Ramakrishna Vidyaniketan School ಇಲ್ಲಿನ ಗೋಪಾಳದ ಶ್ರೀ ರಾಮಕೃಷ್ಣ ವಿದ್ಯಾನಿಕೇತನ ಶಾಲೆಯ ಮೂವರು ವಿದ್ಯಾರ್ಥಿನಿಯರು ನೆಹರು ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಭಾಗವಹಿಸಿದ್ದು, ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
10ನೇ ತರಗತಿ ವಿದ್ಯಾರ್ಥಿಯಾದ ವೇದಾ ಕೆ ಇವರು ಹ್ಯಾಮರ್ ಥ್ರೋನಲ್ಲಿ ಪ್ರಥಮ ಸ್ಥಾನ,
9 ನೇ ತರಗತಿ ವಿದ್ಯಾರ್ಥಿಗಳಾದ ಧನಲಕ್ಷ್ಮಿ ಎಸ್ ಹ್ಯಾಮರ್ ಥ್ರೋನಲ್ಲಿ ದ್ವಿತೀಯ, ರಕ್ಷಾ ವೈ ಡಿ ತಟ್ಟೆ ಎಸೆತದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
Ramakrishna Vidyaniketan School ಈ ಮೂರು ವಿದ್ಯಾರ್ಥಿಗಳು 2025 ರ ಡಿಸೆಂಬರ್ 5 ರಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುವ ರಾಜ್ಯ ಮಟ್ಟದ ಸ್ಪರ್ದೆಗೆ ಆಯ್ಕೆಯಾಗಿರುತ್ತಾರೆ.
ಅಂತೆಯೇ, ಪ್ರಣಿತಾ ಪಿ ಥ್ರೋಬಾಲ್ನಲ್ಲಿ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಈ ಎಲ್ಲಾ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿ, ಶಿಕ್ಷಕ ವೃಂದದ ಪರವಾಗಿ ಕಾರ್ಯದರ್ಶಿ ಶೋಭಾ ವೆಂಕಟರಮಣ ಅಭಿನಂದಿಸಿದ್ದಾರೆ.
Ramakrishna Vidyaniketan School ಶ್ರೀರಾಮಕೃಷ್ಣ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಿಗೆ ರಾಜ್ಯಮಟ್ಟಕ್ಕೆ ಆಯ್ಕೆ
SAIL-VISL ಗ್ರಾಮಾಂತರ ಶಿಕ್ಷಕರ ತರಬೇತಿಯತ್ತ – ಸೈಲ್- ವಿಐಎಸ್ಎಲ್ ನ ಚಿತ್ತ
SAIL-VISL ೨೫ನೇ ನವೆಂಬರ್, ೨೦೨೫ ರಂದು ಸೈಲ್- ವಿಐಎಸ್ಎಲ್ ನ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಗ್ರಾಮೀಣ ತರಬೇತಿ ಚಟುವಟಿಕೆಗಳನ್ನು ಹೆಚ್ಚಿಸಲು ಅನುಕೂಲವಾಗುವಂತೆ ‘ಡಿಜಿಟಲ್ ಇಂಟರಾಕ್ಟೀವ್ ಪ್ಯಾನಲ್ ಮತ್ತು ಎರಡು ಕಂಪ್ಯೂಟರ್’ಗಳನ್ನು ಕರ್ನಾಟಕದ ಭದ್ರಾವತಿಯ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ವಿಐಎಸ್ಎಲ್ ವತಿಯಿಂದ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್, ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಎಲ್. ಪ್ರವೀಣ್ ಕುಮಾರ್, ಮಹಾಪ್ರಬಂಧಕರು (ಮಾನವ ಸಂಪನ್ಮೂಲ ಮತ್ತು ಸಾರ್ವಜನಿಕ ಸಂಪರ್ಕ) ಮತ್ತು ಸಿ.ಎಸ್.ಆರ್ ಅಪೆಕ್ಷ್ ಸಮಿತಿಯ ಸದಸ್ಯರು, ಶ್ರೀ ಅಜಯ್ ಡಿ. ಸೋಂಕುವಾರ್, ಉಪ ಮಹಾಪ್ರಬಂಧಕರು ಮತ್ತು ಸಿ.ಎಸ್.ಆರ್ ಅಪೆಕ್ಸ್ ಸಮಿತಿಯ ಸದಸ್ಯರು, ಶ್ರೀ ಎಮ್.ಎಲ್. ಯೋಗೇಶ್, ಕಿರಿಯ ಪ್ರಬಂಧಕರು ಮತ್ತು ಸಿ.ಎಸ್.ಆರ್ ಅಪೆಕ್ಷ್ ಸಮಿತಿಯ ನೋಡಲ್ ಅಧಿಕಾರಿ ಉಪಸ್ಥಿತರಿದ್ದರು. ಹಾಗೆಯೇ ಭದ್ರಾವತಿಯ ಶಿಕ್ಷಣ ಇಲಾಖೆಯಿಂದ ಶ್ರೀ ಎ.ಕೆ. ನಾಗೇಂದ್ರಪ್ಪ, ಕ್ಷೇತ್ರ ಶಿಕ್ಷಣ ಅಧಿಕಾರಿ, ಭದ್ರಾವತಿ, ಶ್ರೀ ಪಂಚಾಕ್ಷರಿ, ಕ್ಷೇತ್ರ ಸಂಪನ್ಮೂಲ ಅಧಿಕಾರಿ, ಮತ್ತು ಶ್ರೀ ದಯಾನಂದ, ಶಿಕ್ಷಣ ಸಂಯೋಜನಾಧಿಕಾರಿ, ಭದ್ರಾವತಿ ಉಪಸ್ಥಿತರಿದ್ದರು.
ಗಿISಐ ನ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಅನೂಪ್ ಕುಮಾರ್ರವರು ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ ಯೋಜನೆ ಅಡಿಯಲ್ಲಿ ಕೈಗೊಳ್ಳಲಾದ ವಿವಿಧ ಚಟುವಟಿಕೆಗಳನ್ನು ಉದ್ಘಾಟಿಸುತ್ತ, ನಮ್ಮ ಸಂಸ್ಥೆಯ ಪರಿಧಿಯಲ್ಲಿರುವರೆಲ್ಲರ ಮುಖದಲ್ಲಿ ನಗುವನ್ನು ತರುವುದು, ಅವರ ಜೀವನವನ್ನು ಸುಧಾರಿಸುವುದು ಮತ್ತು ನಮ್ಮ ಸಾಮಾಜಿಕ ಜವಾಬ್ದಾರಿಗಳ ಮೂಲಕ ಅರ್ಥಪೂರ್ಣ ಬದಲಾವಣೆಯನ್ನು ತರುವ ಗುರಿಯನ್ನು ಹೊಂದಿದ್ದೇವೆ. ಸೈಲ್- ವಿಐಎಸ್ಎಲ್ ಭವಿಷ್ಯದಲ್ಲಿಯೂ ಸಹ ಇದನ್ನು ಮಾಡಲು ಶ್ರಮಿಸುತ್ತದೆ ಎಂದರು.
SAIL-VISL ಭದ್ರಾವತಿಯ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಎ.ಕೆ. ನಾಗೇಂದ್ರಪ್ಪನವರು ಮಾತನಾಡುತ್ತ, SಂIಐ-ಗಿISಐ ಆಡಳಿತ ಮಂಡಳಿ ಕಳೆದ ಅವಧಿಯಲ್ಲಿ ಶಿವಮೊಗ್ಗ ಜಿಲ್ಲೆಯಾಧ್ಯಂತ ಸಕಾರಿ ಶಾಲೆಯ ಮಕ್ಕಳಿಗೆ ಬೆಂಚುಗಳು, ಮೇಜುಗಳು, ಬೋರ್ಡ್ಗಳು, ಶಾಲಾ ಪುಸ್ತಕಗಳು ಮತ್ತು ಬ್ಯಾಗ್ಗಳು ಮುಂತಾದ ಶೈಕ್ಷಣಿಕ ಉಪಕರಣಗಳು ಮತ್ತು ವಿಶೇಷ ಚೇತನ ಮಕ್ಕಳಿಗೆ ವಿಶೇಷ ಸಹಾಯಕ ಸಾಧನಗಳನ್ನು ಒದಗಿಸುವಲ್ಲಿ ನೀಡಿದ ಎಲ್ಲಾ ಸಹಾಯಕ್ಕಾಗಿ ಧನ್ಯವಾಗಳನ್ನು ಅರ್ಪಿಸಿದರು. ಇದು ಜಿಲ್ಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವಲ್ಲಿ ಬಹಳ ಸಹಾಯ ಮಾಡುತ್ತದೆ. ಕಳೆದ ವರ್ಷ ಸ್ವೀಕರಿಸಿದ ವೀಡಿಯೋ ಕಾನ್ಫರೆನ್ಸ್ ಮತ್ತು ವೆಬ್ ಕ್ಯಾಮೆರಾ ವ್ಯವಸ್ಥೆಯ ಜೊತೆಗೆ ಇಂದು ಸ್ವೀಕರಿಸಿದ ‘ಡಿಜಿಟಲ್ ಇಂಟರಾಕ್ಟೀವ್ ಪ್ಯಾನಲ್ ಮತ್ತು ಕಂಪ್ಯೂಟರ್ಗಳು ತಾಲ್ಲೂಕಿನ ೯೨೫ ಶಿಕ್ಷಕರಿಗೆ ಮತ್ತು ೪೬೦೦೦ ವಿದ್ಯಾರ್ಥಿಗಳಿಗೆ ತರಬೇತಿ ನೀಡುವಲ್ಲಿ ಬಹಳ ಸಹಕಾರಿಯಾಗಲಿದೆ ಎಂದರು.
ಶ್ರೀ ಯೋಗೇಶ್,ಎಮ್.ಎಲ್ ಸ್ವಾಗತಿಸಿದರು ಮತ್ತು ಶ್ರೀಮತಿ ವಾಣಿ ಪಾಟೀಲ್ ನಿರೂಪಿಸಿದರು.
shahi ಶಾಹಿ ಎಕ್ಸ್ಪೋರ್ಟ್ಸ್ ನಿಂದ ವಿವಿಧ ಸಾಮಾಜಿಕ ಸೇವಾ ಚಟುವಟಿಕೆ
shahi ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ವತಿಯಿಂದ ಶಿಕಾರಿಪುರ ಸಾರ್ವಜನಿಕ ತಾಲ್ಲೂಕು ಆಸ್ಪತ್ರೆಗೆ ಇಪ್ಪತ್ತು ಲಕ್ಷ ರೂ. ಮೌಲ್ಯದ ಸಿ ಬಿ ನ್ಯಾಟ್ ಯಂತ್ರ ಕೊಡುವ ಮೂಲಕ ಸಾರ್ವಜನಿಕ ಸೇವೆಗೆ ಕೊಡುಗೆ ನೀಡಿದೆ.
ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಆರ್ ಯೋಜನೆಯಡಿ ಈ ಕೊಡುಗೆ ನೀಡಲಾಗಿದೆ.
ಪ್ರದಾನ ಮಂತ್ರಿ ಅವರ ಟಿ ಬಿ ಮುಕ್ತ ಭಾರತ ಎಂಬ ಹೆಗ್ಗಳಿಕೆಗೆ ಪೂರಕವಾಗಿ, ಶಾಹಿ ಎಕ್ಸ್ಪೋರ್ಟ್ ಪ್ರೈವೇಟ್ ಲಿಮಿಟೆಡ್ ಅವರ ಸಿ ಎಸ್ ಎಸ್ ಯೋಜನೆ ಅಡಿಯಲ್ಲಿ 20ಲಕ್ಷ ರೂಪಾಯಿ ಮೌಲ್ಯ ದ ಸಿ ಬಿ ನ್ಯಾಟ್ ಯಂತ್ರ ವನ್ನು ಹಸ್ತಾಂತರ ಮಾಡಲಾಯಿತು. ಈ ಯಂತ್ರವು ಅಲ್ಪ ಅವಧಿ ಯಲ್ಲಿ ನಿರ್ದಿಷ್ಟವಾದ ಫಲಿತಾಂಶದೊಂದಿಗೆ, ಏಕಕಾಲಕ್ಕೆ 4 ಜನರ ಸ್ಯಾಂಪಲ್ ಪರೀಕ್ಷೆ ಮಾಡಬಹುದಾಗಿದೆ. ಕಡಿಮೆ ಸಮಯದಲ್ಲಿ ಪರೀಕ್ಷೆಯ ಮೂಲಕ, ರೋಗದ ಹರಡುವಿಕೆಯನ್ನು ತಡೆಯಬಹುದಾಗಿದೆ.
ಹಸ್ತಾಂತರ ಸಮಾರಂಭ ಉದ್ಘಾಟಿಸಿದ ಸಂಸದರಾದ ಬಿ.ವೈ. ರಾಘವೇಂದ್ರ ಅವರು ಶಾಹೀ ಸೇವಾ ಕಾರ್ಯವನ್ನು ಪ್ರಶಂಸಿಸಿದರು.
ಶಾಹಿಯ ಆಡಳಿತ ವಿಭಾಗದ ಜಿ.ಎಂ. ಲಕ್ಷಣ ಧರ್ಮಟ್ಟಿ, ಮಾನವ ಸಂಪನ್ಮೂಲ ವಿಭಾಗದ ಜಿ.ಎಂ. ಬೀನೇಶ್ ಕುಮಾರ, ಮಾನವ ಸಂಪನ್ಮೂಲ ವಿಭಾಗದ ಎಜಿಎಂ ಪ್ರಶಾಂತ್ ಎಂ ಆರ್. ವಿಭಾಗ, ಹಾಗೂ ಸಿ ಎಸ್ ಆರ್ ತಂಡದ ನಾಗಯ್ಯ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು, ಡಿಟಿಓ ಶ್ರೀ ನಟರಾಜು, ಎಎಂ. ಓ ಅರುಣ್ ಕುಮಾರ್ ಹಾಜರಿದ್ದರು.
ಕೇಂದ್ರ ಕಾರಾಗೃಹದಲ್ಲಿ ಹೊಲಿಗೆ ತರಬೇತಿ:
shahi ಶಾಹಿ ಎಕ್ಸ್ ಪೋರ್ಟ್ ಸಂಸ್ಥೆ ವತಿಯಿಂದ ಶಿವಮೊಗ್ಗದಲ್ಲಿರುವ ಕೇಂದ್ರ ಕಾರಾಗೃಹದ ಬಂಧಿ ನಿವಾಸಿಗಳಿಗೆ ಹೊಲಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸಮಾರೋಪ ಸಮಾರಂಭ ಹಾಗೂ ಅರ್ಹತಾ ಪ್ರಮಾಣ ಪತ್ರ ವಿತರಣಾ ಸಮಾರಂಭ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಅವರು ಕೌಶಲ್ಯದ ಕಲಿಕೆ ಸಾವಲಂಬನೆಗೆ ದಾರಿದೀಪವಾಗಲಿದೆ ಎಂದರು.
ಪ್ರಮಾಣ ಪತ್ರ ವಿತರಿಸಿದ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಅವರು ಬಂಧಿ ನಿವಾಸಿಗಳಿಗೆ ಶುಭ ಕೋರಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯರಾದ ಬಲ್ಕಿಶ್ ಭಾನು, ಶಾಹಿ ಸಂಸ್ಥೆಯ ಸೀನಿಯರ್ ಮ್ಯಾನೇಜರ್ ಕವಿತಾ ಪ್ರಸಾದ್, ಆಡಳಿತ ವಿಭಾಗದ ಜಿಎಂ ಲಕ್ಷ್ಮಣ ಧರ್ಮಟ್ಟಿ, ಕೇಂದ್ರ ಕಾರಾಗೃಹದ ಮುಖ್ಯ ಅಧ್ಯಕ್ಷಕ ಡಾ. ಬಿ ರಂಗನಾಥ್, ಶಿವಮೊಗ್ಗ ಡಿವೈಎಸ್ಪಿ ಅಂಜನಪ್ಪ ಕಾರಾಗೃಹದ ಸಹಾಯಕ ಅಧೀಕ್ಷಕಿ ಪ್ರೀತಿ ಉಪಸ್ಥಿತರಿದ್ದರು
ಈ ಸಂದರ್ಭದಲ್ಲಿ ತರಬೇತಿ ಅಧಿಕಾರಿಗಳಾದ ನಾಗರಾಜ್ ಕಿರಣ್ ಅವರನ್ನು ಅಭಿನಂಧಿಸಲಾಯಿತು. ತಿಮ್ಮಪ್ಪ ಪ್ರಾರ್ಥಿಸಿದರು, ತಿಪ್ಪೇಸ್ವಾಮಿ ಹಾಗೂ ಶಿವಾನಾಯ್ಕ ಅವರು ತರಬೇತಿ ಅವಧಿಯ ಅನುಭವಗಳನ್ನು ಹಂಚಿಕೊಂಡರು. ಸಂಸ್ಥೆ ಶಿಕ್ಷಕ ಗೋಪಾಲಕೃಷ್ಣ ಅವರು ಸ್ವಾಗತಿಸಿದರು.
Department of public instruction Shimoga ಶಾಲಾಶಿಕ್ಷಣ & ಸಾಕ್ಷರತಾ ಇಲಾಖೆ ಪ್ರಧಾನ ಕಾರ್ಯದರ್ಶಿ ಶ್ರೀಮತಿ ವಿ.ರಶ್ಮಿ ಮಹೇಶ್ ಅವರ ಶಿವಮೊಗ್ಗ ಭೇಟಿ ಮಾಹಿತಿ.
Department of public instruction Shimoga ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀಮತಿ ವಿ. ರಶ್ಮಿ ಮಹೇಶ್ ಇವರು ನ. 28 ರಂದು ರಾತ್ರಿ 9.40 ಶಿವಮೊಗ್ಗ ಆಗಮಿಸಿ ವಾಸ್ತವ್ಯ ಮಾಡಲಿದ್ದಾರೆ.
ನ. 29 ರಂದು ಬೆಳಗ್ಗೆ 10.00ಕ್ಕೆ ಶಿವಮೊಗ್ಗ /ಚಿತ್ರದುರ್ಗ/ದಾವಣಗೆರೆ ಜಿಲ್ಲೆಯ ಎಸ್.ಎಸ್.ಎಲ್.ಸಿ. ಪರೀಕ್ಷಾ ಫಲಿತಾಂಶ ಸುಧಾರಣೆ ಕಾರ್ಯಗಾರದಲ್ಲಿ ಭಾಗವಹಿಸುವುದು ಹಾಗೂ ಜಿಲ್ಲೆಯ ವಿವಿಧ ಶಾಲಾ-ಕಾಲೇಜುಗಳಿಗೆ ಭೇಟಿ ನೀಡಲಿದ್ದಾರೆ ಹಾಗೂ ಶಿವಮೊಗ್ಗದಲ್ಲಿ ವಾಸ್ತವ್ಯ ಮಾಡಲಿದ್ದಾರೆ.
Department of public instruction Shimoga ನ. 30 ರಂದು ಸಂಜೆ 3.00ಕ್ಕೆ ಬೆಂಗಳೂರಿಗೆ ತೆರಳಲಿದ್ದಾರೆ ಎಂದು ಕಾರ್ಯದರ್ಶಿಗಳ ಆಪ್ತ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
Gangadharendra Saraswati Swamiji ಮಾನವ ಸಂಪನ್ಮೂಲವನ್ನ ಬಲಿಷ್ಠಗೊಳಿಸುವುದೇ ಗೀತೆಯ ಗುರಿ- ಶ್ರೀಗಂಗಾಧರೇಂದ್ರ ಸರಸ್ವತಿಶ್ರೀ
Gangadharendra Saraswati Swamiji ಗೀತೆಯ ಸಂದೇಶದ ಅಳವಡಿಕೆಯು ಮುಖ್ಯವಾಗಿ
ಉದ್ಯೋಗಿಯು ತನ್ನ ಮನಸ್ಸನ್ನ ನಿರ್ವಹಣೆ ಮಾಡಿಕೊಳ್ಳುವವ
ಉದ್ಯೋಗವನ್ನ ಚೆನ್ನಾಗಿ ಮಾಡುತ್ತಾನೆ.ತುರ್ತು ಪರಿಸ್ಥಿತಿ ,
ಇಡೀ ಮನಸ್ಸಿನ ನಿಯಂತ್ರಣ ತಪ್ಪುವ ಸಂದರ್ಭ ಬಂದಾಗ ಹೇಗೆ ಸುಧಾರಿಸಿಕೊಳ್ಳುತ್ತೇವೆ ಎಂಬ ಮೈಂಡ್ ಮ್ಯಾನೇಜ್ಮೆಂಟ್
ಕೌಶಲ ಎನ್ನುತ್ತೇವೆ. ಈ ಮನಸ್ಸಿನ ನಿರ್ವಹಣೆಯೇ ಬಹಳ ಮುಖ್ಯವಾಗಿದೆ.ಅದೇ ಯಶಸ್ಸಿನ ಕೀಲಿಕೈ ಎಂದು
ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತಿಮಹಾಸ್ವಾಮಿಗಳು ಹೇಳಿದರು.
ಶಿವಮೊಗ್ಗದ ಪೆಸಿಟ್ ಶಿಕ್ಷಣ ಸಂಸ್ಥೆಯ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜು,
ಶ್ರೀಭಗವದ್ಗೀತಾ ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿ ಮತ್ತು
ಸೋಂದಾ ಸ್ವರ್ಣವಲ್ಲಿ ಮಹಾ ಸಂಸ್ಥಾನ ಇವರ ಆಶ್ರಯದಲ್ಲಿ
ಏರ್ಪಡಿಸಿದ್ದ “ ಭವಿಷ್ಯದ ಉದ್ಯಮ ನಿರ್ವಾಹಕರಿಗೆ ಭಗವದ್ಗೀತೆಯಿಂದ ಸಿಗುವ ವಿಚಾರ ಸುಗಂಧ “ ವಿಚಾರದ ಬಗ್ಗೆ ಪೂಜ್ಯಶ್ರೀಗಳು ಮಾತನಾಡುತ್ತಿದ್ದರು.
ಉದ್ಯೋಗ ಕ್ಷೇತ್ರಗಳಲ್ಲಿ ಎರಡು ಭಾಗಗಳಿವೆ. ಮಾನವ ಸಂಪನ್ಮೂಲ ಮೊದಲನೇ ಭಾಗವಾಗಿದೆ. ಎರಡನೇಯದು
ಮಿಕ್ಕಇತರೆ ಸಂಪನ್ಮೂಲಗಳು.
ಮಾನವ ಸಂಪನ್ಮೂಲದ ಬಗ್ಗೆ ಗೀತೆ ಪ್ರಧಾನವಾಗಿ ತಿಳಿಸುತ್ತದೆ.
ಇತರೆ ಸಂಪನೂಲಗಳ ಬಗ್ಗೆ
ಶೈಕ್ಷಣಿಕವಾಗಿ ಬೋಧನಾ ಶಾಸ್ತ್ರಗಳಿವೆ.
Gangadharendra Saraswati Swamiji ಕ್ಷೀಣಿಸುವಂಥ ಮಾನವ ಸಂಪನ್ಮೂಲವನ್ನ ಉನ್ನತವಾಗಿ ಮೇಲೆತ್ತಿ ಬಲಶಾಲಿಯನ್ನಾಗಿ ಮಾಡುವುದೇ ಭಗವದ್ಗೀತೆಯ
ದೃಷ್ಟಿ ಎಂದು ಗೀತೆಯ ಶ್ಲೋಕಗಳಲ್ಲಿ ದಕ್ಷತೆ ಬಗ್ಗೆ ಉಲ್ಲೇಖಗಳನ್ನ ಸೋದಾಹರಣವಾಗಿ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ವಿವರಿಸಿದರು.
ನವೆಂಬರ್ 30 ರ ಭಗವದ್ಗಿತೆಯ ಹನ್ನೊಂದನೇ ಅಧ್ಯಾಯದ ಸಾಮೂಹಿಕ ಪಠಣದ ಮಹಾಸಮರ್ಪಣೆ ಕಾರ್ಯದಲ್ಲಿ ವಿದ್ಯಾರ್ಥಿಗಳೆಲ್ಲರೂ ಭಾಗಿಗಳಾಗಲು ಪೂಜ್ಯಶ್ರೀಗಳು ಕರೆಕೊಟ್ಟರು.
ಭಗವದ್ಗೀತಾ ಅಭಿಯಾನದ ಶಿವಮೊಗ್ಗ ಜಿಲ್ಲಾ ಸಮಿತಿ ಕಾರ್ಯಾಧ್ಯಕ್ಷ ರು ,ಹಿರಿಯ ವಕೀಲರೂ ಆಗಿರುವ ಅಶೋಕ ಜಿ ಭಟ್ ಪ್ರಸ್ತಾವನಾ ಭಾಷಣ ಮಾಡಿದರು.
ಉದ್ದಿಮೆಯಲ್ಲಿ ಮಾಲೀಕ ಮತ್ತು ಶ್ರಮಿಕರ ನಡುವೆ ಕಾರ್ಯನಿರ್ವಹಣೆಯು
ಸವಾಲಾತ್ಮಕ ಸನ್ನಿವೇಶಗಳನ್ನ ಸೃಷ್ಟಿಸುತ್ತದೆ. ಅಂತಹ
ಕ್ಲಿಷ್ಟಕರ ಸಂದರ್ಭದಲ್ಲಿ ಕರ್ಮಣ್ಯೇವಾಧಿಕಾರಸ್ತೆ ಮಾ ಫಲೇಷು ಕದಾಚನಾ ಎಂಬ ಸಂದೇಶ ಈ ಪ್ರಸಂಗದಲ್ಲಿ ಹೇಗೆ ಆಗಿನ ಮನೋಸ್ಥಿತಿ ಇರಬೇಕು ಎಂಬುದನ್ನ ಸೂಕ್ತವಾಗಿ ತಿಳಿಸುತ್ತದೆ. ಎಂದರು.
ವಿಷಯ ಪರಿಣಿತರಾಗಿ
ಬೆಂಗಳೂರಿನ ಮ್ಯಾನೇಜ್ಮೆಂಟ್ ಗುರು ಪ್ರೊ. ವೆಂಕಟ ಸುಬ್ರಮಣಿಯನ್ ಪ್ರಧಾನ ಭಾಷಣ ಮಾಡಿದರು.
ಏರಿಳಿತ, ಅನಿಶ್ಚಿತತೆ, ಸಂಕೀರ್ಣತೆ, ಮತ್ತು
ಸಂಧಿಗ್ದತೆಗಳ (VUCA) ನಡುವೆ ಇರುವ ನಮ್ಮ ಬದುಕಿನಿಂದ ನಿಧಾನವಾಗಿ ಬಿಡಿಸಿಕೊಂಡು ಬರಬೇಕಾದರೆ ನಮಗೆ ಒಂದು ವಿದ್ಯೆಯ ಸಹಾಯ ಬೇಕು . ಜಗತ್ತಿನಲ್ಲಿ
ಪ್ರಸ್ತುತವಿರುವ ಶೈಕ್ಷಣಿಕ ವ್ಯವಸ್ಥೆ
ಅದನ್ನ ಒಳಗೊಂಡಿದೆಯೆ? ಎಂಬುದು ಪ್ರಶ್ನಾರ್ಥಕವಾಗಿದೆ.
ಆ ತಿಳುವಳಿಕೆಯ ನಮ್ಮ ಭಾರತೀಯ ಜ್ಞಾನವಂತಿಕೆಯಲ್ಲಿ ಸಿಗುತ್ತದೆ.ಈ ಜ್ಞಾನವನ್ನ
ಭಗವದ್ಗೀತೆಯು ನಮಗೆ ನೀಡುತ್ತದೆ. ಎಂದು ಹೇಳಿದರು.
ಉದ್ಯೋಗ ಕ್ಷೇತ್ರ ಮತ್ತು ಮಾನವ ಸಂಪನ್ಮೂಲಗಳ ನಿರ್ವಹಣೆ ಗೀತೆಯಲ್ಲಿ ಸಂದೇಶವಿದೆ ಎಂದು ತಿಳಿಸಿದರು.
ಯುದ್ಧರಂಗದಲ್ಲಿ ಅರ್ಜುನ
ಕೃಷ್ಣನನ್ನ ಸಂಪೂರ್ಣ ಗುರುವಾಗಿ ಒಪ್ಪಿಕೊಂಡ ನಂತರ
ಆವನಿಗೆ ಅಂತರಂಗದಲ್ಲಿನ
ಭಯ ನಿವಾರಣೆ ಆಯಿತು.
ಯಾವ ವಿಚಾರದಲ್ಲೂ ಗೊಂದಲ ಇರಬಾರದು.ಆಗ ನಮ್ಮನ್ನ ನಾವೇ ನಿರ್ವಹಿಸಲು ಸಾಧ್ಯ ಎಂದು ಗೀತೆಯಲ್ಲಿನ ಹಲವು ಶ್ಲೋಕಗಳಲ್ಲಿ ತಿಳಿದು ಬರುವ ಅರ್ಥ ಭಾವಗಳನ್ನ ವಿವರಿಸಿದರು.
ಶಾಸಕ ಮತ್ತು ಅಭಿಯಾನ ಶಿವಮೊಗ್ಗ ಜಿಲ್ಲಾ ಸಮಿತಿಯ
ಅಧ್ಯಕ್ಷ ಡಿ.ಎಸ್.ಅರುಣ್ ಅವರು ಮಾತನಾಡಿ ‘ ಮೌಲ್ಯಾಧಾರಿತ ಶಿಕ್ಷಣ ಇವತ್ತು
ಅಗತ್ಯವಿದೆ.ಈಗ ಇಟೆಲಿಜೆಂಟ್ ಕೋಷಂಟ್ ಜಾಸ್ತಿಯಾಗಿ ಎಮೋಷನಲ್ ಕೋಷಂಟ್ ಕಡಿಮೆಯಾಗಿದೆ. ಅದನ್ನ ತುಂಬಿಕೊಡುವಲ್ಲಿ ಭಗವದ್ಗೀತೆ
ಒಂದು ಕೊಂಡಿಯಾಗಿದೆ. ಎಂದರು.
ಜನಶಿಕ್ಷಣ ಸಂಸ್ಥೆಯ ಮುಖ್ಯಸ್ಥೆ ಹಾಗೂ ಪೆಸಿಟ್ ಶಿಕ್ಷಣ ಸಂಸ್ಥೆಯ ನಿರ್ದೇಶಕಿ
ಶ್ರೀಮತಿ ಅರುಣಾದೇವಿ ಅವರು
ಮಾತನಾಡಿ ನಮಗೆ ಮೊದಲ
ಮ್ಯಾನೇಜ್ಮೆಂಟ್ ಗುರುಗಳೆಂದರೆ
ನಮ್ಮ ನಮ್ಮ ತಂದೆತಾಯಂದಿರು. ಅವರು ಬಾಳಿದ,ವ್ಯವಹರಿಸಿದ ದೈನಂದಿನ ಚಟುವಟಿಕೆಯನ್ನ ಗಮನವಿಟ್ಟು ನೋಡಿದರೆ ನಾವು ದೊಡ್ಡವರಾದ ಮೇಲೆ ಅನುಸರಿಸಬೇಕಾದ ಪಾಠಗಳು ಸಿಗುತ್ತವೆ ಎಂದರು.
ಭಗವದ್ಗೀತೆಯ ಹೊಳಹುಗಳ ಆಧರಿಸಿ ಮ್ಯಾನೇಜ್ಮೆಂಟ್ ನಿರ್ವಹಣೆ ಬಗ್ಗೆ ಸೂಕ್ತ ಪಠ್ಯ ನಿರ್ಮಿಸಿದರೆ ಅಂತಹ ಅದ್ಯಯನದ ಕೋರ್ಸ್ ಗಳನ್ನ ತಮ್ಮ ಪೆಸಿಟ್ ಸಂಸ್ಥೆಯಲ್ಲಿ ಆರಂಭಿಸಲು ಸಾಧ್ಯ ಎಂಬ ಅಪೇಕ್ಷೆಯನ್ನ ವ್ಯಕ್ತಪಡಿಸಿದರು.
ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಮುಕ್ತಾಯವಾಯಿತು.
DVS College of Arts and Science ಡಿವಿಎಸ್ ಸಂಸ್ಥೆಯು ಶಿಕ್ಷಣಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದೆ- ರಮೇಶ್
DVS College of Arts and Science ವಿದ್ಯಾರ್ಥಿಗಳು ನಿರಂತರ ಪರಿಶ್ರಮ ವಹಿಸಿ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಜೀವನದಲ್ಲಿ ಉನ್ನತ ಸಾಧನೆ ಮಾಡಬಹುದು ಎಂದು ಶಿವಮೊಗ್ಗ ಕ್ಷೇತ್ರ ಶಿಕ್ಷಣಾಧಿಕಾರಿ ರಮೇಶ್ ಹೇಳಿದರು.
ನಗರದ ಕುವೆಂಪು ರಂಗಮಂದಿರದಲ್ಲಿ ದೇಶೀಯ ವಿದ್ಯಾಶಾಲಾ ಸಮಿತಿಯ ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವತಿಯಿಂದ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ 2025 ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಡಿವಿಎಸ್ ಸಂಸ್ಥೆಯು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಸೇವೆ ಸಲ್ಲಿಸುತ್ತಿದ್ದು, ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಯಲ್ಲಿ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಪೂರಕವಾದ ವಾತಾವರಣ ಸೃಷ್ಟಿಸಿದೆ. ಈ ಸಂಸ್ಥೆಯಲ್ಲಿ ಅಧ್ಯಯನ ನಡೆಸಿದ ಸಾವಿರಾರು ವಿದ್ಯಾರ್ಥಿಗಳು ಉನ್ನತ ಸ್ಥಾನ ಅಲಂಕರಿಸಿ ಸಮಾಜದ ಸೇವೆ ಸಲ್ಲಿಸುತ್ತಿದ್ದಾರೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಸಂಸ್ಥೆ ಒದಗಿಸುವ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಮೂಲಕ ಉತ್ತಮ ಅಂಕಗಳನ್ನು ಗಳಿಸಬೇಕು. ನಿಮ್ಮ ಆಸಕ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು.
DVS College of Arts and Science ದೇಶೀಯ ವಿದ್ಯಾಶಾಲಾ ಸಮಿತಿ ಕಾರ್ಯದರ್ಶಿ ಎಸ್.ರಾಜಶೇಖರ್ ಮಾತನಾಡಿ, ಡಿವಿಎಸ್ ಶಾಲಾ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿಗಳು ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಸಾಧನೆ ಮಾಡಿದ್ದಾರೆ. ನೀವೂ ಸಹ ದೊಡ್ಡ ಕನಸನ್ನು ಕಂಡು ಸಾಕಾರಗೊಳಿಸಬೇಕು. ಒಳ್ಳೆಯ ಜೀವನ ರೂಪಿಸಿಕೊಳ್ಳಬೇಕು. ವಿದ್ಯಾರ್ಥಿಗಳಿಗೆ ಅವಶ್ಯವಿರುವ ಎಲ್ಲ ಮಾರ್ಗದರ್ಶನವನ್ನು ಸಂಸ್ಥೆ ನೀಡುತ್ತದೆ ಎಂದು ತಿಳಿಸಿದರು.
ದೇಶೀಯ ವಿದ್ಯಾಶಾಲಾ ಸಮಿತಿ ಅಧ್ಯಕ್ಷ ಕೆ.ಎನ್.ರುದ್ರಪ್ಪ ಕೊಳಲೆ ಅಧ್ಯಕ್ಷತೆ ವಹಿಸಿದ್ದರು. ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ವಿದ್ಯಾರ್ಥಿಗಳು ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ದೇಶೀಯ ವಿದ್ಯಾಶಾಲಾ ಸಮಿತಿ ಉಪಾಧ್ಯಕ್ಷ ಎಸ್.ಪಿ.ದಿನೇಶ್, ಸಹ ಕಾರ್ಯದರ್ಶಿ ಡಾ. ಎ.ಸತೀಶ್ ಕುಮಾರ್ ಶೆಟ್ಟಿ, ಡಿವಿಎಸ್ ಸಂಯುಕ್ತ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಚಾರ್ಯ ಸಿ.ಕೆ.ಶ್ರೀಧರ್, ಉಪನ್ಯಾಸಕರು, ಸಿಬ್ಬಂದಿ ವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
Dr. Gajanana Sharma ಸಾಹಿತಿ ಡಾ.ಗಜಾನನ ಶರ್ಮ ಅವರಿಗೆ ” ನವಿಲುಗರಿ” ಪ್ರಶಸ್ತಿ ಪ್ರದಾನ ಸಮಾರಂಭ.
Dr. Gajanana Sharma ದಿನಾಂಕ ೨೮ನೇ ನವೆಂಬರ್ ೨೦೨೫ರ ಶುಕ್ರವಾರÀ, ಸಂಜೆ ೫:೩೦ಕ್ಕೆ ಕರ್ನಾಟಕ ಸಂಘದ ಹಸೂಡಿ ವೆಂಕಟ ಶಾಸ್ತಿç ಸಾಹಿತ್ಯ ಭವನದಲ್ಲಿ ಅಧ್ಯಕ್ಷರಾದ ಪ್ರೊ. ಹೆಚ್.ಆರ್. ಶಂಕರನಾರಾಯಣ ಶಾಸ್ತಿç ಇವರ ಅಧ್ಯಕ್ಷತೆಯಲ್ಲಿ “ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೫” ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ.
ಮೂಲತ: ಶಿವಮೊಗ್ಗ ಜಿಲ್ಲೆಯ, ಬೆಂಗಳೂರಿನಲ್ಲಿ ವಾಸವಿರುವ ಪ್ರಸಿದ್ಧ ಸಾಹಿತಿ, ನಟ, ನಾಟಕಕಾರ ಮತ್ತು ನಿರ್ದೇಶಕರಾದ ಡಾ. ಗಜಾನನ ಶರ್ಮ ಅವರು ಕರ್ನಾಟಕ ಸಂಘ ನವಿಲುಗರಿ ಪ್ರಶಸ್ತಿ-೨೦೨೫ನ್ನು ಸ್ವೀಕರಿಸಲಿದ್ದಾರೆ.
Dr. Gajanana Sharma ವಿದ್ವಾನ್ ಜಿ.ಎಸ್. ನಟೇಶ್, ಚಿಂತಕರು ಮತ್ತು ಉಪನ್ಯಾಸಕರು, ಶಿವಮೊಗ್ಗ ಇವರು ಡಾ. ಗಜಾನನ ಶರ್ಮ ಅವರ ಕುರಿತು ಅಭಿನಂದನಾ ನುಡಿಗಳನ್ನಾಡಲಿದ್ದಾರೆ.
ಆಸಕ್ತರು ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕೆಂದು ಈ ಮೂಲಕ ವಿನಂತಿಸಲಾಗಿದೆ
Dr. Nagalakshmi ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಲೈಂಗಿಕ ದೌರ್ಜನ್ಯ ಕಾಯಿದೆ ಜಾರಿ ಮಾಡಿ- ಡಾ.ನಾಗಲಕ್ಷ್ಮಿ ಚೌಧರಿ.
Dr. Nagalakshmi ಮಹಿಳೆ ಕೆಲಸದ ಸ್ಥಳದಲ್ಲಿ ನೆಮ್ಮದಿಯಾಗಿ ಕರ್ತವ್ಯ ನಿರ್ವಹಿಸಲು ಎಲ್ಲಾ ಸರ್ಕಾರಿ, ಖಾಸಗಿ ಸಂಸ್ಥೆಗಳಲ್ಲಿ ಕಡ್ಡಾಯವಾಗಿ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013’ ಜಾರಿಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮಿ ಚೌದರಿ ತಿಳಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಪೊಲೀಸ್ ಇಲಾಖೆ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ‘ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013’ ರ ಕುರಿತಾದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಒಂದು ಕಚೇರಿಯಲ್ಲಿ 10 ಕ್ಕಿಂತ ಕಡಿಮೆ ಸಂಖ್ಯೆಯಲ್ಲಿರುವ ಮಹಿಳಾ ನೌಕರರು ಹಾಗೂ ಅಸಂಘಟಿತ ಮಹಿಳಾ ಕಾರ್ಮಿಕರು ಜಿಲ್ಲಾಡಳಿತ ಕಚೇರಿಯಲ್ಲಿರುವ ಸ್ಥಳೀಯ ದೂರು ಸಮಿತಿಯ ಅಡಿ ಬರಲಿದ್ದು ಅಲ್ಲಿ ಅವರು ದೂರು ನೀಡಬಹುದಾಗಿದ್ದು ಸ್ಥಳೀಯ ಸಮಿತಿ ಅಧ್ಯಕ್ಷರು ಜಿಲ್ಲಾದ್ಯಂತ ಈ ಸಮಿತಿ ಬಗ್ಗೆ ಅರಿವು ಮೂಡಿಸಬೇಕು.
ಅರಿವು ಬದುಕು, ಅಜ್ಞಾನ ಸಾವು. ಮಹಿಳೆಯರು ಅರಿವನ್ನು ಪಡೆಯಬೇಕು. ಶಿಕ್ಷಣಕ್ಕೆ ದೊಡ್ಡ ಶಕ್ತಿ ಇದ್ದು, ಉತ್ತಮ ಶಿಕ್ಷಣ ಪಡೆದು ಎಲ್ಲ ಕ್ಷೇತ್ರದಲ್ಲಿ ಮುಂದೆ ಬರಬೇಕು. ಹೆಣ್ಣು ಈ ಸಮಾಜದಲ್ಲಿ ಧೈರ್ಯದಿಂದ ಹಾಗೂ ಗೌರವಯುತವಾಗಿ ಬದುಕುತ್ತಿದ್ದಾಳೆ ಎಂದರೆ ಅದಕ್ಕೆ ಅಂಬೇಡ್ಕರ್ ಅವರ ಸಂವಿಧಾನವೇ ಕಾರಣ.
ಹೆಣ್ಣುಮಕ್ಕಳು ಆರೋಗ್ಯವಾಗಿರಬೇಕು, ನೆಮ್ಮದಿಯಿಂದ ಕಾರ್ಯವೆಸಗಬೇಕೆಂದು ಆಂತರಿಕ ದೂರು ಸಮಿತಿಯನ್ನು ರಚಿಸಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿರುವ ಹಿನ್ನೆಲೆ ಸಮಿತಿಗಳನ್ನು ರಚಿಸಲಾಗಿದೆ. ಕಚೇರಿಯಲ್ಲಿ ಯಾವುದೇ ಸಮಸ್ಯೆಗಳಿದ್ದರೆ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕು.
Dr. Nagalakshmi ಹೆಣ್ಣುಮಕ್ಕಳ ಯಾವುದೇ ಸಮಸ್ಯೆಗಳನ್ನು ಆಲಿಸಿ ಸ್ಪಂದಿಸಲು ಮಹಿಳಾ ಸಹಾಯವಾಣಿ ಸಂಖ್ಯೆ 181 ಇದ್ದು ಇದನ್ನು ಬಳಕೆ ಮಾಡಿಕೊಳ್ಳಬೇಕು. ಲೈಂಗಿಕ ದೌರ್ಜನ್ಯದ ಸಂತ್ರಸ್ತರಿಗೆ ‘ಸಖಿ’ ಕೇಂದ್ರದಲ್ಲಿ ಎಲ್ಲ ರೀತಿಯ ಸಹಾಯ ಲಭ್ಯವಿದೆ.
ಮಹಿಳೆಯರು ಸರ್ಕಾರ ನೀಡುತ್ತಿರುವ ಎಲ್ಲಾ ಸೌಲಭ್ಯಗಳ ಬಗ್ಗೆ ತಿಳಿದುಕೊಂಡು ಬಳಸಿಕೊಳ್ಳಬೇಕು. ಎಲ್ಲಾ ಮಹಿಳಾ ನೌಕರರಿಗೆ ಸರ್ಕಾರ ತಿಂಗಳಲ್ಲಿ ಒಂದು ದಿನ ಋತುಚಕ್ರ ರಜೆ ಘೋಷಿಸಿದೆ. ಮೇಲಾಧಿಕಾರಿಗಳು ಈ ರಜೆಯನ್ನು ನೀಡುವಲ್ಲಿ ಯಾವುದೇ ರೀತಿಯ ತೊಂದರೆ ನೀಡುವ ಹಾಗಿಲ್ಲ ಎಂದರು.
ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಂಡ ಸುಂದರ ರಾಜನ್ ಆಂತರಿಕ ದೂರು ಸಮಿತಿ ಕುರಿತು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಂ.ಎಸ್ ಸಂತೋಷ್, ಜಿ.ಪಂ ಉಪ ಕಾರ್ಯದರ್ಶಿಗಳಾದ ಸುಜಾತ, ಅನ್ನಪೂರ್ಣಮ್ಮ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಅಧಿಕಾರಿ ಶಶಿರೇಖಾ, ಸ್ಥಳೀಯ ದೂರು ಸಮಿತಿ ಅಧ್ಯಕ್ಷೆ ರೇಖಾ, ಇತರೆ ಅಧಿಕಾರಿ, ನೌಕರರು ಹಾಜರಿದ್ದರು.
Dr. Nagalakshmi ಮಹಿಳೆಯರೊಂದಿಗೆ ಸೂಕ್ಷ್ಮವಾಗಿ ನಡೆದುಕೊಳ್ಳಿ- ಡಾ.ನಾಗಲಕ್ಷ್ಮಿ ಚೌಧರಿ.
Dr. Nagalakshmi ಪೊಲೀಸರು ಹೆಣ್ಣುಮಕ್ಕಳೊಂದಿಗೆ ಸೂಕ್ಷö್ಮತೆ ಮತ್ತು ಸಮಾಧಾನದಿಂದ ನಡೆದುಕೊಳ್ಳಬೇಕು. ಹಾಗೂ ಅವರಿಗೆ ಆಪ್ತಸಮಾಲೋಚನಾ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ಡಾ.ನಾಗಲಕ್ಷ್ಮಿ ಚೌಧರಿ ಸೂಚಿಸಿದರು.
ಕರ್ನಾಟಕ ರಾಜ್ಯ ಮಹಿಳಾ ಆಯೋಗ ಬೆಂಗಳೂರು, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿವಮೊಗ್ಗ ಇವರ ಸಂಯುಕ್ತಾಶ್ರಯದಲ್ಲಿ ಜಿ.ಪಂ. ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಲೈಂಗಿಕ ದೌರ್ಜನ್ಯ ತಡೆ ಕಾಯ್ದೆ 2013(POSH) ಅನುಷ್ಟಾನ, ಮಹಿಳಾ ಸ್ಪಂದನ ಮತ್ತು ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪೊಲೀಸರು ಮಹಿಳೆಯರು, ಮಕ್ಕಳಸ್ನೇಹಿ ಮತ್ತು ಜನಸ್ನೇಹಿಯಾಗಿರಬೇಕು, ಸ್ಥಳೀಯ ಠಾಣೆಗಳಲ್ಲಿ ಹೆಣ್ಣು ಮಕ್ಕಳೊಂದಿಗೆ ಸಮಾಧಾನ, ಸೂಕ್ಷ್ಮತೆಯಿಂದ ನಡೆದುಕೊಳ್ಳಬೇಕು. ಪೊಲೀಸ್ ಸಿಬ್ಬಂದಿಗಳಿಗೆ ಆಪ್ತಸಮಾಲೋಚನಾ ತರಬೇತಿಯನ್ನು ಕಡ್ಡಾಯವಾಗಿ ಮಾಡಿಸಬೇಕು. ತರಬೇತಿ ನೀಡಿದ ಬಗ್ಗೆ ಆಯೋಗಕ್ಕೆ ವರದಿ ನೀಡಬೇಕು ಎಂದ ಅವರು ಹೆಣ್ಣು ಮಕ್ಕಳು ಸಹ ಪೊಲೀಸ್ ಠಾಣೆಗಳ ಬಗ್ಗೆ ಭಯ ತೊರೆದು ಉತ್ತಮ ಸಂಬAಧ ಹೊಂದಬೇಕು ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕಿ ಭಾರತಿ ಬಣಕಾರ್ ಮಾತನಾಡಿ, ಜಿಲ್ಲೆಯಲ್ಲಿ 3612 ಸರ್ಕಾರಿ ಕಚೇರಿಗಳಿದ್ದು 10 ಜನಕ್ಕಿಂತ ಹೆಚ್ಚು ಮಹಿಳೆಯರು ಕಾರ್ಯ ನಿರ್ವಹಿಸುತ್ತಿರುವ 1050 ಕಚೇರಿಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲಾಗಿದೆ ಎಂದರು.
ಅಧ್ಯಕ್ಷರು, ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹೆಣ್ಣುಮಕ್ಕಳು, ಹಿರಿಯ ಅಧಿಕಾರಿಗಳು, ಸಹೋದ್ಯೋಗಿಗಳು ಯಾವುದೇ ರೀತಿಯಲ್ಲಿ ದೈಹಿಕ, ಮಾನಸಿಕ ದೌರ್ಜನ್ಯ, ಕಿರುಕುಳ ನೀಡುತ್ತಿದ್ದರೆ ಯಾವುದೇ ಭಯ-ಆತಂಕಕ್ಕೆ ಒಳಗಾಗದೇ ಆಂತರಿಕ ದೂರು ಸಮಿತಿಗೆ ದೂರು ನೀಡಬೇಕೆಂದು ತಿಳಿಸಿದರು.
Dr. Nagalakshmi ಮೆಗ್ಗಾನ್ ಆಸ್ಪತ್ರೆಯಲ್ಲಿ ಓಪಿಡಿ, ಔಷಧಿ ಕೌಂಟರ್ಗಳ ಬಳಿ ಗರ್ಭಿಣಿಯರು, ಮಕ್ಕಳು ಸರತಿ ಸಾಲಿನಲ್ಲಿ ತುಂಬಾ ಹೊತ್ತು ನಿಲ್ಲುವ ಸ್ಥಿತಿ ಇದ್ದು, ಹೆಚ್ಚುವರಿ ಕೌಂಟರ್ನ್ನು ತೆರೆಯಲು ಕೂಡಲೇ ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಮೆಗ್ಗಾನ್ ಆಸ್ಪತ್ರೆ ಸೇರಿದಂತೆ ತಾಲ್ಲೂಕು ಆಸ್ಪತ್ರೆಗಳು, ಪಿಹೆಚ್ಸಿ, ಸಿಹೆಚ್ಸಿ ಗಳ ಎಲ್ಲ ಹೊರಗುತ್ತಿಗೆ ನೌಕರರಿಗೆ ನಿಯಮಿತವಾಗಿ ಪಿಎಫ್ ಮತ್ತು ಇಎಸ್ಐ ಸೌಲಭ್ಯ ನೀಡಿರುವ ವರದಿ ನೀಡುವಂತೆ ತಿಳಿಸಿದರು.
ಶೌಚಾಲಯ ನಿರ್ಮಿಸಿ : ಮೆಗ್ಗಾನ್ ಆಸ್ಪತ್ರೆಯ ಮಹಿಳಾ ಜನರಲ್ ವಾರ್ಡಿನಲ್ಲಿ ಮಹಿಳೆಯರಿಗೆ ಶೌಚಾಲಯ ಇಲ್ಲದೇ ಮಹಿಳೆಯರು ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ. ವಾರ್ಡಿನಿಂದ ಹೊರಗಡೆ ಹೋಗಿ ಅಲ್ಲಿರುವ ಶೌಚಾಲಯ ಬಳಕೆ ಮಾಡಿ ಮತ್ತೆ ವಾರ್ಡಿಗೆ ಬರಬೇಕು. ಆದ್ದರಿಂದ ಶೀಘ್ರದಲ್ಲೇ ವಾರ್ಡಿನಲ್ಲಿ ಶೌಚಾಲಯ ವ್ಯವಸ್ಥೆ ಮಾಡುವಂತೆ ಸೂಚನೆ ನೀಡಿದರು.
ಕೂಡಲೇ ಲೈಟ್ ಹಾಕಿಸಿ : ನೆಹರು ಸ್ಟೇಡಿಯಂ ನ ಒಳಗೆ ವ್ಯವಸ್ಥಿತವಾದ ಬೆಳಕು ಇಲ್ಲ. ಸಂಜೆ ಆಗುತ್ತಿದ್ದ ಹಾಗೆ ಸಂಪೂರ್ಣ ಕತ್ತಲು ಆವರಿಸುತ್ತಿದೆ. ಕ್ರೀಡಾ ವಸತಿ ನಿಲಯದ ಹೆಣ್ಣುಮಕ್ಕಳು À ಕತ್ತಲಲ್ಲೇ ಅಭ್ಯಾಸ ಮಾಡುತ್ತಿದ್ದು, ಈ ಕೂಡಲೇ ಲೈಟ್ಗಳನ್ನು ಹಾಕಿಸಿ, ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ಸಿಸಿ ಟಿವಿ ಕಡ್ಡಾಯವಾಗಿ ಅಳವಡಿಸಬೇಕು. ಕುಡಿಯುವ ನೀರು, ಶೌಚಾಲಯ, ಲೈಟ್ಗಳು, ಕ್ರೀಡಾ ವಸತಿನಿಲಯಗಳಲ್ಲಿ ವಿದ್ಯಾರ್ಥಿಗಳಿಗೆ ಕಬೋರ್ಡ್, ಹೆಣ್ಣುಮಕ್ಕಳಿಗೆ ಸ್ಯಾನಿಟರಿ ಪ್ಯಾಡ್ ನೀಡುವುದು ಸೇರಿದಂತೆ ಸಣ್ಣಪುಟ್ಟ ದೋಷಗಳನ್ನು ಸರಿಪಡಿಸಿಕೊಳ್ಳಬೇಕು ಎಂದು ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರಿಗೆ ಸೂಚನೆ ನೀಡಿದರು.
ತಂದೆ ರೀತಿ ಜವಾಬ್ದಾರಿ ವಹಿಸಿ : ಸಕ್ರೆಬೈಲು ಬಳಿಯ ಮೊರಾರ್ಜಿ ದೇಸಾಯಿ ವಸತಿ ನಿಲಯದ ಅವ್ಯವಸ್ಥೆ ಸರಿಪಡಿಸಬೇಕು. ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ಕಲ್ಯಾಣ ಇಲಾಖೆಗಳ ಮುಖ್ಯಸ್ಥರು ಪ್ರತಿ ಹಾಸ್ಟೆಲ್ಗಳಿಗೆ ಭೇಟಿ ನೀಡಿ ಮಕ್ಕಳ ಜೊತೆ ಮಾತನಾಡಬೇಕು. ಆಗ ಸಮಸ್ಯೆ ತಿಳಿಯುತ್ತದೆ. ನಿಯೋಜಿತ ಅಧಿಕಾರಿಗಳು ತಂದೆ ರೀತಿ ಹಾಸ್ಟೆಲ್ಗಳ ಜವಾಬ್ದಾರಿ ವಹಿಸಬೇಕು. ವಾರ್ಡನ್ಗಳು ಮಕ್ಕಳೊಂದಿಗೆ ಉತ್ತಮ ರೀತಿಯಲ್ಲಿ ನಡೆದುಕೊಳ್ಳಬೇಕು. ಹಾಸ್ಟೆಲ್ನಲ್ಲಿನ ಕಂಪ್ಯೂಟರ್ಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ನೋಡಿಕೊಳ್ಳಬೇಕು. ಹಾಗೂ ಉತ್ತಮ ಆಹಾರ ನೀಡಬೇಕು. ಜಿಲ್ಲಾಧಿಕಾರಿ ಸೇರಿದಂತೆ ಸಂಬAಧಿಸಿದ ಅಧಿಕಾರಿಗಳ ಹೆಸರನ್ನು ಹಾಸ್ಟೆಲ್ ಫಲಕದಲ್ಲಿ ಬರೆಸುವಂತೆ ಸೂಚನೆ ನೀಡಿದ ಅವರು ಏನಾದರೂ ಸಮಸ್ಯೆಗಳಿದ್ದಲ್ಲಿ ವಿದ್ಯಾರ್ಥಿಗಳು ಸಂಬAಧಿಸಿದ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಬಹುದು ಎಂದರು.
ಬಾಣAತಿ ಸಾವು ತಗ್ಗಿಸಿ : ಡಿಹೆಚ್ಓ ಡಾ. ನಟರಾಜ್ ಮಾತನಾಡಿ ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನ ಇಲ್ಲಿಯವರೆಗೆ 12 ಬಾಣಂತಿಯರ ಸಾವು ಸಂಭವಿಸಿದ್ದು, 9 ನಮ್ಮ ಜಿಲ್ಲೆ ಮತ್ತು 03 ಹೊರ ಜಿಲ್ಲೆಯ ಪ್ರಕರಣಗಳಾಗಿವೆ. ಬಿಪಿ, ಹಿಮೊಗ್ಲೋಬಿನ್ ಕೊರತೆ, ರಕ್ತಸ್ರಾವ ಸೇರಿದಂತೆ ಇತರೆ ಸಂಕೀರ್ಣತೆಗಳಿAದ ಸಾವು ಸಂಭವಿಸುತ್ತಿದೆ ಎಂದರು.
ಅಧ್ಯಕ್ಷರು, ಬಾಣಂತಿ ಸಾವು ನಿಯಂತ್ರಣ ಮಾಡಲು ಪರಿಣಾಮಕಾರಿಯಾದ ಕ್ರಮಗಳನ್ನು ಕೈಗೊಳ್ಳಬೇಕು. ಸೂಕ್ತ ಔಷಧೋಪಚಾರ ಮತ್ತು ಚಿಕಿತ್ಸೆ ನೀಡಬೇಕು. ಶಿವಮೊಗ್ಗದಲ್ಲಿ ಬಾಣಂತಿ ಸಾವು ಪ್ರಕ್ರರಣಗಳು ಪೂರ್ಣವಾಗಿ ತಗ್ಗಬೇಕು. ನರ್ಸ್ಗಳಿಗೆ ಬಾಣಂತಿ ರಕ್ತಸ್ರಾವ ತಗ್ಗಿಸುವ ಕುರಿತಾದ ತರಬೇತಿಯನ್ನು ಕಡ್ಡಾಯವಾಗಿ ನೀಡಬೇಕೆಂದು ತಿಳಿಸಿದರು.
ಜಿಲ್ಲೆಯಲ್ಲಿ ನಾಪತ್ತೆಯಾಗಿ ಸುಳಿವು ಪತ್ತೆಯಾಗದ ಮಹಿಳೆಯರ ವಿವರವನ್ನು ಆಯೋಗಕ್ಕೆ ನೀಡಬೇಕು. ಸಮರ್ಥ ಸೇತು ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲಾ ಕಾಲೇಜುಗಳಲ್ಲಿ ಕೈಗೊಳ್ಳಬೇಕು ಎಂದು ಎಸ್ಪಿ ಯವರಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಓಸಿ ಮತ್ತು ಡ್ರಗ್ಸ್ ದಂಧೆ ಹಾಗೂ ಗ್ರಾಮೀಣ ಭಾಗದಲ್ಲಿ ಹೆಂಡ ಮಾರಾಟ ಹೆಚ್ಚಿದೆ ಎಂಬ ಮಾಹಿತಿ ದೊರೆತಿದ್ದು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು ದೊಡ್ಡ ಮಟ್ಟದಲ್ಲಿ ಇದಕ್ಕೆಲ್ಲ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದರು.
ಎಸ್ಪಿ ಮಿಥುನ್ ಕುಮಾರ್ ಮಾತನಾಡಿ, ಜಿಲ್ಲೆಯಲ್ಲಿ 2023 ರಲ್ಲಿ 454 ಮಹಿಳೆಯರ ನಾಪತ್ತೆ ಪ್ರಕರಣ ದಾಖಲಾಗಿದ್ದು 450 ಮಹಿಳೆಯರನ್ನು ಪತ್ತೆ ಹಚ್ಚಿದ್ದು 8 ಮಹಿಳೆಯರು ಪತ್ತೆಯಾಗಿಲ್ಲ, 2024 ರಲ್ಲಿ 506 ನಾಪತ್ತೆ ಪ್ರಕರಣದಲ್ಲಿ 497 ಪತ್ತೆ ಹಚ್ಚಿದ್ದು, 11 ಪತ್ತೆಯಾಗಿಲ್ಲ. 2025 ರಲ್ಲಿ 395 ನಾಪತ್ತೆ ಪ್ರಕರಣದಲ್ಲಿ 374 ಪತ್ತೆ ಹಚ್ಚಿದ್ದು, 27 ಪ್ರಕರಣ ಪತ್ತೆಯಾಗಿಲ್ಲವೆಂದು ವರದಿ ನೀಡಿದರು.
ಹಾಗೂ ನಗರದ ಶಾಲಾ-ಕಾಲೇಜು, ಸಾರ್ಜಜನಿಕ ಸ್ಥಳಗಳಲ್ಲಿ ಚೆನ್ನಮ್ಮ ಪಡೆ ಕಳೆದ ವರ್ಷದಿಂದ ಕೆಲಸ ಮಾಡುತ್ತಿದೆ. ರಸ್ತೆ ಸುರಕ್ಷತೆ, ಮಹಿಳೆಯರ ಸುರಕ್ಷತೆ, ಸೈಬರ್ ಕ್ರೆöÊಂ ಕುರಿತು ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದರು.
ಜಿ.ಪಂ. ಸಿಇಓ ಹೇಮಂತ್ ಎನ್ ಮಾತನಾಡಿ, ಜಿಲ್ಲೆಯಲ್ಲಿ ಮಹಾತ್ಮಾ ಗಾಂಧಿ ನರೇಗಾ ಯೋಜನೆಯಡಿ ಶೇ 75.59 ಪ್ರಗತಿ ಸಾಧಿಸಲಾಗಿದೆ. ಶೇ .55.73 ಮಹಿಳೆಯರ ಭಾಗವಹಿಸುವಿಕೆ ಇದೆ ಎಂದರು.
ಕೋಟೆಗಂಗೂರು, ಹರಮಘಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳು ತಮ್ಮ ಊರಿಗೆ ಬಸ್ ಇಲ್ಲದೇ ವಿದ್ಯಾಸಂಸ್ಥೆಗೆ ಬರುವುದು ಕಷ್ಟವಾಗುತ್ತಿದೆ ಎಂದು ದೂರಿತ್ತಿದ್ದು ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು.
ಕೂಡಿ ಬಾಳೋಣ ಕಾರ್ಯಕ್ರಮ ಮಾಡಿ : ರಾಷ್ಟ್ರೀಯ ಮಹಿಳಾ ಆಯೋಗದಡಿ ಕೈಗೊಳ್ಳಲಾಗಿರುವ ‘ಕೂಡಿ ಬಾಳೋಣ’ ಎಂಬ ವಿವಾಹ ಪೂರ್ವ ಆಪ್ತ ಸಮಾಲೋಚನೆಯಂತಹ ಚಟುವಟಿಕೆಯನ್ನು ಜಿಲ್ಲೆಯಲ್ಲಿಯೂ ಕೈಗೊಳ್ಳಬೇಕು. ಇಲ್ಲಿ ವಿವಾಹ ಪೂರ್ವದಲ್ಲಿ ಗಂಡು ಮತ್ತು ಹೆಣ್ಣಿನ ಎರಡೂ ಕುಟುಂಬಗಳು ಒಬ್ಬರನ್ನೊಬ್ಬರು ಅರಿಯುವ ಅವಕಾಶ ಲಭಿಸುವುದರಿಂದ ವಿಚ್ಚೇದನದಂತಹ ಪ್ರಕರಣಗಳು ಕಡಿಮೆಯಾಗಲಿವೆ ಎಂದರು.
ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಂತೋಷ್ ಎಂ.ಎಸ್. ಮಾತನಾಡಿ, ಕಾನೂನು ಸೇವಾ ಪ್ರಾಧಿಕಾರದಿಂದ ಮಹಿಳೆಯರಿಗೆ ಲಭ್ಯವಿರುವ ಉಚಿತ ಸೇವೆ, ಸೌಲಭ್ಯಗಳ ಕುರಿತು ತಿಳಿಸಿ, ಪ್ರಾಧಿಕಾರದ ಸೇವೆಯಿಂದಾಗಿ ಮಹಿಳಾ ಮಧ್ಯಸ್ಥಿಕೆ ಸಂಖ್ಯೆ ಹೆಚ್ಚಿದೆ, ಲೋಕ ಅದಾಲತ್ ನಿಂದಾಗಿ ಸಾವಿರಾರು ಪ್ರಕರಣಗಳು ರಾಜೀ ಸಂಧಾನದಿAದ ಇತ್ಯರ್ಥವಾಗುತ್ತಿವೆ. ಮಹಿಳೆಯರು ಕಾನೂನಿಗೆ ಸಂಬAಧಿಸಿದ ಏನಾದರೂ ಸಮಸ್ಯೆಗಳು ಇದ್ದಲ್ಲಿ ನಾಲ್ಸಾ ಸಹಾಯವಾಣಿ ಸಂಖ್ಯೆ 15100 ಕರೆ ಮಾಡಿ ಉಚಿತವಾಗಿ ಕಾನೂನಿನ ನೆರವು ಪಡೆಯಬಹುದು ಎಂದರು.
ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತೆಯೋರ್ವರು ಲಿಮಿಟೇಷನ್ ಅವಧಿ ಮೀರಿ ನೀಡಿದ್ದ ಅರ್ಜಿಯನ್ನು ಪ್ರಾಧಿಕಾರ ಪುರಸ್ಕರಿಸಿ ಅವರಿಗೆ ಪರಿಹಾರ ನೀಡಿದ ಬಗೆಯನ್ನು ವಿವರಿಸಿದರು.
ಅಧ್ಯಕ್ಷರು ಮಹಿಳೆಯರಿಗೆ ಕಾನೂನಿನ ಅರಿವು ಮತ್ತು ನೆರವು ನೀಡುವುದು ನಿಜವಾದ ಮಹಿಳಾ ಸಬಲೀಕರಣ. ಕಾನೂನು ಸೇವಾ ಪ್ರಾಧಿಕಾರ ಮಹಿಳೆಯರಿಗೆ ನ್ಯಾಯ ಒದಗಿಸುವಲ್ಲಿ ಉತ್ತಮ ಕಾರ್ಯವೆಸಗುತ್ತಿದೆ ಎಂದು ಶ್ಲಾಘಿಸಿದರು.
ಆಸಿಡ್ ದಾಳಿಗೆ ಒಳಗಾದ ಸಂತ್ರಸ್ತರು ಸಾಯುವವರೆಗೆ ಚಿಕಿತ್ಸೆ ಪಡೆಯುವ ಅವಶ್ಯಕತೆ ಇರುವುದರಿಂದ ಅವರಿಗೆ ಸಕ್ಷಮ ಪ್ರಾಧಿಕಾರವು ಸೂಕ್ತ ಪರಿಹಾರ ,ಸೌಲಭ್ಯ ನೀಡಬೇಕೆಂದರು.
54 ಲಕ್ಷ ಸೈಬರ್ ಕ್ರೈಮ್ ಮೂಲಕ ಹಣ ಕಳೆದುಕೊಂಡ ಸಂತ್ರಸ್ತೆ, ಮಹಿಳೆಯೋರ್ವರು ಮನೆಗೆ ಹೋಗಲು ರಸ್ತೆ ಇಲ್ಲವೆಂದು, ಆಸಿಡ್ ಸಂತ್ರಸ್ತರು ಪರಿಹಾರ ಕೋರಿ, ವಿಕಲಚೇತನರು ಮನೆ, ಕೆಲಸ ಬೇಕೆಂದು, ಮಹಿಳಾ ಪೇದೆ ಪತಿಯಿಂದ ದೌರ್ಜನ್ಯ ಹಾಗೂ ಅನೇಕ ಮಹಿಳಾ ದೌರ್ಜನ್ಯದ ಪ್ರಕರಣಗಳು, ಕೌಟುಂಬಿಕ ದೌರ್ಜನ್ಯ, ಖಾಸಗಿ ವಿಷಯಗಳು, ವಿವಿಧ ಇಲಾಖೆಗಳಿಗೆ ಸಂಬAಧಿಸಿದ ವಿಷಯಗಳು ಸೇರಿದಂತೆ 100 ಕ್ಕೂ ಹೆಚ್ಚು ಅರ್ಜಿದಾರರು ಅರ್ಜಿ ನೀಡಿದ್ದು, ಆಯುಕ್ತರು ಹಲವಾರು ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲೇ ಇದ್ದ ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿಗಳು, ಜಿಲ್ಲಾ ಕಾನೂನು ಸೇವಾ ಪ್ರಾಧಿಕರದ ಸದಸ್ಯ ಕಾರ್ಯದರ್ಶಿಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳ ಬಳಿ ಸೂಕ್ತ ಪರಿಹಾರ ಮತ್ತು ನಿರ್ದೇಶನ ನೀಡಲು ಸೂಚಿಸಿದರು.
ಜಿಲ್ಲಾ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಕಾರ್ಯದರ್ಶಿ ರೂಪಾ, ಜಿಲ್ಲಾಧಿಕಾರಿಗಳಾದ ಗುರುದತ್ತ ಹೆಗಡೆ, ಜಿ.ಪಂ ಸಿಇಓ ಹೇಮಂತ್ ಎನ್, ಎಸ್ ಪಿ ಜಿ.ಕೆ. ಮಿಥುನ್ ಕುಮಾರ್ ಹಾಜರಿದ್ದರು.
