ ಒಳಗಾಗಬಹುದು ಆದ್ದರಿಂದ ಇಂತಹ ಉಪಯುಕ್ತವಾದ ತಪಾಸಣಾ ಯಂತ್ರಗಳು ಎಲ್ಲಾ ಕುಟುಂಬಗಳನ್ನು ಇಟ್ಟುಕೊಳ್ಳಬೇಕು ಇದರಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸಬಹುದು ಎಂದು ನುಡಿದರು. National Doctor’s Day ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಶಿಲ್ಪಾ ಗೋಪಿನಾಥ್ ಇನ್ನರ್ ವೀಲ್ ಮಾಜಿ ಅಧ್ಯಕ್ಷರುಗಳಾದ ಬಿಂದು ವಿಜಯಕುಮಾರ್. ಜಯಂತಿ ವಾಲಿ . ಶ್ವೇತಾ ಆಶಿತ್. ರಾಜೇಶ್ವರಿ ಪ್ರತಾಪ್. ವೇದಾ ನಾಗರಾಜ್. ವಿನೋದಾ ದಳವೇ. ರೋಟರಿ ಮಾಜಿ ಸಹಾಯಕ ಗೌರ್ನರ್
ಜಿ ವಿಜಯಕುಮಾರ್. ಚೇತನ. ವಿಜಯಶ್ರೀ. ವಿಜಯ ಜವಳಿ ವಾಸಂತಿ. ಸವಿತಾ. ರೇಖಾ. ಉಮಾ. ಹಾಗೂ ಇನ್ನರ್ ವೀಲ್ ಕ್ಲಬ್ಬಿನ ಸದಸ್ಯರು ಉಪಸ್ಥಿತರಿದ್ದರು
Ashakirana Public School ಕರಾಟೆ ಕಲಿತರೆ ರಕ್ಷಣೆ ಜೊತೆಗೆ ಆತ್ಮವಿಶ್ವಾಸದ ವೃದ್ಧಿ- ಸಿಯಾನ್ ಪಂಚಪ್ಪ
Ashakirana Public School ಕರಾಟೆ ಜನಪ್ರಿಯವಾದ ಸಮರ ಕಲೆಯಾಗಿದ್ದು, ವಿದ್ಯಾರ್ಥಿಗಳು ಪಠ್ಯದ ಜೊತೆಗೆ ಕರಾಟೆಯನ್ನು ಕಲಿಯುವುದರಿಂದ ಆತ್ಮರಕ್ಷಣೆಯೊಂದಿಗೆ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಲು ಸಾಧ್ಯವಾಗುತ್ತದೆ ಎಂದು ಕರಾಟೆ ತರಬೇತುದಾರ ಸಿಯಾನ್ ಪಂಚಪ್ಪ ಹೇಳಿದರು.
ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಆಶಾಕಿರಣ ಪಬ್ಲಿಕ್ ಶಾಲೆಯಲ್ಲಿ ಸಾಗರ ಕರಾಟೆ ಇನ್ಸಿ÷್ಟಟ್ಯೂಟ್ ವತಿಯಿಂದ ಹಮ್ಮಿಕೊಂಡ ಕರಾಟೆ ತರಬೇತಿ ಶಿಬಿರದ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಕ್ಕಳು ಕೇವಲ ಪಠ್ಯದಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಮನೋಭಾವದಿಂದ ಪೋಷಕರು ಹೊರ ಬರಬೇಕು. ಶಿಕ್ಷಣ ಎಷ್ಟು ಮುಖ್ಯವೋ ಅದೇ ರೀತಿಯಲ್ಲಿ ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ದೈಹಿಕ ಮತ್ತು ಮಾನಸಿಕ ಆರೋಗ್ಯವೂ ಲಭಿಸುತ್ತದೆ. ಗ್ರಾಮೀಣ ಭಾಗದಲ್ಲಿ ಅನೇಕ ಪ್ರತಿಭೆಗಳಿದ್ದು, ಅವರಿಗೆ ತರಬೇತಿ ನೀಡಿದರೆ ಒಲಂಪಿಕ್ನAತಹ ಕ್ರೀಡೆಗಳಲ್ಲೂ ಭಾಗವಹಿಸುವರಿದ್ದಾರೆ. ಪ್ರಸ್ತುತ ದಿನಮಾನಗಳಲ್ಲಿ ವಿದ್ಯಾರ್ಥಿನಿಯರ ಮೇಲೆ ದೌರ್ಜನ್ಯಗಳು ನಡೆಯುತ್ತಿದೆ. ಈ ನಿಟ್ಟಿನಲ್ಲಿ ಕರಾಟೆ ತರಬೇತಿಯು ಸ್ವರಕ್ಷಣೆಗೆ ಅತ್ಯಂತ ಸೂಕ್ತವಾಗಿದೆ ಎಂದರು.
Ashakirana Public School ಕಾರ್ಯಕ್ರಮ ಉದ್ಘಾಟಿಸಿದ ಆಶಾಕಿರಣ ಪಬ್ಲಿಕ್ ಶಾಲೆ ಮುಖ್ಯಸ್ಥ ಹಾಗೂ ಮಾಜಿ ಯೋಧ ಯು. ಸಂಗಪ್ಪ ಮಾತನಾಡಿ, ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಿದ್ದರೆ ಮಾತ್ರ ಕಲಿಕೆಯಲ್ಲಿ ಆಸಕ್ತಿ ಮೂಡಲು ಸಾಧ್ಯವಾಗುತ್ತದೆ. ಬಹುಉಪಕಾರಿಯಾದ ಕರಾಟೆ ಹಾಗೂ ಯೋಗವನ್ನು ದೈನಂದಿನ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಕರಾಟೆ ತರಬೇತಿಯಿಂದ ಸಾಮರ್ಥ್ಯವು ಸಹ ಹೆಚ್ಚುತ್ತದೆ ಮತ್ತು ಕ್ರಿಯಾಶೀಲರಾಗಲು ಸಾಧ್ಯವಾಗುತ್ತದೆ ಎಂದರು.
ಪೋಷಕ ಪ್ರತಿನಿಧಿ ರಾಜು ಹಿರಿಯಾವಲಿ, ಸಂಸ್ಥೆಯ ಮುಖ್ಯಶಿಕ್ಷಕಿ ಯು. ಶೋಭಾ, ಸಹಶಿಕ್ಷಕರಾದ ಚಂದ್ರಶೇಖರ್, ಹೇಮಾವತಿ, ಸುಮಲತಾ, ಸುಪ್ರಜಾ, ಸಂಪ್ರತಾ, ರಾಧಿಕಾ, ಪ್ರವೀಣ್, ಅಮೃತಾ, ಕರಾಟೆ ತರಬೇತುದಾರರಾದ ಮಧುಕೇಶ್ವರ ಹಾಗೂ ಮಧು ಯು.ಎನ್. ಸೇರಿದಂತೆ ಇತರರಿದ್ದರು.
University Of Mysore ಮೈಸೂರಿನ ಚಾಮರಾಜೇಂದ್ರ ದೃಶ್ಯಕಲಾ ಕಾಲೇಜಿನ ಬಿವಿಎ ಪದವಿಗೆ ಆನ್ ಲೈನ್ ಅರ್ಜಿಗೆ ಅವಕಾಶ
University Of Mysore ಮೈಸೂರು ವಿಶ್ವವಿದ್ಯಾನಿಲಯಕ್ಕೆ ಸಂಯೋಜನೆಗೊಂಡಿರುವ ಚಾಮರಾಜೇಂದ್ರ ಸರ್ಕಾರಿ ದೃಶ್ಯಕಲಾ ಕಾಲೇಜು, ಸಿದ್ಧಾರ್ಥನಗರ, ಮೈಸೂರು ಸಂಸ್ಥೆಯಲ್ಲಿ 2025-26ನೇ ಶೈಕ್ಷಣಿಕ ಸಾಲಿಗೆ ದೃಶ್ಯಕಲೆಯಲ್ಲಿ ಪ್ರಥಮ ಬ್ಯಾಚುಲರ್ ಆರ್ಫ ವಿಜ್ಯುಯಲ್ ಆರ್ಟ್ಸ್ (ಬಿ.ವಿ.ಎ) ನಾಲ್ಕು ವರ್ಷದ ಎಂಟು ಸೆಮಿಸ್ಟರ್ಗಳ ಎಸ್.ಇ.ಪಿ.ಪದ್ಧತಿಯ ಪದವಿ ಪ್ರವೇಶಾತಿಗಾಗಿ ದ್ವಿತೀಯ ಪಿ.ಯು.ಸಿ. ಉತ್ತೀರ್ಣರಾದ ಅಭ್ಯರ್ಥಿಗಳಿಂದ ಆನ್ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
University Of Mysore ಜುಲೈ 07 ರಂದು ಬೆಳಗ್ಗೆ 11.00 ಕ್ಕೆ ಅರ್ಹತಾ ಪರೀಕ್ಷೆ ಹಾಗೂ ಮಧ್ಯಾಹ್ನ 2.00 ಕ್ಕೆ ವೈಯಕ್ತಿಕ ಸಂದರ್ಶನ ಇರುತ್ತದೆ.
ಈ ಪದವಿಯಲ್ಲಿ 3ನೇ ಸೆಮಿಸ್ಟರ್ನಿಂದ ಚಿತ್ರಕಲೆ, ಶಿಲ್ಪಕಲೆ, ಗ್ರಾಫಿಕ್ಸ್, ಅನ್ವಯಕಲೆ, ಕಲಾ ಇತಿಹಾಸ ಹಾಗೂ ಛಾಯಾಚಿತ್ರ ಮತ್ತು ಛಾಯಾಚಿತ್ರ ಪತ್ರಿಕೋದ್ಯಮ ವಿಭಾಗಗಳಲ್ಲಿ ವಿಶೇಷ ಅಧ್ಯಯನದ ಸ್ನಾತಕ ಪದವಿಯಾಗಿರುತ್ತದೆ.
ಆಸಕ್ತರು ಹೆಚ್ಚಿನ ಮಾಹಿತಿಗಾಗಿ ವೆಬ್ಸೈಟ್ https://uucms.karnataka.gov.in ಅಥವಾ https://www.cavamysore.karnataka.gov.in ಹಾಗೂ ಕಾರ್ಯಾಲಯದ ಸಹಾಯವಾಣಿ 0821-2438931 ನ್ನು ಸಂಪರ್ಕಿಸುವಂತೆ ಕಾಲೇಜಿನ ಡೀನ್ ತಿಳಿಸಿದ್ದಾರೆ.
Karnataka State Bioenergy Development Board ಸರ್ಕಾರಕ್ಕೆ ಜೈವಿಕ ಅಭಿವೃದ್ಧಿ ಮಂಡಳಿಯಿಂದ ವಾರ್ಷಿಕ ವರದಿ ಸಲ್ಲಿಕೆ
Karnataka State Bioenergy Development Board ವಿಧಾನಸೌಧದ ಉಪ ಮುಖ್ಯಮಂತ್ರಿಯವರ ಕಾರ್ಯಾಲಯದ ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಸುಧೀಂದ್ರ ಅವರು ಒಂದು ವರ್ಷದ ಕಾರ್ಯಾವಧಿಯಲ್ಲಿ ಕೈಗೊಂಡ ಜೈವಿಕ ಅಭಿವೃದ್ಧಿ ಯೋಜನೆ ಕುರಿತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ವರದಿ ಸಲ್ಲಿಸಿದರು.
ಈ ವೇಳೆ, ಕರ್ನಾಟಕ ಸರ್ಕಾರದ ದೆಹಲಿಯ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ.ರೇವಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
CM Siddharamaiah ಭೂ ಸ್ವಾಧೀನ ಪ್ರಕ್ರಿಯೆ ಕುರಿತು ಸೀಎಂ ಸಿದ್ಧರಾಮಯ್ಯ ಅವರಿಂದ ವಿಶೇಷ ಸಭೆ
CM Siddharamaiah ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧ್ಯಕ್ಷತೆಯಲ್ಲಿ ದೇವನಹಳ್ಳಿ, ಚನ್ನರಾಯಪಟ್ಟಣ ಹಾಗೂ ಇತರೆ ಗ್ರಾಮಗಳಲ್ಲಿನ ಭೂಸ್ವಾಧೀನ ಪ್ರಕ್ರಿಯೆ ವಿಷಯ ಕುರಿತು ಸಭೆ ನಡೆಯಿತು.
ಈ ಸಭೆಯಲ್ಲಿ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ, ನಗರಾಭಿವೃದ್ಧಿ ಮತ್ತು ನಗರ ಯೋಜನೆ ಸಚಿವ ಬಿ.ಎಸ್.ಸುರೇಶ, ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯಮಂತ್ರಿಯವರ ಕಾನೂನು ಸಲಹೆಗಾರ ಪೊನ್ನಣ್ಣ, ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್, ರೈತ ಮುಖಂಡರುಗಳು ಸೇರಿದಂತೆ ಇತರರು ಉಪಸ್ಥಿತರಿದ್ದರು.
Inner wheel Club of Shivamogga ಜುಲೈ 7, ಶಿವಮೊಗ್ಗ ಇನ್ನರ್ ವ್ಹೀಲ್ ಕ್ಲಬ್ ನ ಪದಾಧಿಕಾರಿಗಳ ಪದಗ್ರಹಣ
Inner wheel Club of Shivamogga ಇನ್ನರ್ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗನ ನೂತನ ಅಧ್ಯಕ್ಷರಾಗಿ ಲತಾ ರಮೇಶ್ ಹಾಗೂ ಕಾರ್ಯದರ್ಶಿಯಾಗಿ ಶೃತಿ ರಾಕೇಶ್ ಆಯ್ಕೆಯಾಗಿದ್ದಾರೆ.
ಸವಳಂಗ ರಸ್ತೆಯಲ್ಲಿರುವ ನಗರದ ರೋಟರಿ ಯೂತ್ ಸೆಂಟರ್ನಲ್ಲಿ ಜುಲೈ 7ರಂದು ಬೆಳಗ್ಗೆ 10.30ಕ್ಕೆ ಇನ್ನರ್ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಜನಶಿಕ್ಷಣ ಸಂಸ್ಥೆಯ ನಿರ್ದೇಶಕಿ ಎಸ್.ವೈ.ಅರುಣಾದೇವಿ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಇನ್ನರ್ವ್ಹೀಲ್ ಕ್ಲಬ್ ಆಫ್ ಶಿವಮೊಗ್ಗನ ನಿಕಟಪೂರ್ವ ಅಧ್ಯಕ್ಷೆ ಗಾಯತ್ರಿ ಸುಮತೀಂದ್ರ ಹಾಗೂ ನಿಕಟಪೂರ್ವ ಕಾರ್ಯದರ್ಶಿ ಅನಿತಾ ಸೆಂಥಿಲ್ ವೇಲನ್ ಭಾಗವಹಿಸುವರು.
Health Center Holehonnur ಹೊಳೆಹೊನ್ನೂರಿನಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ”ಕ್ಕೆ ಚಾಲನೆ
Health Center Hole honnur ಆರೋಗ್ಯ ಕೇಂದ್ರ ಹೊಳೆ ಹೊನ್ನೂರಿನಲ್ಲಿ “ಆಶಾಕಿರಣ ದೃಷ್ಟಿ ಕೇಂದ್ರ” ಉದ್ಘಾಟನೆ ಕಾರ್ಯಕ್ರಮ ನೆರವೇರಿತು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ದೇವಾನಂದ್ ಆಡಳಿತ ವೈದ್ಯಧಿಕಾರಿಗಳು ಸಮುದಾಯ ಆರೋಗ್ಯ ಕೇಂದ್ರ ಹೊಳೆ ಹೊನ್ನೂರು ಇವರು ವಹಿಸಿಕೊಂಡಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಇಮ್ರಾನ್ ಖಾನ್ ಆರೋಗ್ಯ ರಕ್ಷಾ ಸಮಿತಿ ಸಮಿತಿಯ ಸದಸ್ಯರು ಇವರು ನೆರವೇರಿಸಿದರು. ಆರೋಗ್ಯ ಕೇಂದ್ರದ ಕಚೇರಿ ಅಧೀಕ್ಷಕರಾದ ಶ್ರೀ ಪ್ರಶಾಂತ್, ಶ್ರೀ ನಿರಂಜನ್ ಕುಮಾರ್ ನೇತ್ರಾಧಿಕಾರಿ ಇವರು ಉಪಸ್ಥಿತರಿದ್ದರು.
Health Center Holehonnur ಕಾರ್ಯಕ್ರಮದಲ್ಲಿ ಡಾ. ದೇವಾನಂದ್ ಇವರು ಆಶಾಕಿರಣ ದೃಷ್ಟಿ ಕೇಂದ್ರದವು “ರಾಜ್ಯದ ಪ್ರತಿಯೊಬ್ಬರಿಗೂ ಕಣ್ಣಿನ ಆರೈಕೆ” ನೀಡಲು ಶುಭಾರಂಭ ವಾಗಿರುವ ಕಾರ್ಯಕ್ರಮವಾಗಿದ್ದು, ಕಣ್ಣಿನ ಸಮಸ್ಯೆ ಇರುವವರು ಸಮುದಾಯ ಆರೋಗ್ಯ ಕೇಂದ್ರ ಕೇಂದ್ರ ದಲ್ಲಿರುವ ಅಶಾ ಕಿರಣ ದೃಷ್ಟಿ ಕೇಂದ್ರದಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕಾಗಿ ತಿಳಿಸಿದರು, ಕಾರ್ಯಕ್ರಮದಲ್ಲಿ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ಹಾಗೂ ಎಲ್ಲಾ ಸಿಬ್ಬಂದಿಗಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
