Friday, February 20, 2026
Friday, February 20, 2026
Home Blog Page 194

CM Siddharamaiah ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಕ್ಕೆ ನಿಗದಿಪಡಿಸಿದ ಅನುದಾನವನ್ನ ಕೇಂದ್ರ ಸರ್ಕಾರ ನೀಡುತ್ತಿಲ್ಲ- ಸಿದ್ಧರಾಮಯ್ಯ

0

CM Siddharamaiah ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ಈ ಹಿಂದೆ ಶೇ.75 ರಷ್ಟು ಅನುದಾನ ಕೇಂದ್ರ ಭರಿಸಿದರೆ, ಶೇ.25ರಷ್ಟನ್ನು ಮಾತ್ರ ರಾಜ್ಯ ಸರ್ಕಾರ ನೀಡಬೇಕಿತ್ತು. ಆದರೆ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಕೇಂದ್ರದ ಪಾಲು ಶೇ.40 ರಿಂದ 42ರಷ್ಟು ಮಾತ್ರ ಬರುತ್ತಿದೆ. ಉಳಿದ ಹಣವನ್ನು ರಾಜ್ಯ ಸರ್ಕಾರವೇ ಭರಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ತಿಳಿಸಿದ್ದಾರೆ.

CM Siddharamaiah ಹೀಗಾಗಿ ರಾಜ್ಯದ ಜನರಿಗೆ ಈ ಬಗ್ಗೆ ಸ್ಪಷ್ಟ ಮಾಹಿತಿ ದೊರೆಯಬೇಕೆಂಬ ಕಾರಣಕ್ಕಾಗಿ ಕೇಂದ್ರ ಪ್ರಾಯೋಜಿತ ಯೋಜನೆಗಳಲ್ಲಿ ರಾಜ್ಯಕ್ಕೆ ಬಿಡುಗಡೆಯಾದ ಅನುದಾನಕ್ಕೆ ಸಂಬಂಧಪಟ್ಟಂತೆ ಸದ್ಯದಲ್ಲೇ ಶ್ವೇತಪತ್ರ ಹೊರಡಿಸುತ್ತೇವೆ ಎಂದು ಇತ್ತೀಚೆಗೆ ಮುಕ್ತಾಯಗೊಂಡ ವಿಧಾನಸಭೆಯ ಅಧಿವೇಶನದಲ್ಲಿ ಹೇಳಿದ್ದಾರೆ.

B.Y.Raghavendra ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿಯುಂಟುಮಾಡುವ ಎಲ್ಲಾ ಕೆಟ್ಟ ಶಕ್ತಿಗಳನ್ನು ಸರ್ಕಾರ ಹೆಡೆಮುರಿ ಕಟ್ಟಬೇಕು- ಸಂಸದ ರಾಘವೇಂದ್ರ

0

B.Y.Raghavendra ದೇಶದ ಅಗ್ರಮಾನ್ಯ ಪವಿತ್ರ ಧಾರ್ಮಿಕ ಶ್ರದ್ಧಾ ಕೇಂದ್ರಗಳಲ್ಲಿ ಒಂದಾದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನೆಲೆಸಿ ಕೋಟ್ಯಾಂತರ ಭಕ್ತರ ಕಷ್ಟಗಳನ್ನು ಕ್ಷಣಾರ್ಧದಲ್ಲಿ ಪರಿಹರಿಸುತ್ತಿರುವ ಶ್ರೀ ಮಂಜುನಾಥ ಸ್ವಾಮಿಯ ಧರ್ಮದ ನೆಲೆಬೀಡಿನ ಮೇಲೆ ಕಳಂಕ ತರಲು ಪಟ್ಟಬದ್ಧ ಹಿತಾಸಕ್ತಿಗಳು ಮತ್ತು ಹಿಂದೂ ವಿರೋಧಿ ಶಕ್ತಿಗಳು ವ್ಯವಸ್ಥಿತವಾಗಿ ರೂಪಿಸಿರುವ ಷಡ್ಯಂತ್ರದ ವಿರುದ್ಧ ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರ ಈ ಅಪಪ್ರಚಾರಕ್ಕೆ ಯಾವುದೇ ರೀತಿಯ ಕಠಿಣ ಕ್ರಮಕೈಗೊಳ್ಳದೆ ಕುಮ್ಮಕ್ಕು ನೀಡುತ್ತಿರುವುದರ ವಿರುದ್ಧ ರಾಜ್ಯ ಬಿಜೆಪಿ ಕರೆಯ ಮೇರೆಗೆ ಬಿಜೆಪಿ ಶಿವಮೊಗ್ಗ ವತಿಯಿಂದ ಇಂದು ಹಮ್ಮಿಕೊಂಡಿದ್ದ ಆಕ್ರೋಶ ಭರಿತ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಭಾಗವಹಿಸಿದ್ದರು.

ಶಿವಮೊಗ್ಗದ ರಾಮಣ್ಣ ಶ್ರೇಷ್ಠಿ ಪಾರ್ಕ್ ನಿಂದ ಗಾಂಧಿ ಬಜಾರ್ ಮಾರ್ಗವಾಗಿ ಸಾವಿರಾರು ಕಾರ್ಯಕರ್ತರೊಂದಿಗೆ ಬೃಹತ್ ಪ್ರತಿಭಟನಾ ಮೆರವಣಿಗೆಯೊಂದಿಗೆ ಗೋಪಿ ವೃತ್ತ ತಲುಪಿ ಆಯೋಜಿಸಲಾಗಿದ್ದ ಬಹಿರಂಗ
ಸಭೆಯಲ್ಲಿ ಶ್ರೀಕ್ಷೇತ್ರಕ್ಕೆ ಹಾಗೂ ಹಿಂದೂ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಉಂಟು ಮಾಡುವ ವ್ಯವಸ್ಥಿತ ಸಂಚಿನ ವಿರುದ್ಧ ತಕ್ಷಣವೇ ಇದರ ಹಿಂದೆ ಇರುವ ಎಲ್ಲಾ ಕೆಟ್ಟ ಶಕ್ತಿಗಳನ್ನು ರಾಜ್ಯ ಸರ್ಕಾರ ಎಡೆಮುರಿ ಕಟ್ಟಿ ಅತ್ಯಂತ ಕಠಿಣ ಕಾನೂನು ಕ್ರಮಕ್ಕೆ ಗುರಿಪಡಿಸಿ ಎಂದು ಸಂಸದ ರಾಘವೇಂದ್ರ ಆಗ್ರಹ ಪಡಿಸಿದರು.

B.Y.Raghavendra ಈ ಸಂದರ್ಭದಲ್ಲಿ ಶಾಸಕರಾದ ಶ್ರೀ ಚನ್ನಬಸಪ್ಪ ಅವರು, ಜಿಲ್ಲಾಧ್ಯಕ್ಷರಾದ ಶ್ರೀ ಜಗದೀಶ್ ಅವರು, ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ ಅವರು, ಮಾಜಿ ಶಾಸಕರಾದ ಶ್ರೀ ಸಿದ್ದರಾಮಣ್ಣ ಅವರು, ಮುಖಂಡರಾದ ಶ್ರೀ ಜ್ಯೋತಿ ಪ್ರಕಾಶ್ ಅವರು, ಶ್ರೀ ಜ್ಞಾನೇಶ್ವರ ಅವರು ಸೇರಿದಂತೆ ಅನೇಕ ಹಿರಿಯರು, ಗಣ್ಯರು ಉಪಸ್ಥಿತರಿದ್ದರು.

Sri Adichunchanagiri Education Trust ಮಗು ತನ್ನಲ್ಲಿ ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯಾವಶ್ಯಕ- ಶ್ರೀನಾದಮಯಾನಂದಶ್ರೀ

0

Sri Adichunchanagiri Education Trust ಮಗು ಮೊದಲು ತನ್ನಲ್ಲಿ ತಾನು ಆತ್ಮವಿಶ್ವಾಸ ಮೂಡಿಸಿಕೊಳ್ಳುವುದು ಅತ್ಯಾವಶ್ಯಕ. ತನ್ನ ಕಲಿಕೆ ತನ್ನ ಏಳಿಗೆ ಎಂಬ ಅರಿವು ಮೂಡಿದರೆ ಕಲಿಕೆಯ ಶ್ರಮ ಸಾರ್ಥಕವಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಶಾಖಾಮಠದ ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅಭಿಪ್ರಾಯ ಪಟ್ಟರು.

ಅವರು ಶಿವಮೊಗ್ಗ ನಗರದ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಶಿವಮೊಗ್ಗ ಶಾಖೆಯ ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ಪ್ರಥಮ ಪಿಯುಸಿ ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರೇರಣಾ ಶಿಖರ ಕಾರ್ಯಕ್ರಮದಲ್ಲಿ ಹಾಗೂ ಕಳೆದ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಗಳು ಪರೀಕ್ಷೆಯ ಅಂಕಗಳಿಕೆಯೇ ಜೀವನವಲ್ಲ, ವ್ಯಾಸಂಗದ ಮೂಲಕ ಬದುಕಿನ ಪ್ರತಿ ಗಳಿಕೆಯನ್ನು ಪ್ರಜ್ಞಾಪೂರ್ವಕವಾಗಿ ಕಳೆಯಬೇಕು. ಮೊದಲು ನಮಗೆ ನಾವು ಬೆಳಕಾಗಬೇಕು, ನಮ್ಮ ಬದುಕು ಬೆಳಗುತ್ತಿದ್ದರೆ, ಬೇರೆಯವರಿಗೆ ಬೆಳಕು ಸಿಗುತ್ತದೆ ಎಂದರು.

ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿಯೂ ಒಂದೇ ರೀತಿಯ ಗ್ರಹಿಕ ಶಕ್ತಿ ಹಾಗೂ ಸಾಮರ್ಥ್ಯ ಇರಲು ಸಾಧ್ಯವಿಲ್ಲ. ಹಾಗಾಗಿ ಪೋಷಕರು ಮಕ್ಕಳ ಅಭಿರುಚಿಗೆ ತಕ್ಕ ಪ್ರೋತ್ಸಾಹ ನೀಡಿದರೆ ಅವರು ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟಿನ ಶೈಕ್ಷಣಿಕ ಸಲಹೆಗಾರರಾದ ಶ್ರೀ ವಿಜಯವಾಮನ್ ಮಾತನಾಡುತ್ತಾ,
ತಂದೆ ತಾಯಿಗಳು ನಿಮ್ಮ ಎಲ್ಲಾ ಬೇಕು ಬೇಡಿಕೆಗಳನ್ನು ಈಡೇರಿಸುತ್ತಾರೆ. ಜೀವನದ ಸಂಧ್ಯಾ ಕಾಲದಲ್ಲಿ ನಿಮಗೆ ಬದುಕು ನೀಡಿದ ತಂದೆ ತಾಯಿಗಳ ರಕ್ಷಣೆ ಹಾಗೂ ಪೋಷಣೆ ನಿಮ್ಮ ಮೇಲಿರುತ್ತದೆ. ಅದನ್ನು ಚಾಚು ತಪ್ಪದೇ ಮಾಡುವುದು ನಿಮ್ಮ ಕರ್ತವ್ಯ ಕೂಡ ಆಗಿರುತ್ತದೆ. ಆದರೆ ಆಧುನಿಕ ಬದುಕಿನಿಂದಾಗಿ ಇಂದು ಎಷ್ಟೋ ತಂದೆ ತಾಯಿಗಳು ವೃದ್ದಾಶ್ರಮ ಸೇರುವಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬೇವಿನ ಬೀಜವನ್ನು ಬಿತ್ತಿ, ಮಾವಿನ ಫಸಲನ್ನು ನಿರೀಕ್ಷಿಸಲು ಸಾಧ್ಯವಿಲ್ಲವೋ ಅದೇ ರೀತಿ ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಬಿತ್ತದೇ ಅವರುಗಳನ್ನು ಒಳ್ಳೆಯವರನ್ನಾಗಿ ರೂಪಿಸುವುದು ಕೂಡ ಕಷ್ಟ ಸಾಧ್ಯ. ಆದ್ದರಿಂದ ಪೋಷಕರು ಹಾಗೂ ಶಿಕ್ಷಕರು ವಿದ್ಯಾರ್ಥಿಗಳಿಗೆ ಒಳ್ಳೆಯ ಅಂಶಗಳನ್ನು ಒತ್ತಿ ಒತ್ತಿ ಹೇಳಬೇಕು. ಆ ಮೂಲಕ ವಿದ್ಯಾರ್ಥಿ ಸಮೂಹವನ್ನು ಉತ್ತಮ ಸತ್ಪ್ರಜೆಗಳಾಗಿ ರೂಪಸಿಬೇಕೆಂದು ಹೇಳಿದರು.

Sri Adichunchanagiri Education Trust ಈ ಕಾರ್ಯಕ್ರಮದಲ್ಲಿ ಸಂಸ್ಥೆಯ ನಿರ್ದೇಶಕರಾದ ಕೊಳಿಗೆ ವಾಸಪ್ಪಗೌಡ ,ಖ್ಯಾತ ವಾಗ್ಮಿಗಳಾದ ಶ್ರೀ ಆದರ್ಶ ಗೋಖಲೆ
ಶಿವಮೊಗ್ಗ ಶ್ರೀ ಆದಿಚುಂಚನಗಿರಿ ಸ್ವತಂತ್ರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಗುರುರಾಜ್ಎಸ್. ವಿ., ಗುರುಪುರದ ಬಿಜಿಎಸ್ ಗುರುಕುಲ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸುರೇಶ್ ಎಸ್.ಹೆಚ್, ಮತ್ತು ಗಣ್ಯರು ಹಾಗೂ ವಿದ್ಯಾರ್ಥಿಗಳು,ಪೋಷಕರು ಉಪಸ್ಥಿತರಿದ್ದರು.

Karnataka Sanga Shivamogga ಯುವಜನರಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಕಾರ್ಯಾಗಾರಗಳ ಮೂಲಕ ಆಸಕ್ತಿ ಹೆಚ್ಚಿಸಬೇಕು- ಪ್ರೊ.ಶಂಕರನಾರಾಯಣ ಶಾಸ್ತ್ರಿ

0

Karnataka Sanga Shivamogga ಯುವಕರಲ್ಲಿ ಸಾಹಿತ್ಯದಲ್ಲಿ ಆಸಕ್ತಿ ಕಡಿಮೆಯಾಗುತ್ತಿದೆ ಎನ್ನುತ್ತಾರೆ. ಆದ್ದರಿಂದ ಈ ದಿನ ಕರ್ನಾಟಕ ಸಂಘ ‘ಕಥೆ/ಕವನ ಸೃಜಿಸುವ ಬಗೆ…ಹೇಗೆ?!’ ಕಾರ್ಯಾಗಾರ ಉದ್ಘಾಟಿಸಿದ ಪ್ರೋ.ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಮಾತನಾಡುತ್ತಿದ್ದರು.

ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿರುವ ವಸುಧೇಂದ್ರ, ಡಾ.ತಾರಿಣಿ ಶುಭದಾಯಿನಿ ಇವರು ಅತ್ಯಂತ ಹೆಸರು ಗಳಿಸಿರುವವರು. ಈಗಾಗಲೇ ಹಲವಾರು ಕಾರ್ಯಕ್ರಮ ಆಯೋಜಿಸಿ ಯಶಸ್ವಿ ಯಾದವರು, ಅಂತವರಿಂದ ತಮಗೆ ಸಲಹೆ ಸೂಚನೆ ಸಿಗುತ್ತಿರುವುದು ತಮ್ಮೆಲ್ಲರ ಅದೃಷ್ಟ ಅದರ ಉಪಯೋಗವನ್ನು ಪಡೆದು ಕೊಂಡು ತಾವೆಲ್ಲರೂ ಯಶಸ್ವಿಯಾಗಿ ಸಂತೋಷದಿಂದ ಈ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿರುವುದಾಗಿ ತಿಳಿಸಿದರು.

ಇಂದು ಐವತ್ತು ವರ್ಷದವರಿಗಿಂತ ಮೇಲ್ಪಟ್ಟವರಿಗೆ ಮಾತ್ರ ಸಾಹಿತ್ಯ ಎನ್ನುವಂತಾಗಿದೆ. ಆದರಿ ಇಂದು ಇಷ್ಟು ವಿದ್ಯಾರ್ಥಿಗಳು ಭಾಗವಹಿಸಿರುವುದು ಬಹಳ ಸಂತೋಷ. ವಿಶೇಷವಾಗಿ ಹೇಗೆ ಬರೆಯ ಬೇಕು ಎಂದು ಹೇಳುವುದು ಕಷ್ಟ,

ನಾವು ಕೇಳಿದ ಕಥೆ, ಕವನ ನಮ್ಮ ಮನಸ್ಸಿಗೆ ಅಭಿವ್ಯಕ್ತಿ ನೀಡಿದ್ದನ್ನು ಕಾಡುತ್ತದೆ. ಅದನ್ನು ನಮಗೆ ಅನುಭವ ನೀಡಿದ್ದಕ್ಕೆ ಭಾಷಿಕ ರೂಪ ನೀಡುವುದೆ ಕಥೆ, ಮಾನವೀಯತೆಯ ವಿಕಸನ ಸಾಹಿತ್ಯ ನೀಡುತ್ತದೆ, ಇದಕ್ಕೆ ಸಂಬಂದಿಸಿದಂತೆ ಕಲವು ಪದಗಳ ಬಳಕೆ, ಸೂಕ್ಷ್ಮತೆ, ಅರ್ಥ, ಗಳನ್ನು ವಿಸ್ತರಿಸಿಕೊಳ್ಳುವ ಬಗ್ಗೆ ವಿವರ ನೀಡಬಹುದು ಎಂದು ಡಾ.ತಾರಿಣಿ ಶುಭದಾಯಿನಿ ತಿಳಿಸಿದರು.

ಕರ್ನಾಟಕ ಸಂಘದಲ್ಲಿ ಇರುವ ಪೋಟೊದಲ್ಲಿ ಸಾಹಿತ್ಯ, ಸಾಂಸ್ಜೃತಿಕ ರಾಯಭಾರಿಗಳನ್ನು ನೋಡಲು ಸಂತೋಷ ವಾಗುತ್ತದೆ. ಅದರಲ್ಲಿ ಬರೀ ಗಂಡಸರು ಪೋಟೊಇದೆ. ಇಂದಿನ ಕಮ್ಮಟಕೆ ಹೆಚ್ಚು ವಿದ್ಯಾರ್ಥಿನಿಯರು ಭಾಗವಹಿಸಿದ್ದರಿಂದ ಮುಂದೊಂದು ದಿನ ಬರೀ ಮಹಿಳ ಲೇಖಕರೆ ಬರಬಹುದು. ಭಾಷೆ ಇಲ್ಲದ ದಿನಗಳಲ್ಲಿ ಪ್ರಾಣಿಗಳಲ್ಲಿ ತಾರತಮ್ಯ ಮಾಡಿದಾಗ ಬಲಿಷ್ಟ ಪ್ರಾಣಿಗಳು ಇದ್ದವು, ಮನುಷ್ಯ ಕೆಳಭಾಗದಲ್ಲಿ ಇದ್ದ. ಕೆಲವೇ ವರ್ಷಗಳಲ್ಲಿ ಪವಾಡದಿಂದ ಮನುಷ್ಯ ಪ್ರಥಮ ಸ್ಥಾನಕ್ಕೆ ಬಂದ. ಕಾರಣ ಎಲ್ಲಾ ಪ್ರಾಣಿ, ಪಕ್ಷಿ ತಮ್ಮದೇ ಭಾಷೆ ಕಲಿತವು ಮನುಷ್ಯ ಭಾಷೆ ಸಂಭಾಷಣೆಗೆ ಸ್ಥಿಮಿತ ಗೊಳಿಸದೆ ಕಥೆ ಹೇಳುವುದು ಕೇಳುವುದು ಪ್ರಾರಂಬಿಸಿ ಇತಿಹಾಸ ಸೃಷ್ಟಿಸಿ, ಅನುಸರಿಸಿ ವ್ಯವಹಾರ ವೃದ್ದಿಯಾಗಿ ಪ್ರಪಂಚದಲ್ಲಿ ಸುಲಭವಾಗಿ ಬದುಕು ಕಲಿತ. ಕಥೆ ಕಟ್ಟಿ ಉದ್ದಾರವಾಗಿದೆ. ಈ ರೀತಿ ಕಥೆ, ಕಾವ್ಯ ಹಾಗೂ ಕಾದಂಬರಿ ಬರೆಯುವ ಬಗ್ಗೆ ವಸುಧೇಂದ್ರ ತಿಳಿಸಿದರು.

Karnataka Sanga Shivamogga ಪ್ರಣತಿ ಪ್ರಾರ್ಥನೆ ಮಾಡಿದರು.
ಕಾರ್ಯದರ್ಶಿ ವಿನಯ್ ಶಿವಮೊಗ್ಗ ಸ್ವಾಗತಿಸಿದರು, ಮೋಹನ್ ಶಾಸ್ತ್ರಿ ಪ್ರಸ್ತಾವಿಕ ನುಡಿ ನುಡಿದರು, ಡಾ.ನಾಗಮಣಿ ನಿರೂಪಿಸಿ ಚೇತನ್ ವಂದಿಸಿದರು. ಶೇಷಾದ್ರಿಕಿನಾರ, ಚಂದ್ರುಶೇಖರ್, ವಾಗೇಶ, ಆ್ರೀನಿವಾಸ, ರಮಾಶಾಸ್ತ್ರಿ, ಮಾಜಿ ಅಧ್ಯಕ್ಷರಾದ ಮಂಜುನಾಥ್, ದಿನೇಶ್, ಭುವನ್, ಪ್ರಶಾಂತ್ ಇದ್ದರು.

S.N. Channabasappa ಆಶ್ರಯ ಮನೆ ನಿರ್ಮಾಣ ಕಾರ್ಯ ತುರ್ತಾಗಿ ಪೂರ್ಣಗೊಳಿಸಿ- ಎಸ್.ಎನ್.ಚನ್ನಬಸಪ್ಪ

0

S.N. Channabasappa ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ, ಇಂದು ಮಾನ್ಯ ವಸತಿ ಸಚಿವರಾದ ಶ್ರೀ ಜಮೀರ್ ಅಹ್ಮದ್ ಖಾನ್ ಅವರನ್ನು ಭೇಟಿಯಾಗಿ, ಶಿವಮೊಗ್ಗ ನಗರದಲ್ಲಿ ಆಶ್ರಯ ಯೋಜನೆಯಡಿ ಮನೆಗಳ ನಿರ್ಮಾಣ ಕಾರ್ಯವನ್ನು ತುರ್ತಾಗಿ ಪೂರ್ಣಗೊಳಿಸಲು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಮನವಿಯನ್ನು ಸಲ್ಲಿಸಿದರು.

S.N. Channabasappa ಭೇಟಿಯ ಸಂದರ್ಭದಲ್ಲಿ, ಗೋಪ ಶೆಟ್ಟಿಕೊಪ್ಪ ಮತ್ತು ಗೋವಿಂದಪುರ ಪ್ರದೇಶಗಳಲ್ಲಿ ನಿರ್ಮಾಣ ಹಂತದಲ್ಲಿರುವ AHP ಘಟಕದ ಮನೆಗಳ ಪ್ರಗತಿ ಹಾಗೂ ಗುಣಮಟ್ಟದ ಪರಿಶೀಲನೆಗಾಗಿ, ರಾಜೀವ್ ಗಾಂಧಿ ವಸತಿ ನಿಗಮದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಪರಶುರಾಮ ಅವರು 26.08.2025 ರಂದು ಶಿವಮೊಗ್ಗಕ್ಕೆ ಭೇಟಿ ನೀಡಲಿದ್ದು, ಯೋಜನೆಯ ಪ್ರಗತಿಯನ್ನು ತ್ವರಿತಗೊಳಿಸಲು, ಬಾಕಿ ಉಳಿದ ಮನೆಗಳ ಶೀಘ್ರ ಹಸ್ತಾಂತರಕ್ಕೆ ಮತ್ತು ಫಲಾನುಭವಿಗಳ ವಸತಿ ಕನಸನ್ನು ನನಸಾಗಿಸಲು ಮಹತ್ವದ ಹೆಜ್ಜೆಯಾಗಲಿದೆ.

Lakshminarayan Kashi ತಾಳಮದ್ದಳೆ ಕಲೆಯ ಉಳಿವಿಗೆ ಅನೇಕ ಹಿರಿಕಿರಿಯ ಕಲಾವಿದರು ಶ್ರಮಿಸಿದ್ದಾರೆ- ಲಕ್ಷ್ಮೀನಾರಾಯಣ ಕಾಶಿ

0

Lakshminarayan Kashi ಶಿವಮೊಗ್ಗದ ಶ್ರೀರಾಮ ತಾಳಮದ್ದಳೆ ಸಂಘವು
ಆಗಸ್ಟ್ ತಿಂಗಳ 17 ರಿಂದ 23 ರವರೆಗೆ
” ಭೋ ರಾಮ ಮಾಮುದ್ಧರ” ಎಂಬ ಶೀರ್ಷಿಕೆಯಲ್ಲಿ
ತಾಳಮದ್ದಳೆ ಸಪ್ತಾಹ ಕಾರ್ಯಕ್ರಮ ನಡೆಸಿತು.

ಸ್ಥಳೀಯ ರವೀಂದ್ರ ನಗರದ ಶ್ರೀಪ್ರಸನ್ನ ಗಣಪತಿ ದೇಗುಲದಲ್ಲಿ
ಈ ಶ್ರಾವಣ ತಾಳಮದ್ದಳೆ ಸಪ್ತಾಹ ನಡೆಯಿತು.
ಕೀರ್ತಿಶೇಷ ವೇದಮೂರ್ತಿ ಅ.ಪ.ರಾಮಭಟ್ಟರ ಸ್ಮರಣಾರ್ಥವಾಗಿ ಅರ್ಚಕವೃಂದದ ಸಹಕಾರದೊಂದಿಗೆ
ಸಪ್ತಾಹ ಪರಿಪೂರ್ಣ ನಡೆಯಿತು.

ಶ್ರೀರಾಮ ಪಟ್ಟಾಭಿಷೇಕ.
ಪಾದುಕಾ ಪ್ರದಾನ.
ಪಂಚವಟಿ.
ವಾಲಿ ಮೋಕ್ಷ.
ಅತಿಕಾಯ ಕಾಳಗ.
ಕುಂಭಕರ್ಣ- ಇಂದ್ರಜಿತು ವಧೆ.
ರಾವಣ ವಧೆ
ಪ್ರಸಂಗಗಳ ತಾಳಮದ್ದಳೆ , ರಸಿಕರ ಮನರಂಜಿಸಿತು.
ಯಕ್ಷಗಾನ ಭಾಗವತಿಕೆಯನ್ನ
ಹಿರಿಯ ಕಲಾವಿದ ಪರಮೇಶ್ವರ ಹೆಗಡೆ ನಡೆಸಿಕೊಟ್ಟರು.
ಸಮಾರೋಪದಲ್ಲಿ ಯಕ್ಷಗಾನ ಕಲೆಯ ಪೋಷಕ ,ಹಿರಿಯ ಸಿ,ಎಸ್.ಚಂದ್ರಶೇಖರ್ ಅವರನ್ನು ಸನ್ಮಾನಿಸಲಾಯಿತು.
” ತಮಗೆ ನೀಡಿದ ಸನ್ಮಾನವು ಶಿವಮೊಗ್ಗದ. ಎಲ್ಲ ಹಿರಿ ಕಿರಿಯ ಯಕ್ಷಗಾನ ಕಲಾಭಿಮಾನಿಗಳಿಗೆ ಸಂದ ಗೌರವ ಎಂದು ಸನ್ಮಾನಿತ ಚಂದ್ರಶೇಖರ್ ನುಡಿದರು.

Lakshminarayan Kashi ಸಮಾರಂಭದ ಅಧ್ಯಕ್ಷತೆಯನ್ನು ಶಿವಮೊಗ್ಗ ಅಭ್ಯುದಯ ಸಂಸ್ಥೆಯ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ ವಹಿಸಿದ್ದರು.
ತಾಳಮದ್ದಳೆ ಕಲಾವಂತಿಕೆಯು‌ ಸುಮಾರು ಮೂರೂವರೆ ಶತಮಾನದಿಂದ ಬೆಳೆದು ಬಂದ ಸಾಂಪ್ರದಾಯಿಕ ಕಲೆ. ಇದರ ಉಳಿವಿಗೆ ಅನೇಕ ಯಕ್ಷಗಾನ ಕಲಾವಿದರು ಶ್ರಮಿಸಿದ್ದಾರೆ. ಅವರೆಲ್ಲರ ಪ್ರಯತ್ನದ ಫಲವಾಗಿ ಇಂದು ತಾಳಮದ್ದಳೆ ಉಸಿರಾಡುತ್ತಿದೆ. ಸಾಕಷ್ಟು ಸೃಜನಶೀಲತೆಯನ್ನ, ಕಲ್ಪನಾಶಕ್ತಿ , ಮಾತುಗಾರಿಕೆ, ಭಾಷಾ ಪ್ರೌಢಿಮೆಯನ್ನ ಬೆಳೆಸುವ ಈ ಕಲೆಗೆ ಬೆಲೆ ಕಟ್ಟಲಾಗದು ” ಎಂದು ಲಕ್ಷೀನಾರಾಯಣ ಕಾಶಿ ಹೇಳಿದರು.

ಅಚ್ಯುತ ಹೆಬ್ಬಾರ್ ಮರವಂತೆ ಸ್ವಾಗತ ಬಯಸಿದರು.
ಪ್ರಶಾಂತ್ ಬೆಂಗ್ಡವಳ್ಳಿ
ಅವರಿಂದ
ಆಭಾರಮನ್ನಣೆ ನಡೆಯಿತು.

Life Insurance Corporation of India ಇಲ್ಲಿ ಗೆದ್ದ ಸ್ಪರ್ಧಿಗಳು ರಾಷ್ಟ್ರಮಟ್ಟದಲ್ಲಿ ನಂಬರ್ ಒನ್ ಆಗಲು ಕಠಿಣ ಪರಿಶ್ರಮ ಬೇಕು-ಪಿ.ಶ್ರೀನಿವಾಸ್

0

Life Insurance Corporation of India ರಾವ್ಸ ಸ್ಪೋರ್ಟ್ಸ್ ಅರೆನಾದಲ್ಲಿ ನಡೆದ ಭಾರತೀಯ ಜೀವ ವಿಮಾ ನಿಗಮ, ದಕ್ಷಿಣ ಮಧ್ಯ ವಲಯ ಮಟ್ಟದ ಪುರುಷರ ಹಾಗೂ ಮಹಿಳೆಯರ ಬ್ಯಾಡ್ಮಿಂಟನ್ ಮತ್ತು ಟೇಬಲ್ ಟೆನಿಸ್ ಕ್ರೀಡಾಕೂಟ ಅತ್ಯಂತ ಯಶಸ್ವಿಯಾಗಿ ನಡೆಯಿತು.

ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳಿಂದ ಬಂದಿದ್ದ ಎಪ್ಪತ್ತು ಕ್ರೀಡಾಪಟುಗಳ ನಡುವೆ ನಡೆದ ತೀವ್ರ ಗತಿಯ ಹಣಾಹಣಿ ನೋಡುಗರ ಮನಸೂರೆಗೊಂಡಿತು.

ಮಹಿಳೆಯರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಚೈತ್ರ ರವರು ಪ್ರಥಮ ಸ್ಥಾನವನ್ನು ಜೋತಿರ್ಮಯಿರವರು ದ್ವಿತೀಯ ಸ್ಥಾನವನ್ನು ಪಡೆದರು. ಹಾಗೆಯೇ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಜ್ಯೋತ್ಸ್ನಾರವರು ಪ್ರಥಮ ಸ್ಥಾನವನ್ನು ಸ್ಪೂರ್ತಿ ಕೊಟ್ಯಾನ್ ರವರು ದ್ವಿತೀಯ ಸ್ಥಾನವನ್ನು ಪಡೆದರು.

ಪುರುಷರ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಕೆ. ಕಿಶೋರ್ ಕುಮಾರ್ ರವರು ಪ್ರಥಮ ಸ್ಥಾನವನ್ನು ನಾಗವಿನಾಯಕ್ ರವರು ದ್ವಿತೀಯ ಸ್ಥಾನವನ್ನು ಪಡೆದರು. ಅಂತೆಯೇ ಟೇಬಲ್ ಟೆನಿಸ್ ಸ್ಪರ್ಧೆಯಲ್ಲಿ ಕಾರ್ತಿಕ್ ರವರು ಪ್ರಥಮ ಸ್ಥಾನವನ್ನು ಸಿಂಗರಾಜುರವರು ದ್ವಿತೀಯ ಸ್ಥಾನವನ್ನು ಪಡೆದು ರಾಷ್ಟ್ರಮಟಕ್ಕೆ ಆಯ್ಕೆಯಾಗಿದ್ದಾರೆ.

ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿದ ಶ್ರೀಮತಿ ಸತ್ಯವಾಣಿ ಪ್ರಾಂತೀಯ ವ್ಯವಸ್ಥಾಪಕಿ (ಮಾನವ ಸಂಪನ್ಮೂಲ)ರವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕ್ರೀಡಾಕೂಟವನ್ನು ಬಹಳ ಅಚ್ಚುಕಟ್ಟಾಗಿ ಆಯೋಜಿಸಿ ಯಾವುದೇ ಲೋಪದೋಷಗಳು ಇಲ್ಲದಂತೆ ನಡೆಸಿಕೊಟ್ಟ ಶಿವಮೊಗ್ಗ ವಿಭಾಗದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ವಂದನೆಗಳನ್ನು ಸಲ್ಲಿಸಿ ಮುಂದಿನ ಹಂತಕ್ಕೆ ಅರ್ಹರಾದ ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

ಇದೇ ಸಂದರ್ಭದಲ್ಲಿ ಮಾತನಾಡಿದ ಶಿವಮೊಗ್ಗ ವಿಭಾಗದ ಹಿರಿಯ ವಿಭಾಗಾಧಿಕಾರಿ ಶ್ರೀ ಪಿ. ಶ್ರೀನಿವಾಸರವರು ತುಂಗಾ ಭದ್ರೆಯರ ಸಂಗಮದ ತವರು ಜಿಲ್ಲೆ ಶಿವಮೊಗ್ಗದಲ್ಲಿ ನಿಗಮಕ್ಕೆ ಸಂಬಂಧಪಟ್ಟ ಕ್ರೀಡಾಕೂಟವನ್ನು ಆಯೋಜಿಸಲು ಅವಕಾಶ ಮಾಡಿಕೊಟ್ಟಿದ್ದಕ್ಕೆ ಧನ್ಯವಾದಗಳನ್ನು ಅರ್ಪಿಸಿ, ಇಲ್ಲಿ ಭಾಗವಹಿಸಿದ ಸ್ಪರ್ಧಿಗಳು ರಾಷ್ಟ್ರ ಮಟ್ಟದಲ್ಲಿ ನಂಬರ್ ಒನ್ ಆಗಲು ಕಠಿಣ ಪರಿಶ್ರಮ ಬೇಕಾಗಿರುತ್ತದೆ ಹಾಗೆಯೇ ನಾವು ಹೊಸ ವ್ಯವಹಾರದಲ್ಲಿ ಭಾರತದ ನಂಬರ್ ಒನ್ ಆಗಲು ನಿಮ್ಮಷ್ಟೇ ಶ್ರಮ ಪಡಬೇಕಾಗುತ್ತದೆ ಎಂದು ಅಭಿಪ್ರಾಯಪಟ್ಟರು.

Life Insurance Corporation of India ಕ್ರೀಡಾಕೂಟವು ಕಾರ್ಮಿಕ ಹಾಗೂ ಔದ್ಯೋಗಿಕ ಸಂಬಂಧ ವ್ಯವಸ್ಥಾಪಕಿ ಶ್ರೀಮತಿ ಕರುಣಾ, ಸಂಯೋಜಕ ಶ್ರೀ ವೆಂಕಟೇಶ್, ಕಾರ್ಯದರ್ಶಿ ಎಸ್ ಎ ರವಿ, ಮಾಲತೇಶ ಕುಲಕರ್ಣಿ, ಆನಂದ್ ಹಾಗೂ ಇತರರ ಮುಂದಾಳತ್ವದಲ್ಲಿ ವಿಭಾಗೀಯ ಕಚೇರಿಯ ಎಲ್ಲಾ ಸಿಬ್ಬಂದಿವರ್ಗದವರು ಜವಾಬ್ದಾರಿಯನ್ನು ಹೊತ್ತು ದೂರದೂರದ ಊರುಗಳಿಂದ ಬಂದ ಪ್ರತಿಯೊಬ್ಬರ ಮನಸೂರೆಗೊಂಡಿದ್ದು ಹೆಮ್ಮೆಯ ವಿಚಾರ ಎಂದು ಮಾರುಕಟ್ಟೆ ವ್ಯವಸ್ಥಾಪಕ ಶ್ರೀ ಸುಜಿತ್ ಕುಮಾರ್, ಜೆ. ಸುರೇಶ್, ಹಾಗೂ ಶರ್ಮಾ ರವರು ತಿಳಿಸಿದರು.

Minister Shivanand Patil ವಿಳಂಬ ನೀತಿ ಅನುಸರಿಸುವ ಎಪಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿ- ಸಚಿವ ಶಿವಾನಂದ ಪಾಟೀಲ್

0

Minister Shivanand Patil ಅಭಿವೃದ್ಧಿ ಯೋಜನೆಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರುವ ಹಾಗೂ ವಿಳಂಬ ನೀತಿ ಅನುಸರಿಸುವ ಎಪಿಎಂಸಿ ಅಧಿಕಾರಿಗಳನ್ನು ಅಮಾನತು ಮಾಡಿ ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಹಿರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕೃಷಿ ಮಾರುಕಟ್ಟೆ ಇಲಾಖೆ ಸಭಾಂಗಣದಲ್ಲಿ ಶನಿವಾರ ನಾಲ್ಕು ಕಂದಾಯ ವಿಭಾಗಗಳ ಎಪಿಎಂಸಿ ಅಧಿಕಾರಿಗಳ ಸಭೆ ನಡೆಸಿದ ಸಚಿವರು, ನಿಗದಿತ ಕಾಲಮಿತಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸದ ಅಧಿಕಾರಿಗಳ ವರ್ತನೆಗೆ ಬೇಸರ ವ್ಯಕ್ತಪಡಿಸಿದರು.

ಮೂಲ ಸೌಕರ್ಯ ನಿರ್ಮಾಣ ಮತ್ತು ಕೋಲ್ಡ್‌ ಸ್ಟೋರೇಜ್‌ ಯೋಜನೆಗಳ ಪ್ರಗತಿ ಪರಿಶೀಲನೆ ನಡೆಸಿದ ಸಚಿವರು, ಒಂದು ವಾರದಲ್ಲಿ ಮತ್ತೆ ಸಭೆ ಕರೆಯಲಿದ್ದು, ಇದುವರೆಗೆ ನಬಾರ್ಡ್‌, ಐಆರ್‌ಡಿಎಫ್‌ ನಿಂದ ಎಷ್ಟು ನೆರವು ಲಭ್ಯವಾಗಿದೆ.

ಈ ನೆರವು ಮತ್ತು ಎಪಿಎಂಸಿ ಅನುದಾನದಲ್ಲಿ ಯಾವ ಯಾವ ಯೋಜನೆಗಳನ್ನು ಕೈಗೊಳ್ಳಲಾಗಿದೆ. ಅವುಗಳ ಸ್ಥಿತಿಗತಿ ಏನು? ಯಾವ ಯೋಜನೆಗಳು ಅಗತ್ಯವಿಲ್ಲ ಎಂಬ ಬಗ್ಗೆ ವರದಿ ಕೊಡಿ ಎಂದು ಸೂಚನೆ ನೀಡಿದರು.

ಏಳು ಹೊಸ ಎಪಿಎಂಸಿಗಳು ಅಸ್ತಿತ್ವಕ್ಕೆ ಬಂದಿವೆ. ಹೊಸ ಎಪಿಎಂಸಿಗಳನ್ನು ಹೊರತುಪಡಿಸಿ ಇತರ ಎಪಿಎಂಸಿಗಳಲ್ಲಿ ಇದುವರೆಗೆ ಏಕೆ ಮೂಲ ಸೌಕರ್ಯ ನಿರ್ಮಿಸಿಲ್ಲ. ರಸ್ತೆ, ಚರಂಡಿ ಮತ್ತು ಫ್ಲಾಟ್‌ಫಾರ್ಮಗಳು ಅಗತ್ಯವಿದ್ದು, ಯಾವ ಯಾವ ಎಪಿಎಂಸಿಗಳಲ್ಲಿ ಮೂಲಸೌಕರ್ಯ ಇದುವರೆಗೆ ಆಗಿಲ್ಲ ಎಂದು ಪ್ರಶ್ನಿಸಿದರು. ಕಾಂಕ್ರೀಟ್‌ ರಸ್ತೆಗಳನ್ನು ಮಳೆಗಾಲದ ಸಮಯದಲ್ಲೇ ನಿರ್ಮಾಣ ಮಾಡುವುದು ಸೂಕ್ತ. ವಿಳಂಬಕ್ಕೆ ಮಳೆಗಾಲದ ನೆಪ ನೀಡಬೇಡಿ ಎಂದರು.

ಅನುದಾನ ಲಭ್ಯ ಇದೆ ಎಂಬ ಕಾರಣಕ್ಕೆ ಗೋಡೌನ್‌ಗಳನ್ನು ನಿರ್ಮಾಣ ಮಾಡಬೇಡಿ. ಬಹುತೇಕ ಎಪಿಎಂಸಿಗಳಲ್ಲಿ ಗೋಡೌನ್‌ಗಳು ಖಾಲಿ ಇವೆ. ಇಂತಹ ಗೋಡೌನ್‌ಗಳನ್ನು ಕಡಿಮೆ ದರದಲ್ಲಿ ಬಾಡಿಗೆ ಕೊಡುತ್ತಿದ್ದೇವೆ. ಅಗತ್ಯ ಇರುವ ಕಾಮಗಾರಗಳನ್ನು ಮಾತ್ರ ಕೈಗೊಳ್ಳಬೇಕು ಎಂದು ಸೂಚಿಸಿದರು.

ಎಲ್ಲ ವಿಭಾಗಗಳಲ್ಲಿ ಎಷ್ಟು ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಎಷ್ಟು ಟೆಂಡರ್‌ ಕರೆಯಲಾಗಿದೆ ಎಂಬ ಬಗ್ಗೆ ವರದಿ ಕೊಡಿ. ಅನುಮೋದನೆ ದೊರಕಿದ್ದರೂ ಅನಗತ್ಯ ಎಂದು ಕಂಡುಬಂದರೆ ಅಂತಹ ಕಾಮಗಾರಗಳನ್ನು ಸ್ಥಗಿತಗೊಳಿಸಿ, ಒಂದು ವೇಳೆ ಟೆಂಡರ್‌ ಆಗಿದ್ದರೆ ಮಾತ್ರ ಮುಂದುವರಿಸಿ ಎಂದು ಸೂಚಿಸಿದರು.

ಎಪಿಎಂಸಿಗಳ ಆಸ್ತಿ ರಕ್ಷಣೆ ಮಾಡುವುದು ಅಧಿಕಾರಿಗಳ ಜವಾಬ್ದಾರಿ, ಅನೇಕ ಕಟ್ಟಡಗಳು ನಿರ್ವಹಣೆ ಕೊರತೆಯಿಂದ ಹಾಳಾಗುತ್ತಿವೆ. ಎಪಿಎಂಸಿಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನೇ ಲೋಪ ಗುರುತಿಸಿ ಸೂಚನೆ ನೀಡಿದ್ದೇನೆ. ಕಟ್ಟಡಗಳ ಸಂರಕ್ಷಣೆ ಕಡೆಗೂ ಅಧಿಕಾರಿಗಳು ಗಮನ ನೀಡಬೇಕು ಎಂದು ಹೇಳಿದರು.

Minister Shivanand Patil ಮುಂದಿನ ಸಭೆ ವೇಳೆಗೆ ಪ್ರತಿಯೊಂದು ಎಪಿಎಂಸಿಗಳ ವರದಿ ಬೇಕು. ಏನೇನು ಕೆಲಸ ಆಗಬೇಕಿದೆ? ಈಗ ಕೈಗೊಂಡಿರುವ ಕಾಮಗಾರಿಗಳು ಯಾವ ಕಾರಣಕ್ಕೆ ವಿಳಂಬವಾಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು. ಇದುವರೆಗೂ ಮೂಲ ಸೌಕರ್ಯಗಳನ್ನು ನಿರ್ಮಿಸಲು ಸಾಧ್ಯವಾಗಿಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಹೆಚ್ಚುವರಿ ನಿರ್ದೇಶಕಿ ಪುಷ್ಪಾ, ಜಂಟಿ ನಿರ್ದೇ್ಶಕ ಶ್ರೀನಿವಾಸ ರೆಡ್ಡಿ, ಅಧೀಕ್ಷಕ ಅಭಿಯಂತರ ರಘುನಂದನ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Kateel Ashok Pai Memorial College ಕಟೀಲು ಅಶೋಕ್ ಪೈ ಸ್ಮಾರಕ ಕಾಲೇಜಿನಲ್ಲಿ ಸಂಸ್ಕೃತ ಸರ್ಟಿಫಿಕೆಟ್ ಕೋರ್ಸ್ ಆರಂಭ- ವಿಜೇಂದ್ರ ರಾವ್

0

Kateel Ashok Pai Memorial College ಶಿವಮೊಗ್ಗ ನಗರದ ಪ್ರತಿಷ್ಠಿತ ಕಟೀಲು ಅಶೋಕ್ ಪೈ ಮೆಮೋರಿಯಲ್ ಕಾಲೇಜ್ ನಲ್ಲಿ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ, ಗೃಹಿಣಿಯರಿಗೆ, ಉದ್ಯೋಗಸ್ಥರಿಗೆ ಸರಳವಾಗಿ ಸಂಸ್ಕತದಲ್ಲಿ ಮಾತನಾಡುವ, ಬರೆಯುವ ಹಾಗೂ ಓದುವ ಸರ್ಟಿಫಿಕೇಟ್ ಕೋರ್ಸ ನ್ನು ಪ್ರಾರಂಭಿಸಲು ದೆಹಲಿಯ ಕೆಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯವು ಅನುಮತಿಯೊಂದಿಗೆ ಮಾನ್ಯತೆಯನ್ನು ನೀಡಲಾಗಿದೆ.

ಇದೇ ಅಕ್ಟೋಬರ್ ತಿಂಗಳಿಂದ ಸಂಸ್ಕೃತ ಕಲಿಕಾ ತರಗತಿಯನ್ನು ಆರಂಭಿಸಲಾಗುತ್ತದೆ.

ಪ್ರತೀ ಬುದವಾರ, ಗುರುವಾರ ಮತ್ತು ಶುಕ್ರವಾರ ದಂದು ಸಂಜೆ 6.30 ರಿಂದ 8 ಗಂಟೆಯವರೆಗೆ ಟಿ.ಎಸ್.ಬಿ. ವೃತ್ತ (ಗೋಪಿ ಸರ್ಕಲ್) ಹಿಂಭಾಗ ಸವಾರ್ ಲೇನ್ ರಸ್ತೆಯಲ್ಲಿರುವಿರುವ ಮಾನಸ ಟ್ರಸ್ಟ್ ನ ವತಿಯಿಂದ ನಡೆಸುತ್ತಿರುವ ಮನುಸ್ಪೂರ್ತಿ ಕಲಿಕಾ ತರಬೇತಿ ಕೇಂದ್ರದಲ್ಲಿ ತರಗತಿಗಳನ್ನು ನಡೆಸಲಾಗುವುದು.

Kateel Ashok Pai Memorial College 15 ವರ್ಷ ಮೇಲ್ಪಟ್ಟ ಯಾರೇ ಆಗಲಿ ಈ ಕೋರ್ಸ್ ಗೆ ಸೇರಬಹುದು. ಸಂಸ್ಕೃತದ ಯಾವುದೇ ಪರಿಚಯವಿಲ್ಲದವರು ಕೂಡ ಈ ತರಗತಿಗೆ ಸೇರಿ ಸುಲಭವಾಗಿ ಸಂಸ್ಕೃತವನ್ನು ಕಲಿಯಬಹುದು ಆಸಕ್ತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ, 9448288483 ಅಥವಾ 9480034495 ಸಂಖ್ಯೆಗೆ ಸಂಪರ್ಕಿಸುವಂತೆ ತಿಳಿಸಿದ್ದಾರೆ.

Breaking News ಧರ್ಮಸ್ಥಳ ಶವ‌ ಹೂತಿಟ್ಟ ಪ್ರಕರಣ. ಮುಸುಕುಧಾರಿ ಅರೆಸ್ಟ್, ಮುಸುಕು ತೆಗೆದಎಸ್ ಐ ಟಿ

0

Breaking News ಇಷ್ಟೂ ದಿನದವರೆಗೂ ಧರ್ಮಸ್ಥಳ ಪ್ರದೇಶದಲ್ಲಿ ಶವ ಹೂತಿಟ್ಟ ಪ್ರಕರಣಕ್ಕೆ ಮತ್ತೊಂದು ತಿರುವು ಸಿಕ್ಕಿದೆ.
ಸೌಜನ್ಯ ಕೊಲೆ ಪ್ರಕರಣ ಮತ್ತು ಅನನ್ಯ ಭಟ್ ನಾಪತ್ತೆ ಪ್ರಕರಣವೂ ಕೂಡ ಸಾಕಷ್ಟು ಸುದ್ದಿಮಾಡಿದ್ದವು.
ಹದಿಮೂರು ದಿನಗಳ ಶವದ ಗುಂಡಿ ಅಗೆಯುವ ಪ್ರಕ್ರಿಯೆ ನಿರೀಕ್ಷಿತ ಫಲಿತಾಂಶ ನೀಡಲಿಲ್ಲ.
ಕೇವಲ ಒಂದಿಷ್ಟು ಮೂಳೆಗಳು ಸಿಕ್ಕವು.
ನೆಲದಮೇಲೆ ಕುಳಿತ ಭಂಗಿಯ ಅಸ್ಥಿಪಂಜರ ಸಿಕ್ಕಿತ್ತು.ಆದರೆ ಅದು ಗಂಡಿಸಿನದಾಗಿತ್ತು.
ಒಂದು ತಲೆಬುರುಡೆಯನ್ನೂ ಮುಸುಕುಧಾರಿ ತೋರಿಸಿದ್ದ.
ಆತ ತೋರಿಸಿದ ಸ್ಥಳಗಳಲ್ಲಿ ಉತ್ಖನನ ಮಾಡಲಾಯಿತು. ಯಾವ ಮೂಳೆ ಅವಶೇಷವೂ ಸಿಗಲಿಲ್ಲ.
ಈ ನಡುವೆ ಎಸ್ ಐಟಿ ಯು ಆತನನ್ನೇ ಈಗ ಬಂಧಿಸಿದೆ .ವಿಚಾರಣೆ
ಆರಂಭಿಸಿದೆ.
Breaking News ಮುಸುಕುಧಾರಿಯಾಗಿ
ಎಸ್ ಐಟಿ ಯೊಂದಿಗೆ ಓಡಾಡುತ್ತಿದ್ದ ಆತ ಸಾರ್ವಜನಿಕರಿಗೆ ಕುತೂಹಲದ ವ್ಯಕ್ತಿಯಾಗಿಬಿಟ್ಟಿದ್ದ.ಈಗ ಆತನ ಮುಸುಕು ತೆಗೆಯಲಾಗಿದೆ. ಆತನ ಹೆಸರು ‘ಚಿನ್ನಯ್ಯ’ ಎಂದು ಗುರುತಿಸಲಾಗಿದೆ.