Tuesday, August 4, 2026
Tuesday, August 4, 2026
Home Blog Page 2056

ಕೃಷಿ ಮುನ್ನಡೆಗೆ ಎಸ್ ಬಿಐ ಪಂಚಸೂತ್ರ

0

ಕೃಷಿ ಕ್ಷೇತ್ರದಲ್ಲಿ ದಿನೇದಿನೇ ಹೊಸ ಆವಿಷ್ಕಾರಗಳು ನಡೆಯುತ್ತಿವೆ. ಕೃಷಿ ಅಭಿವೃದ್ದಿಯಿಂದ ದೇಶದ ಅಭಿವೃದ್ಧಿ ಸಾಧ್ಯವಾಗಲಿದೆ‌. ಈ ಹಿನ್ನೆಲೆಯಲ್ಲಿ ಸರ್ಕಾರ ಅನೇಕ ಯೋಜನೆಗಳನ್ನು ಹಾಕಿಕೊಂಡಿದೆ. ಬ್ಯಾಂಕಿಂಗ್ ಕ್ಷೇತ್ರವು ಕೂಡ ಕೃಷಿ ಪ್ರಗತಿಯನ್ನು ಗುರಿಯಾಗಿಟ್ಟುಕೊಂಡು ಅನೇಕ ಸುಧಾರಣೆಗಳನ್ನು ಕೈಗೊಳ್ಳುತ್ತಿವೆ.
ಎಸ್ ಬಿಐ ಸಂಶೋಧನಾ ವರದಿಯು ಕೃಷಿ ಕ್ಷೇತ್ರದ ಸುಧಾರಣೆಗೆ 5 ಸಲಹೆಗಳನ್ನು ನೀಡಿದೆ.
ರಾಷ್ಟ್ರೀಯ ಕೃಷಿ ಮಾರುಕಟ್ಟೆಯಲ್ಲಿ (ಇ-ನ್ಯಾಮ್) ಕನಿಷ್ಠ ಬೆಂಬಲ ಬೆಲೆಯನ್ನು ಮೂಲ ನೆಲೆಯಾಗಿ ನಿಗದಿಪಡಿಸಲು ಪರಿಶೀಲಿಸಬಹುದು.
ಗುತ್ತಿಗೆ ಕೃಷಿ ಕುರಿತ ಸಂಸ್ಥೆ ರಚಿಸಬೇಕು.
ಎಪಿಎಂಸಿಗಳ ಮೂಲ ಸೌಕರ್ಯ ಅಭಿವೃದ್ಧಿಪಡಿಸಬೇಕು. ವರದಿಯ ಪ್ರಕಾರ ಕೊಯ್ಲು ಮತ್ತು ನಂತರದ ಅವಧಿಯಲ್ಲಿ 27,000 ಕೋಟಿ ರೂ. ಮೌಲ್ಯದ ಧಾನ್ಯಗಳು, 10,000 ಕೋಟಿ ರೂ. ಮೌಲ್ಯದ ತೈಲ ಧಾನ್ಯಗಳು, 5,000 ಕೋಟಿ ರೂ. ಮೌಲ್ಯದ ಬೇಳೆಕಾಳುಗಳು ನಷ್ಟವಾಗುತ್ತವೆ. ಇದನ್ನು ತಪ್ಪಿಸಲು ಎಪಿಎಂಸಿ ಗಳ ಮೂಲಸೌಕರ್ಯ ವೃದ್ಧಿಸಬೇಕು. ಸುಸಜ್ಜಿತ ಗೊಳಿಸಬೇಕು.
ಬೆಳೆಗಳ ದರ ಖಾತರಿಗಾಗಿ ಕನಿಷ್ಠ ಬೆಂಬಲ ಬೆಲೆಯ (ಎಸ್ಎಸ್ ಪಿ) ಬದಲಾಗಿ ಬೆಳೆಗಳ ಖರೀದಿಗೆ ಖಾತರಿಯನ್ನು ಕೊಡಬಹುದು. ಉದಾಹರಣೆಗೆ ಕನಿಷ್ಠ 5 ವರ್ಷಗಳ ಅವಧಿಗೆ ಇಷ್ಟು ಪ್ರಮಾಣದ ಬೆಳೆ ಖರೀದಿಸಲಾಗುವುದು ಎಂಬ ಖಾತ್ರಿಯನ್ನು ನೀಡುವುದು. ಕನಿಷ್ಠ ಕಳೆದ ವರ್ಷದ ಬೆಳೆಯ ಶೇಕಡಾವಾರು ಪ್ರಮಾಣವನ್ನು ಗಮನಿಸಿ, ಅಷ್ಟನ್ನು ಖರೀದಿಸುವ ಖಾತರಿ ನೀಡಬಹುದು.
ರಾಜ್ಯಗಳಲ್ಲಿ ವ್ಯವಸ್ಥಿತವಾಗಿ ಕೃಷಿ ಉತ್ಪನ್ನಗಳ ಖರೀದಿಗೆ ವ್ಯವಸ್ಥೆ ಮಾಡಬೇಕು. ಪಂಜಾಬ್ ಮತ್ತು ಹರಿಯಾಣದಲ್ಲಿ ಉತ್ಪಾದನೆಯಾಗುವ ಶೇ. 83 ಧಾನ್ಯಗಳ ಖರೀದಿಗೆ ಸರ್ಕಾರಿ ವ್ಯವಸ್ಥೆಯಿದೆ. ಕೆಲ ರಾಜ್ಯಗಳಲ್ಲಿ ಒಂದಂಕಿಗೆ ಇಳಿದಿದೆ.
ನಮ್ಮ ರಾಜ್ಯದ ರೈತ ಸಂಘಟನೆಗಳು ಈ ದೃಷ್ಟಿಯಿಂದ ಹೆಚ್ಚಿನ ಪ್ರಮಾಣದಲ್ಲಿ ಧಾನ್ಯ ಖರೀದಿಗೆ ಸರ್ಕಾರಕ್ಕೆ ಒತ್ತಾಯಿಸಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕಂಡೆ ನಾ ನರಸಿಂಹನ..! ಕನಕರ ನರಸಿಂಹ ದರ್ಶನ.

0

ಕನಕದಾಸರು..ಮಹತ್ವದ ಕವಿಗಳು. ದಾಸ ಸಮೂಹದಲ್ಲೇ ಅತೀವ,ಅದ್ಭುತ ಕಲ್ಪನಾಶಕ್ತಿಯುಳ್ಳ ಪ್ರತಿಭೆ. ಅವರ ಪ್ರತಿಮೆ,ರೂಪಕಗಳು ದಾಸ ಸಾಹಿತ್ಯ ಸಹೃದಯರನ್ನ ಸೋಜಿಗದ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ವಿವಿಧ ಕೃತಿಗಳ ಒಳಹೊಕ್ಕು ಅವರನ್ನ ಅರ್ಥಮಾಡಿಕೊಳ್ಳುವ ಸಾಹಸ ಇನ್ನೂ ಪೂರ್ಣವಾಗಿಲ್ಲವೇನೊ? ಅಂತ ಅನಿಸುತ್ತದೆ. ಅವರ ಮುಂಡಿಗೆಗಳನ್ನ ಓದಿದಾಗ ಇದು ನಮಗೆ ವೇದ್ಯವಾಗುತ್ತದೆ.ವಿದ್ವಾಂಸರೂ ಕೂಡ ಒಂದುಕ್ಷಣ ಮನಮಂಥನ ಮಾಡಿಕೊಳ್ಳುವಂತಿದೆ… ಪೂರ್ಣ ಅವುಗಳ ಬಗ್ಗೆ ವಿಶೇಷ ಅಧ್ಯಯನವೇ ಬೇಕೇನೊ?.ಏಕೆಂದರೆ ಅವರ ಗೂಢಾರ್ಥಗಳು ಒಬ್ಬೊಬ್ಬರಿಗೆ ಒಂದೊಂದು ಅರ್ಥ ನೀಡುತ್ತವೆ.

ಬಹಳ ಸಹೃದಯರ ಅಂತಃಕರಣ ಕಲಕಿ,ಆಂತರ್ಯ ಮೀಟಿದ ಮುಂಡಿಗೆಗಳಲ್ಲಿ ” ಮರವ ನುಂಗು ಪಕ್ಷಿ.ಮನೆಯೊಳಗೆ ಬಂದಿದೆ!. ಇದರ ಕುರುಹ ಪೇಳಿ ಕುಳಿತಿರುವ ಜನರು!” ಒಂದಾಗಿದೆ. ಅತ್ಯಂತ ಆಸಕ್ತಿಪೂರ್ವಕ ಓದಿಸಿಕೊಳ್ಳುತ್ತದೆ.ಇದನ್ನ ಆಮೂಲಾಗ್ರ ಜೀರ್ಣಿಸಿಕೊಳ್ಳುವಲ್ಲಿ ಬೇಕಾದದ್ದು ಅತೀ ಬುದ್ಧಿವಂತಿಕೆಯಲ್ಲ.ಸಾಮಾನ್ಯ ಜ್ಞಾನ ಎಂಬುದನ್ನ ಮುಂಡಿಗೆಗಳನ್ನ ಬಿಡಿಸಿದ ಜಾಣ/ಜಾಣೆಯರು ತಮ್ಮ ಅನಿಸಿಕೆ ವ್ಯಕ್ತಪಡಿಸುತ್ತಾರೆ. ಅಲೌಕಿಕ ಸಂಗತಿಗಳ ಮೂಲಕ ಲೌಕಿಕ ಸಾಮಗ್ರಿಯನ್ನ ಆಧರಿಸಿ ನಮ್ಮನ್ನ ಆಧ್ಯಾತ್ಮದ ಸುಳಿಯಲ್ಲಿ ಸಿಕ್ಕಿಸಿಬಿಡುತ್ತಾರೆ. ಸಮಾಧಾನದ ಚಿತ್ತದಿಂದ ಗ್ರಹಿಸಿದಾಗ ಮುಂಡಿಗೆಗಳ ಅಂತರಂಗ ಹೂವಿನ ಪಕಳೆಗಳಂತೆ ಬಿಚ್ಚಿಕೊಳ್ಳುತ್ತಾ ಹೋಗುತ್ತದೆ.! ನೋಡಲಿಕ್ಕೆ ಬೆರಗು,ಬೆಡಗು ತುಂಬಿದ ಸಾಲುಗಳು.
” ಒಂಟಿಕೊಂಬಿನ ಪಕ್ಷಿ,ಒಡಲೊಳಗೆ ಕರುಳಿಲ್ಲ.ಗಂಟಲು ಮೂರುಂಟು ಮೂಗು ಇಲ್ಲ.ಕುಂಟು ಮನುಜನ ತೆರದಿ ಕುಳಿತಿಹುದು ಮನೆಯೊಳಗೆ ಎಂಟು ಹತ್ತರ ಭಕ್ಷ್ಯ ಭಕ್ಷಿಸುವುದು.” ಕೊಂಚ ಅದರೊಳಗೇ ಸಾಗಿದರೇ ಬೀಸುವ ಕಲ್ಲಿನ ಪ್ರತಿಮೆ ಇದನ್ನೆಲ್ಲ ಒಳಗೊಂಡಿದೆ ಎಂಬ ಅರ್ಥ ಹೊಳೆದಾಗ ನಮಗೆ ನಾವೇ ಚೋದ್ಯದೊಳಗೇ ಮುಳುಗಿಬಿಡುತ್ತೇವೆ.
ಬೀಸುವ ಕಲ್ಲಿನ ಗೂಟ,ಒಂಟಿಕೊಂಬು. ಎರಡೂ ವೃತ್ತಾಕಾರದ ಕಲ್ಲಿನ ನಡುವೆ ಏನಿಲ್ಲ.( ಕರುಳಿಲ್ಲ). ನಡುವೆ ಕೇಂದ್ರ ಬಿಂದುವಿನಲ್ಲಿ ಕಾಳು ಹಾಕಲು ಪುಟಾಣಿ ಗುಣಿ.ಅದಕ್ಕೆ ಮೂರು ರಂಧ್ರಗಳು( ಗಂಟಲು). ..ಹೀಗೇ ಬೀಸುವ ಕಲ್ಲಿನ ಚಿತ್ರ ನಮ್ಮ ಚಿತ್ತದಲ್ಲಿ ಕೆತ್ತಿಕೊಳ್ಳುತ್ತಾ ಸಾಗುತ್ತದೆ.ಇದು ಜನಪ್ರಿಯವಾದ ಅವರ ಮುಂಡಿಗೆಯ ಒಂದು ಝಲಕ್ ಅಷ್ಟೆ.

ಅವರ ಕೃತಿರಚನೆಯ ಮೂಸೆಯಲ್ಲಿ ಅನೇಕ ಅದ್ಭುತ ಚಮತ್ಕಾರಗಳನ್ನ ಓದಿ ಅನುಭವಿಸಬಹುದು. ಈಗ ನರಸಿಂಹಾವತಾರದ ಒಂದು ಪ್ರಸಂಗ.
ಪ್ರಹ್ಲಾದ ತನ್ನ ತಂದೆಗೆ ಕಂಬದಲ್ಲೂ ಇದ್ದಾನೆ ಹರಿ!.ಎಂದ ತಕ್ಷಣ ಅದಕ್ಕೆ ಗದೆಯನ್ನ ಘಟ್ಟಿಸಿದಾಗ ಉಂಟಾದ ದೃಶ್ಯವನ್ನ ಕನಕದಾಸರ ಹಾಡಿನಲ್ಲೇ ಕಾಣಬೇಕು.
ಘುಡುಘುಡಿಸಿ ಕಂಬದಲಿ ದಢದಢ ಸಿಡಿಲು ಸಿಡಿಯೆ ಕಿಡಿಕಿಡಿಸೆ!.ಇದ್ದಕ್ಕಿದ್ದಂತೆ
ಅರಮನೆಯ ಕಂಬ ಬಿರಿಯುವ,..ಹೋಳಾಗುವ ಕ್ರಿಯೆ ಧ್ವನಿಪೂರ್ಣವಾಗಿ ಪದಗಳಲ್ಲೇ ತುಂಬಿದ್ದಾರೆ.ಕಂಬದೊಳಗೆ ಮುಂಚೆ ಉದ್ಭವಿಸಿದ ಸದ್ದು ‘ಘುಡುಘುಡು’ ಎದೆ ನಡುಗುವ ರೀತಿ ಕೇಳಿಸಿತಂತೆ.ಆ ಕಂಬ ಒಡೆದ ಪರಿ ಹೇಗಿತ್ತೆಂದರೆ ” ದಢದಢ ” ಸಿಡಿಲು ಬಡಿಯುವುದಲ್ಲ ಸಿಡಿಯಿತು ಎನ್ನುತ್ತಾರೆ! ಅಷ್ಟಕ್ಕೇ ನಿಲ್ಲಿಸುವುದಿಲ್ಲ!.ಅಲ್ಲಿಂದ ಬೆಂಕಿಯ ಕಿಡಿಗಳು ಹೊತ್ತಿಕೊಂಡವಂತೆ!.
ಮುಂದೇನಾಯಿತು ಎಂದರೆ” ನುಡಿಯಡಗಲೊಡನೆ ಮುಡಿವಿಡಿದು…” ಅಂದರೆ ನೇರ ಹಿರಣ್ಯಕಶಿಪುವಿನ ಗಂಟಲೊಣಗಿತು.ಅವನ ” ಮುಡಿವಿಡಿದು”
ಘಡಘಡನೆ ನಡುಗಿತು ಇಡೀ ಅರಮನೆ.ಘುಡುಘುಡಿಸಿ ಕಂಬದಿಂದ ನೆಲಕ್ಕೆ ಪಾದವಿಟ್ಟಿದ್ದೇ ತಡ ಇಡೀ ವಾತಾವರಣ ಒಂದುಕ್ಷಣ ಮಂಕಾಯಿತು.ಇಂಥ ಸಂದರ್ಭದಲ್ಲೇ ನರಸಿಂಹನಾಗಿ ಕಂಡ ಶ್ರೀಹರಿ. ಹಿರಣ್ಶಕಶಿಪುವನ್ನ ತನ್ನತೊಡೆಯ ಮೇಲೆ ಕೆಡವಿಕೊಂಡ ಆ ಭೀಕರ ಸನ್ನಿವೇಶ ಈ ಸಾಲುಗಳಲ್ಲಿ ಮೂಡುತ್ತಾ ಹೋಗಿದೆ.

ಮುಂದಿನ ಚಿತ್ರ ಕಟ್ಟಿಕೊಡುವ ಕನಕರ ಕಾವ್ಯಶಕ್ತಿ ಇನ್ನೊಂದು ಮಜಲು ತಲುಪುತ್ತದೆ. ಹಿರಣ್ಯಕಶಿಪುವಿನ ಸಂಹಾರದ ಚಿತ್ರಣ ಅಷ್ಟೇ ರೌದ್ರವಾಗಿದೆ.
ಉರದೊಳಪ್ಪಳಿಸಿ ಅರಿಬಸಿರ ಸರಸರನೆ ಸೀಳಿ….ಎಂಬಲ್ಲಿ ಹಿರಣ್ಯಕಶಿಪುವಿನ
ಎದೆ ಸೀಳಿ,ಕರುಳ ಬಗೆದ. ಅದು ಹೇಗಿತ್ತು?. ಪರಿಪರಿಯಲಿ ಚರ್ಮ ಎಳೆದೆಳೆದು ನರಗಳನ್ನ ನೂಲಿನೆಳೆಗಳಂತೆ ಸೆಳೆದನಂತೆ.ಜೊತೆಗೆ ರಕ್ತತೊಯ್ದು ಕರುಳನ್ನ ಕೊರಳಿಗೆ ಹಾರಹಾಕಿಕೊಂಡ ಪ್ರಹ್ಲಾದನ ಆರಾಧ್ಯ ದೈವ.ಕೈಗಳಿಂದ
ನೆತ್ತರು ದಳದಳ ಇಳಿಯುತ್ತಿದ್ದ ಶ್ರೀಹರಿಯನ್ನ ಕನಕರು ನಮಗೆ ತೋರಿಸುತ್ತಾರೆ‌.ಇಡೀ ವಿವರಣೆ ಸಹೃದಯನಲ್ಲಿ ಸಂಹಾರ ಕ್ರಿಯೆಯ ಭಿಭತ್ಸ
ಚಿತ್ರ ಮೂಡುತ್ತದೆ.

ಮುಂದಿನ ಪಂಕ್ತಿಗಳಲ್ಲಿ ಕನಕರು ಆಗಷ್ಟೇ ಕಟ್ಟಿಕೊಟ್ಟಿದ್ದ ರೌದ್ರ ದೃಶ್ಯಕ್ಕೆ ತದ್ವಿರುದ್ಧವಾಗಿ ಚಮತ್ಕಾರಿಕೆಯೆಂಬಂತೆ ಶಾಂತ ಸ್ಥಿತಿಗೆ ನಮ್ಮನ್ನೊಯ್ಯುವರು.
ಪ್ರಜಾಪೀಡಕ ಅರಸನ ಅಂತ್ಯದಿಂದ ಪುರಜನರೆಲ್ಲ ಸಮಾಧಾನಪಟ್ಟರು. ದೇವಾನುದೇವತೆಗಳೆಲ್ಲ ಹೂಮಳೆಗೈದರು.ಸಂಗಡ ವಿವಿಧ ವಾದ್ಯಗಳ ನಾದ ಮುಗಿಲುಮುಟ್ಟಿತ್ತು. ಒಟ್ಟು ಸಂಭ್ರಮದ ಸನ್ನಿವೇಶ ಓದುಗನೂ ಮಿಂಚಿನಂತೆ
ನಿಟ್ಟುಸಿರು ಚೆಲ್ಲುವಂತಾಗುತ್ತದೆ.ಮುಗ್ಧ ಶಿಶು ಪ್ರಹ್ಲಾದ ಶ್ರೀಹರಿಯನ್ನ ಮನಸಾರೆ ಸ್ತುತಿ ಮಾಡಿದ.ಆ ಶ್ರೀಹರಿಯೇ ಕಾಗಿನೆಲೆಯಾದಿಕೇಶವನಾಗಿ ಕನಕರ ಮೆಚ್ಚಿನ ಅಂಕಿತವಾಗಿ ಲಾಸ್ಯವಾಡಿದ್ದಾನೆ.

ಅದೇ ಚಿತ್ರ ರಚನೆಯ ಪಲ್ಲವಿಯಲ್ಲಿ ಕಡೆಯುತ್ತಾರೆ.
” ಕಂಡೆ ನಾ ತಂಡ ತಂಡದ ಹಿಂಡು ಹಿಂಡು ದೈವ ಪ್ರಚಂಡ,ರಿಪುಗಂಡ
ಉದ್ದಂಡ ನರಸಿಂಹನ ಕಂಡೆನಯ್ಯ…”
ಇಡೀ ರಚನೆಯಲ್ಲಿ ಅಸಾಮಾನ್ಯ ರೂಪದಲ್ಲಿ ಕಾಣಿಸಿಕೊಂಡ ,ದುಷ್ಟಶಿಕ್ಷಕ ನರಸಿಂಹಾವತಾರವನ್ನ ತಾವೇ ಅದೀಗ ಕಂಡಂತೆ ಬೆರಗಾಗುತ್ತಾರೆ.
ದೈವಗಣದಲ್ಲಿ ಪ್ರಚಂಡನಾಗಿ ತೋರಿದ್ದಾನೆ ಶ್ರೀಹರಿ!.ದಾಸರಿಗೆ ವಿಷ್ಣುಪಾರಮ್ಯವನ್ನ ಎಷ್ಟು ಹೋಲಿಕೆಮಾಡಿದರೂ ತೃಪ್ತಿಯಿಲ್ಲ.!
ಶಬ್ದಜಾಲದಲ್ಲೇ ಅಕ್ಷರಗಳ ನಾಟ್ಯ.ಅರ್ಥವನ್ನ ಸಮರ್ಥವಾಗಿ ಹೊಮ್ಮಿಸುವ
ಹೆಮ್ಮೆಯ ಕವಿ ಕನಕದಾಸರು.ನರಸಿಂಹ ಅವತಾರ ಆಗಿಹೋದ ಪೌರಾಣಿಕ ಸಂಗತಿ.ಆದರೆ ಅವರ ಈ‌ ಕೃತಿ ಮನನಮಾಡಬೇಕು. ಮತ್ತೆ ಮತ್ತೆ ನಮ್ಮ ಮನಃಪಟಲದಲ್ಲೇ ನರಸಿಂಹಮೂಡುತ್ತಾನೆ. ಲೌಕಿಕದ ಜಡತೆಯನ್ನ ಸೀಳಿಕೊಂಡೇ ಧುತ್ತನೆ ದರ್ಶನ ನೀಡುವಂತೆ ಮಾಡುತ್ತಾರೆ ಕನಕದಾಸರು.
ಅಕ್ಷರಗಳಲ್ಲಿ ಅತಿಶಯರೂಪಿನ ಪರಮಾತ್ಮನನ್ನ ಕಾವ್ಯಶಕ್ತಿ ಮೂಲಕ ಸಾಕ್ಷಾತ್ಕರಿಸಿದ ಕನಕ ಪ್ರತಿಭೆಗೆ ಸಾವಿರದ ಶರಣು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ದೇಶದಲ್ಲಿ ಕೋವಿಡ್ ಪರಿಸ್ಥಿತಿ

0

ದೇಶದಲ್ಲಿ 10,488 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 3,45,10,413 ಕ್ಕೆ ತಲುಪಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿಅಂಶ ಗಳ ಪ್ರಕಾರ ಕಳೆದ 532 ದಿನಗಳಲ್ಲಿ ಸಕ್ರಿಯ ಪ್ರಕರಣಗಳು 1,22,724 ಕ್ಕೆ ಇಳಿದಿವೆ. ಕೋವಿಡ್ ರೋಗದ ಕಾರಣ 313 ಹೊಸ ಸಾವುಗಳಾಗಿವೆ. ಹೊಸ ಸೋಂಕುಗಳ ದೈನಂದಿನ ಏರಿಕೆಯು 44 ದಿನಗಳಲ್ಲಿ 20,000 ಕ್ಕಿಂತ ಕಡಿಮೆಯಾಗಿದೆ. ಕರ್ನಾಟಕದಲ್ಲಿ ಪ್ರಸ್ತುತ ವರದಿಯ ಪ್ರಕಾರ, 247 ಹೊಸ ಕೋವಿಡ್ ಪ್ರಕರಣಗಳು ಮತ್ತು ಒಂದು ಸಾವು ವರದಿಯಾಗಿದೆ. 247 ಹೊಸ ಪ್ರಕರಣಗಳಲ್ಲಿ, 134 ಬೆಂಗಳೂರು ನಗರದಿಂದ ಬಂದಿದ್ದು, ನಗರದಲ್ಲಿ 180 ಡಿಸ್ಚಾರ್ಜ್ ಮತ್ತು ಒಂದು ಸಾವು ಕಂಡಿದೆ. ರಾಜ್ಯದಲ್ಲಿ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 7064. ಇದೇ ವೇಳೆ, ಕೇರಳದಲ್ಲಿ 5080 ಹೊಸ ಪ್ರಕರಣಗಳು ಮತ್ತು 196 ಸಾವುಗಳು ದಾಖಲಾಗಿವೆ. ಎರ್ನಾಕುಲಂ ನಲ್ಲಿ 873 ಅತಿ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ರಾಷ್ಟ್ರೀಯ ಚೇತರಿಕೆ ದರವು 98.30% ರಷ್ಟು ದಾಖಲಾಗಿದೆ. ಇದು ಮಾರ್ಚ್ 2020ಕ್ಕಿಂತ ಅತಿ ಹೆಚ್ಚು ಎಂದು ಸಚಿವಾಲಯ ತಿಳಿಸಿದೆ. 24 ಗಂಟೆಗಳ ಅವಧಿಯಲ್ಲಿ ಸಕ್ರಿಯ 2,154 ಪ್ರಕರಣಗಳು ದಾಖಲಾಗಿವೆ. ದೇಶವು ಮೇ 4 ರಂದು ಕೋಟ್ಯಾಂತರ ಪ್ರಕರಣಗಳು ಮತ್ತು ಜೂನ್ 23 ರಂದು 3 ಕೋಟಿ ಪ್ರಕರಣಗಳ ಗಂಭೀರ ಮೈಲಿಗಲ್ಲನ್ನು ದಾಟಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹಸಿರು ನ್ಯಾಯಮಂಡಳಿ : ರೈಲ್ವೆ ಇಲಾಖೆಗೆ ಕಿವಿಮಾತು

0

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು ಭಾರತೀಯ ರೈಲ್ವೇಗಳಿಗೆ ಹಳಿಗಳನ್ನು ದೋಷಪೂರಿತವಾಗಿ ಬಳಸದಂತೆ ಮತ್ತು ಹತ್ತಿರದ ವಾಸಸ್ಥಳದಿಂದ ತ್ಯಾಜ್ಯನೀರಿನ ವಿಲೇವಾರಿ ಮಾಡದಂತೆ ನೋಡಿಕೊಳ್ಳಲು ನಿರ್ದೇಶಿಸಿದೆ. ಎನ್‌ಜಿಟಿ ಅಧ್ಯಕ್ಷ ನ್ಯಾಯಮೂರ್ತಿ ಆದರ್ಶ್ ಕುಮಾರ್ ಗೋಯೆಲ್ ಅವರ ನೇತೃತ್ವದಲ್ಲಿ ಖಾಸಗಿ ಏಜೆನ್ಸಿಗಳು ಅಡುಗೆ ಅಥವಾ ನೈರ್ಮಲ್ಯ ನಿರ್ವಹಣೆಗಾಗಿ ನೇಮಿಸಿದ ಸ್ಥಳಗಳನ್ನು ಹೊರತುಪಡಿಸಿ ತ್ಯಾಜ್ಯವನ್ನು ವಿಲೇವಾರಿ ಮಾಡಬಾರದು ಎಂದು ಪೀಠ ಹೇಳಿದೆ. “ನೈರ್ಮಲ್ಯ, ಸಾರ್ವಜನಿಕ ಆರೋಗ್ಯ ಮತ್ತು ಸ್ವಚ್ಛ ಪರಿಸರದ ಹಿತಾಸಕ್ತಿಯಲ್ಲಿ, ತ್ಯಾಜ್ಯ ನಿರ್ವಹಣೆಯ ಅಂಶಗಳನ್ನು ಒಳಗೊಂಡಿರುವ ಸೂಕ್ತವಾದ ಪರಿಸರ ನಿರ್ವಹಣಾ ಯೋಜನೆಯನ್ನು ವಿಕಸನ ಗೊಳಿಸಬೇಕು. ಹಾಗಾಗಿ ಪ್ರತ್ಯೇಕ ನಿಲ್ದಾಣಗಳನ್ನು ಸಕ್ರಿಯಗೊಳಿಸಲು ರೈಲ್ವೆ ಮಂಡಳಿಯು ಆಧುನಿಕ ವಿನ್ಯಾಸದ ಯೋಜನೆಯನ್ನು ಅಭಿವೃದ್ಧಿಪಡಿಸುವುದು ಅವಶ್ಯಕವಾಗಿದೆ” ಎಂದು ಆದರ್ಶ್ ಕುಮಾರ್ ಗೋಯಲ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಫ್ರಾನ್ಸ್ : ಕೊವಿಡ್ ಐದನೇ ಅಲೆ ಅಬ್ಬರ

0

ಫ್ರಾನ್ಸ್‌ನಲ್ಲಿ ಕರೋನ ವೈರಸ್ ಸೋಂಕುಗಳು ಅಪಾಯಕಾರಿ ಪ್ರಮಾಣದಲ್ಲಿ ಏರುತ್ತಿವೆ ಎಂದು ಸರ್ಕಾರ ಭಾನುವಾರ ವರದಿ ಮಾಡಿದೆ. ಕಳೆದ 7 ದಿನಗಳಲ್ಲಿ ಸರಾಸರಿ 17,153 ಹೊಸ ಪ್ರಕರಣಗಳು ದಾಖಲಾಗಿವೆ . ಆರೋಗ್ಯ ಅಧಿಕಾರಿಗಳ ಪ್ರಕಾರ, ಒಂದು ವಾರದಿಂದ ಶೇ. 81 ರಷ್ಟು ಕೋವಿಡ್ ಪ್ರಕರಣಗಳು ಹೆಚ್ಚಳವಾಗಿದೆ.
5 ನೇ ಅಲೆಯು ಮಿಂಚಿನ ವೇಗದಲ್ಲಿ ಪ್ರಾರಂಭವಾಗುತ್ತಿದೆ ಎಂದು “ಸರ್ಕಾರದ ವಕ್ತಾರ ಗೇಬ್ರಿಯಲ್ ಅಟಲ್ ಮಾಧ್ಯಮಗಳಿಗೆ ತಿಳಿಸಿದರು.
ಕಳೆದ ಮೂರು ವಾರಗಳಲ್ಲಿ ದಾಖಲಾದ ಪ್ರಕರಣಗಳ ಸರಾಸರಿ ಏರಿಕೆಗಿಂತ ಮೂರು ಪಟ್ಟು ಹೆಚ್ಚಾಗಿದೆ.ಇದು ಸೋಂಕುಗಳ ಘಾತೀಯ ವೇಗವರ್ಧನೆಯನ್ನು ಸೂಚಿಸುತ್ತದೆ. ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳ ಬೃಹತ್ ಒಳಹರಿವಿಗೆ ಕಾರಣವಾಗಿಲ್ಲ, ಫ್ರಾನ್ಸ್ ನಲ್ಲಿ ಅಧಿಕ ಪ್ರಮಾಣದ ವ್ಯಾಕ್ಸಿನೇಷನ್‌ಗಳು ಆದ ಕಾರಣ, ಇದು ಕೋವಿಡ್‌ನ ಅತ್ಯಂತ ಅಪಾಯಕಾರಿ ರೂಪಗಳ ವಿರುದ್ಧ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಆರೋಗ್ಯ ಇಲಾಖೆ ವರದಿ ಮಾಡಿದೆ.
ಫ್ರಾನ್ಸ್ ನ ಎರಡು ಆಸ್ಪತ್ರೆಗಳಲ್ಲಿ ಒಟ್ಟು 7,974 ಕೋವಿಡ್ ರೋಗಿಗಳು, ಮತ್ತು ಅವರಲ್ಲಿ 1,333 ಜನರು ತೀವ್ರ ಚಿಕಿತ್ಸೆಯಲ್ಲಿದ್ದಾರೆ. “ಸೋಂಕುಗಳಲ್ಲಿ ಬಹಳ ಬಲವಾದ ಹೆಚ್ಚಳವಿದೆ, ಆದರೆ ಫ್ರಾನ್ಸ್‌ನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಆಗಿರುವುದು ಸಹಾಯಕವಾಗಿದೆ ಎಂದರು. “ಬೂಸ್ಟರ್ ಶಾಟ್‌ಗಳಿಗೆ ಸಂಬಂಧಿಸಿದಂತೆ ನಾವು ನಮ್ಮ ನೆರೆಹೊರೆಯವರಿಗಿಂತ ಮುಂದಿರುವಂತೆ ತೋರುತ್ತಿದೆ”.
ಫ್ರೆಂಚ್ ರೆಸ್ಟೋರೆಂಟ್ ಗಳು, ತಿಥಿಗಳು ಮತ್ತು ಅನೇಕ ಸಾಂಸ್ಕೃತಿಕ ಸ್ಥಳಗಳಲ್ಲಿ ಅಗತ್ಯವಿರುವ ಆರೋಗ್ಯ ಪಾಸ್ ಗಳನ್ನು ವೈಯಕ್ತಿಕವಾಗಿ ನೀಡಲಾಗಿದೆ. ಅದರಲ್ಲಿ ವ್ಯಕ್ತಿ ಲಸಿಕೆ ಪಡೆದಿರುವ ಬಗ್ಗೆ, ಇತ್ತೀಚಿಗೆ ಕೊವಿಡ್ ನಿಂದ ಚೇತರಿಸಿಕೊಂಡ ಬಗ್ಗೆ, ವೈರಸ್ ಗೆ ನಕಾರತ್ಮಕ ಸ್ಪಂದಿಸಿರುವ ಬಗ್ಗೆ ಮಾಹಿತಿ ನೀಡಿ ಪ್ರಮಾಣಿಕರಿಸಲಾಗಿದೆ. ಬೇಸಿಗೆಯಲ್ಲಿ ಇತರ ದೇಶಗಳಿಗಿಂತ ಫ್ರಾನ್ಸ್‌ನ ಆರೋಗ್ಯ ಪಾಸ್‌ನ ಪರಿಚಯ ಕೋವಿಡ್ ಅನ್ನು ನಿಯಂತ್ರಣದಲ್ಲಿಡಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದರು.
“ಲಸಿಕೆ ಹಾಕಿದ ಜನರಿಗಿಂತ ಹೆಚ್ಚಾಗಿ ಲಸಿಕೆ ಹಾಕದ ಜನರ ಮೇಲೆ ನಿರ್ಬಂಧಗಳ ಭಾರವನ್ನು ತರಲು ಸರ್ಕಾರವು ತನ್ನ ಆಯ್ಕೆಯೊಂದಿಗೆ ನಿಲ್ಲುವುದನ್ನು ಮುಂದುವರೆಸಿದೆ” ಎಂದು ಅಟಲ್ ಅವರು ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಸುರಿಮಳೆಗೆ ಉತ್ತರ ಕರ್ನಾಟಕ ಹೈರಾಣ.

0

ನವದೆಹಲಿ ಶಾಲೆಗಳ ಸಮೀಪದಲ್ಲಿರುವ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸುರಕ್ಷಿತ ಶಾಲಾ ವಲಯಗಳನ್ನು ಸ್ಥಾಪಿಸಲಾಗಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

ಸುರಕ್ಷಿತ ಶಾಲಾ ವಲಯ ಎಂದು ಗುರುತಿಸಲಾಗದ ಪ್ರದೇಶದಲ್ಲಿ ಶಾಲೆಗಳ ಹತ್ತಿರ ಇರುವ ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಶಾಲಾ ಮಕ್ಕಳು, ಸಿಬ್ಬಂದಿ, ಪಾಲಕರ ಸಂಚಾರ, ಎಲ್ಲ ವಾಹನಗಳ ಸಂಚಾರ ಈ ರಸ್ತೆಗಳಲ್ಲಿ ಹೆಚ್ಚಾಗಿರುವ ಕಾರಣ, ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಲೆಗೆ ಸಂಬಂಧಿಸಿದ ಆವರಣದಿಂದ 300 ಅಡಿ ದೂರದವರೆಗೆ ಈ ವಲಯ ವ್ಯಾಪ್ತಿ ಇರುತ್ತದೆ. ಇಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಶಾಲೆ ಆರಂಭಕ್ಕೂ ಮೊದಲೇ ಅಳವಡಿಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಸೇಂಟ್ ಜೋಸೆಫ್ ಹೈ ಸ್ಕೂಲ್, ಚಾಮರಾಜಪೇಟೆಯಲ್ಲಿರುವ 116 ವರ್ಷಗಳ ಹಳೆಯ ಕೋಟೆ ಹೈಸ್ಕೂಲ್ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆಯಾಗಿವೆ.

ಬಹುರಾಷ್ಟ್ರೀಯ ಕಂಪನಿಯಾದ ‘3ಎಂ ಇಂಡಿಯಾ’ದ ಕಾರ್ಯಕ್ರಮವಾದ ” ಯಂಗ್ ಚೇಂಜ್ ಏಜೆಂಟ್ಸ್ ಫಾರ್ ರೋಡ್ ಸೇಫ್ಟಿ” ಹಾಗೂ ಕನ್ಸ ರ್ನ್ ಫಾರ್ ಅಂಡ್ ಪೆಡೆಸ್ಟ್ರಿಯನ್ ಸೇಫ್ಟಿ ಸಹಯೋಗದಲ್ಲಿ, ಬೆಂಗಳೂರಿನ ಸೆಂಟ್ ಜೋಸೆಫ್ ಹೈ ಸ್ಕೂಲ್ ನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಯಿತು.

ದೆಹಲಿಯ ಮಂದಿರ ಮಾರ್ಗದಲ್ಲಿರುವ ಎನ್. ಪಿ ಬಾಯ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್, ಪುಣೆಯ ಜ್ಞಾನ ಪ್ರಮೋಧಿನಿ ಪಾಠಶಾಲೆ, ಗುರು ಗ್ರಾಮದ ಸಿಲ್ವರ್ ಕ್ರೆಸ್ಟ್ ಸ್ಕೂಲ್ ಇನ್ನೂ ಹಲವು ಶಾಲೆಗಳು ಆಯ್ಕೆಯಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಶಾಲಾವಲಯ ಘೋಷಣೆ: ಮಕ್ಕಳ ಸುರಕ್ಷೆ ಆದ್ಯತೆ.

ನವದೆಹಲಿ ಶಾಲೆಗಳ ಸಮೀಪದಲ್ಲಿರುವ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳನ್ನು ಇನ್ನಷ್ಟು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸುರಕ್ಷಿತ ಶಾಲಾ ವಲಯಗಳನ್ನು ಸ್ಥಾಪಿಸಲಾಗಿದೆ. ಈ ಪರಿಕಲ್ಪನೆಯನ್ನು ಬೆಂಗಳೂರು ಸೇರಿದಂತೆ ದೇಶದ ಐದು ನಗರಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುತ್ತಿದೆ.

ಸುರಕ್ಷಿತ ಶಾಲಾ ವಲಯ ಎಂದು ಗುರುತಿಸಲಾಗದ ಪ್ರದೇಶದಲ್ಲಿ ಶಾಲೆಗಳ ಹತ್ತಿರ ಇರುವ ರಸ್ತೆಗಳಲ್ಲಿ ಸುರಕ್ಷಿತ ಸಂಚಾರಕ್ಕಾಗಿ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಶಾಲಾ ಮಕ್ಕಳು, ಸಿಬ್ಬಂದಿ, ಪಾಲಕರ ಸಂಚಾರ, ಎಲ್ಲ ವಾಹನಗಳ ಸಂಚಾರ ಈ ರಸ್ತೆಗಳಲ್ಲಿ ಹೆಚ್ಚಾಗಿರುವ ಕಾರಣ, ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಶಾಲೆಗೆ ಸಂಬಂಧಿಸಿದ ಆವರಣದಿಂದ 300 ಅಡಿ ದೂರದವರೆಗೆ ಈ ವಲಯ ವ್ಯಾಪ್ತಿ ಇರುತ್ತದೆ. ಇಲ್ಲಿ ಸಂಚರಿಸುವ ವಾಹನಗಳಿಗೆ ವೇಗದ ಮಿತಿಯನ್ನು ನಿಗದಿ ಪಡಿಸಲಾಗಿದೆ. ಇದಕ್ಕೆ ಸಂಬಂಧಿಸಿದ ಸೂಚನಾ ಫಲಕಗಳನ್ನು ಶಾಲೆ ಆರಂಭಕ್ಕೂ ಮೊದಲೇ ಅಳವಡಿಕೆ ಮಾಡುವಂತೆ ಕ್ರಮ ಕೈಗೊಳ್ಳಲಾಗಿದೆ.

ಬೆಂಗಳೂರಿನ ಸೇಂಟ್ ಜೋಸೆಫ್ ಹೈ ಸ್ಕೂಲ್, ಚಾಮರಾಜಪೇಟೆಯಲ್ಲಿರುವ 116 ವರ್ಷಗಳ ಹಳೆಯ ಕೋಟೆ ಹೈಸ್ಕೂಲ್ ಯೋಜನೆಯ ಪ್ರಾಯೋಗಿಕ ಅನುಷ್ಠಾನಕ್ಕೆ ಆಯ್ಕೆಯಾಗಿವೆ.

ಬಹುರಾಷ್ಟ್ರೀಯ ಕಂಪನಿಯಾದ ‘3ಎಂ ಇಂಡಿಯಾ’ದ ಕಾರ್ಯಕ್ರಮವಾದ ” ಯಂಗ್ ಚೇಂಜ್ ಏಜೆಂಟ್ಸ್ ಫಾರ್ ರೋಡ್ ಸೇಫ್ಟಿ” ಹಾಗೂ ಕನ್ಸ ರ್ನ್ ಫಾರ್ ಅಂಡ್ ಪೆಡೆಸ್ಟ್ರಿಯನ್ ಸೇಫ್ಟಿ ಸಹಯೋಗದಲ್ಲಿ, ಬೆಂಗಳೂರಿನ ಸೆಂಟ್ ಜೋಸೆಫ್ ಹೈ ಸ್ಕೂಲ್ ನಲ್ಲಿ ಈ ಕಾರ್ಯಕ್ರಮವನ್ನು ಅನುಷ್ಠಾನ ಗೊಳಿಸಲಾಯಿತು.

ದೆಹಲಿಯ ಮಂದಿರ ಮಾರ್ಗದಲ್ಲಿರುವ ಎನ್. ಪಿ ಬಾಯ್ಸ್ ಸೀನಿಯರ್ ಸೆಕೆಂಡರಿ ಸ್ಕೂಲ್, ಪುಣೆಯ ಜ್ಞಾನ ಪ್ರಮೋಧಿನಿ ಪಾಠಶಾಲೆ, ಗುರು ಗ್ರಾಮದ ಸಿಲ್ವರ್ ಕ್ರೆಸ್ಟ್ ಸ್ಕೂಲ್ ಇನ್ನೂ ಹಲವು ಶಾಲೆಗಳು ಆಯ್ಕೆಯಾಗಿವೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಟಿ20 ಕ್ರಿಕೆಟ್ ಸರಣಿ. ಭಾರತ ಕೈವಶ.

0

ಟಿ – 20 ಟೂರ್ನಿಯ 3 ರ ಸರಣಿಯಲ್ಲಿ ಭಾರತ ಸಮಗ್ರ ಜಯ ಸಾಧಿಸಿ ಸರಣಿ ಟ್ರೋಫಿಯನ್ನ ತನ್ನ ಮುಡಿಗೇರಿಸಿಕೊಂಡಿತು.
.ಟಿ – 20 ಅಂತಿಮ ಪಂದ್ಯವು ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳ ನಡುವೆ ಕೋಲ್ಲೊತ್ತಾದಲ್ಲಿ ನಡೆಯಿತು.
ಕೊಲ್ಕತ್ತಾ ದ ಈಡನ್ ಗಾರ್ಡನ್ಸ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ ತಂಡವು 20 ಓವರ್ ಗಳಲ್ಲಿ 7 ವಿಕೆಟ್ ಪತನವಾಗಿ 184 ರನ್ ಗಳಿಸಿತು.
ರೋಹಿತ್ ನಾಯಕತ್ವದ ಚೊಚ್ಚಲ ಸರಣಿಯಲ್ಲಿ ಸಾಧನೆ ಚರಿತ್ರೆಯಾಗಿ ಮಾರ್ಪಟ್ಟಿತು.
ಟಿ – 20 ತಂಡದ ನಾಯಕತ್ವ ವಹಿಸಿಕೊಂಡ ಮೊದಲ ಸರಣಿಯಲ್ಲಿಯೆ ರೋಹಿತ್, ಬ್ಯಾಟಿಂಗ್ ಮತ್ತು ತಂತ್ರಗಾರಿಕೆಯಲ್ಲಿ ಮೇಲುಗೈ ಸಾಧಿಸಿದರು. ಬೌಂಡರಿಯೊಂದಿಗೆ ಖಾತೆ ತೆರೆದ ರೋಹಿತ್ ಅವರ ಆಟದ ಅಬ್ಬರ ಮೇರೆ ಮೀರಿತ್ತು.. ಇದರಿಂದಾಗಿ ಮೊದಲ 6 ಓವರ್ ಗಳಲ್ಲಿಯೆ ತಂಡವು 69 ರನ್ ಗಳಿಸಿತು.
ಹಿಟ್ ಮ್ಯಾನ್ ಖ್ಯಾ ತಿಗೆ ತಕ್ಕಂತೆ ಬ್ಯಾಟ್ ಬೀಸಿದ ರೋಹಿತ್ 31 ಎಸೆತಗಳಲ್ಲಿ 5 ಬೌಂಡರಿ ಹಾಗೂ 3 ಸಿಕ್ಸರ್ ಗಳನ್ನು ಸಿಡಿಸಿ 56 ರನ್ ಗಳಿಸಿಕೊಂಡರು. ಮುಂದೆ ಕಿವೀಸ್ ಬೌಲರ್ ಗಳು ಬಸವಳಿದರು .
ಮೊದಲ ವಿಕೆಟ್ ಹಂತದಲ್ಲಿ ಆಡಿದ ರೋಹಿತ್ ಶರ್ಮಾ ಮತ್ತು ಇಶಾನ್ – ಕಿಶನ್ ಉತ್ತಮ ಆರಂಭ ಮಾಡಿದರು. ಇವರಿಬ್ಬರ ಚೊಚ್ಚಲ ಬ್ಯಾಟಿಂಗ್ ಪ್ರದರ್ಶನದಿಂದ ತಂಡಕ್ಕೆ 69 ರನ್ ಸೇರಿಸಿದರು. ಆದರೆ 7 ನೇ ಓವರ್ ನಲ್ಲಿ ಸ್ಪಿನ್ನರ್ ಮಿಚೆಲ್ ಸ್ಯಾಂಟ್ನರ್ ಭಾರತ ಜೋಡಿಯ ಭರಾಟೆಗೆ ಕಡಿವಾಣ ಹಾಕಿದರು. 2 ನೇ ಎಸೆತದಲ್ಲಿ ಇಶಾನ್ ಕಿಶನ್ ವಿಕೆಟ್ ಪಡೆದ ಅವರು ಜೊತೆಯಾಟ ಮುರಿದರು. ಅದೇ ಓವರ್ ನ ಕೊನೆಯ ಎಸೆತದಲ್ಲಿ ಸುರ್ಯಕುಮಾರ್ ಯಾದವ್ ವಿಕೆಟ್ ಕೂಡ ಕಬಳಿಸಿದರು. ತಮ್ಮ ಇನ್ನೊಂದು ಓವರ್ ನಲ್ಲಿ ಸ್ಯಾಂಟ್ ನರ್ ಅವರು ರಿಷಬ್ ಪಂತ್ ವಿಕೆಟ್ ಕೂಡ ಗಳಿಸಿದರು. ಈ ಹಂತದಲ್ಲಿ ರೋಹಿತ್ ತಮ್ಮ ಆಟ ಮುಂದುವರಿಸಿದ್ದರು. ಅರ್ಧಶತಕ ಪೂರೈಸಿದ ಅವರು ಇನ್ನಷ್ಟು ಪ್ರಹಾರ ನಡೆಸುವ ಸಿದ್ಧತೆಯಲ್ಲಿದ್ದಾಗಲೇ ಸ್ಪಿನ್ನರ್ ಸೋಧಿ ಎಸೆತದಲ್ಲಿ ಅವರಿಗೇ ಕ್ಯಾಚ್ ಕೊಟ್ಟು ಔಟಾದರು.
ನಂತರ ವಿಕೆಟ್ ಗಳಲ್ಲಿ ಕ್ರೀಸ್ ಗ ಇಳಿದು ಜೊತೆಗೂಡಿದ ಶ್ರೇಯಸ್ ಅಯ್ಯರ್ 20 ಎಸೆತಗಳಲ್ಲಿ 25 ರನ್ ಗಳಿಸಿ ಮತ್ತು ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ 20 ರನ್ ಗಳಿಸಿ ಮೊತ್ತವನ್ನು ಹಿಗ್ಗಿಸುವ ಪ್ರಯತ್ನ ಮಾಡಿದರೂ.ಅವರ ಇನ್ನಿಂಗ್ಸ್ ನಲ್ಲಿ ಇನ್ನೂ 4 ಓವರ್ ಗಳು ಬಾಕಿ ಇದ್ದಾಗಲೇ ಇಬ್ಬರೂ ಔಟ್ ಆದರು.
ನಂತರ ಕ್ರೀಸ್ ಗೆ ಬಂದ ದೀಪಕ್ ಚಹರ್, ಹರ್ಷಲ್ ರವರು ಕೊನೆಯ ಹಂತದಲ್ಲೂ ಕೂಡ ತಮ್ಮ ಬ್ಯಾಟಿಂಗ್ ಪ್ರತಿಭೆಯನ್ನು ಅನಾವರಣ ಗೊಳಿಸಿದರು ಹರ್ಷಲ್ ಹಿಟ್ ವಿಕೆಟ್ ಆಗುವ ಮುನ್ನ 11 ಎಸೆತಗಳಲ್ಲಿ18 ರನ್ ಗಳಿಸಿದರು. 2 ಬೌಂಡರಿ ಬಾರಿಸಿ ಹಾಗೂ 1 ಸಿಕ್ಸರ್ ಸಿಡಿಸಿದರು. ಹಾಗೆಯೇ ದೀಪಕ್ ಕೂಡ ಔಟಾಗದೆ 8 ಎಸೆತಗಳಲ್ಲಿ 21 ರನ್ ಗಳಿಸಿ ರೋಚಕವಾಗಿ ಬ್ಯಾಟ್ ಬೀಸಿದರು.
185 ರ. ಗೆಲುವಿನ ಗುರಿಯನ್ನಿತ್ತುಕೊಂಡು ಬೆನ್ನತ್ತಿ ಆಡಿದ ನ್ಯೂಜಿಲೆಂಡ್ ತಂಡ 17.2 ಓವರ್ ಗಳಲ್ಲಿ ಕೇವಲ 111 ರನ್ ಹೊಡೆದು ಆಲ್ ಔಟ್ ಆಯಿತು. ಮಾರ್ಟಿನ್ ಗಪ್ಟಿಲ್ ಅವರ 51 ರನ್ ಗಳ ಅರ್ಧಶತಕ ಅಕ್ಷರ್ ಪಟೇಲ್ ರವರ ಸ್ಪಿನ್ ಮೋಡಿಗೆ ಶರಣಾಗಿ ಅವರ ಅರ್ಧ ಶತಕ ಪ್ರಯತ್ನ ವ್ಯರ್ಥವಾಯಿತು.
73 ರನ್ ಗಳ ಅಂತರದಲ್ಲಿ ಕೀವಿಸ್ ತಂಡ ಸೋಲೊಪ್ಪಿತು.
ರಾಹುಲ್ ಇಲ್ಲದೆಯೇ ಇನ್ನಿಂಗ್ಸ್ ಆರಂಭಿಸಿದ ಭಾರತ ಬ್ಯಾಟುಗಾರರ ಕೊರತೆ ಅನುಭವಿಸಲೇ ಇಲ್ಲ. ಟಾಸ್ ಗೆದ್ದ ಭಾರತ
‌ಬ್ಯಾಟಿಂಗ್ ಆಯ್ಕೆ ಮಾಡಿಕೊಡಿದ್ದು ಸಫಲವಾಯಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೆ ಲೈವ್ ಸುದ್ದಿ ಸಾಲು

0

ಕನ್ನಡ ಸಾಹಿತ್ಯ ಪರಿಷತ್ತು ಶಿವಮೊಗ್ಗ ಜಿಲ್ಲಾಧ್ಯಕ್ಷರಾಗಿ ಶ್ರೀ.ಡಿ‌. ಮಂಜುನಾಥ್ ಆಯ್ಕೆಯಾಗಿದ್ದಾರೆ.

———*———

ಶಿವಮೊಗ್ಗದಿಂದ ಬಿಜೆಪಿಯ ಡಿ.ಎಸ್. ಅರುಣ್ ಮತ್ತು ಕಾಂಗ್ರೆಸ್ ನಿಂದ ಹಾಲಿ ಸದಸ್ಯ ಪ್ರಸನ್ನಕುಮಾರ್ ವಿಧಾನ ಪರಿಷತ್ ಗೆ ಸ್ಪರ್ಧಿಸುತ್ತಿದ್ದಾರೆ.

———–***———

ಟಿ-20 ಸರಣಿ ಭಾರತ-ನ್ಯೂಜಿಲೆಂಡ್ ಪಂದ್ಯಾವಳಿ. ಸರಣಿ ಭಾರತದ ಕೈವಶ.
ಭಾರತ- 183-7 (20)
ನ್ಯೂಜಿಲ್ಯಾಂಡ್ – 111 (17.2)

——-****——-

ಭಾರತೀಯ ರೈಲ್ವೆ ಇಲಾಖೆಯಿಂದ ಪ್ರಯಾಣಿಕರಿಗೆ 350ಕ್ಕೂ ಹೆಚ್ಚು ರೈಲುಗಳಲ್ಲಿ ಕ್ಯಾಟರಿಂಗ್ ಸೌಲಭ್ಯವನ್ನು ಆರಂಭಿಸಿದೆ.

———****———

ರಾಜಕುಮಾರ ಮತ್ತು ಯುವರತ್ನ ಚಲನಚಿತ್ರದ ನಿರ್ದೇಶಕರಾದ ಸಂತೋಷ್ ಆನಂದರಾಮ್ ಅವರು ಪುನೀತ್ ರಾಜಕುಮಾರ್ ಅವರ ಬಗ್ಗೆ ಬಯೋಪಿಕ್ ತಯಾರಿಕೆಯ ಕುರಿತು ಅನುಮತಿಯ ನಿರೀಕ್ಷೆಯಲ್ಲಿದ್ದಾರೆ.

———-**——–

ನವದೆಹಲಿಯ ದಟ್ಟ ವಾಯುಮಾಲಿನ್ಯದ ಪರಿಣಾಮ ವಾಹನಗಳಿಗೆ ಬಣ್ಣದ ಸ್ಟಿಕರ್ ಅಂಟಿಸಬೇಕೆಂದು ದೆಹಲಿ ಸರ್ಕಾರ ಸೂಚಿಸಿದೆ. ಹೋಲೋಗ್ರಾಮ್ ಸ್ಟಿಕರ್ ಗಳು ಎದುರಿಗೆ ಬಂದ ವಾಹನಗಳನ್ನು ಗುರುತಿಸಲು ಸಹಾಯ ಮಾಡುತ್ತವೆ ಎಂದು ತಿಳಿಸಲಾಗಿದೆ.

——–***——-

ಭಾರತೀಯ ಸೇನೆಯ ಗ್ರೂಪ್ ಕ್ಯಾಪ್ಟನ್ ಅಭಿನಂದನ್ ವರ್ಧಮಾನ್ ಅವರಿಗೆ ವೀರ ಚಕ್ರ ಪುರಸ್ಕಾರ ನೀಡಲಾಗಿದೆ.

——–**———

ಅಮೆರಿಕದ ಅಧ್ಯಕ್ಷ ಬೈಡೆನ್ ಸಂಪೂರ್ಣ ಆರೋಗ್ಯವಾಗಿದ್ದಾರೆ ಎಂದು ಶ್ವೇತಭವನದ ಫಿಸಿಶಿಯನ್ ಡಾ.ಕೆವಿನ್ ಒ.ಕೊನರ್ ತಿಳಿಸಿದ್ದಾರೆ.

——-**——–

ಮಿಂಚಿನ ಹಾಗೆ ಕೊವಿಡ್ 5ನೇ ಅಲೆ ಅಪ್ಪಳಿಸಿದೆ -ಫ್ರಾನ್ಸ್ ನ ಸರ್ಕಾರಿ ವಕ್ತಾರ -ಗೇಬ್ರಿಯಲ್ ಅಟ್ಟಾಲ್.

——-**——–

ಹಿಮಾಚಲ ಪ್ರದೇಶದಲ್ಲಿ, ಪೀಠಾಸೀನಾಧಿಕಾರಿಗಳ ಸಮಾವೇಶ

0

ವಿಧಾನಮಂಡಲದ ಸಚಿವಾಲಯಗಳಿಗೆ ಆರ್ಥಿಕ ಸ್ವಾಯತ್ತತೆ ನೀಡಬೇಕು. ಇದರ ಬಗ್ಗೆ ಮುಖ್ಯಮಂತ್ರಿ ಅವರ ಜೊತೆ ಮಾತನಾಡುತ್ತೇನೆ ಎಂದು ರಾಜ್ಯ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಿಳಿಸಿದ್ದಾರೆ.

ನ.17 ಮತ್ತು 18ರಂದು ಹಿಮಾಚಲ ಪ್ರದೇಶದಲ್ಲಿ ನಡೆದ ಪೀಠಾಸೀನಾಧಿಕಾರಿಗಳ ಸಮ್ಮೇಳನ ನಡೆಯಿತು. ಎಲ್ಲಾ ರಾಜ್ಯಗಳ ವಿಧಾನಮಂಡಲ ಸಚಿವಾಲಯಗಳಿಗೆ ಆರ್ಥಿಕ ಸ್ವಾವಲಂಬನೆಯ ಕುರಿತು ಸ್ವೀಕರಿಸಿದ ನಿರ್ಣಯದಲ್ಲಿ ಈ ವಿಷಯ ಪ್ರಸ್ತಾಪಿಸಲಾಗಿದೆ.

ಶಾಸಕಾಂಗದ ಘನತೆ ,ಗೌರವ ಕಾಪಾಡುವುದು ಮುಖ್ಯ. ಬಜೆಟ್ ನಂತರ ಹೆಚ್ಚುವರಿ ಅನುದಾನಕ್ಕೆ ಇಲಾಖೆ ಗಳಂತೆ ಶಾಸಕಾಂಗವು ಆರ್ಥಿಕ ಇಲಾಖೆಗೆ ಬೇಡುವುದು ಸರಿಯಲ್ಲ. ಈ ಕಾರಣಕ್ಕೆ ಆರ್ಥಿಕ ಸ್ವಾಯುತ್ತತೆ ಅಗತ್ಯವಿದೆ. ಸಂಸತ್ತಿನ ಮಾದರಿಯನ್ನು ಪಾಲಿಸಲು ಹಿಮಾಚಲ ಪ್ರದೇಶದಲ್ಲಿ ನಡೆದ ಸಮ್ಮೇಳನದ ನಿರ್ಣಯವನ್ನು ಅಲ್ಲಿನ ಸರ್ಕಾರ ಒಪ್ಪಿಕೊಂಡಿದೆ. ರಾಜ್ಯ ಸರ್ಕಾರವು ಕೂಡ ಸಮ್ಮತಿಸುವ ವಿಶ್ವಾಸವಿದೆ ಎಂದು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.