Tuesday, August 11, 2026
Tuesday, August 11, 2026
Home Blog Page 216

ನಕಾರಾತ್ಮಕ ಪರಿಣಾಮ ಕಡಿಮೆ ಮಾಡಲು ಸಾಮಾಜಿಕ ಮಾಧ್ಯಮ ನಿಯಂತ್ರಣ ಅಗತ್ಯ: ಕೈಲಾಶ್‌ ಸತ್ಯಾರ್ಥಿ

0

ನೊಬೆಲ್ ಶಾಂತಿ ಪ್ರಶಸ್ತಿ ವಿಜೇತ ಕೈಲಾಶ್ ಸತ್ಯಾರ್ಥಿ ಅವರು ಅಪ್ರಾಪ್ತರಿಗೆ ಸಾಮಾಜಿಕ ಮಾಧ್ಯಮದ ನಿಯಂತ್ರಣ ನಿರ್ಧಾರವನ್ನು ಬೆಂಬಲಿಸಿದ್ದಾರೆ. ‘ಇದರ ನಕಾರಾತ್ಮಕ ಪರಿಣಾಮವನ್ನು ಕಡಿಮೆ ಮಾಡಲು, ಸಕಾರಾತ್ಮಕವಾಗಿ ನೈತಿಕ ಮೌಲ್ಯಗಳನ್ನು ಹರಡಲು ಮತ್ತು ಸಮುದಾಯಗಳನ್ನು ನಿರ್ಮಿಸಲು ಸಹಾಯ ಮಾಡುತ್ತದೆ’ ಎಂದು ಹೇಳಿದ್ದಾರೆ.

ಆಸ್ಟ್ರೇಲಿಯಾ 16 ವರ್ಷದೊಳಗಿನವರಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ ಹಿನ್ನೆಲೆಯಲ್ಲಿ ಸತ್ಯಾರ್ಥಿ ಅವರ ಈ ಹೇಳಿಕೆ ಬಂದಿದೆ.

“ವಿಶ್ವದ ಎಲ್ಲಿಯೂ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಬಾರದು, ನಿಯಂತ್ರಿಸಬೇಕು ಎಂದು ನಾನು ಭಾವಿಸುತ್ತೇನೆ. ಏಕೆಂದರೆ, ಸಾಮಾಜಿಕ ಮಾಧ್ಯಮದ ಮೂಲಕ ಬಹಳಷ್ಟು ದ್ವೇಷ, ಹಿಂಸೆ, ಬಹಳಷ್ಟು ಸುಳ್ಳು ಮತ್ತು ನಕಲಿ ವಿಷಯಗಳನ್ನು ಪ್ರಚಾರ ಮಾಡಲಾಗುತ್ತದೆ” ಎಂದು ಹೈದರಾಬಾದ್ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದರು.

“ಮಕ್ಕಳ ಕಳ್ಳಸಾಗಣೆ, ಮಕ್ಕಳ ಲೈಂಗಿಕ ದೌರ್ಜನ್ಯಕ್ಕಾಗಿ ಸಾಮಾಜಿಕ ಮಾಧ್ಯಮವನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತದೆ ಎಂಬುದನ್ನು ನಾವು ನೋಡುತ್ತೇವೆ; ಇವುಗಳನ್ನು ನಿಯಂತ್ರಿಸಬೇಕಾಗಿದೆ” ಎಂದು ಆಸ್ಟ್ರೇಲಿಯಾದಂತೆ ಭಾರತದಲ್ಲಿ ಮಕ್ಕಳಿಗಾಗಿ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಅವರು ಒಲವು ತೋರುತ್ತಾರೆಯೇ ಎಂದು ಕೇಳಿದಾಗ ಅವರು ಪ್ರತಿಕ್ರಿಯಿಸಿದರು. ಸಾಮಾಜಿಕ ಮಾಧ್ಯಮದ ದುರುಪಯೋಗವನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಭಾರತದಲ್ಲಿ, ಆಂಧ್ರಪ್ರದೇಶ ಸರ್ಕಾರವು 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸುವುದನ್ನು ನಿರ್ಬಂಧಿಸುವ ಅಥವಾ ನಿಷೇಧಿಸುವ ಸಾಧ್ಯತೆಯನ್ನು ಅನ್ವೇಷಿಸಲು ಒಂದು ಸಮಿತಿಯನ್ನು ನೇಮಿಸಿದೆ.
ಡಿಸೆಂಬರ್ 10, 2025 ರಿಂದ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಿದ ಮೊದಲ ದೇಶ ಆಸ್ಟ್ರೇಲಿಯಾ, ವಿವಿಧ ಸಾಮಾಜಿಕ ಮಾಧ್ಯಮ ವೇದಿಕೆಗಳಿಗೆ ಪ್ರವೇಶವನ್ನು ನಿರ್ಬಂಧಿಸುತ್ತದೆ.
ಆನ್‌ಲೈನ್ ಮಕ್ಕಳ ಲೈಂಗಿಕ ದೌರ್ಜನ್ಯವನ್ನು ನಿಲ್ಲಿಸಲು, ಅಪರಾಧೀಕರಿಸಲು ತಮ್ಮ ಸಂಘಟನೆ ಹೋರಾಡಿದೆ ಎಂದು ಸತ್ಯಾರ್ಥಿ ಹೇಳಿದರು, ಇದು ಸಂಘಟಿತ ಅಪರಾಧವಾಗಿದೆ ಎಂದರು.

ಆನ್‌ಲೈನ್ ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಪರಿಶೀಲಿಸಲು ಯಾವುದೇ ಅಂತರರಾಷ್ಟ್ರೀಯ ಕಾನೂನು ಇಲ್ಲ ಎಂಬುದನ್ನು ಗಮನಿಸಿದ ಅವರು, ಈ ವಿಷಯದ ಕುರಿತು ವಿಶ್ವಸಂಸ್ಥೆಯ ಸಮಾವೇಶಕ್ಕಾಗಿ 20 ಕ್ಕೂ ಹೆಚ್ಚು ಅಧ್ಯಕ್ಷರು, ಪ್ರಧಾನ ಮಂತ್ರಿಗಳು ಮತ್ತು ಇತರ ಉನ್ನತ ನಾಯಕರನ್ನು ಭೇಟಿಯಾಗಿದ್ದೇನೆ ಎಂದು ಹೇಳಿದರು. “ಇದು ಬಳಕೆಯ ಬಗ್ಗೆ ಅಲ್ಲ. ದೇಶಗಳಲ್ಲಿ ಬಳಕೆ-ಸಂಬಂಧಿತ ಕಾನೂನುಗಳು ಅಸ್ತಿತ್ವದಲ್ಲಿವೆ. ಅದರ ಮೇಲೆ ಸಕ್ರಿಯವಾಗಿರುವ ಇಂಟರ್‌ಪೋಲ್ ಕೂಡ ಇದೆ. ಆದರೆ ಇಂಟರ್ನೆಟ್ ಪೂರೈಕೆದಾರರನ್ನು ತಡೆಯಲು ಯಾವುದೇ ನಿರ್ದಿಷ್ಟ ವಿಶ್ವಸಂಸ್ಥೆ ಸಮಾವೇಶ ಅಥವಾ ಅಂತರರಾಷ್ಟ್ರೀಯ ಕಾನೂನು ಇಲ್ಲ. ಏಕೆಂದರೆ ಅವರು ಮೂಲದಿಂದ ಪರಿಶೀಲಿಸಬಹುದು” ಎಂದು ಅವರು ಹೇಳಿದರು.

ಆನ್‌ಲೈನ್ ಮಕ್ಕಳ ಲೈಂಗಿಕ ದೌರ್ಜನ್ಯವನ್ನು ಅಪ್‌ಲೋಡ್ ಮಾಡುವುದು ಮತ್ತು ಡೌನ್‌ಲೋಡ್ ಮಾಡುವುದು ನಡೆಯುವಾಗ, ಅದು ಇಂಟರ್ನೆಟ್ ಪೂರೈಕೆದಾರರ ಮೂಲಕ ಹೋಗುತ್ತದೆ ಎಂದು ಅವರು ಹೇಳಿದರು.
ಇಂಟರ್ನೆಟ್ ಅಥವಾ ವೈ-ಫೈ ಪೂರೈಕೆದಾರರನ್ನು (ಟೆಲಿಕಾಂ ಕಂಪನಿಗಳು) ಹೊಣೆಗಾರರನ್ನಾಗಿ ಮಾಡಬೇಕು ಎಂದು ಅವರು ಹೇಳಿದರು.

ಬಿಜೆಪಿ ಫ್ಲೆಕ್ಸ್ ಗೆ ದಂಡ ವಿಧಿಸಿದ ತಿರುವನಂತಪುರಂ ಪಾಲಿಕೆ

0

ಪ್ರಧಾನ ಮಂತ್ರಿ ನರೇಂದ್ರ ಮೋದಿ ಭೇಟಿಗೆ ಸಂಬಂಧಿಸಿದಂತೆ ನಗರದಲ್ಲಿನ ಪಾದಚಾರಿ ಮಾರ್ಗಗಳಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿದ್ದಕ್ಕಾಗಿ ಬಿಜೆಪಿ ಆಡಳಿತವಿರುವ ತಿರುವನಂತಪುರಂ ಮಹಾನಗರ ಪಾಲಿಕೆ ತನ್ನದೇ ಪಕ್ಷಕ್ಕೆ ದಂಡ ವಿಧಿಸಿದೆ. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆ ಎಂದು ಅಧಿಕಾರಿಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ತಿರುವನಂತಪುರಂ ಮಹಾನಗರ ಪಾಲಿಕೆ ಕಾರ್ಯದರ್ಶಿ ಸಲ್ಲಿಸಿದ ದೂರಿನ ಆಧಾರದ ಮೇಲೆ, ಕಂಟೋನ್ಮೆಂಟ್ ಪೊಲೀಸರು ಶುಕ್ರವಾರ ತಡರಾತ್ರಿ ಬಿಜೆಪಿ ಜಿಲ್ಲಾಧ್ಯಕ್ಷ ಕರಮಣ ಜಯನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೇರಳ ಹೈಕೋರ್ಟ್‌ನ ಹಲವು ಆದೇಶಗಳು ಮತ್ತು ಸ್ಥಳೀಯ ಸ್ವಯಂ ಆಡಳಿತ ಇಲಾಖೆ ಹೊರಡಿಸಿದ ನಿರ್ದೇಶನಗಳನ್ನು ಉಲ್ಲಂಘಿಸಿ ಎಫ್‌ಐಆರ್ ದಾಖಲಿಸಲಾಗಿದೆ. ಪ್ರಧಾನಿಯವರ ಭೇಟಿಯ ಭಾಗವಾಗಿ ಬಿಜೆಪಿ ಜಿಲ್ಲಾ ಸಮಿತಿಯು ಪಾದಚಾರಿ ಮಾರ್ಗಗಳಲ್ಲಿ ಫ್ಲೆಕ್ಸ್ ಬೋರ್ಡ್‌ಗಳನ್ನು ಅಳವಡಿಸಿದ್ದು, ಇದರಿಂದಾಗಿ ಪಾಲಯಂ ಜಂಕ್ಷನ್‌ನಿಂದ ಪುಲಿಮೂಡು ಜಂಕ್ಷನ್‌ವರೆಗಿನ ಸಾರ್ವಜನಿಕರಿಗೆ ಅನಾನುಕೂಲವಾಗಿದೆ.
ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 223 (ಸಾರ್ವಜನಿಕ ಸೇವಕರು ಸರಿಯಾಗಿ ಘೋಷಿಸಿದ ಆದೇಶಗಳಿಗೆ ಅವಿಧೇಯತೆ) ಮತ್ತು 285 (ಸಾರ್ವಜನಿಕ ಮಾರ್ಗಗಳಲ್ಲಿ ಅಪಾಯ, ಅಡಚಣೆ ಮತ್ತು ಅಪಾಯವನ್ನುಂಟುಮಾಡುವುದು) ಮತ್ತು ಕೇರಳ ಪೊಲೀಸ್ ಕಾಯ್ದೆಯ ಸೆಕ್ಷನ್ 120 (ಬಿ) (ಸಾರ್ವಜನಿಕರಿಗೆ ಅಡಚಣೆ, ಅನಾನುಕೂಲ ಮತ್ತು ಅಪಾಯವನ್ನುಂಟುಮಾಡುವುದು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್‌ಐಆರ್ ದಾಖಲಾದ ನಂತರ ತನಿಖೆ ಆರಂಭಿಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಮಧ್ಯೆ, ತಿರುವನಂತಪುರಂ ಕಾರ್ಪೊರೇಷನ್ ಬಿಜೆಪಿ ಜಿಲ್ಲಾ ನಾಯಕತ್ವದ ಮೇಲೆ 19.7 ಲಕ್ಷ ರೂ. ದಂಡ ವಿಧಿಸಿದೆ.
ಅಕ್ರಮವಾಗಿ ಸ್ಥಾಪಿಸಲಾದ ಫ್ಲೆಕ್ಸ್ ಬೋರ್ಡ್‌ಗಳನ್ನು ತೆಗೆದುಹಾಕಲು ಬಿಜೆಪಿ ನಾಯಕರಿಗೆ ನಿರ್ದೇಶನಗಳನ್ನು ನೀಡಲಾಗಿದೆ. ಆದರೆ, ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ ಎಂದು ಕಾರ್ಪೊರೇಷನ್ ಕಾರ್ಯದರ್ಶಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಖ್ಯಾತ ಗಾಯಕಿ ಎಸ್ ಜಾನಕಿಗೆ ಪುತ್ರ ಶೋಕ: ಹಠಾತ್ ಹೃದಯಾಘಾತದಿಂದ ಮುರಳಿ ಕೃಷ್ಣ ಸಾವು

0

ಹಿರಿಯ ಹಿನ್ನೆಲೆ ಗಾಯಕಿ ಎಸ್ ಜಾನಕಿ ಅವರ ಪುತ್ರ ಮುರಳಿ ಕೃಷ್ಣ ಹಠಾತ್ ಹೃದಯಾಘಾತದಿಂದ ಮೃತಪಟ್ಟಿದ್ದು ಇದು ಚಲನಚಿತ್ರ ಮತ್ತು ಸಂಗೀತ ವಲಯದಲ್ಲಿ ಆಘಾತದ ಅಲೆಗಳನ್ನು ಸೃಷ್ಟಿಸಿದೆ. ಮುರಳಿ ಕೃಷ್ಣ ನಿಧನರಾಗಿದ್ದು ಎಸ್ ಜಾನಕಿ ಅವರ ಪುತ್ರನನ್ನು ಕಳೆದುಕೊಂಡಿದ್ದಾರೆ. ಮುರಳಿ ಕೃಷ್ಣ ಅವರ ನಿಧನವು ಸಿನಿಮಾರಂಗದಲ್ಲಿ ದುಃಖದ ಅಲೆಯನ್ನು ಉಂಟುಮಾಡಿದೆ. ಈ ಕಷ್ಟದ ಸಮಯದಲ್ಲಿ ಕಲಾವಿದರು, ಸಂಗೀತಗಾರರು ಮತ್ತು ಅಭಿಮಾನಿಗಳು ಖ್ಯಾತ ಗಾಯಕಿ ಮತ್ತು ಅವರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.

ಆಂಧ್ರಪ್ರದೇಶದ ಗುಂಟೂರಿನಲ್ಲಿ ಜನಿಸಿದ ಎಸ್ ಜಾನಕಿ 1950ರ ದಶಕದ ಆರಂಭದಲ್ಲಿ ಹಿನ್ನೆಲೆ ಗಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಅಂತಿಮವಾಗಿ ಚೆನ್ನೈನಲ್ಲಿ ನೆಲೆಸಿದರು. ಇದು ಅವರ ವೃತ್ತಿಜೀವನದ ಅತ್ಯಂತ ಸಮೃದ್ಧ ಅವಧಿಯನ್ನು ಗುರುತಿಸಿತು. ಅವರು ರಾಮ್ ಪ್ರಸಾದ್ ಅವರನ್ನು ವಿವಾಹವಾಗಿದ್ದು ದಂಪತಿಗೆ ಮಗನಾಗಿ ಮುರಳಿ ಕೃಷ್ಣ ಜನಿಸಿದ್ದರು.
ಮುರಳಿ ಕೃಷ್ಣ
ಬಗ್ಗೆ, ವಿಶೇಷವಾಗಿ ತಮಿಳು ಮತ್ತು ತೆಲುಗು ಚಿತ್ರಗಳ ಬಗ್ಗೆ ಆಳವಾದ ಪ್ರೀತಿಯನ್ನು ಹೊಂದಿದ್ದರು. ಭರತನಾಟ್ಯದಲ್ಲಿಯೂ ತರಬೇತಿ ಪಡೆದಿದ್ದರು. ಅವರು ಚೆನ್ನೈ ಮೂಲದ ನರ್ತಕಿ ಉಮಾ ಅವರನ್ನು ವಿವಾಹವಾಗಿದ್ದು ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದರು. ನಂತರ ದಾಂಪತ್ಯದಲ್ಲಿ ಬಿರುಕು ಮೂಡಿ ವಿಚ್ಛೇದನ ಪಡೆದು ತಾಯಿಯೊಂದಿಗೆ ವಾಸಿಸುತ್ತಿದ್ದರು. ಮುರಳಿ ಕೃಷ್ಣ ಅವರು ಮುಂಜಾನೆ ಇದ್ದಕ್ಕಿದ್ದಂತೆ ಅನಾರೋಗ್ಯಕ್ಕೆ ಒಳಗಾಗಿದ್ದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Department of School Education and Literacy ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನ : ಸಾರ್ವಜನಿಕರಿಂದ ಉತ್ತಮ ಸ್ಪಂದನೆ

0

Department of School Education and Literacy ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಜ.24 ರಿಂದ 27 ರವರೆಗೆ ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ
ಹಮ್ಮಿಕೊಳ್ಳಲಾಗಿರುವ ಮಲೆನಾಡು ಕರಕುಶಲ ಉತ್ಸವ ಸಿರಿಧಾನ್ಯ ಮೇಳ ಹಾಗೂ ಪುಷ್ಪಸಿರಿ-63 ನೇ ಫಲ ಪುಷ್ಪ ಪ್ರದರ್ಶನವನ್ನು ಜ.25 ರಂದು ಬೆಳಿಗ್ಗೆ 10 ಗಂಟೆಗೆ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ.ಮಧು ಬಂಗಾರಪ್ಪ ಉದ್ಘಾಟಿವರು‌. ಆದರೆ ಜ.24 ರ ಬೆಳಿಗ್ಗೆಯಿಂದಲೇ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಪಂಚಾಯತ್ ಸಿಇಓ ಹೇಮಂತ್ ಎನ್ ತಿಳಿಸಿದರು.
ಪ್ರತಿ ವರ್ಷದಂತೆ ಈ ವರ್ಷವೂ ಗಣರಾಜ್ಯೋತ್ಸವದ ಪ್ರಯುಕ್ತ ಜಿಲ್ಲಾ ಪಂಚಾಯತ್, ತೋಟಗಾರಿಕೆ ಇಲಾಖೆ ಮತ್ತು ಜಿಲ್ಲಾ ಉದ್ಯಾನ ಕಲಾ ಸಂಘ ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ನಾಲ್ಕು ದಿನಗಳ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದ್ದು ಕೃಷಿ, ತೋಟಗಾರಿಕೆ, ಮೀನುಗಾರಿಕೆ ಸೇರಿದಂತೆ ವಿವಿಧ ಇಲಾಖೆಗಳು, ಮಹಿಳಾ ಸ್ವ ಸಹಾಯ ಸಂಘದ ಸದಸ್ಯರು ತಯಾರಿಸಿದ ಉತ್ಪನ್ನಗಳ ಮಳಿಗೆಗಳು, ಹ್ಯಾಂಡ್ ಲೂಂ ಸೀರೆಗಳ ಮಳಿಗೆಗಳು ಸೇರಿದಂತೆ ಒಟ್ಟು 76 ಮಳಿಗೆಗಳನ್ನು ತೆರೆಯಲಾಗಿದೆ.

ವಿಶೇಷತೆಗಳು : ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ, ಕಾಮಿನಿ ಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚುಸಲಾಗಿದೆ.
ವಿವಿಧ ಜಾತಿಯ ಹೂವುಗಳಿಂದ 16 ಅಡಿ ಎತ್ತರದ ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕನ ಪ್ರತಿಮೆ ರಚನೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ಎಲ್ಲರ ಗಮನ ಸೆಳೆಯುತ್ತಿದೆ.
ಹೂವುಗಳು ಹಾಗೂ ಫೋಲಿಯೇಜ್‌ನಿಂದ 60 ಅಡಿ ಅಗಲ * 22 ಅಡಿ ಎತ್ತರದ ಜೋಗ ಜಲಪಾತದ ಕಲಾಕೃತಿಯಂತೂ ಈ ಬಾರಿಯ ಆಕರ್ಷಣೆಯಾಗಿದೆ., ಹೂವಿನ ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಬಳಿ‌ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.

ಮಾರಾಟ ಮೇಳ – ಕ್ರಾಫ್ಟ್ಸ್ಆಫ್ ಮಲ್ನಾಡ್ : ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್(ಎನ್‌ಆರ್‌ಎಲ್‌ಎಂ) ಸಂಜೀವಿನಿ ಯೋಜನೆಯಡಿ ಸ್ವ ಸಹಾಯ ಗುಂಪಿನ ಉತ್ಪನ್ನಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಿದ್ದು
ಕ್ರಾಫ್ಟ್ಸ್ಆಫ್ ಮಲ್ನಾಡ್ ಎಂಬ ಹೆಸರಿನಡಿ ಸ್ವಸಹಾಯ ಸಂಘದ ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಬ್ರಾಂಡಿಗ್ ಮಾಡಿದ್ದು, ಈ ಉತ್ಪನ್ನಗಳ ಮಳಿಗೆಗಳನ್ನು ಸ್ಥಾಪಿಸಿದ್ದು ಇಲ್ಲಿ ಮಹಿಳೆಯರು, ಜನರು ಹೆಚ್ಚಿನ ಸಂಖ್ಯೆಯಲ್ಲಿ ವೀಕ್ಷಿಸುತ್ತಾ ಖರೀದಿಸುತ್ತಿದ್ದರು.

ಮೇಳದ ವೈಶಿಷ್ಟö್ಯಗಳು : ಮೇಳದ ಮಳಿಗೆಗಳಲ್ಲಿ ರಾಜ್ಯ, ಹೊರ ರಾಜ್ಯ ಮತ್ತು ವಿವಿಧ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಸ್ವ ಸಹಾಯ ಗುಂಪಿನ ಮಹಿಳೆಯರು ಉತ್ಪಾದಿಸಿರುವ ಉತ್ಪನ್ನಗಳಾದ ಮಣ್ಣಿನ ಅಲಂಕಾರಿಕ ಉತ್ಪನ್ನಗಳು, ಮ್ಯಾಕ್ರನ್ ಉತ್ಪನ್ನಗಳು, ಹಸೆ ಚಿತ್ತಾರ ಮತ್ತು ಭತ್ತದ ತೋರಣ, ಈಚಲು ಚಾಪೆ, ಮಣ್ಣಿನ ಆಭರಣಗಳು, ಮರದ ಕೆತ್ತನೆಗಳು, ಖೌದಿ ಉತ್ಪನ್ನಗಳು, ಕೊಪ್ಪಳದ ಕಿನ್ನಾಳ ಉತ್ಪನ್ನಗಳು, ಕೊಪ್ಪಳದ ಬನಾನ ಫೈಬರ್ ಉತ್ಪನ್ನಗಳು, ಚಿಕ್ಕಬಳ್ಳಾಪುರ ಲೆದರ್ ಉತ್ಪನ್ನಗಳು, ನವಲಗುಂದ ದುರಿ, ಮೈಸೂರು ಮರದ ಕೆತ್ತನೆಯ ಉತ್ಪನ್ನಗಳು, ಬೀದರ್ ಜಿಲ್ಲೆಯ ಬಿದರಿ ಉತ್ಪನ್ನಗಳ ಮಳಿಗೆಗಳು ಹಾಗೂ ಅಕ್ಕ ಕೆಫೆಯ ಸದಸ್ಯರು, ಇತರೆ ಸ್ವ ಸಹಾಯ ಗುಂಪಿನ ಸದಸ್ಯರಿಂದ ತಯಾರಾದ ಆಹಾರ ಉತ್ಪನ್ನಗಳ ಮಳಿಗೆ ಹಾಗೂ ವಿಶೇಷವಸಗಿ ಸಿರಿಧಾನ್ಯ ಖಾದ್ಯಗಳ ಮಳಿಗೆ ಮುಂದೆ ಹೆಚ್ಚಿನ ಜನರಿದ್ದು ಖಾದ್ಯಗಳನ್ನು ಸವಿಯುತ್ತಿದ್ದರು.
ಹಾಗೂ ರೈತರು ಬೆಳೆದ ವಿವಿಧ ಕೃಷಿ ಮತ್ತು ತೋಟಗಾರಿಕೆ ಉತ್ಪನ್ನಗಳು ಎಲ್ಲರ ಗಮನ ಸೆಳೆಯುತ್ತಿವೆ.

ಕೈ ಮಗ್ಗ ಜವಳಿ ಮೇಳ : ಜವಳಿ ಮತ್ತು ಕೈಮಗ್ಗ ಹಾಗೂ ರೇಷ್ಮೆ ಇಲಾಖೆಯ ಸಹಯೋಗದಲ್ಲಿ 11 ರಾಜ್ಯಗಳು 19ಜಿಐ ಟ್ಯಾಗ್ ಹೊಂದಿರುವ ವಿವಿಧ ರೀತಿಯ ಸೀರೆಗಳು, ಹ್ಯಾಂಡ್‌ಲೂಂ ಸೀರೆಗಳು, ಶಾಲುಗಳು, ಬೆಡ್ ಶೀಟ್‌ಗಳು ಮತ್ತ ಕೆಎಸ್‌ಐಸಿ ಸೀರೆಗಳ ಪ್ರದರ್ಶನ ಮತ್ತು ಮಾರಾಟವಿದ್ದು, ವೆಸ್ಟ್ ಬೆಂಗಾಲ್, ಆಂಧ್ರ, ತಮಿಳುನಾಡು, ಕಾಶ್ಮೀರ ದೇಶದ ಹಲವು ರಾಜ್ಯಗಳ ಹ್ಯಾಂಡ್ ಲೂಂ ಸೀರೆಗಳ ಮಾರಾಟ ಮಳಿಗೆಗಳಿವೆ.
ಕರ್ನಾಟಕ ಸಿಲ್ಕ್ ಇಂಡಸ್ಟ್ರೀಸ್ ಕಾರ್ಪೊರೇಷನ್‌ (ಕೆಎಸ್ಐಸಿ) ಮೈಸೂರು ಸಿಲ್ಕ್ ಸೀರೆಗಳ ಮಳಿಗೆ , ಮೊಳಕಾಲ್ಮೂರು ಸೀರೆಗಳ ಮಳಿಗೆಗಳ ಎದುರು ಮಹಿಳೆಯರು, ಹೆಣ್ಣು ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಜಮಾಯಿಸಿದ್ದರು.
ಫಲ‌ಪುಷ್ಪ ಪ್ರದರ್ಶನಕ್ಕೆ ಬೆಳಿಗ್ಗೆಯಿಂದ ಗಣ್ಯರು, ಸಾರ್ವಜನಿಕರು, ವಿದ್ಯಾರ್ಥಿಗಳು ಅಧಿಕಾರಿಗಳು ಭೇಟಿ ನೀಡುತ್ತಿದ್ದಾರೆ.

ಹಿಂದೂ ಜನ ಜಾಗೃತಿ ಸಮಿತಿ ವತಿಯಿಂದ ಮನವಿ ಸಲ್ಲಿಕೆ

0

ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಮುಂಬರುವ ಗಣರಾಜ್ಯೋತ್ಸವ ದಿನ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ರಾಷ್ಟ್ರ ಧ್ವಜಕ್ಕೆ ಆಗುವ ಅವಮಾನ ಮಾಡುವುದನ್ನು ತಡೆಯಲು ಮತ್ತು ನಿಷೇಧಿತ ಪ್ಲಾಸ್ಟಿಕ್ ಧ್ವಜ ಮಾರಾಟ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಅಡಿಷನಲ್ ಸೂಪರ್ಡೆಂಟ್ ಆಫ್ ಪೊಲೀಸ್ ಇವರಲ್ಲಿ ಕೋರಲಾಯಿತು.

ಈ ಸಂದರ್ಭದಲ್ಲಿ ಸಂಘಟನೆಗಳ ಪ್ರಮುಖರಾದ ಪ್ರಫುಲ ಚಂದ್ರ. ಹೆಚ್. (ಹಿಂದೂಪರ ಹೋರಾಟಗಾರರು.) ವಿಶ್ವನಾಥ್. ಚಿನ್ನಯ್ಯ. ಜಗ್ಗಣ್ಣ.( ಬಜರಂಗದಳ ). ನಟರಾಜ್ (ವಿಶ್ವಹಿಂದು ಪರಿಷತ್). ಶಬರೀಶ್. ಶ್ರೀಪಾದ್ ರೇವಣಕರ್. ಹಾಗೂ ಇನ್ನು ಕೆಲ ಪ್ರಮುಖರು ಮಾನ್ಯ ಶ್ರೀ ಎ. ಜಿ.ಕಾರಿಯಪ್ಪ (ಕೆ ಎಸ್ ಪಿ ಎಸ್ ) ಇದ್ದರು.

B.S.Yediyurappa ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಸಂಸದ ಬಿ ವೈ ರಾಘವೇಂದ್ರ ಅವರಿಂದ ರಾಷ್ಟ್ರಮಟ್ಟದ ಟಗರು ಕಾಳಗದ ಪೋಸ್ಟರ್ ಬಿಡುಗಡೆ

0

B.S.Yediyurappa ಶಿವಮೊಗ್ಗದಲ್ಲಿ ನಮ್ಮೂರ ಬಳಗ ಶಿವಮೊಗ್ಗದ ವತಿಯಿಂದ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಫೆಬ್ರವರಿ 15ರಂದು ಫ್ರೀಡಂ ಪಾರ್ಕ್ ನಲ್ಲಿ ಹಮ್ಮಿಕೊಂಡಿರುವ ರಾಷ್ಟ್ರಮಟ್ಟದ ಬಾರಿ ಟಗರು ಕಾಳಗದ ಪೋಸ್ಟರ್ ನನ್ನು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪನವರು ಹಾಗೂ ಸಂಸದರಾದ ಬಿ ವೈ ರಾಘವೇಂದ್ರ ಅವರು ಬಿಡುಗಡೆಗೊಳಿಸಿ ಶುಭ ಕೋರಿದರು.

ಈ ಸಂದರ್ಭದಲ್ಲಿ ನಮ್ಮೂರ ಬಳಗದ ಸಂಚಾಲಕರಾದ ಕೆ ರಂಗನಾಥ್,ನಾಗರಾಜ್ ಕಂಕಾರಿ,ಎಚ್ ಪಾಲಾಕ್ಷಿ, ಐಡಿಯಲ್ ಗೋಪಿ ಸಿಎಚ್ ಮಾಲ್ತೇಶ್, ಸಿ ರವಿ, ಕೆ.ಆರ್ ಸುರೇಶ್, ರಾಮಕೃಷ್ಣ ಮುಡ್ಲಿ , ಎಚ್‌.ಪಿ ಗಿರೀಶ್, ವಿನಯ್,ಎಸ್ ಬಸವರಾಜ್, ಗುರುಪ್ರಸಾದ್,ಎಂ ರಾಕೇಶ್, , ಚಂದ್ರು ಗೆಡ್ಡೆ, ರವಿ ಶಾಸ್ತ್ರಿ, ದಿವಾಕರ್, ರಾಜೇಶ್ ಮಂದಾರ, ಕಿರಣ್ ಹಾಗೂ ಇತರರು ಇದ್ದರು.

ಜ. 28ಕ್ಕೆ ಕೆಂಡದಾರ್ಚನೆ, ಕೃತಿ ಬಿಡುಗಡೆ ಕಾರ್ಯಕ್ರಮ

0

ಶಿವಮೊಗ್ಗ ನಗರದ ಗೆಟ್ಟೇನಹಳ್ಳಿ ರಸ್ತೆಯಕೆ.ಹೆಚ್.ಬಿ.ಪ್ರೆಸ್ ಕಾಲೋನಿಯಲ್ಲಿರುವ
ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಇಲ್ಲಿ ಮೂರನೇ ಕೆಂಡದಾರ್ಚನೆ ಕಾರ್ಯಕ್ರಮ ಜ. 28 ಬುಧವಾರದಂದು ಬೆಳಿಗ್ಗೆ 7 ಗಂಟೆಯಿಂದ ಗಂಗಾ ಪೂಜೆಯಿಂದ ಪ್ರಾರಂಭವಾಗಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಎಮ್ ಎನ್ ಸುಂದರರಾಜು, ಅಂದು ಬೆಳಗ್ಗೆ ದೊಡ್ಡಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆ ಇದೆ. ಬೆಳಿಗ್ಗೆ 9.30ಕ್ಕೆ ಸಾವಿರ ಮಹಿಳೆಯರಿಂದ ಆರತಿ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ “ ಶ್ರೀ ದೊಡ್ಡಮ್ಮ ದೇವಿ ಕೆಂಡದಾರ್ಚನೆ” ಹಮ್ಮಿಕೊಳ್ಳಲಾಗಿದೆ.
ಕೆಂಡದಾರ್ಚನೆ ಸಂಬಂಧ 27 ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ದೇವಿ ಆರಾಧನಾ ಪೂಜೆ ನಂತರ ಚಂಡಿಕಾ ಬೀಜಾಕ್ಷರ ಹೋಮವಿದೆ ಎಂದರು.
ಬೆಳಿಗ್ಗೆ 8 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ನಂತರ ಬೆಳಿಗ್ಗೆ 11 ಗಂಟೆಗೆ ರಾಧಾ ಎಂ. ಸಿದ್ಧಪ್ಪಾಜಿ ಸಂಗ್ರಹಿಸಿರುವ ಶ್ರೀ ಸಿದ್ಧಪ್ಪಾಜಿಯವರ ನುಡಿಮುತ್ತುಗಳ ಸಂಗ್ರಹ “ತಾಯಿನುಡಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಪ್ರೊ. ಶಾಂತಾರಾಮ ಪ್ರಭು, ನಿಟ್ಟೂರು ಇವರು ಆಗಮಿಸಲಿದ್ದಾರೆ. ಸಾಹಿತಿ ಎಂ.ಎನ್.ಸುಂದರ ರಾಜ್, ಉಪಸ್ಥಿತರಿರುತ್ತಾರೆ ಎಂದರು.
ಅಂದು ನಡೆಯುವ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಬಿ. ಶ್ರೀನಿವಾಸ ರೆಡ್ಡಿ, ಸಂಸ್ಥಾಪಕರು ರಮಣ ಮಹರ್ಷಿ ಆಶ್ರಮ, ಬೆಂಗಳೂರು, ಡಾ!! .ಪ್ರಸನ್ನ ಬಸವರಾಜಪ್ಪ, ಸರ್ಜಿಕಲ್ ಗ್ಯಾಸ್ಟ್ ಆಂಡೋಲಜಿಸ್ಟ್, ಮ್ಯಾಕ್ಸ್ ಆಸ್ಪತ್ರೆ, ಶಿವಮೊಗ್ಗ, ಡಿ.ಎಂ.ದೇವರಾಜ್, ಸಂಸ್ಥಾಪಕರು, ರಾಮಕೃಷ್ಣ ವಸತಿ ವಿದ್ಯಾಲಯ, ಎಂ.ಎಲ್.ಹಳ್ಳಿ, ವಾಸುದೇವ್, ಹಿರಿಯ ಭೂ ವಿಜ್ಞಾನಿಗಳು, ಬೆಂಗಳೂರು ಇವರಿಗೆ ಸನ್ಮಾನವಿದೆ. ಸಿದ್ಧಪ್ಪಾಜಿ, ದೇವಿ ಉಪಾಸಕರು, ಶಿವಮೊಗ್ಗ ಇವರು ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಅಂದು ಬೆಳಿಗ್ಗೆ 8 ಗಂಟೆಯಿಂದ ದೇವಿ ಭಜನಾ ಕಾರ್ಯಕ್ರಮದಲ್ಲಿ ಗಾಯತ್ರಿ ಭಜನಾ ಮಂಡಳಿ ಶಿವಮೊಗ್ಗ, ಗಾಯತ್ರಿ ಭಜನಾ ಮಂಡಳಿ ಹೊನ್ನಾಳಿ, ಸಿರಿ ಭಜನಾ ಮಂಡಳಿ, ರಾಜೇಂದ್ರ ನಗರ, ಶಿವಮೊಗ್ಗ, ವಿದ್ಯಾ ಭಜನಾ ಮಂಡಳಿ, ವಿದ್ಯಾನಗರ ಶಿವಮೊಗ್ಗ, ಮೊದಲಾದವರಿಂದ ಭಜನೆ ನಡೆಯಲಿದೆ ಎಂದರು.

Sahyadri Narayan Multispeciality Hospital ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಿಂದ ಮತ್ತೊಂದು ಮೈಲಿಗಲ್ಲು: 1,000 ಪ್ರಾಸ್ಟೇಟ್ ಶಸ್ತ್ರಚಿಕಿತ್ಸೆಗಳ ಯಶಸ್ವಿ ಪೂರ್ಣ

0

Sahyadri Narayan Multispeciality Hospital ಉನ್ನತ ಗುಣಮಟ್ಟದ ಮೂತ್ರಶಾಸ್ತ್ರ (Urology) ಚಿಕಿತ್ಸೆಯಲ್ಲಿ ಮುಂಚೂಣಿಯಲ್ಲಿರುವ ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯು ಮಹತ್ವದ ಸಾಧನೆಯೊಂದನ್ನು ಮಾಡಿದೆ. ಪ್ರಾಸ್ಟೇಟ್ ಸಮಸ್ಯೆಗೆ ಪರಿಹಾರ ನೀಡುವ ಅತ್ಯಾಧುನಿಕ ‘ಟ್ರಾನ್ಸ್ಯುರೆಥ್ರಲ್ ರಿಸೆಕ್ಷನ್ ಆಫ್ ದಿ ಪ್ರಾಸ್ಟೇಟ್’ (TURP) ಶಸ್ತ್ರಚಿಕಿತ್ಸೆಯನ್ನು ಬರೋಬ್ಬರಿ 1,000 ರೋಗಿಗಳಿಗೆ ಯಶಸ್ವಿಯಾಗಿ ಪೂರೈಸುವ ಮೂಲಕ ಆಸ್ಪತ್ರೆ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.

ಪ್ರಾಸ್ಟೇಟ್ ಗ್ರಂಥಿಯ ಹಿಗ್ಗುವಿಕೆಯಿಂದ ಉಂಟಾಗುವ ಮೂತ್ರದ ಸಮಸ್ಯೆಗಳಿಗೆ ಈ TURP ಶಸ್ತ್ರಚಿಕಿತ್ಸೆಯನ್ನು ಮಾಡಲಾಗುತ್ತದೆ. ಆಸ್ಪತ್ರೆಯ ಹಿರಿಯ ಮೂತ್ರಶಾಸ್ತ್ರ ತಜ್ಞರಾದ (Urologists) ಡಾ. ಪ್ರಭುಲಿಂಗ ಕೊಣ್ಣೂರು ಮತ್ತು ಡಾ. ಅವಿನಾಶ್ ಅವರ ನೇತೃತ್ವದ ತಂಡವು ಈ ಎಲ್ಲಾ ಶಸ್ತ್ರಚಿಕಿತ್ಸೆಗಳನ್ನು ನೆರವೇರಿಸಿದೆ. ಇವೆಲ್ಲವೂ ಕನಿಷ್ಠ ಆಕ್ರಮಣಾಕಾರಿ ಶಸ್ತ್ರಚಿಕಿತ್ಸಾ ವಿಧಾನಗಳಾಗಿದ್ದು (Minimally Invasive), ಅತ್ಯುತ್ತಮ ಫಲಿತಾಂಶಗಳನ್ನು ಕಂಡಿವೆ ಮತ್ತು ರೋಗಿಗಳು ಕೂಡ ಶೀಘ್ರವಾಗಿ ಚೇತರಿಸಿಕೊಂಡಿದ್ದಾರೆ. ಈ ಸಾಧನೆಯು ಶಿವಮೊಗ್ಗ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಪ್ರಾಸ್ಟೇಟ್ ಆರೈಕೆಗಾಗಿ ಈ ಆಸ್ಪತ್ರೆ ಪ್ರಮುಖ ಕೇಂದ್ರವಾಗಿರುವುದನ್ನು ಸಾಬೀತುಪಡಿಸಿದೆ.

ಆರಂಭದಲ್ಲಿ ಆಸ್ಪತ್ರೆಯು ಸಾಂಪ್ರದಾಯಿಕ ‘ಎಲೆಕ್ಟ್ರೋಕಾಟರಿ’ (electrocautery) ತಂತ್ರಜ್ಞಾನವನ್ನು ಬಳಸಿ ಈ ಶಸ್ತ್ರಚಿಕಿತ್ಸೆಗಳನ್ನು ನಡೆಸುತ್ತಿತ್ತು. ಕಾಲಕ್ಕೆ ತಕ್ಕಂತೆ ಬದಲಾಗಬೇಕು, ಆಧುನಿಕತೆಗೆ ತೆರೆದುಕೊಂಡ ಈ ಆಸ್ಪತ್ರೆಯು, ಇದೀಗ ಸುಧಾರಿತ ‘100-ವ್ಯಾಟ್ ಹೋಲ್ಮಿಯಂ ಲೇಸರ್’ (Holmium Laser) ತಂತ್ರಜ್ಞಾನವನ್ನು ಅಳವಡಿಸಿಕೊಂಡಿದೆ.

ಈ ಬಗ್ಗೆ ಮಾತನಾಡಿದ ಕನ್ಸಲ್ಟೆಂಟ್ ಯೂರಾಲಜಿಸ್ಟ್ ಡಾ. ಪ್ರಭುಲಿಂಗ ಕೊಣ್ಣೂರು, “ನಮ್ಮ ವಿಭಾಗದ ಈ ಸಾಧನೆಗೆ ರೋಗಿಗಳ ನಂಬಿಕೆ ಮತ್ತು ನಮ್ಮ ತಂಡದ ಶ್ರಮವೇ ಕಾರಣ. 1,000 ಶಸ್ತ್ರಚಿಕಿತ್ಸೆಗಳನ್ನು ಪೂರೈಸಿರುವುದು ಕೇವಲ ಒಂದು ಸಂಖ್ಯೆ ಅಷ್ಟೇ ಅಲ್ಲ, ಬದಲಿಗೆ ರೋಗಿಗಳು ನಮ್ಮ ಮೇಲಿಟ್ಟಿರುವ ವಿಶ್ವಾಸದ ಪ್ರತೀಕವಾಗಿದೆ. ಹಳೆಯ ಎಲೆಕ್ಟ್ರೋಕಾಟರಿ ಪದ್ಧತಿ ಉತ್ತಮವಾಗಿದ್ದರೂ, ಹೋಲ್ಮಿಯಂ ಲೇಸರ್ ತಂತ್ರಜ್ಞಾನದ ಆಗಮನವು ಪ್ರಾಸ್ಟೇಟ್ ಚಿಕಿತ್ಸೆಯಲ್ಲಿ ಕ್ರಾಂತಿಕಾರಿ ಬದಲಾವಣೆ ತಂದಿದೆ. ಇದು ಹೆಚ್ಚು ನಿಖರ ಮತ್ತು ಸುರಕ್ಷಿತ,” ಎಂದು ಅಭಿಪ್ರಾಯಪಟ್ಟರು.

ಏನಿದು ಹೋಲ್ಮಿಯಂ ಲೇಸರ್ TURP?
ಇದನ್ನು ಲೇಸರ್ ಪ್ರಾಸ್ಟೇಟೆಕ್ಟಮಿ ಎಂದೂ ಕರೆಯುತ್ತಾರೆ. ಇದರಲ್ಲಿ ಶಕ್ತಿಶಾಲಿ ಲೇಸರ್ ಕಿರಣಗಳನ್ನು ಬಳಸಿ, ಅಡೆತಡೆ ಉಂಟುಮಾಡುವ ಮಾಂಸದ ಬೆಳವಣಿಗೆಯನ್ನು ನಿಖರವಾಗಿ ತೆಗೆದುಹಾಕಲಾಗುತ್ತದೆ. ಅದೇ ಸಮಯದಲ್ಲಿ ರಕ್ತನಾಳಗಳನ್ನು ಸೀಲ್ ಮಾಡುವುದರಿಂದ ರಕ್ತಸ್ರಾವ ತೀರಾ ಕಡಿಮೆ ಇರುತ್ತದೆ.

Sahyadri Narayan Multispeciality Hospital ಈ ಆಧುನಿಕ ವಿಧಾನದಿಂದ ಹಲವು ಪ್ರಯೋಜನಗಳಿವೆ. ರಕ್ತಸ್ರಾವ ಕಡಿಮೆ ಇರುವುದರಿಂದ ವಯಸ್ಸಾದವರಿಗೆ ಮತ್ತು ರಕ್ತ ತೆಳುವಾಗುವ ಮಾತ್ರೆಗಳನ್ನು ತೆಗೆದುಕೊಳ್ಳುವ ರೋಗಿಗಳಿಗೆ ಇದು ತುಂಬಾ ಸುರಕ್ಷಿತ. ರೋಗಿಗಳು ಬೇಗನೆ ಚೇತರಿಸಿಕೊಳ್ಳುತ್ತಾರೆ, ನೋವು ಕಡಿಮೆ ಇರುತ್ತದೆ, ಕೆಥೆಟರ್ ಅಳವಡಿಕೆ ಮತ್ತು ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ತಂಗುವ ಅವಧಿ ಕೂಡ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲದೆ, ದೊಡ್ಡ ಗಾತ್ರದ ಪ್ರಾಸ್ಟೇಟ್ ಗ್ರಂಥಿಗಳಿಗೂ ಇದು ಪರಿಣಾಮಕಾರಿ ಚಿಕಿತ್ಸೆಯಾಗಿದೆ.

ಕನ್ಸಲ್ಟೆಂಟ್ ಯೂರಾಲಜಿಸ್ಟ್ ಡಾ. ಅವಿನಾಶ್ ಮಾತನಾಡಿ, “ಈ ಹೊಸ ಯಂತ್ರದ ಪ್ರಯೋಜನಗಳು ರೋಗಿಗಳ ಚೇತರಿಕೆಯಲ್ಲಿ ಸ್ಪಷ್ಟವಾಗಿ ಕಾಣುತ್ತಿವೆ. ನಿಖರವಾದ ಲೇಸರ್ ತಂತ್ರಜ್ಞಾನದಿಂದಾಗಿ ಅಡ್ಡಪರಿಣಾಮಗಳು ತೀರಾ ಕಡಿಮೆ. ರೋಗಿಗಳು ಶೀಘ್ರವಾಗಿ ತಮ್ಮ ದೈನಂದಿನ ಕೆಲಸಗಳಿಗೆ ಮರಳಬಹುದು ಮತ್ತು ಇಲ್ಲಿಯವರೆಗೆ ನಾವು ಕಂಡ ಫಲಿತಾಂಶಗಳು ಅತ್ಯಂತ ಆಶಾದಾಯಕವಾಗಿವೆ,” ಎಂದು ಹೇಳಿದರು.

ಮೂತ್ರ ವಿಸರ್ಜನೆಯಲ್ಲಿ ತೊಂದರೆ, ಮೂತ್ರದ ಹರಿವು ಕಡಿಮೆಯಾಗುವುದು (weak stream), ರಾತ್ರಿ ವೇಳೆ ಪದೇ ಪದೇ ಮೂತ್ರಕ್ಕೆ ಹೋಗುವುದು ಅಥವಾ ಮೂತ್ರಕೋಶ ಸಂಪೂರ್ಣ ಖಾಲಿಯಾಗದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಕಾಣುವಂತೆ ಇಬ್ಬರೂ ವೈದ್ಯರು ಸಲಹೆ ನೀಡಿದ್ದಾರೆ. ಆರಂಭದಲ್ಲೇ ರೋಗ ಪತ್ತೆಯಾದರೆ ಚಿಕಿತ್ಸೆ ಹೆಚ್ಚು ಪರಿಣಾಮಕಾರಿಯಾಗಿರುತ್ತದೆ, ಎಂದು ತಿಳಿಸಿದರು.

ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ವರ್ಗೀಸ್ ಪಿ ಜಾನ್ ಮಾತನಾಡಿ, “ಶಿವಮೊಗ್ಗದ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯಲ್ಲಿ ಈಗ ಅತ್ಯಾಧುನಿಕ ಲೇಸರ್ ಶಸ್ತ್ರಚಿಕಿತ್ಸೆ ಲಭ್ಯವಿರುವುದರಿಂದ, ಮಲೆನಾಡು ಭಾಗದ ಮತ್ತು ನೆರೆಯ ಜಿಲ್ಲೆಗಳ ರೋಗಿಗಳು ಇನ್ಮುಂದೆ ಉತ್ತಮ ಚಿಕಿತ್ಸೆಗಾಗಿ ಬೆಂಗಳೂರಿನಂತಹ ಮಹಾನಗರಗಳಿಗೆ ಅಲೆಯಬೇಕಿಲ್ಲ,” ಎಂದು ತಿಳಿಸಿದರು.

ಹೊಸನಗರ : ಮೆಸ್ಕಾಂ ಜನ ಸಂಪರ್ಕ ಸಭೆ

0

ಹೊಸನಗರ ಮೆಸ್ಕಾಂ ಉಪವಿಭಾಗ ಕಛೇರಿಯಲ್ಲಿ ಜ. 29 ರಂದು ಬೆಳಿಗ್ಗೆ 11.00 ರಿಂದ 01.00 ರವರೆಗೆ ಜನಸಂಪರ್ಕ ಸಭೆ ನಡೆಯಲಿದೆ. ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲ್ಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ಪ್ರಕಟಣೆ ತಿಳಿಸಿದೆ.
ಸಂಪರ್ಕಿಸಬಹುದಾದ ದೂರವಾಣಿಸಂಖ್ಯೆ;.9448289517.

Karnataka Bala Vikas Academy ಬಾಲಗೌರವ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ

0

Karnataka Bala Vikas Academy ಕರ್ನಾಟಕ ಬಾಲವಿಕಾಸ ಅಕಾಡೆಮಿಯು 2024-25 ಮತ್ತು 2025-26ನೇ ಸಾಲಿನಲ್ಲಿ ರಾಜ್ಯ, ರಾಷ್ಟç ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆಗೈದ 18 ವರ್ಷದೊಳಗಿನ ಕ್ರೀಡೆ, ಸಂಗೀತ, ನೃತ್ಯ, ಬಹುಮುಖ ಪ್ರತಿಭೆ, ನಟನೆ, ಚಿತ್ರಕಲೆ ಹಾಗೂ ವಿಜ್ಞಾನ ಮತ್ತು ಸಂಶೋಧನೆ ಯಾವುದಾದರೊಂದು ಕ್ಷೇತ್ರದಲ್ಲಿ ಅಸಾಧಾರಣ ಸಾಧನೆಯನ್ನು ಮಾಡಿ ಪ್ರಶಸ್ತಿ ಪಡೆದ ಮಕ್ಕಳಿಂದ “ಬಾಲಗೌರವ ಪ್ರಶಸ್ತಿ”ಗೆ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮಕ್ಕಳು ನಿಗದಿತ ನಮೂನೆ ಅರ್ಜಿಯನ್ನು ಉಪನಿರ್ದೇಶಕರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಚೇರಿ ಅಥವಾ ಯೋಜನಾಧಿಕಾರಿಗಳು, ಕರ್ನಾಟಕ ಬಾಲವಿಕಾಸ ಅಕಾಡೆಮಿ, ಚಂದ್ರಿಕಾ ಲೇಔಟ್ ಹಿಂಭಾಗ, ಕೆ.ಹೆಚ್.ಬಿ. ಕಾಲೋನಿ, ಲಕಮನಹಳ್ಳಿ, ಧಾರವಾಡ -580004 ಇಲ್ಲಿಂದ ಪಡೆದು, ತಮ್ಮ ಸ್ವಯಂ ದೃಢೀಕೃತ ನಕಲು ದಾಖಲೆಗಳೊಂದಿಗೆ ಮನವಿಯನ್ನು ಫೆ. 20 ರೊಳಗಾಗಿ ಸಲ್ಲಿಸುವಂತೆ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕರು ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 0836-2465490/ 8050392209/ 7204396275/ 9448981944 ಗಳನ್ನು ಸಂಪರ್ಕಿಸುವುದು.