Wednesday, February 18, 2026
Wednesday, February 18, 2026
Home Blog Page 174

C.P. Radhakrishnan ಸಿ.ಪಿ.ರಾಧಾಕೃಷ್ಣನ್, ನಮ್ಮ ನೂತನ ಉಪರಾಷ್ಟ್ರಪತಿ 15 ಸಂಸದರ ಅಡ್ಡ ಮತದಾನ ಸ್ಪಷ್ಟ

0

C.P. Radhakrishnan ಈ ಬಾರಿಯ ಉಪ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆ
ಕುತೂಹಲ ಕೆರಳಿಸಿತ್ತು.
ಏಕೆಂದರೆ ಈಗಿನ ರಾಜಕೀಯ ಪರಿಸ್ಥಿತಿಯಲ್ಲಿ ಫಲಿತಾಂಶ ಹೇಗಾದರೂ ಬರಬಹುದು.
ಆದರೆ ಎನ್ ಡಿ ಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ವಿಪಕ್ಷಗಳ‌ ಮತಗಳನ್ನೂ ಸೆಳೆದಿದ್ದಾರೆಂದರೆ ಶ್ಲಾಘನೀಯವೆ.
452 ಸಂಸದರ ಮತಗಳು ರಾಧಾಕೃಷ್ಣನ್ ಪರ ಬಂದಿವೆ. ವಪಕ್ಷದ ಅಭ್ಯರ್ಥಿ‌ ನ್ಯಾ.ಬಿ.ಸುದರ್ಶನ್ ರೆಡ್ಡಿ ಅವರ ಪರ 300/ಮತಗಳು ಚಲಾಯಿಸಲ್ಪಟ್ಟಿವೆ.
ಯಾವುದೇ ಅಭ್ಯರ್ಥಿ ಗೆಲುವಿಗೆ 377 ಮತಗಳನ್ನ ಕನಿಷ್ಡ ಪಡೆಯಬೇಕು. ಆದರೆ 152 ಮತಗಳ‌ ಅಂತರದಲ್ಲಿ ಎನ್ ಡಿ.ಎ ಅಭ್ಯರ್ಥಿ ಜಯಶೀಲರಾಗಿದ್ದಾರೆ .

ಶ್ರೀ ಸಿ.ಪಿ.ರಾಧಾಕೃಷ್ಣನ್.

C.P. Radhakrishnan ತಮಿಳುನಾಡಿನ ತಿರುಪ್ಪೂರಲ್ಲಿ ಜನನ.
( 1957, ಅಕ್ಡೋಬರ್ 20)
ತಾರುಣ್ಯದಲ್ಲಿಯೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ನಂಟು.ಜನಸಂಘದ ಮೂಲಕ ಕಾರ್ಯಕರ್ತರಾಗಿ ಸೇವೆ ಆರಂಭಿಸಿದರು.
ಬಿಬಿಎ ಪದವೀಧರರು.
ತಮಿಳುನಾಡು ಬಿಜೆಪಿ ಯ ಕಾರ್ಯದರ್ಶಿ.
ಕೊಯಮತ್ತೂರು ಲೋಕಸಭಾಕ್ಷೇತ್ರದಿಂದ ಎರಡು ಸಲ ಸಂಸತ್ತಿಗೆ ಆಯ್ಕೆ.
2023 ರಲ್ಲಿ ಜಾರ್ಖಂಡ್ ರಾಜ್ಯಪಾಲರಾಗಿ ನೇಮಕ.
ನಂತರ ಮಹಾರಾಷ್ಟ್ರದ ರಾಜ್ಯಪಾಲಿರಾಗಿ ಸೇವೆ ಸಂದಿದೆ.

CM Siddaramaiah ಮುಖ್ಯಮಂತ್ರಿಗಳ ಕಾರಿಗೆ ಸಂಚಾರಿ ನಿಯಮ ಉಲ್ಲಂಘನೆಗೆ ಏಳು ಬಾರಿ ದಂಡ. ಶೇ50 ರಿಯಾಯಿತಿಯಡಿ ದಂಡ ಪಾವತಿ

0

CM Siddaramaiah ಸಂಚಾರ ನಿಯಮ ಉಲ್ಲಂಘಿಸಿದ ವಾಹನ ಸವಾರರಿಗೆ ರಾಜ್ಯ ಸರ್ಕಾರ ಶೇ.50ರಷ್ಟು ದಂಡ ಪಾವತಿಯ ಆಫರ್ ನೀಡಿದ ಹಿನ್ನೆಲೆಯಲ್ಲಿ ಸವಾರರು ದಂಡ ಕಟ್ಟುತ್ತಿದ್ದಾರೆ.
ಇದುವರೆಗೂ 40 ಕೋಟಿ ರೂ.ಗಿಂತಲೂ ಹೆಚ್ಚು ದಂಡ ಪಾವತಿಯಾಗಿದೆ ಎಂದು ತಿಳಿದು ಬಂದಿದೆ.

ಈ ಬೆನ್ನಲ್ಲೇ ಕರ್ನಾಟಕ ಸಿಎಂ ಸಿದ್ದರಾಮಯ್ಯ ಅವರ ಕಾರು ಕೂಡ ಬರೊಬ್ಬರಿ 7 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಕಾರಣ ದಂಡ ಹೇರಲಾಗಿದೆ.

ಸಿಎಂ ಸಿದ್ದರಾಮಯ್ಯ ಬಳಸುವ ಇನೋವಾ ಕ್ರಿಸ್ಟಾ ಕಾರು 2024ರಿಂದ ಈವರೆಗೂ ಏಳು ಬಾರಿ ಸಂಚಾರ ನಿಯಮಗಳನ್ನು ಉಲ್ಲಂಘಿಸಿದೆ.

ಈ ಪೈಕಿ ಆರು ಪ್ರಕರಣಗಳು ಸಿಎಂ ಸೀಟು ಬೆಲ್ಟ್ ಧರಿಸದೇ ನಿಯಮ ಉಲ್ಲಂಘಿಸಿದ್ದಾಗಿದೆ. ಶೇ.50ರಷ್ಟು ರಿಯಾಯಿತಿಯ ಅನುಸಾರ ಅವರು 2,500 ರೂಪಾಯಿ ದಂಡ ಪಾವತಿಸಬೇಕಿತ್ತು. ಸೋಷಿಯಲ್ ಮೀಡಿಯಾದಲ್ಲಿ ಈ ಕುರಿತು ವ್ಯಾಪಕ ಚರ್ಚೆ ನಡೆದ ಬಳಿಕ ಶದಂಡ ಪಾವತಿಯಾಗಿದೆ ಎಂದು ಸಂಚಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ .

CM Siddaramaiah ಆರು ಬಾರಿ ಸೀಟು ಬೆಲ್ಟ್ ಧರಿಸದಿದ್ದಕ್ಕಾಗಿ ಮತ್ತು ಒಂದು ಬಾರಿ ಅತಿವೇಗದಲ್ಲಿ ಚಲಿಸಿದ್ದಕ್ಕಾಗಿ ದಂಡ ವಿಧಿಸಲಾಗಿದ್ದು, ಸದ್ಯ ದಂಡದ ಮೊತ್ತವನ್ನು ಪಾವತಿಸಲಾಗಿದೆ ಎಂದು ಸಂಚಾರ ಪೊಲೀಸ್ ಮೂಲಗಳು ತಿಳಿಸಿವೆ.

Karnataka Olympic Association ಕರ್ನಾಟಕ ಕೌಶಲ್ಯ ಒಲಂಪಿಕ್ಸ್ 2025-26 ಸ್ಪರ್ಧೆಗೆ ಅರ್ಜಿ ಆಹ್ವಾನ

0

Karnataka Olympic Association ಕರ್ನಾಟಕ ರಾಜ್ಯದ ಯುವ ಜನತೆಯ ಜ್ಞಾನಾರ್ಜನೆಗೆ ಸೂಕ್ತ ವೇದಿಕೆ ಕಲ್ಪಿಸಲು ಹಾಗೂ ಮಾದರಿ ಕೌಶಲ್ಯಾಭರಿತ ರಾಜ್ಯವನ್ನಾಗಿಸಲು 2025-26ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕೌಶಲ್ಯ ಒಲಂಪಿಕ್ಸ್ (ಇಂಡಿಯಾ ಸ್ಕಿಲ್ಸ್ ಕರ್ನಾಟಕ-2025) ಸ್ಪರ್ಧಾ ಕಾರ್ಯಕ್ರಮವನ್ನು ಜಿಲ್ಲಾ, ವಲಯ ಹಾಗೂ ರಾಜ್ಯ ಮಟ್ಟಗಳಲ್ಲಿ ಕೈಗೊಳ್ಳಲು ಆಯೋಜಿಸಲಾಗಿದ್ದು, ಆಸಕ್ತರಿಂದ ನೋಂದಣಿ ಮಾಡಿಕೊಳ್ಳಲು ಆಹ್ವಾನಿಸಿದೆ.
ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮದ ವತಿಯಿಂದ ಎರಡು ವರ್ಷಗಳಿಗೊಮ್ಮೆ ನಡೆಯುವ ಇಂಡಿಯಾ ಸ್ಕಿಲ್ಸ್-2025 ಸ್ಪರ್ಧೆಯಲ್ಲಿ 16 ರಿಂದ 25 ವರ್ಷದೊಳಗಿನ ಯುವಜನತೆ 63 ಕ್ಕೂ ಹೆಚ್ಚು ಕೌಶಲ್ಯದ ವಿವಿಧ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವ ಅತಿದೊಡ್ಡ ವೃತ್ತಿಪರ ಶಿಕ್ಷಣ ಮತ್ತು ಕೌಶಲ್ಯ ಕಾರ್ಯಕ್ರಮವಾಗಿದ್ದು, 2026 ನೇ ಸಾಲಿಗೆ ವಿಶ್ವ ಕೌಶಲ್ಯ ಸ್ಪರ್ಧೆಯು ಚೀನಾದ ಶಾಂಘೈನಲ್ಲಿ ನಡೆಯಲಿದೆ.
ಸ್ಪರ್ಧೆಯಲ್ಲಿ ಭಾಗವಹಿಸುವವರು https://www.skillindiadigital.gov.in/home ಲಿಂಕ್ ಬಳಸುವ ಮೂಲಕ ಸೆ, 30 ರೊಳಗೆ ಸ್ಪರ್ಧೆಗೆ ನೋಂದಾಯಿಸಿಕೊಳ್ಳಬಹುದು ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹಾಗೂ ಹೆಚ್ಚಿನ ಮಾಹಿತಿಗೆ +919606492216 ನ್ನು ಸಂಪರ್ಕಿಸುವುದು.

DC Shivamogga ಸೆ .11 ರಂದು ಆಹಾರ ಸಂಸ್ಕರಣಾ ಉದ್ದಿಮೆಗಳ ಕುರಿತು ಅರಿವು ಕಾರ್ಯಕ್ರಮ

0

DC Shivamogga ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕೆಫೆಕ್ ಸಂಸ್ಥೆ- ಬೆಂಗಳೂರು ಹಾಗೂ ಕೃಷಿ ಇಲಾಖೆಯ ಸಹಯೋಗದೊಂದಿಗೆ ಸೆ. 11 ರಂದು ಬೆಳಗ್ಗೆ 10.00ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಪ್ರಧಾನ ಮಂತ್ರಿಗಳ ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PMFME) ಯೋಜನೆಗಳ ಕುರಿತು ಅರ್ಧ ದಿನ ಜಿಲ್ಲಾ ಮಟ್ಟದ ಅರಿವು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. DC Shivamogga ಈ ಕಾರ್ಯಕ್ರಮದಲ್ಲಿ ಕಿರು ಆಹಾರ ಸಂಸ್ಕರಣೆ ಉದ್ದಿಮೆಗಳ ಸ್ಥಾಪನೆ /ಅಭಿವೃದ್ಧಿಗೆ ಸುವರ್ಣಾಕಾಶವಿದ್ದು, ಜಿಲ್ಲೆಯ ವೈಯಕ್ತಿಕ ಕಿರು ಉದ್ದಿಮೆಗಳು ಹಾಗೂ ರೈತ ಉತ್ಪಾದಕ ಸಂಸ್ಥೆಗಳು, ಎಲ್ಲಾ ರೈತರು/ಉದ್ದಿಮೆದಾರರು ಪಾಲ್ಗೊಂಡು ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.

Shivamogga-Bhadravati Urban Development Authority ಖಾಸಗಿ ಬಡಾವಣೆಯಲ್ಲಿನ ನಾಗರಿಕ ಸೌಲಭ್ಯ ನಿವೇಶನಗಳ ಹಂಚಿಕೆ ಸಂಬಂಧ ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ವಿಸ್ತರಣೆ

0

Shivamogga-Bhadravati Urban Development Authority ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರವು ತನ್ನ ವ್ಯಾಪ್ತಿಯಲ್ಲಿರುವ ಖಾಸಗಿ ಬಡಾವಣೆಗಳಲ್ಲಿ ಲಭ್ಯವಿರುವ ನಾಗರೀಕ ಸೌಲಭ್ಯ ನಿವೇಶನಗಳನ್ನು 1991ರ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ನಾಗರೀಕ ಸೌಲಭ್ಯ ನಿವೇಶನಗಳ ಹಂಚಿಕೆ ನಿಯಮದನ್ವಯ ಅರ್ಹ ನೊಂದಾಯಿತ ಸಂಘ ಸಂಸ್ಥೆಗಳು /ಕೇಂದ್ರ / ರಾಜ್ಯ / ಅರೆ ಸರ್ಕಾರಿ / ನಿಗಮ ಮಂಡಳಿಗಳಿಂದ ಹಂಚಿಕೆಗಾಗಿ ಜುಲೈ 29ರಂದು ಪ್ರಕಟಣೆಯನ್ನು ಹೊರಡಿಸಲಾಗಿತ್ತು. ಸದರಿ ಪ್ರಕಟಣೆಯಲ್ಲಿ ನಾಗರಿಕ ಸೌಲಭ್ಯ ನಿವೇಶನ ಮಂಜೂರಾತಿ ಅರ್ಜಿ ನಮೂನೆ-1 ಮತ್ತು ನಮೂನೆ-2 ನ್ನು ಪಡೆಯಲು ದಿನಾಂಕ:15-09-2025 ರವರೆಗೆ, ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸಲು ನಿಗಧಿಪಡಿಸಲಾಗಿದ್ದ ದಿನಾಂಕವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ದಿನಾಂಕ:17-09-2025 ರವರೆಗೆ ವಿಸ್ತರಿಸಲಾಗಿದೆ.

Shivamogga-Bhadravati Urban Development Authority ಹೆಚ್ಚಿನ ಮಾಹಿತಿಯನ್ನು ಪ್ರಾಧಿಕಾರದ ವೆಬ್‌ಸೈಟ್‌ನಿಂದ ಹಾಗೂ ಕಚೇರಿ ದೂರವಾಣಿ ನಂ. 08182-248887 ನ್ನು ಸಂಪರ್ಕಿಸಿ ಪಡೆಯಬಹುದಾಗಿದೆ ಎಂದು ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರು ತಿಳಿಸಿದ್ದಾರೆ.

Bharat Scouts and Guides Shivamogga ಮಕ್ಕಳಲ್ಲಿ ದೇಶಭಕ್ತಿ ಪ್ರಜ್ವಲಿಸುವ ಸ್ಪರ್ಧೆಗಳು ಅವಶ್ಯ- ಶ್ರೀನಿವಾಸ ವರ್ಮ

0

Bharat Scouts and Guides Shivamogga ಭಾರತ್ ಸ್ಕೌಟ್ ಮತ್ತು ಗೈಡ್ಸ್ ಶಿವಮೊಗ್ಗ ಸ್ಥಳೀಯ ಸಂಸ್ಥೆ ವತಿಯಿಂದ ಜಿಲ್ಲಾ ಸ್ಕೌಟ್ ಭವನದಲ್ಲಿ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ಗೀತ ಗಾಯನ ಸ್ಪರ್ಧೆಯ ಅಧ್ಯಕ್ಷತೆಯನ್ನು ವಹಿಸಿ ಉದ್ಘಾಟಿಸಿದ ಶಿವಮೊಗ್ಗ ನಗರದ ಹೆಸರಾಂತ ಶಿಕ್ಷಣ ಸಂಸ್ಥೆಯಾದ ಸಾಂದೀಪನಿ ಎಜುಕೇಶನಲ್ ಟ್ರಸ್ಟ್ ಅಧ್ಯಕ್ಷರು ಹಾಗೂ ಸ್ಥಳೀಯ ಸಂಸ್ಥೆಯ ಸಹಾಯಕ ಜಿಲ್ಲಾ ಆಯುಕ್ತರು ಸ್ಕೌಟ್ ಶ್ರೀಯುತ ಶ್ರೀನಿವಾಸ್ ವರ್ಮ ಮಾತನಾಡುತ್ತಾ ಮಕ್ಕಳಲ್ಲಿ ದೇಶಭಕ್ತಿ ಪ್ರಜ್ವಲಿಸುವ ಮತ್ತು ರೋವರ್ಸ್ ಮತ್ತು ರೇಂಜಸ್ರವರಲ್ಲಿ ಜಾನಪದ ಗೀತೆಗಳ ಜ್ಞಾನವನ್ನು ಹೆಚ್ಚಿಸುವ ಇಂತಹ ಸ್ಪರ್ಧೆಗಳು ಅವಶ್ಯಕವಾಗಿದ್ದು, ಕರ್ನಾಟಕ ರಾಜ್ಯ ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ರಾಜ್ಯ ಮುಖ್ಯ ಆಯುಕ್ತರಾದ ಸನ್ಮಾನ್ಯ ಶ್ರೀ ಪಿ. ಜಿ. ಆರ್. ಸಿಂಧ್ಯಾ ರವರ ಆಶಯ ಮತ್ತು ಮಾರ್ಗದರ್ಶನದಂತೆ ನಡೆಯುತ್ತಿದೆ ಎಂದು ಹೇಳಿದರು.

ತಾಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಸ್ಪರ್ಧಾಳುಗಳಿಗೆ ಶುಭಾಶಯ ಕೋರಿದರು. ಗೀತ ಗಾಯನ ಸ್ಪರ್ಧೆಯು ಸ್ಕೌಟ್ ಗೈಡ್ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು.

ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ಶ್ರೀ ರಾಜೇಶ್ ಅವಲಕ್ಕಿ ಅವರು ಸರ್ವರನ್ನ ಸ್ವಾಗತಿಸಿದರು.
ಸಿಹಿಮೊಗೆ ಓಪನ್ ಗ್ರೂಪಿನ ಗ್ರೂಪ್ ಲೀಡರ್ ಗೈಡ್ ಹಾಗೂ ಹಿರಿಯ ತರಬೇತಿ ನಾಯಕಿ ಶ್ರೀಮತಿ ಕಾತ್ಯಾಯಿನಿ ರವರು ತೀರ್ಪುಗಾರರ ಪರಿಚಯವನ್ನು ಮಾಡಿಕೊಟ್ಟರು.

ಹಿರಿಯ ಗೈಡರ್ ಮತ್ತು ಜಿಲ್ಲಾ ತರಬೇತಿ ಆಯುಕ್ತೆ ( ಗೈಡ್) ಶ್ರೀಮತಿ ಗೀತಾ ಚಿಕ್ಮಟ್ ರವರು ಸರ್ವರನ್ನು ವಂದಿಸಿದರು. ಶಿವಮೊಗ್ಗದ ಸಿಹಿಮೊಗೆ ಓಪನ್ ಗ್ರೂಪಿನ ಕಬ್, ಬುಲ್ ಬುಲ್, ಸ್ಕೌಟ್, ಗೈಡ್ ಮಕ್ಕಳು ಪ್ರಥಮ ಸ್ಥಾನ ಪಡೆದರು. ರೋವರ್ ಮತ್ತು ರೇಂಜರ್ ವಿಭಾಗದಲ್ಲಿ ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜು ರೋವರ್ಸ್ ಮತ್ತು ರೇಂಜರ್ಸ್ ಪ್ರಥಮ ಸ್ಥಾನ ಪಡದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

Bharat Scouts and Guides Shivamogga ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಹಿರಿಯ ಸ್ಕೌಟರ್ ಮತ್ತು ಜಿಲ್ಲಾ ಸಂಸ್ಥೆ ಸಹ ಕಾರ್ಯದರ್ಶಿಗಳಾದ
ಶ್ರೀ ವೈ. ಆರ್. ವೀರೇಶಪ್ಪನವರು ಮಕ್ಕಳಿಗೆ ಮುಂದಿನ ಹಂತಗಳಲ್ಲಿ ಯಾವ ರೀತಿಯಲ್ಲಿ ತಯಾರಾಗಿ ಬರಬೇಕೆಂದು ತಿಳಿಹೇಳಿ ಶುಭಾಶಯವನ್ನು ಕೋರಿದರು.

ಡಿ ವಿ ಎಸ್ ಸ್ವತಂತ್ರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಮತ್ತು ರೋವರ್ ಸ್ಕೌಟ್ ಲೀಡರ್ ಆದಂತಹ ಶ್ರೀಯುತ ಗದಿಗಯ್ಯ ಸ್ವಾಮಿ, ಶ್ರೀ ಆದಿತ್ಯ ರವರು, ಮಲ್ನಾಡ್ ಓಪನ್ ಗ್ರೂಪ್ ಸಹಾಯಕ ಸ್ಕೌಟ್ ಮಾಸ್ಟರ್ ಶ್ರೀ ರೇಣುಕಯ್ಯ, ಪೋಷಕರು, ವಿವಿಧ ಶಾಲೆ ಕಾಲೇಜಿನಿಂದ ಆಗಮಿಸಿದ್ದ ಸುಮಾರು 70 ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ತೀರ್ಪುಗಾರರಾಗಿ ಆಗಮಿಸಿದ್ದ ಶ್ರೀಮತಿ ರೂಪ ಎಸ್. ಹೊಳ್ಳ ಮತ್ತು ಶ್ರೀಮತಿ ಉಷಾ ಅವರಿಗೆ ಸನ್ಮಾನಿಸಲಾಯಿತು. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಸ್ಥಳೀಯ ಸಂಸ್ಥೆಯ ವತಿಯಿಂದ ನೆನಪಿನ ಕಾಣಿಕೆಯನ್ನು ನೀಡಲಾಯಿತು. ಸ್ಥಳೀಯ ಸಂಸ್ಥೆ ಖಜಾಂಜಿ ಶ್ರೀ ದೀಪು ಪಿ.ಎಸ್. ರವರು ಸರ್ವರಿಗೂ ವಂದಿಸಿದರು. ಕಾರ್ಯಕ್ರಮವು ರಾಷ್ಟ್ರಗೀತೆ ಗಾಯನದೊಂದಿಗೆ ಮುಕ್ತಾಯವಾಯಿತು.

Karnataka Sanga ಸೆ.12. ಕರ್ನಾಟಕ ಸಂಘದಲ್ಲಿ ” ಕನ್ನಡ ಕವಿಗಳ ಕಣ್ಣಲ್ಲಿ, ಶಬರಿ” ವಿಷಯವಾಗಿ ಜಗದೀಶ್ ಶರ್ಮಾ ಅವರಿಂದ ಉಪನ್ಯಾಸ

0

Karnataka Sanga ದಿನಾಂಕ 12 ಸೆಪ್ಟೆಂಬರ್ 2025ರ ಶುಕ್ರವಾರ ಸಂಜೆ 5:30ಕ್ಕೆ ಹಸೂಡಿ ವೆಂಕಟ ಶಾಸ್ತ್ರಿ ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತ್ರಿ ಇವರ ಅಧ್ಯಕ್ಷತೆಯಲ್ಲಿ ತಿಂಗಳ ಅತಿಥಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ವಿದ್ವಾನ್ ಜಗದೀಶಶರ್ಮಾ ಸಂಪ, ವಾಗ್ಮಿಗಳು ಹಾಗೂ ಚಿಂತಕರು, ಬೆಂಗಳೂರು ಇವರು ‘ಕನ್ನಡ ಕವಿಗಳ ಕಣ್ಣಲ್ಲಿ ಶಬರಿ’ ವಿಷಯದ ಕುರಿತು ಮಾತನಾಡಲಿದ್ದಾರೆ.

DVS College of Arts and Science ಡಿವಿಎಸ್ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಸುರೇಶ್ ಅವರಿಗೆ ಪಿ ಹೆಚ್ ಡಿ ಪದವಿ

0

DVS College of Arts and Science ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಉಪನ್ಯಾಸಕ ಸುರೇಶ್ ಆರ್. ಅವರು “ಕರ್ನಾಟಕ ಅರ್ಬನ್ ಲೋಕಲ್ ಬಾಡಿಸ್ ಎಲೆಕ್ಷನ್ 2007: ಎ ಸ್ಟಡಿ ಆಫ್ ಶಿವಮೊಗ್ಗ ಅರ್ಬನ್ ಲೋಕಲ್ ಬಾಡಿಸ್” ವಿಷಯ ಕುರಿತು ಮಂಡಿಸಿರುವ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡಿಯನ್ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ನೀಡಿ ಗೌರವಿಸಿದೆ.

ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದ ಸಹ ಪ್ರಾಧ್ಯಾಪಕ ಡಾ. ಕೆ.ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪ್ರಬಂಧ ಮಂಡಿಸಿದ್ದರು.

ಶಿವಮೊಗ್ಗ ನಗರದ ಬಸವನಗುಡಿಯ ಶ್ರೀಮತಿ ಲಕ್ಷ್ಮೀ ಮತ್ತು ದಿ. ಎನ್.ರಾಮಣ್ಣ ಶೆಟ್ಟಿ ದಂಪತಿ ಪುತ್ರ.

Kannada Sahitya Parishad ಕನ್ನಡಕ್ಕೆ ಹೋರಾಡಿದ ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನೂ ಹಿಂಪಡೆಯಲಿ- ಡಾ.ಮಹೇಶ್ ಜೋಷಿ

0

Kannada Sahitya Parishad ಕನ್ನಡಕ್ಕಾಗಿ ಹೋರಾಡಿದ ಕನ್ನಡ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ರಾಜ್ಯ ಸರ್ಕಾರ ಕೂಡಲೇ ಹಿಂಪಡೆಯುವಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹ ಪಡಿಸಿದ್ದಾರೆ.

ಈ ಕುರಿತು 2023ರ ಜನವರಿ 6,7 ಮತ್ತು 8ರಂದು ಹಾವೇರಿಯಲ್ಲಿ ನಡೆದ 86ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಸರ್ವಾನುಮತದಿಂದ ನಿರ್ಣಯವನ್ನು ತೆಗೆದುಕೊಂಡಿತ್ತು.

ನಿರಂತರವಾಗಿ ಕರ್ನಾಟಕ ರಾಜ್ಯ ಸರ್ಕಾರದ ಮೇಲೆ ಒತ್ತಡವನ್ನೂ ಹಾಕುತ್ತಾ ಬಂದಿತ್ತು. ಆದರೆ ಅದು ಇಂದಿಗೂ ಕಾರ್ಯರೂಪಕ್ಕೆ ಬಂದಿಲ್ಲ. ರಾಜಕೀಯ ಮತ್ತು ಸಾಮಾಜಿಕ ನೆಲೆಗಳಲ್ಲಿ ಮೊಕದ್ದಮೆಗಳನ್ನು ಹಿಂಪಡೆಯಲಾಗುತ್ತಿದೆಯೇ ಹೊರತು ಕನ್ನಡಕ್ಕೆ ಹೋರಾಡಿದ ಚಳವಳಿಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯದಿರುವುದು ದುರದೃಷ್ಟಕರ ಸಂಗತಿ ಎಂದು ನಾಡೋಜ ಡಾ.ಮಹೇಶ ಜೋಶಿ ತಿಳಿಸಿದ್ದಾರೆ.

ಕನ್ನಡ ಹೋರಾಟಗಾರರು ತಮ್ಮ ಸಮಸ್ತವನ್ನು ಕನ್ನಡಕ್ಕಾಗಿ ತ್ಯಾಗ ಮಾಡಿ. ಕೇವಲ ಕನ್ನಡದ ಮೇಲಿನ ಅಭಿಮಾನದಿಂದ ಮೊಕದ್ದಮೆಗಳನ್ನು ಹೇರಿಕೊಂಡು ಹಲವು ಕಷ್ಟಗಳನ್ನು ಅನುಭವಿಸುತ್ತಾರೆ, ನ್ಯಾಯಾಲಯಕ್ಕೆ ಸುತ್ತುವ, ಸೆರೆಮನೆ ವಾಸ ಅನುಭವಿಸುವ, ವಿದೇಶಗಳಿಗೆ ಹೋಗುವ ರಹದಾರಿಯು ದೊರಕದೆ, ಅವಕಾಶಗಳಿಂದ ವಂಚಿತರಾಗುವ ಹೀಗೆ ಹಲವು ಸಂಕಷ್ಟಗಳನ್ನು ಅನುಭವಿಸಿ ವೈಯಕ್ತಿಕ ಜೀವನವನ್ನೇ ಇದಕ್ಕಾಗಿ ತ್ಯಾಗ ಮಾಡಿರುತ್ತಾರೆ.

Kannada Sahitya Parishad ರಾಜ್ಯ ಸರ್ಕಾರ ಅವರ ನೋವುಗಳಿಗೆ ಮಿಡಿಯದಿದ್ದರೆ ಕನ್ನಡಪರ ಎನ್ನಿಸಿಕೊಳ್ಳುವುದು ಹೇಗೆ? ಈ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಸರ್ಕಾರ ಇನ್ನು ಹೆಚ್ಚು ಸಮಯ ವ್ಯರ್ಥ ಮಾಡದಂತೆ ಕನ್ನಡಪರ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ಹಿಂಪಡೆಯಬೇಕೆಂದು ನಾಡೋಜ ಡಾ.ಮಹೇಶ ಜೋಶಿಯವರು ಆಗ್ರಹಿಸಿದ್ದಾರೆ.

Karnataka State Cartoonists Association ರಾಜ್ಯ ವ್ಯಂಗ್ಯಚಿತ್ರಕಾರರ ನೂತನ ಅಧ್ಯಕ್ಷರಾಗಿ ಶಿವಮೊಗ್ಗದ ವೈ.ಎಸ್.ನಂಜುಂಡಸ್ವಾಮಿ ಆಯ್ಕೆ

0

Karnataka State Cartoonists Association ಕರ್ನಾಟಕ ರಾಜ್ಯ ವ್ಯಂಗ್ಯಚಿತ್ರಕಾರರ ಸಂಘದ ನೂತನ ಅಧ್ಯಕ್ಷ ರಾಗಿ ಶಿವಮೊಗ್ಗದ ಖ್ಯಾತ ವ್ಯಂಗ್ಯಚಿತ್ರಕಾರ ವೈ. ಎಸ್. ನಂಜುಂಡಸ್ವಾಮಿ ಆಯ್ಕೆ ಆಗಿದ್ದಾರೆ.
ಕರ್ನಾಟಕ ವ್ಯಂಗ್ಯಚಿತ್ರಕಾರರ ಸಂಘದ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ತುಮಕೂರಿನ ರಾಜನ್ ಪುತ್ರ ಕೃಷ್ಣಕಾಂತ್ ಅವರ ದತ್ತಿಯಲ್ಲಿ ಹಿರಿಯ ವ್ಯಂಗ್ಯಚಿತ್ರಕಾರರಾದ ಉಡುಪಿಯ ಜೀವನ್ ಶೆಟ್ಟಿ ಅವರಿಗೆ ಜೀವಮಾನದ ಪ್ರಶಸ್ತಿಯನ್ನು ಬೆಂಗಳೂರಿನ ಎಂ ಜಿ ರಸ್ತೆಯ ಭಾರತೀಯ ವ್ಯಂಗ್ಯಚಿತ್ರಕಾರರ ಗ್ಯಾಲರಿಯಲ್ಲಿ ರಾಜ್ಯದ ಹಲವು ಜಿಲ್ಲೆಯ ವ್ಯಂಗ್ಯಚಿತ್ರಕಾರರ ಸಮ್ಮುಖದಲ್ಲಿ ಪ್ರದಾನ ಮಾಡಲಾಯಿತು.
ಈ ಸನ್ಮಾನ ಸಮಾರಂಭದ ನಂತರ ಸಂಘದ ಕಾರ್ಯಕಾರಿ ಸಮಿತಿಯ ರಚನೆಯನ್ನೂ ಮಾಡಿಕೊಂಡಿದ್ದು, ಹೊಸ ಕಾರ್ಯಕಾರಿ ಸಮಿತಿಯ ಸದಸ್ಯರ ಪೈಕಿ ಶಿವಮೊಗ್ಗ ಮೂಲದ ವೈ. ಎಸ್. ನಂಜುಂಡಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿಯೂ, ಬಾಬು ಜತ್ತಕರ್ ಅವರನ್ನು ಉಪಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಗಳನ್ನಾಗಿ ಜಿ. ಎಸ್. ನಾಗನಾಥ್, ಜಂಟಿ ಕಾರ್ಯದರ್ಶಿಗಳನ್ನಾಗಿ ಎಂ. ವಿ. ಶಿವರಾಂ ಹಾಗೂ ಸಂಕೇತ್ ಗುರುದತ್ತ ಅವರನ್ನು ನೇಮಿಸಲಾಯ್ತು.
ಮಹಾ ಪೋಷಕರಾಗಿ ಬಿ. ಜಿ. ಗುಜ್ಜಾರಪ್ಪ, ವಿ. ಆರ್. ಸಿ. ಶೇಖರ್ ಹಾಗೂ ಎಚ್. ಬಿ. ಮಂಜುನಾಥ ಇವರುಗಳು ಸರ್ವಾನುಮತದಿಂದ ಆಯ್ಕೆ ಆಗಿದ್ದಾರೆ.
ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಎಚ್. ಎಸ್. ವಿಶ್ವನಾಥ್, ರಘುಪತಿ ಶೃಂಗೇರಿ, ಚಂದ್ರ ಗಂಗೊಳ್ಳಿ, ಡಾ. ಜೆ. ಬಾಲಕೃಷ್ಣ, ಎಂ. ಎನ್. ಸುಬ್ರಮಣ್ಯ, ವೆಂಕಟ್ ಭಟ್ ಎಡನೀರು, ಸಿ. ಎಂ. ನಾಡಿಗೇರ್, ಅರುಣ್ ಕುಮಾರ್ ಹಾಗೂ ಬದರಿ ಪುರೋಹಿತ್ ಆಯ್ಕೆಗೊಂಡಿರುತ್ತಾರೆ.
Karnataka State Cartoonists Association ಇದೇ ಸಂದರ್ಭದಲ್ಲಿ ಹೊಸದಾಗಿ ಯುವ ವ್ಯಂಗ್ಯಚಿತ್ರಕಾರರ ಪಡೆಯನ್ನು ರಚಿಸಲಾಗಿದ್ದು, ಅದರಲ್ಲಿ ಎಂ. ಎನ್. ದತ್ತಾತಿ, ರವಿ ಪೂಜಾರಿ, ಪ್ರಸನ್ನ ಕುಮಾರ್, ವಿನೋದ್ ಆಚಾರ್ಯ, ಸುಮುಖ್ ಶಾನುಭೋಗ್, ಕೊರಲಕುಂಟೆ ದಯಾನಂದ್ ಹಾಗೂ ರೆಬೇಕಾ ಟೇಲರ್ ಇವರುಗಳಿದ್ದು ಸಂಘದ ಕಾರ್ಯ ಚಟುವಟಿಕೆಗಳನ್ನು ಸಕ್ರಿಯಗೊಳಿಸಲಿದ್ದಾರೆ.