ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯ ಜಂಬರಘಟ್ಟ ಸಮೀಪ ಈ ಹೈಟೆಕ್ ಕಾರ್ಯಾಚರಣೆ ನಡೆದಿದೆ.
ತಿಮ್ಮಪ್ಪನಮಟ್ಟಿ ರಸ್ತೆಯ ದೇವಸ್ಥಾನದ ಬಳಿ ರಹಸ್ಯವಾಗಿ ಅಕ್ರಮ ಇಸ್ಪೀಟ್ ಜೂಜಾಟ ನಡೆಯುತ್ತಿದೆ ಎಂಬ ಖಚಿತ ಮಾಹಿತಿಯ ಮೇರೆಗೆ ಪೊಲೀಸರು ಮೊದಲು ಡ್ರೋಣ್ ಕ್ಯಾಮೆರಾವನ್ನು ಹಾರಿಸಿ ಸ್ಥಳದ ಮೇಲೆ ನಿಗಾ ವಹಿಸಿದರು.
ಜೂಜಾಟ ನಡೆಯುತ್ತಿರುವುದು ದೃಢಪಟ್ಟ ಬಳಿಕ, ಆಟದಲ್ಲಿ ತೊಡಗಿದ್ದವರು ಪರಾರಿಯಾಗದಂತೆ ಎಲ್ಲ ದಿಕ್ಕುಗಳಿಂದ ಸ್ಥಳವನ್ನು ಸುತ್ತುವರಿದು ದಾಳಿ ನಡೆಸಿದರು.
ಕಾರ್ಯಾಚರಣೆಯಲ್ಲಿ ರಮೇಶ್, ರಂಗೇಶ್, ಸುದೀಪ್, ನಯಾಜ್, ಅಬೀದ್ ಸೇರಿದಂತೆ ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ.
ಆರೋಪಿಗಳ ವಿರುದ್ಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಜೂಜಾಟದ ಸ್ಥಳದಲ್ಲಿದ್ದ ನಗದು ಹಣ ಹಾಗೂ ಇಸ್ಪೀಟ್ ಎಲೆಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಅಕ್ರಮ ಚಟುವಟಿಕೆಗಳ ವಿರುದ್ಧ ಇಂತಹ ಹೈಟೆಕ್ ಕಾರ್ಯಾಚರಣೆಗಳನ್ನು ಮುಂದುವರಿಸಲಾಗುವುದು ಎಂದು ಪೊಲೀಸ್ ಇಲಾಖೆ ತಿಳಿಸಿದೆ.
