Monday, February 9, 2026
Monday, February 9, 2026
Home Blog Page 1833

ವರುಣ್ ಸಿಂಗ್ ಬದುಕುಳಿಯಲಿ: ದೇಶಾದ್ಯಂತ ಸ್ಪಂದನ

0

ವಿಧಾನಸಭಾ ಚುನಾವಣೆಯ ಇನ್ನೇನು ಹತ್ತಿರದಲ್ಲಿಯೇ ಇದೆ. ಇದರ ಪ್ರಚಾರದ ಸಲುವಾಗಿ ಗೋವಾಕ್ಕೆ ಒಂದು ದಿನದ ಪ್ರವಾಸ ಕೈಗೊಂಡಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿವಿಧ ಹಳ್ಳಿಗಳಿಗೆ ಭೇಟಿ ನೀಡಿದರು.

ಆ ಸಂದರ್ಭದಲ್ಲಿ, ಗೋವಾ ವಿಧಾನಸಭೆ ಚುನಾವಣೆಯಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರಿ ಉದ್ಯೋಗಗಳಲ್ಲಿ ಮಹಿಳೆಯರಿಗೆ ಶೇ. 30ರಷ್ಟು ಮೀಸಲು ನೀಡಲಾಗುವುದು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅವರು ಭರವಸೆ ನೀಡಿದ್ದಾರೆ.

ಮೊಪಿರ್ಲಾ ಎಂಬ ಗ್ರಾಮದಲ್ಲಿ ಸಾರ್ವಜನಿಕರನ್ನು ಉದ್ದೇಶಿಸಿ ಪ್ರಿಯಾಂಕ ಅವರು ಮಾತನಾಡಿದರು. ” ಪಕ್ಷ ಅಧಿಕಾರಕ್ಕೆ ಬಂದರೆ ಮಹಿಳೆಯರ ಕುರಿತು ವಿಶೇಷ ಗಮನ ನೀಡಲಾಗುವುದು. ಅಭಿವೃದ್ಧಿ ಹಾಗೂ ಪರಿಸರದ ನಡುವೆ ಸಮತೋಲನ ಕಾಪಾಡಿಕೊಳ್ಳುವುದು” ಎಂದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಓಮಿಕ್ರಾನ್: ಸಾಧಾರಣ ಪ್ರಸರಣ ಜಾಗ್ರತೆಯಾಗಿರಬೇಕು

0

ವಿಶ್ವವನ್ನೇ ಬೆಚ್ಚಿ ಬಿಳಿಸುತ್ತಿರುವ ಕೋವಿಡ್ ವೈರಸ್ ನ ರೂಪಾಂತರಿ ತಳಿ ಓಮಿಕ್ರಾನ್ ದೇಶದಲ್ಲಿ ಈವರೆಗೆ 26 ಪ್ರಕರಣಗಳು ಪತ್ತೆಯಾಗಿದೆ. ಎಲ್ಲಾ ಪ್ರಕರಣಗಳಲ್ಲೂ ರೋಗ ಲಕ್ಷಣಗಳು ಸಾಧಾರಣವಾಗಿದೆ ಇಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಮಹಾರಾಷ್ಟ್ರದಲ್ಲಿ 11, ರಾಜಸ್ಥಾನದಲ್ಲಿ 9, ಗುಜರಾತ್ ನಲ್ಲಿ 3, ಕರ್ನಾಟಕದಲ್ಲಿ 2 ಮತ್ತು ದೆಹಲಿಯಲ್ಲಿ 1 ಓಮಿಕ್ರಾನ್ ಪ್ರಕರಣಗಳು ದೃಢಪಟ್ಟಿದೆ.

ದೇಶದಲ್ಲಿ ಕೊರೋನಾ ವೈರಸ್ ನ ರೂಪಾಂತರಿ ತಳಿ ಡೆಲ್ಟಾ ‘ಎವೈ.4.2’ ಕಡಿಯ 18 ಪ್ರಕರಣಗಳು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಖಾತೆಯ ರಾಜ್ಯ ಸಚಿವೆ ಭಾರತಿ ಪ್ರವೀಣ್ ಪವಾರ್ ಲೋಕಸಭೆಯಲ್ಲಿ ತಿಳಿಸಿದ್ದಾರೆ.

ಕೋವಿಡ್-19 ವಿರುದ್ದ ಲಸಿಕೆಯನ್ನು ಮಕ್ಕಳಿಗೆ ನೀಡುವ ಬಗ್ಗೆ ರಾಷ್ಟ್ರೀಯ ಸಲಹಾ ಸಮಿತಿಯು ಸೂಚನೆ ನೀಡಿಲ್ಲ. ಈವರೆಗೂ ದೇಶದಲ್ಲಿ ಶೇ.86.2 ರಷ್ಟು ವಯಸ್ಕರಿಗೆ ಮೊದಲ ಡೋಸ್ ನೀಡಲಾಗಿದೆ. ಶೇ.53.5 ರಷ್ಟು ವಯಸ್ಕರು 2 ಡೋಸ್ ಲಸಿಕೆ ಪಡೆದಿದ್ದಾರೆ ಹಾಗೂ ಕಳೆದ 43 ದಿನಗಳಿಂದ ಕೂರೋನಾ ವೈರಸ್ ಸೋಂಕಿತರ ಸಂಖ್ಯೆ 15,000ಕ್ಕಿಂತ ಇಳಿಕೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನಕ್ಕೊಪ್ಪುವ ಕಪ್ಪೆಗಳ ಹಬ್ಬ.

1

ಮಳೆಗಾಲದ ಸಮಯದಲ್ಲಿ ಮಲೆನಾಡಿನಲ್ಲಿ ಎಲ್ಲೆಲ್ಲೂ ಕಪ್ಪೆಗಳ ವಟಗುಟ್ಟುವಿಕೆ ಹೆಚ್ಚಾಗಿರುತ್ತದೆ. ಸಾಮಾನ್ಯವಾಗಿ ಜನರು ಆಡುಮಾತಿನಲ್ಲಿ ಕಪ್ಪೆ ತರಹ ವಟಗುಟ್ಟಬೇಡ ಎನ್ನುವುದುಂಟು. ನಾವು ನಮ್ಮ ಸುತ್ತ ಮುತ್ತಲಿನ ಪ್ರದೇಶದಲ್ಲಿ ಬಣ್ಣಬಣ್ಣದ ಕಪ್ಪೆಗಳು,ಅಲ್ಲಿನ ಪರಿಸರಕ್ಕೆ ಹೊಂದಾಣಿಕೆಯಾಗುವಂತಹ ಕಪ್ಪೆಗಳು, ಹೀಗೆ ನಾನಾಬಗೆಯ ಕಪ್ಪೆಗಳನ್ನು ನೋಡಿರುತ್ತೇವೆ. ಆದ್ರೆ ಪಶ್ಚಿಮ ಘಟ್ಟದಲ್ಲಿ ಕಪ್ಪೆಗಳ ಸಂತತಿ ಅಳಿವಿನಂಚಿಗೆ ಬಂದು ನಿಂತಿದೆ. ಇವುಗಳ ಬಗ್ಗೆ ಅಧ್ಯಯನ ನಡೆಸಲು ‘ಕಪ್ಪೆ ಹಬ್ಬ ವೇದಿಕೆ’ ನೆರವಾಗಲಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು, ಜೋಗ್ ಕಾರ್ಗಲ್ ಸಮೀಪದ ಮುಪ್ಪಾನೆ ಪ್ರಕೃತಿ ಶಿಬಿರದಲ್ಲಿ ಡಿ. 18 ಹಾಗೂ 19 ರಂದು ಕಪ್ಪೆ ಹಬ್ಬ ನಡೆಯಲಿದೆ.

ರಾಜ್ಯದಲ್ಲಿ ಜೂನ್ ಹಾಗೂ ಜುಲೈ ತಿಂಗಳಿನಲ್ಲಿ ವಿಶ್ವ ಕಪ್ಪೆ ದಿನ ಎಂದು ಆಚರಿಸಲಾಗಿದೆ. ಆದರೆ ಇದುವರೆಗೂ ವಿಸ್ತೃತ ಚರ್ಚೆ, ದೃಶ್ಯ ಪ್ರಚಾರಕ್ಕೆ ಅವಕಾಶ ಒದಗಿಸುವ ಅಂತಹ ಕಪ್ಪೆ ಹಬ್ಬ ನಡೆದಿಲ್ಲ. ಅದಕ್ಕಾಗಿ ಅರಣ್ಯ ಇಲಾಖೆಯ ಶಿವಮೊಗ್ಗದ ವನ್ಯಜೀವಿ ವಿಭಾಗ ಮತ್ತು ಕಾರ್ಗಲ್ ವನ್ಯಜೀವಿ ವಿಭಾಗಗಳು ಹಮ್ಮಿಕೊಂಡಿರುವ ಮೊದಲ ಕಾರ್ಯಕ್ರಮ ಇದಾಗಿದೆ.

ರಾಜ್ಯದಲ್ಲೇ, ಇದೇ ಮೊದಲು ‘ಕಪ್ಪೆ ಹಬ್ಬ’ ಆಚರಿಸಲಾಗುತ್ತಿದೆ. ಪಶ್ಚಿಮ ಘಟ್ಟದಲ್ಲಿರುವ ಉಭಯವಾಸಿ ಜೀವಿಗಳ ಕುರಿತು ಅಧ್ಯಯನ ನಡೆಸುವುದಲ್ಲದೆ ಕಪ್ಪೆಗಳ ಬಗ್ಗೆ ಇರುವ ತಪ್ಪು ಕಲ್ಪನೆ ಹೋಗಲಾಡಿಸುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ. ಅಳಿವಿನಂಚಿನಲ್ಲಿರುವ ಕಪ್ಪೆಗಳ ಕುರಿತು ತಿಳುವಳಿಕೆ ನೀಡುವುದು. ಪರಿಸರದಲ್ಲಿ ಕಪ್ಪೆಯ ಪಾತ್ರವನ್ನು ಮನದಟ್ಟು ಮಾಡಿಕೊಡಲಾಗುವುದು ಎಂದು ಶಿವಮೊಗ್ಗದ ಡಿಸಿಎಫ್, ವನ್ಯಜೀವಿ ವಿಭಾಗ ಅಧಿಕಾರಿ ಐ.ಎಂ. ನಾಗರಾಜ್ ಅವರು ತಿಳಿಸಿದ್ದಾರೆ.

ಪರಿಸರದಲ್ಲಿ ಆಹಾರ ಸರಪಳಿಯ ಕ್ರಿಯೆಯಲ್ಲಿ ಕಪ್ಪೆಗಳ ಪಾತ್ರ ಬಹುದೊಡ್ಡದಾಗಿದೆ. ಅವುಗಳು ಪರಿಸರದ ಆರೋಗ್ಯ ಸೂಚಕ ಜೀವಿಗಳು. ಕೀಟ ಸಾಂದ್ರತೆ ನಿಯಂತ್ರಣದಲ್ಲಿಡುವ ಶಕ್ತಿ ಇವುಗಳಿಗಿದೆ. ಹಾಗೂ ಇವುಗಳನ್ನು ರೈತನ ಮಿತ್ರ ಎಂದು ಸಹ ಕರೆಯಬಹುದು.

ಕಪ್ಪೆ ಸಂತತಿ ಗಳು ಒಂದು ವೇಳೆ ಇಲ್ಲವಾದರೆ, ಕೀಟಗಳ ಸಂಖ್ಯೆ ಏರಿಕೆಯಾಗಿ ಬಹುದೊಡ್ಡ ಸಮಸ್ಯೆ ಎದುರಾಗಬಹುದು. ಇಂತಹ ಕಪ್ಪೆಗಳ ಕುರಿತು ನಿರೀಕ್ಷಿತ ಅಧ್ಯಯನ ನಡೆದಿಲ್ಲ.
ಆದ್ದರಿಂದ ಪರಿಸರ ಪ್ರೇಮಿ ಉಳ್ಳವರು ಇಂತಹ ಕಾರ್ಯಕ್ರಮದ ಮೂಲಕ ಪ್ರಭೇದಗಳ ಕುರಿತು ಜನರಿಗೆ ಮಾಹಿತಿ ನೀಡಬೇಕಾಗಿದೆ.

ಪಶ್ಚಿಮ ಘಟ್ಟದಲ್ಲಿ ಪ್ರಾಣಿ ಜಗತ್ತಿನ ಬಗ್ಗೆ ಬೆಳಕಿಗೆ ಬಾರದ ಅದೆಷ್ಟೋ ರಹಸ್ಯಗಳಿವೆ. ಅದರಲ್ಲೂ ಪ್ರಮುಖ ಪ್ರಭೇದದ ಕಪಿಗಳ ಮೇಲೆ ನಡೆಯಬೇಕಾದ ಸಂಶೋಧನೆ, ಹೊಸ ತಳಿಗಳು ಹುಡುಕಾಟ ಹೀಗೆ ಹಲವಾರು ವಿಚಾರಗಳಿಗೆ ಕಪ್ಪೆ ಹಬ್ಬ ಬುನಾದಿಯಾಗುವ ನಿರೀಕ್ಷೆಯಿದೆ.

ಎರಡು ದಿನದ ಕಾಲ ಕಪ್ಪೆ ಹಬ್ಬ ನಡೆಯಲಿದೆ. ಈ ಹಬ್ಬದಲ್ಲಿ ನುರಿತ ತಜ್ಞರು ಕಪ್ಪೆಗಳ ಬಗ್ಗೆ ಅಧ್ಯಯನ ನಡೆಸಿದವರು ಭಾಗವಹಿಸಲಿದ್ದಾರೆ. ಕಪ್ಪೆಗಳ ಕುರಿತು ಚಿತ್ರೀಕರಣಗೊಂಡಿರುವ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ. ಜೊತೆಗೆ ಕಪ್ಪೆ ಮತ್ತು ಪತಂಗಗಳ ವೀಕ್ಷಣೆ ಕೂಡ ಇರಲಿದೆ.

ಪಶ್ಚಿಮ ಘಟ್ಟದಲ್ಲಿ 104 ಕ್ಕೂ ಹೆಚ್ಚು ಮತ್ತು ಇಡೀ ಪಶ್ಚಿಮ ಘಟ್ಟದಲ್ಲಿ ನಾನೂರಕ್ಕೂ ಅಧಿಕ ಉಭಯವಾಸಿ ಜೀವಿಗಳಿವೆ ಎಂದು ಪತ್ತೆ ಹಚ್ಚಲಾಗಿದೆ. ಇಲ್ಲಿ ಇನ್ನು ಸಾಕಷ್ಟು ಸಂಖ್ಯೆಯಲ್ಲಿ ಉಭಯವಾಸಿ ಗಳಿವೆ. ಇಲ್ಲಿ ನಿರೀಕ್ಷಿತ ಮಟ್ಟದ ಸಂಶೋಧನೆ ನಡೆಯಬೇಕಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಏಷಿಯನ್ ರೋಯಿಂಗ್ ಚಾಂಪಿಯನ್ ಶಿಪ್

0

ಭಾರತದ ಅರ್ಜುನ್ ಲಾಲ್ ಜಾಟ್ ಹಾಗೂ ರವಿ ಜೋಡಿ ಏಶಿಯನ್ ರೋಯಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಥಾಯ್ಲೆಂಡ್ ನ ರಯಾಂಗ್ ರಾಯಲ್ ಥಾಯ್ ನೇವಿ ರೋಹಿನ್ ಸೆಂಟರ್ ನಲ್ಲಿ ನಡೆದ ಚಿನ್ನದ ಪದಕ ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಜೋಡಿ ಚೀನಾದ ಕಿಂಗ್ ಲಿ ಹಾಗೂ ಲುತಾಂಗ್ ಝಾಂಗ್ ಮತ್ತು ಉಜ್ಬೇಕಿಸ್ತಾನದ ದಾರ್ಜನ್ ದಾರೋನೋವ್ ಹಾಗೂ ಅಬ್ದುಲ್ಲೊ ಮುಖಾಮ್ಮಡೀವ್ ಜೋಡಿಗಳನ್ನು ಹಿಂದೆ ಹಾಕಿತು.

ಟೋಕಿಯೊ ಒಲಂಪಿಯನ್ ಜೋಡಿಯಾದ ಅರ್ಜುನ್ ಹಾಗೂ ರವಿ 6:57.883 ಸೆಕೆಂಡ್ಗಳಲ್ಲಿ ಸ್ಪರ್ಧೆ ಮುಗಿಸಿತು. ಆದರೆ 2ನೇ ಸ್ಥಾನ ಗಳಿಸಿದ ಚೀನಾ ಜೋಡಿಗೆ ಸ್ಪರ್ಧೆ ಮುಗಿಸಲು 7:02.37 ಸೆಕೆಂಡ್ ಗಳು ಬೇಕಾಯಿತು. ಉಜ್ಬೇಕಿಸ್ತಾನ ಜೋಡಿಗೆ ಮೂರನೇ ಸ್ಥಾನದಲ್ಲಿದೆ.

ಏಷ್ಯಾ ವಲಯದ ಚಾಂಪಿಯನ್ ನಲ್ಲಿ ಪುರುಷರ ಡಬಲ್ಸ್ ಸ್ಕಲ್ಸ್ ವಿಭಾಗದ ಸ್ಪರ್ಧೆಯಲ್ಲಿ ಭಾರತಕ್ಕೆ ದಕ್ಕಿದ್ದ ಸತತ ಎರಡನೇ ಪದಕ ಇದಾಗಿದೆ. 2019ರ ಏಷ್ಯನ್ ರೋಯಿಂಗ್ ಚಾಂಪಿಯನ್ ಶಿಪ್ ನಲ್ಲಿ ಭಾರತ ಕಂಚಿನ ಪದಕ ಗೆದ್ದಿತ್ತು0.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಮನೆಮಂದಿಯ, ಮಮತೆಯ ಮಂಗಣ್ಣ

0

ಕೋತಿ ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ, ಮಕ್ಕಳಿಂದ ಹಿಡಿದು ವಯಸ್ಸಾದವರು ಇಷ್ಟಪಡುತ್ತಾರೆ. ಕೋತಿಯನ್ನು ಭಾರತೀಯರಾದ ನಾವು ಆಂಜನೇಯಸ್ವಾಮಿ ಸ್ವರೂಪ ಭಾವನೆಯಲ್ಲಿ ನೋಡುತ್ತೇವೆ. ಶಿವಮೊಗ್ಗ ಎನ್. ಟಿ ರಸ್ತೆಯಲ್ಲಿರುವ ಪಾರ್ವತಮ್ಮ ಎಂಬುವರ ಕುಟುಂಬದಲ್ಲಿ 6 ವರ್ಷಗಳ ಹಿಂದೆ ಒಂದು ಕೋತಿಯನ್ನು ಮನೆಗೆ ತಂದು ಸಾಕುತ್ತಿದ್ದಾರೆ. ಕೋತಿಯನ್ನು ತನ್ನ ಸ್ವಂತ ಮಗನಂತೆ ನೋಡಿಕೊಳ್ಳುತ್ತಿದ್ದಾರೆ. ಪಾರ್ವತಮ್ಮನವರ ಅವಳಿ ಮಕ್ಕಳಾದಂತಹ ಮಹೇಶ್ ಮತ್ತು ಮಂಜುನಾಥ್ ಹುಟ್ಟುಹಬ್ಬದ ಜೊತೆ ಮಾರುತಿಯ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ.

ನ್ಯೂಜಿಲೆಂಡ್ : ಸಿಗರೇಟ್ ಖರೀದಿಗೆ ವಯೋಮಿತಿ ನಿಗದಿ

0

ನ್ಯೂಜಿಲ್ಯಾಂಡ್ ದೇಶದಲ್ಲಿ ಧೂಮಪಾನವನ್ನು ಹಂತಹಂತವಾಗಿ ಅಂತ್ಯಗೊಳಿಸುವ ನಿಟ್ಟಿನಲ್ಲಿ ಕಾನೂನನ್ನು ರೂಪಿಸಲಾಗಿದೆ.

ಅಲ್ಲಿನ ಸರ್ಕಾರದ ಹೊಸ ಕಾನೂನಿನನ್ವಯ ಹದಿನಾಲ್ಕು ವರ್ಷ ಅಥವಾ ಅದಕ್ಕೂ ಕಡಿಮೆ ವಯಸ್ಸಿನವರು ತಮ್ಮ ಜೀವಿತಾವಧಿಯಲ್ಲಿ ಧೂಮಪಾನ ಮಾಡುವಂತೆಯೇ ಇಲ್ಲ. ಜೊತೆಗೆ ಮುಂದಿನ ವರ್ಷದಿಂದ ಸಿಗರೇಟ್ ಖರೀದಿಯ ಕನಿಷ್ಠ ವಯೋಮಿತಿಯನ್ನು ಪ್ರತಿವರ್ಷವೂ ಹೆಚ್ಚಳ ಮಾಡಲಾಗುತ್ತದೆ.

ನ್ಯೂಜಿಲ್ಯಾಂಡ್ ನ ಸಹ ಆರೋಗ್ಯ ಸಚಿವೆ ಡಾ. ಆಯೇಷಾ ಪ್ರಸ್ತುತ ಸಿಗರೇ ಟ್ ಖರೀದಿಸಲು ಕನಿಷ್ಠ 18 ವರ್ಷ ವಯಸ್ಸಾಗಿರಬೇಕು ಎಂದು ಮಾಹಿತಿ ನೀಡಿದ್ದಾರೆ. ” ಕ್ಯಾನ್ಸರ್ ಬಹಳ ಹೆಚ್ಚಾಗುತ್ತಿರುವ ಕಾರಣ ಈ ಕಾನೂನು ರೂಪಿಸಿದ್ದೇವೆ” ಎಂದಿದ್ದಾರೆ.

ನ್ಯೂಜಿಲೆಂಡ್ ನ ಒಟ್ಟು ಜನಸಂಖ್ಯೆಯಲ್ಲಿ ಶೇ. 22ರಷ್ಟು ಜನರು ನಿತ್ಯ ಸಿಗರೇಟ್ ವ್ಯಸನಿಗಳಾಗಿದ್ದಾರೆ. ಪ್ರತಿವರ್ಷ 5000 ಮಂದಿ ಸಿಗರೇಟ್ ಸೇವನೆ ದುಷ್ಪರಿಣಾಮಗಳಿಂದ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ವಿಜಯ್ ಹಜಾರೆ ಟ್ರೋಫಿ: 2ನೇ ಪಂದ್ಯ,ಕರ್ನಾಟಕಕ್ಕೆ ಸೋಲು

0

ವಿಜಯ್ ಹಜಾರೆ ಟ್ರೋಫಿ ಕ್ರಿಕೆಟ್ ಟೂರ್ನಿಯ ಎರಡನೇ ಪಂದ್ಯ ತಮಿಳುನಾಡು ಮತ್ತು ಕರ್ನಾಟಕ ತಂಡಗಳ ನಡುವೆ ಪಂದ್ಯ ನಡೆಯಿತು.ಕರ್ನಾಟಕದ ವಿರುದ್ಧ ತಮಿಳುನಾಡು ಭರ್ಜರಿ ಜಯ ಸಾಧಿಸಿತು.

ತಿರುವನಂತಪುರದ ಮಂಗಳಾಪುರ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಕರ್ನಾಟಕ ತಂಡವು, ತಮಿಳುನಾಡು ತಂಡದ ಬೌಲರ್ ಗಳಾದ ಕಿಶೋರ್ ಮತ್ತು ಮಣಿ ಮಾರನ್ ಇವರ ಅಮೋಘ ಬೌಲಿಂಗ್ ನಿಂದ ಕೇವಲ 36.3 ಓವರ್ ಗಳಲ್ಲಿ 122 ರನ್ ಗಳಿಸಿಕೊಂಡಿದತು.

ಮಧ್ಯಮ ವೇಗಿ ಸಂದೀಪ್ ಪರಿಯರ್, ಮೊದಲ ಓವರ್ ನಲ್ಲಿ ಕರ್ನಾಟಕಕ್ಕೆ ದೊಡ್ಡ ಹೊಡೆತ ಕೊಟ್ಟರು. ಪುದುಚೇರಿ ಎದುರಿನ ಪಂದ್ಯದಲ್ಲಿ ಅಮೋಘವಾಗಿ ಆಡಿದ್ದ ಸಮರ್ಥ್ ಇಲ್ಲಿ ಖಾತೆಯನ್ನೇ ತೆರೆಯಲಿಲ್ಲ.

ಕೆ.ವಿ.ಸಿದ್ದಾರ್ಥ್ 6 ರನ್ ಗಳಿಸಿದರು. ಆದರೆ ರೋಹನ್ ಕದಂ 69 ಎಸೆತಗಳಲ್ಲಿ 37 ರನ್ ಗಳಿಸಿಕೊಂಡರು ಮತ್ತು ನಾಯಕ ಮನೀಷ್ ಪಾಂಡೆ 54 ಎಸೆತಗಳಲ್ಲಿ 40 ರನ್ ಗಳಿಸಿ ಇನ್ನಿಂಗ್ಸ್ ಗೆ ಬಲ ತುಂಬಲು ಪ್ರಯತ್ನಿಸಿದರು.ಶ್ರೀನಿವಾಸ್ ಶರತ್ ಕೂಡ ವಿಫಲರಾದರು. ಕೆಳ ಕ್ರಮಾಂಕದ ವಿಕೆಟ್ ಗಳನ್ನು ಸಿದ್ದಾರ್ಥ್ ಮತ್ತು ಸಾಯಿ ಕಿಶೋರ್ ಹಂಚಿಕೊಂಡು ಕರ್ನಾಟಕದ ಇನ್ನಿಂಗ್ಸ್ ಗೆ ಬೇಗನೆ ತೆರೆ ಎಳೆದರು.

ಈ ಒತ್ತಡದ ಸನ್ನಿವೇಶವನ್ನು ಸಮರ್ಥವಾಗಿ ಬಳಸಿಕೊಂಡ ವಾಷಿಂಗ್ಟನ್ ಸುಂದರ್ ಅವರು ಕದಂ ವಿಕೆಟ್ ಗಳಿಸಿ ಜೊತೆಯಾಟವನ್ನು ಮುರಿದರು. ನಂತರದ ಆಟದಲ್ಲಿ ಸಿದ್ದಾರ್ಥ್ ತಮ್ಮ ಸ್ಪಿನ್ ಮೋಡಿ ಮೆರೆದರು.

ಸಿದ್ದಾರ್ಥ್ ಎಸೆತದ ತಿರುವು ಗುರುತಿಸುವಲ್ಲಿ ವಿಫಲರಾದ ಮನೀಶ್ ಪಾಂಡೆ ಕ್ಲೀನ್ ಬೌಲ್ಡ್ ಆದರು. ಕರುಣ್ ನಾಯರ್ ಅವರೇ ಸಿದ್ದಾರ್ಥ್ ಗೆ ಪೆವಿಲಿಯನ್ ದಾರಿ ತೋರಿಸಿದರು.

123 ರನ್ ಗಳ ಗೆಲುವಿನ ಗುರಿಯಿಟ್ಟು ಬೆನ್ನತ್ತಿ ಆಡಿದ ತಮಿಳುನಾಡು ತಂಡ ಕೇವಲ 28 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 123 ರನ್ ಗಳಿಸಿ ರೋಚಕ ಜಯ ಸಾಧಿಸಿತು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹೆಲಿಕಾಪ್ಟರ್ ಅಪಘಾತ; ತನಿಖಾ ಸಮಿತಿ ರಚನೆ

0

ತಮಿಳುನಾಡಿನ ಕೂನೂರು ಸಮೀಪ, ಸೇನಾ ಹೆಲಿಕ್ಯಾಪ್ಟರ್ ಪತನಗೊಂಡಿದೆ. ಈ ಪ್ರಕರಣದ ತನಿಖೆಯನ್ನು ಮೂರು ಸೇನೆಗಳ ಸದಸ್ಯರಿರುವ ಸಮಿತಿ ನಡೆಸಲಿದೆ.

ಈ ತನಿಖೆಯು ಏರ್ ಮಾರ್ಷಲ್ ಮಾನ ವೇಂದ್ರ ಸಿಂಗ್ ಅವರ ತನಿಖೆಯ ನೇತೃತ್ವ ವಹಿಸಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ತಿಳಿಸಿದ್ದಾರೆ.

ತನಿಖಾಧಿಕಾರಿಗಳ ತಂಡವು ವೆಲ್ಲಿಂಗ್ಟನ್ ತಲುಪಿದ್ದು,ಅವರು ತನಿಖೆಯನ್ನು ಆರಂಭಿಸಿದ್ದಾರೆ ಎಂದು ರಾಜನಾಥ್ ಸಿಂಗ್ ಅವರು ತಿಳಿಸಿದ್ದಾರೆ.

ಪತನಗೊಂಡ ಹೆಲಿಕಾಪ್ಟರ್ ನ ಹಾರಾಟ ದತ್ತಾಂಶ ದಾಖಲಾಗಿರುವ ಬ್ಲಾಕ್ ಬಾಕ್ಸ್ ದೊರೆತಿದೆ. ಪತನಕ್ಕೆ ಸಂಬಂಧಿಸಿ ಮಹತ್ವದ ಸುಳಿವುಗಳು ಬ್ಲಾಕ್ ಬಾಕ್ಸ್ ನಿಂದ ಸಿಗುವ ಸಾಧ್ಯತೆ ಇದೆ. ಸೇನಾ ಪಡೆಗಳ ಮೊದಲ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ ಇತರೆ 12 ಮಂದಿ ಹೆಲಿಕ್ಯಾಪ್ಟರ್ ಪತನದಲ್ಲಿ ಮೃತಪಟ್ಟಿದ್ದಾರೆ.

ಪತನದ ಸ್ಥಳದ 300 ಮೀಟರ್ ವ್ಯಾಪ್ತಿಯಲ್ಲಿ ಶೋಧವನ್ನು ನಡೆಸಲಾಗುತ್ತಿದೆ. ಈ ಸಂದರ್ಭದಲ್ಲಿ ಅಧಿಕಾರಿಗಳು ಒಂದು ಕಿ. ಮೀ. ಗೆ ವಿಸ್ತರಿಸಿದ ನಂತರ ಬ್ಲಾಕ್ ಬಾಕ್ಸ್ ಸೇರಿ ಎರಡು ಪೆಟ್ಟಿಗೆಗಳು ಸಿಕ್ಕಿವೆ. ಈ ಪೆಟ್ಟಿಗೆಗಳನ್ನು ದೆಹಲಿ ಅಥವಾ ಬೆಂಗಳೂರಿಗೆ ತರಲಾಗುತ್ತದೆ. ಅದರ ದತ್ತಾಂಶಗಳನ್ನು ಸಂಗ್ರಹಿಸಿ, ಹೆಲಿಕಾಪ್ಟರ್ ಪತನದ ಕಾರಣ ಕಂಡುಹಿಡಿಯಲಾಗುವುದು ಅಧಿಕಾರಿಗಳು ಹೇಳಿದ್ದಾರೆ.

ಘಟನೆಯಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಅವರು ಗಂಭೀರ ಸ್ಥಿತಿಯಲ್ಲಿದ್ದಾರೆ. ಅವರು ಜೀವರಕ್ಷಕ ವ್ಯವಸ್ಥೆಯಲ್ಲಿದ್ದಾರೆ. ಪತನದ ಸ್ಥಳದಿಂದ 6 ಕಿ.ಮೀ. ದೂರದ ವೆಲ್ಲಿಂಗ್ಟನ್ ನಲ್ಲಿ ಇರುವ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಬೆಂಗಳೂರಿನ ಕಮಾಂಡ್ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಹರಿಹರದಲ್ಲಿ ತುಂಗಾರತಿ

0

ಹರಿಹರದ ಪಂಚಮಸಾಲಿ ಪೀಠದ ನೇತೃತ್ವದಲ್ಲಿ ತುಂಗಾರತಿ ನಡೆಯಲಿದೆ. ಹರ ಜಾತ್ರೆಗೆ ಸಂಬಂಧಿಸಿದ ಸಿ.ಡಿ ಯನ್ನು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

ಕಾಶಿಯಲ್ಲಿ ಗಂಗಾ ಆರತಿ ಆಯೋಜಿಸುವ ಮಾದರಿಯಲ್ಲಿ ದಾವಣಗೆರೆಯ ಹರಿಹರದಲ್ಲಿ ತುಂಗಾ ಆರತಿ ನಡೆಸಲು ಮೂವತ್ತು ಕೋಟಿ ವೆಚ್ಚದಲ್ಲಿ ಮಂಟಪಗಳನ್ನು ನಿರ್ಮಿಸಲಾಗುವುದು ಎಂದು ಮಾನ್ಯ ಮುಖ್ಯಮಂತ್ರಿ ಅವರು ತಿಳಿಸಿದ್ದಾರೆ.

ಮುಂದಿನ ವರ್ಷದ ಮೊದಲನೇ ತಿಂಗಳು 13 ಹಾಗೂ 14ರಂದು ಹರ ಜಾತ್ರೆ ನಡೆಯಲಿದೆ. ಜಾತ್ರೆಗೆ ಸಂಬಂಧಿಸಿದ ಲಾಂಛನ, ಟಿ ಶರ್ಟ್ ಹಾಗೂ ಸಿಡಿಯನ್ನು ಮುಖ್ಯಮಂತ್ರಿ ಅವರು ಬಿಡುಗಡೆ ಮಾಡಿದರು.

ಜನವರಿ ತಿಂಗಳಿನಲ್ಲಿ ನಡೆಯುವ ಹರ ಜಾತ್ರೆಯ ಸಮಯದಲ್ಲೇ ತುಂಗಾ ಆರತಿ ಮಂಟಪಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗುವುದು ಎಂದರು.

ತುಂಗಾ ಆರತಿ ಮಂಟಪಗಳ ನಿರ್ಮಾಣ ಹರಿಹರ ಪಂಚಮಸಾಲಿ ಪೀಠದ ವಂಚನಾನಂದ ಸ್ವಾಮೀಜಿ ಬಹುದೊಡ್ಡ ಕನಸಾಗಿದೆ. ಅವರೇ ಕಟ್ಟಡಗಳ ವಿನ್ಯಾಸ ಹಾಗೂ ಯೋಜನಾ ವರದಿ ಸಿದ್ಧಪಡಿಸಿ, ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಅವರ ಕೋರಿಕೆಯಂತೆ 30 ಕೋಟಿ ವೆಚ್ಚದಲ್ಲಿ ಕಾಮಗಾರಿ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ಕೂಡ ತಿಳಿಸಿದ್ದಾರೆ.

ಪ್ರತಿವರ್ಷವೂ ಹರ ಜಾತ್ರಾ ಮಹೋತ್ಸವ ಜನಪ್ರಿಯವಾಗುತ್ತಿದೆ. ಈ ಜಾತ್ರೆಯ ಮೂಲಕ ಸಂಸ್ಕೃತಿಯನ್ನು ಉಳಿಸಲು ಸಹಾಯಕ. ಮಟ್ಟದ ಶೈಕ್ಷಣಿಕ ಹಾಗೂ ಧಾರ್ಮಿಕ ಕೆಲಸಗಳಿಗೂ ಸರ್ಕಾರ ಬೆಂಬಲ ನೀಡುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಹಾಗೂ ಸಚಿವರಾದ ಡಾ. ಸಿ. ಎನ್. ಅಶ್ವತ್ಥನಾರಾಯಣ ಇನ್ನು ಮುಂತಾದವರು ಉಪಸ್ಥಿತರಿದ್ದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.

ಕೋವಿಡ್: ಸದ್ಯದ ಮಾರ್ಗಸೂಚಿ ಮುಂದುವರಿಕೆ

0

ರಾಜ್ಯದಲ್ಲಿ ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿದೆ. ಹಾಗೂ ಕೋವಿಡ್ ಪ್ರಕರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ರಾತ್ರಿ ಕರ್ಫ್ಯೂ ವಿಧಿಸಬೇಕೇ ಅಥವಾ ಬೇಡವೇ ಎಂಬುವುದನ್ನು ಮುಂದಿನ ವಾರದ ಪರಿಸ್ಥಿತಿಯನ್ನು ಅವಲೋಕಿಸಬೇಕು. ಅನಂತರ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಕ್ರಿಸ್ ಮಸ್ ಹಾಗೂ ಹೊಸ ವರ್ಷ ಆಚರಣೆಯ ವಿಚಾರವಾಗಿ ಮುಂದಿನವಾರ ನಿರ್ಧಾರ ತೆಗೆದುಕೊಳ್ಳಲಾಗುತ್ತದೆ ಎಂದರು.

ಕೋವಿಡ್ ತಾಂತ್ರಿಕ ಸಲಹಾ ಸಮಿತಿಯ ಅಧ್ಯಕ್ಷ ಡಾ. ಎಂ. ಕೆ. ಸುದರ್ಶನ್ ಅವರು ಸಂಪುಟ ಸಭೆಯ ಮುಂದೆ ಈ ವಿಚಾರವಾಗಿ ಕೆಲವು ಮಾಹಿತಿಗಳನ್ನು ತಿಳಿಸಿದ್ದಾರೆ. ಅವರು ನೀಡಿದ ವಿವರಗಳು ಮತ್ತು ಕೋವಿಡ್ ದೃಢಪಟ್ಟಿರುವ ಸಂಖ್ಯೆ ನೋಡಿದಾಗ ಯಾರು ಗಾಬರಿಯಾಗುವ ಪರಿಸ್ಥಿತಿ ಸದ್ಯಕ್ಕಿಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಅವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಹಾಸ್ಟೆಲ್ ಗಳಲ್ಲಿ ಕೆಲವು ಸುರಕ್ಷಿತ ಕ್ರಮಗಳನ್ನು ತೆಗೆದುಕೊಳ್ಳಲು ಸುದರ್ಶನ್ ಅವರು ಕೆಲವು ಸಲಹೆಗಳನ್ನು ನೀಡಿದ್ದಾರೆ. ಹಾಸ್ಟೆಲ್ಗಳಲ್ಲಿ ದಿನಕ್ಕೆ ಎರಡು ಬಾರಿ ಸ್ಯಾನಿಟೈಸ್ ಮಾಡಲಾಗುತ್ತದೆ. ಅಡುಗೆ ಮತ್ತಿತರ ಕೆಲಸ ಮಾಡುವವರಿಗೆ ಎರಡು ಲಸಿಕೆ ನೀಡುವುದು. ಸೋಂಕಿತರನ್ನು ಪ್ರತ್ಯೇಕಗೊಳಿಸಲು ಐಸೋಲೇಶನ್ ಕೊಠಡಿ ಸಿದ್ಧಪಡಿಸಲು ಸೂಚಿಸಿದ್ದಾರೆ ಎಂದು ಬೊಮ್ಮಾಯಿ ಅವರು ತಿಳಿಸಿದರು.

ಎರಡು- ಮೂರು ತಿಂಗಳ ಹಿಂದೆ ಕೋವಿಡ್ ಲಸಿಕೆ ವಿಶೇಷ ಅಭಿಯಾನ ನಡೆಸಲಾಯಿತು. ಹೀಗೆ ಮತ್ತೊಂದು ವಿಶೇಷ ಅಭಿಯಾನ ನಡೆಸಬೇಕು. ಇಲ್ಲಿಯವರೆಗೂ ಲಸಿಕೆ ಪಡೆದವರಿಗೆ ಇದರಿಂದ ಅನುಕೂಲವಾಗುತ್ತದೆ. ಸಚಿವ ಸಹದ್ಯೋಗಿಗಳು ಸಲಹೆ ನೀಡಿದ್ದಾರೆ. ಅದಕ್ಕೆ ಒಪ್ಪಿಗೆ ನೀಡಲಾಗಿದೆ ಎಂದರು.

ಕೇರಳದಿಂದ ಬರುವ ವಿದ್ಯಾರ್ಥಿಗಳು ಹಾಗೂ ಇತರರನ್ನು ಆರ್ ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ಬರುವುದು ಕಡ್ಡಾಯ. ಉಳಿದಂತೆ ಈಗ ಇರುವ ಮಾರ್ಗಸೂಚಿಯನ್ನು ಮುಂದುವರಿಸಲಾಗುತ್ತದೆ. ಕ್ಲಸ್ಟರ್ ನಿರ್ವಹಣೆಯನ್ನು ಕಟ್ಟುನಿಟ್ಟಾಗಿ ಮಾಡಲಾಗುವುದು. 3 ಜನರಿಗೆ ಕೋವಿಡ್ ದೃಢಪಟ್ಟರೆ ಕ್ಲಸ್ಟರ್ ಎಂದು ಪರಿಗಣಿಸಲಾಗುವುದು. ಹೊಸದಾಗಿ ಯಾವುದೇ ನಿರ್ಬಂಧ ವಿಧಿಸಿಲ್ಲ ಎಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಮಾಧ್ಯಮ ಮಿತ್ರರಿಗೆ ತಿಳಿಸಿದರು.

Book Your Advertisement Now.

Our site will give you the option of the best Article available in the selected area along with their Analytics of advertisement. You can choose the Keelambi Media Lab Pvt Ltd according to your need/budget.