Monday, February 23, 2026
Monday, February 23, 2026
Home Blog Page 229

H. D. Kumaraswamy ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಅವರು ಯುವ ಸಮುದಾಯಕ್ಕೆ ಸದಾ ಸ್ಫೂರ್ತಿ- ಸಚಿವ ಎಚ್.ಡಿ.ಕುಮಾರಸ್ವಾಮಿ

0

H. D. Kumaraswamy ಭಾರತದ ಕ್ಷಿಪಣಿ ಜನಕ, ಜಗತ್ತಿನ ಶ್ರೇಷ್ಠ ವಿಜ್ಞಾನಿಗಳಲ್ಲಿ ಒಬ್ಬರು ಹಾಗೂ ಮಾಜಿ ರಾಷ್ಟಪತಿಗಳೂ ಆಗಿದ್ದ ಭಾರತರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರನ್ನು ಗೌರವಪೂರ್ವಕವಾಗಿ ಸ್ಮರಿಸೋಣ.

H. D. Kumaraswamy ಭಾರತದ ಮಿಸೈಲ್ ಮ್ಯಾನ್ ಆಗಿ ನಮ್ಮ ಹೃದಯದಲ್ಲಿ ನೆಲೆಸಿರುವ ಕಲಾಂ ಅವರು, ಭದ್ರತೆಯ ಜತೆಗೆ ರಾಷ್ಟ್ರದ ಆಮೂಲಾಗ್ರ ಅಭಿವೃದ್ಧಿಗಾಗಿ ಶ್ರಮಿಸಿದ ಮಹಾನುಭಾವರು ಮತ್ತು ಯುವ ಸಮುದಾಯಕ್ಕೆ ಸದಾ ಸ್ಫೂರ್ತಿಯ ಸೆಲೆ ಆಗಿದ್ದಾರೆ. ಅವರ ಪುಣ್ಯಸ್ಮರಣೆಯ ಈ ದಿನದಂದು ಆ ಚೇತನಕ್ಕೆ ನನ್ನ ಭಾವಪೂರ್ಣ ನಮನಗಳು.

S. N. Channabasappa ಶಿವಮೊಗ್ಗದಲ್ಲಿ ಎಡಬಿಡದೆ ಸುರಿದಮಳೆ. ಅಶೋಕನಗರದಲ್ಲಿ ಮನೆ ಮೇಲ್ಛಾವಣಿ ಕುಸಿತ

0

S. N. Channabasappa ಕಳೆದ ಕೆಲ ದಿನಗಳಿಂದ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಶಿವಮೊಗ್ಗ ನಗರದ ಅಶೋಕನಗರ ಪ್ರದೇಶದಲ್ಲಿ ಕುಮಾರ್ ಎಂಬುವರ ಮನೆಯ ಮೇಲ್ಚಾವಣಿ ಕುಸಿದ ಘಟನೆ ನಡೆದಿದೆ. ಇದಕ್ಕೆ ಸಂಬಂಧಿಸಿದಂತೆ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಇಂದು ಮಹಾನಗರ ಪಾಲಿಕೆ ಆಯುಕ್ತಾರಾದ ಶ್ರೀ ಮಾಯಣ್ಣಗೌಡರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿ, ಕೂಡಲೇ ತಾತ್ಕಾಲಿಕ ವಸತಿ ಮತ್ತು ಅವಶ್ಯಕ ಮೂಲಸೌಕರ್ಯಗಳನ್ನು ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.

S. N. Channabasappa ಈ ಸಂದರ್ಭದಲ್ಲಿ ಕುಮಾರ್ ಅವರ ಕುಟುಂಬಕ್ಕೆ ಮಹಾನಗರ ಪಾಲಿಕೆಯ ವತಿಯಿಂದ ತಕ್ಷಣ ನೆರವು ದೊರಕುವಂತೆ ಕ್ರಮ ಕೈಗೊಳ್ಳಬೇಕು ಎಂಬುದು ಸ್ಪಷ್ಟವಾಗಿ ತಿಳಿಸಿದರು.

S. N. Channabasappa ಸರ್ಕಾರಿ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರ ಸಮಸ್ಯೆಗಳ ಬಗ್ಗೆ ಶಾಸಕರಿಂದ ಪರಿಶೀಲನಾ ಸಭೆ

0

S. N. Channabasappa ಸರ್ಕಾರಿ ವಸತಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ, ದೂರದ ಊರಿನಿಂದ ವ್ಯಾಸಂಗಕ್ಕಾಗಿ ಆಗಮಿಸುತ್ತಿರುವ ವಿದ್ಯಾರ್ಥಿನಿಯರಿಗೆ ಎದುರಾಗುತ್ತಿರುವ ವಸತಿ ಹಾಗೂ ಆಹಾರ ವ್ಯವಸ್ಥೆಯ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಶಿವಮೊಗ್ಗ ನಗರ ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಸಭೆ ನಡೆಸಿ, ಹಲವಾರು ವಿಷಯಗಳನ್ನು ಚರ್ಚಿಸಿದರು.

ಸಭೆಯಲ್ಲಿ ಚರ್ಚಿಸಲಾದ ಪ್ರಮುಖ ಅಂಶಗಳು:

  1. ಹಲವಾರು ವಿದ್ಯಾರ್ಥಿನಿಯರು ಹತ್ತಾರು ಕಿಲೋಮೀಟರ್ ದೂರದಿಂದ ವಿದ್ಯಾಭ್ಯಾಸಕ್ಕಾಗಿ ಆಗಮಿಸುತ್ತಿದ್ದಾರೆ. ವಿದ್ಯಾರ್ಥಿನಿಯರಿಗಾಗಿ ಹಾಸ್ಟೆಲ್ ವ್ಯವಸ್ಥೆಯನ್ನು ವಿಸ್ತರಿಸಿ, ದೈನಂದಿನ ವಸತಿ ಹಾಗೂ ಆಹಾರ ವ್ಯವಸ್ಥೆ ಲಭ್ಯವಾಗುವಂತೆ ಕ್ರಮ ಕೈಗೊಳ್ಳಲು ಸೂಚಿಸಿದರು.
  2. ವಿದ್ಯಾರ್ಥಿನಿಯರಲ್ಲಿ ಬಹುಪಾಲು ಆರ್ಥಿಕವಾಗಿ ಹಿಂದುಳಿದ ಹಿನ್ನಲೆಯಲ್ಲಿ, ಹಾಸ್ಟೆಲ್ ಅರ್ಹತಾ ಮಾನದಂಡಗಳನ್ನು ಮರುಪರಿಶೀಲಿಸಿ, ಅಗತ್ಯವಿರುವ ವಿದ್ಯಾರ್ಥಿನಿಯರಿಗೆ ತ್ವರಿತವಾಗಿ ಸೌಲಭ್ಯ ಒದಗಿಸಬೇಕು ಹಾಗೂ ಬಡತನ ರೇಖೆಗಿಂತ ಕೆಳಗಿರುವ ಪೋಷಕರ ಮಕ್ಕಳಿಗೆ ಆಧಿಕ್ಯ ನೀಡಬೇಕೆಂದು ತಿಳಿಸಿದರು.
  3. ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ಯಾವುದೇ ಕಾರಣಕ್ಕೂ ವ್ಯತ್ಯಯ ಉಂಟಾಗದಂತೆ ಬಿಸಿಎಂ ಇಲಾಖೆ ತಕ್ಷಣ ಸ್ಪಂದಿಸಿ ವ್ಯವಸ್ಥೆಯ ಅಭಿವೃದ್ಧಿಗೆ ಅಗತ್ಯ ಕ್ರಮ ಕೈಗೊಳ್ಳಬೇಕು ಸೂಚಿಸಿದರು.

S. N. Channabasappa ಈ ಸಂದರ್ಭದಲ್ಲಿ ಬಿಸಿಎಂ ಜಿಲ್ಲಾ ಮಟ್ಟದ ಅಧಿಕಾರಿಗಳಾದ ಶ್ರೀಮತಿ ಶೋಭಾ, ಬಿಸಿಎಂ ತಾಲೂಕು ಮಟ್ಟದ ಅಧಿಕಾರಿಗಳಾದ ಶ್ರೀ ಪವಿತ್ರಾನಂದರಾಜು, ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನ ಪ್ರಾಂಶುಪಾಲರಾದ ರವಿ ನಾಯಕ್ ಡಿ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು, ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಉಪಸ್ಥಿತರಿದ್ದರು.

Santosh Lad ಹಿರಿಯ ಕಾರ್ಮಿಕ ಮುಖಂಡ ಮೈಕೆಲ್ ಫರ್ನಾಂಡಿಸ್ ಅವರೊಂದಿಗೆ ಸಚಿವ ಸಂತೋಷ್ ಲಾಡ್ ಸೌಜನ್ಯ ಭೇಟಿ.

0

Santosh Lad ಇತ್ತೀಚಿಗೆ ಅಪಘಾತಕೀಡಾಗಿದ್ದ ಕಾರಣ ವಿಶ್ರಾಂತಿ ಪಡೆದು ಆರೋಗ್ಯ ಚೇತರಿಸಿಕೊಳ್ಳುತ್ತಿರುವ ಕಾರ್ಮಿಕ ಮುಖಂಡ ಮಾಜಿ ಶಾಸಕ ಮೈಕೆಲ್ ಫರ್ನಾಂಡಿಸ್ ಅವರನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರು ಶುಕ್ರವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.
ಬೆಂಗಳೂರಿನ ಅವರ ನಿವಾಸದಲ್ಲಿ ಮೈಕೆಲ್ ಅವರನ್ನು ಭೇಟಿ ಮಾಡಿದ ಸಂತೋಷ್ ಲಾಡ್, ಕಾರ್ಮಿಕ ಸಂಘಟನೆಯಲ್ಲಿ ತೊಡಗಿಸಿಕೊಂಡು ಕಾರ್ಮಿಕರ ಏಳಿಗೆಗೆಗಾಗಿ ಶ್ರಮಿಸಿದ್ದ ಮೈಕೆಲ್ ಅವರ ಸೇವೆಯನ್ನು ಸ್ಮರಿಸಿ ಕಾರ್ಮಿಕರ ಆಗುಹೋಗುಗಳ ಬಗ್ಗೆ ಚರ್ಚಿಸಿ, ಮೈಕೆಲ್ ಅವರನ್ನು ಬೇಗ ಗುಣಮುಖರಾಗುವಂತೆ ಹಾರೈಸಿದ ಸಚಿವ ಲಾಡ್, ಕಾರ್ಮಿಕರ ಏಳಿಗೆಗಾಗಿ ಇಲಾಖೆ ತಂದಿರುವ ಹೊಸ ಯೋಜನೆಗಳ ಬಗ್ಗೆ ಮಾಹಿತಿ ಹಂಚಿಕೊಂಡರು. ಇನ್ನು ಮೈಕಲ್ ಅವರು ಕಳೆದ 60 ವರ್ಷಗಳಿಂದ ಕಾರ್ಮಿಕ ಸಂಘಟನೆಯಲ್ಲಿ ಹಲವಾರು ಸಾರ್ವಜನಿಕ ಉದ್ದಿಮೆಗಳ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರ್ಮಿಕ ಇಲಾಖೆ ಸಚಿವರಾಗಿ ಕಾರ್ಮಿಕರಿಗೆ ಸ್ಪಂದಿಸಿ ಕೆಲಸ ಮಾಡುತ್ತಿರುವುದಕ್ಕೆ ಹಿರಿಯರಾದ ಮೈಕೆಲ್ ಅವರು ಸಂತೋಷ್ ಲಾಡ್ ಅವರ ಸೇವಾಕಾರ್ಯವನ್ನು ಮೆಚ್ಚಿ ಹರ್ಷ ವ್ಯಕ್ತಪಡಿಸಿ ಆಶೀರ್ವದಿಸಿದರು.

Santosh Lad ಭೇಟಿ ಸಂದರ್ಭದಲ್ಲಿ ಫೆರ್ನಾಂಡಿಸ್ ಅವರ ಪತ್ನಿ ಡೋನಾ ಫರ್ನಾಂಡಿಸ್, ಲಾಡ್ ಅವರ ಸಹೋದರ ಹುಬ್ಬಳ್ಳಿ-ಧಾರವಾಡ ಕಾರ್ಪೊರೇಟರ್ ಮಯೂರ್ ಮೋರೆ, ಸಂಘಟನಾಕಾರರಾದ ಲಕ್ಷ್ಮಯ್ಯ ಕಾಳಪ್ಪ, ಗುಂಜೂರು ಮಂಜು ಸೇರಿದಂತೆ ಇತರರು ಭೇಟಿ ಸಂದರ್ಭದಲ್ಲಿ ಜೊತೆಗಿದ್ದರು.

Kargil Vijay Diwas ಕಾರ್ಗಿಲ್ ವಿಜಯೋತ್ಸವ ಆಚರಣೆ : ದೇಶಾಭಿಮಾನ , ಸೈನಿಕರ ಗೌರವದ ಸಂಕೇತ- ಗುರುದತ್ತ ಹೆಗಡೆ.

0

Kargil Vijay Diwas ದೇಶ ಮತ್ತು ದೇಶವಾಸಿಗಳ ರಕ್ಷಣೆಗಾಗಿ ತಮ್ಮ ಅಮೂಲ್ಯ ಜೀವವನ್ನೇ ತ್ಯಾಗ ಮಾಡಿದ ಹಾಗೂ 26 ಕಾರ್ಗಿಲ್‌ ವಿಜಯೋತ್ಸವದ ಅಂಗವಾಗಿ ಆಚರಿಸಲಾಗುವ ಈ ಸಂಭ್ರಮ ದೇಶಾಭಿಮಾನ, ಸೈನಿಕರ ಗೌರವದ ಸಂಕೇತವಾಗಿದೆ ಎಂದು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಹೇಳಿದರು.
ಅವರು ಇಂದು ನಗರದ ಸೈನಿಕ ಪಾರ್ಕ್‌ನಲ್ಲಿ ಸೈನಿಕ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಸರ್ಕಾರಿ ನೌಕರರ ಸಂಘ, ನೆಹರೂ ಸ್ಟೇಡಿಯಂ ಗೆಳೆಯರ ಬಳಗ ಇವರುಗಳ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಕಾರ್ಗಿಲ್‌ ವಿಜಯೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ, ಹುತಾತ್ಮ ಸೈನಿಕರ ಸ್ಮಾರರಕ್ಕೆ ಪುಷ್ಪಗೌರವ ಸಲ್ಲಿಸಿ, ಮಾತನಾಡುತ್ತಿದ್ದರು.
ಈ ವಿಜಯೋತ್ಸವದ ಸಂಭ್ರಮವನ್ನು ಪ್ರತಿ ವರ್ಷ ಸಡಗರ ಸಂಭ್ರಮಗಳಿಂದ ಆಚರಿಸಿಕೊಂಡು ಬರಲಾಗುತ್ತಿದೆ. ದೇಶಕ್ಕಿಂತ ಮುಖ್ಯವಾದುದು ಯಾವುದೂ ಇಲ್ಲ. ದೇಶದ ರಕ್ಷಣೆಯ ವಿಷಯದಲ್ಲಿ ನಮ್ಮ ದೇಶದ ಪ್ರತಿ ಸೈನಿಕರೂ ಕಠಿಬದ್ದರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ದೇಶದ ಪ್ರತಿ ವ್ಯಕ್ತಿಯ ನೆಮ್ಮದಿಯ ಬದುಕಿನ ಹಿಂದೆ ಸೈನಿಕರ ಸಹಕಾರವಿರುವುದನ್ನು ನಾವು ಸದಾ ನೆನಪಿಸಿಕೊಳ್ಳಬೇಕು ಎಂದ ಅವರು, ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯ ನಮ್ಮ ವೀರಯೋಧರು ಪ್ರಾಣಾರ್ಪಣೆ ಮಾಡಿರುವುದು ನೋವನ್ನುಂಟು ಮಾಡುತ್ತದೆ. ಈ ಸಂದರ್ಭದಲ್ಲಿ ದೇಶದ ಪ್ರತಿ ನಾಗರೀಕರೂ ಹುತಾತ್ಮರ ಕುಟುಂಬಕ್ಕೆ ಬೆಂಬಲವಾಗಿ ನಿಲ್ಲುವ ಪ್ರಮಾಣ ಕೈಗೊಳ್ಳಬೇಕೆಂದವರು ನುಡಿದರು.
ದೇಶದ ಭದ್ರತೆಯ ಪ್ರಶ್ನೆ ಎದುರಾಗುವ ಎಲ್ಲಾ ಹಂತದಲ್ಲಿಯೂ ನಾವು ಸೈನಿಕರೊಂದಿಗೆ ಸೈನಿಕರಾಗಿ, ವೀರಸೇನಾನಿಗಳಂತೆ ನಿಲ್ಲಬೇಕು. ಈ ಕಾರ್ಯಕ್ರಮವು ಸೈನಿಕರು, ಮಾಜಿಸೈನಿಕರು, ಅವರ ಕುಟುಂಬಕ್ಕೆ ಆಸರೆಯಾಗಿ ನಿಲ್ಲುವ, ದೇಶದ ಪ್ರತಿ ನಾಗರೀಕರಿಗೂ ದೇಶಪ್ರೇಮ ಜಾಗೃತಿಗೊಳಿಸುವಂತೆ ಮಾಡುವ ಉದ್ದೇಶ ಇದಾಗಿದೆ ಎಂದವರು ನುಡಿದರು.
ಈ ಕಾರ್ಯಕ್ರಮವು ಸಶಸ್ತ್ರ ಪಡೆಗಳ ನಿರಂತರ ಧೈರ್ಯ ಮತ್ತು ಸಮರ್ಪಣೆ, ರಾಷ್ಟ್ರೀಯ ಒಗ್ಗಟ್ಟು, ಸೇವೆ ಮತ್ತು ಶಾಂತಿಯ ಮೌಲ್ಯಗಳು ಮತ್ತು ಭಾರತವನ್ನು ಸುರಕ್ಷಿತವಾಗಿಡುವ ನಿಜ ಜೀವನದ ವೀರರನ್ನು ನೆನಪಿಸಿಕೊಳ್ಳುವ ಮಹತ್ವದ ದಿನವಾಗಿದೆ. ಯುವ ಮನಸ್ಸುಗಳಲ್ಲಿ ದೇಶಭಕ್ತಿ, ಸ್ಥಿತಿಸ್ಥಾಪಕತ್ವ ಮತ್ತು ಕೃತಜ್ಞತೆಯ ಭಾವನೆಯನ್ನು ತುಂಬಲು ಶಾಲೆಗಳು ಈ ದಿನವನ್ನು ಆಚರಿಸುತ್ತವೆ. ಇದು ವಿದ್ಯಾರ್ಥಿಗಳು ತಮ್ಮ ದೇಶವನ್ನು ಮೆಚ್ಚುವಂತೆ ಮತ್ತು ಏಕತೆ ಮತ್ತು ಸಾಮರಸ್ಯದ ಮಹತ್ವವನ್ನು ಅರ್ಥಮಾಡಿಕೊಳ್ಳಲು ಪ್ರೇರೇಪಿಸುತ್ತದೆ.
Kargil Vijay Diwas ಈ ಸಂದರ್ಭದಲ್ಲಿ ಉಪಸ್ಥಿತದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ಮಾತನಾಡಿ, ಈ ದೇಶದ ರಕ್ಷಣೆಗಾಗಿ ತ್ಯಾಗ, ಬಲಿದಾನ ಮಾಡಿದ ವೀರಯೋಧರ ಸವಿನೆನಪಿಗಾಗಿ ಆಚರಿಸಲಾಗುತ್ತಿರುವ 26ನೇ ಕಾರ್ಗಿಲ್‌ ವಿಜಯೋತ್ಸವ ಹುತಾತ್ಮ ಯೋಧರ, ವೀರನಾರಿಯರ ಕುಟುಂಬಕ್ಕೆ ಬೆಂಬಲವಾಗಿರಲಿದೆ. ಈ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಇನ್ನಷ್ಟು ರಚನಾತ್ಮಕವಾಗಿ ರೂಪಿಸಿ ಆಚರಿಸಲಾಗುವುದು ಎಂದರು.
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಸೈನಿಕರ ಗೌರವಾರ್ಥವಾಗಿ ಪ್ರತಿ ವರ್ಷ ಜುಲೈ 26 ರಂದು ಕಾರ್ಗಿಲ್ ವಿಜಯ್ ದಿವಸ್ ಆಚರಿಸಲಾಗುತ್ತದೆ. ಈ ದಿನವನ್ನು ರಾಷ್ಟ್ರ ರಾಜಧಾನಿ ಸೇರಿದಂತೆ ಭಾರತದಾದ್ಯಂತ ಆಚರಿಸಲಾಗುತ್ತದೆ, ಭಾರತೀಯ ಸಶಸ್ತ್ರ ಪಡೆಗಳ ಕೊಡುಗೆಗಳನ್ನು ಸ್ಮರಿಸಲು ದೇಶಾದ್ಯಂತ ಕಾರ್ಯಗಳನ್ನು ಆಯೋಜಿಸಲಾಗುತ್ತದೆ. ಈ ಕಾರ್ಯಕ್ರಮ ಎಲ್ಲರಲ್ಲೂ ದೇಶಾಭಿಮಾನ ಮೂಡಿಸಲಿದೆ ಮಾತ್ರವಲ್ಲ ಸುರಕ್ಷತೆಗೆ ಪ್ರೇರೇಪಿಸಲಿದೆ. ಜಮ್ಮು-ಕಾಶ್ಮೀರದ ಕಾರ್ಗಿಲ್‌ನ್ನು ಮರಳಿ ವಶಕ್ಕೆ ಪಡೆದ ಭಾರತೀಯ ಸೈನಿಕರ ಅಪ್ರತಿಮ ಶೌರ್ಯ ಮತ್ತು ತ್ಯಾಗವನ್ನು ಸ್ಮರಿಸುವುದರ ದ್ಯೋತಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಮೋಹನ್‌ಕುಮಾರ್‌, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ನಿರ್ದೇಶಕ ಡಾ|| ಹಿರೇಮಠ್‌ ಸೇರಿದಂತೆ ಅಸಂಖ್ಯಾತ ಮಾಜಿ ಯೋಧರು, ಹುತಾತ್ಮ ಯೋಧರ ಕುಟುಂಬದ ಸದಸ್ಯರು, ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.
ಕಾರ್ಯಕ್ರಮಕ್ಕೂ ಮುನ್ನ ರಾಜ್ಯ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಹಾಗೂ ಸಾರ್ವಜನಿಕರು ಕಾರ್ಗಿಲ್‌ ವಿಜಯೋತ್ಸವದ ಅಂಗವಾಗಿ ಏರ್ಪಡಿಸಿದ್ದ ಬೈಕ್‌ರ್ಯಾಲಿಗೆ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಅವರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ಆವರಣದಿಂದ ಹೊರಟ ಈ ರ್ಯಾಲಿಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಅಂತಿಮವಾಗಿ ಸೈನಿಕ ಪಾರ್ಕನಲ್ಲಿ ಸಂಪನ್ನಗೊಂಡಿತು.

Shimoga News ಎಲ್ಲಾ ಹಾವುಗಳು ವಿಷಕಾರಿಯಲ್ಲ. ಮಾಧ್ಯಮಗಳಲ್ಲಿ ಅವುಗಳ ಬಗ್ಗೆ ಭ್ರಮೆ,ಮೌಢ್ಯ ಬಿತ್ತಲಾಗಿದೆ- ಜಿ.ಆರ್.ಪಂಡಿತ್

0

Shimoga News ಸಾಗರ ಪ್ರಕೃತಿಯ ವಿಸ್ಮಯಗಳಲ್ಲಿ ವನ್ಯ ಜೀವಿಗಳ ಪಾತ್ರ ಮಹತ್ವದ್ದು, ಮನುಷ್ಯನಿಗಿಂತ ವನ್ಯ ಜೀವಿಗಳೇ ಪರಿಸರ ಸಂರಕ್ಷಕರು. ಭೂಮಿಯ ಮೇಲೆ ಎಲ್ಲಾ ಜೀವಿಗಳಿಗೂ ಬದುಕುವ ಹಕ್ಕಿದೆ. ಹಾವುಗಳ ಪಾತ್ರ ಆಹಾರ ಸರಪಳಿಯಲ್ಲಿ ಮುಖ್ಯವಾದದ್ದು.
“ಎಲ್ಲಾ ಹಾವುಗಳೂ ವಿಷಕಾರಿಯಲ್ಲ. ಹಾವಿಗೆ ಬೇಕಾಗಿರುವುದು ಇಲಿ, ಹಲ್ಲಿ, ಕಪ್ಪೆ, ಕೋಳಿಯಂತಹ ಆಹಾರ. ಹಾವುಗಳ ಬಗ್ಗೆ ಸಿನಿಮಾ, ಧಾರವಾಹಿಗಳ ಮೂಲಕ ಭ್ರಮೆ ಭಿತ್ತಲಾಗಿದೆ. ಧಾರ್ಮಿಕವಾಗಿಯೂ ಹಾವು ವಿಲನ್ ಆಗಿದೆ. ದೋಷಮುಕ್ತಿಗಾಗಿ ದೊಡ್ಡ-ದೊಡ್ಡ ದೇವಸ್ಥಾನಗಳನ್ನು ಕಟ್ಟುತ್ತಾರೆ. ನಾಗಿಣಿಯಾಗಿ ಕುಣಿಯುವುದಿಲ್ಲ. ದ್ವೇಷ ಸಾಧಿಸುವುದಿಲ್ಲ. ನಾಗಲೋಕ ಇಲ್ಲ. ಜನರಲ್ಲಿ ಭಯ, ಮೌಢ್ಯ ಭಿತ್ತುತ್ತಾರೆ. ಇದರಿಂದ ಜನರು ಹಾವುಗಳ ಬಲಿದಾನ ಮಾಡುತ್ತಾರೆ. ಪ್ರಕೃತಿಯ ಸಮತೋಲನ ಸಹಜವಾಗಿ ಏರುಪೇರಾಗಿ ಮನುಷ್ಯ ಕುಲಕ್ಕೆ ಧಕ್ಕೆಯಾಗಿದೆ. ತಾನು ಮಾತ್ರವೇ ಮುಖ್ಯ ಎನ್ನುವ ಮನುಷ್ಯನ ನಿಲುವು ವಿವೇಕವನ್ನು ಕಳೆಯುತ್ತಿದೆ. ವಿದ್ಯಾರ್ಥಿಗಳು ಹಾವಿನ ಬಗ್ಗೆ ಅರಿವು, ಅದರ ಸಂರಕ್ಷಣೆ ಬಗ್ಗೆ ಅರಿತು ನಡೆಯಿರಿ” ಎಂದು ಖ್ಯಾತ ವನ್ಯ ಜೀವಿ ಛಾಯಾಗ್ರಾಹಕ ಶ್ರೀ ಜಿ.ಆರ್. ಪಂಡಿತ್ರವರು ಸಾಗರದ ಎಲ್.ಬಿ. ಕಾಲೇಜಿನಲ್ಲಿ ಹಾವು ದಿನಾಚರಣೆಯ ಪ್ರಯುಕ್ತ ಆಯೋಜಿಸಲಾದ ವಿದ್ಯಾರ್ಥಿಗಳ ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.
Shimoga News ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಬೆಂಗಳೂರು, ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನ (ರಿ.), ಸಾಗರ ಮತ್ತು ಪಂಚವಟಿ ನಿಸರ್ಗ ಸಂಶೋಧನಾ ಅಕಾಡೆಮಿ ಆಶ್ರಯದಲ್ಲಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ, ಶ್ರೀ ಪುರುಷೋತ್ತಮ ತಲವಾಟ, ರಾಷ್ಟ್ರೀಯ ರಂಗ ಪ್ರಶಸ್ತಿ ವಿಜೇತರು, ಕವಲಕೋಡು ವೆಂಕಟೇಶ, ನಿಕಟಪೂರ್ವ ಜೀವವೈವಿಧ್ಯ ಮಂಡಳಿ ಸದಸ್ಯರು, ವೃಕ್ಷಲಕ್ಷ ಆಂದೋಲನ, ಸಂಚಾಲಕರು ಮಾತನಾಡಿ, “ಜನವಸತಿ, ಹೊಲ, ಹುತ್ತಗಳ ಸುತ್ತ-ಮುತ್ತಲೂ ಹಾವುಗಳು ಕಂಡುಬರುತ್ತದೆ. ಇವುಗಳಲ್ಲಿ ಕೊಳಕ ಮಂಡಲ, ಕಾಮನ್ ಕ್ರೇಟ್, ನಾಗರ ಹಾವು, ಕಾಳಿಂಗ ಸರ್ಪಗಳು ಹೆಚ್ಚು ವಿಷಕಾರಿ ಹಾವುಗಳು. ಇವು ಕಚ್ಚಿದರೆ ತಕ್ಷಣ ಚಿಕಿತ್ಸೆ ಪಡೆಯಬೇಕು. ಕೆರೆ ಹಾವು, ನೀರು ಹಾವು, ಹಸಿರು ಹಾವು, ಹೆಬ್ಬಾವು ಅಪಾಯಕಾರಿಯಲ್ಲ. ಎಲ್ಲಿಯಾದರೂ ಹಾವು ಕಂಡರೆ ಕಲ್ಲು ಎಸೆಯಬೇಡಿ. ಬದಲಾಗಿ ಒಂದು ಫೋಟೋ ತೆಗೆದು ಗೂಗಲ್ನಲ್ಲಿ ಅಪ್ಲೋಡ್ ಮಾಡಿ ಅದರ ಬಗೆಗಿನ ಮಾಹಿತಿಯನ್ನು ಅರಿಯಿರಿ” ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎ.ಎಸ್. ಲಕ್ಷ್ಮೀಶ ಇವರು ವಹಿಸಿದ್ದರು. ಕಾರ್ಯಕ್ರಮದ ಮೊದಲು ಡಾ. ಗಿರೀಶ್ ಜನ್ನೆ, ನಿರ್ದೇಶಕರು, ಪಂಚವಟಿ ನಿಸರ್ಗ ಸಂಶೋಧನಾ ಅಕಾಡೆಮಿ, ಇವರು ಎಲ್ಲರನ್ನೂ ಸ್ವಾಗತಿಸಿ, ಡಾ. ಸವಿನಯ ಮಾಲ್ವೆ, ವಿಜ್ಞಾನಿಗಳು, ಕಾರ್ಯಾಗಾರದ ಬಗ್ಗೆ ವಿವರವಾದ ಮಾಹಿತಿಯನ್ನು ತಿಳಿಸಿದರು. ಕಾರ್ಯಾಗಾರದಲ್ಲಿ ಶ್ರೀಮತಿ ಇಂದಿರಾಗಾಂಧಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಹಾಗೂ ಎಲ್.ಬಿ. ಕಾಲೇಜಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು. ವನ್ಯಜೀವಿ ಛಾಯಾಗ್ರಾಹಕರಾದ ಶ್ರೀ ಸತೀಶ್ ಆರ್, ಶ್ರೀ ಅಶೋಕ, ಶ್ರೀ ಈಶಾನ್ಯ ಶರ್ಮ, ಶ್ರೀ ಕಲಗಾರ್ ಗಿರಿಧರ್, ಶ್ರೀ ವಿವೇಕ್ ಹಾಸ್ಯಗಾರ್, ಶ್ರೀ ಜಿ.ಆರ್. ಪಂಡಿತ್ ಇವರುಗಳು ಸೆರೆಹಿಡಿದ ವಿವಿಧ ಹಾವುಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿತ್ತು. ಪರಿಸರ ನಿರ್ವಹಣೆ ಮತ್ತು ನೀತಿ ಸಂಶೋಧನಾ ಸಂಸ್ಥೆ (EMPRI) ಸಂಸ್ಥೆಯ ತಾಂತ್ರಿಕ ತಂತ್ರಜ್ಞರಾದ ಶ್ರೀ ಶಿವರಾಜ್ ಹಾಗೂ ಸಹಾಯಕರಾದ ಶ್ರೀಮತಿ ಹರ್ಷಿತಾ ಭಾಗವಹಿಸಿ ಮಾಹಿತಿ ನೀಡಿದರು.

Sri. Manjunath Nayak ಜನತೆ ಖಾಯಂ ಲೋಕ್ ಅದಾಲತ್ ಮೂಲಕ ಸರಳವಾಗಿ ವ್ಯಾಜ್ಯಗಳ ಇತ್ಯರ್ಥ ಮಾಡಿಕೊಳ್ಳಬಹುದು- ನ್ಯಾ.ಮಂಜುನಾಥ ನಾಯಕ್.

0

Sri. Manjunath Nayak ಸರಳ ನ್ಯಾಯದಾನದ ಮೂಲಕ ವ್ಯಾಜ್ಯಗಳನ್ನು ಇತ್ಯರ್ಥ ಮಾಡಿಕೊಳ್ಳುವ ಒಂದು ವ್ಯವಸ್ಥೆ ಖಾಯಂ‌ ಜನತಾ ಅದಾಲತ್ ಆಗಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಂಜುನಾಥ ನಾಯಕ್ ಕರೆ ನೀಡಿದರು.
ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಶಿವಮೊಗ್ಗ ಜಿಲ್ಲಾ ನ್ಯಾಯವಾದಿಗಳ ಸಂಘ, ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಹಾಗೂ ಸಹ್ಯಾದ್ರಿ ಕಾಲೇಜು,ಶಿವಮೊಗ್ಗ ಇವರ ಸಹಯೋಗದೊಂದಿಗೆ ಶನಿವಾರ ಸಹ್ಯಾದ್ರಿ ಕಲಾ ಕಾಲೇಜಿನಲ್ಲಿ‌ ಆಯೋಜಿಸಲಾಗಿದ್ದ ಖಾಯಂ ಲೋಕ ಆದಾಲತ್ ಕುರಿತು ಜಾಗೃತಿ ಅಭಿಯಾನ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ನ್ಯಾಯಾಂಗ ವ್ಯವಸ್ಥೆ ಎಲ್ಲರಿಗೂ ಅಗತ್ಯವಾಗಿದೆ. ಇಂದು ಪ್ರತಿ ವಿಚಾರಕ್ಕೂ ಸಾರ್ವಜನಿಕರು ನ್ಯಾಯಾಲಕ್ಕೆ ಬರುತ್ತಾರೆ.
ಜನರ ಕ್ಲಿಷ್ಟಕರ ಸಮಸ್ಯೆಗಳನಗಳನ್ನು ಇತ್ಯರ್ಥಪಡಿಸುವುದು, ಸುಲಭ ಪ್ರಕ್ರಿಯೆಗಳ ಮೂಲಕ ದಾವೆಗಳನ್ನು ಇತ್ಯರ್ಥಪಡಿಸುವುದು
ನ್ಯಾಯಾಂಗದ ಉದ್ದೇಶವಾಗಿದೆ.‌ ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು. ಕಾನೂನು ಪ್ರತಿಯೊಬ್ಬರಿಗೂ ಮುಟ್ಟಬೇಕು. ಕಾಲೇಜು ವಿದ್ಯಾರ್ಥಿಗಳ ಮೂಲಕ ಜನರನ್ನು ತಲುಪುವ ಉದ್ದೇಶದಿಂದ ಕಾಲೇಜಿನಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದರು.
Sri. Manjunath Nayak ಇಂದಿನ ಕಾಲೇಜುಗಳ ಶಿಕ್ಷಣ ವ್ಯವಸ್ಥೆಯಲ್ಲಿ ಕಾಲೇಜುಗಳು ಅಂಕಗಳ ಫಲಿತಾಂಶದ ಹಿಂದೆ ಬಿದ್ದಿವೆ. ಅಂಕಗಳಿಗೆ ಮಾತ್ರ ಸೀಮೀತವಾಗದೆ ಜೀವನದಲ್ಲಿ ಯಶಸ್ಸುಗಳಿಸುವಂತೆ ವಿದ್ಯಾರ್ಥಿಗಳನ್ನು ರೂಪಿಸಬೇಕು. ರ್ಯಾಂಕ್ ಗಳಿಸಿದವರೆಲ್ಲರಲ್ಲಿ ಯಶಸ್ಸು ಇಲ್ಲ. ಯಶಸ್ಸು ಗಳಿಸಿದವರು ರ್ಯಾಂಕ್ ಪಡೆದುಕೊಂಡಿರುವುದಿಲ್ಲ. ಕಲಿಕೆಯ ವಿಧಾನ ಬದಲಾಗಬೇಕಿದೆ. ಎಷ್ಟೋ ಬಾರಿ ವಿದ್ಯಾವಂತರಲ್ಲೂ ಕಾನೂನು ಅರಿವು ಇರುವುದಿಲ್ಲ. ಎಲ್ಲರೂ ಕಾನೂನು ತಿಳಿಯುವುದು ಅವಶ್ಯಕವಾಗಿದೆ
ಲೋಕ ಅದಾಲತ್ ಇರುವುದು ಸಾರ್ವಜಿನಿಕರಿಗಾಗಿ. ಸಾರ್ವಜನಿಕ ಸೇವೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಇಲ್ಲಿ ಕಾಣಬಹುದಾಗಿದೆ. ಇಲ್ಲಿ ಇತ್ಯರ್ಥವಾದ ಕೇಸುಗಳಿಗೆ ಮೇಲ್ಮನವಿಗೆ ಅವಕಾಶವಿರುವುದಿಲ್ಲ. ಇಲ್ಲಿ ಇತ್ಯರ್ಥಪಡಿಸಿಕೊಳ್ಳಲು ಒಪ್ಪದೆ ಇದ್ದಾಗ ಮಾತ್ರ ಮೇಲಿನ ಕೋರ್ಟ್‌ಗಳಿಗೆ ಹೋಗಬಹುದು, ಇಲ್ಲಿ ತೀರ್ಮಾನವಾದ ನಂತರ ಮುಂದೆ ಹೋಗಲು ಅವಕಾಶವಿರುವುದಿಲ್ಲ ಉಭಯ ಪಕ್ಷಗಳವರು ಒಪ್ಪಿ ವ್ಯಾಜ್ಯಗಳನ್ನು ಇತ್ಯರ್ಥಪಡಿಸಿಕೊಳ್ಳುವ ವ್ಯವಸ್ಥೆ ಇದಾಗಿದೆ. ಈ ಅಭಿಯಾನವು ಒಂದು ತಿಂಗಳು ಕಾಲ ನಡೆಯಲಿದ್ದು ಸಾರ್ವಜನಿಕರು ಜನತಾ ನ್ಯಾಯಾಲಯದ ಉಪಯೋಗವನ್ನು ಬಳಸಿಕೊಳ್ಳಬೇಕು ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ
ಸಂತೋಷ್ ಎಂ.ಎಸ್. ಮಾತನಾಡಿ, ೧೯೮೭ ರಿಂದ ಶಾಶ್ವತ ಉಚಿತ ಕಾನೂನು ಯೋಜನೆ ಜಾರಿಯಲ್ಲಿದೆ. ಮಾತುಕತೆ ಮೂಲಕ ಪರಿಹರಿಸಿಕೊಳ್ಳುವ ಕಾನೂನು ವ್ಯವಸ್ಥೆ ಇದಾಗಿದೆ. ಇಬ್ಬರು ಮಾತಾಡಿಕೊಂಡು ವ್ಯಾಜ್ಯವನ್ನು/ಜಗಳವನ್ನು ಬಗೆಹರಿಸಿಕೊಳ್ಳಬಹುದು ಎಂದ ಅವರು‌ಖಾಯಂ ಅದಾಲತ್‌ಗೆ ಬರುವ ವಿಚಾರಗಳನ್ನು ಪ್ರಸ್ತಾಪಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಜಿ.ಆ‌ರ್. ರಾಘವೇಂದ್ರ ಸ್ವಾಮಿ ಮಾತನಾಡಿ, ರಾಜೀ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದಾದ ಬ್ಯಾಂಕ್‌ಗಳ ಸಾಲದ ವ್ಯಾಜ್ಯಗಳು ಡಿಫಾಲ್ಟರ್, ಅರಿಯರ್ಸ್ ಇತರ ಸೇವೆಗಳ ಕುರಿತು ಮಾಹಿತಿ ನೀಡಿದರು.
ವಕೀಲರಾದ ಕೆ.ಪಿ.ಶ್ರೀಪಾಲ್ ಮಾತನಾಡಿ, ಜನತಾ ನ್ಯಾಯಾಲಯ ಸಾಮಾನ್ಯ ಪ್ರಕರಣಗಳಿಗೆ, ಜನಸಾಮಾನ್ಯರಿಗೆ ವರದಾನವಾಗಿದೆ. ಇಂದು ಸೇವಾ ಪ್ರಾಧಿಕಾರದ ಮೂಲಕ ಮನೆಮನೆಗೆ ಹೋಗುತ್ತಿದ್ದು, ಕಾನೂನು ಅರಿವು ಯುವಕರಿಗೆ ಅತ್ಯಗತ್ಯವಾಗಿದೆ ಎಂದರು.
ಡಾ. ಸನಾವುಲ್ಲಾ ಪ್ರಾಂಶಪಾಲರು ಸಹ್ಯಾದ್ರಿ ಕಲಾ ಕಾಲೇಜು, ಶಿವಮೊಗ್ಗ ಅಧ್ಯಕ್ಷತೆ ವಹಿಸಿದ್ದರು, ಪ್ರೊ.ಟಿ.ಅವಿನಾಶ್, ರಾಜೇಶ್ವರಿ ಉಪಸ್ಥಿತರಿದ್ದರು.
ಡಾ.ಪ್ರಕಾಶ್ ಮರನಳ್ಳಿ ಸ್ವಾಗತಿಸಿದರು. ಕು.ಪ್ರಣತಿ ಪ್ರಾರ್ಥಿಸಿದರು. ಪ್ರೊ.ಕೆ.ಎನ್.ಮಂಜುನಾಥ್ ವಂದಿಸಿದರು. ಡಾ. ಲವ ಜಿ.ಆರ್. ಆಧ್ಯಾಪಕರು ಕಾರ್ಯಕ್ರಮ ನಿರೂಪಿಸಿದರು.

Chitradurga District Police ಭರಮಸಾಗರದಲ್ಲಿ ಪೊಲೀಸ್ ಇಲಾಖೆಯಿಂದ ” ನಮ್ಮ ನಡೆ – ಜಾಗೃತಿ ಕಡೆ” ಕಾರ್ಯಕ್ರಮ ಯಶಸ್ವಿ

0

Chitradurga District Police ಚಿತ್ರದುರ್ಗ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ವತಿಯಿಂದ “ನಮ್ಮ ನಡೆ – ಜಾಗೃತಿ ಕಡೆ” ಎಂಬ ಘೋಷಣೆಯಡಿ ದಿನಾಂಕ 25.07.2025 ಮತ್ತು 26.07.2025 ರಂದು ಭರಮಸಾಗರದಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ವಿಜೃಂಭಣೆಯಿಂದ ಆಯೋಜಿಸಲಾಯಿತು ಜಿಲ್ಲಾ ಸಿವಿಲ್ ನ್ಯಾಯಾಧೀಶರು ಶ್ರೀ ವಿಜಯ್ ಇವರಿಂದ ಕಾರ್ಯಕ್ರಮ ಉದ್ಘಾಟನೆ ಮಾಡಲಾಯಿತು.

ಈ ಕಾರ್ಯಕ್ರಮವು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ರಂಜನ್ ಕುಮಾರ್ ಬಂಡಾರು (IPS) ಅವರ ನೇತೃತ್ವದಲ್ಲಿ ನಡೆಯಿತು. ಮಹಿಳಾ ಸುರಕ್ಷತೆ, ಸಂಚಾರಿ ಶಿಸ್ತು, ಬಾಲ್ಯ ವಿವಾಹ ತಡೆ, ಮಹಿಳೆಯರ ಮೇಲಿನ ದೌರ್ಜನ್ಯ ವಿರೋಧ ಹಾಗೂ ಸೈಬರ್ ಅಪರಾಧಗಳಿಂದ ಎಚ್ಚರಿಕೆ ಮುಂತಾದ ಅಂಶಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿವಿಧ ಜಾಗೃತಿ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮವು ಭರಮಸಾಗರದ ಹೆಗ್ಗೆರೆ ರಸ್ತೆಯಲ್ಲಿರುವ ಶ್ರೀ ಎ.ಬಿ.ಟಿ. ಕಲ್ಯಾಣ ಮಂಟಪದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಸಿರಿಗೆರೆ ಶಾಲೆಯ ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಹಾಗೂ “ಬಾಲ್ಯ ವಿವಾಹ ತಡೆ” ಎಂಬ ನಾಟಕವನ್ನು ಪ್ರದರ್ಶಿಸಿ, ಸಮಾಜಿಕ ಸಂದೇಶವನ್ನು ಸಾರಿದರು.

ಪೊಲೀಸ್ ಇಲಾಖೆ ಆಯುಧ ಮದ್ದುಗೊಂಡುಗಳು, ತಪಾಸಣಾ ಉಪಕರಣಗಳು, ಹಾಗೂ ಪೋಲೀಸ್ ಶ್ವಾನ ದಳದ ಕಾರ್ಯಕ್ಷಮತೆಯ ಪ್ರದರ್ಶನವನ್ನು ಸಾರ್ವಜನಿಕರ ಮುಂದೆ ಉಜ್ವಲವಾಗಿ ನೀಡಿತು.

ಈ ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ, ಹಿರಿಯ ಅಧಿಕಾರಿಗಳು ಹಾಗೂ ಸಾರ್ವಜನಿಕರು ಭಾರೀ ಸಂಖ್ಯೆಯಲ್ಲಿ ಭಾಗವಹಿಸಿದರು. ಸಂಚಾರಿ ನಿಯಮಗಳ ಕುರಿತಂತೆ ವಿಶೇಷ ಪ್ರಸ್ತುತಿಯೊಂದಿಗೆ ಜನರಲ್ಲಿ ಜಾಗೃತಿ ಮೂಡಿಸಲಾಯಿತು.

Chitradurga District Police ಕಾರ್ಯಕ್ರಮದ ಕೊನೆಯ ದಿನ ಡಿವೈಎಸ್ಪಿ ಶ್ರೀ ದಿನಕರ್, ಮೈಕ್ -2 ಪೊಲೀಸ್ ಇನ್ಸ್ ಪೆಕ್ಟರ್ ಶ್ರೀ ಈಶ್ವರ ನಾಯಕ್, ಸೈಬರ್ ಇನ್ಸ್ಪೆಕ್ಟರ್ ಶ್ರೀ ವೆಂಕಟೇಶ್, ಎಸ್.ಐ. ಮಂಜುನಾಥ್ (ಚಿತ್ರದುರ್ಗ ರೂರಲ್), ಭರಮಸಾಗರದ ಠಾಣಾಧಿಕಾರಿ ಪ್ರಸಾದ್ ಇವರುಗಳು ಸಮಾರೋಪ ಭಾಷಣ ನೀಡಿ, ಸಾರ್ವಜನಿಕ ಸಭೆಯಲ್ಲಿ ಜನಸಂಪರ್ಕ ಹೊಂದಿದರು.

ಸೈಬರ್ ಕ್ರೈಂ ವಿಭಾಗದ ಅಧಿಕಾರಿ ಶ್ರೀ ವೆಂಕಟೇಶ್ ಅವರು, ಸೈಬರ್ ಅಪರಾಧಗಳ ಕುರಿತು ಮಾಹಿತಿ ನೀಡುತ್ತಾ, ಜನರು ಮೋಸಗಳಿಗೆ ಒಳಗಾಗುತ್ತಾರೆ ಮತ್ತು ಎಚ್ಚರಿಕೆ ಹೇಗೆ ವಹಿಸಬೇಕು ಎಂಬುದನ್ನು ವಿವರಿಸಿದರು.

ಈ ಜಾಗೃತಿ ಕಾರ್ಯಕ್ರಮವು ತಾಲೂಕು ಮಟ್ಟದ ಎಲ್ಲಾ ಕೇಂದ್ರಗಳಲ್ಲಿ ಹಮ್ಮಿಕೊಳ್ಳುವ ಯೋಜನೆಯ ಭಾಗವಾಗಿದ್ದು, ಭರಮಸಾಗರದಲ್ಲಿ ಯಶಸ್ವಿಯಾಗಿ ಆರಂಭವಾಗಿ ಎರಡು ದಿನ ಯಶಸ್ವಿಯಾಗಿ ಮುಕ್ತಾಯವಾಯಿತು
ಈ ಸಂದರ್ಭದಲ್ಲಿ ಭರಮಸಾಗರ ಮತ್ತು ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರ ಜೊತೆ ಪೊಲೀಸ್ ಇಲಾಖೆ ಜನ ಸಂಪರ್ಕ ಸಭೆಯನ್ನ ಆಯೋಜಿಸಲಾಗಿತ್ತು ಈ ಸಭೆಯಲ್ಲಿ ಭ್ರಮಸಾಗರದ ಅನೇಕ ಸಮಸ್ಯೆಗಳ ಬಗ್ಗೆ ಕೂಲಂಕುಶವಾಗಿ ಚರ್ಚಿಸುವುದರ ಮೂಲಕ ಅವುಗಳನ್ನ ಗಣನೆಗೆ ತೆಗೆದುಕೊಂಡು ಮುಂದಿನ ದಿನಗಳಲ್ಲಿ ಸರಿಪಡಿಸಲಾಗುವುದು ಎಂದು ಪೊಲೀಸ್ ಇಲಾಖೆ ಆಶ್ವಾಸನೆ ನೀಡಿತು.

Actress Nagashree Begar ಶೃಂಗೇರಿ ಪ್ರತಿಭೆ, ಚಿತ್ರನಟಿ ನಾಗಶ್ರೀ ಬೇಗಾರ್ ಈಗ ಐತಿಹಾಸಿಕ ಕತೆಯುಳ್ಳ ಸಿನಿಮಾದಲ್ಲಿ ಮಿಂಚಲಿದ್ದಾರೆ

0

Actress Nagashree Begar 2023 ರಲ್ಲಿ 50 ದಿನ ಪೂರೈಸಿದ ಮತ್ತು ಈಗಲೂ ಅಮೆಜಾನ್ ಪ್ರೈಮ್ ಲ್ಲಿ ವೀಕ್ಷಣೆ ಗೆ ಲಭ್ಯವಿರುವ ‘ ಜಲಪಾತ ‘ ಸಿನಿಮಾ ದಲ್ಲಿ ಲವಲವಿಕೆ ಯ ಅಭಿನಯ ದ ಮೂಲಕ, ಪೂರ್ವಿ ಪಾತ್ರದಲ್ಲಿ ಮನೆ ಮಾತಾದವರು ಅದರ ನಾಯಕ ನಟಿ ನಾಗಶ್ರೀ ಬೇಗಾರ್. ಅದೇ ವರ್ಷ ಬಿಡುಗಡೆ ಆದ ‘ವೈಶಂಪಾಯನ ತೀರ’ ಎಂಬ ಥ್ರಿಲ್ಲರ್ ಸಿನಿಮಾ ದಲ್ಲಿ ಟ್ರಾನ್ಸ್ ಜೆಂಡರ್ ಮಾದರಿ ಯ ಪಾತ್ರ ನಿರ್ವಹಿಸಿ ವಿಮರ್ಶಕರ – ವೀಕ್ಷಕರ ಗಮನ ಸೆಳೆದವರು. ನಭಾ ನಟೇಶ್, ಸಂಗೀತ ನಂತರ ಸ್ಯಾಂಡಲ್ ವುಡ್ ಪ್ರವೇಶಿಸಿದ ಶೃಂಗೇರಿ ಯ ಈ ಸುಂದರಿ ನಂತರ ಸೀರಿಯಲ್ ಕಡೆ ಮುಖಮಾಡಿ, ಪ್ರಮೋದ್ ಶೆಟ್ಟಿ ಪ್ರೊಡಕ್ಷನ್ ಹೌಸ್ ನ, ಜೀ ಕನ್ನಡ ದಲ್ಲಿ ಪ್ರಸಾರ ಆಗುತ್ತಿರುವ ” ಅಣ್ಣಯ್ಯ ” ಧಾರಾವಾಹಿ ಯಲ್ಲಿ ರತ್ನ ಪಾತ್ರದಲ್ಲಿ ಜನಪ್ರಿಯರಾಗಿದ್ದಾರೆ. ವೃತ್ತಿ ಯಲ್ಲಿ ಶಿಕ್ಷಕಿಯಾಗಿರುವ, ತುಂಬಾ ಗಂಭೀರವಾದ ಆ ಪಾತ್ರ ಅಪೇಕ್ಷಿಸುವ ಸೆಟಲ್ಡ್ ಆಕ್ಟಿಂಗ್ ಮೂಲಕ ಕಿರುತೆರೆ ಪ್ರಪಂಚ ದಲ್ಲಿ ಗಟ್ಟಿ ಪಾತ್ರ ಕಟ್ಟುವ ಪ್ರಯೋಗಶೀಲತೆ ಮೂಲಕ ತನ್ನ ಅಂತರ್ಗತವಾಗಿ, ಅಭಿಜಾತ ವಾಗಿ ಒದಗಿದ ಪ್ರತಿಭೆಯನ್ನು ಅನಾವರಣಗೊಳಿಸುತ್ತಿರುವ ಹೆಗ್ಗಳಿಕೆ ಇವರದು. Actress Nagashree Begar ಈಗಾಗಲೇ ಸಂಗೀತ ಮತ್ತು ನಾಟ್ಯ ಶಾಸ್ತ್ರದಲ್ಲಿ ಪದವಿ ಶಿಕ್ಷಣವನ್ನೂ ಪಡೆದಿರುವ ನಾಗಶ್ರೀ ಸರಿಗಮಪ ವೇದಿಕೆಯಲ್ಲೂ ಮಿಂಚಿ ಬಂದಿರುವ ವಿಶಿಷ್ಟ ಪ್ರತಿಭೆ. ಇದೀಗ ನಾಗಶ್ರೀ ಸಿನಿಮಾ ಕ್ಷೇತ್ರಕ್ಕೆ ಸಂಬಂಧಿಸಿ ಬಿಗ್ ಅಪ್ ಡೇಟ್ ನೊಂದಿಗೆ ಬಂದಿದ್ದಾರೆ. ಜಲಪಾತ ಸಿನಿಮಾ ನಿರ್ಮಿಸಿದ ಶ್ರೀಎಂಟರ್ಪ್ರೈಸಸ್ ಬ್ಯಾನರ್ , ಅದೇ ತಂಡದೊಂದಿಗೆ ಮತ್ತೊಂದು ಪರಿಸರ ಕಾಳಜಿಯ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದು ಈಗಾಗಲೇ ನಾಲ್ಕು ಹಂತದ ಚಿತ್ರೀಕರಣ ಮುಗಿಸಿದೆ. ನೀರು ಮತ್ತು ಕೆರೆ ಯ ಮಹತ್ವ ಸಾರುವ ಈ ಐತಿಹಾಸಿಕ ಕಥಾ ಹಂದರದ ಕಾದಂಬರಿ ಆಧಾರಿತ ಸಿನಿಮಾ ದಲ್ಲಿ ಮುಖ್ಯ ಪಾತ್ರದಲ್ಲಿ ನಾಗಶ್ರೀ ಮತ್ತೊಮ್ಮೆ ಬಣ್ಣ ಹಚ್ಚಿದ್ದಾರೆ. ಭಾವನೆಗೆ ಹೆಚ್ಚು ಪ್ರಾಮುಖ್ಯವಿರುವ, ಪ್ರಮುಖ ಪಾಳೆಗಾರ ಮನೆತನ ದ ನೆಚ್ಚಿನ ಸೊಸೆ ಯ ಪಾತ್ರ ಇದಾಗಿದ್ದು ಅಭಿನಯ ಕ್ಕೆ ತುಂಬಾ ಮಹತ್ವ ಇದೆ ಎಂದು ನಾಗಶ್ರೀ ಪ್ರತಿಕ್ರಿಯೆ ನೀಡಿದ್ದಾರೆ. ನಾಗಶ್ರೀ ಜನುಮದಿನದ ಪ್ರಯುಕ್ತ ಚಿತ್ರ ತಂಡ , ಪೋಸ್ಟರ್ ಮೂಲಕ ಅವರ ಪಾತ್ರದ ಗೆಟಪ್ ನ್ನು ರಿವಿಲ್ ಮಾಡಿದೆ. ಗ್ಲಾಮರ್ ಮತ್ತು ಸೀರಿಯಸ್ನೆಸ್ ಮಿಶ್ರವಾಗಿರುವ ರಾಜ ಮನೆತನ ದ ಗಂಭೀರ ನಿಲುವಿನ ಯುವರಾಣಿ ಶೈಲಿ ಯ ಪೋಸ್ಟರ್ ಮನಮೋಹಕವಾಗಿರುವುದರ ಜೊತೆಗೆ ಸಿನಿಮಾ ಕುರಿತು ಅಪಾರ ಕುತೂಹಲವನ್ನೂ ಹುಟ್ಟು ಹಾಕುತ್ತಿದೆ. ಸಧ್ಯ ದಲ್ಲೇ ಸಿನಿಮಾದ ಪೂರ್ತಿ ವಿವರ ಇರುವ ಟೀಸರ್ ನ್ನು ಬಿಡುಗಡೆ ಮಾಡಲಾಗುವುದು ಎಂದು ಈ ಚಿತ್ರದ ನಿರ್ದೇಶನ ತಂಡದಲ್ಲೂ ಪ್ರಮುಖವಾಗಿ ಕೆಲಸ ಮಾಡುತ್ತಿರುವ ನಾಗಶ್ರೀ ಮಾಧ್ಯಮ ಕ್ಕೆ ಪ್ರತಿಕ್ರಿಯಿಸಿದ್ದಾರೆ. ಮಲೆನಾಡ ಮತ್ತು ಶೃಂಗೇರಿ ಯ ಕೀರ್ತಿ ಯನ್ನು ಮುಗಿಲೆತ್ತರಕ್ಕೆ ಏರಿಸುವಲ್ಲಿ ಸದಾ ಪ್ರಯೋಗಶೀಲೆ ಆಗಿರುವ ಅಪ್ಪಟ ಪ್ರತಿಭೆ ನಾಗಶ್ರೀ ಯ ಕಲಾ ಬದುಕು ಸರಾಗವಾಗಿರಲಿ.

ಪಿ ಆರ್

ಗಾಂಧಿ ಬಜಾರ್ ಜನ ನಿಬಿಡ ಫುಟ್ ಪಾತ್ ಅಂಗಡಿ ತೆರವು: ಪಾಲಿಕೆ ಕ್ರಮಕ್ಕೆ ಶಹಬ್ಬಾಸ್ ಹೇಳಿದ ಜನತೆ

0

ಶಿವಮೊಗ್ಗದ ಜನ ನಿಭಿಡ ಪ್ರದೇಶವಾದ ಗಾಂಧಿ ಬಜಾರ್ ಫುಟ್ ಪಾತ್ ಗಳೆಲ್ಲ ಒತ್ತುವರಿಯಾಗಿದ್ದು, ಶಿವಮೊಗ್ಗ ಮಹಾನಗರ ಪಾಲಿಕೆಯ ನಲ್ಮ್ ವಿಭಾಗ ಮತ್ತು ಆರೋಗ್ಯ ವಿಭಾಗದ ಸಿಬ್ಬಂದಿ ಸ್ಥಳಕ್ಕೆ ಭೇಟಿ ಮಾಡಿ ಪಾದಾಚಾರಿ ಮಾರ್ಗವನ್ನು ತೆರವುಗೊಳಿಸಿದರು