Monday, February 16, 2026
Monday, February 16, 2026
Home Blog Page 155

Madhu Bangarappa ಮನರಂಜನೆ ಜೊತೆ ಸಾಮಾಜಿಕ ಹಿತದ ಸಂದೇಶ ನೀಡುವ ಚಿತ್ರಗಳು ನಿರ್ಮಾಣವಾಗಬೇಕು- ಮಧು ಬಂಗಾರಪ್ಪ

0

Madhu Bangarappa ರಾಜಕಾರಣದಲ್ಲಿ ಯಾರಿಗೂ ತಿಳಿಯದಂತೆ ಜಾತಿ, ಧರ್ಮದ ಸೋಂಕು ತಗುಲಿದೆ. ಇಂತಹ ಕಳಂಕಗಳಿಗೆ ಚಿತ್ರರಂಗ ಹೊರಬಂದು ಮನೋರಂಜನೆಯ ಜೊತೆಗೆ ಸಾಮಾಜಿಕ ಹಿತದ ಸಂದೇಶ ನೀಡುವ ರಚನಾತ್ಮಕ ಚಿತ್ರಗಳು ನಿರ್ಮಾಣಗೊಳ್ಳಬೇಕು ಎಂದು ರಾಜ್ಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಎಸ್.ಬಂಗಾರಪ್ಪ ಅವರು ಹೇಳಿದರು. ಅವರು ಶಿವಮೊಗ್ಗ ಮಹಾನಗರಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಶಿವಮೊಗ್ಗ ಬೆಳ್ಳಿಮಂಡಲ, ಸಿನಿಮೊಗೆ, ಶಿವಮೊಗ್ಗ ಚಿತ್ರಸಮಾಜ ಇವರುಗಳ ಸಂಯುಕ್ತಾಶ್ರಯದಲ್ಲಿ ನಗರದ ಡಾ|| ಬಿ.ಆರ್.ಅಂಬೇಡ್ಕರ್‌ಭವನದಲ್ಲಿ ಏರ್ಪಡಿಸಲಾಗಿದ್ದ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಚಿತ್ರರಂಗದಲ್ಲಿ ಇಂದು ಸಾಕಷ್ಟು ಸಮಸ್ಯೆ-ಸವಾಲುಗಳ ನಡುವೆಯೂ ಹಲವು ತಜ್ಞರ, ಪರಿಣಿತರು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವುದರ ಕಾರಣದಿಂದಾಗಿ ರಾಜ್ಯದಲ್ಲಿ ಚಿತ್ರರಂಗ, ಚಿತ್ರಮಂದಿರಗಳು ಜೀವಂತವಾಗಿವೆ. ಇಲ್ಲದಿದ್ದಲ್ಲಿ ಪಳಿಯುಳಿಕೆಗಳಾಗಿ ನೋಡಬೇಕಾಗಿತ್ತು. ಇಂತಹ ಅನೇಕ ಕಾರಣಗಳಿಂದಾಗಿ ಅತ್ಯಾಧುನಿಕ ತಂತ್ರಜ್ಞಾನಾಧಾರಿತ ಚಿತ್ರರಂಗಕ್ಕೆ ಸಂಬಂಧಿಸಿದ ಯಂತ್ರೋಪಕರಣಗಳು ರಾಜ್ಯದಲ್ಲಿಯೇ ನೋಡುವಂತಾಗಿದೆ.

ಇದಕ್ಕೂ ಮುನ್ನ ರಾಜ್ಯದ ಚಲನಚಿತ್ರದ ನಿರ್ಮಾಪಕರು ತಮ್ಮ ಅಗತ್ಯಗಳಿಗಾಗಿ ಮಡ್ರಾಸ್‌ಗೆ ಹೋಗಬರಬೇಕಾಗುತ್ತಿತ್ತು ಎಂದ ಅವರು, ಚಿತ್ರರಂಗದಲ್ಲಿ ನಿರ್ಮಾಪಕರಾಗಿ, ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದ ಆಕಾಶ್‌ಆಡಿಯೋ ಸ್ಥಾಪಿಸಿದ್ದ ಕ್ಷಣಗಳನ್ನು ನೆನಪಿಸಿಕೊಂಡರು. ಪ್ರತಿ ವ್ಯಕ್ತಿಯೂ ತಾನು ತನ್ನ ಕಾರ್ಯಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು ಮಾಡುವ ಕಾರ್ಯದಿಂದ ಜನಮಾನಸದಲ್ಲಿ ಶಾಶ್ವತವಾಗಿ ಉಳಿದುಕೊಳ್ಳುತ್ತಾನೆ ಎಂಬುದಕ್ಕೆ ನಟರೇ ಸಾಕ್ಷಿ ಎಂದ ಅವರು, ಶಿವಮೊಗ್ಗ ಜಿಲ್ಲೆ ಕಲೆ, ಸಾಹಿತ್ಯ, ಸಂಗೀತ, ನೃತ್ಯ ಕ್ಷೇತ್ರಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಕವಿ-ಕಲಾವಿದರನ್ನು ಉಳಿಸಿ-ಬೆಳೆಸುವ, ಅನುಸರಿಸುವ ಹೊಣೆಗಾರಿಕೆ ಎಲ್ಲರದ್ದಾಗಿದೆ ಎಂದರು.

ದೇವಾಲಯಗಲ್ಲಿನ ಗಂಟೆ ಸದ್ದಿಗಿಂತ ಶಾಲೆಗಳಲ್ಲಿ ಮೊಳಗುವ ಗಂಟೆ ಸದ್ದು ದೇಶವನ್ನು ಕಟ್ಟುವ ಯುವ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗಿ ರೂಪಿಸುತ್ತದೆ. ಅದು ಸಾಮಾಜಿಕವಾಗಿ ಸ್ಥಾನಮಾನ ಹೊಂದಲು ಶಿಕ್ಷಣ ಸಹಕಾರಿಯಾಗಿದೆ. ಎಂದ ಅವರು, ಶಿವಮೊಗ್ಗ ದಸರಾ ಅಂಗವಾಗಿ ಚಿತ್ರರಂಗದ ಹಲವು ಘಟನಾವಳಿಗಳನ್ನಾಧರಿಸಿದ ಅತ್ಯರೂಪದ ಛಾಯಾಚಿತ್ರಗಳನ್ನು ಒಳಗೊಂಡ ಛಾಯಾಚಿತ್ರ ಪ್ರದರ್ಶನ ಅತ್ಯಂತ ವಿಶೇಷವೆನಿಸಿದೆ ಎಂದರು.

Madhu Bangarappa ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಎಸ್.ಎನ್.ಚನ್ನಬಸಪ್ಪ ಅವರು ಮಾತನಾಡಿ, ರಾಜ್ಯ ಸರ್ಕಾರದ 50ಲಕ್ಷ ರೂ.ಗಳ ಆರ್ಥಿಕ ನೆರವಿನೊಂದಿಗೆ ಸುಮಾರು 2.50ಕೋಟಿ ರೂ.ಗಳ ವೆಚ್ಚದಲ್ಲಿ ಶಿವಮೊಗ್ಗ ದಸರಾವನ್ನು ಅತ್ಯಂತ ಸಂಭ್ರಮ-ಸಡಗರಗಳಿಂದ ಆಚರಿಸಲಾಗುತ್ತಿದೆ. ಈ ದಸರಾ ಅಂಗವಾಗಿ ಏರ್ಪಡಿಸಲಾಗುತ್ತಿರುವ ಅನೇಕ ವೇದಿಕೆಗಳಲ್ಲಿ ಸಹಸ್ರಾರು ಸಂಖ್ಯೆಯ ಕಲಾವಿದರಿಗೆ, ಪ್ರತಿಭಾವಂತರಿಗೆ, ಗಣ್ಯರಿಗೆ ವೇದಿಕೆ ದೊರೆಯಲಿದೆ ಎಂದರು.

ಹಲವು ಸಮಸ್ಯೆ-ಸವಾಲುಗಳಿಂದಾಗಿ ಬೆಳ್ಳಿ ತೆರೆ ತನ್ನ ಮಹತ್ವವನ್ನು ಕಳೆದುಕೊಂಡು ಸೊರಗುತ್ತಿರುವುದು ಅತ್ಯಂತ ನೋವಿನ ಸಂಗತಿ. ಕಲೆಯನ್ನು ಪ್ರೋತ್ಸಾಹಿಸುವ, ಕಲಾವಿದರನ್ನು ಪೋಷಿಸುವ ಮನಸ್ಸುಗಳ ತುರ್ತು ಅಗತ್ಯವಿದೆ ಎಂದು ಹಾಸ್ಯ ನಟ ಶರಣ್‌ ಅವರು ತಿಳಿಸಿದರು.

ವಿಶ್ವದ ಭೂಪಟದಲ್ಲಿ ಗುರುತಿಸಿಕೊಳ್ಳಬಹುದಾದ ಜಿಲ್ಲೆ ಶಿವಮೊಗ್ಗ. ಕಲೆ, ಸಾಹಿತ್ಯ, ಸಿನಿಮಾ, ರಂಗಭೂಮಿ, ರಾಜಕಾರಣ ಹೀಗೆ ಹಲವು ಕ್ಷೇತ್ರಗಳಿಗೆ ಶಿವಮೊಗ್ಗ ಜಿಲ್ಲೆಯ ಕೊಡುಗೆ ಅಪಾರ ಎಂದು ಚಲನಚಿತ್ರ ನಟಿ ಕಾರಣ್ಯರಾಮ್‌ ಅವರು ಹೇಳಿದರು.

ಸಮಾರಂಭದಲ್ಲಿ ಸೂಡಾ ಅಧ್ಯಕ್ಷ ಎಸ್.ಹೆಚ್.ಸುಂದರೇಶ್‌, ಪಾಲಿಕೆ ಆಯುಕ್ತ ಮಾಯಣ್ಣಗೌಡ, ಶ್ರೀಮತಿ ರೇಖಾ ರಂಗನಾಥ್‌, ನಾಗರಾಜ ಕಂಕಾರಿ, ವಿಶ್ವಾಸ್‌, ಬಿಂಬಶ್ರೀ, ಫಾಲಾಕ್ಷಿ, ಕೃಪಾಕರ, ಅಚ್ಯತ ನಾರಾಯಣ್‌ಮತ್ತಿತರರು ಉಪಸ್ಥಿತರಿದ್ದರು. ಉದ್ಘಾಟನಾ ಕಾರ್ಯಕ್ರಮದ ನಂತರ ರಸಗ್ರಹಣ ಶಿಬಿರವನ್ನು ಏರ್ಪಡಿಸಲಾಗಿತ್ತು.

Shivamogga Dasara ದಸರಾ ಅಂಬಾರಿಗೆ ಸಜ್ಜಾಗಿ ಬಂದ ಗಜಪಡೆಗೆ ಸ್ವಾಗತ ಕೋರಿದ ಶಾಸಕ ಚನ್ನಬಸಪ್ಪ

0

Shivamogga Dasara ಶಿವಮೊಗ್ಗ ನಾಡಹಬ್ಬ ದಸರಾ ಮಹೋತ್ಸವ – 2025 ರ ವೈಭವವನ್ನು ಹೆಚ್ಚಿಸಲಿರುವ ಗಜಪಡೆಯು ಸಕರೆಬೈಲಿನಿಂದ ಆಗಮಿಸಿದ್ದು, ನಗರದ ವಾಸವಿ ಶಾಲೆಯ ಆವರಣದಲ್ಲಿ ಸಕಲ ಪೂಜಾ ಪುನಸ್ಕಾರಗಳೊಂದಿಗೆ ಹಾಗೂ ಗೌರವಪೂರ್ಣ ಸ್ವಾಗತದೊಂದಿಗೆ ಗಜಪಡೆಯನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಬರಮಾಡಿಕೊಂಡರು.

Shivamogga Dasara ಮೈಸೂರು ಹೊರತುಪಡಿಸಿ ಜಂಬೂಸವಾರಿ ವೈಭವವನ್ನು ಕಣ್ತುಂಬಿಕೊಳ್ಳಬಹುದಾದ ಏಕೈಕ ನಗರವೆಂದರೆ ಶಿವಮೊಗ್ಗ. ದಸರಾ ಸಂಭ್ರಮದ ಪ್ರಮುಖ ಆಕರ್ಷಣೆಯಾದ ಈ ಗಜಪಡೆಯು ಶಿವಮೊಗ್ಗ ದಸರಾಕ್ಕೆ ಶೋಭೆ ತಂದಿದ್ದು, ಶಿವಮೊಗ್ಗ ದಸರಾ ಮಹೋತ್ಸವವನ್ನು ಕೇವಲ ನಗರ ಮಟ್ಟದ ಹಬ್ಬವಲ್ಲದೆ, ರಾಜ್ಯದ ಸಾಂಸ್ಕೃತಿಕ ಅಸ್ತಿತ್ವವನ್ನು ಪ್ರತಿನಿಧಿಸುವ ಭವ್ಯ ನಾಡಹಬ್ಬವನ್ನಾಗಿ ರೂಪಿಸುತ್ತಿದೆ.

Malenadu Siri Seva Trust ಬ್ರಹ್ಮಶ್ರೀ ನಾರಾಯಣ ಗುರುಗಳು ಮನುಕುಲದ ಮಾರ್ಗದರ್ಶಕ- ರಾಜು ಹಿರಿಯಾವಲಿ

0

Malenadu Siri Seva Trust ವಿದ್ಯೆಯಿಂದ ಪ್ರಭುದ್ಧರಾಗಿ, ಸಂಘಟನೆಯಿಂದ ಬಲಿಷ್ಠರಾಗಿ ಎಂಬ ಸಂದೇಶವನ್ನು ನೀಡಿದ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವ ಮತ್ತು ಸಂದೇಶಗಳು ಮನುಕುಲಕ್ಕೆ ಮಾರ್ಗದರ್ಶನವಾಗಿವೆ ಎಂದು ಮಲೆನಾಡು ಸಿರಿ ಸೇವಾ ಟ್ರಸ್ಟ್ ಅಧ್ಯಕ್ಷ ರಾಜು ಹಿರಿಯಾವಲಿ ಹೇಳಿದರು.

ಸೊರಬ ಪಟ್ಟಣದ ಹೊಸಪೇಟೆ ಬಡಾವಣೆಯ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಲ್ಲಿ ಮಲೆನಾಡು ಸಿರಿ ಸೇವಾ ಟ್ರಸ್ಟ್ ಹಾಗೂ ಬಿಎಸ್‌ಎನ್‌ಡಿಪಿ ಸಂಘಟನೆ ಸಹಯೋಗದಲ್ಲಿ ಹಮ್ಮಿಕೊಂಡ ನಾರಾಯಣ ಗುರು ಜಯಂತಿ ಹಾಗೂ ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶಿಕ್ಷಣದ ಜೊತೆಗೆ ಆಧುನಿಕ ವಿಜ್ಞಾನಕ್ಕೂ ಸಹ ನಾರಾಯಣ ಗುರುಗಳು ಪ್ರೋತ್ಸಾಹ ನೀಡಿದರು. ಅಂದಿನ ಕಾಲಘಟ್ಟದಲ್ಲಿದ್ದ ಸಮಾಜದ ಅನಿಷ್ಟ ಪದ್ಧತಿಗಳ ವಿರುದ್ಧವಾಗಿ ಹೋರಾಡುವ ಮೂಲಕ ಶಿಕ್ಷಣಕ್ಕೆ ಮೊದಲ ಆದ್ಯತೆ ನೀಡಿದರು. ಈ ನಿಟ್ಟಿನಲ್ಲಿ ಕೇರಳ ರಾಜ್ಯ ಪ್ರಸ್ತುತ ದೇಶದಲ್ಲಿಯೇ ಅತಿ ಹೆಚ್ಚು ವಿದ್ಯಾವಂತರನ್ನು ಹೊಂದಿದ ನಾಡಾಗಿದೆ. ನಾರಾಯಣಗುರುಗಳು ಮಾನವೀಯ ಮೌಲ್ಯಗಳ ಆಧಾರದ ಮೇಲೆ ಸಮಾಜವನ್ನು ಒಗ್ಗೂಡಿಸಲು ಹಾಗೂ ಸರ್ವರ ಏಳಿಗಾಗಿ ತಮ್ಮ ಬದುಕನ್ನೇ ಮುಡಿಪಾಗಿಟ್ಟಿದ್ದರು ಎಂದರು.

ನಾರಾಯಣಗುರುಗಳ ಜಯಂತಿಯ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಎಲೆಮರೆಯ ಕಾಯಿಯಂತೆ ಸೇವೆ ಸಲ್ಲಿಸುತ್ತಾ ಇರುವವರನ್ನು ಗುರುತಿಸುವ ಕೆಲಸವನ್ನು ಸಂಘಟನೆಯಿAದ ಮಾಡಲಾಗುತ್ತಿದೆ ಎಂದರು.
ಸನ್ಮಾನ ಸ್ವೀಕರಿಸಿದ ಜಿಲ್ಲಾ ಮಟ್ಟದ ಕ್ರಿಯಾಶೀಲ ಪ್ರಶಸ್ತಿ ಪುರಸ್ಕೃತ ಎಚ್.ಕೆ.ಬಿ. ಸ್ವಾಮಿ ಮಾತನಾಡಿ, ನಾರಾಯಣಗುರುಗಳು ಸಮಸಮಾಜದ ನಿರ್ಮಾಣದ ಜೊತೆಗೆ ಸಮಾಜದ ಡೊಂಕುಗಳನ್ನು ತಿದ್ದುವ ಕೆಲಸ ಮಾಡಿದರು.

ಒಂದು ಸಮುದಾಯದವರು ಇತರೆ ಸಮುದಾಯದವರನ್ನು ಗುರುತಿಸಿ ಸನ್ಮಾನಿಸುವುದು ವಿರಳ. ನಾರಾಯಣ ಗುರುಗಳ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಜಿಲ್ಲಾ ಮಟ್ಟದ ಕ್ರೀಯಾಶೀಲ ಪತ್ರಕರ್ತ ಪ್ರಶಸ್ತಿ ಪುರಸ್ಕೃತ ಎಚ್.ಕೆ.ಬಿ. ಸ್ವಾಮಿ, ಪತ್ರಕರ್ತ ನೋಪಿ ಶಂಕರ್, ಪ್ರಗತಿಪರ ಯುವ ಕೃಷಿಕ ಅರುಣಕುಮಾರ್ ಕೊಡಕಣಿ, ಬಿಎಸ್‌ಎನ್‌ಡಿಪಿ ಸಂಘಟನೆ ಮಹಿಳಾ ಜಿಲ್ಲಾಧ್ಯಕ್ಷೆ ರೇಣುಕಾ ಲೋಕೇಶ್, ನಾರಾಯಣಗುರು ಪತ್ತಿನ ಸಹಕಾರ ಸಂಘದ ಸಂಸ್ಥಾಪಕ ನಾರಾಯಣರಾವ್ ಹುಲ್ತಿಕೊಪ್ಪ, ಶಿಕ್ಷಕ ಈರಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.

Malenadu Siri Seva Trust ಈ ಸಂದರ್ಭದಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪಾಣಿ ರಾಜಪ್ಪ, ಮಾಜಿ ಸದಸ್ಯ ತಬಲಿ ಬಂಗಾರಪ್ಪ, ತಾಲೂಕು ಬಗರ್‌ಹುಕುಂ ಸಮಿತಿ ಅಧ್ಯಕ್ಷ ಎಂ.ಡಿ. ಶೇಖರ್, ಈಡಿಗ ಸಮಾಜದ ತಾಲೂಕು ಮಾಜಿ ಅಧ್ಯಕ್ಷ ಕೆ. ಅಜ್ಜಪ್ಪ ಕಾಸರಗುಪ್ಪೆ, ಪುರಸಭೆ ಅಧ್ಯಕ್ಷ ಪ್ರಭು ಮೇಸ್ತಿç, ಮುಖ್ಯಾಧಿಕಾರಿ ಎಚ್.ವಿ. ಚಂದನ್, ಹಳೇಸೊರಬ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್ ಜೆ. ಹಳೇಸೊರಬ, ಬುಕ್ಕೇಶ್ ಯಲಸಿ, ಕೆರಿಯಪ್ಪ ಹಳೇಸೊರಬ, ವೇಣುಗೋಪಾಲ್, ನಾಗರಾಜ್ ಜಯಂತಿಗ್ರಾಮ, ಎಸ್.ಡಿ. ನಾಯ್ಕ್, ಗ್ರಾಪಂ ಅಧ್ಯಕ್ಷೆ ಅನುಸೂಯ ಹರೀಶಿ, ಜಯಮ್ಮ ತಡಗಣಿ, ಸುಮಂಗಲ ಕೆಂಚಿಕೊಪ್ಪ ಸೇರಿದಂತೆ ಇತರರಿದ್ದರು.

Dr. S.L. Bhyrappa ಅಕ್ಷರ ಬ್ರಹ್ಮರಿಗೆ ಅಕ್ಕರೆಯ ಶ್ರದ್ಧಾಂಜಲಿ

0

ಲೇ:ಡಾ.ಸುಧೀಂದ್ರ ಪ್ರಧಾನ ಸಂಪಾದಕರು, ಕೆ ಲೈವ್ ನ್ಯೂಸ್

Dr. S.L. Bhyrappa ಈ ಫೋಟೋ ಬಗ್ಗೆ ಏನಾದರೂ ಹೇಳಿ ಅಂತ ಫೇಸ್ ಬುಕ್ ನೆನಪಿಸುತ್ತಲೇ ಇರುತ್ತದೆ.
ಈ ಫೋಟೋ‌ ಬಗ್ಗೆ ಹೇಳುತ್ತಾ ಬರೆದರೆ ಅದು ಸೂರ್ಯನ ಪರಿಚಯ ಮಾಡುವ ಸಾಹಸ.
ಜ್ಞಾನಪೀಠ ..ಅವರ ಬಳಿ‌ ಸುಳಿಯದೇ ತನಗೆ ತಾನೆ ಆತ್ಮವಂಚನೆ ಮಾಡಿಕೊಂಡಿದೆ.
ಅವರಿಗಿಂತ ಸುಮಾರಾದವರಿಗೆ
ಒಲಿಯಿತು. ಇದು ವಿಡಂಬನೆ.
ಪದ್ಮಭೂಷಣ ಡಾ.ಎಸ್.ಎಲ್.ಭೈರಪ್ಪನವರ
” ಪರ್ವ” ಕಾದಂಬರಿ ನನಗೆ ನಮ್ಮ ಆಕಾಶವಾಣಿ ಪುಸ್ತಕ ಭಂಡಾರದಲ್ಲಿ ಸಿಕ್ಕಿತು. ಓದಿದೆ.
ಅದನ್ನ ನಾನು ಓದಿದೆ ಅನ್ನುವುದಕ್ಕಿಂತ ನಮ್ಮ ತಂದೆ
ಸು. ಎಪ್ಪತ್ತನೇ ವಯಸ್ಸಿನಲ್ಲಿ ಓದಿ
ಚನ್ನಾಗಿದೆ ಅಂದರು. ಅಲ್ಲಿಯವರೆಗೂ ಅವರು ಕಾದಂಬರಿಗಳ‌ ಪುಟ ತೆರೆದವರೇ ಅಲ್ಲ.
ಪರ್ವ ಮುಗಿಯುವ ತನಕ ಆಸಕ್ತಿಯಿಂದ ಓದಿದರು.
ಅವರಿಬ್ಬರೂ ಈಗಿಲ್ಲ.
ಆದರೆ ಬರಹ ಮತ್ತು ಓದಿದ ಆಸಕ್ತಿ ಎರಡೂ ನನ್ನ ಮುಂದಿವೆ.
ಇದು ಭೈರಪ್ಪನವರ ಸಾಧನೆ. ನನ್ನಂತಹ ಅಸಂಖ್ಯರಿಗೆ ಈ ಅನುಭವ ಆಗಿದೆ ಅಂದುಕೊಳ್ಳುವೆ. ನಾನು ಪಿಯು ಹಂತದಲ್ಲೇ ದೂರ ಸರಿದರು ಓದಿದೆ. ಅದರ ಪ್ರಭಾವ ನನಗೆ ಬಹಳ ವರ್ಷ ಕಾಡಿತು. ಅವರ ಮುಂದಿನ ಕಾದಂಬರಿಗಳ‌ ಬಗ್ಗೆ
ಓದುವಂತೆ ಮಾಡಿತು…..
ಹೆಚ್ಚು ಬರೆದರೆ…ಸುಮ್ಮನೆ ಒಣ ಒಣ ಅನ್ನಿಸಬಹುದು. ಪಿಎಚ್ ಡಿ ಮಹಾಪ್ರಬಂಧದ ಸಲುವಾಗಿ
ಮೈಸೂರಿಗೆ ಹೋದಾಗ ಅವರು ಊರಲ್ಲಿರಲಿಲ್ಕ. ಸಿಂಧುವಳ್ಳಿ ಅನಂತ ಮೂರ್ತಿ ಮಾತ್ರ ಸಿಕ್ಕರು.

ಆದರೆ ಅವರೊಂದಿಗೆ ಭದ್ರಾವತಿಯಲ್ಲಿ ಲಭಿಸಿದ ಸುಮಾರು ಎರಡು ಗಂಟೆ ಅವಧಿ ಮಾತಾಡುವ ಅವಕಾಶ ಮಾತ್ರ ಮರೆಯಲಾರೆ. ಪ್ರಭು ಅವರು ಭೈರಪ್ಪನವರ ಆಪ್ತರು, ಕಾದಂಬರಿ‌ ಹಸ್ತಪ್ರತಿ ಹಂತದಲ್ಲೇ ಓದುತ್ತಿದ್ದ ಎಂ.ಎಸ್
ಕೆ.ಪ್ರಭು ಅವರು ನನಗೆ ಭೈರಪ್ಪನವರ ಪರಿಚಯ ಮಾಡಿಸಿ ಮನೆಗೆ ಕರೆದೊಯ್ದಿದ್ದರು.

Dr. S.L. Bhyrappa ಭೈರಪ್ಪನವರು ಶಿವಮೊಗ್ಗಕ್ಕೆ ಬಂದಾಗ ಅವರ ಭಾಷಣ ಕೇಳಿದ್ದೆ.
ಹೆಚ್ಚ ಮಾತಾಡಲಾಗಲಿಲ್ಲ ಅವರಿಗೆ.
ಕೋಟಿ ರೂ ನೀಡಿ ಹುಟ್ಟಿದೂರಿಗೆ
ರಾಜಕೀಯ ಲೇಪವಿಲ್ಲದೇ ಜೀವಜಲ ತುಂಬಿದ ನಿಮ್ಮ ಜನೋಪಾಕಾರಿ ವಿವೇಕ ಮಾದರಿಯಾಗಿದೆ ಸರ್.
ನನಗೆ ಇನ್ನೂ ಇಷ್ಟವಾದದ್ದು ನಿಮ್ಮ ತಿರುಗಾಟ. ಅಥೆಂಟಿಕ್ ಹಿನ್ನೆಲೆ‌ ಬರಹ ವಸ್ತು ಸಾಮಗ್ರಿ ಕಲೆಹಾಕುವ ನಿಮ್ಮ ತೀವ್ರ ಆಸಕ್ತಿ ಮತ್ತು ಕುತೂಹಲ
..ಇರಲಿ…ಸರ್ ನಿಮಗೆ ಅಕ್ಷರ ಶ್ರದ್ಧಾಂಜಲಿ .
ನಿಮಗೆ ಕೋಟಿ ನಮನಗಳು…

Klive Special Article ನವರಾತ್ರಿ ನಾಲ್ಕನೇ ದಿನ, ಕೂಷ್ಮಾಂಡರೂಪಿ ದೇವಿ ಆರಾಧನೆ

0

” ಕೂಷ್ಮಾಂಡಾ ಶುಭದಾಸ್ತುಮೆ”

ಲೇ: ಎನ್.ಜಯಭೀಮ ಜೊಯ್ಸ್. ಶಿವಮೊಗ್ಗ.

ದಿನದ ಒಳ್ಳೆಯಮಾತು(ನವರಾತ್ರಿಯ 4ನೇ ದಿನ)


ನವರಾತ್ರಿ(ನಾಲ್ಕನೆಯ ದಿನ)


Klive Special Article ” ಸುರಾ ಸಂಪೂರ್ಣ ಕಲಶಂ
ರುಧಿರಾಪ್ಲುತಮೇವಚ/
ದಧಾನಾ ಹಸ್ತ ಪದ್ಮಾಭ್ಯಾಂ ಕೂಷ್ಮಾಂಡಾ
ಶುಭದಾಸ್ತುಮೆ//


ನವರಾತ್ರಿಯ ನಾಲ್ಕನೆಯದಿನವಾದ ಇಂದು
ದೇವಿಯ ರೂಪವಾದ ಕೂಷ್ಮಾಂಡದೇವಿಯ
ಆರಾಧನೆಯ ದಿನ.
ಜಗತ್ತಿನ ಅಣುಅಣುವಿನಲ್ಲಿ ಚೈತನ್ಯ ತುಂಬಿದ
ದೇವಿ ಈಕೆ.ದುರ್ಗಾಮಾತೆಯಂತೆ ಹಲವು ಭುಜ
ಗಳನ್ನು ಹೊಂದಿದ ಈಕೆಯೂ ಕೂಡ ತನ್ನ
ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು
ಹಿಡಿದುಅಪಾರತೇಜಸ್ಸಿನೊಂದಿಗೆ,ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ.ಈಕೆಯನ್ನು ಸೃಷ್ಟಿಕರ್ತೆ ಎಂದೂ ಕರೆಯುತ್ತಾರೆ. Klive Special Article ನವದುರ್ಗೆಯರೂಪವಾದಕೂಷ್ಮಾಂಡದೇವಿಜಗತ್ತನ್ನುಪೊರೆಯುತ್ತಿದ್ದಾಳೆಎಂದುಭಾವಿಸಲಾಗಿದೆ.ಆದ್ದರಿಂದ ಇವಳೇ ಸೃಷ್ಟಿಯ ಆದಿ-ಸ್ವರೂಪ ಶಕ್ತಿಯಾಗಿದ್ದಾಳೆ.ಕೂಷ್ಮಾಂಡದೇವಿಯು ಕ್ಷಮ ವಾತ್ಸಲ್ಯಾದಿ ಕಲ್ಯಾಣಗುಣ ಪೂರ್ಣಳು.ಈ ದೇವಿ ಸದಾ ಮಂದಸ್ಮಿತೆ.ಈಕೆಯ ಆರಾಧನೆಯಿಂದ ಮನದ ಕ್ಲೇಷಕಳೆದುಜ್ಞಾನದಬೆಳಕುಮೂಡುತ್ತದೆ.ಕೂಷ್ಮಾಂಡವೆಂದರೆಬೂದುಕುಂಬಳಕಾಯಿಎಂದರ್ಥ.ಆಯುರ್ವೇದ ಶಾಸ್ತ್ರದ ರೀತ್ಯ ಬೂದುಕುಂಬಳಕಾಯಿಯು ಜ್ಞಾನವರ್ಧಕ,ತೇಜೋವರ್ಧಕ,ಸಕಲತಾಪವನ್ನು ಪರಿಹರಿಸಿ ದೇಹಕ್ಕೆ ತಂಪೆರೆವ ಶಾಖಾಹಾರ.
ಇಂತಹ ಶಕ್ತಿ ಸ್ವರೂಪಳಾದ ಕೂಷ್ಮಾಂಡದೇವಿಯನ್ನು ಭಕ್ತಿಯಿಂದ ಪೂಜಿಸಿ ಅನುಗ್ರಹ ಪಡೆಯೋಣ

Shivamogga Dasara ಶಿವಮೊಗ್ಗ ಕಲಾ ದಸರಾ: ಕಲಾ ಪ್ರಿಯರಿಗೆ ಹಬ್ಬದ ಸಂಭ್ರಮದ ಜೊತೆ ಸೃಜನಾತ್ಮಲೋಕ ಅನುಭವಿಸುವ ಅವಕಾಶ- ಶಾಸಕ ಚನ್ನಬಸಪ್ಪ

0

Shivamogga Dasara ಶಿವಮೊಗ್ಗ ದಸರಾ – 2025 ರ ಅಂಗವಾಗಿ ಇಂದು ಕೋಟೆ ಶಿವಪ್ಪ ನಾಯಕ ಅರಮನೆಯ ಐತಿಹಾಸಿಕ ಆವರಣದಲ್ಲಿ ‘ಕಲಾದಸರಾ’ ಕಾರ್ಯಕ್ರಮದ ಅಂಗವಾಗಿ ಛಾಯಾಚಿತ್ರ, ಚಿತ್ರಕಲಾ ಮತ್ತು ಕೊಂಬೆಗಳ ಪ್ರದರ್ಶನವನ್ನು ಶಾಸಕರಾದ ಎಸ್ಎನ್ ಚನ್ನಬಸಪ್ಪ ಅವರು ಉದ್ಘಾಟಿಸಿದರು.

ಈ ಪ್ರದರ್ಶನದಲ್ಲಿ ದಸರಾ ಹಬ್ಬದ ಸಾಂಸ್ಕೃತಿಕ ವೈಭವ, ಕನ್ನಡ ನಾಡಿನ ಐತಿಹಾಸಿಕ ಸ್ಥಳಗಳು, ಜನಪದ ಸಂಸ್ಕೃತಿ ಹಾಗೂ ಇಂದಿನ ಕಾಲದ ಕಲಾತ್ಮಕ ಅಭಿವ್ಯಕ್ತಿಗಳನ್ನು ಪ್ರತಿಬಿಂಬಿಸುವ ನೂರಾರು ಕಲಾಕೃತಿಗಳು ಅಲಂಕರಿಸಿವೆ.

ನಗರದ ಪ್ರತಿಭಾವಂತ ಕಲಾವಿದರು, ವಿದ್ಯಾರ್ಥಿಗಳು ಮತ್ತು ಹವ್ಯಾಸಿ ಛಾಯಾಗ್ರಾಹಕರು ತಮ್ಮ ಸೃಜನಶೀಲತೆಯನ್ನು ಪರಿಚಯಿಸಲು ಈ ವೇದಿಕೆ ಅನನ್ಯ ಅವಕಾಶ ಒದಗಿಸಿದೆ. ‘ಕಲಾದಸರಾ’ ಪ್ರದರ್ಶನವು ದಸರಾ ಸಂಭ್ರಮಕ್ಕೆ ಹೊಸ ಶೋಭೆ ತಂದು, ಕಲಾ ಪ್ರಿಯರಿಗೆ ಹಬ್ಬದ ಸಂಭ್ರಮದ ಜೊತೆ ಸೃಜನಾತ್ಮಕ ಲೋಕವನ್ನು ಅನುಭವಿಸುವ ವಿಶೇಷ ಅವಕಾಶ ನೀಡುತ್ತಿದೆ.

Shivamogga Dasara ವೈಭವದ ಶಿವಮೊಗ್ಗದ ದಸರಾ ಮಹೋತ್ಸವ.ಎಂದೆಂದು ಏನೇನು?

0

Shivamogga Dasara ಶಿವಮೊಗ್ಗ ದಸರಾ-2025 ರ ಅಂಗವಾಗಿ ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ನಗರದಲ್ಲಿ ಸೆ.22 ರಿಂದ ಅ.2 ರವರೆಗೆ ವಿವಿಧ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸೆ.25 ರ ಕಾರ್ಯಕ್ರಮಗಳು:
ಸಮಯ-ಸಂಜೆ 4 ಗಂಟೆಗೆ, ಕಾರ್ಯಕ್ರಮ-ಕಲಾ ಜಾಥ, ಸ್ಥಳ- ಶಿವಪ್ಪನಾಯಕ ವೃತ್ತದಿಂದ ಶಿವಪ್ಪನಾಯಕ ಅರಮನೆವರೆಗೆ, ಉದ್ಘಾಟನೆ-ವೃತ್ತ ಪೊಲೀಸ್ ನಿರೀಕ್ಷಕರು ದೇವರಾಜ್ ಟಿ.ವಿ
ಸಮಯ-ಸಂಜೆ 6 ಗಂಟೆ, ಕಾರ್ಯಕ್ರಮ- ಕಲಾ ದಸರಾ ಸುಗಮ ಸಂಗೀತ, ಜಾನಪದ ನೃತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ, ಸ್ಥಳ-ನಗರದ ಶಿವಪ್ಪನಾಯಕ ಅರಮನೆ, ಉದ್ಘಾಟನೆ-ಸಿನಿಮಾ ಮತ್ತು ರಂಗಭೂಮಿ ಕಲಾವಿದರಾದ ಶ್ರೀಮತಿ ಅಕ್ಷತಾ ಪಾಂಡವಪುರ, ಉಪಸ್ಥಿತಿ- ಗ್ರಾಮಾಂತರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಅಶೋಕ ನಾಯ್ಕ,
ಸಮಯ-ಸಂಜೆ 6 ಗಂಟೆ, ಕಾರ್ಯಕ್ರಮ-ರಂಗಗೀತೆ ಗಾಯನ ಟಿ.ಜಿ.ನಾಗರತ್ನ ಮತ್ತ ತಂಡದವರಿAದ, ಸ್ಥಳ- ಪೊಲೀಸ್ ಸಮುದಾಯ ಭವನ, ಆಶೋಕ ನಗರ, ಉದ್ಘಾಟನೆ- ಜಿಲ್ಲಾ ಪೊಲೀಶ್ ಅಧೀಕ್ಷಕರು ಜಿ.ಕೆ.ಮಿಥುನ್ ಕುಮಾರ್.
ಸೆ.26 ರ ಕಾರ್ಯಕ್ರಮಗಳು
ಸಮಯ- ಸಂಜೆ 5 ಗಂಟೆಗೆ, ಕಾರ್ಯಕ್ರಮ-ಟ್ಯಾಲೆಂಟ್ ಹಂಟ್ ಸ್ಪರ್ಧೆ, ಸ್ಥಳ-ಸಿಟಿ ಸೆಂಟರ್ ಮಾಲ್, ಉದ್ಘಾಟನೆ– ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ಆಯುಕ್ತರು ವಿಶ್ವನಾಥ್ ಪಿ.ಮುದ್ದಜಿ,
ಸಮಯ- ಸಂಜೆ 5 ಗಂಟೆಗೆ, ಕಾರ್ಯಕ್ರಮ-ಕಲಾ ದಸರಾ, ನಗೆ ಹಬ್ಬ ಹಾಗೂ ಸಾಂಸ್ಕೃತಿ ಕಲಾ ತಂಡಗಳಿAದ ವಿವಿಧ ಕಾರ್ಯಕ್ರಮ, ಸ್ಥಳ- ಶಿವಪ್ಪನಾಯಕ ಅರಮನೆ, ಉದ್ಘಾಟನೆ-ಖ್ಯಾತ ಚಲನಚಿತ್ರ ನಟರು ಹಾಗೂ ಕನ್ನಡ ಅಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಮುಖ್ಯಮಂತ್ರಿ ಚಂದ್ರು.
ಸಮಯ- ಸಂಜೆ 5 ಗಂಟೆಗೆ, ಕಾರ್ಯಕ್ರಮ-ಸುಗಮ ಸಂಗೀತ, ಸ್ಥಳ-ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ- ಜಿಲ್ಲಾ ಸಶಸ್ತç ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಎಸ್.ವಿ.ದಿಲೀಪ್.
ಸಮಯ- ಸಂಜೆ 6 ಗಂಟೆಗೆ, ಕಾರ್ಯಕ್ರಮ-ಸಾಹಿತ್ಯ ಸಂಭ್ರಮ, ಸ್ಥಳ- ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ- ಜಿಲ್ಲಾ ಸಶಸ್ತç ಮೀಸಲು ಪಡೆಯ ಪೊಲೀಸ್ ಉಪಾಧೀಕ್ಷಕರಾದ ಎಸ್.ವಿ.ದಿಲೀಪ್.
ಸೆ.27 ರ ಕಾರ್ಯಕ್ರಮಗಳು
Shivamogga Dasara ಸಮಯ-ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಪೌರ ಕಾರ್ಮಿಕರ ದಸರಾ, ಸ್ಥಳ- ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ-ಪತ್ರಕರ್ತರು, ಸಾಹಿತಿಗಳು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಎನ್.ರವಿಕುಮಾರ್
ಸಮಯ- ಸಂಜೆ 6 ಗಂಟೆಗೆ, ಕಾರ್ಯಕ್ರಮ-ವಿಶೇಷ ಸಾಂಪ್ರದಾಯಿಕ ಮಿಶ್ರ ಸಂಗೀತ ಹಾಗೂ ವಿವಿಧ ಕಲೆಗಳ ಸಿಂಚನ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಜಿ.ಪಂ ಉಪ ಕಾರ್ಯದರ್ಶಿ ಸುಜಾತ ಕೆ.ಆರ್, ಮುಖ್ಯ ಅತಿಥಿಗಳು- ಜಿ.ಪಂ ಉಪ ಕಾರ್ಯದರ್ಶಿ (ಅಭಿವೃದ್ದಿ) ಅನ್ನಪೂರ್ಣ ಎನ್.ಮುದುಕಮ್ಮನವರ, ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಜಂಟಿ ನಿರ್ದೇಶಕರಾದ ಗೀತಾ ಎನ್ ಯರೇಶೀಮಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯ ನಿರ್ದೇಶಕರಾದ ಆರ್.ಮಾರುತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಾದ ರೇಖ್ಯಾನಾಯ್ಕ, ಜಿ.ಪಂ ಮುಖ್ಯ ಲೆಕ್ಕಾಧಿಕಾರಿಯಾದ ಕೆ.ಎಸ್.ಶ್ರೀಕಾಂತ್
ಸೆ.28 ರ ಕಾರ್ಯಕ್ರಮಗಳು
ಸಮಯ-ಬೆಳಿಗ್ಗೆ 5.30 ಕ್ಕೆ, ಕಾರ್ಯಕ್ರಮ-ಯೋಗ ದಸರಾ, ಸ್ಥಳ-ಕುವೆಂಪು ರಂಗಮAದಿರ ಆವರಣ, ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ
ಸಮಯ-ಬೆಳಿಗ್ಗೆ 9 ರಿಂದ ರಾತ್ರಿ 8 ಗಂಟೆವರೆಗೆ, ಕಾರ್ಯಕ್ರಮ-ಗಮಕ ಕಾರ್ಯಕ್ರಮ, ಸ್ಥಳ- ಕಮಲಾ ನೆಹರು ಕಾಲೇಜು, ಉದ್ಘಾಟನೆ-ಗಮಕ ರತ್ನಾಕರ ಡಾ.ಕಬ್ಬಿನಾಲೆ ವಸಂತ ಭಾರದ್ವಾಜ್
ಸಮಯ- ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಜ್ಞಾನ ದಸರಾ, ವಿಚಾರ ಸಂಕಿರಣ: ಕರ್ನಾಟಕ ಮೊಟ್ಟಮೊದಲ ಸಾಮ್ರಾಜ್ಯ- ಕದಂಬ ಸಾಮ್ರಾಜ್ಯ ಸ್ಥಾಪಕರು, ಶಿವಮೊಗ್ಗ ಜಿಲ್ಲೆಯ ತಾಳಗುಂದದ ಮಯೂರ ಶರ್ಮಾ, ಸ್ಥಳ-ಡಾ.ಬಿ.ಆರ್.ಅಂಬೇಡ್ಕರ್ ಭವನ, ಉದ್ಘಾಟನೆ-ವಿಕಾಸ ವಿದ್ಯಾಸಮಿತಿ ಕಾರ್ಯದರ್ಶಿ ಎ.ಜೆ.ರಾಮಚಂದ್ರ, ಜಿಲ್ಲಾ ಬಾಹ್ಮಣ ಮಹಾಸಭಾ ಅಧ್ಯಕ್ಷ ಕೆ.ಸಿ.ನಟರಾಜ ಭಾಗವತ್
ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ- ಪತ್ರಕರ್ತರ ದಸರಾ, ಸ್ಥಳ- ಪತ್ರಿಕಾ ಭವನ, ಉದ್ಘಾಟನೆ- ಕುವೆಂಪು ವಿಶ್ವವಿದ್ಯಾಲಯ ಕುಲಪತಿ ಪ್ರೋ.ಶರತ್ ಅನಂತಮೂರ್ತಿ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಕೆ.ವಿ.ಶಿವಕುಮಾರ್, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ನಿರ್ದೇಶಕರಾದ ಎನ್.ರವಿಕುಮಾರ್
ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ-ಮ್ಯೂಸಿಕಲ್ ನೈಟ್, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಮಧು ಬಂಗಾರಪ್ಪ, ವಿಶೇಷ ಆಹ್ವಾನಿತರು-ಖ್ಯಾತ ಚಲನಚಿತ್ರ ನಟ ಡಾ.ಶಿವರಾಜ್‌ಕುಮಾರ್, ಗೌರವ ಉಪಸ್ಥಿತಿ-ಸಂಸದರು, ಮುಖ್ಯ ಅತಿಥಿಗಳು-ವಿಧಾನಸಭೆ ಹಾಗೂ ವಿಧಾನ ಪರಿಷತ್‌ನ ಮಾಜಿ ಶಾಸಕರುಗಳು
ಸಮಯ-ಸಂಜೆ 6 ಗಂಟೆಗೆ, ಕಾರ್ಯಕ್ರಮ-ಆಹಾರ ಮೇಳ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರಾದ ಅವಿನ್.ಆರ್
ಸೆ.29 ರ ಕಾರ್ಯಕ್ರಮಗಳು
ಸಮಯ-ಬೆಳಿಗ್ಗೆ 10.30ಕ್ಕೆ, ಕಾರ್ಯಕ್ರಮ-ಸಾರ್ವಜನಿಕರಿಗೆ ಆಹಾರ ತಿನ್ನುವ ಸ್ಪರ್ಧೆ ಹಾಗೂ ಮೆಸ್ಕಾಂ ಇಲಾಖೆಯವರಿಗೆ ಹಣ್ಣು ತಿನ್ನುವ ಸ್ವರ್ಧೆ, ಸ್ಥಳ- ಶಿವಪ್ಪನಾಯಕ ವೃತ್ತ, ಉದ್ಘಾಟನೆ-ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯ ನಿರ್ವಾಹಕ ಇಂಜಿನಿಯರ್ ವೀರೇಂದ್ರ ಹೆಚ್.ಆರ್
ಸಮಯ-ಸಂಜೆ 6 ಗಂಟೆಗೆ, ಕಾರ್ಯಕ್ರಮ-ಶ್ರೀಮತಿ ರಶ್ಮಿ ಚಿಕ್ಕಮಗಳೂರು ಸಾರಥ್ಯದಲ್ಲಿ ಭಾವಗೀತೆಗಳು ಹಾಗೂ ವಚನಗಳು, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಶೇಷ ಆಹ್ವಾನಿತರು-ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮಾಜಿ ಶಾಸಕರು ಎಸ್.ರುದ್ರೇಗೌಡರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್
ಸಮಯ ಸಂಜೆ 7.30ಕ್ಕೆ, ಕಾರ್ಯಕ್ರಮ-ಶ್ರೀಮತಿ ವೀಣಾ ಅರುಣ್ ಹಾಗೂ ಸಂಗಡಿಗರಿAದ “ಅವತರಿಸು ಭ” ನೃತ್ಯ ರೂಪಕ, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ವಿಶೇಷ ಆಹ್ವಾನಿತರು-ಮಾಜಿ ಸಭಾಪತಿ ಡಿ.ಹೆಚ್.ಶಂಕರಮೂರ್ತಿ, ಮಾಜಿ ಶಾಸಕರು ಎಸ್.ರುದ್ರೇಗೌಡರು, ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್
ಸೆ.30ರ ಕಾರ್ಯಕ್ರಮಗಳು
ಸಮಯ-ಬೆಳಿಗ್ಗೆ 10 ಗಂಟೆಗೆ, ಕಾರ್ಯಕ್ರಮ-ಕಲಾ ಮತ್ತು ವಿಜ್ಞಾನ ದಸರಾ, ಸ್ಥಳ-ಕುವೆಂಪು ರಂಗಮAದಿರ, ಉದ್ಘಾಟನೆ-ಜಿಲ್ಲಾಧಿಕಾರಿ ಗುರುದತ್ತ ಹೆಗಡೆ
ಸಮಯ-ಬೆಳಿಗ್ಗೆ 10.30ಕ್ಕೆ, ಕಾರ್ಯಕ್ರಮ-ಅಡುಗೆ ಮಾಡುವ ಸ್ಪರ್ಧೆ(ದಂಪತಿಗಳಿAದ ಸಿರಿಧಾನ್ಯಗಳ ಉಪಯೋಗಿಸಿ ತಯಾರಿಸುವ ಖಾದ್ಯಗಳು), ಸ್ಥಳ-ವೀರಶೈವ ಕಲ್ಯಾಣ ಮಂಟಪ, ಉದ್ಘಾಟನೆ-ಎಸ್‌ಎಲ್‌ಎನ್ ಕ್ಯಾಟರರ್ಸ್ನ ಪ್ರಭಾಕರ್ ಎನ್.ಹೆಚ್
ಸಮಯ-ಸಂಜೆ 5.30ಕ್ಕೆ, ಕಾರ್ಯಕ್ರಮ-ನಾದ ವೈಭವ, ಸಂಗೀತ ವೈಭವ, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಖ್ಯಾತ ಚಲನಚಿತ್ರ ನಟಿ ಶ್ರೀಮತಿ ಗೀತಾ, ಮುಖ್ಯ ಅತಿಥಿಗಳು-ಮಾಜಿ ಶಾಸಕ ಕೆ.ಬಿ.ಪ್ರಸನ್ನಕುಮಾರ್, ಜೆಡಿಎಸ್ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್
ಸಮಯ-ಸಂಜೆ 6.15ಕ್ಕೆ, ಕಾರ್ಯಕ್ರಮ-ರಂಗದಸರಾ ಸಮಾರೋಪ ಸಮಾರಂಭ, ಸ್ಥಳ-ಕುವೆಂಪು ರಂಗಮAದಿರ, ಉದ್ಘಾಟನೆ-ರಂಗಭೂಮಿ ಕಲಾವಿದ ಪ್ರಕಾಶ್‌ರಾವ್
ಅ.1 ರ ಕಾರ್ಯಕ್ರಮಗಳು
ಸಮಯ-ಸಂಜೆ 5.30ಕ್ಕೆ, ಕಾರ್ಯಕ್ರಮ-ನಾಟ್ಯ ವೈಭವ, ಸ್ಥಳ- ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ-ಖ್ಯಾತ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ, ಮುಖ್ಯ ಅತಿಥಿ-ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಸಮಯ-ರಾತ್ರಿ 8 ಗಂಟೆಗೆ, ಕಾರ್ಯಕ್ರಮ- ಕೆ.ವಿ.ನಾಗರಾಜ್ ಮೂರ್ತಿ ಹಾಗೂ ತಂಡದವರಿAದ ಜಾನಪದ ವೈಭವ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್), ಉದ್ಘಾಟನೆ- ಖ್ಯಾತ ಚಲನಚಿತ್ರ ನಟಿ ಹರ್ಷಿಕಾ ಪೂಣಚ್ಚ, ಮುಖ್ಯ ಅತಿಥಿ-ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ
ಅ.2 ರ ಕಾರ್ಯಕ್ರಮಗಳು
ಸಮಯ-ಸಂಜೆ 5 ಗಂಟೆಗೆ, ಕಾರ್ಯಕ್ರಮ-ಸುಗಮ ಸಂಗೀತ: ಸುರೇಕಾ ಹೆಗ್ಡೆ ಮತ್ತು ಸಂಗಡಿಗರಿAದ, ಸ್ಥಳ-ಅಲ್ಲಮಪ್ರಭು ಮೈದಾನ(ಫ್ರೀಡಂ ಪಾರ್ಕ್),

The India Scouts and Guides ಶಿವಮೊಗ್ಗದ ನಾಲ್ವರಿಗೆ ಸ್ಕೌಟ್ಸ್ & ಗೈಡ್ಸ್ ಲೀಡರ್ಸ್ ಟ್ರೈನರ್ಸ್ ರಾಜ್ಯ ಪ್ರಶಸ್ತಿ

0

The India Scouts and Guides ದಿ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಸಂಸ್ಥೆ ವತಿಯಿಂದ ಶಿವಮೊಗ್ಗ ಜಿಲ್ಲೆಯ ನಾಲ್ಕು ಜನ
ಸ್ಕೌಟ್ಸ್ ಅಂಡ್ ಗೈಡ್ಸ್ ಲೀಡರ್ಸ್ ಟ್ರೈನರ್ಸ್ ಗಳಿಗೆ ರಾಜ್ಯ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಸ್ಥಳೀಯ ಸಂಸ್ಥೆಯ ಕಾರ್ಯದರ್ಶಿ ತರಬೇತುದರಾದ ಎ ವಿ ರಾಜೇಶ್ ಅವಲಕ್ಕಿ
ರೋವರ್ ಲೀಡರ್ ಟ್ರೈನರ್. ಎಂ ಗಣಪತಿ. ರೋವರ್ ಲೀಡರ್ ಟ್ರೈನರ್ ಚಿತ್ರ ಕಲಾವಿದೆ ಶ್ರೀಮತಿ ಕಾತ್ಯಾಯಿನಿ ಸಿಎಸ್. ಲೀಡರ್ ಟ್ರೈನರ್ ಗೈಡ್ ಶ್ರೀಮತಿ ಮೀನಾಕ್ಷಮ್ಮ. ಲೀಡರ್ ಟ್ರೈನರ್ ಬುಲ್ ಬುಲ್.ಇವರುಗಳಿಗೆ ಜಿಲ್ಲೆ ಮತ್ತು ರಾಜ್ಯದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಬೆಳವಣಿಗೆಗೆ ಇವರುಇವರು 25 ವರ್ಷಗಳಿಗಿಂತ ಹೆಚ್ಚು ಕಾಲ ಸಲ್ಲಿಸಿದ ಸೇವೆಗಾಗಿ ಇದೇ ತಿಂಗಳು 26ರ ಭಾನುವಾರ ರಂದು The India Scouts and Guides ಬೆಂಗಳೂರಿನ ರಾಜಭವನದಲ್ಲಿ ಸನ್ಮಾನ್ಯ ರಾಜ್ಯಪಾಲರಿಂದ ಗೌರವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಲಾಗುವುದು. ಎಂದು ಸಾರ್ವಜನಿಕ ಸಂಪರ್ಕ ಅಧಿಕಾರಿ
ಜಿ ವಿಜಯಕುಮಾರ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ

Keladi Shivappanayaka University of Agriculture and Horticulture ಅಡಿಕೆಯಲ್ಲಿ ಎಲೆ ಚುಕ್ಕಿ & ಕೊಳೆರೋಗದಿಂದ ಕೃಷಿಕರಿಗೆ ಸಂಕಷ್ಟ. ವಿಜ್ಞಾನಿಗಳು ಇಂದಿನ ತಂತ್ರಜ್ಞಾನ ಬಳಸಿ ನೆರವಾಗಿ- ಗೋಪಾಲಕೃಷ್ಣ ಬೇಳೂರು

0

Keladi Shivappanayaka University of Agriculture and Horticulture ಎಲೆಚುಕ್ಕಿ ರೋಗ ಹಾಗೂ ಅಡಿಕೆ ಕೊಳೆ ರೋಗವು ಮಲೆನಾಡಿನ ರೈತರ ಜೀವನದ ಆರ್ಥಿಕತೆಯನ್ನು ಕಸಿಯುತ್ತಿದ್ದು, ಕೃಷಿ ವಿಜ್ಞಾನಿಗಳು ಇಂದಿನ ತಂತ್ರಜ್ಞಾನವನ್ನು ಬಳಸಿಕೊಂಡು ಇದನ್ನು ಗುಣಪಡಿಸುವ ಕಾರ್ಯ ಮಾಡಬೇಕು ಎಂದು ಸಾಗರ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಅವರು ಇರುವಕ್ಕಿಯ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ವಿಶ್ವವಿದ್ಯಾಲಯದ 13 ನೇ ಸಂಸ್ಥಾಪನಾ ದಿನಾಚರಣೆಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಲೆನಾಡಿನ ಭಾಗದಲ್ಲಿ ಅಡಿಕೆ ಮರಕ್ಕೆ ಎಲೆಚುಕ್ಕಿ ರೋಗ ಹಾಗೂ ಹೆಚ್ಚಿನ ಮಳೆಯಿಂದಾಗಿ ಅಡಿಕೆ ಕೊಳೆ ರೋಗ ಉಂಟಾಗಿದ್ದು, ಇದರಿಂದ ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗುತ್ತಿದ್ದಾರೆ. ಎತ್ತರಕ್ಕೆ ಬೆಳೆಯಬೇಕಾದ ಮರಗಳು ಈ ರೋಗದಿಂದ ನೆಲಕಚ್ಚುತ್ತಿವೆ. ಹಾಗಾಗಿ ಕೃಷಿ ವಿಜ್ಞಾನಿಗಳು ಸ್ಥಳೀಯ ಹಾಗೂ ಅಂತರಾಷ್ಟ್ರೀಯ ವಿಜ್ಞಾನಿಗಳೊಂದಿಗೆ ಚರ್ಚಿಸಿ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿ ಔಷಧಿಯನ್ನು ಕಂಡುಹಿಡಿಯಬೇಕು. ಇದರಿಂದ ರೈತರ ಬದುಕಿಗೆ ಅನುಕೂಲಕವಾಗುತ್ತದೆ ಎಂದು ಹೇಳಿದರು.
ರೈತರು ಪ್ರಗತಿಯಾದಾಗ ಮಾತ್ರ ಈ ದೇಶ ಪ್ರಗತಿಯಾಗುವುದು. ಆದ್ದರಿಂದ ರೈತರ ಉತ್ಪಾದನೆಗೆ ಹೆಚ್ಚಿನ ಮಹತ್ವ ನೀಡಬೇಕು. ಅದರಿಂದ ಅವರ ಆದಾಯವೂ ಕೂಡ ಹೆಚ್ಚಾಗುತ್ತದೆ. ಆದರೆ ಇತ್ತೀಚಿಗೆ ಕೃಷಿ ವಲಯವು ಸಾಕಷ್ಟು ನಷ್ಟಕ್ಕೀಡಾಗಿದ್ದು, ಉತ್ಪಾದನೆಯಲ್ಲಿ ಹಿನ್ನೆಡೆ ಅನುಭವಿಸುತ್ತಿದೆ. ಹಾಗಾಗಿ ರೈತರು ಕೃಷಿಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅವಳಡಿಸಿಕೊಳ್ಳಬೇಕು.
ಕೃಷಿ, ತೋಟಗಾರಿಕೆ ಇಲಾಖೆಗಳು ವಿಶ್ವವಿದ್ಯಾಲಯದ ಮೂಲಕ ಹಲವಾರು ಯೋಜನೆಗಳನ್ನು ರೈತರಿಗೆ ತಲುಪಿಸುವಂತಹ ಕಾರ್ಯ ಮಾಡುತ್ತಿದೆ. ರೈತರು ಇದರ ಸದುಪಯೋಗ ಪಡೆದು, ಯಾವುದೇ ನಷ್ಟ ಅನುಭವಿಸದೆ ಕೃಷಿ ಉತ್ಪನ್ನಗಳನ್ನು ಬೆಳೆಯಬೇಕು. ಆ ಮೂಲಕ ಆರ್ಥಿಕವಾಗಿ ಸಬಲರಾಗಬೇಕು. ರೈತರು ಇಂತಹ ಕಾರ್ಯಸಾಧನೆ ಮಾಡಲು ವಿಶ್ವವಿದ್ಯಾಲಯಗಳು, ಇಲ್ಲಿನ ವಿಜ್ಞಾನಿಗಳು ಕೂಡ ಸಹಕಾರ ನೀಡಬೇಕು ಎಂದರು.
ಸಂಸ್ಥಾಪನಾ ದಿನದ ಉಪನ್ಯಾಸ ನೀಡಿದ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ.ಟಿ.ಎಸ್.ಹೂವಯ್ಯ ಗೌಡ ಮಾತನಾಡಿ, ಒಂದು ಸಂಸ್ಥೆಯ ಪ್ರಾರಂಭ, ಅದರ ಬೆಳವಣಿಗೆ, ಅದು ಸಮಾಜಕ್ಕೆ ನೀಡಿದ ಕೊಡುಗೆ ಕುರಿತು ತಿಳಿಸಲು ಇಂತಹ ಸಂಸ್ಥಾಪನಾ ದಿನ ಆಚರಣೆ ಮಾಡಲಾಗುತ್ತದೆ. ಅದರಂತೆ ಕೆಳದಿ ಶಿವಪ್ಪನಾಯಕರ ಹೆಸರು ಪಡೆದಿರುವ ವಿಶ್ವವಿದ್ಯಾಲಯವು ತನ್ನದೇ ಆದ ಅನೇಕ ಸಾಧನೆಗಳನ್ನು ಜನರಿಗೆ ತಿಳಿಸುವ ದಿಸೆಯಲ್ಲಿ ಈ ಆಚರಣೆ ಮಾಡಿಕೊಳ್ಳುತ್ತಿದೆ.
Keladi Shivappanayaka University of Agriculture and Horticulture ಶಿಸ್ತಿಗೆ ಇನ್ನೊಂದು ಹೆಸರೇ ಶಿವಪ್ಪನಾಯಕ. ಅವರ ಆಡಳಿತ ಅವಧಿಯಲ್ಲಿ ಅವರು ವಿಧಿಸಿದ ಕಂದಾಯ ತೆರಿಗೆ ವೈಜ್ಞಾನಿಕತೆಯಿಂದ ಕೂಡಿತ್ತು. ಹಾಗಾಗಿ ಈಗಲೂ ಶಿವಪ್ಪನಾಯಕರ ತೆರಿಗೆ ನೀತಿ ರಾಜ್ಯಕ್ಕೆ ಮಾದರಿಯಾಗಿದೆ ಎಂದು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಮೂಲಕ ಸರ್ಕಾರಗಳು ಶಿಕ್ಷಣ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡುತ್ತಿದ್ದು, ವಿಜ್ಞಾನದ ವಿದ್ಯಾರ್ಥಿಗಳು ಸರಿಯಾಗಿ ಬಳಕೆ ಮಾಡಿಕೊಳ್ಳಬೇಕು. ಹಿಂದಿನ ಕಾಲದಲ್ಲಿ ಸ್ವಾಮಿನಾಥನ್, ವರ್ಗೀಸ್‌ರಂತಹ ವಿಜ್ಞಾನಿಗಳ ಆಹಾರ ಕ್ರಾಂತಿ, ಹಸಿರು ಕ್ರಾಂತಿಗಳ ಮೂಲಕ ರೈತರಿಗೆ ಸಹಕಾರಿಯಾಗಿದ್ದಾರೆ. ನೀವುಗಳು ಇಂತಹ ಮಾರ್ಗದಲ್ಲಿ ಸಾಗಬೇಕು. ವಿಜ್ಞಾನದಲ್ಲಿ ಮಿತಿಯಿಲ್ಲದಷ್ಟು ಅವಕಾಶಗಳಿದ್ದು, ಅದನ್ನು ಬಳಸಿಕೊಳ್ಳಬೇಕು. ರೈತರಿಗೆ ಅನುಕೂಲವಾಗುವಂತಹ ಯೋಜನೆಗಳನ್ನು ತರಬೇಕು ಎಂದರು.
ಕಾರ್ಯಕ್ರಮದಲ್ಲಿ ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಕುಲಪತಿ ಡಾ.ಆರ್.ಸಿ.ಜಗದೀಶ್ ಅಧ್ಯಕ್ಷ ನುಡಿಗಳನ್ನಾಡಿದರು.
ಈ ವೇಳೆ ವಿಶ್ವವಿದ್ಯಾಲಯದ ಅತ್ಯುತ್ತಮ ಶಿಕ್ಷಕ, ಸಂಶೋಧಕ, ವಿಸ್ತರಣಾ ವಿಜ್ಞಾನಿ ಹಾಗೂ ಬಾಹ್ಯ ಅನುದಾನಿ ಯೋಜನೆಗಳನ್ನು ಪಡೆದ ವಿಜ್ಞಾನಿಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕಾರ್ಯಕ್ರದಲ್ಲಿ ಕುಲಸಚಿವ ಡಾ.ಜಿ.ಕೆ.ಗಿರಿಜೇಶ್, ಪ್ರಗತಿಪರ ರೈತರುಗಳು, ಕೃಷಿ ಉದ್ದಿಮೆದಾರರು, ವಿವಿಧ ಕೃಷಿ ಕಾಲೇಜಿನ ಅಧಿಕಾರಿಗಳ ಹಾಗೂ ಸಿಬ್ಬಂದಿ ವರ್ಗದವರು ಹಾಜರಿದ್ದರು.

Shivamogga Police ಅನಾಮಧೇಯ ವ್ಯಕ್ತಿಯ ಶವ ಪತ್ತೆ. ಕೋಟೆ ಪೊಲೀಸ್ ಠಾಣೆ ಮಾಹಿತಿ ಪ್ರಕಟಣೆ

0

Shivamogga Police ಸೆ.14 ರಂದು ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯ ಕರ್ನಾಟಕ ಸಂಘ ಬಸ್ ನಿಲ್ದಾಣದ ಹತ್ತಿರ ಫುಟ್‌ಪಾತ್‌ನಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಮಲಗಿದ್ದ ಸುಮಾರು 45-50 ವರ್ಷ ವ್ಯಕ್ತಿಯನ್ನು ಸಾರ್ವಜನಿಕರ ಸಹಾಯದಿಂದ ಆಂಬ್ಯುಲೆನ್ಸ್ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದು, ಪರೀಕ್ಷಿಸಿದ ವೈದ್ಯರು ವ್ಯಕ್ತಿ ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಮೃತರ ಹೆಸರು, ವಿಳಾಸ, ವಾರಸುದಾರರ ಬಗ್ಗೆ ಯಾವುದೇ ಸುಳಿವು ಇರುವುದಿಲ್ಲ.
ಮೃತನ ಚಹರೆ 6 ಅಡಿ ಎತ್ತರ, ಕೋಲು ಮುಖ, ಕಪ್ಪು ಮೈಬಣ್ಣ, ತೆಳ್ಳನೆಯ ಮೈಕಟ್ಟು, ಎಡ ಎದೆಯ ಮೇಲ್ಭಾಗ ರಾಗಿಕಾಳು ಗಾತ್ರದ ಕಪ್ಪು ಮಚ್ಚೆ ಮತ್ತು ತಲೆಯಲ್ಲಿ 4 ಇಂಚು ಉದ್ದದ ಕಪ್ಪು ಕೂದಲು ಇರುತ್ತದೆ. ಮೈ ಮೇಲೆ ಬೂದು ಬಣ್ಣದ ತುಂಬು ತೋಳಿನ ಶರ್ಟ್, ಬೂದು ಕಂದು ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿರುತ್ತಾರೆ.
Shivamogga Police ಈ ಮೃತನ ವಾರಸುದಾರರ ಬಗ್ಗೆ ಸುಳಿವು ದೊರೆತಲ್ಲಿ ಕೋಟೆ ಪೊಲೀಸ್ ಠಾಣೆ ಪೋ.ನಂ.: 08182-261415 ನ್ನು ಸಂಪರ್ಕಿಸಿ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.