DC Shivamogga ಕೆ.ಜಿ.ಐ.ಡಿ. ಕಚೇರಿ ಪ್ರಾರಂಭದಿಂದ ಬಾರ್ ಅಸೋಸಿಯೇಷನ್ ಕಟ್ಟಡದ ನಂತರದಲ್ಲಿರುವ ಗೇಟ್ವರೆಗೆ ಇರುವ ರಸ್ತೆಯಲ್ಲಿ ಎರಡು ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಪಾರ್ಕಿಂಗ್ ಮಾಡಲಾಗುತ್ತಿದೆ. ನ್ಯಾಯಾಲಯದ ಹಿಂಬದಿಯಲ್ಲಿರುವ ಪಾರ್ಕಿಂಗ್ ಸ್ಥಳಕ್ಕೆ ಓಡಾಡಲು ತೀವ್ರ ಅಡಚಣೆಯಾಗುತ್ತಿದೆ. ಹಾಗೂ ರಸ್ತೆಯು ಕಿರಿದಾಗಿರುವುದರಿಂದ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿರುವುದರಿಂದ ಹಾಗೂ ಸಾರ್ವಜನಿಕರ DC Shivamogga ಹಿತದೃಷ್ಟಿಯಿಂದ ಕೇಂದ್ರ ಮೋಟಾರು ವಾಹನ ಕಾಯ್ಕೆ 1988 ಕಲಂ 115ರ ಅನ್ವಯ ಕೆ.ಜಿ.ಐ.ಡಿ. ಕಚೇರಿ ಪ್ರಾರಂಭದಿಂದ ಬಾರ್ ಅಸೋಸಿಯೇಷನ್ ಕಟ್ಟಡದ ನಂತರದಲ್ಲಿರುವ ಗೇಟ್ವರೆಗೆ ಇರುವ ರಸ್ತೆಯಲ್ಲಿ ಎರಡು ಬದಿ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳನ್ನು ಪಾರ್ಕಿಂಗ್ ನಿಷೇಧಿಸಿ ಜಿಲ್ಲಾಧಿಕಾರಿಗಳು ಅದೇಶ ನೀಡಿದ್ದಾರೆ.
Karnataka State Backward Classes Commission ನೀವೀಗ ಆನ್ ಲೈನ್ ಮೂಲಕವೂ ಶೈಕ್ಷಣಿಕ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬಹುದು
Karnataka State Backward Classes Commission ಕರ್ನಾಟಕ ರಾಜ್ಯ ಹಿಂದುಳಿದ ಆಯೋಗವು ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ನೀವು ಆನ್ಲೈನ್ ಮೂಲಕವೂ ಪಾಲ್ಗೊಳ್ಳಬಹುದು.
kscbcselfdeclaration.karnataka.gov.in ವೆಬ್ಸೈಟ್ಗೆ ಭೇಟಿ ನೀಡಿ, ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿ. ಸಮೀಕ್ಷೆ ಕುರಿತು ಯಾವುದೇ ದೂರು ಅಥವಾ ಮಾಹಿತಿಯನ್ನು ಪಡೆಯಲು ಆಯೋಗದ ಸಹಾಯವಾಣಿ ಸಂಖ್ಯೆ 8050770004 ಗೆ ಕರೆ ಮಾಡಿ.
Bharat Scouts and Guides ಸಮಗ್ರತೆ ,ದೂರದೃಷ್ಟಿಯ ನಾಯಕತ್ವಕ್ಕೆ ಹೆಸರಾದ ಪರಂಪರೆ,ಸ್ಫೂರ್ತಿ ಗಾಂಧೀಜಿ ಮತ್ತು ಶಾಸ್ತ್ರೀಜಿ- ಶಕುಂತಲಾ ಚಂದ್ರಶೇಖರ್
Bharat Scouts and Guides ಗಾಂಧೀಜಿ ಅವರ ಸತ್ಯ ಮತ್ತು ಅಹಿಂಸೆಯ ಸಿದ್ಧಾಂತವು ಇಂದಿಗೂ ಪ್ರಸ್ತುತ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಶಿವಮೊಗ್ಗ ಜಿಲ್ಲಾ ಪ್ರಧಾನ ಆಯುಕ್ತೆ ಶಕುಂತಲಾ ಚಂದ್ರಶೇಖರ್ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಗಾಂಧೀಜಿ ಅವರ ಅಹಿಂಸಾ ತತ್ವ ಮತ್ತು ಸತ್ಯಾಗ್ರಹಗಳು ಸ್ವಾತಂತ್ರ್ಯ ಹೋರಾಟಗಾರರಿಗೆ ಸ್ಫೂರ್ತಿಯಾಗಿದ್ದವು. ದೀರ್ಘ ಹೋರಾಟದ ಬಳಿಕ ದೇಶಕ್ಕೆ ಸ್ವಾತಂತ್ರ ದೊರೆಯಿತು ಎಂದು ತಿಳಿಸಿದರು.
ಲಾಲ್ ಬಹದ್ದೂರ್ ಶಾಸ್ತ್ರಿ ಅವರು ಸರಳತೆ, ಉನ್ನತ ಆದರ್ಶಗಳು ಮತ್ತು ಸಮಗ್ರತೆಗೆ ಹೆಸರುವಾಸಿ ಆಗಿದ್ದರು. ಅವರ ವಿನಮ್ರತೆ, ಸಮಗ್ರತೆ ಮತ್ತು ದೂರದೃಷ್ಟಿಯ ನಾಯಕತ್ವಕ್ಕೆ ಹೆಸರುವಾಸಿಯಾದ ಅವರ ಪರಂಪರೆ ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತಲೇ ಇದೆ ಎಂದು ಹೇಳಿದರು.
ಆಯುಕ್ತ ಜಿ.ವಿಜಯಕುಮಾರ್ ಮಾತನಾಡಿ, ಮಹಾತ್ಮ ಗಾಂಧಿ ಅವರ ಬೋಧನೆಗಳು ಪ್ರಪಂಚದಾದ್ಯಂತ ಜನರೊಂದಿಗೆ ಪ್ರತಿಧ್ವನಿಸುತ್ತವೆ. ಅವರನ್ನು ಶಾಂತಿ ಮತ್ತು ಮಾನವೀಯ ಸಂಕೇತವನ್ನಾಗಿ ಮಾಡುತ್ತವೆ. ಹಲವಾರು ದೇಶಗಳಲ್ಲಿ ಗಾಂಧೀಜಿ ಅವರ ಅಹಿಂಸಾ ತತ್ವವನ್ನು ಅಳವಡಿಸಿಕೊಂಡಿರುವ ಉದಾಹರಣೆಗಳಿವೆ. ಮಾರ್ಟಿನ್ ಲೂಥರ್ ಮತ್ತು ನೆಲ್ಸನ್ ಮಂಡೇಲಾ ಅವರು ತಮ್ಮ ದೇಶದ ಸ್ವಾತಂತ್ರ್ಯ ಹೋರಾಟಲ್ಲಿ ಈ ತತ್ವಗಳನ್ನೇ ಅಳವಡಿಸಿಕೊಂಡಿದ್ದರು ಎಂದರು.
ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಖಜಾಂಚಿ ಆರ್.ಮನೋಹರ ಮಾತನಾಡಿ, ಮಹಾತ್ಮ ಗಾಂಧಿ ಅವರ ಜಯಂತಿಯನ್ನು ವಿಶ್ವಸಂಸ್ಥೆಯು ಜಾಗತಿಕವಾಗಿ ಅಂತರರಾಷ್ಟ್ರೀಯ ಅಹಿಂಸಾ ದಿನವಾಗಿ ಆಚರಿಸುತ್ತದೆ ಎಂದು ಹೇಳಿದರು.
Bharat Scouts and Guides ಗೈಡ್ ಆಯುಕ್ತೆ ಲಕ್ಷ್ಮೀ ಕೆ.ರವಿ ಮಾತನಾಡಿ, ಸ್ವಾತಂತ್ರ್ಯ ಚಳವಳಿಗಳಿಗೆ ಸ್ಫೂರ್ತಿ ನೀಡಿದ ನಾಯಕ ಮಹಾತ್ಮ ಗಾಂಧಿ. ಅವರ ತ್ಯಾಗವನ್ನು ಸ್ಮರಿಸಲು ಮತ್ತು ಅವರ ಸತ್ಯ, ಶಾಂತಿ ಮತ್ತು ಸರಳತೆಯ ಬೋಧನೆಗಳ ಮೂಲಕ ಬದುಕಲು ಜನರನ್ನು ಪ್ರೇರೇಪಿಸಲು ಈ ದಿನ ಸಮರ್ಪಿಸಲಾಗಿದೆ ಎಂದು ತಿಳಿಸಿದರು.
ಆಯುಕ್ತ ಕೆ.ರವಿ ಮಾತನಾಡಿ, ಮಹಾತ್ಮ ಗಾಂಧಿ ಅವರ ಮಾರ್ಗದರ್ಶಿ ತತ್ವಗಳು ಮತ್ತು ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಪ್ರಮುಖ ಪಾತ್ರ ವಹಿಸಿತು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಸಂಸ್ಥೆ ಖಜಾಂಚಿ ಚೂಡಾಮಣಿ ಪವಾರ್, ಜಿಲ್ಲಾ ಕಾರ್ಯದರ್ಶಿ ಚಂದ್ರಶೇಖರಯ್ಯ ಕೆ ವಿ., ಜಂಟಿ ಕಾರ್ಯದರ್ಶಿ ವೈಆರ್ ವೀರೇಶಪ್ಪ, ರುದ್ರಪ್ಪ, ದೇವಣ್ಣ, ಗೌತಮ್, ಸೀನ, ಮಕ್ಕಳು ಉಪಸ್ಥಿತರಿದ್ದರು.
Shivaganga Yoga Center ಅಕ್ಟೋಬರ್ 5 ರಿಂದ15 ದಿನಗಳ ಉಚಿತ ಯೋಗ, ಪ್ರಾಣಾಯಾಮ- ಧ್ಯಾನ ಶಿಬಿರ
Shivaganga Yoga Center ದಿನಾಂಕ 5.10.2025 ನೇ ಭಾನುವಾರ ದಿಂದ 15 ದಿನಗಳ ಕಾಲ ಗೋಪಾಲಗೌಡ ಬಡಾವಣೆ, 100 ಅಡಿ ರಸ್ತೆಯಲ್ಲಿ ಇರುವ ಬಂಟರ ಭವನದಲ್ಲಿ ಶ್ರೀ ಶಿವಗಂಗಾ ಯೋಗ ಕೇಂದ್ರ. ಹಾಗೂ ಬಂಟರ ಯಾನೆ ನಾಡವರ ಸಂಘ ಇವರುಗಳ ಸಂಯುಕ್ತ ಆಶ್ರಯದಲ್ಲಿ 15 ದಿನಗಳ ಉಚಿತ ಯೋಗ, ಪ್ರಾಣಾಯಾಮ ಹಾಗೂ ಧ್ಯಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.
ಈ ಶಿಬಿರದಲ್ಲಿ ಮಾನಸಿಕ ಒತ್ತಡ. ಉದ್ವೇಗ, ಖಿನ್ನತೆ, ಮಧುಮೇಹ, ರಕ್ತದೊತ್ತಡ. ಮೈಗ್ರೇನ್ ತಲೆನೋವು. ಬೆನ್ನು ಸೊಂಟ ನೋವು. ಥೈರಾಯಿಡ್ ಸಮಸ್ಯೆ ರಕ್ತ ಹೀನತೆ ಇನ್ನೂ ಅನೇಕ ಮನೋದೈಹಿಕ ಸಮಸ್ಯೆ ಇರುವವರಿಗೆ ಯೋಗದ ಮುಖಾಂತರ ಹೇಗೆ ಪರಿಹಾರವನ್ನು ಕಂಡುಕೊಳ್ಳಬಹುದು ಎನ್ನುವುದರ ಬಗ್ಗೆ ಮಾಹಿತಿ ನೀಡಲಾಗುವುದು.
ಗೋಪಾಲಗೌಡ ಬಡಾವಣೆ ಹಾಗೂ ಸುತ್ತಮುತ್ತಲಿನ ಜನರು ಇದರ ಸದುಪಯೋಗ ಪಡೆಕೊಳ್ಳಬೇಕೆಂದು ಶಿವಗಂಗಾ ಯೋಗ ಕೇಂದ್ರದ ಸಾರ್ವಜನಿಕ ಸಂಪರ್ಕ ಅಧಿಕಾರಿ ಜಿ ವಿಜಯಕುಮಾರ್ ಪ್ರಕಟಣೆಯಲ್ಲಿ ತಿಳಿಸುತ್ತಾರೆ. ಈ ಯೋಗ ಶಿಬಿರ ನಡೆಸಿಕೊಡುವವರು ರಾಜ್ಯ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕೃತರಾದ ಸಿವಿ ರುದ್ರಾರಾಧ್ಯ ಹಾಗೂ ಪರಿಣಿತ ಶಿಷ್ಯ ವೃಂದ ನಡೆಸಿ ಕೊಡಲಿದ್ದಾರೆ.
Shivaganga Yoga Center ಈ ಶಿಬಿರವನ್ನು ಬಂಟರ ಸಂಘದ ಅಧ್ಯಕ್ಷರಾದ
ಡಾ. ಎ. ಸತೀಶ್ ಕುಮಾರ್ ಶೆಟ್ಟಿ ಅವರು ಉದ್ಘಾಟಿಸಲಿದ್ದಾರೆ ಅಧ್ಯಕ್ಷತೆಯನ್ನು ಶಿವಗಂಗಾ ಯೋಗ ಕೇಂದ್ರದ ಅಧ್ಯಕ್ಷರಾದ ಶ್ರೀ ಎಸ್ ರುದ್ರೇಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಬಂಟರ ಸಂಘದ ಕಾರ್ಯದರ್ಶಿಗಳಾದ ಶ್ರೀ ಸುರೇಶ್ ಶೆಟ್ಟಿ ಹಾಗೂ ನಿರ್ದೇಶಕರಾದ ದಿವಾಕರ್ ಶೆಟ್ಟಿ ಭಾಗವಹಿಸಲಿದ್ದಾರೆ.
Minister Ramalingareddy 500 ಕೋಟಿ ಮಹಿಳೆಯರು ಉಚಿತ ಟಿಕೆಟ್ ಪ್ರಯಾಣದ ಫಲಾನುಭವಿಗಳು, ವಿಶ್ವದಾಖಲೆ ಪುಸ್ತಕಕ್ಕೆ ಸೇರ್ಪಡೆ-ಸಚಿವ ರಾಮಲಿಂಗಾರೆಡ್ಡಿ
Minister Ramalingareddy ರಾಜ್ಯ ಸರ್ಕಾರದ ಮಹಿಳಾ ಸಬಲೀಕರಣದೆಡೆಗಿನ ಮಹತ್ವಾಕಾಂಕ್ಷೆ ಯೋಜನೆಯಾದ ಶಕ್ತಿ ಯೋಜನೆಯು 500 ಕೋಟಿ ಮಹಿಳಾ ಟಿಕೇಟ್ ಉಚಿತ ಪ್ರಯಾಣ ಮತ್ತೊಂದು ವಿಶ್ವ ದಾಖಲೆಗೆ International Book of Records – World Record of Excellence ಸೇರ್ಪಡೆಯಾಗಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ಅವರು ತಿಳಿಸಿದ್ದಾರೆ.
ಈಗಾಗಲೇ Golden Book of World Records ನಲ್ಲಿ ಸೇರ್ಪಡೆಯಾಗಿತ್ತು. ನಾಲ್ಕು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳ ಸಮಸ್ತ ಅಧಿಕಾರಿ/ ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ಮುಖಂಡರುಗಳಿಗೆ ಅವರು ಧನ್ಯವಾದಗಳನ್ನು ಸಲ್ಲಿಸಿದ್ದಾರೆ.
Minister Ramalingareddy ಶಕ್ತಿ ಯೋಜನೆಯು ರಾಜ್ಯದ ಮಹಿಳೆಯರನ್ನು ಆರ್ಥಿಕ, ಸಾಮಾಜಿಕ ಹಾಗೂ ಔದ್ಯೋಗಿಕವಾಗಿ ಸಬಲರನ್ನಾಗಿಸಿದೆ. ಶಕ್ತಿ ಯೋಜನೆಯನ್ನು ದೇಶದ ವಿವಿಧ ರಾಜ್ಯಗಳಲ್ಲಿ ಅನುಷ್ಠಾನಗೊಳಿಸಿರುವುದು ಶಕ್ತಿ ಯೋಜನೆಯ ಯಶಸ್ಸನ್ನು ಬಿಂಬಿಸಿದ್ದು ಮಹಿಳಾ ಪ್ರಯಾಣಿಕರಿಗೂ ಅಭಿನಂದನೆಗಳನ್ನು ಅವರು ಸಲ್ಲಿಸಿದರು.
Bhadravati VISL ಭದ್ರಾವತಿ ವಿಐಎಸ್ ಎಲ್ ನಲ್ಲಿ ಗಾಂಧೀಜಯಂತಿ ಆಚರಣೆ
Bhadravati VISL ಭದ್ರಾವತಿ ವಿಐಎಸ್ ಎಲ್ ವತಿಯಿಂದ ಗಾಂಧಿ ಜಯಂತಿಯನ್ನು ಅಕ್ಟೋಬರ್ ೨ರಂದು ವಿಐಎಸ್ಎಲ್ನ ಭದ್ರ್ರಾ ಅತಿಥಿಗೃಹ, ನ್ಯೂಟೌನ್, ಭದ್ರಾವತಿಯಲ್ಲಿ ಆಚರಿಸಲಾಯಿತು.
ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್.ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ), ಶ್ರೀ ಜೆ. ಜಗದೀಶ್, ಅಧ್ಯಕ್ಷರು, ವಿಐಎಸ್ಎಲ್ ಕಾರ್ಮಿಕರ ಸಂಘ, ಶ್ರೀ ಪಾರ್ಥಸಾರಥಿ ಮಿಶ್ರ, ಅಧ್ಯಕ್ಷರು, ವಿಐಎಸ್ಎಲ್ ಅಧಿಕಾರಿಗಳ ಸಂಘ, ಶ್ರೀಮತಿ ಶೋಭ ಶಿವಶಂಕರನ್, ಉಪಾಧ್ಯಕ್ಷರು, ಇಸ್ಪಾತ್ ಮಹಿಳಾ ಸಮಾಜ ಇವರುಗಳು ಜ್ಯೋತಿಯನ್ನು ಬೆಳಗಿಸಿ, ಗಾಂಧಿಜಿ ಭಾವಚಿತ್ರಕ್ಕೆ ಪುಷ್ಫ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಧಾರ್ಮಿಕ ಗ್ರಂಥಗಳಿAದ ಆಯ್ದ ಭಾಗಗಳ ಪಠಣವನ್ನು ಮಾಡಲಾಯಿತು. ಭಗವದ್ಗೀತೆಯನ್ನು ಕುಮಾರಿ ಅಧಿತ್ರಿ ರಾಘವೇಂದ್ರ (ಕೆ.ಎಸ್. ರಾಘವೇಂದ್ರರವರ ಸುಪುತ್ರಿ), ಬೈಬಲ್ ಅನ್ನು ಶ್ರೀ ಶಾಜಿ ಅಬ್ರಹಾಂ ಮತ್ತು ಕುರಾನ್ ಅನ್ನು ಕು|| ರಿಯಾ ಅಂಜುಮ್ ಹಾಗೂ ಕು|| ರಿನಾಜ್ ಅಂಜುಮ್ (ಶ್ರೀ ರಿಜ್ವಾನ್ ಬೇಗ್ ರವರ ಪುತ್ರಿಯರು) ಪಠಿಸಿದರು. ಕುಮಾರಿ ಅಧಿತ್ರಿ ರಾಘವೇಂದ್ರ ರಘುಪತಿರಾಘವ ಭಜನೆಯನ್ನು ಸುಶ್ರಾವ್ಯವಾಗಿ ಹಾಡಿ ಎಲ್ಲರೂ ಸಹ ಭಜನೆಯಲ್ಲಿ ಪಾಲ್ಗೊಳ್ಳುವಂತೆ ಮಾಡಿದರು.
ಈ ಸಂದರ್ಭದಲ್ಲಿ ಸೈಲ್ ಶಭಾಷ್ ಯೋಜನೆಯಡಿಯಲ್ಲಿ ತಮ್ಮ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿದ ಉದ್ಯೋಗಿಗಳಿಗೆ ಪ್ರಶಂಸಾಪತ್ರವನ್ನು ನೀಡಿ ಗೌರವಿಸಲಾಯಿತು.
ಶ್ರೀ ಬಿ.ಎಲ್. ಚಂದ್ವಾನಿಯವರು ಗಾಂಧೀಜಿಯ ತತ್ವಗಳನ್ನು ನಮ್ಮ ದಿನನಿತ್ಯದ ಜೀವನದ ಅವಿಭಾಜ್ಯ ಅಂಗವಾಗಿ ಮಾಡಿಕೊಂಡು ಸಮಾಜದಲ್ಲಿ ನಿರಂತರ ಸುಧಾರಣೆ ತರಲು ಪ್ರಯತ್ನಿಸಬೇಕೆಂದರು. ಇದೇ ಸಂದರ್ಭದಲ್ಲಿ ದೇಶದ ಎರಡನೇ ಪ್ರಧಾನಮಂತ್ರಿ ಶ್ರೀ ಲಾಲ್ ಬಹದ್ಧೂರ್ ಶಾಸ್ತಿçಯವರ ಜಯಂತಿಯನ್ನು ಜ್ಞಾಪಿಸುತ್ತ ಅವರ ಜೀವನಾದರ್ಶಗಳು ನಮಗೆ ದಾರಿದೀಪವಾಗಲೆಂದು ಆಶಿಸಿದರು.
Bhadravati VISL ವಿಐಎಸ್ಎಲ್ ಉದ್ಯೋಗಿಗಳು, ವಿಐಎಸ್ಎಲ್ ಕಾರ್ಮಿಕ ಸಂಘ ಮತ್ತು ಅಧಿಕಾರಿಗಳ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕಾರಿ ಸಮಿತಿ ಸದಸ್ಯರುಗಳು, ಗುತ್ತಿಗೆ ಕಾರ್ಮಿಕರು, ಇಸ್ಪಾತ್ ಮಹಿಳಾ ಸಮಾಜದ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಸ್ವಾಗತಿಸಿ ವಂದಿಸಿದರು. ಕಾರ್ಯಕ್ರಮವನ್ನು ವಿಐಎಸ್ಎಲ್ನ ಸಾರ್ವಜನಿಕ ಸಂಪರ್ಕ ಇಲಾಖೆ ಮತ್ತು ಅತಿಥಿಗೃಹ ಆಯೋಜಿಸಿತ್ತು.
Klive Special Article ನನ್ನ ಕೃತಿ “ಮುಳುಗಡೆ ಒಡಲಾಳ ( ಭಾಗ – 2) ನನ್ನ ಸ್ವಗತ
ಲೇ: ಪ್ರಭಾಕರ ಕಾರಂತ
Klive Special Article ಮುಳುಗಡೆ ಒಡಲಾಳ ಎಂಬ ನನ್ನ ಕೃತಿ ಬಿಡುಗಡೆಯಾಗಿ ನಾಲ್ಕು ತಿಂಗಳಲ್ಲೇ ಖರ್ಚಾಗಿ ಸಂಚಲನ ಮೂಡಿಸಿತು.
ಆ ಕೃತಿ ಬಿಡುಗಡೆಯ ದಿನವೇ ಮಾರಾಟಕ್ಕಿಟ್ಟ ಅಷ್ಟೂ ಪುಸ್ತಕಗಳು ಕೆಲವೇ ಕ್ಷಣದಲ್ಲಿ ಕಾಲಿಯಾಯಿತು. ಕೃತಿ ಬಿಡುಗಡೆ ದಟ್ಟ ಕಾಡಿನ ಮುಳುಗಡೆಯ ಹಿನ್ನೀರಿನಾಚೆಯ ಜನವಸತಿ ವಿರಳವಾಗಿರುವ ಮೇಲುಸುಂಕ ದುರ್ಗಾಪರಮೇಶ್ವರಿಯ ದೇವಸ್ಥಾನದಲ್ಲಿ ನಡೆದಿದ್ದು. ಅಂದು ದೂರದೂರದ ಊರಿನಿಂದ ಆರುನೂರಾ ಐವತ್ತಕ್ಕೂ ಹೆಚ್ಚು ಜನ ಆ ಸಮಾರಂಭಕ್ಕೆ ಬಂದಿದ್ದರು. ಬಸ್ ಸಂಪರ್ಕದಿಂದ 18 ಕಿಮೀ ದೂರದ ಆ ಊರಿಗೆ ಅಷ್ಟು ಜನ ಬಂದಿದ್ದೇ ಒಂದು ದಾಖಲೆ. ಮುಳುಗಡೆಯಾಗಿ ಹರಿದು ಹಂಚಿಹೋದ ಜನಕ್ಕೆ ಆ ನೋವು ತಲೆಮಾರಿನ ನಂತರವೂ ಮಾಸಿಲ್ಲ ಎಂದು ಖಚಿತವಾದ ದಿನವದು.
ಈ ಕಾರ್ಯಕ್ರಮದ ಕುರಿತು ನಾನು ಬರೆದ ಲೇಖನಗಳು,ಆ ಕುರಿತು ಅಂದು ಆಗಮಿಸಿದ್ದ ಜನರ ಲೇಖನ,ನಂತರ ನಾವು ಮುಳುಗಡೆಯ ಊರಿಗೆ ನೀರು ಬಿಟ್ಟಾಗ ಒಂದಷ್ಟು ಜನ ಯಾತ್ರೆ ಹೋದ ಘಟನೆ ಇವುಗಳ ಜತೆಗೆ ಕೃತಿಯ ಕುರಿತು ಬಂದ ವಿಮರ್ಶೆಗಳನ್ನು ಸೇರಿಸಿ ಮುಳುಗಡೆ ಒಡಲಾಳ ಭಾಗ-2 ಕೃತಿ ರಚನೆಯಾಗಿದೆ. ಕೃತಿಯೊಂದರ ಕುರಿತೇ ಮತ್ತೊಂದು ಕೃತಿ ನನ್ನಂತಹ ಹೆಚ್ಚು ಪ್ರಸಿದ್ದನಲ್ಲದ ಲೇಖಕನ ಪಾಲಿಗೆ ಅಪೂರ್ವ. ನಾನು ಮುಳುಗಡೆ ಒಡಲಾಳ ಲೇಖನಗಳನ್ನು ಫೇಸ್ ಬುಕ್ ನಲ್ಲಿ ಪ್ರಕಟಿಸುತ್ತಾ ಹೋದ ಹಾಗೇ ಹತ್ತಾರು ಸಹಸ್ರ ಜನ ಅದಕ್ಕೆ ಸ್ಪಂದಿಸಿದ್ದರು. ಅದರಲ್ಲಿ ಆಯ್ದ ಕೆಲ ಅಭಿಪ್ರಾಯಗಳನ್ನು ಈ ಕೃತಿಯಲ್ಲಿ ಕಾಣಬಹುದು. ಕೃತಿಯ ಕುರಿತು ಬಂದ ಬಹುತೇಕ ಎಲ್ಲಾ ಲೇಖನಗಳೂ ಇಲ್ಲಿವೆ.ಅದನ್ನು ಬರೆದ ಎಲ್ಲಾ ಲೇಖಕರನ್ನು ಅನುಮತಿ ಕೇಳಿದಾಗ ಪ್ರೀತಿಯಿಂದ ಸಮ್ಮತಿಸಿದ್ದಾರೆ.
Klive Special Article ಮುಳುಗಡೆ ಒಡಲಾಳ ಕೃತಿ ಓದಿ ಅನೇಕರು ನನ್ನನ್ನು ಹುಡುಕಿಕೊಂಡು ಬಂದು ಉಡುಗರೆ ಇತ್ತು ಜತೆಗೆ ಫೋಟೋ ತೆಗೆಸಿಕೊಂಡು ಸಂಭ್ರಮಿಸಿದ್ದಾರೆ. ಓರ್ವ ಲೇಖನಿಗೆ ಇದಕ್ಕಿಂತ ಇನ್ನೇನು ಬೇಕು.ನನಗೆ ಅದು ತೃಪ್ತಿ ನೀಡಿದೆ.ಅದಕ್ಕಾಗೇ ನಾನು ಈ ಕೃತಿಯನ್ನು ಯಾವುದೇ ಪ್ರಶಸ್ತಿ ಗಾಗಿ ಕಳಿಸಿಲ್ಲ. ಅಂತಹ ಪ್ರಶಸ್ತಿಯ ಮೇಲೆ ನನಗೆ ಗೌರವವೂ ಇಲ್ಲ.
ಮುಳುಗಡೆ ಒಡಲಾಳ ಭಾಗ 2 ರಲ್ಲಿ ನನ್ನ ಲೇಖನಕ್ಕಿಂತ ಪ್ರತಿಕ್ರೆಯೆಗಳೇ ಜಾಸ್ತಿ ಪುಟ ಹೊಂದಿದೆ. ಕನ್ನಡದ ಪ್ರಸಿದ್ಧ ಲೇಖಕರಾದ ಡಾ.ಗಜಾನನ ಶರ್ಮ, ಶಿವಾನಂದ ಕಳವೆ, ಶರತ್ ಕಲ್ಕೋಡ್, ಸ.ಗಿರಿಜಾ ಶಂಕರ್,ಡಾ.ಮಂಜುಳಾ ಹುಲ್ಲಹಳ್ಳಿ, ಡಾ.ಎಲ್ ಸಿ.ಸುಮಿತ್ರ, ಮಂಗಳಾ ನಾಡಿಗ್, ಉಮಾದೇವಿ ಉರಾಳ್, ಶೃಂಗೇಶ್ವರ ಶರ್ಮ, ಪ್ರಸನ್ನ,ಶಶಿಧರ ಹಾಲಾಡಿ,ವಾ.ಮುರಳೀಧರ,ಮುಂತಾದ ಅನೇಕರ ಮೌಲ್ಯಯುತ ಬರಹದಿಂದ ಇದು ಸಮೃದ್ಧವಾಗಿದೆ.
ಮೊದಲ ಪುಸ್ತಕದಲ್ಲಿ ಮರೆತಿದ್ದ ಕೆಲ ವ್ಯಕ್ತಿಗಳು, ಘಟನೆಗಳೂ ಇಲ್ಲಿ ಸ್ಮರಿಸಿರುವೆ.
ಮೊದಲ ಪುಸ್ತಕ ರೂಪ ನೀಡಿದ್ದು ನನ್ನ ಹಿರಿಯ ಗೆಳೆಯ ಪತ್ರಕರ್ತ ಅರುಣ್.ಅವರು ತಿಂಗಳ ಕಾಲ ತಮ್ಮ ಅಮೂಲ್ಯ ಸಮಯ ನೀಡಿ ಅದಕ್ಕೊಂದು ರೂಪ ನೀಡಿದ್ದರು. ಈಗಲೂ ಅವರಿಗೆ ಕಳಿಸಿದರೆ ಮತ್ತೆ ಅವರು ಆ ಕೆಲಸ ಮಾಡುವವರೇ. ಆದರೆ ನನಗೇ ಸಂಕೋಚ.ಯಾರಿಗಾದರೂ ಎಷ್ಟು ಕಷ್ಟ ಕೊಡುವುದು. ಹಾಗೆಂದೇ ಅರುಣ್ ಮಾಂತ್ರಿಕ ಸ್ಪರ್ಶ ಇಲ್ಲದೇ ಉಳಿದ ತಪ್ಪು, ದೋಷಗಳಿಗೆ ಕ್ಷಮೆ ಇರಲಿ.
ಇದನ್ನು ಸಾಧನಾ ಪ್ರಕಾಶನದ ರವಿಚಂದ್ರ ರಾವ್ ರವರೇ ಪ್ರಕಟಿಸುವ ಔದಾರ್ಯ ತೋರಿದ್ದಾರೆ. ಪುಟ ವಿನ್ಯಾಸ ಜಮುನಾ ರವರದ್ದು. ಮುಖಪುಟ ಚಿತ್ರ ಮುಳುಗಿದ ಮೇಲಿನ ಐದುಬಳ್ಳಿಯ ನನ್ನ ತಂಗಿಯ ಮನೆಯದ್ದು. ಸಹಕರಿಸಿದ ಎಲ್ಲರಿಗೂ ಹೃದಯಾಂತರಾಳದ ಕೃತಜ್ಞತಿಗಳು.
ಮುಳುಗಡೆ ಒಡಲಾಳ ಕ್ಕೆ ತೋರಿಸಿದಂತಹ ಪ್ರೀತಿ ಅದರ ಮಗುವಿಗೂ ತೋರಿಸುತ್ತೀರಿ ಎಂದು ನಂಬುವೆ.
ನಿಮ್ಮ ಪ್ರೀತಿಯ
ಪ್ರಭಾಕರ ಕಾರಂತ್. ಹೊಸಕೊಪ್ಪ
577126.
ಫೋನ್ 6362671384.
ವಿ.ಸೂ.ಆಸಕ್ತಿಯುಳ್ಳ ಓದುಗರು ಲೇಖರನ್ನ ಸಂಪರ್ಕಿಸಿ ಪ್ರಕಾಶಕರ ಮಾಹಿತಿ ಪಡೆಯಬಹುದು.
ಶತಮಾನೋತ್ಸವ ಹೊಸ್ತಿಲಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ
ವಿಶೇಷ ಲೇಖನ: ಸಿ.ಎನ್. ಮಲ್ಲೇಶ್.
ಭಾರತದ ಸಾಮಾಜಿಕ ರಾಷ್ಟ್ರೀಯ ಬದುಕಿನಲ್ಲಿ ತನ್ನದೇ ಆದ ಗುರುತು ಮೂಡಿಸಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) ಇಂದಿಗೆ ಶತಮಾನೋತ್ಸವದ ಅಂಚಿಗೆ ತಲುಪಿದೆ. 1925ರಲ್ಲಿ ನಾಗಪುರದಲ್ಲಿ ಡಾ. ಕೆ.ಬಿ. ಹೆಡ್ಗೇವಾರ್ ಅವರ ನೇತೃತ್ವದಲ್ಲಿ ಕೆಲವೇ ಮಂದಿಯೊಂದಿಗೆ ಆರಂಭವಾದ ಈ ಸಂಘಟನೆ ಇಂದು ಕೋಟ್ಯಾಂತರ ಸೇವಾವಂತರನ್ನು ಹೊಂದಿರುವ ವಿಶ್ವದ ಅತಿದೊಡ್ಡ ಸ್ವಯಂಸೇವಾ ಶಕ್ತಿಯೆಂದು ಗುರುತಿಸಲ್ಪಟ್ಟಿದೆ.
RSS ಬೆಳವಣಿಗೆ ರಾಜಕೀಯಕ್ಕಿಂತ ಹೆಚ್ಚು ವ್ಯಕ್ತಿತ್ವ ನಿರ್ಮಾಣದ ಮೂಲಕ ರಾಷ್ಟ್ರ ನಿರ್ಮಾಣದ ಮಂತ್ರವನ್ನು ಅಳವಡಿಸಿಕೊಂಡದ್ದರಿಂದಲೇ ವಿಶಿಷ್ಟವಾಗಿದೆ. ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಮೊದಲು ಧಾವಿಸಿ ನೆರವು ನೀಡುವುದು, ಗ್ರಾಮ ನಗರಗಳ ನಡುವೆ ಸೇತುವೆಯಾಗುವುದು, ಸಂಸ್ಕೃತಿ ಮೌಲ್ಯಗಳ ಸಂರಕ್ಷಣೆ, ಶಾಖೆಗಳ ಮೂಲಕ ಶಿಸ್ತಿನ ಜೀವನಶೈಲಿ ಬೆಳೆಸುವುದು ಇವು ಎಲ್ಲವೂ RSS ನ ಸಾಮಾಜಿಕ ಕೊಡುಗೆಗಳಾಗಿವೆ. ಹಿಂದುತ್ವದ ನಿಲುವುಗಳಿಂದ ದೇಶಪ್ರೇಮವನ್ನು ಉತ್ತೇಜಿಸಿ ಯುವಕರಲ್ಲಿ ರಾಷ್ಟ್ರಾಭಿಮಾನ ಮೂಡಿಸುವ ಕೆಲಸವನ್ನು ಇದು ನಿರಂತರವಾಗಿ ಮಾಡಿದೆ. ಶಿಕ್ಷಣ, ಆರೋಗ್ಯ, ಗ್ರಾಮೋನ್ನತಿ ಸೇರಿದಂತೆ ಅನೇಕ ಸೇವಾ ಚಟುವಟಿಕೆಗಳ ಮೂಲಕ ದೇಶದ ಮೂಲಭೂತ ಅಭಿವೃದ್ಧಿಗೆ ಸಹಕಾರ ನೀಡಿದೆ.
RSS ವಿಶ್ವದಾದ್ಯಂತ ಭಾರತೀಯ ಸಮುದಾಯವಿರುವ ಕಡೆ ಸಂಬಂಧಿತ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಸೇವಾಭಾವ, ಶಿಸ್ತಿನ ಚಟುವಟಿಕೆ ಮತ್ತು ಸಂಸ್ಕೃತಿ ಸಂರಕ್ಷಣೆಗಳಿಂದ ಇದು ಇತರ ದೇಶಗಳಲ್ಲೂ ವಿಶೇಷ ಗೌರವ ಪಡೆದಿದೆ. RSS ನ ದಿನನಿತ್ಯದ ಶಾಖಾ ಕಾರ್ಯಕ್ರಮಗಳಲ್ಲಿ ದಂಡಾಯಾಮ, ಸಂಸ್ಕೃತಿ ಚರ್ಚೆಗಳು, ವ್ಯಕ್ತಿತ್ವ ನಿರ್ಮಾಣದ ಅಭ್ಯಾಸಗಳು ನಡೆಯುತ್ತವೆ. ಸಮಾಜ ಸೇವೆಯ ಭಾಗವಾಗಿ ದುರಂತ ಸಂದರ್ಭಗಳಲ್ಲಿ ನೆರವು, ಆರೋಗ್ಯ ಮತ್ತು ರಕ್ತದಾನ ಶಿಬಿರಗಳು, ಶಾಲಾ ಶಿಕ್ಷಣ ಕಾರ್ಯಗಳು, ಗ್ರಾಮೋನ್ನತಿ ಯೋಜನೆಗಳು ಕೈಗೊಳ್ಳಲ್ಪಡುತ್ತವೆ. ಹಬ್ಬ ಜಾತ್ರೆಗಳಿಂದ ಹಿಡಿದು ಕಲೆ, ಪುರಾಣ ದರ್ಶನ ಅಧ್ಯಯನಗಳವರೆಗೆ ಸಂಸ್ಕೃತಿ ಸಂರಕ್ಷಣೆ ಮುಖ್ಯ ಗುರಿಯಾಗಿದೆ. ಶಾಂತಿ ಸಭೆಗಳು, ಸಮಾಜ ಸಮರಸ್ಯ ಕಾರ್ಯಕ್ರಮಗಳು, ಏಕತೆ ಮತ್ತು ರಾಷ್ಟ್ರಭಕ್ತಿಯ ಜಾಗೃತಿ ಮೂಡಿಸುವ ಕಾರ್ಯಗಳು ನಿರಂತರವಾಗಿವೆ.
RSS ನ ಸಂಘ ಕುಟುಂಬದಡಿ ದಶಕಗಟ್ಟಲೆ ಅಂಗ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾ ಭಾರತಿ ಇಂದು 12,000ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದೆ. ಸೇವಾ ಭಾರತಿ ಆರೋಗ್ಯ ಮತ್ತು ಶಿಕ್ಷಣದ ಹಾದಿಯಲ್ಲಿ ಸಾವಿರಾರು ಕಾರ್ಯಕ್ರಮಗಳನ್ನು ರೂಪಿಸಿದೆ. ವಿದ್ಯಾರ್ಥಿ ಚಟುವಟಿಕೆಗಳಲ್ಲಿ ABVP, ಮಹಿಳಾ ಶಕ್ತೀಕರಣದಲ್ಲಿ ರಾಷ್ಟ್ರೀಯ ಸೇವಿಕಾ ಸಮಿತಿ, ಮುಸ್ಲಿಂ ಸಮಾಜದೊಂದಿಗೆ ಸಂವಾದ ನಡೆಸುವ ಮುಸ್ಲಿಂ ರಾಷ್ಟ್ರೀಯ ಮಂಚ್, ವಕೀಲರ ಸಂಘಟನೆಯಾದ ಅಧಿವಕ್ತಾ ಪರಿಷತ್ ಮುಂತಾದವು ಪ್ರಮುಖವಾಗಿವೆ. ಒಟ್ಟಾರೆ 50ಕ್ಕೂ ಹೆಚ್ಚು ಅಂಗ ಸಂಸ್ಥೆಗಳು ವಿವಿಧ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿವೆ.
RSS ನ ಸದಸ್ಯರ ಸಂಖ್ಯೆ 4–5 ಮಿಲಿಯನ್ ನಡುವೆ ಇರುವುದಾಗಿ ಅಂದಾಜಿಸಲಾಗಿದೆ. 83,000ಕ್ಕೂ ಹೆಚ್ಚು ಶಾಖೆಗಳು ದಿನನಿತ್ಯ ನಡೆಯುತ್ತಿವೆ. 2025ರೊಳಗೆ 1 ಲಕ್ಷ ಶಾಖೆಗಳ ಗುರಿ ಇಟ್ಟುಕೊಂಡಿದೆ. ಹತ್ತಿರದ ಶಾಖೆಗೆ ಹಾಜರಾಗಿ ನಿರಂತರವಾಗಿ ಚಟುವಟಿಕೆಗಳಲ್ಲಿ ಪಾಲ್ಗೊಂಡು, ಸ್ವಾರ್ಥವಿಲ್ಲದ ಸೇವಾ ಮನೋಭಾವದಿಂದ ಕಾರ್ಯನಿರ್ವಹಿಸಿದರೆ ಯಾರೇ ಆಗಲಿ ಸ್ವಯಂಸೇವಕ ಆಗಬಹುದು. ಸೇವಾಭಾವ, ಪಾರದರ್ಶಕತೆ, ತಂತ್ರಜ್ಞಾನ ಬಳಕೆ, ತತ್ವ ಅನುಷ್ಠಾನದ ಸಮನ್ವಯ ಮತ್ತು ಜವಾಬ್ದಾರಿತನವೇ ಸ್ವಯಂಸೇವಕರ ಮೌಲ್ಯಗಳು.
RSS ನ ಕೆಲಸಗಳ ಪರಿಣಾಮಕಾರಿ ಉದಾಹರಣೆಗಳೂ ಅನೇಕರಿವೆ. ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾ ಭಾರತಿ ಶಾಲೆಗಳು ಮೂಲಭೂತ ಹಾಗೂ ಮೌಲ್ಯ ಶಿಕ್ಷಣ ನೀಡುತ್ತಿವೆ. ಸೇವಾ ಭಾರತಿ ವೈದ್ಯಕೀಯ ಶಿಬಿರಗಳು, ರಕ್ತದಾನ ಶಿಬಿರಗಳು, ಸ್ವಚ್ಛತಾ ಅಭಿಯಾನಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಭೂಕಂಪ, ಪ್ರವಾಹ, COVID-19 ಮೊದಲಾದ ಸಂದರ್ಭಗಳಲ್ಲಿ ಸ್ವಯಂಸೇವಕರು ಆಹಾರ, ಔಷಧಿ, ನೆರವು ವಿತರಿಸಿ ಜೀವ ಉಳಿಸಿದ್ದಾರೆ. ಗ್ರಾಮೋನ್ನತಿ ಯೋಜನೆಗಳ ಮೂಲಕ ಸ್ವಾವಲಂಬನೆ, ಪರಿಸರ ಸಂರಕ್ಷಣೆ ಮತ್ತು ಹಸಿರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದಾರೆ. ಯುವ ಶಿಬಿರಗಳು, ವ್ಯಕ್ತಿತ್ವಾಭಿವೃದ್ಧಿ ಮತ್ತು ಮೌಲ್ಯಶಿಕ್ಷಣ ಶಿಬಿರಗಳು ದೇಶಭಕ್ತಿ ಮತ್ತು ನೈತಿಕತೆಯನ್ನು ಬಲಪಡಿಸುತ್ತಿವೆ.
RSS ಶಾಖೆಗಳು ಶಿವಮೊಗ್ಗ ಜಿಲ್ಲೆಯಲ್ಲಿ ಶಿಸ್ತಿನ ಮತ್ತು ರಾಷ್ಟ್ರಭಕ್ತಿಯ ಚಟುವಟಿಕೆಗಳನ್ನು ನಿರಂತರವಾಗಿ ನಡೆಸುತ್ತಿವೆ. ವಿಧ್ಯಾಭಾರತಿ ಶಾಲೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ಮೌಲ್ಯಗಳನ್ನು ಪೂರೈಸಲಾಗುತ್ತಿದೆ. ಸೇವಾ ಭಾರತಿ ಆರೋಗ್ಯ ಶಿಬಿರಗಳು, ಗ್ರಾಮಮಟ್ಟದ ಸ್ವಚ್ಛತಾ ಕಾರ್ಯಗಳು ಗಮನ ಸೆಳೆಯುತ್ತವೆ. ಮಹಾಮಾರಿ ಸಂದರ್ಭದಲ್ಲಿ ಆಹಾರ ಔಷಧಿ ವಿತರಣೆ, ಪ್ರವಾಹ ಸಂತ್ರಸ್ತರಿಗೆ ನೆರವು, ರಕ್ತದಾನ ಶಿಬಿರಗಳಲ್ಲಿ ಸ್ವಯಂಸೇವಕರ ತ್ಯಾಗಮಯ ಸೇವೆ ಜಿಲ್ಲೆಯ ಜನರಿಗೆ ನೆನಪಾಗುವಂತಹದು.
RSS ಶತಮಾನೋತ್ಸವವು ಕೇವಲ ಆಚರಣೆಗಷ್ಟೇ ಸೀಮಿತವಾಗದೆ, ಹೊಸ ಪೀಳಿಗೆಗೆ ಮೌಲ್ಯ ಸಂರಕ್ಷಣೆ, ವಿಜ್ಞಾನಾತ್ಮಕ ದೃಷ್ಟಿ, ಮಾನವೀಯ ಮೌಲ್ಯಗಳೊಂದಿಗೆ ಸಮಾಜ ನಿರ್ಮಾಣದ ದಾರಿದೀಪವಾಗಿದೆ. ಅಸಮಾನತೆ ನಿವಾರಣೆ, ಸಾಮಾಜಿಕ ನ್ಯಾಯ ಹಾಗೂ ವಸುದೈವ ಕುಟುಂಬಕಂ ಎಂಬ ತತ್ವವನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅವಶ್ಯಕ. RSS ನಮ್ಮದೇ ಸಮಾಜದಿಂದ ಹುಟ್ಟಿದ, ನಮ್ಮದೇ ಜನರ ಸಂಘಟನೆ. ಸೇವಾಭಾವ, ಶಿಸ್ತಿನ ಕಾರ್ಯವಿಧಾನ ಮತ್ತು ರಾಷ್ಟ್ರಪ್ರೇಮ ಇದರ ಬಲ. ಸಮಾಜದ ಏಕತೆ ಮತ್ತು ರಾಷ್ಟ್ರದ ಐಕ್ಯತೆಯನ್ನು ಆಧಾರವಾಗಿಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಈ ಸಂಘಟನೆ ಮುಂದಿನ ಶತಮಾನದಲ್ಲಿಯೂ ಭಾರತವನ್ನು ವಿಶ್ವಕ್ಕೆ ದಾರಿ ತೋರಿಸುವ ಶಕ್ತಿಕೇಂದ್ರವನ್ನಾಗಿಸುವ ಶಕ್ತಿ ಹೊಂದಿದೆ.
ಸಂಗ್ರಹ ಲೇಖನ: ಸಿ.ಎನ್. ಮಲ್ಲೇಶ್, ವಕೀಲರು, ಶಿವಮೊಗ್ಗ
Jagadguru Srividhusekhara Bharati ಅಕ್ಟೋಬರ್ 12 ರಿಂದ ಜಗದ್ಗುರು ಶ್ರೀವಿಧುಶೇಖರ ಭಾರತೀಯವರ ” ಧರ್ಮ ವಿಜಯ ಯಾತ್ರೆ” ಸಂಚಾರ ಆರಂಭ
Jagadguru Srividhusekhara Bharati ಜಗದ್ಗುರು ಶ್ರೀ ವಿಧುಶೇಖರ ಭಾರತಿಯವರು ಶರನ್ನವರಾತ್ರಿಯ ಉತ್ಸವದ ನಂತರ ಚಿಕ್ಕಮಗಳೂರಿಗೆ ಸಂಕ್ಷಿಪ್ತ ಧರ್ಮ ವಿಜಯ ಯಾತ್ರೆ ಬರಲಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಹಾಲಕ್ಷ್ಮಿ ದೇವಸ್ಥಾನದ ಆವರಣದಲ್ಲಿ ಗುರುಭವನ ನಿರ್ಮಾಣ ಆಗಿದ್ದು ಶ್ರೀಗಳು ಅದನ್ನು ಉದ್ಘಾಟಿಸಲಿದ್ದಾರೆ. ನೂತನ ಗುರುಭವನದಲ್ಲೇ ಶ್ರೀ ಚಂದ್ರಮೌಳೀಶ್ವರ ಪೂಜೆ ನೆರವೇರಲಿದೆ. ತಾಲೂಕು ಕಛೇರಿ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಮಹಿಗಣಪತಿ ದೇವಸ್ಥಾನ ಕುಂಭಾಭಿಷೇಕ ಸಹ ಶ್ರೀಗಳು ನೆರವೇರಿಸಲಿದ್ದಾರೆ.
ಅಕ್ಟೋಬರ್ 12 ರಿಂದ ಡಿಸೆಂಬರ್ 3 ರ ತನಕ ಶ್ರೀಗಳು ಧರ್ಮ ವಿಜಯ ಯಾತ್ರೆಯಲ್ಲಿ ಕರ್ನಾಟಕ, ತೆಲಂಗಾಣ, ನೇಪಾಳ,ದೆಹಲಿ ಮುಂತಾದ ಕಡೆ ಸಂಚರಿಸಲಿದ್ದಾರೆ.
ಧರ್ಮಸ್ಥಳ,ಕಲ್ಲಡ್ಕ, ಗೋಕರ್ಣ,ಪಾಲಿಕೊಪ್ಪ ಯಾತ್ರೆಯ ನಂತರ ಅವರು ತೆಲಂಗಾಣ ಪ್ರವೇಶಿಸಲಿದ್ದಾರೆ.
ಶಂಶಾಬಾದ್, ಕೊಂಪೊಳ್ಳಿ, ಬಾಸರ, ವೇಮುಲವಾಡ ಮತ್ತು ಹೈದರಾಬಾದಿನಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
Jagadguru Srividhusekhara Bharati ನವಂಬರ್ ನಾಲ್ಕರಂದು ಹೈದರಾಬಾದಿನಿಂದ ವಿಶೇಷ ವಿಮಾನದಲ್ಲಿ ನೇಪಾಳದ ಕಾಟ್ಮಂಡು ತಲುಪಲಿದ್ದಾರೆ. ಪಶುಪತಿನಾಥ ದೇವಾಲಯದಲ್ಲಿ ಅತಿ ರುದ್ರಯಾಗ ಸೇರಿದಂತೆ ಶ್ರೀಗಳ ಸಾನಿಧ್ಯದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ನಡೆಯಲಿದೆ. ನವಂಬರ್ ಎಂಟರಂದು ಅವರು ನೇಪಾಳದಿಂದ ದೆಹಲಿ ತಲ್ಪಲಿದ್ದಾರೆ.
ದೆಹಲಿ,ವೃಂದಾವನ, ಮಥುರಾ ಭೇಟಿಯ ನಂತರ ಡಿಸೆಂ ಬರ್ 3 ರಂದು ಶೃಂಗೇರಿಗೆ ಮರುಪ್ರಯಾಣ ಮಾಡಲಿದ್ದಾರೆ. ಜಗದ್ಗುರು ಶ್ರೀ ಅಭಿನವ ವಿದ್ಯಾತೀರ್ಥ ಮಹಾಸ್ವಾಮೀಜಿಯವರು ನೇಪಾಳದ ಆಗಿನ ಮಹಾರಾಜರ ಆಹ್ವಾನದಂತೆ ನೇಪಾಳಕ್ಕೆ ಭೇಟಿ ನೀಡಿ ಪಶುಪತಿನಾಥನ ದರ್ಶನ ಮಾಡಿದ್ದರು. ಅವರ ಭೇಟಿಯ ಸಂಧರ್ಭ ಮಹಾರಾಜರು ಶಿಲಾ ಫಲಕ ದೇವಸ್ಥಾನದ ಆವರಣದಲ್ಲಿ ಸ್ಥಾಪಿಸಿದ್ದರು. ನೇಪಾಳದ ವಿಪ್ಲವ ಸನ್ನಿವೇಶದಲ್ಲಿ ಶೃಂಗೇರಿಯ ಜಗದ್ಗುರುಗಳು ಆ ದೇಶಕ್ಕೆ ಚಿತ್ತೈಸಿ ಪಶುಪತಿನಾಥನ ಪೂಜೆ ನೆರವೇರಿಸುವುದು ದೇಶ ಮತ್ತೆ ಶಾಂತ ಸ್ಥಿತಿಗೆ ಮರಳುವ ಸೂಜನೆ ಎಂದು ಅಲ್ಲಿನ ಜನ ನಂಬುತ್ತಾರೆ.
ಲೇಖನ ಕೃಪೆ: ಪ್ರಭಾಕರ ಕಾರಂತ.
Lions Club Bhadravati ಭದ್ರಾವತಿಯ ಉಜ್ಜನಿಪುರದಲ್ಲಿ 170 ಕ್ಕೂ ಹೆಚ್ಚು ಮಂದಿಗೆ ಉಚಿತ ನೇತ್ರ ತಪಾಸಣೆ
Lions Club Bhadravati ಜಿಲ್ಲಾಡಳಿತ ಮತ್ತು ಜಿಪಂ, ಜಿಲ್ಲಾ ಆರೋಗ್ಯ ಇಲಾಖೆ, ಅಂಧತ್ವ ನಿವಾರಣ ವಿಭಾಗ ಶಿವಮೊಗ್ಗ ಹಾಗೂ ಲಯನ್ಸ್ ಕ್ಲಬ್ ಭದ್ರಾವತಿ ಶುಗರ್ ಟೌನ್ ಇವರ ಆಶ್ರಯದಲ್ಲಿ ಉಜ್ಜನೀಪುರದಲ್ಲಿ ಉಚಿತ ನೇತ್ರ ತಪಾಸಣೆ ಶಿಬಿರವನ್ನು ಉಜ್ಜನೀಪುರ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಏರ್ಪಡಿಸಿದ್ದು, ಒಟ್ಟು 170ಕ್ಕೂ ಹೆಚ್ಚು ರೋಗಿಗಳ ನೇತ್ರ ತಪಾಸಣೆ ನಡೆದು, ಅವರಲ್ಲಿ 65 ಮಂದಿಗೆ ಉಚಿತವಾಗಿ ಕನ್ನಡಕಗಳು ವಿತರಿಸಲಾಯಿತು. ಇನ್ನೂ ೩೨ ಮಂದಿಯನ್ನು ಉಚಿತ ಕಣ್ಣಿನ ಶಸ್ತçಚಿಕಿತ್ಸೆಗೆ ಗುರುತಿಸಿ ನೋಂದಾಯಿಸಲಾಗಿದೆ. ವಿವಿಧ ನೇತ್ರ ಸಮಸ್ಯೆಗಳಿಗಾಗಿ ನೇತ್ರ ತಜ್ಞರಿಂದ ವಿಶೇಷ ಚಿಕಿತ್ಸೆ ವ್ಯವಸ್ಥೆಯೂ ಕಲ್ಪಿಸಲಾಗಿತ್ತು.
Lions Club Bhadravati ಲಯನ್ಸ್ ಕ್ಲಬ್ ಭದ್ರಾವತಿ ಶುಗರ್ಟೌನ್ ಅಧ್ಯಕ್ಷ ಡಾ. ಗುರುರಾಜ್, ಕಾರ್ಯದರ್ಶಿ ತಮ್ಮೇಗೌಡ, ಖಜಾಂಚಿ ನಾಗರಾಜ್ ಇನ್ನಿತರರಿದ್ದರು. ಶಿವಮೊಗ್ಗ ಆಪ್ಟಿಕಲ್ನ ಮಾಲೀಕರಾದ ಲಯನ್ ಎನ್.ಟಿ ನಂದೀಶ್ ನೇತ್ರ ಶಿಬಿರ ಮತ್ತು ಕನ್ನಡಕ ವಿತರಣೆ ಮಾಡಿದರು.
