Friday, February 20, 2026
Friday, February 20, 2026
Home Blog Page 197

D. Devaraj Arasu ಡಿ.ದೇವರಾಜ ಅರಸು ಅವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು- ಸಿ.ಎಸ್.ಚಂದ್ರಭೂಪಾಲ್

0

D. Devaraj Arasu ಮಹಾ ಮಾನವತಾವಾದಿ ಹಾಗೂ ಹಿಂದುಳಿದವರ, ನೊಂದವರ ಏಳ್ಗೆಗಾಗಿ ಶ್ರಮಿಸಿದ ಮೌನಕ್ರಾಂತಿಯ ಹರಿಕಾರ ಡಿ.ದೇವರಾಜ ಅರಸುರವರ ಹೆಸರು ಇತಿಹಾಸದಲ್ಲಿ ಎಂದಿಗೂ ಅಳಿಸಲಾಗದು ಎಂದು ಜಿಲ್ಲಾ ಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಪ್ರಾಧಿಕಾರದ ಅಧ್ಯಕ್ಷರಾದ ಸಿ.ಎಸ್.ಚಂದ್ರಭೂಪಾಲ ಹೇಳಿದರು.

ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದ್ದ ಪ್ರಗತಿಪರ ಸಾಧನೆಗಳ ಸರದಾರ, ಸಾಮಾಜಿಕ ಪರಿವರ್ತನೆಯ ಹರಿಕಾರ ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಡಿ.ದೇವರಾಜ ಅರಸುರವರ 110 ನೇ ಜನ್ಮ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

12 ನೇ ಶತಮಾನದಲ್ಲಿ ಹೇಗೆ ದಮನಿತರು, ಹಿಂದುಳಿದವರನ್ನು ಮುಂಚೂಣಿಗೆ ತರಲು ಅನುಭವ ಮಂಟಪದ ಮೂಲಕ ಬಸವಾದಿ ಶರಣರು ಕ್ರಾಂತಿ ನಡೆಸಿದರೋ ಅದೇ ರೀತಿಯಲ್ಲಿ ಅರಸುರವರು ಮುಖ್ಯಮಂತ್ರಿಯಾಗಿ ನಮ್ಮ ಸಂವಿಧಾನದ ಆಶಯಗಳನ್ನು, ಮಾರ್ಗಸೂಚಿಗಳನ್ನು ಅನುಷ್ಟಾನಗೊಳಿಸುವ ಮೂಲಕ ಅನೇಕ ಸುಧಾರಣೆಗಳನ್ನು ರಾಜ್ಯದಲ್ಲಿ ತಂದರು. ಇವರು ಹಿಂದುಳಿದವರು, ದಲಿತರು, ನೊಂದವರ ಏಳ್ಗೆಗಾಗಿ ಅನೇಕ ಕಾಯ್ದೆ, ಕಾರ್ಯಕ್ರಗಳು, ಯೋಜನೆಗಳನ್ನು ಜಾರಿಗೊಳಿಸಿ, ಸುಧಾರಣೆ ತಂದರು.ಇವರ ಸಾಧನೆಯನ್ನು ಎಷ್ಟು ಹೇಳಿದರೂ ಸಾಲದು.
ಎಲ್ಲ ವರ್ಗಗಳನ್ನು ಗೌರವಿಸುತ್ತಿದ್ದ ಅರಸುರವರು ಹಿಂದುಳಿದ ವರ್ಗಗಳಿಗಾಗಿ ಹಾವನೂರು ವರದಿ ಜಾರಿಗೆ ತರುವ ಮೂಲಕ ಸಾಕಷ್ಟು ಸುಧಾರಣೆ ತಂದರು. ಜೀತ, ಮಲ ಹೊರುವ ಪದ್ದತಿ ನಿಷೇಧ, ಉಳುವವನೇ ಭೂ ಒಡೆಯ, ಭೂಸುಧಾರಣಾ ಕಾಯ್ದೆ, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ವಸತಿನಿಲಯಗಳು, ಗ್ರಾಮಾಂತರ ಮಕ್ಕಳ ಆರೋಗ್ಯ ರಕ್ಷಣೆ, ಭಾಗ್ಯಜ್ಯೋತಿ ಯೋಜನೆ, ವೃದ್ಯಾಪ್ಯ ವೇತನ ಹೀಗೆ ಹಲವಾರು ಯೋಜನೆಗಳನ್ನು ಜಾರಿಗೊಳಿಸಿದರು.

ತಮ್ಮ ಅಧಿಕಾರ ಅವಧಿಯಲ್ಲಿ ರಾಜ್ಯಕ್ಕೆ ಹಲವಾರು ಕೊಡುಗೆಗಳನ್ನು ನೀಡಿರುವ ಇವರು ಚುನಾವಣೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಅವಕಾಶ ದೊರೆತಾಗ ಹಿಂದುಳಿದ ವರ್ಗಗಳ ವ್ಯಕ್ತಿಗಳಿಗೆ ಟಿಕೆಟ್ ನೀಡಿ ವಿಧಾನಸೌಧಕ್ಕೆ ಪ್ರವೇಶಿಸುವಂತೆ ಮಾಡಿದರು ಎಂದು ಸ್ಮರಿಸಿದರು.

ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ ಮಾತನಾಡಿ, ಅರಸುರವರನ್ನು ನಾವು ಕಣ್ಣಿಂದ ಕಾಣದಿದ್ದರೂ ಅವರ ಸಾಧನೆ, ಕೊಡುಗೆಗಳನ್ನು ಕಾಣುತ್ತಿದ್ದೇವೆ. ಅವರ ಮುಂದಾಲೋಚನೆಯಿAದಾಗಿ ಹಿಂದುಳಿದ ವರ್ಗಗಳು, ಎಸ್‌ಸಿ ಎಸ್‌ಟಿ ಹಾಗೂ ಹೆಣ್ಣುಮಕ್ಕಳಿಗೆ ರಾಜ್ಯಾದ್ಯಂತ ವಸತಿನಿಲಯಗಳ ಸೌಲಭ್ಯ ಕಲ್ಪಿಸಿ, ವಿದ್ಯೆ ಪಡೆಯಲು ಅತ್ಯಂತ ಸಹಕಾರಿಯಾಗಿದೆ. ಭೂ ಸುಧಾರಣೆ ಕಾಯ್ದೆಯಿಂದ ಜಿಲ್ಲೆಯಲ್ಲಿ 30 ಸಾವಿರಕ್ಕೂ ಹೆಚ್ಚು ಜನರಿಗೆ ಭೂಮಿ ಲಭಿಸಿದೆ. ಎಲ್ಲ ವರ್ಗಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದ್ದ ಅವರು ಬೆಂಗಳೂರನ್ನು ಎಲೆಕ್ಟ್ರಾನಿಕ್ ಸಿಟಿಯನ್ನಾಗಿ ಮಾಡಲು ಸಹ ಅಡಿಗಲ್ಲು ಹಾಕಿದ್ದರು. ಎಲ್ಲರ ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ದಿ ಸಾಧ್ಯ ಎಂದು ನಂಬಿದ್ದ ಅವರ ಮಾರ್ಗದಲ್ಲಿ ನಾವೆಲ್ಲ ಸಾಗೋಣ ಎಂದು ತಿಳಿಸಿದರು.

D. Devaraj Arasu ಕನ್ನಡ ಭಾರತಿ ಕುವೆಂಪು ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರಾದ ಡಾ.ಜಿ.ಪ್ರಶಾಂತ್ ನಾಯಕ್ ಅರಸುರವರ ಜೀವನ ಚರಿತ್ರೆ ಮತ್ತು ಸಾಧನೆಗಳು ಕುರಿತು ವಿಶೇಷ ಉಪನ್ಯಾಸ ನೀಡಿ ಮಾತನಾಡಿ, ಅರಸುರಂತಹ ಮಹಾನ್ ವ್ಯಕ್ತಿಗಳ ಜನ್ಮ ದಿನಗಳು ಆತ್ಮಾವಲೋಕನದ ದಿನಾಚರಣೆಗಳಾಗಬೇಕು. ಅವಲೋಕನದ ಮೂಲಕ ಎಚ್ಚರಗೊಳ್ಳಬೇಕಿದೆ. ಡಿ.ದೇವರಾಜ ಅರಸುರವರು ರಾಜ್ಯದ ಅಸ್ಮಿತೆ ಹಾಗೂ ಹೆಮ್ಮೆ. ಅವರ ವ್ಯಕ್ತಿತ್ವ, ಅಧಿಕಾರದ ಅವಧಿಯಲ್ಲಿ ಕೈಗೊಂಡ ಸಾಧನೆಗಳು ನಿರಂತರವಾಗಿ ನಮ್ಮನ್ನು ಕಾಡುತ್ತಿವೆ. ಇವರ ಬಗ್ಗೆ ಇರುವಷ್ಟು ಬರಹಗಳು, ಪುಸ್ತಕಗಳು ಬೇರೆ ಯಾವ ರಾಜಕಾರಣಿಗಳ ಬಗ್ಗೆ ಇರಲಿಕ್ಕಿಲ್ಲ. ಇದು ಇವರ ಕಾಡುವಿಕೆಗೆ ಸಾಕ್ಷಿಯಾಗಿದೆ.

ಇತಿಹಾಸದುದ್ದಕ್ಕೂ ಆಗಾಗ್ಗೆ ಸತ್ವಶಾಲಿ ವ್ಯಕ್ತಿಗಳ ಉಗಮವಾಗಿತ್ತದೆ. ಬುದ್ದ, ಬಸವ ,ಗಾಂಧಿ, ಅಂಬೇಡ್ಕರ್ , ಇದೇ ರೀತಿಯಲ್ಲಿ ಹೀಗೊಬ್ಬ ಅರಸು ಹುಟ್ಟುತ್ತಾರೆ. ಜಾತಿಗಳನ್ನು ಮೀರಿ ಏನನ್ನೋ ಕಟ್ಟಬೇಕಿದೆ ಎಂದು ಜಾತ್ಯಾತೀತ ಕನಸು ಕಟ್ಟುತ್ತಾರೆ. ಆದರೆ ಜಾತಿಗಳು ಅಹಂಕಾರವಾಗಿ ಪರಿವರ್ತನೆ ಆಗಿವೆ. ಜಾತಿ ವ್ಯವಸ್ಥೆ ದುರ್ಗತಿಗೆ ಬಂದು ನಿಂತಿದೆ.
ಸಂವಿಧಾನವನ್ನು ಅರಿತು ದಿಟ್ಟ ಹೆಜ್ಜೆ ಇಟ್ಟ ಅರಸು ನಿಜವಾದ ಸಾಂಸ್ಕೃತಿಕ ರಾಜಕಾರಣ ನಡೆಸಿದರು. ಓರ್ವ ಮುಖ್ಯಮಂತ್ರಿಯಾಗಿ ಹಲವಾರು ಸಂಕಟಗಳನ್ನು ನುಂಗಿ ನಿಜ ಹಾದಿಯಲ್ಲಿ ಸಾಗಿದರು. 1972 ರಲ್ಲಿ ಟಿಕೆಟ್ ಹಂಚುವ ಅಧಿಕಾರ ದೊರೆತಾಗ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿ 133 ಪರಿಶಿಷ್ಟರಿಗೆ, ಹಿಂದುಳಿದ ವರ್ಗಗಳು, ಮತೀಯ ಅಲ್ಪಸಂಖ್ಯಾತರಿಗೆ 133 ಸೀಟುಗಳು ಮತ್ತು ಲಿಂಗಾಯತ ಇತರೆ ವರ್ಗದವರಿಗೆ 9 ಸೀಟ್‌ಗಳನ್ನು ಹಂಚಿ,. ಪ್ರಬಲರಲ್ಲದವರನ್ನು ನಿಲ್ಲಿಸಿ ಗೆಲ್ಲಿಸಿದರು.

ಅವರ ಹಾವನೂರು ವರದಿ ಇಂದಿಗೂ ತಲ್ಲಣ ಮೂಡಿಸಿದೆ. ಜೀತ ನಿಷೇಧ, ವಿದ್ಯಾರ್ಥಿಗಳ ಕಲ್ಯಾಣ ಯೋಜನೆಗಳು, ಮಲಹೊರುವ ಪದ್ಧತಿಯ ನಿಷೇಧ, ಉಳುವವನೇ ಒಡೆಯ, ಗರೀಬಿ ಹಠಾವೋ, ಭಾಗ್ಯಜ್ಯೋತಿ, ಕನಿಷ್ಟ ಕೂಲಿ ನಿಗದಿ, ಋಣ ಪರಿಹಾರ ಹೀಗೆ ನೊಂದವರಿಗೆ, ಹಿಂದುಳಿದವರಿಗಾಗಿ ಅನೇಕ ಜನಪರ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದ ಅರಸುರವರು ಒಳ್ಳೆಯ ಓದುಗ. ಅವರು ನಿರಂತರವಾಗಿ ಜನಪ್ರಾತಿನಿಧ್ಯಕ್ಕೆ ಹೊಸ ಭಾಷ್ಯ ಬರೆಯುತ್ತಾ ಬಂದರು.

ನಾಡು ಎಂಬುದು ಪ್ರದೇಶ ಒಂದರ ರೂಪಕ ಆಗಬಾರದೆಂಬ ಕಾರಣದಿಂದ ಮೈಸೂರನ್ನು ಕರ್ನಾಟಕ ಎಂದು ನಾಮಕರಣ ಮಾಡಿದರು. ನಾಯಕರ ಸೃಷ್ಟಿಗೆ ಬಹಳ ರೂಪಕಗಳು ಇವೆ. ಇದರ ಮಧ್ಯದಲ್ಲಿ ಹಿಂದುಳಿದವರ, ನೊಂದವರ, ದಲಿತರ, ಸಂಕಟಕ್ಕೀಡಾದವರಿಗೆ ಧ್ವನಿಯಾಗುವ ಮೂಲಕ ಅರಸುರವರು ನಿಜವಾದ ಸಾಂಸ್ಕೃತಿಕ ನಾಯಕನಾಗಿ ನಮ್ಮ ಎದೆಯೊಳಗೆ ಉಳಿದಿದ್ದಾರೆ.
ವಿದ್ಯಾರ್ಥಿಗಳೇ, ಜ್ಞಾನ ಪುಸ್ತಕಗಳಲ್ಲಿದೆ. ನಮ್ಮೊಳಗೆ ಇದೆ. ಮೊಬೈಲ್‌ಯಿಂದ ಹೊರಬನ್ನಿ. ನೀವು ಜಾಗೃತಿಗೊಂಡರೆ ಮಾತ್ರ ಸಮಾಜ ಜಾಗೃತಗೊಳ್ಳುತ್ತದೆ ಎಂದು ಕರೆ ನೀಡಿದರು.
ಜಾತಿ ಒಕ್ಕೂಟದ ಅಧ್ಯಕ್ಷರಾದ ವಿ. ರಾಜು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಪ್ರತಿಭಾ ಪುರಸ್ಕಾರ:
ಹಿಂದುಳಿದ ವರ್ಗಗಳ ವಸತಿ ಶಾಲೆಗಳಲ್ಲಿ ಎಸ್‌ಎಸ್‌ಎಲ್‌ಸಿ ಮತ್ತು ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು ಹಾಗೂ ವಸತಿ ಶಾಲೆಗಳಲ್ಲಿ ಏರ್ಪಡಿಸಲಾಗಿದ್ದ ಪ್ರಬಂಧ, ರಸಪ್ರಶ್ನೆ, ಕ್ರೀಡಾ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಮಾಜಿಕ ಸೇವಾ ಕಾರ್ಯಕರ್ತರಾದ ಶಂಕರಪ್ಪ ಡಿ, ಶೈಕ್ಷಣಿಕ ಸೇವಾ ಕಾರ್ಯಕರ್ತರಾದ ಬಿ.ಎ ಉಮಾಪತಿ, ಜಾನಪದ ಕಲಾವಿದರಾದ ಎಂ.ಯಲ್ಲಪ್ಪ ಭಾಗವತ್, ಉದ್ಯಮಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತರಾದ ಇಕ್ಬಾಲ್ ಹಬೀಬ್ ಸೇಠ್, ಚಿತ್ರಕಲಾವಿದರಾದ ಸಿ.ಎಸ್.ಗರಗ್, ಸಾಮಾಜಿಕ ಸೇವಾ ಕಾರ್ಯಕರ್ತರಾದ ಅಶೋಕ್, ರಂಗ ಕಲಾವಿದ ಮಂಜುನಾಥ ಸ್ವಾಮಿ ಇವರನ್ನು ಅಭಿನಂದಿಸಲಾಯಿತು ಹಾಗೂ ಇಂಜಿಯರಿಂಗ್ ನಲ್ಲಿ ಸ್ವರ್ಣ ಪದಕ ಪಡೆದ ವಂದನಾ ಆರ್ ಇವರನ್ನು ಸನ್ಮಾನಿಸಲಾಯಿತು.

ಇದೇ ವೇಳೆ ಸದ್ಬಾವನಾ ದಿನದ ಪ್ರತಿಜ್ಞಾ ವಿಧಿಯನ್ನು ಬೋಧಿಸಲಾಯಿತು.
ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಶೋಭಾ ಕೆ ಆರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಎಎಸ್‌ಪಿ ರಮೇಶ್ ಕುಮಾರ್ ಎಸ್, ಜಿ.ಪಂ. ಉಪ ಕಾರ್ಯದರ್ಶಿ ಸುಜಾತ, ವಿವಿಧ ಸಮಾಜದ ಮುಖಂಡರು, ಅಧಿಕಾರಿಗಳು, ವಿದ್ಯಾರ್ಥಿಗಳು ಹಾಜರಿದ್ದರು.

Sadbhavana Diwas ಸದ್ಭಾವನಾ ದಿನ, ಜಿಲ್ಲಾಧಿಕಾರಿಗಳಿಂದ ಪ್ರಮಾಣವಚನ ಬೋಧನೆ

0

Sadbhavana Diwas ಸದ್ಭಾವನಾ ದಿನದ ಅಂಗವಾಗಿ ಜಿಲ್ಲಾಧಿಕಾರಿಗಳ ಕಚೇರಿಯ ಎಲ್ಲಾ ಅಧಿಕಾರಿ – ಸಿಬ್ಬಂದಿಗಳು ಪ್ರಮಾಣ ವಚನ ಸ್ವೀಕರಿಸಿದರು. ಮಾನ್ಯ ಜಿಲ್ಲಾಧಿಕಾರಿ ಗುರುದತ್ತಹೆಗಡೆ ಅವರು ಪ್ರಮಾಣ ವಚನ ಬೋಧಿಸಿದರು.

Ganesh festival and Eid Milad festival ಆಗಸ್ಟ್ 27 ರಿಂದ 15 ವರೆಗೆ ಪೇಪರ್ ಬ್ಲಾಸ್ಟಿಂಗ್ & ಸಿಡಿಮದ್ದು ಬಳಕೆ ನಿಷೇಧ- ಗುರುದತ್ತ ಹೆಗಡೆ

0

Ganesh festival and Eid Milad festival ಆಗಸ್ಟ್ 27 ರಿಂದ 15 ವರೆಗೆ ಪೇಪರ್ ಬ್ಲಾಸ್ಟಿಂಗ್ & ಸಿಡಿಮದ್ದು ಬಳಕೆ ನಿಷೇಧ- ಗುರುದತ್ತ ಹೆಗಡೆ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬಗಳ ಸಂದರ್ಭದಲ್ಲಿ ಮುಂಜಾಗ್ರತ ಕ್ರಮವಾಗಿ ಜಿಲ್ಲೆಯಲ್ಲಿ ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಶಿವಮೊಗ್ಗ ನಗರ ಹಾಗೂ ಜಿಲ್ಲಾ ವ್ಯಾಪ್ತಿಯಲ್ಲಿ ದಿನಾಂಕ:27-08-2025 ರಿಂದ 15-09-2025 ರವರೆಗೆ ಜಿಲ್ಲೆಯಾದ್ಯಂತ ಕಲರ್ ಪೇಪರ್ ಬ್ಲಾಸ್ಟಿಂಗ್. ಸಿಡಿಮದ್ದು ಸಿಡಿಸುವುದನ್ನು ನಿಷೇಧಗೊಳಿಸಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆಯವರು ಆದೇಶಿಸಿದ್ದಾರೆ.

MESCOM ಶಿವಮೊಗ್ಗದ ಭರಮಪ್ಪ ನಗರದ ಸುತ್ತಮುತ್ತ ಆಗಸ್ಟ್ 22 ರಂದು ವಿದ್ಯುತ್ ಸರಬರಾಜು ವ್ಯತ್ಯಯ

0

MESCOM ಶಿವಮೊಗ್ಗ ನಗರದ ಭರಮಪ್ಪ ನಗರದಲ್ಲಿ ಆ. 22 ರಂದು ವಿದ್ಯುತ್ ಕಾಮಗಾರಿ ಹಮ್ಮಿಕೊಂಡಿದ್ದು ಅಶೋಕ ರಸ್ತೆ, ಎಸ್ ಪಿ‌ಎಂ ರಸ್ತೆ, ವಿನಾಯಕ‌ ರಸ್ತೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 9 ರಿಂದ ಸಂಜೆ 6 ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ.

Shimoga District Kannada and Culture Department ಮಾಸಾಶನ/ ವಿಧವಾ ಮಾಸಾಶನ ಪಡೆಯುತ್ತಿರುವವರೆಲ್ಲರೂ ಜೀವಂತ ಪ್ರಮಾಣ ಪತ್ರ ಸಲ್ಲಿಸಲು ಸೂಚನೆ

0

Shimoga District Kannada and Culture Department ಶಿವಮೊಗ್ಗ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ/ವಿಧವಾ ಮಾಸಾಶನ ಪಡೆಯುತ್ತಿರುವ ಸಾಹಿತಿ/ಕಲಾವಿದರು ತಮ್ಮ ಜೀವಂತ ಪ್ರಮಾಣ ಪತ್ರವನ್ನು ದೃಢೀಕರಿಸಿ, 2025ರ ಸೆಪ್ಟಂಬರ್ ಅಂತ್ಯದೊಳಗಾಗಿ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ರಂಗಮಂದಿರ, ಶಿವಮೊಗ್ಗ ಸಲ್ಲಿಸುವಂತೆ ಇಲಾಖೆಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.: 08182-223354 ನ್ನು ಸಂಪರ್ಕಿಸುವುದು.

Life insurance corporation ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಆರೋಗ್ಯವೃದ್ಧಿ- ಪುನೀತ್ ಕುಮಾರ್

0

Life insurance corporation ಶಿವಮೊಗ್ಗ ನಗರದ ರಾವ್ ಸ್ಪೋರ್ಟ್ಸ್ ಅರೆನಾದಲ್ಲಿ ಇಂದು ಹಾಗೂ ನಾಳೆ ಭಾರತೀಯ ಜೀವ ವಿಮಾ ನಿಗಮ, ದಕ್ಷಿಣ ಮಧ್ಯ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ರೀಡಾ ಕೂಟವು ನಡೆಯುತ್ತಿದ್ದು, ಈ ಕ್ರೀಡಾಕೂಟವನ್ನು ದಕ್ಷಿಣ ಮಧ್ಯ ವಲಯಾಧಿಕಾರಿ ಶ್ರೀ ಪುನಿತ್ ಕುಮಾರ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಯಾರೇ ಆಗಲಿ ತಮ್ಮ ವೃತ್ತಿಯ ಜೊತೆಗೆ ಪ್ರವೃತ್ತಿಯಾಗಿ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಸಿಕೊಂಡರೆ ಅಂತವರ ಆರೋಗ್ಯ ಉತ್ತಮವಾಗಿದ್ದು ಅವರು ಹೆಚ್ಚಿನ ಸಾಧನೆ ಮಾಡಬಹುದು. ಹಾಗೆಯೇ ಪ್ರತಿಯೊಬ್ಬ ಕ್ರೀಡಾಪಟುವು ತಾನು ಗೆಲ್ಲಬೇಕು ಎಂದು ಆಡುತ್ತಾನೆ, ಗೆಲ್ಲಲು ಬೇಕಾದ ನೈಪುಣ್ಯತೆ ಮತ್ತು ಶಿಸ್ತಿನ ಕಡೆ ಗಮನ ಹರಿಸುತ್ತಾನೆ, ಅದು ಅವನ ವೈಯಕ್ತಿಕ ಹಾಗೂ ವೃತ್ತಿ ಜೀವನದ ಮೇಲೂ ಪರಿಣಾಮ ಬೀರುತ್ತದೆ ಎಂದು ಹೇಳಿದರು.
Life insurance corporation ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳ ಹದಿನೇಳು ವಿಭಾಗಗಳನ್ನು ಒಳಗೊಂಡ ದಕ್ಷಿಣ ಮಧ್ಯ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ರೀಡಾಕೂಟವನ್ನು ಐದನೇ ಬಾರಿಗೆ ಶಿವಮೊಗ್ಗ ನಗರದಲ್ಲಿ ಆಯೋಜಿಸುತ್ತಿರುವುದು ಬಹಳ ಸಂತೋಷದ ಸಂಗತಿ. ಇದರಲ್ಲಿ ಎಪ್ಪತ್ತಕ್ಕೂ ಹೆಚ್ಚು ಕ್ರೀಡಾಪಟುಗಳು ದೂರದೂರದ ಊರುಗಳಿಂದ ಬಂದು ಭಾಗವಹಿಸುತ್ತಿದ್ದಾರೆ. ಅವರಿಗೆಲ್ಲಾ ನಮ್ಮ ಕರ್ನಾಟಕದ ಜೊತೆಗೆ ಶಿವಮೊಗ್ಗದ ಕುರಿತು ತಿಳಿದುಕೊಳ್ಳಲು ಒಂದು ಅವಕಾಶವೂ ಆಗುತ್ತದೆ ಮುಂತಾಗಿ ಮಾತನಾಡಿದರು.
ಶ್ರೀ ರಾಮದಾಸರು ಸ್ವಾಗತಿಸಿದರೆ, ಶ್ರೀಮತಿ ಕರುಣಾರವರು ವಂದನಾರ್ಪಣೆ ಸಲ್ಲಿಸಿದರು. ಈ ಉದ್ಘಾಟನಾ ಸಮಾರಂಭದಲ್ಲಿ ಶಿವಮೊಗ್ಗ ವಿಭಾಗದ ಮಾರುಕಟ್ಟೆ ವ್ಯವಸ್ಥಾಪಕರಾದ ಶ್ರೀ ಸುಜಿತ್ ಕುಮಾರ್, ವಿಕ್ರಯ
ವ್ಯವಸ್ಥಾಪಕರಾದ ಶ್ರೀ ಯೋಗೆಂದ್ರ, ವೆಂಕಟೇಶ್ ಕುಮಾರ್, ಬಿ.ಜಿ. ಹರೀಶ್, ರವಿ, ಆನಂದ್, ವಿಭಾಗೀಯ ಕಚೇರಿಯ ಸಿಬ್ಬಂದಿಮುಂತಾದವರು ಉಪಸ್ಥಿತರಿದ್ದು ಕ್ರೀಡಾಕೂಟವು ಯಶಸ್ವಿಯಾಗಿ ನಡೆಯಲಿ ಎಂದು ಶುಭ ಹಾರೈಸಿದರು.

Sri Adichunchanagiri Education Trust ಚುಂಚಾದ್ರಿ ಕಪ್ ವಾಲಿಬಾಲ್ ಪಂದ್ಯದಲ್ಲಿ ,” ಬೆಸ್ಟ್ ಡಿಫೆನ್ಸ್ ಪ್ಲೇಯರ್” ಆಗಿ ಮಿಂಚಿದ ಪ್ರತೀಕ್ಷಾ ಆಗ್ನೇಶ್ ಮೈಕಲ್

0

Sri Adichunchanagiri Education Trust ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆ ಹಾಗೂ ಜಿಲ್ಲಾ ವಾಲಿಬಾಲ್ ಸಂಸ್ಥೆ,ಶಿವಮೊಗ್ಗ ಇವರ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ 23ನೇ ಜಿಲ್ಲಾ ಮಟ್ಟದ ಪ್ರೌಢಶಾಲಾ ಬಾಲಕ-ಬಾಲಕಿಯರ ಹೊನಲು ಬೆಳಕಿನ ವಾಲಿಬಾಲ್ ಚುಂಚಾದ್ರಿ ಕಪ್ ಪಂದ್ಯಾವಳಿಯಲ್ಲಿ ನಗರದ ನ್ಯಾಷನಲ್ ಪಬ್ಲಿಕ್ ಶಾಲೆಯಲ್ಲಿ ಹತ್ತನೇ ತರಗತಿಯಲ್ಲಿ ಓದುತ್ತಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿಯಾದ ಪ್ರತೀಕ್ಷ ಅಗ್ನೇಶ್ ಮೈಕಲ್ ಅವರು ಭಾಗವಹಿಸಿ ಅತ್ಯಾಕರ್ಷಕ ಆಟದ ಪ್ರದರ್ಶನ ನೀಡಿ,ಮತ್ತು ಬೆಸ್ಟ್ ಡಿಫೆನ್ಸ್ ಪ್ಲೇಯರ್ ಆಗಿ ಹೊರಹೊಮ್ಮಿದ್ದಾಳೆ. ಉತ್ತಮ ಆಟದ ಪ್ರದರ್ಶನ ನೀಡಿ ಪ್ರಥಮಸ್ಥಾನ ಪಡೆಯುವ ಮೂಲಕ ಚುಂಚಾದ್ರಿ ಕಪ್ ಟ್ರೋಫಿಯನ್ನು ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿರುತ್ತಾಳೆ.
Sri Adichunchanagiri Education Trust ನೆರೆದ ಸಾವಿರಾರು ಜನರ ಗಮನ ಸೆಳೆದ ಈ ಪ್ರತಿಭೆಯು ವಾಲಿಬಾಲ್ ಅಷ್ಟೇ ಅಲ್ಲದೇ ಅಥ್ಲೆಟಿಕ್ಸ್ ವಿಭಾಗದಲ್ಲಿ ರಿಲೇ ಮತ್ತು 200ಮೀಟರ್ ನಲ್ಲೂ ಪ್ರತಿಭಾನ್ವಿತ ಕ್ರೀಡಾಪಟು ಆಗಿರುತ್ತಾಳೆ.
ಪ್ರತೀಕ್ಷ ಇವರು ಸೇಕ್ರೆಡ್ ಹಾರ್ಟ್ ಪ್ರೌಢಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾದ ಮೈಕಲ್ ಕಿರಣ್ ಹಾಗೂ ಶಿಕ್ಷಕಿಯಾದ ಸಪ್ನಾ ರೈಚಲ್ ದಂಪತಿಗಳ ಪುತ್ರಿಯಾಗಿರುತ್ತಾಳೆ.
ಈ ಕ್ರೀಡಾಪಟುವಿನ ಮುಂದಿನ ಕ್ರೀಡಾ ಜೀವನ ಯಶಸ್ವಿಯಾಗಲೆಂದು ಜಿಲ್ಲಾ ಅನುದಾನ ರಹಿತ ಶಾಲಾ ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷ ರಾ. ಹ.ತಿಮ್ಮೇನಹಳ್ಳಿ ಹಾಗೂ ಸಂಘದ ಪದಾಧಿಕಾರಿಗಳು ಶುಭ ಹಾರೈಸಿದ್ದಾರೆ.

G M University ದೇಶದಲ್ಲಿನ ಆರ್ಥಿಕತೆಯು ಉದ್ಯಮಶೀಲತೆಗೆ ಉತ್ತೇಜಕವಾಗಿದೆ- ಡಾ.ಎಚ್.ಬಿ.ಮಂಜುನಾಥ್

0

G M University ಭಾರತದ ಆರ್ಥಿಕ ಶಕ್ತಿಯು 4.39 ಟ್ರಿಲಿಯನ್ ಡಾಲರ್ ಗಳಾಗಿದ್ದು ಇದು ಉದ್ಯಮಗಳ ಸ್ಥಾಪನೆಗೂ ಉತ್ತೇಜಕವಾಗಿದೆ ಎಂದು ಹಿರಿಯ ಪತ್ರಕರ್ತ ಡಾ. ಎಚ್. ಬಿ. ಮಂಜುನಾಥ ಅಭಿಪ್ರಾಯಪಟ್ಟರು. ಅವರಿಂದು ಜಿ ಎಂ ವಿಶ್ವವಿದ್ಯಾನಿಲಯದ ವಾಣಿಜ್ಯ, ಕಾಯಿದೆ ಹಾಗೂ ಬಿಸಿನೆಸ್ ಅಡ್ಮಿನಿಸ್ಟ್ರೇಷನ್ ನೂತನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ದೇಶದ ಜಿಡಿಪಿ ಅಂದರೆ ನಿವ್ವಳ ಆಂತರಿಕ ಉತ್ಪಾದನೆಯು ಅಮೆರಿಕ ಚೈನಾ ಮತ್ತು ಜರ್ಮನಿಗಿಂತಲೂ ಅಧಿಕವಾಗಿದ್ದು ದೇಶದಲ್ಲಿ ಹೂಡಿಕೆಗೂ, ಹೊಸ ಉದ್ಯಮಗಳ ಸ್ಥಾಪನೆಗೂ, ಮಾರುಕಟ್ಟೆಗೂ ಅನುಕೂಲಕರವಾಗಿದೆ. G M University ಈ ಸಂದರ್ಭವನ್ನು ಅಲಕ್ಷಿಸದೆ ಬಳಸಿಕೊಂಡು ಪದವೀಧರರುಗಳು ಅತಿ ಸಣ್ಣ, ಸಣ್ಣ, ಮಧ್ಯಮ ಹಾಗೂ ದೊಡ್ಡ ಉದ್ದಿಮೆಗಳನ್ನು ಆರಂಭಿಸುವತ್ತ ಕಾಲೇಜು ವಿದ್ಯಾರ್ಥಿ ದೆಸೆಯಿಂದಲೇ ಆಸಕ್ತಿ ವಹಿಸಿ ಪೂರಕವಾದ ಯೋಚನೆ ಮತ್ತು ಯೋಜನೆಗಳನ್ನು ತಲೆಯಲ್ಲಿ ರೂಪಿಸಿಕೊಳ್ಳುತ್ತಿರಬೇಕು, ಸರ್ಕಾರದ ಅನೇಕ ಯೋಜನೆಗಳು ಉದ್ಯಮಶೀಲತೆಗೆ ಪ್ರೋತ್ಸಾಹದಾಯಕವಾಗಿದ್ದು ಅಂತರ್ಜಾಲದಲ್ಲಿ ಇವುಗಳ ಮಾಹಿತಿಯನ್ನು ಪಡೆದು ಈಗಿಂದಲೇ ಉದ್ದಿಮೆಗಳ ಬಗ್ಗೆ ಆಲೋಚಿಸುತ್ತಿರಬೇಕು ಎಂದು ಕಿವಿಮಾತು ಹೇಳಿದರು. ನವೀಕರಿಸಬಲ್ಲ ಇಂಧನ, ಪ್ರವಾಸೋದ್ಯಮ, ಕ್ವಾಂಟಮ್ ಕಂಪ್ಯೂಟರ್, ಸಾಮಾಜಿಕ ಆರೋಗ್ಯ, ಆಹಾರ ಸಂಸ್ಕರಣೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಉದ್ದಿಮೆಗಳನ್ನು ಮಾಡಲು ಅವಕಾಶಗಳಿವೆ ಎಂದರು. ಪ್ರಾಚಾರ್ಯ ಡಾ ಗಂಗಾಧರ ಜಿ ಹೂಗಾರ್, ಅಧ್ಯಾಪಕರುಗಳಾದ ಡಾ ಶ್ವೇತಾ ಹೆಚ್ ಎಸ್, ಹರೀಶ್, ರಮೀಜ್ ರಾಜ, ಅನುರೂಪಾ, ವಿದ್ಯಾಧರ್, ನಾಗರಾಜ್, ಸಂಗೀತಾ, ಸ್ಟೈ ಸಿ, ಮುಕ್ತಿ ಮುಂತಾದವರು ಉಪಸ್ಥಿತರಿದ್ದರು.

Department of Youth Empowerment and Sports ಆಗಸ್ಟ್ 25 ರಿಂದ 30 ವರೆಗೆ ” ಗ್ಯಾಸ್ಟ್ರಿಕ್ ಸಮಸ್ಯೆ” ಪರಿಹಾರಕ್ಕೆ ಪ್ರಾಣಾಯಾಮ ಧ್ಯಾನ ಶಿಬಿರ

0

Department of Youth Empowerment and Sports ಯುವಸಬಲೀಕರಣ & ಕ್ರೀಡಾ ಇಲಾಖೆಯ ಸಹಯೋಗದೊಂದಿಗೆ ಶಿವಮೊಗ್ಗದ ನೆಹರು ಕ್ರೀಡಾಂಗಣದಲ್ಲಿ ಆಗಸ್ಟ್ 25 ರಿಂದ 30 ರವರೆಗೆ 6 ದಿನಗಳ ಕಾಲ “ಗ್ಯಾಸ್ಟ್ರಿಕ್‌ ಸಮಸ್ಯೆ”ಗೆ ಮತ್ತು ಸಹಜ ಆರೋಗ್ಯಕ್ಕಾಗಿ ಯೋಗ-ಪ್ರಾಣಾಯಾಮ-ಧ್ಯಾನ ಶಿಬಿರವನ್ನು
ಆಯೋಜಿಸಲಾಗಿದೆ. ಪ್ರತಿ ದಿನ ಬೆಳಿಗ್ಗೆ5•45 ರಿಂದ 7•15 ರವರೆಗೆ ನಡೆಯಲಿರುವ ಈ ಶಿಬಿರವನ್ನು ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಯೋಗಪಟು ಮತ್ತು ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ ರವರು ನಡೆಸಿಕೊಡಲಿದ್ದಾರೆ. Department of Youth Empowerment and Sports ಸೀಮಿತ ಪ್ರವೇಶ ಇರುವ ಈ ಶಿಬಿರದಲ್ಲಿ ಭಾಗವಹಿಸಲು ಇಚ್ಛಿಸುವ ಆಸಕ್ತ ಪುರುಷ ಮಹಿಳೆಯರು ಹೆಚ್ಚಿನ ವಿವರಗಳನ್ನು ಯೋಗಾಚಾರ್ಯ ಅನಿಲ್ ಕುಮಾರ್. ಹೆಚ್.ಶೆಟ್ಟರ್ 9886674375, 9916570686 ರವರಿಂದ ಪಡೆಯಬಹುದು.

Nidhi Apke Nikat ಶಿವಮೊಗ್ಗ & ದಾವಣಗೆರೆ ಜಿಲ್ಲೆಗಳಲ್ಲಿಆಗಷ್ಟ್ 28 ರಂದು” ನಿಧಿ ಆಪ್ ಕೆ ನಿಕಟ್”ಕಾರ್ಯಕ್ರಮ

0

Nidhi Apke Nikat ಪ್ರಾದೇಶಿಕ ಭವಿಷ್ಯ ನಿಧಿ ಕಚೇರಿ ವತಿಯಿಂದ ನಿಧಿ ಆಪ್ಕೆ ನಿಕಟ್ 2.0 ಕಾರ್ಯಕ್ರಮವನ್ನು ಶಿವಮೊಗ್ಗ ಮತ್ತು ದಾವಣಗೆರೆ ಜಿಲ್ಲೆಗಳಲ್ಲಿ ಆ. 28 ರಂದು ಆಯೋಜಿಸಲಾಗಿದೆ.

ಶಿವಮೊಗ್ಗ ಜಿಲ್ಲೆಯಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಪರಿಷತ್ ಸಭಾಂಗಣ, ಗಾಂಧಿ ಪಾರ್ಕ್ ಎದುರು, ಬಿ.ಹೆಚ್.ರಸ್ತೆ ಹಾಗೂ ದಾವಣಗೆರೆ ಜಿಲ್ಲೆಯಲ್ಲಿ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ, ಇಎಸ್‌ಐ ಆಸ್ಪತ್ರೆ ಹತ್ತಿರ, ನಿಟ್ಟುವಳ್ಳಿ, ದಾವಣಗೆರೆ ಇಲ್ಲಿ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದೆ.

Nidhi Apke Nikat ಉದ್ಯೋಗದಾತರು ಮತ್ತು ಉದ್ಯೋಗಿಗಳಿಗೆ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆ ಹಾಗೂ ಪಿಂಚಣಿದಾರರಿಗೆ ಮಧ್ಯಾಹ್ನ 2.30 ರಿಂದ ಸಂಜೆ 4 ಗಂಟೆವರೆಗೆ ನಿಧಿ ಆಪ್ಕೆ ನಿಕಟ್ ಕಾರ್ಯಕ್ರಮ ನಡೆಯಲಿದ್ದು, ಉದ್ಯೋಗದಾತರು ಮತ್ತು ಉದ್ಯೋಗಿಗಳು ಮತ್ತು ಪಿಂಚಣಿದಾರರು ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಪ್ರಾದೇಶಿಕ ಕಚೇರಿಯ ಸಹಾಯಕ ಭವಿಷ್ಯ ನಿಧಿ ಆಯುಕ್ತರು ತಿಳಿಸಿದ್ದಾರೆ.