Thursday, June 18, 2026
Thursday, June 18, 2026

ಈಗಿನ ಜಗತ್ತಿನಲ್ಲಿ ಸ್ರ್ರೀಪರ ಚಿಂತನೆ ಸೇರಿಸಿಕೊಳ್ಳಬೇಕು

Date:

ವಾತ್ಸ್ಯಾಯನ ಸೇರಿದಂತೆ ರಚಿಸಿದ ಗ್ರಂಥಗಳಲ್ಲಿ ಪುರುಷ ಪಾರಮ್ಯವಿದೆ ಎಂದು ಹೇಳಲಾಗುತ್ತದೆ. ಹೌದು, ಪುರುಷ ಪಾರಮ್ಯ ಇದೆ. ಆಗಿನ ಜಗತ್ತು ಹಾಗಿತ್ತು. ಈಗಿನ ಜಗತ್ತು ಬಿನ್ನವಾಗಿದೆ. ಹಾಗಂತ ವಾತ್ಸ್ಯಾಯನ ಕೃತಿಯನ್ನು ತಿದ್ದುವ ಹಾಗಿಲ್ಲ. ಅದನ್ನು ಒಪ್ಪಿಕೊಂಡು ಅದರ ಜೊತೆಗೆ ಸ್ತ್ರೀಪರವಾದ ವಿಚಾರವನ್ನು ಸೇರಿಸಿಕೊಂಡರಾಯಿತು ಎಂದು ವಿದ್ವಾಂಸರಾದ ಶತಾವಧಾನಿ ಡಾ.ಆರ್. ಗಣೇಶ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಅಯೋಧ್ಯ ಪ್ರಕಾಶನವು ಬೆಂಗಳೂರಿನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಕನ್ನಡದಲ್ಲಿ ಮೊದಲ ಬಾರಿಗೆ ಹೊರತರಲಾದ ‘ವಾತ್ಸ್ಯಾಯನ ಕಾಮಸೂತ್ರ’ಕನ್ನಡ ಅನುವಾದ ( ಕನ್ನಡಕ್ಕೆ ಡಾ. ವಿಶ್ವನಾಥ ಕೃ.ಹಂಪಿಹೊಳಿ ) ಕೃತಿಯನ್ನು ಬಿಡುಗಡೆ ಮಾಡಿದರು.
ಪುರಾತನ ಕಾಲದಲ್ಲಿ ರಚನೆಯಾದ ಧರ್ಮಾರ್ಥ ಶಾಸ್ತ್ರಗಳನ್ನು ಪರಸ್ಪರ ಹೊಂದಾಣಿಕೆಯಿಂದ ನೋಡದೆ ತೆಗಳುವುದು ಆತ್ಮವಂಚನೆ, ಜ್ಞಾನ ವಂಚನೆ, ವಿದ್ಯಾ ವಂಚನೆಯಾಗುತ್ತದೆ. ನಮ್ಮ ಭಾರತೀಯ ಪರಂಪರೆಯಲ್ಲಿ ಜಗತ್ತಿಗೆ ಕೊಟ್ಟ ಅತ್ಯಂತ ಜನಪ್ರಿಯ ಗ್ರಂಥಗಳಲ್ಲಿ ವಾತ್ಸ್ಯಾಯನ ಕಾಮಸೂತ್ರ ಕೂಡ ಒಂದು. ಜಗತ್ತಿಗೆ ಭಾಷೆಯನ್ನು ಹೇಗೆ ನೋಡಬೇಕು ಎಂಬುದನ್ನು ಹೇಳಿಕೊಟ್ಟವರು ನಾವು. ಬದುಕನ್ನು ನೋಡುವುದು ಹೇಗೆ ಎಂದು ಭಗವದ್ಗೀತೆಯ ಮೂಲಕ ತಿಳಿಯಬಹುದು ಎಂದರು.
ಈ ಕಾರ್ಯಕ್ರಮದಲ್ಲಿ ರಂಗಭೂಮಿ ನಟ ಎಸ್. ಎನ್. ಸೇತುರಾಮ್, ವಿದ್ವಾಂಸರಾದ ವೀಣಾ ಬನ್ನಂಜೆ,ಕೃತಿಯ ಅನುವಾದಕರಾದ ಡಾ. ವಿಶ್ವನಾಥ ಕೃ.ಹಂಪಿಹೊಳಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಗುತ್ತಿಗೆ ಆಧಾರದ ಮೇಲೆ ಪಶುವೈದ್ಯರ ಒಂದು ಹುದ್ದೆಗೆ ನೇಮಕಾತಿ ಪ್ರಕ್ರಿಯೆ

ಶಿವಮೊಗ್ಗ ವನ್ಯಜೀವಿ ವಿಭಾಗ ವ್ಯಾಪ್ತಿಯಲ್ಲಿನ ಸಕ್ರೆಬೈಲು ಆನೆ ಬಿಡಾರದ ಇಲಾಖಾ ಆನೆಗಳಿಗೆ...

Klive Special Article ನಿರ್ಲಕ್ಷ್ಯ ಮಾಡದ ನಿಶ್ಶಬ್ದ ಕಾಯಿಲೆ, ಕಿಡ್ನಿ ಕ್ಯಾನ್ಸರ್- ಡಾ.ಯು‌.ಎಸ್.ಕಾರ್ತಿಕ್

Klive Special Article ಕಿಡ್ನಿ ಕ್ಯಾನ್ಸರ್ : ನೀವು ನಿರ್ಲಕ್ಷಿಸಬಾರದ ನಿಶ್ಯಬ್ದ...

K.S. Eshwarappa ಮನಸ್ಸು ಬಿಜೆಪಿ: ದೇಹ ಮಾತ್ರ ಹೊರಗೆ : ಕೆ.ಎಸ್.ಈಶ್ವರಪ್ಪ

K.S. Eshwarappa ಪಕ್ಷದ ಬೆಳವಣಿಗೆ ಮತ್ತು ಶುದ್ಧೀಕರಣಕ್ಕೆ ಆಗ್ರಹಿಸಿ ಬಿಜೆಪಿಯಿಂದ ಹೊರ...