Tuesday, August 25, 2026
Tuesday, August 25, 2026

ಜ. 28ಕ್ಕೆ ಕೆಂಡದಾರ್ಚನೆ, ಕೃತಿ ಬಿಡುಗಡೆ ಕಾರ್ಯಕ್ರಮ

Date:

ಶಿವಮೊಗ್ಗ ನಗರದ ಗೆಟ್ಟೇನಹಳ್ಳಿ ರಸ್ತೆಯಕೆ.ಹೆಚ್.ಬಿ.ಪ್ರೆಸ್ ಕಾಲೋನಿಯಲ್ಲಿರುವ
ದೊಡ್ಡಮ್ಮ ಚಾರಿಟಬಲ್ ಟ್ರಸ್ಟ್ ಇಲ್ಲಿ ಮೂರನೇ ಕೆಂಡದಾರ್ಚನೆ ಕಾರ್ಯಕ್ರಮ ಜ. 28 ಬುಧವಾರದಂದು ಬೆಳಿಗ್ಗೆ 7 ಗಂಟೆಯಿಂದ ಗಂಗಾ ಪೂಜೆಯಿಂದ ಪ್ರಾರಂಭವಾಗಲಿದೆ.
ಸುದ್ದಿ ಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಎಮ್ ಎನ್ ಸುಂದರರಾಜು, ಅಂದು ಬೆಳಗ್ಗೆ ದೊಡ್ಡಮ್ಮ ದೇವಿ ಉತ್ಸವ ಮೂರ್ತಿ ಮೆರವಣಿಗೆ ಇದೆ. ಬೆಳಿಗ್ಗೆ 9.30ಕ್ಕೆ ಸಾವಿರ ಮಹಿಳೆಯರಿಂದ ಆರತಿ ಮುಂಭಾಗದಲ್ಲಿ ಬೆಳಿಗ್ಗೆ 10 ರಿಂದ “ ಶ್ರೀ ದೊಡ್ಡಮ್ಮ ದೇವಿ ಕೆಂಡದಾರ್ಚನೆ” ಹಮ್ಮಿಕೊಳ್ಳಲಾಗಿದೆ.
ಕೆಂಡದಾರ್ಚನೆ ಸಂಬಂಧ 27 ರಂದು ಗಣಪತಿ ಪೂಜೆ, ಪುಣ್ಯಾಹವಾಚನ, ದೇವಿ ಆರಾಧನಾ ಪೂಜೆ ನಂತರ ಚಂಡಿಕಾ ಬೀಜಾಕ್ಷರ ಹೋಮವಿದೆ ಎಂದರು.
ಬೆಳಿಗ್ಗೆ 8 ಗಂಟೆಗೆ ಪೂರ್ಣಾಹುತಿ, ಮಹಾ ಮಂಗಳಾರತಿ, ನಂತರ ಪ್ರಸಾದ ವಿನಿಯೋಗ, ನಂತರ ಬೆಳಿಗ್ಗೆ 11 ಗಂಟೆಗೆ ರಾಧಾ ಎಂ. ಸಿದ್ಧಪ್ಪಾಜಿ ಸಂಗ್ರಹಿಸಿರುವ ಶ್ರೀ ಸಿದ್ಧಪ್ಪಾಜಿಯವರ ನುಡಿಮುತ್ತುಗಳ ಸಂಗ್ರಹ “ತಾಯಿನುಡಿ” ಕೃತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಮುಖ್ಯ ಅತಿಥಿಗಳಾಗಿ ಪ್ರೊ. ಶಾಂತಾರಾಮ ಪ್ರಭು, ನಿಟ್ಟೂರು ಇವರು ಆಗಮಿಸಲಿದ್ದಾರೆ. ಸಾಹಿತಿ ಎಂ.ಎನ್.ಸುಂದರ ರಾಜ್, ಉಪಸ್ಥಿತರಿರುತ್ತಾರೆ ಎಂದರು.
ಅಂದು ನಡೆಯುವ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಬಿ. ಶ್ರೀನಿವಾಸ ರೆಡ್ಡಿ, ಸಂಸ್ಥಾಪಕರು ರಮಣ ಮಹರ್ಷಿ ಆಶ್ರಮ, ಬೆಂಗಳೂರು, ಡಾ!! .ಪ್ರಸನ್ನ ಬಸವರಾಜಪ್ಪ, ಸರ್ಜಿಕಲ್ ಗ್ಯಾಸ್ಟ್ ಆಂಡೋಲಜಿಸ್ಟ್, ಮ್ಯಾಕ್ಸ್ ಆಸ್ಪತ್ರೆ, ಶಿವಮೊಗ್ಗ, ಡಿ.ಎಂ.ದೇವರಾಜ್, ಸಂಸ್ಥಾಪಕರು, ರಾಮಕೃಷ್ಣ ವಸತಿ ವಿದ್ಯಾಲಯ, ಎಂ.ಎಲ್.ಹಳ್ಳಿ, ವಾಸುದೇವ್, ಹಿರಿಯ ಭೂ ವಿಜ್ಞಾನಿಗಳು, ಬೆಂಗಳೂರು ಇವರಿಗೆ ಸನ್ಮಾನವಿದೆ. ಸಿದ್ಧಪ್ಪಾಜಿ, ದೇವಿ ಉಪಾಸಕರು, ಶಿವಮೊಗ್ಗ ಇವರು ಸಭೆಯ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಲಿದ್ದಾರೆ ಎಂದರು.
ಅಂದು ಬೆಳಿಗ್ಗೆ 8 ಗಂಟೆಯಿಂದ ದೇವಿ ಭಜನಾ ಕಾರ್ಯಕ್ರಮದಲ್ಲಿ ಗಾಯತ್ರಿ ಭಜನಾ ಮಂಡಳಿ ಶಿವಮೊಗ್ಗ, ಗಾಯತ್ರಿ ಭಜನಾ ಮಂಡಳಿ ಹೊನ್ನಾಳಿ, ಸಿರಿ ಭಜನಾ ಮಂಡಳಿ, ರಾಜೇಂದ್ರ ನಗರ, ಶಿವಮೊಗ್ಗ, ವಿದ್ಯಾ ಭಜನಾ ಮಂಡಳಿ, ವಿದ್ಯಾನಗರ ಶಿವಮೊಗ್ಗ, ಮೊದಲಾದವರಿಂದ ಭಜನೆ ನಡೆಯಲಿದೆ ಎಂದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...