Sunday, August 2, 2026
Sunday, August 2, 2026

ಶಾಖಾಹಾರಿ ಚಲನಚಿತ್ರಕ್ಕೆ ” ಕಪ್ಪುವನಿತೆ” ಪುರಸ್ಕಾರ

Date:

ಶಿವಮೊಗ್ಗ ಜಿಲ್ಲೆ ಹೆಮ್ಮೆ ಪಡಬಹುದಾದ ಮತ್ತೊಂದು ಸುದ್ದಿ‌ ಶಿವಮೊಗ್ಗದ ಕೀಳಂಬಿ ಮೀಡಿಯ ಕಂಪನಿ ನಿರ್ಮಾಣದ ಸಿನಿಮಾ “ಶಾಖಾಹಾರಿ” ಗೆ ಪ್ರತಿಷ್ಠಿತ ಫಿಲ್ಮ್ ಫೇರ್ ಅವಾರ್ಡ್ ಲಭಿಸಿದೆ. ದಕ್ಷಿಣ ಭಾರತದ ಭಾಷಾ ಚಿತ್ರಗಳಲ್ಲಿ ಕನ್ನಡ ವಿಭಾಗದಲ್ಲಿ” ಕಪ್ಪುವನಿತೆ” ( BlackLady)ಪುರಸ್ಕಾರ ಶಾಖಾಹಾರಿ ಚಲನಚಿತ್ರಕ್ಕೆ ಸಿಕ್ಕಿದೆ.

ಕೊಚ್ಚಿಯಲ್ಲಿ ನಡೆದ 70 ನೇ ಫಿಲ್ಮ್ ಫೇರ್ ಪುರಸ್ಕಾರ ವಿತರಣಾ ಸಮಾರಂಭದಲ್ಲಿ ನಿರ್ಮಾಪಕರಾದ
ರಾಜೇಶ್ ಕೀಳಂಬಿ ಈ ಪ್ರಶಸ್ತಿ ಸ್ವೀಕರಿಸಿದರು.

ವೈಶಷ್ಟ್ಯವೆಂದರೆ ಕತೆ ಶಿವಮೊಗ್ಗದ ಗಿರೀಶ್, ನಿರ್ದೆಶನ
ಶಿವಮೊಗ್ಗದ ಸಂದೀಪ್ ಸುಂಕದ್, ಸಂಪೂರ್ಣ ಶಿವಮೊಗ್ಗ ಜಿಲ್ಲೆಯ ನಿಸರ್ಗದಲ್ಲಿಯೇ ಚಿತ್ರೀಕರಣಗೊಂಡ ಹೆಮ್ಮೆ ಈ ಚಿತ್ರದ್ದಾಗಿದೆ. ನಿರ್ಮಾಣ ಸಂಸ್ಥೆ ಕೂಡ ಶಿವಮೊಗ್ಗದ ನೆಹರು ರಸ್ತೆಯಲ್ಲಿ ಕಾರ್ಯಶೀಲವಾಗಿದೆ.
ಯುವ ನಿರ್ದೇಶಕ ಸಂದೀಪ್ ಸುಂಕದ್ ಅವರೂ ಕೂಡ ಈ ವರ್ಣಮಯ ಸಮಾರಂಭದಲ್ಲಿ ಭಾಗವಹಿಸಿ ಪ್ರತಿಷ್ಠಿತ ಫಿಲ್ಮ್ ಫೇರ್ ಪುರಸ್ಕಾರದ ಆನಂದ ಅನುಭವಿಸಿದರು.
ಕನ್ನಡದಲ್ಲಿ ಚಿತ್ರಮಾಡಲು ಕತೆಗಳೇ ಇಲ್ಲವೆಂದಿಲ್ಲ. ಇರುವ ಕತೆಯನ್ನೇ ಮತ್ತಷ್ಟೂ ಸಿನಿಮಾ ಮಾಧ್ಯದಲ್ಲಿ ನಿರೂಪಿಸುವ ಕಲೆಗಾರಿಕೆ ಈಗ ಮುಖ್ಯ. ಅಂತಹ ಕೌಶವಲನ್ನ ಯುವ ನಿರ್ದೇಶಕ ಸಂದೀಪ್ ಸುಂಕದ್ ತೋರಿಸಿದ್ದಾರೆ. ಕತೆ ನಡೆಯುತ್ತಲೇ ಪ್ರೇಕ್ಷಕನನ್ನ ಫ್ರೇಮಿಂದ ಫ್ರೇಮಿಗೆ ತುದಿಗಾಲಲ್ಲಿ ನಿಲ್ಲಿಸುತ್ತದೆ.ಅಂತಹ ಕುತೂಹಲ ಕಾಯ್ದುಕೊಳ್ಳುವ ಚಿತ್ರಕತೆ ಸೊಗಸಾಗಿ ಹೆಣೆಯಲಾಗಿದೆ.
ಹಿರಿಯ ನಟ ರಂಗಾಯಣ ರಘು ,ತಮ್ಮ ಎಂದಿನ ಪಾತ್ರಗಳ ಅಚ್ಚಿನಿಂದ ಹೊರಬಂದು ,ಭಾವನಾತ್ಮಕ
ಪಾತ್ರದಲ್ಲಿ ಜೀವಂತಿಕೆ ತುಂಬಿ ನಟಿಸಿದ್ದಾರೆ. ಅವರ ಸಿನಿರಂಗದ ಪಯಣದಲ್ಲಿ “ ಶಾಖಾಹಾರಿ” ಒಂದು ಅನನ್ಯ ಸಾಧನೆಯ ಮೈಲುಗಲ್ಲೆಂದೇ ನಿಸ್ಸಂದೇಹ ಭಾವಿಸಬಹುದು. ಛಾಯಾಗ್ರಹಣದಲ್ಲಿ ವಿಶ್ವಜಿತ್ ರಾವ್ ಚಾಕಚಕ್ಯತೆ ಕಾಣಬಹುದು. ಗ್ರಾಮೀಣ ಕ್ಯಾಂಟೀನ್ ಸಿನಿಮಾದ ಹೃದಯ ಭಾಗ. ಈ ಸೆಟಿಂಗ್ ಮತ್ತು ಚಿತ್ರಕತೆಯ ಓಟಕ್ಕೆ ಅವರ ಕ್ಯಾಮರಾ ಹಿಂಬಾಲಿಸಿದೆ.
ಇದಕ್ಕೆ ಚಿತ್ರಕಥೆಯೇ ನಾಯಕ.ಅದಕ್ಕೆ ಪೋಷಕವಾಗಿ ಅಭಿನಯ‌ನೀಡಿ ರಂಗಾಯಣ ರಘು ಅಪೂರ್ವ ನಟನಾ
ಸಾಮರ್ಥ್ಯ ಮೆರೆದಿದ್ದಾರೆ. ರಾಜ್ಯದ ಚಲನಚಿತ್ರ ಪ್ರಶಸ್ತಿ ಆಯ್ಕೆ ಸಂದರ್ಭ ಬೇರೆನೂ ಮ್ಯಾಜಿಕ್ ನಡೆಯದಿದ್ದರೆ
ಉತ್ತಮ ನಟ ಪ್ರಶಸ್ತಿ‌ ರಂಗಾಯಣ ರಘು ಅವರ ಪಾಲಿಗೆ ಕಟ್ಟಿಟ್ಟ ಬುತ್ತಿ.
ಸಬ್ ಇನ್ಸ್ ಪೆಕ್ಟರ್ ಪಾತ್ರದಲ್ಲಿ ಸಹಜ ನಟ ಗೋಪಾಲ ಕೃಷ್ಣ ದೇಶಪಾಂಡೆ ಪ್ರಬುದ್ಧ ಅಭಿನಯ. ಕತೆಯನ್ನ, ಕುತೂಹಲವನ್ನ ನಟನೆಯೊಂದಿಗೆ ಸಲೀಸಾಗಿ ಎಳೆದೊಯ್ಯುವ ಪ್ರಯತ್ನ ಫಲಿಸಿದೆ.
ಮಿಕ್ಕಂತೆ ಸಣ್ಣಪುಟ್ಟ ಪಾತ್ರಗಳಲ್ಲಿ ಬಿಡಿಬಿಡಿಯಾಗಿ ನಟಿಸಿರುವ ಕಲಾವಿದರೂ ತಮಗೆ ನೀಡಿದ ಅವಕಾಶ ಸಾರ್ಥಕಪಡಿಸಿಕೊಂಡಿದ್ದಾರೆ.

ಹಾಡುಗಳಂತೂ ಇಂಪಾಗಿವೆ. ಸಂಗೀತ ನಿರ್ದೇಶನದಲ್ಲೂ ಶಾಖಾಹಾರಿ ರಸಿಕರು ಕಿವಿಗೊಟ್ಟು ಆಲಿಸುವಂತೆ ಮಾಡಿದೆ. “ಎಲ್ಲೋ ಸುರಿದಾ ಮಳೆ.” ನಿನ್ನನಗಲಿ ಇರಲಾರೆನೊ” ಮುಂತಾದ ಹಾಡುಗಳು ಗುನುಗುವಂತೆ ಮಾಡುತ್ತವೆ. ಸಂಗೀತ ನೀಡಿದ ಮಯೂರ್ ಅಂಬೇಕಲ್ ಭರವಸೆ ಮೂಡಿಸಿದ್ದಾರೆ. ಸ್ವತಃ ಅವರೇ ಹಾಡಿರುವ ಹಾಡು ಭವಿಷ್ಯದ ಹಿನ್ನೆಲೆ ಗಾಯಕ ಅವರ ಮೂಲಕ
ಆವಿರ್ಭವಿಸುವ ಸೂಚನೆಗಳಿವೆ.

ಕೀಳಂಬಿ ಮೀಡಿಯ ಶಿವಮೊಗ್ಗೆಯ ಕೂಸು. ಈಗಾಗಲೇ “ಶಾಖಾಹಾರಿ” ಸಿನಿಮಾದ ಚೊಚ್ಚಲ ನಿರ್ಮಾಪಕರಿಗೆ ನೀಡುವ ಡಾ.ಪುನೀತ್ ರಾಜ್ ಕುಮಾರ್ ಪ್ರಶಸ್ತಿಯನ್ನ. ನಿರ್ಮಾಪಕ ರಾಜೇಶ್ ಕೀಳಂಬಿ ಮುಡಿಗೇರಿಸಿದ್ದಾರೆ.
ಅಂಬೆಗಾಲಿಡುವಾಗಲೇ ಮಾಧ್ಯಮದ ಹೆಜ್ಜೆಗುರುತು ಮೂಡಿಸಿದೆ.
ಸಿನಿಮಾ ಜಗತ್ತಿನ ಚಟುವಟಿಕೆಗಳಿಗೆ ಮಲೆನಾಡಿನ ಶಿವಮೊಗ್ಗವನ್ನ ಕೇಂದ್ರವಾಗಿಸಲಿ.ಮತ್ತಷ್ಟು ಪ್ರತಿಭೆಗಳು
ಈ ಮೂಲಕ ಸ್ಯಾಂಡಲ್ ವುಡ್ ಗೆ
ನೆಗೆಯುವ “ಚಿಮ್ಮು ಹಲಗೆ”ಯಾಗಲಿ.

ವೆಲ್ ಡನ್ . ಸಂದೀಪ್ ಸುಂಕದ್, ರಾಜೇಶ್ ಕೀಳಂಬಿ. ಫಿಲ್ಮ್ ಫೇರ್ ಅಂಗಳದಲ್ಲಿ ಶೋಭಾಯಮಾನವಾಗಿ
ಅನಾವರಣ ಆಗಿದ್ದೀರಿ.ನಿಮಗೆ ಶಿವಮೊಗ್ಗ ಚಿತ್ರ ರಸಿಕರ ಪರವಾಗಿ
ಕಂಗ್ಯಾಟ್ಸ್.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

B.Y. Raghavendra ₹ 6.400 ಕೋಟಿ ವೆಚ್ಚದ ಶಿವಮೊಗ್ಗ- ತುಮಕೂರು ಚತುಷ್ಪಥ ರಸ್ತೆ ಮುಂದಿನ ಮಾರ್ಚ್ ಗೆ ಸಿದ್ಧ- ಬಿ.ವೈ.ರಾಘವೇಂದ್ರ

B.Y. Raghavendra ಮಲೆನಾಡು ಹಾಗೂ ರಾಜಧಾನಿ ಬೆಂಗಳೂರು ನಡುವಿನ ಸಂಪರ್ಕವನ್ನು ಕ್ರಾಂತಿಕಾರಕವಾಗಿ...

S. N. Channabasappa ಬಡಾವಣೆಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದು ನಮ್ಮ ಮುಖ್ಯ ಕರ್ತವ್ಯ- ಎಸ್.ಎನ್.ಚನ್ನಬಸಪ್ಪ

S. N. Channabasappa ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ...

Rotary Club of Shivamogga ಮಕ್ಕಳಲ್ಲಿ ರೋಟರಿ ಸಂಸ್ಥೆ ನಾಯಕತ್ವ ಗುಣಗಳನ್ನ ಬೆಳೆಸುತ್ತದೆ- ಡಿ.ಕೆ.ನರಹರಿ

Rotary Club of Shivamogga ರೋಟರಿ ಸಂಸ್ಥೆಯು ಮಕ್ಕಳಿಗೆ ಶಾಲಾ ಹಂತದಲ್ಲಿಯೇ...

B.Y. Raghavendra ಹವಾಮಾನ ಆಧಾರಿತ ಬೆಳೆವಿಮೆ: ಅರ್ಜಿ ಸಲ್ಲಿಕೆ ಅಂತಿಮ ದಿನಾಂಕ ವಿಸ್ತರಿಸಿ- ಸಂಸದ ಬಿ.ವೈ‌.ರಾಘವೇಂದ್ರ

B.Y. Raghavendra ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ವಾಡಿಕೆಗಿಂತ ಶೇ.34 ರಷ್ಟು ಮಳೆ...