Thursday, December 11, 2025
Thursday, December 11, 2025
Home Blog Page 1838

ತಜ್ಞರ ಸಲಹೆ ಆಧರಿಸಿ ಶಾಲೆಗಳು ಪ್ರಾರಂಭ? : ಸಚಿವ ಬಿ.ಸಿ.ನಾಗೇಶ್

0

ರಾಜ್ಯದಲ್ಲಿ ಒಂದರಿಂದ ಐದನೇ ತರಗತಿ ಗಳನ್ನು ಪುನರಾರಂಭಿಸಲು ಕುರಿತಂತೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತದೆ. ಕೋವಿಡ್ ಕಾರಣದಿಂದಾಗಿ ಶಾಲೆ ತಡವಾಗಿ ಆರಂಭಗೊಳ್ಳುತ್ತಿರುವುದರಿಂದ ಶೈಕ್ಷಣಿಕ ಪಠ್ಯಕ್ರಮ ಕುಂಠಿತಗೊಂಡಿದೆ. ಹೀಗಾಗಿ ಶನಿವಾರ ಭಾನುವಾರವೂ ತರಗತಿ ನಡೆಸುವ ಸಾಧ್ಯತೆಯಿದೆ ಎಂಬುದಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಬಿ.ಸಿ .ನಾಗೇಶ್ ತಿಳಿಸಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿ. ಸಿ. ನಾಗೇಶ್ ರವರು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನೇತೃತ್ವದಲ್ಲಿ ಇನ್ನೆರಡು ದಿನಗಳಲ್ಲಿ ಪ್ರಾಥಮಿಕ ಶಾಲೆಗಳ ಪುನರಾರಂಭ ಕುರಿತಂತೆ ಸಭೆ ನಡೆಯಲಿದೆ. ಆ ಸಭೆಯಲ್ಲಿ ಕೋವಿಡ್ ಉಸ್ತುವಾರಿಗಳು, ತಾಂತ್ರಿಕ ಸಲಹಾ ಸಮಿತಿ, ತಜ್ಞರು,ನೀಡುವಂತ ಸಲಹೆಗಳು ಆಧಾರದ ಮೇಲೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಶೃಂಗೇರಿ ದಸರಾ ವೈಶಿಷ್ಟ್ಯತೆ – ಡಾ.ಪ್ರಶಾಂತ್ ಶೃಂಗೇರಿ, ಮೈಸೂರು.

0

ಭಾರತದಾದ್ಯಂತ ಒಂಬತ್ತು ದಿನಗಳ ದಸರಾ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇಸಾಮಾನ್ಯವಾದ ವಿಚಾರ. ಕರ್ನಾಟಕದಲ್ಲಿ ಶೃಂಗೇರಿ ದಸರಾ ತನ್ನದೇ ಆದ ವಿಶಿಷ್ಟತೆಯನ್ನು ಹೊಂದಿದೆ. ಸಾಧಾರಣವಾಗಿ ಶೃಂಗೇರಿ ದಸರಾ ವಿವರಣೆಗಳನ್ನು ಮಾಧ್ಯಮದವರು ನೀಡುವಾಗ ಧಾರ್ಮಿಕ ಆಚರಣೆಗಳನ್ನು ಮಾತ್ರ ಕೇಂದ್ರೀಕರಿಸುತ್ತಾರೆ. ಶೃಂಗೇರಿ ಮಠವನ್ನು ಧಾರ್ಮಿಕ-ಸಾಮಾಜಿಕ ಪಾರಂಪರಿಕ ಮತ್ತು ಐತಿಹಾಸಿಕ ಹಿನ್ನೆಲೆಯಲ್ಲಿ ವಿತರಿಸಬಹುದಾಗಿದೆ.

ಶೃಂಗೇರಿ ಗುರುಪರಂಪರೆಯ 12ನೇ ಗುರುಗಳಾಗಿದ್ದ ಶ್ರೀ ವಿದ್ಯಾರಣ್ಯ ಮಹಾಸ್ವಾಮಿಗಳು ವಿಜಯನಗರ ಮಹಾಸಾಮ್ರಾಜ್ಯ ನಿರ್ಮಾಣದಲ್ಲಿ ವಹಿಸಿದ ಪಾತ್ರದಿಂದ 14ನೇ ಶತಮಾನದಲ್ಲಿ ಶೃಂಗೇರಿ ಮಠಕ್ಕೆ ಅಪಾರವಾದ ಗೌರವ ಪ್ರಾಪ್ತಿಯಾಯಿತು. ಪರಕೀಯ ಶಕ್ತಿಗಳಿಂದ ಭಾರತೀಯ ಸಂಸ್ಕೃತಿ ಧರ್ಮ ಗಳಿಗೆ ಧಕ್ಕೆ ಉಂಟಾಗಿ ಅರಾಜಕತೆ ಉಂಟಾಗಿದ್ದ ಸಂದಿಗ್ಧ ಪರಿಸ್ಥಿತಿಯಲ್ಲಿ ಭಾರತೀಯ ಮೌಲ್ಯಗಳ ಸಂರಕ್ಷಣೆಯ ಪಣತೊಟ್ಟ ಸಂಗಮ ಸಹೋದರರಾದ ಹಕ್ಕ-ಬುಕ್ಕರು ಮಾತಂಗ ಪರ್ವತದಲ್ಲಿ ತಪಸ್ಸು ಮಾಡುತ್ತಿದ್ದ ಶ್ರೀ ವಿದ್ಯಾರಣ್ಯರ ಮರೆ ಹೊಕ್ಕು ಅವರ ಕೃಪಾರ್ಶೀವಾದ ಪಡೆದರು. ಶ್ರೀ ವಿದ್ಯಾರಣ್ಯರ ಮಾರ್ಗದರ್ಶನದಿಂದ 1336ರಲ್ಲಿ ವಿಜಯನಗರವೆಂಬ ಮಹಾಸಾಮ್ರಾಜ್ಯ ನಿರ್ಮಿಸಿ ಅದಕ್ಕೆ ಗುರು ವಿದ್ಯಾರಣ್ಯರ ಸ್ಮರಣಾರ್ಥ “ವಿದ್ಯಾನಗರ” ಎಂದು ನಾಮಕರಣ ಮಾಡಿದರು. ಶೃಂಗೇರಿ ಮಠದ ಶ್ರೀ ವಿದ್ಯಾರಣ್ಯರ ಆಶೀರ್ವಾದದಿಂದಲೇ ತಮಗೆ ಸಿಂಹಾಸನ ಪ್ರಾಪ್ತಿಯಾಯಿತು ಎಂದು ವಿದ್ಯಾರಣ್ಯರ ಬಲವನ್ನು ವರ್ಣಿಸುವ ನೂರಾರು ಶಾಸನಗಳು ಇಂದಿಗೂ ಶೃಂಗೇರಿ ಮಠ ಮತ್ತು ವಿಜಯನಗರ ಸಾಮ್ರಾಜ್ಯದ ಗುರು-ಶಿಷ್ಯ ಸಂಬಂಧವನ್ನು ಸಾರುತ್ತದೆ. ವಿಜಯನಗರದ ದೊರೆಗಳು ವಿದ್ಯಾರಣ್ಯರಿಗೆ “ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ “ಎಂದು ಬಿರುದಿನಿಂದ ಗೌರವಿಸಿದರು. ಹರಿಹರ ಬುಕ್ಕ ರಾಯರು ವಿದ್ಯಾರಣ್ಯ ರನ್ನು ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ ಕರೆತಂದು ಗೌರವಿಸಿದರೆಂದು ಇಂದಿಗೂ ಹಂಪಿಯ ವಿರೂಪಾಕ್ಷ ದೇವಾಲಯದ ಛಾವಣಿಯಲ್ಲಿರುವ ಸುಮಾರು 30 ಅಡಿ ಬಿತ್ತಿಚಿತ್ರ ಸಾರುತ್ತಿದೆ. ವಿಜಯನಗರದ ವೈಭವವನ್ನು ಸಾರುವ ಕಲೆ- ಸಾಹಿತ್ಯ, ಸಂಗೀತ, ಸಂಸ್ಕೃತಿ, ಪರಂಪರೆಗಳ ಉತ್ಸವ ವಿದ್ಯಾರಣ್ಯರ ಮಾರ್ಗದರ್ಶನದಿಂದ ವಿಜಯನಗರದ ರಾಜರು ಆರಂಭಿಸಿದರು. ಹಂಪಿಯ ಮಹಾನವಮಿ ದಿಬ್ಬದ ಮೇಲೆ ನಡೆಯುತ್ತಿದ್ದ ವೈಭವೋಪೇತ ಕಾರ್ಯಕ್ರಮದ ಉತ್ಸವ ನಮ್ಮ ನಾಡಿನ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿತ್ತು. ವಿಜಯನಗರದ ದೊರೆಗಳು ತಮ್ಮ ವಿಜಯೋತ್ಸವದ ಸಂತೋಷದಲ್ಲಿ ಶೃಂಗೇರಿ ಮಠಕ್ಕೆ ಭೂದಾನವನ್ನು ಮಾಡಿದರು. ಗುರು ವಿದ್ಯಾಶಂಕರ ಅದ್ವಿತೀಯ ದೇವಾಲಯವನ್ನು ಶೃಂಗೇರಿ ಮಠದಲ್ಲಿ ಕಟ್ಟಿಸಿಕೊಟ್ಟರು. ಶೃಂಗೇರಿ ಮಠಕ್ಕೆ ವಿಜಯನಗರದ ಸಾಮ್ರಾಜ್ಯ ಇದ್ದ ಐತಿಹಾಸಿಕ ಸಂಬಂಧವೂ ಶೃಂಗೇರಿ ಮಠದ ಹಲವಾರು ಸಂಪ್ರದಾಯ, ಆಚರಣೆ ಹಾಗೂ ಉತ್ಸವಗಳ ಉಗಮಕ್ಕೆ ಪ್ರೇರಣೆಯಾಯಿತು. ವಿಜಯನಗರದ ಹಕ್ಕ-ಬುಕ್ಕರು ವಿದ್ಯಾರಣ್ಯರಿಗೆ ಕೊಟ್ಟ ರಾಜ ಲಾಂಛನವನ್ನು ಗೌರವದಿಂದ ಶೃಂಗೇರಿ ಮಠದಲ್ಲಿ ದಸರಾ ದರ್ಬಾರ್ ಆಚರಣೆ ಆರಂಭವಾಯಿತು. ವಿಜಯನಗರದ ಸ್ಥಾಪನೆಯಾಗಿ ಇಂದಿಗೆ ಸುಮಾರು ಆರೂವರೆ ಶತಮಾನಗಳು ಕಳೆದರೂ ಇಂದಿಗೂ ಐತಿಹಾಸಿಕ ಧಾರ್ಮಿಕ ಆಚರಣೆಯು ಶೃಂಗೇರಿ ಮಠದ ದಸರಾ ಹಬ್ಬದ ವಿಶೇಷತೆಯಾಗಿದೆ. ಶಾರದಾ ಮಾತೆಯ 9 ಅಲಂಕಾರಗಳು ಹೋಮಹವನ ಪಾರಾಯಣ ಇತ್ಯಾದಿ ಧಾರ್ಮಿಕ ಆಚರಣೆಗಳು ಸಾಧಾರಣವಾಗಿ ನಮ್ಮ ನಾಡಿನ ಎಲ್ಲ ಮಠ-ಮಂದಿರ ಹಾಗೂ ಧಾರ್ಮಿಕ ಕ್ಷೇತ್ರಗಳಲ್ಲಿ ಕಂಡುಬರುತ್ತದೆ. ಆದರೆ ಈ ದರ್ಬಾರ ಆಚರಣೆಯು ವಿಜಯನಗರದ ದೊರೆಗಳು ವಿಜಯನಗರ ವೆಂಬ ಮಹಾ ಸಾಮ್ರಾಜ್ಯವನ್ನು ಕಟ್ಟಲು ಕಾರಣೀಭೂತರಾದ ಶ್ರೀ ವಿದ್ಯಾರಣ್ಯರಿಗೆ ಕೊಟ್ಟ ರಾಜ್ಯ ಗೌರವದ ಸಂಕೇತವಾಗಿದ್ದು ಕನ್ನಡನಾಡಿನ ಇತಿಹಾಸ, ಪರಂಪರೆ ಹಾಗೂ ಸಂಸ್ಕೃತಿಯನ್ನು ಸಾರುತ್ತದೆ.ಶೃಂಗೇರಿ ದಸರಾ ವೈಶಿಷ್ಟ್ಯತೆ. ವಿಜಯನಗರದ ದೊರೆಗಳ ನಂತರ ಕೆಳದಿ, ತ್ರಾವೆಂಕೂರ್, ಮೈಸೂರು, ಸುರಪುರ, ಜಮಖಂಡಿ, ನೇಪಾಳ, ಬರೋಡ ಮುಂತಾದ ರಾಜಸಂಸ್ಥಾನಗಳು ಶೃಂಗೇರಿ ಜಗದ್ಗುರುಗಳನ್ನು ಅಪಾರವಾಗಿ ಗೌರವಿಸುವ ಮಾರ್ಗದರ್ಶನ ಪಡೆದರೆಂದು ಪತ್ರಾಗಾರದ ಇಲಾಖೆಯ ದಾಖಲೆಗಳು ತಿಳಿಸುತ್ತವೆ. ಇಂದಿಗೂ ಶೃಂಗೇರಿ ದರ್ಬಾರ್ ನಲ್ಲಿ ಭಾರತದ ಹಲವಾರು ರಾಜವಂಶಸ್ಥರು ಗುರುಕಾಣಿಕೆಯನ್ನು ಸಲ್ಲಿಸುವುದು ವಿಶೇಷವಾಗಿದೆ. ಯಾವ ಸ್ವರ್ಣ ಸಿಂಹಾಸನವನ್ನು ಶ್ರೀ ವಿದ್ಯಾರಣ್ಯರು ಹರಿಹರ ಬುಕ್ಕರಾಯರಿಗೆ ಅಲಂಕರಿಸಲು ಸಹಾಯಮಾಡಿದ್ದರೊ ಆ ಸಿಂಹಾಸನವು ಪಾಂಡವರಿಗೆ ಮತ್ತು ವಿಕ್ರಮಾದಿತ್ಯನಿಗೆ ಸೇರಿದ್ದು ಎಂಬ ಪ್ರತೀತಿ ಇದೆ. ಇದೇ ಸ್ವರ್ಣ ಸಿಂಹಾಸನವನ್ನು ಮೈಸೂರು ದೊರೆಗಳು ವಶಪಡಿಸಿಕೊಂಡು ಮೈಸೂರು ಸಂಸ್ಥಾನವನ್ನು ಸಂಸ್ಥಾನವನ್ನು ಕಟ್ಟಿದ್ದರಿಂದ ಸಹಜವಾಗಿವೆ ಮೈಸೂರಿನ ಎಲ್ಲಾ ದೊರೆಗಳು ಶೃಂಗೇರಿ ಗುರುಗಳನ್ನು ರಾಜಗುರುಗಳು ಎಂದು ಗೌರವಿಸುವುದನ್ನು ನಾವು ಇತಿಹಾಸದ ದಾಖಲೆಗಳಲ್ಲಿ ಕಾಣಬಹುದು. ಇಂದಿಗೂ ಶೃಂಗೇರಿ ಜಗದ್ಗುರುಗಳವರು ಇಂದಿಗೂ ವಿಜಯದಶಮಿ ಮೆರವಣಿಗೆಯಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರು ಭಕ್ತಿಪೂರ್ವಕವಾಗಿ ಅರ್ಪಿಸಿದ ಸ್ವರ್ಣ ಪಾಲಕಿಯನ್ನು ಅನುಭವಿಸುವುದನ್ನು ನಾವು ಕಾಣಬಹುದು. ಶೃಂಗೇರಿ ಜಗದ್ಗುರುಗಳಾಗಿದ್ದ ನರಸಿಂಹ ಭಾರತೀ ಸ್ವಾಮಿಗಳವರು ಚಾಮರಾಜ ಒಡೆಯರಿಗೆ ಬಳುವಳಿಯಾಗಿ ಆಶೀರ್ವದಿಸಿದ ನವರತ್ನ ಕೀಟವನ್ನು ಇಂದಿಗೂ ಮೈಸೂರು ದಸರಾ ಆಚರಣೆಯಲ್ಲಿ ಪೂಜಿಸುವುದು ಗುರು-ಶಿಷ್ಯ ಬಾಂಧವ್ಯಕ್ಕೆ ಪ್ರತ್ಯಕ್ಷ ಪ್ರಮಾಣವಾಗಿ ನಿಲ್ಲುತ್ತದೆ.

ಶೃಂಗೇರಿ ದಸರಾ ವೈಶಿಷ್ಟತೆ


ಶೃಂಗೇರಿ ಜಗದ್ಗುರುಗಳವರು ದರ್ಬಾರ್ ನಲ್ಲಿ ಅಲಂಕರಿಸುವ ರಜತ ಸಿಂಹಾಸನ ಜಮಖಂಡಿ ರಾಮಚಂದ್ರ, ಪಟವರ್ಧನ ಮಹಾರಾಜರ ಕಾಣಿಕೆಯಾಗಿದೆ. ಜಮಖಂಡಿ,ಕೋಚಿ, ಬರೋಡ ವಿಜಯನಗರ ಮುಂತಾದ ಸಂಸ್ಥಾನಗಳು ಕೊಟ್ಟ ಆಭರಣಗಳನ್ನು ಧರಿಸುವುದು ಶೃಂಗೇರಿ ಮಠ ಭಾರತದ ಮಧ್ಯಕಾಲೀನ ರಾಜಮನೆತನಕ್ಕೆ ಇರುವ ನಂಟಿನ ಇತಿಹಾಸವನ್ನು ಸಾರುತ್ತದೆ. ಟಿಪ್ಪು ಕೊಟ್ಟ ಮಕರ ಕಂಠಿಹಾರ, ಮದನ ವಿಲಾಸ ಸನ್ನಿಧಾನ ಅರ್ಪಿಸಿದ ವಜ್ರದ ಹಾರ, ವಿಜಯನಗರದ ದೊರೆಗಳು ಅರ್ಪಿಸಿದ ಸ್ವರ್ಣ ಪಾದಕ್ಕೆ ಮುಂತಾದ ಕೊಡುಗೆಗಳನ್ನು ಈ ದರ್ಬಾರ್ ಆಚರಣೆಯಲ್ಲಿ ನಾವು ಕಾಣಬಹುದು. ಶೃಂಗೇರಿ ಜಗದ್ಗುರುಗಳ ದರ್ಬಾರ್ ಆಚರಣೆಯು ಸಂಸ್ಕೃತದಲ್ಲಿ ಘೋಷಿಸುವ ಪಾಠಕ ಗಳಲ್ಲಿನ ವಿದ್ಯಾನಗರ ರಾಜ್ಯಧಾನಿ ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ ಎಂಬ ಮಹಾ ಬಿರುದಾವಳಿಗಳು ಕರ್ನಾಟಕ ಸಾಮ್ರಾಜ್ಯ ವೆಂಬ ಕನ್ನಡ ನಾಡನ್ನು ಕಟ್ಟುವಲ್ಲಿ ಶೃಂಗೇರಿ ಪೀಠದ ಪಾತ್ರವನ್ನು ವರ್ಣಿಸುತ್ತ ಶೃಂಗೇರಿ ಮಠ ಕನ್ನಡ ನಾಡಿನ ಉದಯಕ್ಕೂ ಇರುವ ಸಂಬಂಧವನ್ನು ಸಾರುತ್ತದೆ.

ವಿದೇಶಿ ಪ್ರವಾಸಿಗರಿಗೆ ಸಂತಸದ ಸುದ್ದಿ

0

8 ತಿಂಗಳ ನಂತರ ಭಾರತವು ಅಂತಿಮವಾಗಿ ತನ್ನ ಗಡಿಯನ್ನು ವಿದೇಶಿ ಪ್ರವಾಸಿಗರಿಗೆ ತೆರೆದಿದೆ. ಶುಕ್ರವಾರದಿಂದ ವಿದೇಶಿ ಪ್ರವಾಸಿಗರು ವಿಶೇಷ ವಿಮಾನದಲ್ಲಿ ಭಾರತಕ್ಕೆ ಭೇಟಿ ನೀಡಬಹುದು, ದೈನಂದಿನ ನಿಗದಿತ ವಿಮಾನಗಳಲ್ಲಿ ಪ್ರಯಾಣಿಸುವವರು ಇನ್ನೊಂದು ತಿಂಗಳು ಕಾಯಬೇಕಾಗುತ್ತದೆ ಎಂದು ಗೃಹಸಚಿವಾಲಯವು ಗುರುವಾರ ಘೋಷಿಸಿತು. ಇದರೊಂದಿಗೆ ಕೋವಿಡ್ 19ರ ಕಾರಣದಿಂದ ಮಾರ್ಚ್ 15, 2020 ರಿಂದ ವೀಸಾ ಮತ್ತು ಅಂತರಾಷ್ಟ್ರೀಯ ಪ್ರಯಾಣದ ಮೇಲೆ ನಿರ್ಬಂಧನೆಗಳನ್ನು ವಿಧಿಸಲಾಗಿತ್ತು.ವಿಶೇಷ ವಿಮಾನಗಳನ್ನು ಹೊರತುಪಡಿಸಿ ಇತರ ವಿಮಾನಗಳ ಮೂಲಕ ಭಾರತಕ್ಕೆ ಪ್ರವೇಶಿಸುವ ವಿದೇಶಿ ಪ್ರವಾಸಿಗಳಿಗೆ ಹೊಸ ಪ್ರವಾಸಿ ವೀಸಾದಲ್ಲಿ ನವೆಂಬರ್ 15, 2021 ರಿಂದ ಅನ್ವಯವಾಗುವಂತೆ ಮಾಡಲಾಗಿದೆ. ವಿವಿಧ ಹರಿವುಗಳನ್ನು ಪರಿಗಣಿಸಿದ ನಂತರ ಸಚಿವಾಲಯವು ವಿಶೇಷ ವಿಮಾನಗಳ ಮೂಲಕ ಭಾರತಕ್ಕೆ ಬರುವ ವಿದೇಶಿಗರಿಗೆ ಹೊಸ ಪ್ರವಾಸಿ ವೀಸಾವನ್ನು ನೀಡಲು ಅಕ್ಟೋಬರ್ 15 , 2021 ರಿಂದ ಜಾರಿಗೆ ಬರುವಂತೆ ಆರಂಭಿಸಲು ತೀರ್ಮಾನಿಸಿದೆ ಎಂದು ಗೃಹ ಸಚಿವಾಲಯವು ತಿಳಿಸಿದೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ , ಮಂತ್ರಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ, ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ವಿವಿಧ ರಾಜ್ಯ ಸರ್ಕಾರಗಳು ವಿದೇಶಿ ಪ್ರವಾಸಿಗರು ಬರುವ ನಿರೀಕ್ಷೆಯಲ್ಲಿವೆ.

CSKಗೆ ಐಪಿಎಲ್ ಚಾಂಪಿಯನ್ ಕಿರೀಟ

0

ಐಪಿಎಲ್ ಹದಿನಾಲ್ಕನೇ ಆವೃತ್ತಿಯ ಫೈನಲ್ ಪಂದ್ಯಾವಳಿಯಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 27 ರನ್ ಗಳ ರೋಚಕ ಗೆಲುವು ಪಡೆದು. ಚೆನ್ನೈ ಸೂಪರ್ ಕಿಂಗ್ಸ್ ಚಾಂಪಿಯನ್ ಆಗಿದೆ. ಚೆನ್ನೈ ತಂಡ ನಾಲ್ಕನೇ ಬಾರಿಗೆ ಐಪಿಎಲ್ ಚಾಂಪಿಯನ್ ಪಟ್ಟಕ್ಕೇರಿದ್ದು, KKR ಗೆ ಮೂರನೇ ಬಾರಿಯ ಚಾಂಪಿಯನ್ ಕನಸು ಬಂಗ ಬಾಗಿದೆ. ಇದರಿಂದ KKR ತಂಡದ ಅಭಿಮಾನಿಗಳಲ್ಲಿ ಭಾರೀ ನಿರಾಸೆ ಮೂಡಿದೆ.
ಚೆನ್ನೈ ತಂಡ 20 ಓವರುಗಳಲ್ಲಿ 3 ವಿಕೆಟ್ ನಷ್ಟಕ್ಕೆ 198 ರನ್ ಗಳಿಸಿತ್ತು ಗೆಲುವಿನ ಗುರಿ ಬೆನ್ನತ್ತಿದ್ದ KKR ತಂಡ 20 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸಿ ಗೆಲುವು ಪಡೆಯಲು ವಿಫಲವಾಗಿದೆ.
ಈ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ CSK ತಂಡಕ್ಕೆ ಕಾರಣದಿಂದಾಗಿ 10 ಕೋಟಿ ರೂ. ಲಭಿಸಿದೆ. ಪ್ರತಿಬಾರಿಯೂ ಈ ಸಲ ಕಪ್ ನಮ್ದೇ ಎಂದು ಆಸೆ ಹುಟ್ಟಿಸಿ ಕೊನೆ ವೇಳೆ ಅಭಿಮಾನಿಗಳಲ್ಲಿ ಹತಾಶೆ ಮೂಡಿಸಿರುವ RCB ತಂಡವು ಈ ಬಾರಿಯೂ ಸೆಮಿಫೈನಲ್ ತಲುಪಿ ದುರದೃಷ್ಟ ಫೈನಲ್ ತಲುಪುವಲ್ಲಿ ಎಡವಿದ್ದಾರೆ ಎಲಿಮಿನೇಟರ್ ನಲ್ಲಿ ಸೋತ RCB ಮತ್ತು ದೆಹಲಿ ಕ್ಯಾಪಿಟಲ್ಸ್ ಎರಡನೇ ಕ್ವಾಲಿಫೈಯರ್ ನಲ್ಲಿ ಸೋತ ತಂಡಕ್ಕೆ 4.375 ಕೋಟಿ ಪಡೆದಿದೆ.

ಕೋಟಿಗೊಬ್ಬ 3ಗೆ ಚಿತ್ರ ರಸಿಕರಿಂದ ಸಡಗರದ ಸ್ವಾಗತ

0

ಕೋವಿಡ್ ಎರಡನೇ ಅಲೆ ಬಳಿಕ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷಿತ ಸಿನಿಮಾ ಕೋಟಿಗೊಬ್ಬ 3 ಆಯುಧ ಪೂಜೆಯೆಂದು ತೆರೆಕಾಣಬೇಕಿತ್ತು. ಆದರೆ ಹಲವು ಕಾರಣದಿಂದ ಚಿತ್ರಪ್ರದರ್ಶನ ಗೊಳ್ಳದೆ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿತು. ವಿಜಯದಶಮಿಯಂದು ರಾಜ್ಯಾದ್ಯಂತ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಕೋಟಿಗೊಬ್ಬ 3 ಚಿತ್ರ ಅದ್ಧೂರಿಯಾಗಿ ತೆರೆಕಂಡಿದೆ. ಉತ್ತಮ ಪ್ರದರ್ಶನ ಕಾಣುತ್ತಿದೆ.

ಶಿವಮೊಗ್ಗ ಹೆಚ್ ಪಿ ಸಿ ಚಿತ್ರಮಂದಿರದಲ್ಲಿ ಕೋಟಿಗೊಬ್ಬ 3 ಚಿತ್ರ ತೆರೆಕಂಡಿದ್ದು ಕಿಚ್ಚ ಅಭಿಮಾನಿಗಳು ಚಿತ್ರಮಂದಿರದ ಮುಂದೆ ಪಟಾಕಿ ಸಿಡಿಸಿ, ಡೊಳ್ಳು ಬಾರಿಸಿ ಕುಣಿದು ಕುಪ್ಪಳಿಸಿ ಸಂಭ್ರಮಿಸಿದ್ದಾರೆ.

ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ ಇಂದು ಆರಂಭ

0

ಜಿಲ್ಲಾಧಿಕಾರಿಗಳ ನಡೆ ಹಳ್ಳಿಕಡೆ ಕಂದಾಯ ಇಲಾಖೆಯಿಂದ ಹೊಸ ಪರಿಕಲ್ಪನೆಯಡಿ ಪ್ರತಿ ತಿಂಗಳ 3ನೇ ಶನಿವಾರದಂದು ಜಿಲ್ಲಾಧಿಕಾರಿಗಳು ಗ್ರಾಮ ಭೇಟಿ ನೀಡಿ ವಾಸ್ತವ್ಯ ಮಾಡುವ ಕಾರ್ಯಕ್ರಮ ಕೊರೋನ ಕಾರಣದಿಂದಾಗಿ ಸ್ಥಗಿತಗೊಂಡಿತ್ತು.

ಕೊರೋನ ಕಡಿಮೆಯಾದ ಬಳಿಕ ಮತ್ತೆ ಜಿಲ್ಲಾಧಿಕಾರಿ ನಡೆ ಹಳ್ಳಿ ಕಡೆ ಕಾರ್ಯಕ್ರಮ ಇಂದು ಪುನರಾರಂಭಗೊಂಡಿದೆ. ಗಾಜನೂರು ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಕೆ ಬಿ ಶಿವಕುಮಾರ್ ಚಾಲನೆ ನೀಡಿ ಗ್ರಾಮಸ್ಥರ ಕುಂದುಕೊರತೆಗಳನ್ನು ಆಲಿಸಿದರು ಈ ಸಂದರ್ಭದಲ್ಲಿ ಸಂಬಂಧಪಟ್ಟ ಅಧಿಕಾರಿಗಳು ಭಾಗಿಯಾಗಿದ್ದರು.

ಗಗನದಲ್ಲಿ ಬೆರಗು…!

2

ಆಕಾಶದಲ್ಲಿ ದಿನನಿತ್ಯ ಒಂದಲ್ಲ ಒಂದು ರೀತಿಯ ಸೊಜಿಗ ನಡೆಯುತ್ತಿರುವುದನ್ನ ನಾವೆಲ್ಲಾ ನೋಡಿದ್ದೆವೆ. ಹಾಗೆಯೆ ಮತ್ತೊಂದು ವಿಸ್ಮಯ ಘಟಿಸಿದೆ. ಅಂತಹ ವಿಭಿನ್ನ ಚಮತ್ಕಾರ ಮೂಡಿದೆ. ಸೂರ್ಯನ ಸುತ್ತ ಸಪ್ತ ವರ್ಣಗಳ ವೃತ್ತಾಕಾರದ ಕಾಮನಬಿಲ್ಲು ಗೋಚರವಾಗಿದ್ದು ನಾಗರೀಕರಲ್ಲಿ ವಿಸ್ಮಯದ ಜೊತೆಗೆ ಪುಳಕಿತರನ್ನಾಗಿಸಿತು!

ಸೂರ್ಯನ ಸುತ್ತಲು ಮೂಡಿದ್ದ ಬಣ್ಣಗಳ ಉಂಗುರಾಕೃತಿಯ ಖಗೋಳ ವಿಸ್ಮಯವು, ನಾಗರೀಕರ ಕಣ್ಮನ ಸೆಳೆಯಿತು. ಜೊತೆಗೆ ಕುತೂಹಲಕ್ಕೂ ಕಾರಣವಾಗಿತ್ತು. ಕೆಲವರು ತಮ್ಮ ಮೊಬೈಲ್ ಗಳಲ್ಲಿ ಈ ದೃಶ್ಯ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟರು. ಇದರಿಂದ ಈ ದೃಶ್ಯಗಳು ಸಾಕಷ್ಟು ವೈರಲ್ ಆಗಿದೆ.

ಕಾರಣವೇನು?: ಖಗೋಳಶಾಸ್ತ್ರಜ್ಞರ ಪ್ರಕಾರ, ವಾತಾವರಣದಲ್ಲಿ ನೀರಿನ ಹನಿಗಳು ಜಾಸ್ತಿ ಇದ್ದಾಗ ಸೂರ್ಯನ ಕಿರಣಗಳಿಂದ ಬೆಳಕಿನ ಪ್ರತಿಫಲನ ಹಾಗೂ ವಕ್ರೀಭವನ ಆಗುತ್ತದೆ. ಸೂರ್ಯನ ಪ್ರಭಾ ವಲಯದಿಂದ ಕಿರಣಗಳು ಮಳೆ ಮೋಡವನ್ನು ಭೇದಿಸಿಕೊಂಡು ಬರುವಾಗ ಸೂರ್ಯನ ಸುತ್ತ ವೃತ್ತಾಕಾರದ ಕಾಮನಬಿಲ್ಲಿನ ಏಳು ಬಣ್ಣಗಳು ಮೂಡಲು ಕಾರಣವಾಗುತ್ತದೆ. ಈ ಅಪರೂಪದ ಖಗೋಳ ವಿದ್ಯಮಾನಕ್ಕೆ 22 ಹ್ಯಾಲೋ ಎಂದು ಕರೆಯಲಾಗುತ್ತದೆ ಎಂದು ಹೇಳುತ್ತಾರೆ.

ಮಳೆ ಮುನ್ಸೂಚನೆ: ಸೂರ್ಯನ ಸುತ್ತ ಕಾಮನಬಿಲ್ಲಿನ ಉಂಗುರಾಕೃತಿ ಗೋಚರವು, ಭಾರೀ ಮಳೆಯ ಮುನ್ಸೂಚನೆ ನೀಡುತ್ತದೆ ಎಂದು ಕೆಲ ಖಗೋಳ ತಜ್ಞರು ಅಭಿಪ್ರಾಯಪಡುತ್ತಾರೆ. ಮುಂದಿನ ಒಂದೆರೆಡು ದಿನಗಳಲ್ಲಿ ವ್ಯಾಪಕ ವರ್ಷಧಾರೆಯಾಗುವ ಸಾಧ್ಯತೆಗಳು ಇವೆ ಎಂದು ಹೇಳುತ್ತಾರೆ.

ತಪ್ಪುಗಳನ್ನು ಎತ್ತಿ ತೋರಿಸುವ ಮಾಧ್ಯಮಗಳನ್ನು ಗೌರವಿಸಿ – ಬಿ.ಎಸ್.‌ ವೈ

0

ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಹೇಳಿದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಶಿವಮೊಗ್ಗ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನಗರದ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ದತ್ತಿ ನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮಗಳು ಸಮಾಜದ ಕುಂದುಕೊರತೆಗಳ ಮೇಲೆ ಬೆಳಕು ಚಲ್ಲುತ್ತಿದೆ.ಸಮಾಜದಲ್ಲಿನ ಆಗುಹೋಗುಗಳನ್ನು ಆಳುವವರಿಗೆ ತಿಳಿಸುವ ಕೆಲಸಗಳನ್ನು ಪತ್ರಿಕಾರಂಗ ಮಾಡುತ್ತಿವೆ ಎಂದರು.

ನಮ್ಮ ತಪ್ಪುಗಳನ್ನು ಎತ್ತಿತೋರಿಸುವ ಮಾದ್ಯಮಗಳನ್ನು‌ ನಾವು ಗೌರವದಿಂದ‌‌ ಕಾಣಬೇಕು ಎಂದ ಅವರು ಪತ್ರಿಕೆಗಳಿಗೆ ಓದುಗರು ನಿಜವಾದ ಮಾಲೀಕರು. ವೃತ್ತಿ ಹಿರಿಮೆ ಕಾಪಾಡಿಕೊಳ್ಳಲು ಪತ್ರಕರ್ತರು ಹೆಚ್ಚಿನ ಗಮನಕೊಡಬೇಕು ಎಂದರು.

ಗೃಹ ಸಚಿವ ಆರಗ ಜ್ಙಾನೇಂದ್ರ ಮಾತನಾಡಿ, ಸಂವಹನ ‌ಮಾನವನ ಜೀವನದಲ್ಲಿ ಅವಶ್ಯಕತೆ ಇದೆ ಎಂದರು.

ದೃಷ್ಯ ಮಾದ್ಯಮಗಳ ವೈಭವೀಕರಣದಿಂದ ಮುದ್ರಣ ಮಾಧ್ಯಮ ನೇಪತ್ಯಕ್ಕೆ ಸರಿಯುತ್ತದೆ ಎಂದು ಹೇಳಲಾಗುತ್ತಿತ್ತು. ಆದರೆ‌ ಮುದ್ರಣ ಮಾಧ್ಯಮ ತನ್ನ ಓದುಗರನ್ನು ಹೆಚ್ಚಿಸಿಕೊಂಡಿರುವುದು ಶ್ಲಾಘನೀಯ ಎಂದರು.

ನಕಲಿ‌ ಪತ್ರಕರ್ತರ ನಡುವೆ ಅಸಲಿ ಪತ್ರಕರ್ತರು ಗುರುತಿಸಿಕೊಳ್ಳುವುದು ಕಷ್ಟವಾಗಿದೆ. ನಮ್ಮ ಸರ್ಕಾರ ಪತ್ರಕರ್ತರಿಗೆ ಸಾಕಷ್ಟು ಸೌಲಭ್ಯ ನೀಡಿದೆ ಎಂದರು.

ಹೆಚ್.ಎಸ್ ದೊರೆಸ್ವಾಮಿ ಪ್ರಶಸ್ತಿ ಪುರಸ್ಕೃತ ಪ್ರಜಾವಾಣಿಯ ಹಿರಿಯ ಪತ್ರಕರ್ತ ಹನೀಫ್ ಮಾತನಾಡಿ, ಕೋವಿಡ್ ನಂತಹ ಸಂಕಷ್ಟದ‌ ಸಮಯದಲ್ಲಿ ಪತ್ರಕರ್ತರ ನೆರವಿಗೆ ಬಂದಿರುವ ರಾಜ್ಯ ಕಾರ್ಯ ನಿರತ ಪತ್ರಕರ್ತರದ ಕಾರ್ಯ ಶ್ಲಾಘನೀಯ ಎಂದರು.

ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶಿವಾನಂದ ತಗಡೂರು ಆಶಯ ನುಡಿಗಳನ್ನಾಡಿದರು. ಸಮಾರಂಭದಲ್ಲಿ ಸಂಸದ ಬಿ.ವೈ ರಾಘವೇಂದ್ರ, ರಾಜ್ಯ ಆರ್ಯ ವೈಶ್ಯ ನಿಗಮದ ರಾಜ್ಯಾಧ್ಯಕ್ಷ ಡಿ.ಎಸ್ ಆರುಣ್, ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್ ಷಡಕ್ಷರಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಕುಮಾರ್, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ರವಿಕುಮಾರ್, ಮಾದ್ಯಮ ಅಕಾಡೆಮಿ ಸದಸ್ಯ ಗೋಪಾಲ್ ಯಡಗೆರೆ ಮತ್ತಿತರರು ಇದ್ದರು.

ವಾರ್ಷಿಕ ದತ್ತಿ ಪ್ರಶಸ್ತಿ ಪಡೆದವರು
ಡಿವಿಜಿ ಪ್ರಶಸ್ತಿಯನ್ನು ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಸಂಪಾದಕರಾದ ರವಿ ಹೆಗಡೆ ಅವರಿಗೆ, ಎಚ್. ಎಸ್.ದೊರೆಸ್ವಾಮಿ ಪ್ರಶಸ್ತಿ: ಬಿ.ಎಂ ಹನೀಫ್, ಪ್ರಜಾವಾಣಿ, ಗೊಮ್ಮಟ ಮಾಧ್ಯಮ ಪ್ರಶಸ್ತಿ: ಎಸ್. ಎನ್.ಅಶೋಕಕುಮಾರ್, ಸಂಪಾದಕರು,ಗೊಮ್ಮಟವಾಣಿ. ಪಾಟೀಲ್ ಪುಟ್ಟಪ್ಪ ಪ್ರಶಸ್ತಿ : ಎಸ್.ಕೆ.ಶೇಷಚಂದ್ರಿಕ, ಹಿರಿಯ ಪತ್ರಕರ್ತರು, ಎಸ್.ವಿ.ಜಯಶೀಲರಾವ್ ಪ್ರಶಸ್ತಿ: ಅ.ಚ.ಶಿವಣ್ಣ, ಹಿರಿಯ ಪತ್ರಕರ್ತರು , ಪಿ.ಆರ್.ರಾಮಯ್ಯಪ್ರಶಸ್ತಿ: ಯು.ಎಸ್. ಶೆಣೈ, ಸಂಪಾದಕರು, ಕುಂದಪ್ರಭ, ಗರುಡನಗಿರಿ ನಾಗರಾಜ್ ಪ್ರಶಸ್ತಿ: ಕೆ.ಆರ್.ಮಂಜುನಾಥ್, ಸಂಪಾದಕರು, ಮಲೆನಾಡ  ಮಂದಾರ, ಎಚ್.ಕೆ.ವೀರಣ್ಣಗೌಡ ಪ್ರಶಸ್ತಿ :ಕೋಡಿ ಹೊಸಳ್ಳಿ ರಾಮಣ್ಣ, ಹಿರಿಯ ಪತ್ರಕರ್ತರು, ಕಿಡಿ ಶೇಷಪ್ಪ ಪ್ರಶಸ್ತಿ: ಕೆ.ಎಂ. ರೇಖಾ, ಸಂಪಾದಕರು, ಹೊಸಪೇಟೆಟೈಮ್ಸ್,ಪಿ.ರಾಮಯ್ಯ ಪ್ರಶಸ್ತಿ: ರೇವಣ್ಣಸಿದ್ದಯ್ಯ ಮಹಾನುಭವಿಮಠ, ಸಂಪಾದಕರು, ಶಿಡ್ಲು ಪತ್ರಿಕೆ,ಯಶೋಧಮ್ಮ ಜಿ ನಾರಾಯಣ ಪ್ರಶಸ್ತಿ: ರಶ್ಮಿ, ಬ್ಯೂರೋ ಮುಖ್ಯಸ್ಥೆ, ಪ್ರಜಾವಾಣಿ, ಹುಬ್ಬಳ್ಳಿ ,ಎಂ. ನಾಗೇಂದ್ರರಾವ್ ಪ್ರಶಸ್ತಿ : ಎನ್.ಡಿ.ಶಾಂತಕುಮಾರ್ ವಿಜಯವಾಣಿ, ಶಿವಮೊಗ್ಗ, ಮಿಂಚು ಶ್ರೀನಿವಾಸ್ ಪ್ರಶಸ್ತಿ: ರಾಮಸ್ವಾಮಿ ಹುಲಕೋಡು, ವಿಜಯಕರ್ನಾಟಕ ,ಹೆಚ್.ಎಸ್ ರಂಗಸ್ವಾಮಿ ಪ್ರಶಸ್ತಿ : ಪಿ.ಸುನೀಲ್ ಕುಮಾರ್ ಸಂಪಾದಕರು ‘ಸಿಟಿ ಹೈಲೈಟ್ಸ್’ ಬೆಂಗಳೂರು
ಸಂಘದ ವಿಶೇಷ ಪ್ರಶಸ್ತಿಗಳು:
ಪ್ರಹ್ಲಾದಗುಡಿ, ವರದಿಗಾರರು, ಕನ್ನಡ ಪ್ರಭ, ರಾಯಚೂರು, ಮುನಿವೆಂಕಟೇಗೌಡ, ಹಿರಿಯ ಪತ್ರಕರ್ತರು ಕೋಲಾರ ,ಪ್ರಕಾಶ್ ರಾಮಜೋಗಿಹಳ್ಳಿ, ವಾರ್ತಾಭಾರತಿ, ಬೆಂಗಳೂರು,ಎಂ.ಕೆ. ರಾಘವೇಂದ್ರ ಮೇಗರವಳ್ಳಿ ವಿಜಯ ಕರ್ನಾಟಕದ ತೀರ್ಥಹಳ್ಳಿ ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನವರು ಪ್ರಶಸ್ತಿ ಪ್ರಧಾನ ಮಾಡಿದರು.

ಕ್ರಿಕೆಟ್‌ ಪ್ರಿಯ ಬಿ.ಎಸ್.ವೈ

0

ಮಾಜಿ ಮುಖ್ಯಮಂತ್ರಿ ಬಿ‌ಎಸ್ ಯಡಿಯೂರಪ್ಪ ನವರು ನಿನ್ನೆ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಡೆಲ್ಲಿ ಐಪಿಎಲ್ ಪಂದ್ಯವನ್ನು ತಮ್ಮ ರಾಜಕೀಯ ಒತ್ತಡದ ನಡುವೆಯೂ  ತಮ್ಮ ಕಾರಿನಲ್ಲಿ ಪಂದ್ಯ ವಿಕ್ಷೀಸಿರುವ ಪೋಟೋ ಈಗ ಭಾರಿ ವೈರಲ್ ಆಗಿದೆ.

ರಾಜ್ಯ  ಮಟ್ಟದ ಕಾರ್ಯನಿರತ ಪತ್ರಕರ್ತರ   ದತ್ತಿ ಪ್ರಶಸ್ತಿ ಕಾರ್ಯಕ್ರಮ ಮುಗಿಸಿ ಶಿಕಾರಿಪುರಕ್ಕೆ ತೆರಳುವ ವೇಳೆ ಮಾಜಿ ಮುಖ್ಯಮಂತ್ರಿಗಳು ಐಪಿಎಲ್ ಪಂದ್ಯವನ್ನು ವಿಕ್ಷೀಸಿದ್ದಾರೆ .ಈ ಪೋಟೋ ಈಗ ಸಾಕಷ್ಟು ವೈರಲ್ ಆಗಿದ್ದು ರಾಜಕೀಯದ ಒತ್ತಡದ ನಡುವೆ ಕ್ರಿಕೆಟ್ ನೋಡಿರುವುದಕ್ಕೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ.