ಬೆಳಗಾವಿಯ ವಿಧಾನಪರಿಷತ್ ಅಧಿವೇಶನದಲ್ಲಿ ಮಾನ್ಯ ವಿಧಾನ ಪರಿಷತ್ ಶಾಸಕರು ಹಾಗೂ ರಾಜ್ಯ ಬಿಜೆಪಿ ಕಾರ್ಯದರ್ಶಿಗಳಾದ ಡಿ.ಎಸ್.ಅರುಣ್ ಅವರು ಶಿವಮೊಗ್ಗ ಸೇರಿದಂತೆ ರಾಜ್ಯದ ಹಲವೆಡೆ ಅಝಾನ್ ವೇಳೆ ಡಿಸಿಬಲ್ ಮಿತಿ ಮೀರಿ ಲೌಡ್ಸ್ಪೀಕರ್ ಬಳಕೆಯಿಂದ ಉಂಟಾಗುತ್ತಿರುವ ಶಬ್ದ ಮಾಲಿನ್ಯವನ್ನು ತೀವ್ರವಾಗಿ ಖಂಡಿಸಿದರು.
ಗಣೇಶೋತ್ಸವದ ವೇಳೆ ಡಿಜೆ ನಿಷೇಧಿಸುವ ಸರ್ಕಾರ, ದಿನನಿತ್ಯ ನಡೆಯುವ ಅಝಾನ್ಗೆ ಶಬ್ದ ನಿಯಂತ್ರಣ ಜಾರಿಗೊಳಿಸದಿರುವುದು ದ್ವಂದ್ವ ನೀತಿ ಎಂದು ಪ್ರಶ್ನಿಸಿದರು.
ಸುಪ್ರೀಂ ಕೋರ್ಟ್ ಆದೇಶ ಹಾಗೂ Noise Pollution Rules ಎಲ್ಲ ಧರ್ಮಗಳಿಗೆ ಸಮಾನವಾಗಿ ಅನ್ವಯಿಸಬೇಕು, ಕಾನೂನು ಎಲ್ಲರಿಗೂ ಒಂದೇ ಎಂಬುದನ್ನು ಸರ್ಕಾರ ಸ್ಪಷ್ಟಪಡಿಸಬೇಕೆಂದು ಡಿ.ಎಸ್. ಅರುಣ್ ಆಗ್ರಹಿಸಿದರು.
ಶಬ್ದ ಮಾಲಿನ್ಯದಿಂದ ಮಕ್ಕಳು, ರೋಗಿಗಳು ಹಾಗೂ ಹಿರಿಯ ನಾಗರಿಕರು ತೊಂದರೆ ಅನುಭವಿಸುತ್ತಿದ್ದಾರೆ ಪೊಲೀಸ್, ಜಿಲ್ಲಾಡಳಿತ ಹಾಗೂ ಪರಿಸರ ಇಲಾಖೆ ಸ್ವಯಂಪ್ರೇರಿತವಾಗಿ ಸಮನ್ವಯದಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಅವರು ಮಾನ್ಯ ಪರಿಸರ ಸಚಿವರನ್ನು ಒತ್ತಾಯಿಸಿದರು.
Women and Child Development Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಪನಿರ್ದೇಶಕರ ಕಚೇರಿ, ಶಾಲಾ ಶಿಕ್ಷಣ ಇಲಾಖೆ, ಶಿವಮೊಗ್ಗ, ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಡಿ.20 ರ ಬೆಳಿಗ್ಗೆ 10 ಗಂಟೆಗೆ ಬಿ ಹೆಚ್ ರಸ್ತೆಯಲ್ಲಿರುವ ಸರ್ಕಾರಿ ತಮಿಳು ಪ್ರೌಢಶಾಲಾ ಆವರಣದಲ್ಲಿ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ ನೆರವೇರಿಸುವರು. ವಿಶೇಷ ಆಹ್ವಾನಿತರಾಗಿ ಭದ್ರಾವತಿ ಶಾಸಕರು ಹಾಗೂ ಕರ್ನಾಟಕ ಗ್ರಾಮೀಣ ಮೂಲಭೂತ ಸೌಕರ್ಯಗಳ ಅಭಿವೃದ್ದಿ ನಿಗಮದ ಅಧ್ಯಕ್ಷರು, ಸಾಗರ ಶಾಸಕರು ಹಾಗೂ ಕರ್ನಾಟಕ ಅರಣ್ಯ ಕೈಗಾರಿಕಾ ನಿಗಮ ನಿಯಮಿತದ ಅಧ್ಯಕ್ಷರು ಪಾಲ್ಗೊಳ್ಳುವರು.
Women and Child Development Department ಶಿವಮೊಗ್ಗ ನಗರ ಕ್ಷೇತ್ರದ ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅಧ್ಯಕ್ಷತೆ ವಹಿಸುವರು. ಸಂಸದರು, ವಿಧಾನ ಸಭಾ, ವಿಧಾನ ಪರಿಷತ್ ಶಾಸಕರು, ವಿವಿಧ ನಿಗಮ, ಮಂಡಳಿ, ಪ್ರಾಧಿಕಾರಗಳ ಅಧ್ಯಕ್ಷರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು, ಜಿಲ್ಲಾಧಿಕಾರಿಗಳು, ಜಿ.ಪಂ.ಸಿಇಓ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಅಧಿಕಾರಿಗಳು, ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷರು, ಜಿಲ್ಲಾಧ್ಯಕ್ಷರು, ಶಿಕ್ಷಕರ ಸಂಘದ ಪದಾಧಿಕಾರಿಗಳು, ಅಧಿಕಾರಿಗಳು ಪಾಲ್ಗೊಳ್ಳುವರು.
Keladi Shivappanayaka University of Agriculture and Horticulture ಕೃಷಿ ಪ್ರವಾಸೋದ್ಯಮ ಅಭಿವೃದ್ಧಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುವ ಕುರಿತಂತೆ ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಅವರೊಂದಿಗೆ ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆ ಹಾಗೂ ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆ ಪದಾಧಿಕಾರಿಗಳು ಸಮಾಲೋಚನೆ ನಡೆಸಿದರು.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಕಾರ್ಯದರ್ಶಿ ಎನ್.ಗೋಪಿನಾಥ್ ಮಾತನಾಡಿ, ಇರುವಕ್ಕಿ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣವು ಪರಿಸರ, ಗ್ರಾಮೀಣ ಮತ್ತು ಕೃಷಿ ಪ್ರವಾಸೋದ್ಯಮದ ಅರಿವು ಮೂಡಿಸುವ ಜತೆಯಲ್ಲಿ ಕೃಷಿ ಕ್ಷೇತ್ರದ ಅರಿವು ವಿಸ್ತಾರ ಮಾಡುವಲ್ಲಿ ಮಹತ್ತರ ಸ್ಥಳವಾಗಿದೆ. ಪ್ರತಿಯೊಬ್ಬರೂ ಭೇಟಿ ನೀಡಬಹುದಾದ ಸ್ಥಳವಾಗಿದೆ. ಕೃಷಿ ಪ್ರವಾಸೋದ್ಯಮಕ್ಕೆ ವಿಶ್ವವಿದ್ಯಾಲಯದಿಂದ ಪೂರಕ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಇರುವಕ್ಕಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಕುಲಪತಿ ಡಾ. ಆರ್.ಸಿ.ಜಗದೀಶ್ ಮಾತನಾಡಿ, ಶಿವಮೊಗ್ಗ ಕೃಷಿ ಪ್ರಧಾನ ಜಿಲ್ಲೆಯಾಗಿದ್ದು, ಮಲೆನಾಡಿಗೆ ಸಂಬಂಧಿಸಿದಂತೆ ವಿಶೇಷ ಪ್ರಾಕೃತಿಕ ಸಂಪತ್ತು ಹೊಂದಿರುವ ಪ್ರದೇಶವಾಗಿದೆ. ಪಶ್ಚಿಮಘಟ್ಟ ಪ್ರದೇಶ ಹೊಂದಿರುವುದರಿಂದ ಪರಿಸರ ಪ್ರವಾಸಕ್ಕೆ ಅತ್ಯಂತ ಸೂಕ್ತ ಪ್ರದೇಶವಾಗಿದೆ. ವಿಶ್ವವಿದ್ಯಾಲಯವು 778 ಎಕರೆ ಪ್ರದೇಶದಲ್ಲಿ ಕಾರ್ಯ ಚಟುವಟಿಕೆ ನಡೆಸುತ್ತಿದೆ ಎಂದು ಹೇಳಿದರು.
Keladi Shivappanayaka University of Agriculture and Horticulture ಕೃಷಿಯಲ್ಲಿ ಆಸಕ್ತಿ ಇರುವವರಿಗೆ ಈಗಾಗಲೇ ಕೃಷಿ ಟೂರಿಸಂ ನಡೆಸುತ್ತಿದ್ದು, ಕೃಷಿ ವಿವಿ ಆವರಣಕ್ಕೆ ಭೇಟಿ ನೀಡಿ ಒಂದು ದಿನದ ಕೃಷಿ ಟೂರಿಸಂ ನಡೆಸಬಹುದಾಗಿದೆ. ಕೃಷಿ ವಿವಿ ಮಾಹಿತಿ, ಕೃಷಿ, ತೋಟಗಾರಿಕೆ ಬೆಳೆಗಳು, ಜೇನು ಸಾಕಾಣಿಕೆ, ಬೇಕರಿ ಉತ್ಪನ್ನಗಳ ತಯಾರಿಕೆ ಕೇಂದ್ರ, ಸಾವಯವ ಕೃಷಿ ಸಂಶೋಧನಾ ಕೇಂದ್ರ, ಸಿರಿಧಾನ್ಯ ತಯಾರಿಕೆ, ಎರೆಹುಳು ಗೊಬ್ಬರ ತಯಾರಿಕೆ, ಪಶು, ಕೋಳಿ, ಕುರಿ, ಮೊಲ ಸಾಕಣೆ, ಹೈನುಗಾರಿಕೆ, ಮೀನು ಸಾಕಣೆ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಸಿರಿಧಾನ್ಯಗಳ ಊಟದ ವ್ಯವಸ್ಥೆ ಇರುತ್ತದೆ. ಗ್ರಾಮೀಣ ಕ್ರೀಡೆಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಕೃಷಿಯಾನದ ಕಾರ್ಯಕ್ರಮದ ಮೂಲಕ ಕೃಷಿ ಟೂರಿಸಂಗೆ ಪ್ರಾಮುಖ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಶಿವಮೊಗ್ಗ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ವೇದಿಕೆಯ ಅ.ನಾ.ವಿಜಯೇಂದ್ರ, ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಖಜಾಂಚಿ ಆರ್.ಮನೋಹರ್, ಪ್ರೊ. ಬಸವರಾಜ ಇತರರಿದ್ದರು.
Madhu Bangappa ರಾಜ್ಯದ ಎಲ್ಲಾ ಮಾದರಿ ಬೋರ್ಡ್ಗಳು ಕಡ್ಡಾಯವಾಗಿ ಕನ್ನಡ ಭಾಷೆ ಕಲಿಸಬೇಕು. ಇಲ್ಲದೆ ಹೋದರೆ ಅಂತಹ ಶಾಲೆಗಳ ಮೇಲೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಎಚ್ಚರಿಕೆ ನೀಡಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ರವಿಕುಮಾರ್ ಪ್ರಶ್ನೆ ಕೇಳಿದರು. ರಾಜ್ಯದಲ್ಲಿ ICSE, CBSE, IB, IGCS ಸೇರಿ ಅಂತರಾಷ್ಟ್ರೀಯ ಶಾಲೆಗಳಲ್ಲಿ ಕಡ್ಡಾಯ ಭಾಷೆ ಕಲಿಕೆ ನಿಯಮ ಜಾರಿ ಮಾಡಿಲ್ಲ. ನಿಯಮಗಳು ಅನೇಕ ಶಾಲೆಗಳು ಜಾರಿ ಮಾಡಿಲ್ಲ. ಸರ್ಕಾರದ ನಿಯಮ ಖಾಸಗಿ ಶಾಲೆಗಳು ಉಲ್ಲಂಘನೆ ಮಾಡಲಾಗಿದೆ. ಶಿಕ್ಷಣ ಇಲಾಖೆ ಕೇವಲ ನೊಟೀಸ್ ಕೊಡಲಾಗಿದೆ. ಇಂತಹ ಶಾಲೆಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು ಅಂತ ಆಗ್ರಹ ಮಾಡಿದರು.
RTE ಅಡಿ ಎರಡು ವರ್ಷಗಳಲ್ಲಿ ದಾಖಲಾತಿ ಕಡಿಮೆ ಆಗಿದೆ. ಖಾಸಗಿ ಶಾಲೆಗಳಲ್ಲಿ 25% ಸೀಟು ಕೊಡಬೇಕು. ಈ ಶಾಲೆಗೆ ಸರ್ಕಾರವೇ ಹಣ ಕೊಡಲಿದೆ. ಕಳೆದ 2 ವರ್ಷಗಳಲ್ಲಿ ದಾಖಲಾತಿ ಯಾಕೆ ಕಡಿಮೆ ಆಯ್ತು ಅಂತ ಪ್ರಶ್ನೆ ಮಾಡಿದರು.
Madhu Bangappa ಇದಕ್ಕೆ ಸಚಿವ ಮಧು ಬಂಗಾರಪ್ಪ ಉತ್ತರ ನೀಡಿ, ಯಾವುದೇ ಶಾಲೆ ಆದರು ಕನ್ನಡ ಕಲಿಸಬೇಕು ಅಂತ ಮುಚ್ಚಳಿಕೆ ಬರೆಸಿಕೊಳ್ಳುತ್ತೇವೆ. ಕನ್ನಡ ಭಾಷೆ ಕಡ್ಡಾಯವಾಗಿ ಕಲಿಸಬೇಕು. ಕನ್ನಡ ಕಲಿಸದೇ ಹೋದ್ರೆ ಅಂತಹ ಶಾಲೆ ಮೇಲೆ ಕಠಿಣ ಕ್ರಮ ಕೈಗೊಳ್ಳುತ್ತೇವೆ. ಸೋಫಿಯಾ ಶಾಲೆಯ ಮೇಲೆ ಆರೋಪ ಬಂದಾಗ ತನಿಖೆ ಮಾಡಿಸಿದ್ದೆವು. ನಮ್ಮ ಗಮನಕ್ಕೆ ಇಂತಹ ಲೋಪ ಕಂಡು ಬಂದರೆ ಅವರ ಮೇಲೆ ಕ್ರಮ ತೆಗೆದುಕೊಳ್ಳುತ್ತೇವೆ. ಯಾವುದೇ ಶಾಲೆ ಮೇಲೆ ದೂರು ಬಂದರೆ ತನಿಖೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ. ಕನ್ನಡ ಕಲಿಕೆ ಆಗುತ್ತಿದೆಯಾ ಇಲ್ಲವಾ ಎಂದು ಮತ್ತೆ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.
RTE ನಿಯಮದ ಅನ್ವಯ ದಾಖಲಾತಿ ಮಾಡ್ತಾ ಇದ್ದೇವೆ. ಸರ್ಕಾರಿ ಶಾಲೆ ಇಲ್ಲದೆ ಹೋದ್ರೆ ಮಾತ್ರ ಖಾಸಗಿ ಶಾಲೆಗೆ ಸೇರಿಸಬೇಕು. ನಮ್ಮ ಸರ್ಕಾರಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ಕೊಡುತ್ತಿದ್ದೇವೆ. ಎಲ್ಕೆಜಿ-ಯುಕೆಜಿ ಸರ್ಕಾರಿ ಶಾಲೆಗಳಲ್ಲಿ ಬರ್ತಿದೆ. ಸರ್ಕಾರ ಕೆಪಿಎಸ್ ಶಾಲೆಗಳನ್ನ ಮಾಡುತ್ತಿದ್ದೇವೆ. ನಮ್ಮಲ್ಲಿ ಉತ್ತಮ ವ್ಯವಸ್ಥೆ ಇದೆ. ಹೀಗಾಗಿ ಎಲ್ಲರಿಗೂ ನಮ್ಮ ಸರ್ಕಾರಿ ಶಾಲೆಗಳಿಗೆ ದಾಖಲಾತಿಗೆ ಸಹಕಾರ ಕೊಡಿ. RTE ಹಣ ಬಿಡುಗಡೆ ಆಗದೇ ಇದ್ದರೆ ಅದು RR ಸಮಸ್ಯೆ ಇರುತ್ತದೆ. ಅದನ್ನ ಶೀಘ್ರವೇ ಬಿಡುಗಡೆ ಮಾಡುತ್ತೇವೆ ಎಂದರು.
Klive Special Article ವಿಜಯವಾಣಿ ಪತ್ರಿಕೆಯ ರವಿಕಾಂತ್ ಕುಂದಾಪುರ ವಾಟ್ಸಾಪ್ ಡೀಪಿಯಲ್ಲಿ ಹೀಗೆ ಇತ್ತು -“ಈ ಬದುಕೇ ಒಂದು ಕುರುಕ್ಷೇತ್ರ ಇಲ್ಲಿ ಹಿಂಜರಿಯುವ ಅರ್ಜುನನು ನಾನೇ ಹುರಿದುಂಬಿಸುವ ಶ್ರೀ ಕೃಷ್ಣನೂ ನಾನೇ”. ಈ ಮಾತು ಅದೆಷ್ಟು ಬಾರಿ ಓದಿದರೂ ನಿಜ ಎನ್ನಿಸಿತು. ಏಕೆಂದರೆ ಎಂದೋ ಬೋಧಿಸಿದ ಗೀತೆ ಇಂದಿಗೂ ಪ್ರಸ್ತುತ ಅನಿಸುವುದು ಇದೇ ಕಾರಣಕ್ಕೆ. ಅಲ್ಲದೇ ಇಲ್ಲಿ ಅರ್ಜುನನ್ನು ಸಾಂಕೇತಿಕವಾಗಿಟ್ಟುಕೊಂಡು ನಮ್ಮ ಜೀವನ ಕ್ರಮ ಹೇಗಿರಬೇಕು? ನಾವೇನು ಮಾಡಬೇಕು? ಏನು ಮಾಡಬಾರದು? ಯಾವಾಗ ಮಾಡಬೇಕು? ಏಕೆ ಮಾಡಬೇಕು ಎಂಬುದನ್ನು ಬಹಳ ಸ್ಪಷ್ಟವಾಗಿ, ಸರಳವಾಗಿ ವ್ಯಾಸ ಮಹರ್ಷಿಗಳ ಕೈಯಿಂದ ನಮಗೆ ಗೀತೆಯನ್ನು ಭಗವಂತ ಕರುಣಿಸಿದ್ದಾನೆ . ಪ್ರತಿಯೊಂದು ದೇಶದಲ್ಲೂ ಒಂದೊಂದು ಸಂವಿಧಾನ ಇದ್ದಂತೆ ನಮ್ಮ ದೇಶಕ್ಕೂ ಇದೆ. ಅದರಂತೆ ಎಲ್ಲಾ ದೇಶಕ್ಕೂ, ಎಲ್ಲಾ ವರ್ಗಕ್ಕೂ, ಎಲ್ಲರಿಗೂ ಕೂಡ ಅನ್ವಯವಾಗುವಂತಹ ಸಂವಿಧಾನ ಅನ್ನೋದು ಏನಾದರೂ ಇದ್ದರೆ ಅದು ಭಗವದ್ಗೀತೆಯೇ ಆಗಿದೆ. ಸರ್ವರಿಗೂ ಸಮಾನವಾಗಿ ಅನ್ವಯವಾಗುವ ಉಪದೇಶ, ನೀತಿ ಭಗವದ್ಗೀತೆಯಲ್ಲಿರುವುದರಿಂದ ಇದು ಇಂದಿಗೂ ಪ್ರಸ್ತುತ. ಜೀವನದ ಜಂಜಾಟಗಳಿಗೆ, ಮನಸ್ಸಿನ ನೋವು ದುಃಖಗಳಿಗೆ, ಬದುಕಿನ ನಿತ್ಯ ಸಮಸ್ಯೆಗಳಿಗೆ ಇರುವ ಪೂರ್ಣ ಪರಿಹಾರವೇ ಭಗವದ್ಗೀತೆ. ಇಂತಹ ಗೀತೆಯ ಕುರಿತಾಗಿ ಅದರ ಸಾರವನ್ನು ಗೀತ, ನೃತ್ಯ, ರೂಪಕದ ಮೂಲಕ ಎಲ್ಲರಿಗೂ ತಲುಪಿಸುವ ಒಂದು ವಿಶಿಷ್ಟ ಪ್ರಯತ್ನವನ್ನು ಶ್ರೀಶಾರದಾ ಸಂಗೀತ-ನೃತ್ಯ ವಿದ್ಯಾಲಯವು ಕುವೆಂಪು ರಂಗಮಂದಿರದಲ್ಲಿ ಮಾಡಿ ಯಶಸ್ವಿಯಾದರೆಂದೇ ಹೇಳಬಹುದು.
ಸರಿಯಾದ ಸಮಯಕ್ಕೆ ಆರಂಭವಾದ ಈ ಕಾರ್ಯಕ್ರಮ ಸಂಗೀತ ಗುರುಕುಲದ ದೃಶ್ಯದೊಂದಿಗೆ ಅಲ್ಲಿನ ಮಗುವೊಂದರ ತಲ್ಲಣಕ್ಕೆ, ಆತಂಕಕ್ಕೆ ಸಮಾಧಾನ ಮಾಡುವ ರೀತಿಯಲ್ಲಿ ಗೀತೋಪದೇಶವು ತೆರೆದುಕೊಳ್ಳುತ್ತಾ ಹೋಗುತ್ತದೆ. ಆ ಮಗುವಿಗೆ ಅರ್ಜುನನ ಖಾಯಿಲೆಯಿಂದ ಅರ್ಜುನ ಭಾವಕ್ಕೆ ವಿವೇಕಾನಂದರ ಸನ್ಯಾಸಿಗೀತೆ, ರೈತ ಗೀತೆ ಇವುಗಳಿಂದ ಬಹಳ ಚೆನ್ನಾಗಿ ತರುತ್ತಾರೆ. ಆನಂತರ ಎಲ್ಲದಕ್ಕೂ ಹರಿ ಇದ್ದಾನೆ ಎಂಬ ಹಾಡಾಗಿರಬಹುದು, ಕುರುಡು ಕಾಂಚಾಣದ ಹಾಡು ಹಾಗೂ ಅದಕ್ಕೆ ತಕ್ಕದಾದ ನೃತ್ಯ ಎಲ್ಲರ ಮನಸೆಳೆಯಿತು. ಮಧ್ಯದಲ್ಲಿ ವಾಲ್ಮೀಕಿ ಕುರಿತಾದ ರತ್ನಾಕರನ ಕಥೆ, ಅಲ್ಲಿನ ಪಾತ್ರಗಳೆಲ್ಲವೂ ಎಷ್ಟು ನಮ್ಮನ್ನು ಆವರಿಸುವಂತೆ ಮಾಡಿತೆಂದರೆ ಆ ನಾರದ, ರತ್ನಾಕರ ಅವನ ಕುಟುಂಬ ವಾಹ್! ಅದ್ಭುತ ಅಭಿನಯ. ನಂತರ ಪ್ರಹ್ಲಾದನ ಕಥೆ ಅಲ್ಲಿಯೂ ನಟನೆಯ ಬಗ್ಗೆ ಮಾತೇ ಇಲ್ಲ. ಅದಕ್ಕಿಂತಲೂ ಗುರುಭಕ್ತಿಯ ಶ್ರದ್ಧೆಯಲ್ಲಿ ನಮ್ಮನ್ನು ಕೊಂಡೊಯುವಲ್ಲಿ ಶ್ರೀ ಶಂಕರಾನಂದ ಜೋಯಿಸರಂತೂ ನಮಗೆ ಗುರುದರ್ಶನವೇ ಮಾಡಿಸಿಬಿಟ್ಟರು. ಶಬರಿಯ ಸನ್ನಿವೇಶದಲ್ಲಿ ಆ ಹಾಡಿಗೆ ಅವರ ಅಭಿನಯ ಹಾಗೂ ಹಿಂದಿನ ಪರದೆಯ ಗುಡಿಸಲ ಚಿತ್ರಣ ಅದೇನು ಅದ್ಬುತ ಅಂದರೆ ಪದಗಳಲ್ಲಿ ಕಟ್ಟಿಕೊಡಲು ಕಷ್ಟವೇ ಆಗಬಹುದೇನೋ. ಆದರೆ ಅಲ್ಲಿ ಬಂದ ಬಾಲರಾಮ ಅದು ಶಬರಿಯ ಕಲ್ಪನೆಯ ರಾಮ ಎಂಬುದನ್ನು ನಾವು ಭಾವಿಸಬಹುದು. ನಂತರದ ಮುಂದಿನ ಹಾಡಾದ ಮುಳ್ಳು ಕೊನೆಮೇಲೆ ಮೂರು ಕೆರೆಯ ಕಟ್ಟೆ… ಹಾಡು ಬಹಳ ಸಾಂದರ್ಭಿಕ ಹಾಗೂ ಸತ್ವ ರಜೋತಮಗಳ ಕುರಿತಾಗಿ ಕಟ್ಟಿಕೊಡುವ ಗೀತೆಯಾಗಿ ಮೂಡಿ ಬಂದಿತು.
Klive Special Article ವಿಶ್ವರೂಪ ದರ್ಶನದ ಸಂದರ್ಭದಲ್ಲಿ ಹಾಡಿದ ಆತ್ಮನೂ ನೀನೇ ಪರಮಾತ್ಮನೂ ನೀನೆ ಹಾಡು ಮತ್ತು ಅದಕ್ಕೆ ಸಂಯೋಜಿಸಿದ ದೃಶ್ಯ ನಿಜವಾಗಿಯೂ ವಿಶ್ವರೂಪದ ದರ್ಶನವೇ ಆಯಿತು. ಹೀಗೆ ಸಾಗಿ ಬಂದು ನಿಂತಿದ್ದು ಕೊನೆಗೆ ಉತ್ತಿಷ್ಟತ ಜಾಗ್ರತ ಎಂಬ ಹಾಡಿಗೆ. ಒಟ್ಟಿನಲ್ಲಿ ಬಳಸಿದ ಹಾಡು, ಮೂಡಿ ಬಂದ ದೃಶ್ಯ ಹಾಗೂ ನೃತ್ಯಗಳು ಎಲ್ಲವೂ ಅತ್ಯದ್ಭುತವಾಗಿತ್ತು. ಅಲ್ಲಿದ್ದ ಎಲ್ಲರ ಹೃದಯದಲ್ಲೂ ಅರ್ಜುನ ಭಾವ ಜಾಗ್ರತವಾಗಿ ನಿತ್ಯ ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲ ಅನೇಕ ಸಂಗತಿಗಳನ್ನು ಬಹಳ ಸರಳವಾಗಿ ಗೀತಾಮೃತದ ಸಾರ ಉಣಬಡಿಸಿದ ವಿದ್ವಾನ್ ಅರುಣ್ ಕುಮಾರ್ ಹಾಗೂ ಶ್ರೀಮತಿ ವೀಣಾ ಅರುಣ್ ಕುಮಾರ್ ಅವರ ತಂಡಕ್ಕೆ ನಗರದ ಸಂಗೀತ ನೃತ್ಯ ಆಸಕ್ತರ ಪರವಾಗಿ ಅನಂತ ಅನಂತ ಧನ್ಯವಾದಗಳು.
ಇದರಲ್ಲಿ ಬಂದ ಕೆಲವು ಸಂಭಾಷಣೆಗಳಾದ-‘ ಮೌನ ಮಾತಾದಾಗ ಭಕ್ತಿ ಭಾವವಾಗುತ್ತದ’, ‘ಕಣ್ಣಿಗೆ ಕಾಣುವುದು ಕ್ಷೇತ್ರ ನೋಡುವವನು ಕ್ಷೇತ್ರಜ್ಞ’. ಆಸಕ್ತಿ ಹುಟ್ಟುವುದು ನಮ್ಮ ನಮ್ಮ ಗುಣಗಳಿಂದ ಎಂದು ಹೇಳಿ ಸಾತ್ವಿಕತೆ ಹೆಚ್ಚಿದರೆ ಸದ್ವಿದ್ಯೆ. ಕಳ್ಳ ಹಾಗೂ ಮೋಸಗಾರ ಎಲ್ಲರಿಗೂ ಸಹ ಸಾಧನೆ ಅನ್ವಯಿಸುತ್ತೆ ಆದರೆ ಸಮಾಜ ಒಪ್ಪುವಂತಹ ನ್ಯಾಯ ಸಮ್ಮತವಾದ ಗೌರವ ಗಳಿಸುವ ಸಾಧನೆಗೆ ಮಾತ್ರ ಬೆಲೆ ಇರುತ್ತದೆ. ಅದಕ್ಕೆ ಒಳ್ಳೆಯ ಗುರು ವಾತಾವರಣ ಜೊತೆಗೆ ಆಹಾರವು ಅವಶ್ಯಕ ಆ ಆಹಾರ ಮನಸ್ಸು ಮತ್ತು ಬುದ್ಧಿಗಳನ್ನು ನಿಯಂತ್ರಿಸುತ್ತೆ. ‘ಜಾನಾಮಿ ಧರ್ಮಂ ನ ಚ ಮೇ ಪ್ರವೃತ್ತಿಃ’ ಎನ್ನುವ ಈ ಶ್ಲೋಕದಲ್ಲಿ ದುರ್ಯೋಧನನ ಮಾತು ಉದಾಹರಿಸಿ ಎಲ್ಲದಕ್ಕೂ ಮನಸ್ಸೇ ಕಾರಣ ಅಂತಹ ಮನೋ ನಿಯಂತ್ರಣ ಆಹಾರ ಹಾಗೂ ಉಸಿರಾಟದಿಂದ ಸಾಧ್ಯ ಎಂದು ಹೇಳಿ ‘ಶ್ರದ್ಧಾವಾನ್ ಲಭತೇ ಜ್ಞಾನಮ್’ ಎಂದು ಹೇಳಿ ಇಲ್ಲಿ ಓದಲು ಆಗದೆ ಇರುವಾಗ ನಿಜ ಗುರುವಿಗೆ ಶರಣಾಗಬೇಕು. ಆಗ ಅಹಂಕಾರ ನಾಶವಾಗಿ ಉನ್ನತ ವಿಚಾರಕ್ಕೆ ನಾಂದಿ ಆಗುತ್ತದೆ. ಒಳಿತನ್ನು ಬಯಸುತ್ತಾ ವೃತ್ತಿ, ಪ್ರವೃತ್ತಿ ಮಾಡುತ್ತಾ ಹೋದರೆ ಅದೇ ಜೀವನದ ಸಫಲತೆ ಎಂದು ಹೇಳುವ ಎಲ್ಲ ಮಾತುಗಳು ಮನಸ್ಸಿನಾಳಕ್ಕೆ ಇಳಿದು ನಮ್ಮರಿವಿನ ಜಾಗ್ರತಿ ಆಯಿತು.
ಬೆಳಕಿನ ನಿರ್ವಹಣೆಯಲ್ಲಿ ಶ್ರೀ ಮಂಜುನಾಥ ಕೂದುವಳ್ಳಿ, ಧ್ವನಿಯಲ್ಲಿ ವೀರಭದ್ರ ಸೌಂಡ್ ಸಿಸ್ಟಮ್ ನವರ ಕಾರ್ಯ ಉತ್ತಮ. AI ಚಿತ್ರಗಳಂತೂ ಎಲ್ಇಡಿ ವಾಲ್ನಲ್ಲಿ ಒಂದಾದ ಮೇಲೊಂದು ಬಹಳ ಅಚ್ಚುಕಟ್ಟಾಗಿ ಕಂಡುಬಂದವು
ಒಟ್ಟಿನಲ್ಲಿ ಹೇಳಬೇಕೆಂದರೆ ಶಿವಮೊಗ್ಗದ ಜನತೆಗೆ ಈ ಬಾರಿ ಭಗವದ್ಗೀತೆಯ ಸವಿ ಸ್ವರ್ಣವಲ್ಲಿ ಮಠದವರ ಗೀತಾ ಅಭಿಯಾನದ ಮಹಾ ಸಮರ್ಪಣೆ ಕಳೆದ ಕೆಲವೇ ದಿನಗಳಲ್ಲಿ ಆಯೋಜಿತವಾಗಿ ಜನರಲ್ಲಿ ಮಾನವನಿಂದ ಮಾಧವನೆಡೆಗೆ ಕೊಂಡೊಯ್ಯಲು ಮೆಟ್ಟಿಲಾದಂತೆ ಆಯ್ತೆನ್ನುವುದಂತೂ ನಿಜ. ಈ ನಿಟ್ಟಿನಲ್ಲಿ ಇಲ್ಲಿಯ ಜನ ಪುಣ್ಯವಂತರೇ ಹೌದು.
ಕುವೆಂಪು ರಂಗಮಂದಿರದಲ್ಲಿ ಕಿಕ್ಕಿರಿದ ಜನರೇ ಅಲ್ಲದೆ ಗಣ್ಯರಾದ ಕೆಎಸ್ ಈಶ್ವರಪ್ಪನವರ ಕುಟುಂಬ ಹಾಗೂ ಶಾಸಕರಾದ ಚೆನ್ನಿಯವರು ಹಾಗೂ ಡಾ. ಪಿ. ನಾರಾಯಣ್ ರವರೇ ಮೊದಲಾದ ಎಲ್ಲರೂ ಈ ಕಾರ್ಯಕ್ರಮವನ್ನು ಪೂರ್ಣ ಆಸ್ವಾದಿಸಿದ್ದು ಸಹ ಒಂದು ವಿಶೇಷವೆನಿಸಿತು ಹಾಗಾಗಿ ಆ ಮಟ್ಟಿಗಿನ ಒಂದು ಯಶಸ್ವಿ ಕಾರ್ಯಕ್ರಮ ಇದಾಗಿತ್ತು. ಅತ್ಯಂತ ಆಕರ್ಷಕ ಹಾಗೂ ವಿನೂತನ ರಂಗ ಪ್ರಯೋಗವಾಗಿ ಗೀತೆಯ ಹದಿನೆಂಟು ಅಧ್ಯಾಯಗಳ ಮೌಲ್ಯಗಳು ಹಾಗೆಯೇ ಕರ್ಮ ಜ್ಞಾನ ಭಕ್ತಿಯ ಬೆಳಕಾಗಿ ಬದುಕನ್ನು ಬೆಳಗಿಸುವ ಮಹಾಶಕ್ತಿ ಎಂಬುದರ ಅರಿವಾಯಿತು.
ಡಾ. ಮೈತ್ರೇಯಿ ಆದಿತ್ಯ ಉಪನ್ಯಾಸಕರು ಪೇಸ್ ಪಿಯು ಕಾಲೇಜ್. ಚಿತ್ರ ಕೃಪೆ : ಆದಿತ್ಯಪ್ರಸಾದ್ ಎಂ.
Rotary Shimoga ನಮ್ಮ ಪೂರ್ವಜರು ಎಲ್ಲಾ ಅನಾರೋಗ್ಯಕ್ಕೆ ಐದುಸಾವಿರ ವರ್ಷದಹಿಂದೆಯೆ ಆಯೂರ್ ವೇದಿಕ್ ನಲ್ಲಿ ಪರಿಹಾರಗಳನ್ನು ತಿಳಿಸಿದ್ದಾರೆ. ಆದರೆ ಅದರ ಉಪಯೋಗಗಳನ್ನು ನಾವು ಭಾರತೀಯರು ಸರಿಯಾಗಿ ಉಪಯೋಗಗಳನ್ನು ಪಡೆಯುತ್ತಿಲ್ಲ ಎಂದು, ರೋಟರಿ ಶಿವಮೊಗ್ಗ ಜ್ಯುಬಿಲಿ ಕ್ಲಬ್ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿದ ಆಯುಷ್ಮಾನ್ ವೈಧ್ಯಾದಿಕಾರಿಗಳಾದ ಡಾ.ಸುರೇಂದ್ರರವರು ಮಾತನಾಡುತ್ತಿದ್ದರು. ಪ್ರತಿಯೋಬ್ಬರು ಸಂಜೆ ಆರುಗಂಟೆ ಯೊಳಗಾಗಿ ಊಟ ಪೂರ್ಯಸಬೇಕು. ಕಾರಣ ದೇಹಪ್ರಕೃತಿಯಲ್ಲಿ ಜೀರ್ಣಕ್ರಿಯೆ ಪೂರೈಸಲು, ದೇಹಕ್ಕೆ ಆರೋಗ್ಯಕರ ಶಕ್ತಿ ವೃದ್ದಿಸಲು ಸಹಕಾರಿಯಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ದೂರದರ್ಶನ, ಮೊಬೈಲ್ ಗಳ ಸಹವಾಸದಿಂದ ತಡರಾತ್ರಿ ತನಕ ನಿದ್ದೆಗೆಟ್ಟು, ಪಚನ ಕ್ರಿಯೆಗೆ ದೇಹ ತೊಡಗಲು ಅಸಹಕಾರಿಯಾಗಿದೆ. ಇದರಿಂದ ಸಕ್ಕರೆ ಕಾಯಿಲೆ, ಬಿ.ಪಿ. ಹೆಚ್ಚಾಗಿ ಇತರೆ ರೋಗಗಳಿಗೆ ರಹದಾರಿ ಯಾಗಿದೆ, ಇದರಿಂದ ಹೃದಯಾಘಾತ, ರಕ್ತ ಹೆಪ್ಪುಗಟ್ಟುವಿಕೆ ಮುಂತಾದ ಕಾಯಿಲೆಗಳಿಗೆ ಆಹ್ವಾನ ಸಿಕ್ಕಂತಾಗಿದೆ. ಮಕ್ಕಳಿಗೆ ಹಾರ್ಮೋನ್ ಕೊರತೆಯಿಂದ ದೇಹ ಬೆಳವಣಿಗೆ ಕುಂಟಿತ ಗೊಳ್ಳುತ್ತದೆ. ಯಾವುದೆ ಕಾಯಿಲೆ ಬರದಂತೆ ತಡೆಯಲು ಆರೋಗ್ಯವಂತರಿಗೆ ಮನೆ ಮಧ್ದು ಉಪಕಾರಿ, ರಾತ್ರಿ ಒಂದು ಚಮಚ ಮೆಂತೆ ನೀರಿನಲ್ಲಿ ನೆನೆ ಇಟ್ಟು, ನೆಂದ ಮೆಂತೆ ಚನ್ನಾಗಿ ಜಗಿದು ತಿಂದು, ನೆನೆ ಇಟ್ಟ ನೀರು ಬೆಚ್ಚಗೆ ಮಾಡಿಕೊಂಡು ಅರ್ಧ ಚಮಚ ಅರಿಶಿಣ ಪುಡಿ ಹಾಕಿ ಕುಡಿದರೆ ದೇಹದಲ್ಲಿ ರಕ್ತ ಶುದ್ದಿಯಾಗಿ, ರೋಗ ಗುಣಪಡಿಸುವ ಶಕ್ತಿ ವೃದ್ಧಿಯಾಗುತ್ತದೆ. ಸಕ್ಕರೆ ಕಾಯಿಲೆ ಬರದಂತೆ ತಡೆಯಲು ಸಿಲೋನ್ ದಾಚನ್ನಿ ಚೆಕ್ಕೆ ಅತ್ಯುತ್ತಮ. ರಾತ್ರಿ ಹಾಲಿಗೆ ಅರ್ಧಚಮಚ ಚಕ್ಕೆಪುಡು ಹಾಕಿ ಕೊಂಡು ಕುಡಿದರೆ ಇನ್ಸುಲಿನ್ ವೃದ್ದಿಯಾಗುತ್ತದೆ. ಹಾಗಲಕಾಯಿ ರಸಕ್ಕೆ ಮೆಣಸಿನ ಕಾಳು ಪುಡಿ ಹಾಕಿ ಸೇವಿಸದರೆ ಪಿತ್ತಕೋಶದಲ್ಲಿ ಇರಬಹುದಾದ ಕಲ್ಲು ಕರಗುತ್ತದೆ. ಬಿ.ಪಿ.ಬರುವುದು ರಕ್ತನಾಳಗಳು ಚಿಕ್ಕದಾದಾಗ, ಇದಕ್ಕೆ ಉತ್ತಮ ಮನೆ ಔಷದಿ ಬೆಳಿಗ್ಗೆ ಬೆಳ್ಳುಳ್ಳಿ ರಸಕ್ಕೆ ನಿಬೆಹಣ್ಣು ಬೆರೆಸಿ ಸೇವಿಸಬೇಕು. ಅರಿಶಿಣ ಪುಡಿ ಗಾಯಕ್ಕೆ ಉತ್ತಮ, ಬಾಳೆಹಣ್ಣು ಕರುಳಿನ ಆರೋಗ್ಯ ಹೆಚ್ಚಿಸುತ್ತದೆ ಊಟಕ್ಕಿಂತ ಮುಂಚಿತವಾಗಿ ತಿನ್ನಬೇಕು. ಹಾಲಿಗೆ ಅರಶಿಣ ಪುಡಿ ಸೇರಿಸಿ ಕುಡಿದರೆ ಚನ್ನಾಗಿ ನಿದ್ದೆ ಬರುತ್ತದೆ. ಮೊಸರು ಮಧ್ಯಾಹ್ನ ಊಟ ಮಾಡುವುದು ಉತ್ತಮ. ಎಲ್ಲರೂ ಸಕ್ಕರೆ ಉಪಯೋಗ ಬಹಳ ಕಡಿಮೆ ಉಪಯೋಗ ಮಾಡುವುದು ಆರೋಗ್ಯಕ್ಕೆ ಅತ್ಯುತ್ತಮ. ಬೆಳಿಗ್ಗೆ 8-9ರೊಳಗೆ ತಿಂಡಿ, ನಾರಿನ ಅಂಶ ಇರುವ ಆಹಾರ, ಮಧ್ಯಹ್ನಾ ಒಂದು ಗಂಟೆಗೆ, ಸಂಜೆ ಆರಕ್ಕೆ ರಾತ್ರಿ ಊಟ ಮಾಡುವುದು ಪಚನ ಕ್ರಿಯೆಗೆ ಅತ್ಯುತ್ತಮ. ರಾತ್ರಿ ರಾಗಿ ಅಂಬಲಿ ಮಾಡಿಟ್ಟು ಬೆಳಿಗ್ಗೆ ಸೇವಿಸುವುದು ಉತ್ತಮ. ಶಿತಾಲಿ ಯೋಗ ದಿಂದಲೂ ಬಿ.ಪಿ.ಕಡಿಮೆ ಯಾಗುತ್ತದೆ. Rotary Shimoga ಬಿಳಿ ಕೂದಲು ಆಗುವುದು ಪಿತ್ತ ಪ್ರಕೃತಿ ಇರುವವರು, ಆಹಾರ ಬದಲಿಸಬೇಕು. ದಿನಕ್ಕೆ ಒಂದು ಚಮಚ ತುಪ್ಪ ಉಪಯೋಗಿಸಬೇಕು. ವಿಟಮಿನ್ ಡಿ ಗೆ ಸೂರ್ಯನಮಸ್ಕಾರ ರಾಮಭಾಣ ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಎಸ್.ಆಶ್ವಥ್ ವಹಿಸಿದ್ದರು. ಭಾರದ್ವಾಜ್ ಸ್ವಾಗತಿಸಿದರು. ಪ್ರಾಸ್ಥಾವಿಕ ನುಡಿ ವಾಗೇಶ್ ನುಡಿದರು. ಹೇಮಶೇಖರ್ ವಂದಿಸಿದರು. ಲಕ್ಷ್ಮೀನಾರಾಯಣ್, ಉಮೇಶ್, ವಿಶ್ವನಾಥ್ ನಾಯ್ಕ್, ಶಂಕರ್, ನಾಗರಾಜ್, ಮಂಜುನಾಥ್, ವೆಂಕಟೇಶ್ ನಾಯಕ್, ಮುಂತಾದವರು ಇದ್ದರು.
ಸಾಗರ ಕ್ಷೇತ್ರ ಜಿಲ್ಲಾ ಕೇಂದ್ರ ಮಾಡಬೇಕು ಎಂದು ಜಿಲ್ಲಾ ಹೋರಾಟ ಸಮಿತಿ ನೀಡಿರುವ ನಿಬಂಧ ಕರೆಗೆ ಸಾಗರ ಸಂಪೂರ್ಣ ಬಂದ ಆಗಿದೆ , ಬೆಳಂಬೆಳಗ್ಗೆ ಸಾಗರದ ವಿವಿಧ ವೃತಗಳಲ್ಲಿ ತಯಾರಿಗೆ ಬೆಂಕಿ ಹಚ್ಚಿ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸುವ ದೃಶ್ಯ ಕಂಡು ಬಂದಿದೆ . ಸಾಗರ್ ಕೋರ್ಟ್ ಸಮೀಪ, ಐತಪ್ಪ ಸರ್ಕಲ್, ಸೇರಿದಂತೆ ವಿವಿಧ ಕಡೆ ಬೆಂಕಿ ಹಚ್ಚಲಾಗಿದೆ.
ಅಪರಾಧ ಮುಕ್ತ ಸಮಾಜ ನಿರ್ಮಾಣಕ್ಕೆ ಯೋಗ, ಧ್ಯಾನ ರಹದಾರಿ ಎಂದು ಯೋಗಾಚಾರ್ಯ ಹಾಲಯ್ಯ ಶ್ರೀವಿರಕ್ತಮಠ ತಿಳಿಸಿದರು. ಶ್ರೀ ಶಿವಗಂಗಾಯೋಗಕೇಂದ್ರದ ವತಿಯಿಂದ ಕುವೆಂಪು ರಸ್ತೆ ಆರ್ಯವೈಶ್ಯ ಶ್ರೀರಾಮ ಸಹಕಾರ ಸಂಘದ ರಾಘವ ಸಭಾಂಗಣದಲ್ಲಿ ವಿಶ್ವಧ್ಯಾನ ದಿನ ಆಚರಣೆ ಅಂಗವಾಗಿ ಏರ್ಪಡಿಸಿದ್ದ ಪೂರ್ವಭಾವಿ ಕಾರ್ಯಕ್ರಮದಲ್ಲಿ ಅನಾಪಾನ ಸತಿ ಮತ್ತು ವಿಪಶ್ಯನ ಧ್ಯಾನ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು. ಆಧುನಿಕತೆಯ ಭರಾಟೆಯಲ್ಲಿ ಒತ್ತಡದ ಜೀವನ ಹಾಗೂ ಮಾನವೀಯ ಮೌಲ್ಯಗಳ ಪತನದಿಂದಾಗಿ ಪರಸ್ಪರ ಸಂಬಂಧಗಳು ಮರೆಯಾಗುತ್ತಿವೆ. ಹೀಗಾಗಿ ಸಮಾಜದಲ್ಲಿ ಶಾಂತಿ ಮತ್ತು ನೆಮ್ಮದಿ ಇಲ್ಲದಂತಾಗಿದೆ. ಈ ಎಲ್ಲಾ ಸಮಸ್ಯೆಗಳಿಂದ ಪಾರಾಗಲು ವಿಪಶ್ಯನ ಧ್ಯಾನ ಸಹಕಾರಿ ಎಂದರು. ಮನಸ್ಸಿನಲ್ಲಿ ತಾಮಸ, ರಾಜಸಿಕ ಮತ್ತು ಸಾತ್ವಿಕ ಮನಸ್ಸು ಹೀಗೆ ಮೂರು ಗುಣಲಕ್ಷಣಗಳು ಕಾಣಬಹುದು. ತಾಮಸ ಗುಣವು ಇದು ಜಡತ್ವ, ಅಜ್ಞಾನ, ಸೋಮಾರಿತನ ಮತ್ತು ಕತ್ತಲೆಯ ಸ್ವರೂಪವನ್ನು ಸೂಚಿಸುತ್ತದೆ. ಇದು ನಿಷ್ಕ್ರಿಯತೆ, ಉದಾಸೀನತೆ ಮತ್ತು ಭ್ರಮೆಯನ್ನು ಪ್ರತಿನಿಧಿಸುತ್ತದೆ. ಸಾತ್ವಿಕ ಮನಸ್ಸು ಶುದ್ಧತೆ, ಶಾಂತಿ, ಸಂತೋಷ ಮತ್ತು ಜ್ಞಾನದಿಂದ ಕೂಡಿದ್ದು, ಸರಳತೆ, ಉನ್ನತ ಆಲೋಚನೆಗಳು ಮತ್ತು ಆಧ್ಯಾತ್ಮಿಕತೆ ಕಡೆಗೆ ಒಲವು ತೋರುತ್ತದೆ. ರಾಜಸಿಕ ಮನಸ್ಸು ಚಡಪಡಿಕೆ, ಆಸೆಗಳು ಮತ್ತು ಕ್ರಿಯೆಗೆ ಪ್ರಚೋದಿಸುತ್ತದೆ. ಪ್ರಸ್ತುತ ತಾಮಸ, ರಾಜಸಿಕ ಗುಣಗಳು ವಿಜೃಂಭಿಸುತ್ತಿದ್ದು ಸಾತ್ವಿಕ ಗುಣಗಳು ಮರೆಯಾಗುತ್ತಿವೆ. ನಿರಂತರವಾಗಿ ವಿಪಶ್ಯನ ಧ್ಯಾನದಿಂದ ಮನುಷ್ಯರಲ್ಲಿ ಸಾತ್ವಿಕ ಗುಣಗಳು ವೃದ್ಧಿಯಾಗಿ ಸಮಾಜದಲ್ಲಿ ಪರಸ್ಪರ ಶಾಂತಿ ನೆಮ್ಮದಿ ನೆಲೆಸುತ್ತದೆ ಎಂದು ತಿಳಿಸಿದರು. ಪ್ರಸ್ತುತ ಕಾಲಘಟ್ಟದಲ್ಲಿ ಧ್ಯಾನದ ಮಹತ್ವವನ್ನು ಎಲ್ಲರಿಗೂ ತಿಳಿಸುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣ ಮಾಡಲು ಪ್ರತಿಯೊಬ್ಬರು ಶ್ರಮಿಸಬೇಕಿದೆ ಎಂದರು. ಶ್ರೀ ಶಿವಗಂಗಾ ಯೋಗ ಕೇಂದ್ರದ ರಾಘವ , ಬಸವನಗುಡಿ , ರೋಟರಿ ರಾಜೇಂದ್ರ ನಗರ, ರವೀಂದ್ರ ನಗರ ಸಂಜೆ ಮತ್ತು ವಿಕಾಸ ಕೇಂದ್ರ ಸರ್ಕಾರಿ ನೌಕರರ ಭವನ ಯೋಗ ಶಾಖೆಗಳ ಯೋಗ ಬಂಧುಗಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಯೋಗಾಚಾರ್ಯ ಡಾ. ಸಿ. ವಿ.ರುದ್ರಾರಾಧ್ಯ ಇದ್ದರು. ಯೋಗ ಗುರು ಪ್ರೊ. ಎಚ್. ಕೆ. ಹರೀಶ್ ಸರ್ವರನ್ನು ಸ್ವಾಗತಿಸಿದರು.ಯೋಗಗುರು ಇಳಂಗೋವನ್ ಪ್ರಾಣಾಯಾಮ ತರಬೇತಿ ನೀಡಿದರು. ಕಾರ್ಯಕ್ರಮದಲ್ಲಿ ಯೋಗ ಬಂಧುಗಳಾದ. ಜಿ ವಿಜಯಕುಮಾರ್. ನರಸೋಜಿ ರಾವ್. ಮಹೇಶ್. ಸುಜಾತ. ಗಾಯತ್ರಿ. ಶೈಲಜ. ಶೋಭಾ. ಉಷಾ. ಸುಬ್ರಮಣಿ. ಶ್ರೀನಿವಾಸ್ ಉಪಸ್ಥಿತರಿದ್ದರು.
ಈ ಸಭೆಯಲ್ಲಿ ನೂತನವಾಗಿ ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ಆಡಳಿತ ಅಧ್ಯಕ್ಷರಾಗಿ ನೇಮಕಗೊಂಡಿರುವ ನಗರದ ಮಹಾದೇವಪ್ಪನವರನ್ನು ಹಾಗೂ ಜಾನಪದ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಟಾಕಪ್ಪರವರನ್ನು ಅಭಿನಂದಿಸಿ ಸನ್ಮಾನಿಸಲಾಯಿತು.
ಈ ಸಭೆಯಲ್ಲಿ ಶಿವಮೊಗ್ಗ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷರಾದ ಹೆಚ್ ಎನ್ ನಾಗರಾಜ್ ಉಪಾಧ್ಯಕ್ಷರಾದ ಎನ್ ಉಮೇಶ್ ಪಾಟೀಲ್, ವಿ.ಜಿ ಶ್ರೀಧರ್, ಹೊಸಮನೆ ಸತೀಶ್, ನಿರ್ದೇಶಕರಾದ ಕೆ.ಎಸ್ ಚಂದ್ರಶೇಖರ, ಕಸ್ತೂರ, ಮಂಜುನಾಥ ದೇವರಾಜ ಪಾಟೀಲ್, ಸುರೇಶ್ ವಾಟಗೋಡ್, ಎ.ವಿ ಮಲ್ಲಿಕಾರ್ಜುನ, ಸುರೇಶ್ ಗೌಡ್ರು, ಬಿ ನಾಗರಾಜ, ಹುಲ್ಮಾರ್ ಮಹೇಶ್ ಮೋಹನಕುಮಾರ, ಶಿವಕುಮಾರ, ಮಲ್ಲಿಕಾರ್ಜುನ ಗುತ್ತೇರ್ ಮತ್ತು ಜಂಟಿ ಕೃಷಿ ನಿರ್ದೇಶಕರು ಹಾಗೂ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಹಾಜರಿದ್ದರು.
MESCOM ಶಿವಮೊಗ್ಗ ಮೆಸ್ಕಾಂ ಗ್ರಾಮೀಣ ಉಪವಿಭಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಛೇರಿ, ಪಾಲನೆ ಮತ್ತುನಿರ್ವಹಣೆ ಗ್ರಾಮೀಣ ಉಪವಿಭಾಗ, ಬಾಲರಾಜ್ ಅರಸ್ ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ ಇಲ್ಲಿ ಡಿ. 18 ರಂದು ಬೆಳಿಗ್ಗೆ 11.00 ರಿಂದ 01.00 ಗಂಟೆಯವರೆಗೆ ಜನಸಂಪರ್ಕ ಸಭೆ ನಡೆಯಲಿದೆ.
ಈ ಸಭೆಯಲ್ಲಿ ಮೆಸ್ಕಾಂನ ಅಧಿಕಾರಿಗಳು ಭಾಗವಹಿಸಲಿದ್ದು, ಸಂಬಂಧಪಟ್ಟ ಪ್ರದೇಶದ ಗ್ರಾಹಕರ ಅಹವಾಲುಗಳನ್ನು ಸ್ವೀಕರಿಸುವುದರಿಂದ ಈ ಅವಕಾಶವನ್ನು ಗ್ರಾಹಕರು ಸದುಪಯೋಗಪಡಿಸಿಕೊಳ್ಳುವಂತೆ ಮೆಸ್ಕಾಂ ತಿಳಿಸಿದೆ.