ಎನ್ಎಸ್ಎಸ್ ಶಿಬಿರವು ಕೇವಲ ಸೇವಾ ಚಟುವಟಿಕೆ ಮಾತ್ರವಲ್ಲ, ಅದು ವ್ಯಕ್ತಿತ್ವ ವಿಕಾಸದ ಒಂದು ಮಹತ್ವದ ವೇದಿಕೆ. ಸಮಾಜದೊಂದಿಗೆ ಬೆರೆತು, ಜನರ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಕಂಡುಹಿಡಿಯುವ ಮನೋಭಾವವನ್ನು ನೀವು ಇಲ್ಲಿ ಕಲಿಯುತ್ತೀರಿ ಎಂದು ಐಪಿಎಸ್ ಅಧಿಕಾರಿ ಶ್ರೀಮತಿ ಮೇಘಾ ಅಗರವಾಲ್ ತಿಳಿಸಿದರು.
ಅವರು ಭದ್ರಾವತಿ ತಾಲೂಕು ವಿಜಯನಗರ ಕಾಚಿಗೊಂಡನಹಳ್ಳಿ ಕೊರಮಾರನಹಳ್ಳಿ ಗ್ರಾಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಸ್ನಾತಕೋತ್ತರ ಸಮಾಜ ಕಾರ್ಯ ವಿಭಾಗದ ವಿದ್ಯಾರ್ಥಿಗಳ ವತಿಯಿಂದ ಸಾಮಾಜಿಕ ಕಾರ್ಯ ಶಿಬಿರಕ್ಕೆ ಚಾಲನೆ ನೀಡಿ ಮಾತನಾಡಿದರು.
ನಮ್ಮ ದೇಶದ ಯುವಜನತೆ ಬಲವಾದರೆ ದೇಶ ಬಲವಾಗುತ್ತದೆ. ಆದ್ದರಿಂದ, ನಿಮ್ಮ ಶಕ್ತಿ ಮತ್ತು ಸಮಯವನ್ನು ಸಮಾಜದ ಸೇವೆಗೆ ಮೀಸಲಿಟ್ಟು, ಉತ್ತಮ ನಾಗರಿಕರಾಗಿ ಬೆಳೆದು ಬರಬೇಕು ಎಂದರು.
ಈ ಶಿಬಿರದಿಂದ ನೀವು ಶಿಸ್ತು, ಸಹಕಾರ ಮತ್ತು ನಾಯಕತ್ವ ಗುಣಗಳನ್ನು ಅಳವಡಿಸಿಕೊಳ್ಳಬೇಕು. ನಿಮ್ಮ ಸೇವೆ ಸಣ್ಣದಾಗಿದ್ದರೂ, ಅದರ ಪರಿಣಾಮ ಸಮಾಜದಲ್ಲಿ ದೊಡ್ಡ ಬದಲಾವಣೆ ತರಬಹುದು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೊಮಾರನಹಳ್ಳಿ ಗ್ರಾಮ ಪಂಚಾಯತ್ ಅಧ್ಯಕ್ಷ ಮಧುರಾವ್.ಆರ್ ವಹಿಸಿದ್ದರು.
ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಮಂಜುನಾಥ್ ಆರ್, ಮುಖ್ಯ ಶಿಕ್ಷಕ ಎಸ್. ಸಿದ್ದರಾಮಯ್ಯ, ಗ್ರಾಮ ಅಭಿವೃದ್ದಿ ಅಧಿಕಾರಿ ಶ್ರೀಮತಿ ಸವಿತಾ, ಬಸವರಾಜ್, ಉಪನ್ಯಾಸಕರಾದ ಬಿ.ಜಿ.ರವಿಶಂಕರ್ ಇದ್ದರು.
ಎನ್ ಎಸ್ ಎಸ್ ವ್ಯಕ್ತಿತ್ವ ವಿಕಾಸದ ಮಹತ್ವದ ವೇದಿಕೆ : ಮೇಘಾ ಅಗರ್ವಾಲ್
Health Minister Dinesh Gundu Rao ಅತ್ಯಂತ ದುಬಾರಿ ಎನಿಸುವ ಮಂಡಿ ಮತ್ತು ಕೀಲು ಬದಲಿ ಶಸ್ತ್ರಚಕಿತ್ಸೆಗಳು ಈಗ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ – ಸಚಿವ ದಿನೇಶ್ ಗುಂಡೂರಾವ್
Health Minister Dinesh Gundu Rao ನಮ್ಮ ಸರ್ಕಾರದ ಪ್ರಮುಖ ಆದ್ಯತೆಯಾದ ‘ಆರೋಗ್ಯ ಕರ್ನಾಟಕ’ ನಿರ್ಮಾಣದತ್ತ ನಾವು ಮತ್ತೊಂದು ದಿಟ್ಟ ಹೆಜ್ಜೆ ಇಟ್ಟಿದ್ದೇವೆ. ರಾಜ್ಯದ ಬಡ ಮತ್ತು ಮಧ್ಯಮ ವರ್ಗದ ಜನರಿಗೆ ಅತ್ಯಂತ ದುಬಾರಿ ಎನಿಸುವ ಮೊಣಕಾಲು (TKR) ಮತ್ತು ಸೊಂಟದ (THR) ಕೀಲು ಬದಲಿ ಶಸ್ತ್ರಚಿಕಿತ್ಸೆಗಳನ್ನು ಈಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅತ್ಯಂತ ಯಶಸ್ವಿಯಾಗಿ ಮತ್ತು ಉಚಿತವಾಗಿ ನೀಡಲಾಗುತ್ತಿದೆ.ಎಂದು ರಾಜ್ಯದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಈ ನಿಟ್ಟಿನಲ್ಲಿ ನಾವು ತಂದಿರುವ ಮಹತ್ವದ ಸುಧಾರಣೆಗಳ ಮುಖ್ಯಾಂಶಗಳು ಇಲ್ಲಿವೆ:
ಸರ್ಕಾರಿ ಆಸ್ಪತ್ರೆಗಳ ಪಾಲು ಹೆಚ್ಚಳ: 2023-24ರಲ್ಲಿ ಶೇ. 35ರಷ್ಟಿದ್ದ ಸರ್ಕಾರಿ ಆಸ್ಪತ್ರೆಗಳ ಶಸ್ತ್ರಚಿಕಿತ್ಸಾ ಪಾಲು, ಈಗ ಶೇ. 99ಕ್ಕೆ ಏರಿಕೆಯಾಗಿದೆ. ಅಂದರೆ, ಇಂದು ಕೀಲು ಬದಲಿ ಚಿಕಿತ್ಸೆಗಾಗಿ ಜನರು ಖಾಸಗಿ ಆಸ್ಪತ್ರೆಗಳ ಮೇಲೆ ಅವಲಂಬಿತವಾಗುವುದು ಬಹುತೇಕ ತಪ್ಪಿದೆ.
ವಿಸ್ತೃತ ಜಾಲ: ಈ ಹಿಂದೆ ಕೇವಲ 17 ಸರ್ಕಾರಿ ಆಸ್ಪತ್ರೆಗಳಲ್ಲಿ ಈ ಸೌಲಭ್ಯವಿತ್ತು. ಈಗ ನಾವು ವೈದ್ಯಕೀಯ ಕಾಲೇಜುಗಳು ಮತ್ತು ತಾಲೂಕು ಆಸ್ಪತ್ರೆಗಳು ಸೇರಿದಂತೆ ಹೆಚ್ಚುವರಿ 22 ಆಸ್ಪತ್ರೆಗಳನ್ನು ಈ ಜಾಲಕ್ಕೆ ಸೇರಿಸಿದ್ದೇವೆ. ಪ್ರಸ್ತುತ ರಾಜ್ಯಾದ್ಯಂತ 40 ಸರ್ಕಾರಿ ಕೇಂದ್ರಗಳಲ್ಲಿ ಈ ಚಿಕಿತ್ಸೆ ಲಭ್ಯವಿದೆ.
ಮಾರ್ಗದರ್ಶನ ಮತ್ತು ತರಬೇತಿ: ಪರಿಣಿತ ಶಸ್ತ್ರಚಿಕಿತ್ಸಕರಿಂದ ನಮ್ಮ ಸರ್ಕಾರಿ ಆಸ್ಪತ್ರೆಯ ವೈದ್ಯರಿಗೆ ವಿಶೇಷ ತರಬೇತಿ ನೀಡಲಾಗುತ್ತಿದೆ. ಇದರ ಫಲವಾಗಿ ಈಗಾಗಲೇ ನಮ್ಮ ವೈದ್ಯರು ಸ್ವತಂತ್ರವಾಗಿ ಶಸ್ತ್ರಚಿಕಿತ್ಸೆಗಳನ್ನು ಯಶಸ್ವಿಯಾಗಿ ನೆರವೇರಿಸುತ್ತಿದ್ದಾರೆ.
ಜನರ ಮನೆಬಾಗಿಲಿಗೆ ಚಿಕಿತ್ಸೆ: ಚಿಕಿತ್ಸೆಗಾಗಿ ಈ ಹಿಂದೆ ರೋಗಿಗಳು 300 ರಿಂದ 500 ಕಿ.ಮೀ ದೂರ ಪ್ರಯಾಣಿಸಬೇಕಿತ್ತು. ಆದರೆ ಈಗ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲೇ ಸುಧಾರಿತ ಶಸ್ತ್ರಚಿಕಿತ್ಸೆಗಳು ಲಭ್ಯವಿರುವುದರಿಂದ ಜನರ ಆರ್ಥಿಕ ಹೊರೆ ಮತ್ತು ಸಮಯ ಉಳಿತಾಯವಾಗುತ್ತಿದೆ.
Health Minister Dinesh Gundu Rao ಕಲ್ಯಾಣ ಕರ್ನಾಟಕಕ್ಕೆ ಆದ್ಯತೆ: ಹಿಂದೆ ನಿರ್ಲಕ್ಷಿತವಾಗಿದ್ದ ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಈಗ ದಾಖಲೆ ಸಂಖ್ಯೆಯ ಶಸ್ತ್ರಚಿಕಿತ್ಸೆಗಳು ಉಚಿತವಾಗಿ ನಡೆಯುತ್ತಿವೆ.
ನಮ್ಮ ಸರ್ಕಾರಿ ಆಸ್ಪತ್ರೆಗಳು ಈಗ ಕೇವಲ ಚಿಕಿತ್ಸಾ ಕೇಂದ್ರಗಳಲ್ಲ, ಅವು ನಂಬಿಕೆಯ ಕೇಂದ್ರಗಳಾಗಿ ಮಾರ್ಪಟ್ಟಿವೆ. ಪ್ರತಿಯೊಬ್ಬ ನಾಗರಿಕನಿಗೂ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವುದು ನಮ್ಮ ಸಂಕಲ್ಪ.
ನಿಮ್ಮ ಆರೋಗ್ಯ ನಮ್ಮ ಆದ್ಯತೆ ಎಂದು ಸಚಿವರು ತಿಳಿಸಿದ್ದಾರೆ.
ಅಣ್ಣಾವ್ರ ನೆನಪು…
ಡಾ.ಸುಧೀಂದ್ರ. ಕೆಲೈವ್.ನ್ಯೂಸ್
ಬೆಳ್ಳಿ ಎಂದರೆ ಅದೂ ನಾಚುತ್ತದೆ.
ನಿಮ್ಮ ನಗೆಗೆ.
ಚಿನ್ನವೆನ್ನಲೆ ಅದೂ ಅಷ್ಟೆ ಕರಗಿ ನೀರು.
ಇನ್ನೆನ್ನಲಿ
ವಜ್ರವೆ…!?
ನೀವಷ್ಟು ಕಠಿಣವಲ್ಲ…ll1.ll
ಚಂದಿರನೆ ಮುಖದಲ್ಲಿ.
ಕಣ್ಗಳಲಿ ರವಿತೇಜ.
ನುಡಿದರೆ ಕನ್ನಡಮುತ್ತು
ಉರುಳುರುಳಿ ಸಾಲು
ಅಭಿಮಾನದ ಅಣೆಕಟ್ಟೆ.
ಕನ್ನಡದ ಮನಸುಗಳು
ಕೊಟ್ಟ ಬಿರುದು ಸಮ್ಮಾನಗಳ ಮೀರಿದಿರಿ.
ಎತ್ತರೆತ್ತರ ನಿಮ್ಮದೇ ಖ್ಯಾತಿ.
ಸರಳ ಜೀವನ ಜ್ಯೋತಿ.
ಪದಗಳೇ ಸಾಲವು
ನಿಮ್ಮ ನುಡಿ ನಡೆಗಳ
ಹಾಸಿ ಹೆಣೆಯಲು.
ನಿಮಗೆ ನೀವೇ ಸಾಟಿ
ಎಂದೆಂದೂ ಅಮರ
ನಮ್ಮೆಲ್ಲರ
ರಾಜಕುಮಾರ.
.+ಡಾ.ಸುಧೀಂದ್ರ…
ದೇವರ ಸೇವೆಯಿಂದ ಭಕ್ತರಲ್ಲಿ ಆತ್ಮತೃಪ್ತಿ ಮತ್ತು ದೈವಭಕ್ತಿ ವೃದ್ಧಿ.- ಸಂದೇಶ್ ಉಪಾಧ್ಯ
ದೈವರಾದನೆಯಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುವುದರ ಜೊತೆಗೆ ಭಕ್ತಿಯಿಂದ ಪೂಜಿಸಿದಾಗ ಸಕಲ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಪ್ರಧಾನ ಗುರು ಸಂದೇಶ ಉಪಾಧ್ಯ ಹೇಳಿದರು.
ಸ್ವಾಮಿ ವಿವೇಕಾನಂದ ಬಡಾವಣೆಯಲ್ಲಿರುವ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ನಾಗ ಕ್ಷೇತ್ರದಲ್ಲಿ ಸಮಿತಿಯ ವತಿಯಿಂದ ನಾಲ್ಕು ದಿನ ಹಮ್ಮಿಕೊಳ್ಳಲಾದ ಬ್ರಹ್ಮ ಕಲಶೋತ್ಸವ. ಕುಲ ದೇವತಾ ಪ್ರಾರ್ಥನೆ, ಗುರು ಗಣಪತಿ ಪೂಜೆ, ಕಲಾ ತತ್ವ ಹೋಮ, ಆದಿ ವಾಸ ಹೋಮ, ಬ್ರಹ್ಮ ಕುಂಭಾಭಿಷೇಕ ಮತ್ತು ಸಾಮೂಹಿಕ ಆಶ್ಲೇಷ ಬಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ನಮ್ಮಲ್ಲಿ ಸಮಿತಿಯಿಂದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಬಡಾವಣೆಯಲ್ಲಿರುವ ಭಕ್ತರು ಮತ್ತು ಭಜನಾ ಮಂಡಳಿಯ ಸದಸ್ಯರು ಸಂಪೂರ್ಣ ಸಹಕಾರ ನೀಡುತ್ತ ಬಂದಿದ್ದಾರೆ. ಇದರಿಂದ ಭಕ್ತರಿಗೆ ಆತ್ಮ ಸಂತೋಷ ಹಾಗೂ ದೈವಭಕ್ತಿ ವೃದ್ಧಿಸುವುದರ ಜೊತೆಗೆ ಕಷ್ಟ ಕಾರ್ಪಣ್ಯಗಳು ದೂರವಾಗುತ್ತವೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದೇವಸ್ಥಾನ ಸಮಿತಿ ಅಧ್ಯಕ್ಷ ಎಚ್.ರಾಮಲಿಂಗಪ್ಪ ಮಾತನಾಡಿ, ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನ ವಿಶೇಷವಾದ ಮಹಿಮೆ ಇರುವ ಸ್ಥಳವಾಗಿದೆ. ಎಲ್ಲಾ ರೀತಿಯ ಧಾರ್ಮಿಕ ಕಾರ್ಯಕ್ರಮಗಳು ಶ್ರದ್ಧಾಭಕ್ತಿಯಿಂದ ನೆರವೇರುತ್ತದೆ ಎಂದರು.
ನಾಗಸುಬ್ರಹ್ಮಣ್ಯನ ಕೃಪೆಯಿಂದ ನಾಲ್ಕು ದಿನವೂ ಭಕ್ತರು ನಿರಂತರವಾಗಿ ಆಗಮಿಸಿ ದೇವರ ಸೇವೆಯಲ್ಲಿ ಪಾಲ್ಗೊಂಡು ಭಗವಂತನ ಕೃಪೆಗೆ ಪಾತ್ರರಾದರು. ಶಿವಮೊಗ್ಗ ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಉಪಾಧ್ಯಕ್ಷ ಜಿ.ವಿಜಯಕುಮಾರ್, ಬಿಂದು ವಿಜಯಕುಮಾರ್ ಪಾಲ್ಗೊಂಡಿದ್ದರು.
ನಾಗಕ್ಷೇತ್ರ ಸ್ವಾಮಿ ವಿವೇಕಾನಂದ ಬಡಾವಣೆ ಶ್ರೀ ನಾಗಸುಬ್ರಹ್ಮಣ್ಯ ದೇವಸ್ಥಾನದ ಹದಿನೇಳನೇ ಬ್ರಹ್ಮಕಲಶೋತ್ಸವದಲ್ಲಿ ನಡೆದ ಆಶ್ಲೇಷ ಬಲಿ ಪೂಜೆಯಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಸಂದೇಶ್ ಉಪಾಧ್ಯ, ವಸಂತ ಭಟ್, ದೇವಸ್ಥಾನದ ಸೇವಾ ಸಮಿತಿ ಅಧ್ಯಕ್ಷ ರಾಮಲಿಂಗಪ್ಪ ಹಾಗೂ ಶಾರದಾ ಶಂಕರ ಭಜನಾ ಮಂಡಳಿಯ ಸದಸ್ಯರಾದ ಶಾಲಿನಿ, ಸುಜಾತಾ ಮತ್ತು ಚಿತ್ರಲೇಖ ಉಪಸ್ಥಿತರಿದ್ದರು.
ಪ್ರಾಣಿಗಳಿಗೆ ಕುಡಿಯುವ ನೀರಿನ ಸೌಲಭ್ಯ ನೀಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ- ಆರಗ ಜ್ಞಾನೇಂದ್ರ
ಪ್ರಾಣಿಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವ ಸಂಸ್ಥೆಗಳ ಕಾರ್ಯ ಶ್ಲಾಘನೀಯ ಎಂದು ಮಾಜಿ ಗೃಹ ಸಚಿವ, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಹೇಳಿದರು.
ಜೆಸಿಐ ತೀರ್ಥಹಳ್ಳಿ, ಕಾಳಿಕಾಂಬ ಮಾರುತಿ ಸರ್ವಿಸ್ ಸೆಂಟರ್, ಅನಂತ ಆಯುರ್ವೇದ ಟ್ರಸ್ಟ್ ಹಿರೇಸರ ಹಾಗೂ ಸೀನಿಯರ್ ಚೇಂಬರ್ ಇಂಟರ್ನ್ಯಾಷನಲ್ ತೀರ್ಥಹಳ್ಳಿ ಸಂಸ್ಥೆಗಳ ಸಹಯೋಗದಲ್ಲಿ ಆಯೋಜಿಸಿದ್ದ ಜಾನುವಾರು ಕುಡಿಯುವ ನೀರಿನ ಟ್ಯಾಂಕ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬೇಸಿಗೆ ಕಾಲಕ್ಕೆ ಪಶುಗಳಿಗೆ ಕುಡಿಯುವ ನೀರಿನ ವ್ಯವಸ್ಥೆ ಮಾಡುತ್ತಿರುವುದು ಬಹಳ ಪ್ರಶಂಸನೀಯ ಕಾರ್ಯವಾಗಿದೆ. ಗೋವುಗಳ ಆಶೀರ್ವಾದ ಸಂಘ ಸಂಸ್ಥೆಗಳ ಮೇಲೆ ಸದಾ ಇರುತ್ತದೆ ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್ ನಾರಾಯಣ್ ರಾವ್ ಮಾತನಾಡಿ, ಜೆಸಿಐ ತೀರ್ಥಹಳ್ಳಿ ಸಂಸ್ಥೆಯು ಯುವಜನರಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ಬದಲಾವಣೆಗಳನ್ನು ತರುವುದರಲ್ಲಿ ಯಶಸ್ವಿಯಾಗಿದೆ. ಕಾರ್ಯಕ್ರಮದ ನಿರ್ದೇಶಕ ರಾಜೇಂದ್ರ ಆಚಾರ್ಯ ಉತ್ತಮ ಕೆಲಸ ಮಾಡುತ್ತಿದ್ದು, ಸಮಾಜಕ್ಕೆ ನಿರಂತರವಾಗಿ ಉತ್ತಮ ಕೊಡುಗೆಗಳನ್ನು ನೀಡಬೇಕು ಎಂದು ಹೇಳಿದರು.
ಅನಂತ ಆಯುರ್ವೇದ ಟ್ರಸ್ಟ್ ಸಂಸ್ಥಾಪಕ ಡಾ. ಸಮೇಧ ಕಟ್ಟೆ ಮಾತನಾಡಿ, ಜನರಿಗೆ ಆಯುರ್ವೇದ ಎಂದರೆ ಕೇವಲ ಗಿಡಮೂಲಿಕೆ ಎಂದು ಭಾವಿಸಿದ್ದಾರೆ. ಆದರೆ ಆಯುರ್ವೇದದಲ್ಲಿ ಹಲವು ಖನಿಜ ಸಂಪತ್ತುಗಳನ್ನು ಸಹ ಸಂಸ್ಕರಿಸಿ ಉಪಯೋಗಿಸುತ್ತೇವೆ ಎಂದು ತಿಳಿಸಿದರು.
ಜೆಸಿಐ ತೀರ್ಥಹಳ್ಳಿ ಸಂಸ್ಥೆ ಅಧ್ಯಕ್ಷ ನಟೇಶ್ ಕಾಮತ್, ಕೃಷ್ಣಮೂರ್ತಿ ಸರ್ಜಾ, ಕೈಲಾಸ ಸರ್ಜಾ, ವಲಯದ ಉಪಾಧ್ಯಕ್ಷ ಅಭಿಜಿತ್, ಪೂರ್ವಾಧ್ಯಕ್ಷ ಹರೀಶ್ ಸರ್ಜಾ, ಅರುಣ್ ಕುಮಾರ್, ಪುಷ್ಪ ಸರ್ಜಾ, ಅನ್ವಿತಾ ಹರೀಶ್, ಸ್ವಾಗತ್, ರವಿ ಆಚಾರ್ಯ, ಮನೋಜ್, ನವೀನ್, ಅನುಷಾ, ವೈದ್ಯರಾದ ಡಾ. ಧನುಷ್, ಡಾ. ಸನತ್, ಸುರೇಶ್, ಮಂಜುನಾಥ್, ಸೂರಜ್ ಆಚಾರ್ಯ, ಆತ್ರೇಯ ಸರ್ಜಾ ಉಪಸ್ಥಿತರಿದ್ದರು.
ಹೊಸನಗರ ಸಾಹಿತ್ಯ ಸಮ್ಮೇಳನಕ್ಕೆ ಪ್ರಭಾಕರ ಕಾರಂತರು ಸರ್ವಾಧ್ಯಕ್ಷರಾಗಿ ಆಯ್ಕೆ
ಪ್ರಭಾಕರ ಕಾರಂತರೆಂದರೆ ಗಂಭೀರ ಮನಸ್ಸಿನ ,ಆಳ ವಸ್ತುಕಾಳಜಿಗೊಂದು ರೂಪಕದಂತಹ ವ್ಯಕ್ತಿತ್ವ.
ಬರಹಗಳಲ್ಲಿ ಅನನ್ಯ ಜೀವನ ಶ್ರದ್ಧೆ, ಅಪ್ಪಟ ಮಾನುಷ ಮಿಡಿತವುಳ್ಳವರು.
ಅವರ ಸಖ್ಯವೆಂದರೆ ಎತ್ತರದ ಅನುಭವಗಳನ್ನ ನಮ್ಮ ಎದೆಯೊಳಗೆ ಇಡುವಂಥ ಸುಲಭ ಸಾಧ್ಯದ ಸಂವೇದನೆ ನೀಡುವಂಥದ್ದು.
ಕಾರಂತರೀಗ ಹೊಸನಗರ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಅವರ ಕಿರುಪರಿಚಯವನ್ನ ಇನ್ನೋರಗವ ಮಲೆನಾಡಿನ ಪ್ರತಿಭೆ ಬೇಗಾರ್ ನೀಡಿದ್ದಾರೆ..
ತವರು ಮನೆಯನ್ನೂ – ಸೇರಿದ ಮನೆಯನ್ನೂ ಬೆಳಗು ಎಂಬ ಜನಪ್ರಿಯ ನುಡಿಯನ್ನು ಪುರುಷರಿಗೂ ಅನ್ವಯ ಮಾಡಿ ಹೇಳುವುದಾದರೆ ನಮ್ಮ ಹೊಸಕೊಪ್ಪ ದ ಪ್ರಭಾಕರ ಕಾರಂತ್ ರಿಗೆ ತುಂಬಾ ಚನ್ನಾಗಿ ಒಪ್ಪುತ್ತದೆ.
ಏಕೆಂದರೆ ಹೊಸನಗರ ದ ಮುಳುಗಡೆ ಪ್ರದೇಶ ದಿಂದ ಬಂದರೂ ಅವರು ಹೊಸ ಕೊಪ್ಪದ ಹಳೆಯ ಕಾರಂತರು. ಅತ್ತ ಹೊಸನಗರ ದಲ್ಲೂ ಸರ್ವ ಮಾನ್ಯರು.
ತಾನಿರುವ ಜಾಗದಲ್ಲೇ ಅಸ್ಮಿತೆ ಯ ಆವರಿಸಿಕೊಳ್ಳಬಲ್ಲ ಕಾರಂತ್ ರ ಶಕ್ತಿ ಅವರ ಪ್ರೀತಿ ಮತ್ತು ನೀತಿ.
ತನ್ನ ನಿಷ್ಠೆ, ಅಸಾಧಾರಣ ಧೈರ್ಯ, ಮನಸೆಳೆವ ಬರಹ, ಅನನ್ಯ ಜೀವನ ಪ್ರೀತಿ ಮತ್ತು ಸಹೃದಯ ಸಜ್ಜನಿಕೆಯಿಂದ ಸರ್ವರ ಗೌರವ ಕ್ಕೆ ಮತ್ತೊಂದು ರೂಪಕವೇ ಕಾರಂತ್ ಅವರು.
ಇದೀಗ ಅಂದರೆ 2026 ರ ಏಪ್ರಿಲ್ 24 ರಂದು ಹೊಸನಗರ ದಲ್ಲಿ ನಡೆವ ಸಾಹಿತ್ಯ ಸಮ್ಮೇಳನ ದ ಸರ್ವಾಧ್ಯಕ್ಷ ರಾಗಿರುವುದು ಅವರ ಸಂಸರ್ಗ ದ ನಮ್ಮೆಲ್ಲರಿಗೂ ಅತೀವ ಹೆಮ್ಮೆ ಮತ್ತು ಸಂತೋಷದ ಸಂಗತಿ.
ಅಂದ ಹಾಗೇ ಈ ಸಮ್ಮೇಳನದಲ್ಲಿ ಕಾರಂತ ರ ಬದುಕು – ಬರಹದ ಬಗ್ಗೆ ಮಾತಾಡುವ ಸದವಕಾಶ ನನಗೇ ಸಿಕ್ಕಿರುವುದು ಖುಷಿ ಯ ಇಮ್ಮಡಿಯಾಗಿದೆ
ಬರಹ: ರಮೇಶ್ ಬೇಗಾರ್
ಚಲನಚಿತ್ರ ನಿರ್ದೇಶಕರು.. ..
Information and Public Relations Department ಏಪ್ರಿಲ್ 24, ಕುವೆಂಪು ರಂಗಮಂದಿರದಲ್ಲಿ ವರನಟ ಡಾ.ರಾಜ್ ಕುಮಾರ್ ಜಯಂತಿ ಸಮಾರಂಭ
Information and Public Relations Department ಶಿವಮೊಗ್ಗ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಇವರ ಸಹಯೋಗದಲ್ಲಿ ಪದ್ಮಭೂಷಣ ಮತ್ತು ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕೃತ, ಕನ್ನಡದ ವರನಟ ಡಾ.ರಾಜ್ ಕುಮಾರ್ರವರ 97 ನೇ ಜನ್ಮ ದಿನಾಚರಣೆಯನ್ನು ಏ.24 ರ ಬೆಳಿಗ್ಗೆ 11 ಗಂಟೆಗೆ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಕಲಾವಿದರು ಪಾಲ್ಗೊಳ್ಳಲಿದ್ದು, ಸಾರ್ವಜನಿಕರು ಹಾಗೂ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಾರ್ತಾಧಿಕಾರಿಗಳು ಕೋರಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆ ಬಿಜೆಪಿ , ಡ್ರಾಮಾ ಮಾಡುತ್ತಿದೆ : ವೈ.ಬಿ.ಚಂದ್ರಕಾಂತ್
ದೇಶದ ಸಂಸತ್ತಿನಲ್ಲಿ ಬಿ.ಜೆ.ಪಿ ಸರ್ಕಾರದ ಅಧಿಕಾರದ ಅವಧಿಯಲ್ಲೆ ಈಗಾಗಲೇ ಮಹಿಳಾ ಮೀಸಲಾತಿ
ಪಾಸ್ ಆಗಿದ್ದರೂ ಅದನ್ನು ಕೇಂದ್ರದ ಬಿ.ಜೆ.ಪಿ. ಸರ್ಕಾರ ಜಾರಿಗೆ ತರದೆ ಬಿ.ಜೆ.ಪಿ. ನಾಯಕರು ಚುನಾವಣೆಗಳ
ರಾಜಕೀಯ ಲಾಭ ಪಡೆಯಲು ದೊಂಬರಾಟ ಮಾಡುತ್ತಿದ್ದಾರೆಂದು ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ
ವೈ.ಬಿ. ಚಂದ್ರಕಾಂತ ಅವರು ಟೀಕಿಸಿದ್ದಾರೆ.
ಬಿ.ಜೆ.ಪಿ. ಪಕ್ಷ, ಬಿ.ಜೆ.ಪಿ. ನಾಯಕರು ಈ ಹಿಂದೆಯೂ ಮಹಿಳೆಯರ ಪರವಾಗಿಲ್ಲ. ಇಂದು ಇಲ್ಲ,
ಮುಂದೆಯೂ ಇರುವುದಿಲ್ಲ ಎನ್ನುವುದಕ್ಕೆ ಸಂವಿಧಾನ ಶಿಲ್ಪಿ ಡಾ ಬಿ.ಆರ್. ಅಂಬೇಡ್ಕರ್ ಅವರು ೧೯೫೦ ರಲ್ಲೆ ಹಿಂದೂ
ಕೋಡ್ ಬಿಲ್ನ್ನು ಸಂಸತ್ತಿನಲ್ಲಿ ಮಂಡಿಸಿದಾಗ ಇಂದಿನ ಬಿ.ಜೆ.ಪಿ. ನಾಯಕರ ಪೂರ್ವಜರೆ ತೀವ್ರ ವಿರೋಧ
ಮಾಡಿದ್ದರಿಂದಲೆ ಮಹಿಳೆಯರ ಪರವಾದ ಹಿಂದೂ ಕೋಡ್ ಬಿಲ್ಗೆ ಸೋಲಾಯಿತು. ಆಗ ಮಹಿಳೆಯರ ಪರವಾಗಿ
ಇರದ ಬಿ.ಜೆ.ಪಿ.ಗೆ ಈಗ ಚುನಾವಣೆಗಳ ಹಿನ್ನೆಲೆಯಲ್ಲಿ ಎಲ್ಲಿಲ್ಲದ ಕಾಳಜಿ, ಪ್ರೀತಿ ಒಟ್ಟೂಟ್ಟಿಗೆ ಬಂದುದ್ದಾದರೂ
ಹೇಗೆAದು ಅವರು ಪ್ರಶ್ನಿಸಿದ್ದಾರೆ.
ಈ ಹಿಂದೆಯೆ ಸಂಸತ್ತಿನಲ್ಲಿ ಪಾಸ್ ಆಗಿರುವ ಮಹಿಳೆಯರ ಮೀಸಲಾತಿ ಮಸೂದೆಯನ್ನು ಕೇಂದ್ರ ಸರ್ಕಾರ
ಜಾರಿಗೆ ತರುವುದು ಬಿಟ್ಟು ಆನೆಯ ಮಗ್ಗುಲಲ್ಲಿ ಆಡು ಹೋದಂತೆ ಎಂಬ ಗಾದೆ ಮಾತಿನಂತೆ ಉತ್ತರ ಭಾರತದ
ರಾಜ್ಯಗಳಲ್ಲಿ ಸಂಸತ್ ಸದಸ್ಯರ ಸ್ಥಾನಗಳನ್ನು ಹೆಚ್ಚಿಗೆ ಮಾಡಿಕೊಂಡು ದಕ್ಷಿಣದ ರಾಜ್ಯಗಳ ಮೇಲೆ ರಾಜಕೀಯ
ಸವಾರಿ ಮಾಡುವ ದುರುದ್ದೇಶದಿಂದ ಮತ್ತೊಮ್ಮೆ ಮಹಿಳಾ ಮೀಸಲಾತಿಯನ್ನು ಸಂಸತ್ ಸದಸ್ಯರ ಸ್ಥಾನಗಳ ಹೆಚ್ಚು
ಮಾಡಿಕೊಳ್ಳುವ ಮಸೂದೆಯೊಂದಿಗೆ ಸೇರಿಸಿ ಸಂಸತ್ತಿನ ಒಪ್ಪಿಗೆ ಪಡೆಯುವ ಕುತಂತ್ರ ಮಾಡಿರುವುದು ಬಿ.ಜೆ.ಪಿ.
ನಾಯಕರ ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ವಕ್ತಾರರಾದ ವೈ.ಬಿ. ಚಂದ್ರಕಾಂತ ಅವರು ಟೀಕಿಸಿದ್ದಾರೆ.
ಬಿ.ಜೆ.ಪಿ. ನಾಯಕರು ಹಿಂದಿನಿಂದಲೂ ರಾಜಮಾರ್ಗದಲ್ಲಿ ಎಂದಿಗೂ ರಾಜಕೀಯ ಮಾಡಿದವರಲ್ಲ. ವಾಮ
ಮಾರ್ಗದಲ್ಲೆ ರಾಜಕೀಯ ಮಾಡಿಕೆಂಡು ಬಂದಿದ್ದಾರೆ. ಈಗ ಈ ಹಿಂದೆಯೆ ಸಂಸತ್ತಿನಲ್ಲಿ ಪಾಸ್ ಆಗಿರುವ
ಮಸೂದೆಯನ್ನು ಪುನಹ ಮಂಡಿಸಿ ದುರ್ಲಾಭ ಪಡೆಯುವ ಕುತಂತ್ರಕ್ಕೆ ದೇಶದ ವಿರೋಧ ಪಕ್ಷಗಳು ಸರಿಯಾದ
ಪಾಠ ಕಲಿಸಿರುವುದನ್ನು ಸಹಿಸಿಕೊಳ್ಳಲಾಗದೆ ಇದೇ ಏಪ್ರೀಲ್ 24 ರಂದು ಕಾಂಗ್ರೇಸ್ ಪಕ್ಷದ ವಿರುದ್ದ ಪ್ರತಿಭಟನೆ
ಮಾಡ ಹೊರಟಿರುವುದನ್ನು ಕೈಬಿಟ್ಟು ಮಹಿಳೆಯರ ಪರವಾಗಿ ಬಿ.ಜೆ.ಪಿ. ಪಕ್ಷಕ್ಕೆ ನಿಜವಾದ ಕಾಳಜಿ ಇದ್ದುದ್ದೆ ಆದಲ್ಲಿ
ಈಗಾಗಲೆ ಸಂಸತ್ತಿನಲ್ಲಿ ಪಾಸ್ ಆಗಿರುವ ಮಹಿಳಾ ಮೀಸಲಾತಿ ಕಾಯ್ದೆ ಜಾರಿ ಮಾಡುವಂತೆ ಬಿ.ಜೆ.ಪಿ ಪಕ್ಷದ
ವಿರುದ್ದ ಪ್ರತಿಭಟನೆ ಮಾಡಲಿ ಎಂದು ಜಿಲ್ಲಾ ಕಾಂಗ್ರೇಸ್ ವಕ್ತಾರರಾದ ವೈ.ಬಿ.ಚಂದ್ರಕಾಂತ ಅವರು ಸವಾಲ್
ಹಾಕಿದ್ದಾರೆ.
ಶಿವಮೊಗ್ಗದಲ್ಲಿ ಶಂಕರ ಜಯಂತಿ ಸಭಾ ನಿರ್ಮಾಣದ ” ದಿಂಡಿ ರಥ ” ಲೋಕಾರ್ಪಣೆ
ಶಿವಮೊಗ್ಗದ ‘ಶ್ರೀ ಶಂಕರ ಜಯಂತಿ ಸಭಾ “. ಇವರು ನಿರ್ಮಿಸಿದ್ದ “ದಿಂಡಿ ರಥ”ವನ್ನು ಶಿವಮೊಗ್ಗ ದ ದೊಡ್ಡ ಬ್ರಾಹ್ಮಣರ ರಸ್ತೆ (ಬಿಬಿ ಸ್ಟ್ರೀಟ್ ) ನಲ್ಲಿರುವ ಶ್ರೀ ಲಕ್ಷ್ಮಿ ನಾರಾಯಣ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ರಘುನಾಥ್ ಅವರು ಲೋಕಾರ್ಪಣೆಗೊಳಿಸಿದ ಸಂದರ್ಭದಲ್ಲಿ ವಿಪ್ರ ಮುಖಂಡರಾದ ಎಸ್ .ದತ್ತಾತ್ರಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಶ್ರೀ ಶಂಕರ ಜಯಂತಿ ಸಭಾದ ಅಧ್ಯಕ್ಷರಾದ ಖ್ಯಾತ ವಕೀಲರಾದ ಶ್ರೀ ಬಿ ಎನ್. ಕೃಷ್ಣಮೂರ್ತಿ, ಕಾರ್ಯದರ್ಶಿ ಶ್ರೀ ಅನಂತಸ್ವಾಮಿ, ಮಾಜಿ ಶಾಸಕರಾದ ಶ್ರೀ ಪ್ರಸನ್ನ ಕುಮಾರ್, ಎ ಕೆ ಬಿ ಎಂ ಎಸ್ ನ ಜಿಲ್ಲಾ ಪ್ರತಿನಿಧಿ ಶ್ರೀ ರಘುರಾಮ್ , ಶಿವಮೊಗ್ಗ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಶ್ರೀ ನಟರಾಜ್ ಭಾಗವತ್, ಬ್ರಾಹ್ಮಣ ಸೇವಾ ಸಂಘ ಶಿವಮೊಗ್ಗ ಇದರ ಅಧ್ಯಕ್ಷರಾದ ಶ್ರೀ ಸುರೇಶ್ ನಾಡಿಗ್ ಇನ್ನಿತರ ಪ್ರಮುಖ ವಿಪ್ರಬಂಧುಗಳು ಉಪಸ್ಥಿತರಿದ್ದರು.
Youth Hostel Association ಮೊಬೈಲ್, ಟೀವಿಗೆ ದಾಸರಾಗಿರುವ ಮಕ್ಕಳನ್ನು ಹೊರತರುವುದು ಕಷ್ಟ- ಸತೀಶ್ ಕುಮಾರ್
Youth Hostel Association ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವ ರೂಪಿಸಲು ಬೇಸಿಗೆ ಶಿಬಿರ ಅತ್ಯಂತ ಮಹತ್ತರ ಪಾತ್ರ ವಹಿಸುತ್ತದೆ ಎಂದು ಯೂತ್ ಹಾಸ್ಟೆಲ್ ಅಸೋಸಿಯೇಷನ್ ಸಾಗರ ಘಟಕದ ಸತೀಶ್ಕುಮಾರ್ ಹೇಳಿದರು.
ಸಾಗರ ತಾಲೂಕಿನ ಹೆಗ್ಗೋಡು ಸಮೀಪದ ನಂದಿಗೋಡಿನಲ್ಲಿ ಆಯೋಜಿಸಿದ್ದ ಬೇಸಿಗೆ ಶಿಬಿರದ ಸಮಾರೋಪದಲ್ಲಿ ಮಾತನಾಡಿ, ಮೊಬೈಲ್, ಟಿವಿಗೆ ದಾಸರಾಗಿರುವ ಮಕ್ಕಳನ್ನು ಹೊರ ತರುವುದು ಕಷ್ಟ. ಆದರೆ ಐದು ದಿನ ಮಕ್ಕಳಿಗೆ ಸಾಹಸ ಕ್ರೀಡೆ, ಈಜು, ಸಾಂಸ್ಕೃತಿಕ ಕಾರ್ಯಕ್ರಮಗಳಿಂದ ಮಕ್ಕಳ ಸರ್ವೋತ್ತಮ ಅಭಿವೃದ್ದಿಗೆ ಪೂರಕವಾದ ಕಾರ್ಯಕ್ರಮ ಆಯೋಜಿಸಲಾಗಿತ್ತು ಎಂದು ತಿಳಿಸಿದರು.
ಮಕ್ಕಳು ತಂದೆ ತಾಯಿಯಿಂದ ದೂರವಾಗಿ ಪರಿಚಯವೇ ಇಲ್ಲದವರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಅವಕಾಶ ಮಾಡಿಕೊಟ್ಟೆವು. ಅದರ ಸದುಪಯೋಗ ಚೆನ್ನಾಗಿ ಆಗಿದೆ. ಆರು ದಿನ ಮಕ್ಕಳನ್ನು ಉತ್ತಮವಾಗಿ ನೋಡಿಕೊಳ್ಳಲು ಎಲ್ಲರ ಸದಸ್ಯರ ಸಹಕಾರ ಕಾರಣ ಎಂದು ಹೇಳಿದರು.
Youth Hostel Association ರಾಜ್ಯ ಘಟಕದ ಚೇರ್ಮನ್ ಸುದರ್ಶನ್ ಪೈ ಮಾತನಾಡಿ, ಯೂತ್ ಹಾಸ್ಟೆಲ್ಸ್ ಎಲ್ಲ ತರಹದ ಸಮಾಜಮುಖಿ ಕಾರ್ಯಕ್ರಮಗಳನ್ನು ದೇಶಾದ್ಯಂತ ನೆರವೇರಿಸುತ್ತಿದೆ. ಮಕ್ಕಳ ಬೀಸಿಗೆ ಶಿಬಿರ ಯಶಸ್ವಿಯಾಗಿ ನೆರವೇರಿಸಿದ ಸಾಗರ ಘಟಕದ ಎಲ್ಲಾ ಸದಸ್ಯರಿಗೂ ಅಭಿನಂದನೆ ಎಂದು ತಿಳಿಸಿದರು.
ರಾಷ್ಟ್ರೀಯ ಉಪಾಧ್ಯಕ್ಷ ರವಿಕುಮಾರ್, ಪುರುಷೋತ್ತಮ್, ರಾಜ್ಯ ಮಾಜಿ ಉಪಾಧ್ಯಕ್ಷ ಜಿ.ವಿಜಯಕುಮಾರ್, ಜಯರಾಮ್ ಪೂಜಾರಿ, ಎಸ್.ಎಸ್.ವಾಗೇಶ್, ಸುವರ್ಣ, ಮಲ್ಲಿಕಾರ್ಜುನ ಕಾನೂರ್, ರಾಜು ಅವರು ಭಾಗವಹಿಸಿದ ಮಕ್ಕಳಿಗೆ ನೆನಪಿನ ಕಾಣಿಕೆ ವಿತರಿಸಿದರು.
