Saturday, February 14, 2026
Saturday, February 14, 2026
Home Blog Page 119

CM Siddharamaiah ಜಾಗೃತಿ ಅರಿವು ಸಪ್ತಾಹ: ಪ್ರತಿಜ್ಞಾವಚನ ಬೋಧಿಸಿದ ‘ಸೀಎಂ’ ಸಿದ್ಧರಾಮಯ್ಯ

0

CM Siddharamaiah ಜಾಗೃತಿ ಅರಿವು ಸಪ್ತಾಹ-2025ರ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನ ಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಚಿವಾಲಯದ ಎಲ್ಲಾ ಅಧಿಕಾರಿಗಳು ಹಾಗೂ ನೌಕರರಿಗೆ ಭ್ರಷ್ಟಾಚಾರದ ವಿರುದ್ಧ ಪ್ರತಿಜ್ಞಾ ವಚನವನ್ನು ಬೋಧಿಸಿದರು.

CM Siddharamaiah ಈ ಸಂದರ್ಭದಲ್ಲಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿ ಗೌರವ ಗುಪ್ತಾ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಕಾರ್ಯದರ್ಶಿ ಜಗದೀಶ್ ಸೇರಿದಂತೆ, ಸಚಿವಾಲಯದ ಅಧಿಕಾರಿಗಳು ಹಾಗೂ ನೌಕರರು ಉಪಸ್ಥಿತರಿದ್ದರು.

ರಾಜ್ಯದ ಎಲ್ಲಾ ಸಾರಿಗೆ & ಖಾಸಗಿ ಬಸ್ ಗಳ ಸುರಕ್ಷತಾ ವ್ಯವಸ್ಥೆ ಪರಿಶೀಲನೆ- ಸಚಿವ ರಾಮಲಿಂಗಾರೆಡ್ಡಿ

0

ರಾಜ್ಯದ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸುರಕ್ಷತಾ ವ್ಯವಸ್ಥೆಯನ್ನು ಪರಿಶೀಲಿಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ.

ಈ ಕುರಿತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದು, ಸುರಕ್ಷತಾ ನ್ಯೂನತೆಗಳು ಕಂಡುಬಂದಲ್ಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

Bihar Assembly Election ಬಿಹಾರ ಚುನಾವಣೆ ಸುತ್ತ, ಸಮೀಕ್ಷೆ: ಶೇಷಣ್ಣ, ಕಿರಣವಟಿ & ತಂಡ ಬೆಂಗಳೂರು

0

Bihar Assembly Election ಒಂದು ಕ್ಷಣ ನೀವು ಬಿಹಾರದಲ್ಲಿ ಒಬ್ಬ ರಾಜಕಾರಣಿ ಎಂದು ಭಾವಿಸಿ ವಿಷಯ ನಿರೂಪಣೆಗೆ ಇದೊಂದು ಪರಿಕಲ್ಪನೆಯ ಹೋಲಿಕೆ ಆಗುತ್ತದೆ ಅಷ್ಟೆ.

ಸಮಕಾಲೀನ ಬಿಹಾರಿ ರಾಜಕಾರಣಿಗಳಲ್ಲಿ ಬಹುಮಂದಿಗೆ ನೈತಿಕತೆ, ಲಜ್ಜೆ ಅಥವಾ ಸಂಕೋಚ ಎಂದರೇನು ತಿಳಿಯದು. ಲೋಕ ನೀತಿ, ಮಾದರಿ ನಡೆ-ನುಡಿ, ಆದರ್ಶ, ಮಾನ ಮರ್ಯಾದೆ – ಇದಾವುದರ ಅರಿವಿಲ್ಲ. ದೇಶಸೇವೆ. ಪ್ರಜಾತಂತ್ರ – ಇವೆಲ್ಲಾ ಲೊಳಲೊಟ್ಟೆ,

ಇವರಿಗೆ ದೇಶಕ್ಕಿಂತ ಮೊದಲು ಮಗ, ಮಗಳು, ಅಳಿಯ, ಸೊಸೆ, ಬೀಗರು, ತಮ್ಮ ಭಾವಮೈದ, ಜಾತಿ – ಇವು ಮುಖ್ಯ. ಹಾಗೊಮ್ಮೆ ಟೈಂ ಸಿಕ್ಕರೆ ನಂತರ ದೇಶದ ಚಿಂತೆ.

ಇದೀಗ ಸಿದ್ಧತೆ ಹಂತದಲ್ಲಿರುವ ಬಿಹಾರ ಹಂತದಲ್ಲಿರುವ ಬಿಹಾರ ವಿಧಾನಸಭೆ ಚುನಾವಣೆಯಲ್ಲಿ ನಡೆದಿರುವ ಪೂರ್ವಭಾವಿ ಕಾರುಬಾರಿನ ಏಣಿಯಾಟ ಇದಕ್ಕೊಂದು ಜ್ವಲಂತ ಸಾಕ್ಷಿ. ಕಳೆದ ಮೂರು – ನಾಲ್ಕು ಚುನಾವಣೆಯಲ್ಲಿ ಜನಾಭಿಪ್ರಾಯ ಸಮೀಕ್ಷೆ ನಡೆಸಲು ನಾವು, ಅಂದರೆ ಬೆಂಗಳೂರಿನ ವರದಿಗಾರರ ತಂಡದ ಅನುಭವ ಇದು. ದೇಶದ ಸುಮಾರು 18 ರಾಜ್ಯಗಳಲ್ಲಿ ಸಮೀಕ್ಷೆ ನಡೆಸಿದ ನಮಗೆ, ಬಿಹಾರದಂತೆಯೇ ಉಳಿದ ಕಡೆ ಸಹಿತ ಇದೇ ದೃಶ್ಯಗಳು ಸರ್ವೇಸಾಮಾನ.

ಮತ್ತೊಂದು ಮಾತು ಈಗಲೇ ಹೇಳುವುದು ಉತ್ತಮ. ಬಿಹಾರ ರಾಜಕಾರಣದಲ್ಲಿ ವಂಶವೃಕ್ಷ ಸಂಸ್ಕೃತಿಗೆ ನೀರುಣಿಸಿ ಬೆಳೆಸಿದವರು ಅಪರು – ತಪರ ಅವ್ಯವಹಾರ ಖ್ಯಾತಿಯ ಲಾಲೂ ಪ್ರಸಾದ ಯಾದವ ಮತ್ತು ಆತನ ಮಡದಿ ರಾಬ್ರಿ ದೇವಿ ಮೊದಲಿಗರೇನಲ್ಲ.

ಅವಿಭಜಿತ ಬಿಹಾರದ ಮೊದಲ ಮುಖ್ಯಮಂತ್ರಿ ಕೃಷ್ಣಸಿಂಗ್ ತಮ್ಮ ಮಗ ಶಂಕರಸಿಂಗ್‌ನನ್ನು ಶಾಸಕ ಮಾಡಿ ಮಂತ್ರಿ ಮಾಡಿದ್ದರು. ನಂತರ ಬಂದ ಮುಖ್ಯಮಂತ್ರಿ ದರೋಗಪ್ರಸಾದ್ ರೈ ಮತ್ತು ಕರ್ಪೂರಿ ಠಾಕೂರರು ಇದೇ ಪದ್ಧತಿಯಿಂದ ಮಕ್ಕಳಾದ ಚಂದ್ರಿಕಾ ರೇ ಮತ್ತು ರಾಮನಾಥ ಠಾಕೂರನಿಗೆ ಪಟ್ಟಕಟ್ಟಿದ್ದುಂಟು. ಮತ್ತೊಬ್ಬ ರಣಧೀರ ಜಗನ್ನಾಥ ಮಿಶ್ರ

ಪುತ್ರ ವಾತ್ಸಲ್ಯ ಮೆರೆಸಿ ನೀತೀಶ್ ನನ್ನು ಮೇಲೆತ್ತಿದರು. ಕ್ರಿಕೆಟ್‌ ಪಟು ಕೀರ್ತಿ ಆಜಾದ್ ಮೂರು ಬಾರಿ ಸಂಸದನಾದದ್ದು ತಂದೆ, ಮುಖ್ಯಮಂತ್ರಿ ಭಗವತ್ ಝಾ ಕೃಪೆಯಿಂದ.

ಮತ್ತೊಬ್ಬ ಖಾಯಂ ರಾಜಕಾರಣಿ, ಲೋಕ ಜನಶಕ್ತಿ ಜನಕ ದಿ.ರಾಮವಿಲಾಸ ಪಾಸ್ವಾನರು ಇಂದಿನ ಚಿರಾಗ್ ಪಾಸ್ಥಾನನ್ನು ಬಿಹಾರದ ಸೇವೆಗೆ ಅರ್ಪಿಸಿದ್ದು ಮತ್ತೊಂದು ಉದಾಹರಣೆ. ಇವೆಲ್ಲಕ್ಕಿಂತ ಮುಖ್ಯವಾದದ್ದು ಲಾಲೂ -ರಾಬ್ರಿಗಳು ಬಿಹಾರಕ್ಕೆ ನೀಡಿದ ಅಮೋಘ ಕೊಡುಗೆಯೆಂದರೆ ತೇಜಸ್ವಿ ಯಾದವ್ ರಾಷ್ಟ್ರೀಯ ಜನತಾದಳ ಈ ಬಾರಿ ಚುನಾವಣೆ ಗೆದ್ದು ಅಧಿಕಾರಕ್ಕೆ ಬಂದರೆ ಈ ವ್ಯಂಗ್ಯರಾಯ ಮುಖ್ಯಮಂತ್ರಿಯಾದರೆ ಅಚ್ಚರಿಯೇನಿಲ್ಲ. ಈತ ಮತ್ತು ಮತ್ತಾರೂ ಅಲ್ಲ, ಈಗಿನ ಆರ್‌ಜಿಡಿ ಅಧ್ಯಕ್ಷ ತೇಜಸ್ವಿ ಯಾದವ.

Bihar Assembly Election ಕೊನೆಯದಾಗಿ ಬಿಹಾರದಲ್ಲಿ ತಂದೆ – ಮಕ್ಕಳ ರಾಜಕೀಯ ನಂಟಿಗೆ ಅಅಪವಾದ ಎನಿಸುವಂತ ಉದಾಹರಣೆ ಎಂದರೆಲಾಲೂ ದಂಪತಿಯ ಎರಡನೇ ಮಗ ತೇಜಯಾದವ ಮತ್ತು ಎಳು ಹೆಣ್ಣುಮಕ್ಕಳ ಪೈಕಿ ಮೊದಲನೆಯಳಾದ ಮೀಸಾ ಭಾರತಿ ಸಹಿತ ವಂಶಾವಳಿಯ ಮುಂದುವರಿಕೆಗೆ ಉದಾಹರಣೆ.

ದೃಷ್ಟಿ ಪರಿಹಾರ: ನಿತೀಶ್ ಮತ್ತು ಪ್ರಧಾನಿ ಮೋದಿ

ದೇಶದ ಪುಣ್ಯವೆಂದರೆ ಸಂತತಿ ಘೋಷಣೆಯ ರಾಜಕಾರಣ ದುರ್ವ್ಯವಹಾರದಿಂದ ದೂರ ಉಳಿದ ಇಬ್ಬರು ಮಹಾನ್ ನಾಯಕರು ಬಿಹಾರದ ಹಾಲಿ ಮುಖ್ಯಮಂತ್ರಿ ನಿತೀಶ್‌ ಕುಮಾರ್ ಮತ್ತು ದೇಶದ ಪ್ರಧಾನಿ ನರೇಂದ್ರ ಮೋದಿ.

ನಿತೀಶರ ಮಗ ನಿಶಾನ್’ ರಾಜಕೀಯದಿಂದ ದೂರ ಉಳಿದಿದ್ದಾನೆ. ಸ್ವಶಕ್ತಿಯ ಉದ್ಯೋಗ ನಡೆಸಿ ತಂದೆಗಿಂತ ಮೂರುಪಟ್ಟು, ಹೆಚ್ಚು ಸಂಪಾದಿಸುತ್ತಿದ್ದಾನೆ. ತಾಂತ್ರಿಕ ‌ ಪದವೀಧರ. ಅಪ್ಪಿತಪ್ಪಿ ಕೂಡ ತಂದೆಯ ನಿವಾಸದತ್ತ ತಲೆಹಾಕುತ್ತಿಲ್ಲ.

ಇನ್ನ ಪ್ರಧಾನಿ ಮೋದಿಯವರ ವಿಷಯ ದೇಶಕ್ಕೆ ಗೊತ್ತು.

ವಂಶೋದ್ಧಾರದ ಪ್ರಯತ್ನಗಳು

ತಮ್ಮ ಸಮೀಪದ ಬಂಧು-ಬಳಗಕ್ಕೆ ಚುನಾವಣೆ ಸಂದರ್ಭದಲ್ಲಿ ಎಗ್ಗುತಗ್ಗಿಲ್ಲದೆ ಸೀಟುಗಳನ್ನು ಹಂಚು ಹವ್ಯಾಸ ನಮ್ಮ ದೇಶದ ಎಲ್ಲ ರಾಜ್ಯಗಳಲ್ಲಿಯೂ ಇಂದಿಗೂ ಮುಂದುವರಿಯುತ್ತಿದೆ. ಇದು ರಾಜಕಾರಣಿ ಮಹೋದಯರಿಗೆ ಅಂಟಿದ ಜಾಡ್ಯ. ನಾಯಕ – ಪುಡಾರಿಗಳಿಗೆ ತಮ್ಮ ಕ್ಷೇತ್ರದಲ್ಲಿಯೇ ಇರುವ ಪ್ರಾಮಾಣಿಕ, ಅಶಕ್ತ, ದುರ್ಬಲ ಕಾರ್ಯಕರ್ತರು ಕಣ್ಣಿಗೆ ಬೀಳುವುದೇ ಇಲ್ಲ. ತಮ್ಮ ಸಂಬಂಧಿಗಳ ಹಿತ ಕಾಯುವ ಏಕೈಕ ಕಾಯಕ ಇವರದು. ಇದೊಂದು ರೀತಿ ಹಗಲುದರೋಡೆ.

ಬಿಹಾರದಲ್ಲಿ ಈಗ ನಡೆದಿರುವ ಹಂಗಾಮ ಕೂಡ ಇದಿಕ್ಕಿಂತ ಹೊರತಾಗಿಲ್ಲ, ಅದರ ಕೆಲವು ಸ್ಯಾಂಪಲ್‌ಗಳು ಹೀಗಿವೆ:

ಪ್ರಧಾನಿ – ನಿತೀಶ್ ನೇತೃತ್ವದ ಎನ್‌ಡಿಎ ಬಳಗವನ್ನು ಬಿಟ್ಟರೆ ಪ್ರಬಲವಾಗಿ ಕಾಣುವ ಪಕ್ಷ ಲಾಲೂಪ್ರಸಾದ ಯಾದವ ಕೃಪಾಪೋಷಿತ ಆರ್‌ಜೆಡಿ, ವಂಶಾವಳಿ ತಳಿಯನ್ನು ಬೆಳೆಸಿದುದಕ್ಕಾಗಿ ಒಂದು ಕಾಲದಲ್ಲಿ ಕಾಂಗ್ರೆಸ್ ಪಕ್ಷದ ನಾಯಕರನ್ನು ವಾಚಾಮಗೋಚರ ತೆಗಳುತ್ತಿದ್ದ ಆರ್‌ಜೆಡಿ ನೇತೃತ್ವದ ‘ಇಂಡಿ’ ಒಕ್ಕೂಟಕ್ಕೆ ಲಾಲೂ ಅವರ ಮಗ ತೇಜಸ್ವಿಯನ್ನು ಬಿಟ್ಟರೆ ಬೇರಾರೂ ಕಾಣಿಸುವುದೇ ಇಲ್ಲ. ಇದೊಂದು ರೀತಿ ರಾಜಕಾರಣಿಗಳ ‘ಕೂಡಿಕೆ ಸಂಬಂಧ’.

ಇಂದಿನ ಸ್ಪಷ್ಟ ಚಿತ್ರಣವೆಂದರೆ ಬಿಹಾರ ಚುನಾವಣೆ ಸ್ಪರ್ಧೆಯ ಕಣದಲ್ಲಿ ನಿತೀಶ-ಲಾಲೂ – ನರೇಂದ್ರ ಮೋದಿಯವರ ಪಕ್ಷವೂ ಸೇರಿದಂತೆ ವಿವಿಧ ರಾಜಕೀಯ ನಾಯಕರ ರಕ್ತ ಸಂಬಂಧಿ ಅಥವಾ ದೂರದ ಬಂಧುಗಳ ಸಂಖ್ಯೆ ಸುಮಾರು 75ಕ್ಕೆ ಮುಟ್ಟಿದೆ. ಒಟ್ಟು 243 ಸ್ಥಾನಗಳ ಪೈಕಿ ಸಿಂಹಪಾಲು ನಾಯಕರ ಮಗ, ಸೊಸೆ, ಮಗಳು, ಅಳಿಯ, ತಮ್ಮ, ತಮ್ಮನ ಮಗ,

ಬೀಗರು ಇವರಿಂದ ತುಂಬಿದೆ. ನಾಯಕಾಗ್ರಣಿಗಳು ಮಾಡಿಕೊಂಡ ಸ್ವಯಂಕೃತಾಪರಾಧ ಆಡುವಂತಿಲ್ಲ, ಬಿಡುವಂತಿಲ್ಲ. నింతల

ವಂಶ ರಾಜಕಾರಣವನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿ, ಲಾಲೂಪ್ರಸಾದಯಾದವ, ಕರುಣಾನಿಧಿ, ದೇವೇಗೌಡರು… ಹೀಗೆ ಅಂದಿನ ಜನನಾಯಕರನ್ನು ಹೀಯಾಳಿಸುತ್ತಿದ್ದ ಉಳಿದ ರಾಜಕೀಯ ನಾಯಕರು ಬಿಹಾರದ ಟಿಕೆಟ್ ಹಂಚಿಕೆ ಬಗೆಗೆ ‘ಗಪ್‌ಚುಪ್’ ಆಗಿದ್ದಾರೆ.

ಬೀಗರು ಇವರಿಂದ ತುಂಬಿದೆ. ನಾಯಕಾಗ್ರಣಿಗಳು ಮಾಡಿಕೊಂಡ ಸ್ವಯಂಕೃತಾಪರಾಧ ಆಡುವಂತಿಲ್ಲ, ಬಿಡುವಂತಿಲ್ಲ, ನಿಂತಿಲ್ಲ.

ವಂಶ ರಾಜಕಾರಣವನ್ನು ಮುಂದಿಟ್ಟುಕೊಂಡು ಇಂದಿರಾಗಾಂಧಿ, ಲಾಲೂಪ್ರಸಾದಿಯಾದವ, ಕರುಣಾನಿಧಿ, ದೇವೇಗೌಡರು… ಹೀಗೆ ಅಂದಿನ ಜನನಾಯಕರನ್ನು ಹೀಯಾಳಿಸುತ್ತಿದ್ದ ಉಳಿದ ರಾಜಕೀಯ ನಾಯಕರು ಬಿಹಾರದ ಟಿಕೆಟ್ ಹಂಚಿಕೆ ಬಗೆಗೆ ‘ಗಪ್‌ಚುಪ್’ ಆಗಿದ್ದಾರೆ.

ಒಂದು ಉದಾಹರಣೆ, ಆರ್‌ಜೆಡಿ ಪಕ್ಷರಘುನಾಥಪುರ ಕ್ಷೇತ್ರದ ಟಿಕೆಟ್ ಅನ್ನು ಕೌರ್ಯ. ಸುಲಿಗೆ, ದರೋಡೆ, ಕೊಲೆ – ಇವೇ ಮೊದಲಾದ ಆಪಾದನೆಗಳೊಂದಿಗೆ ಕಾರಾಗೃಹದಲ್ಲಿದ್ದ ಮಹಮ್ಮದ್ ಶಹಾಬುದ್ದೀನ್ನ ಮಗ ಓಸಾಮಾ ಶಹಬ್ ಗೆ ನೀಡಿದೆ.

ಇನ್ನೊಂದು ರಾಜಾರೋಷದ ಆಯ್ಕೆಯೆಂದರೆ ಮುನ್ನಾ ಎನ್ನುವ ಕುಖ್ಯಾತಿಯ ಮಾಜಿ ಎಮ್ಮೆಲ್ಲೆ ತನ್ನ ಪುತ್ರಿ ಶಿವಾನಿ ಶುಕ್ಲಾಗೆ ಜೈಲಿನಲ್ಲೇ ಕುಳಿತು ಟಿಕೆಟ್ ಕೊಡಿಸಿರುವುದು.

ವಂಶಪಾರಂಪರ್ಯ ರಾಜಕಾರಣವನ್ನು ಹಗಲಿರುಳು ಟೀಕಿಸುವ ಪ್ರಧಾನಿ ನರೇಂದ್ರ ಮೋದಿಯವರ ಭಾಜಪ ಸಹಿತ ಈ ಅಪವಾದದಿಂದ ಹೊರತಾಗಿಲ್ಲ ಹಾಲಿ ಉಪಮುಖ್ಯಮಂತ್ರಿ ಸಾಮ್ರಾಟ್ ಚೌಧರಿ ತಂದೆಯೂ ಉನ್ನತ ಸ್ಥಾನದಲ್ಲಿದ್ದರು. ಹೀಗಾಗಿ ಮತ್ತೊಮ್ಮೆ ಸಾಮ್ರಾಟರಿಗೆ ಸೀಟು ಬಳುವಳಿ ಸಿಕ್ಕಿದೆ.

ಮಾಜಿ ಮುಖ್ಯಮಂತ್ರಿ ದಿ.ಜಗನ್ನಾಥ ಮಿಶ್ರ ಅವರ ಮಗ ನಿತೀಶ ಈಗ ಜಾಂಜರ್ ಕ್ಷೇತ್ರದ ಅಭ್ಯರ್ಥಿ. ಈಗಾಗಲೇ ಮಿಶ್ರ ನಿತೀಶ್‌ ಕುಮಾರರ ಮಂತ್ರಿಮಂಡಲದಲ್ಲಿ ಮಂತ್ರಿಯಾಗಿದ್ದಾನೆ.

ದಿಗ್ವಿಜಯ ಸಿಂಗ್‌ರ ಮಗಳು ಶ್ರೇಯಸಿ ಸಿಂಗ್ ಸಹಿತ ಈ ಗುಂಪಿನ ಸದಸ್ಯೆ. ಜುಮೈ ಈಕೆಯ ಕ್ಷೇತ್ರ,

ಭೂಮಿಹಾ‌ರ್ ಪಂಗಡದ ಪ್ರಭಾವಿ ನಾಯಕ ಅನಿಲ್‌ಕುಮಾರರಂತೂ ಮಗ ರಿತುರಾಜ, ಇನ್ನೊಬ್ಬ ಮಗ ಅನಿಲ, ಅಕ್ಕನ ಮಗ ರೋಹಿತ್ ಕುಮಾರ್… ಹೀಗೆ ಬೇರೆ ಬೇರೆ ಪಕ್ಷಗಳಿಂದ ವಂಶದ ಕುಡಿಗಳಿಗೆ ಸೀಟು ಕೊಡಿಸಿದ್ದಾನೆ.

ಉಳಿದ ಆರೆಂಟು ಚಿಲ್ಲರೆ – ಪಲ್ಲರೆ ಪಕ್ಷಗಳ ದಬ್ಬಾಳಿಕೆ ಕಹಾನಿಯೂ ಪ್ರಧಾನ ರಾಜಕೀಯ ಪಕ್ಷಗಳ ಸ್ಥಿತಿಗಿಂತ ಭಿನ್ನವಾಗಿಲ್ಲ. ಅತಿಹೆಚ್ಚು ಜಾತಿ ಆಧಾರತಿ ರಾಜಕೀಯ ಪಕ್ಷಗಳಿಂದ ತುಂಬಿದ ಅಪಖ್ಯಾತಿ ಬಿಹಾರದ್ದು. ಕಾಸಿಗೊಂದು, ಕೊಸರಿಗೆರಡು.

ಬೆಂಗಳೂರಿನ ವರದಿಗಾರರ ತಂಡ ದೇಶದ 18 ರಾಜ್ಯಗಳ ವಿಧಾನಸಭೆ ಚುನಾವಣೆ ಜನಾಭಿಪ್ರಾಯ ಸಂಗ್ರಹಿಸಲು ಸಾಕ್ಷಾತ್ ಸಮೀಕ್ಷೆ ನಡೆಸಿದೆ. ಬಿಹಾರ ಒಂದು ರಾಜಕೀಯ ಪ್ರಯೋಗಶಾಲೆಯ ಸ್ಯಾಂಪಲ್ ಅಷ್ಟೆ ಹಿಂದೆ ಜಂಗಲ್ ರಾಜ್ ಎನ್ನುವ ಕುಖ್ಯಾತಿಗೆ ಗುರಿಯಾಗಿದ್ದು, ಈಗ ಪ್ರಜಾತಂತ್ರ ಬಿಹಾರದಲ್ಲಿ ಚೇತರಿಸಿಕೊಳ್ಳುತ್ತಿದೆ.

ಹೀಗಾಗಿ ಉಳಿದ ರಾಜ್ಯಗಳ ವಂಶೀಕರಣ ದಂಧೆ ಮತ್ತಷ್ಟು ಹೊಲಸಾಗಿದೆ. ಉದಾಹರಣೆಗೆ ಕರ್ನಾಟಕ ರಾಜಕಾರಣ, ಅದರ ವಂಶ ಆಧಾರಿತ ಬಾಹುಗಳು ಮತ್ತು ನಾಚಿಕೆಗೆಟ್ಟ ಅಭ್ಯರ್ಥಿಗಳ ಆಯ್ಕೆ – ಇವಾವವೂ ಬಿಹಾರಕ್ಕಿಂತ ಕಡಿಮೆ ಪ್ರಮಾಣದಲ್ಲ. ನಮ್ಮಲ್ಲೂ ಲಾಲೂ ಪ್ರಸಾದರನ್ನು ಮೀರಿಸಬಲ್ಲವಂಶೋದ್ಧಾರಕ ರಾಜಕಾರಣಿಗಳು ದಂಡಿಯಾಗಿದ್ದಾರೆ.

Sakrebyle Elephant Camp ಶಿವಮೊಗ್ಗ ದಸರಾ ಆನೆ ” ಬಾಲಣ್ಣ” ನಿಗೆ ಕಿವಿಗೆ ಸರ್ಜರಿ, ಯಾವುದೇ ಪ್ರಾಣಾಪಾಯವಿಲ್ಲ- ತಜ್ಞ ವೈದ್ಯರ ತಂಡ

0

Sakrebyle Elephant Camp ದಸರಾ ಆನೆ ಬಾಲಣ್ಣನ ಕಿವಿಯನ್ನ ಸರ್ಜರಿ ಮೂಲಕ ವೈದ್ಯರು ತೆಗೆದಿದ್ದಾರೆ. ತೀವ್ರವಾಗಿ ಗ್ಯಾಂಗ್ರಿನ್ ಸೋಂಕಿನಿಂದಾಗಿ ಬಾಲಣ್ಣ ಆನೆಯ ಬಲಕಿವಿ ಸಂಪೂರ್ಣವಾಗಿ ಕಪ್ಪಾಗಿ ಕೀವು ಸೋರುತ್ತಿತ್ತು. ಈ ಹಿನ್ನೆಲೆಯಲ್ಲಿ ಆನೆಗೆ ತುರ್ತು ಚಿಕಿತ್ಸೆ ನೀಡಲು ಬೆಂಗಳೂರಿನಿಂದ ವಿಶೇಷ ವೈದ್ಯರ ತಂಡವು ಸಕ್ರೆಬೈಲು ಶಿಬಿರಕ್ಕೆ ಆಗಮಿಸಿತ್ತು.

ತಜ್ಞ ವೈದ್ಯರಾದ ಡಾ. ಚೆಟ್ಟುಯಪ್ಪ , ಡಾ. ವಸೀಮ್ ಸೇರಿದಂತೆ ಒಟ್ಟು ಐದು ಜನರ ವೈದ್ಯ ತಂಡದವರು ಆನೆಯ ಆರೋಗ್ಯವನ್ನು ಪರಿಶೀಲಿಸಿ ಚಿಕಿತ್ಸೆ ನೀಡಿದ್ದಾರೆ.

Sakrebyle Elephant Camp ಸೋಂಕು ತೀವ್ರವಾಗಿದ್ದರಿಂದ ಮತ್ತು ಗ್ಯಾಂಗ್ರಿನ್ ದೇಹದ ಇತರ ಭಾಗಗಳಿಗೆ ಹರಡುವ ಸಾಧ್ಯತೆ ಇದ್ದರಿಂದ ಕಿವಿಯನ್ನ ಸರ್ಜರಿ ಮೂಲಕ ತೆಗೆಯಲಾಗಿದೆ. ಆನೆಗೆ ಯಾವುದೇ ಪ್ರಾಣಪಾಯವಿಲ್ಲವೆಂದು ವೈದ್ಯರು ತಿಳಿಸಿದ್ದಾರೆ.

Shivananda Patil ಸೋಯಾಬಿನ್, ಸೂರ್ಯಕಾಂತಿ ,ಹೆಸರುಕಾಳು ಖರೀದಿ ಪ್ರಕ್ರಿಯೆ ಅ.28 ರಿಂದ ಆರಂಭ : ಸಚಿವ ಶಿವಾನಂದ ಪಾಟೀಲ್

0

Shivananda Patil ಬೆಂಬಲ ಬೆಲೆಯಲ್ಲಿ ಅಕ್ಟೋಬರ್ 28ರಿಂದ ಸೋಯಾಬಿನ್‌, ಸೂರ್ಯಕಾಂತಿ ಮತ್ತು ಹೆಸರುಕಾಳು ಖರೀದಿ ಆರಂಭವಾಗಲಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.

ಎಲ್ಲೆಡೆ ಈಗಾಗಲೇ ಖರೀದಿ ಕೇಂದ್ರಗಳನ್ನು ತೆರದು ನೋಂದಣಿ ಪ್ರಕ್ರಿಯೆ ಆರಂಭಿಸಲಾಗಿದೆ.

ಸೋಯಾಬಿನ್‌ ಖರೀದಿಗೆ ಒಟ್ಟು 206 ಖರೀದಿ ಕೇಂದ್ರಗಳನ್ನು ತೆರೆಯಲಾಗಿದ್ದು, 19,325 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಸಚಿವರು ತಿಳಿಸಿದ್ದಾರೆ.

ಬೀದರ್‌ ಜಿಲ್ಲೆಯಲ್ಲಿ 116 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 13,033 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆಯಲ್ಲಿ 3,047, ಧಾರವಾಡ ಜಿಲ್ಲೆಯಲ್ಲಿ 2,164 ರೈತರು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಹೆಸರುಕಾಳು ಖರೀದಿಗೆ ಒಟ್ಟು 211 ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದ್ದು, 16,578 ರೈತರು ನೋಂದಣಿ ಮಾಡಿದ್ದಾರೆ. ಧಾರವಾಡ ಜಿಲ್ಲೆಯಲ್ಲಿ ಅತಿ ಹೆಚ್ಚು (6362) ರೈತರು ನೋಂದಣಿ ಮಾಡಿಸಿದ್ದಾರೆ.

Shivananda Patil ಸೂರ್ಯಕಾಂತಿ ಖರೀದಿಗೆ 120 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5,341 ರೈತರು ನೋಂದಣಿ ಮಾಡಿಸಿದ್ದಾರೆ. ಉದ್ದಿನಕಾಳು ಖರೀದಿಗೆ 134 ಖರೀದಿ ಕೇಂದ್ರಗಳನ್ನು ಆರಂಭಿಸಿದ್ದು, 5,274 ರೈತರು
ಎಂದು ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.

World Stroke Day ಅಕ್ಟೋಬರ್ 29, ವಿಶ್ವ ಪಾರ್ಶ್ವವಾಯು ದಿನಾಚರಣೆ ಸಹ್ಯಾದ್ರಿ ನಾರಾಯಣ ಆಸ್ಪತ್ರೆ ಆಶ್ರಯದಲ್ಲಿ ವಿಶೇಷ ವಾಕಾಥಾನ್

0

World Stroke Day ವಿಶ್ವ ಪಾರ್ಶ್ವವಾಯು ದಿನದ ಅಂಗವಾಗಿ ನಗರದ ಪ್ರತಿಷ್ಠಿತ ಸಹ್ಯಾದ್ರಿ ನಾರಾಯಣ ಆಸ್ಪತ್ರೆಯು ಪಾರ್ಶ್ವವಾಯು ಕುರಿತು ಜನರಲ್ಲಿ ಅರಿವು ಮೂಡಿಸಲು ಅ.29 ರಂದು ವಾಕಾಥಾನ್‌ ಹಮ್ಮಿಕೊಂಡಿದೆ.

ಶಿವಮೊಗ್ಗ ನಗರದ ಕುವೆಂಪು ರಸ್ತೆಯಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ ನಿಂದ ಬೆಳಿಗ್ಗೆ 6:15ಕ್ಕೆ ಪ್ರಾರಂಭವಾಗುವ ವಾಕಾಥಾನ್‌ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ನಾರಾಯಣ ಮಲ್ಟಿಸ್ಪೆಷಾಲಿಟಿ ಕ್ಲಿನಿಕ್‌ ಆವರಣದಲ್ಲಿಯೇ ಮುಕ್ತಾಯಗೊಳ್ಳಲಿದೆ. ನರರೋಗ ಶಾಸ್ತ್ರಜ್ಞ ಡಾ. ಶಿವರಾಮ ಕ್ರಿಷ್ಣಾ ಜಾಥಾವನ್ನು ಉದ್ಘಾಟಿಸಲಿದ್ದಾರೆ.

World Stroke Day ಸಾರ್ವಜನಿಕರು ಬೃಹತ ಪ್ರಮಾಣದಲ್ಲಿ ಈ ಜಾಗೃತಿ ನಡಿಗೆಯಲ್ಲಿ ಪಾಲ್ಗೊಂಡು ಇದನ್ನು ಯಶಸ್ವಿಗೊಳಿಸುವಂತೆ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಶ್ರೀ ವರ್ಗಿಸ್‌ ಪಿ ಜಾನ್‌ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 08884492830

Klive Special Article ನೊಳಂಬರ ವಾಸ್ತುಶಿಲ್ಪಕ್ಕೆ ಹೆಸರು, ಅರಳುಗುಪ್ಪೆ ಶ್ರೀಕಲ್ಲೇಶ್ವರ ದೇಗುಲ-ದಿಲೀಪ್ ನಾಡಿಗ್, ಶಿವಮೊಗ್ಗ

0

Klive Special Article ನೊಳಂಬ ಶ್ರೀ ಕಲ್ಲೇಶ್ವರ ದೇವಾಲಯವು ಕರ್ನಾಟಕದ ತುಮಕೂರು ಜಿಲ್ಲೆಯ ಅರಳಗುಪ್ಪೆ ಗ್ರಾಮದಲ್ಲಿದೆ. 9ನೇ ಶತಮಾನದಲ್ಲಿ ನೊಳಂಬರ ಆಳ್ವಿಕೆಯಲ್ಲಿ ನಿರ್ಮಾಣವಾದ ಈ ದೇವಾಲಯವು ಶಿವನಿಗೆ ಸಮರ್ಪಿತವಾಗಿದೆ. ಇದು ತನ್ನ ವಿಶಿಷ್ಟ ನೊಳಂಬ ಮತ್ತು ಪಶ್ಚಿಮ ಗಂಗಾ ವಾಸ್ತುಶಿಲ್ಪ ಶೈಲಿಗಳಿಗೆ ಹೆಸರುವಾಸಿಯಾದ ರಾಜ್ಯ ಸಂರಕ್ಷಿತ ಸ್ಮಾರಕವಾಗಿದೆ.
ವಾಸ್ತುಶಿಲ್ಪದ ವೈಶಿಷ್ಟ್ಯಗಳು
ಸೂಕ್ಷ್ಮ ಕೆತ್ತನೆಯ ಮೇಲ್ಛಾವಣಿಯ ಮಹಾ ಮಂಟಪವು ನೃತ್ಯ ಮಾಡುತ್ತಿರುವ ಶಿವನ ಅದ್ಭುತ ತ್ರಿ-ಆಯಾಮದ (ಮೂರು ಆಯಾಮ, 3 Dimension) ಶಿಲ್ಪವನ್ನು ಹೊಂದಿದೆ. ಇದು ನಾಲ್ಕು ಹಾರುವ ವಿದ್ಯಾಧರರಿಂದ ಸುತ್ತುವರಿದಿದೆ. ಮೇಲ್ಛಾವಣಿಯ ಕೆಲಸವು ನೊಳಂಬರ ಕಾಲದ ಶಿಲ್ಪ ಕಲೆಯಲ್ಲಿ ಒಂದು ಮೇರುಕೃತಿಯಾಗಿದೆ.
ಉಮಾ ಮಹೇಶ್ವರ ಶಿಲ್ಪ: ಈ ದೇವಾಲಯದಲ್ಲಿ ಶಿವನು ತನ್ನ ಸಂಗಾತಿ ಪಾರ್ವತಿಯೊಂದಿಗೆ ಇರುವ ಅಪರೂಪದ ಮತ್ತು ಸುಂದರವಾದ ಉಮಾ ಮಹೇಶ್ವರ ಶಿಲ್ಪವಿದೆ. ಇದು ಸೂಕ್ಷ್ಮವಾದ ಕೆತ್ತನೆಗಳ ವಿವರಗಳನ್ನು ಹೊಂದಿದೆ.
ದೊಡ್ಡ ನಂದಿ ಶಿಲ್ಪ: ಮುಖ್ಯ ಗರ್ಭಗುಡಿಯ ಹೊರಗೆ, ನಂದಿಯ (ಶಿವನ ವಾಹನವಾದ ಗೂಳಿ) ದೊಡ್ಡ, ಸೂಕ್ಷ್ಮವಾಗಿ ಕೆತ್ತಿದ ಪ್ರತಿಮೆಯು ಮತ್ತೊಂದು ಗಮನಾರ್ಹ ಆಕರ್ಷಣೆಯಾಗಿದೆ.
ಅನೇಕ ರಾಜವಂಶಗಳ ಪ್ರಭಾವವನ್ನು ಹೊಂದಿದ್ದರೂ ಪ್ರಧಾನವಾಗಿ ನೊಳಂಬ ಶೈಲಿಯದ್ದಾಗಿದ್ದರೂ, ದೇವಾಲಯವು ಅದರ ಆರಂಭಿಕ ವಿನ್ಯಾಸದಲ್ಲಿ ಪಶ್ಚಿಮ ಗಂಗಾ ಪ್ರಭಾವಗಳನ್ನು ಮತ್ತು ನಂತರದ ಸೇರ್ಪಡೆಗಳಲ್ಲಿ ಹೊಯ್ಸಳ ರಾಜವಂಶದ ಪ್ರಭಾವಗಳನ್ನು ಸಹ ತೋರಿಸುತ್ತದೆ.

Klive Special Article ಕಪ್ಪು ಗ್ರಾನೈಟ್ ಲಿಂಗದ ರೂಪದಲ್ಲಿರುವ ಶಿವ ದೇವಾಲಯವು ,ವಿಸ್ತಾರವಾದ ಕೆರೆಯ ದಡದಲ್ಲಿದ್ದು, ದಡದಲ್ಲಿ ವಸಂತ ಮಂಟಪವೂ ಇದ್ದು ಅದು ಮತ್ತು ರಮಣೀಯ ವಾತಾವರಣಕ್ಕೆ ಸಾಕ್ಷಿಯಾಗಿದೆ.

ಈ ದೇವಾಲಯಗಳ ವಾಸ್ತುಶಿಲ್ಪವು ಗಂಗ-ನೋಳಂಬ ಶೈಲಿಯದು (ಕ್ರಿ.ಶ. 9ನೇ ಶತಮಾನ). ಮುಖ್ಯ ದೇವಾಲಯದ (ಕಲ್ಲೇಶ್ವರ) ಛಾವಣಿಯಲ್ಲಿ ನರ್ತನಮಾಡುವ ಶಿವನ ಶಿಲ್ಪವಿದೆ — ಅವನ ಸುತ್ತಲೂ ವಾದ್ಯಗಾರರು ಮತ್ತು ಎಂಟು ದಿಕ್ಕಿನ ಪಾಲಕರು (ದಿಕ್ಪಾಲರು) ಇದ್ದಾರೆ.

ಕ್ರಿ.ಶ. 895 (ಶಕ 817) ರ ಶಿಲಾಶಾಸನದಲ್ಲಿ ಈ ದೇವಾಲಯವನ್ನು ನೋಳಂಬ ರಾಜನೊಬ್ಬನು, ತನ್ನ ಅಧಿಪತಿ ಪಶ್ಚಿಮ ಗಂಗ ರಾಜ ಎರಡನೇ ರಾಚಮಲ್ಲ (ಆಳ್ವಿಕೆ: 870–907) ಅವರ ಅಧೀನದಲ್ಲಿ ನಿರ್ಮಿಸಿದ್ದಾನೆಂದು ಹೇಳುತ್ತದೆ. ಇದೇ ಶಾಸನದಲ್ಲಿ ಎರಡನೇ ರಾಚಮಲ್ಲ ಸ್ವತಃ ಈ ದೇವಾಲಯ (ಶಾಸನದಲ್ಲಿ ಕಲ್ಲದೇಗುಲ ಎಂದು ಕರೆಯಲ್ಪಟ್ಟಿದೆ) ನಿರ್ಮಾಣಕ್ಕೆ ದಾನ ನೀಡಿರುವುದನ್ನೂ ದಾಖಲಿಸಿದೆ. ದೇವಾಲಯದ ಕೆರೆಯ (ಪುಷ್ಕರಣಿ) ಬಳಿ ಕಂಡುಬರುವ ಇನ್ನೊಂದು ವೀರಗಲ್ಲು (ಹೀರೋ ಸ್ಟೋನ್) ಈ ಪ್ರದೇಶ ಆ ಕಾಲದಲ್ಲಿ ಪಶ್ಚಿಮ ಗಂಗ ವಂಶದ ಆಡಳಿತದೊಳಗೆ ಇತ್ತೆಂಬುದನ್ನು ದೃಢಪಡಿಸುತ್ತದೆ.

ಇತಿಹಾಸಕಾರ ಎಂ.ಎನ್. ಸರ್ಮಾ ಅವರ ಪ್ರಕಾರ, ಪಶ್ಚಿಮ ಗಂಗರು ಮತ್ತು ನೊಳಂಬರು ಸಂಸ್ಕೃತಿ ಹಾಗೂ ಕಲೆಗಳಲ್ಲಿ ಅಪಾರ ಶ್ರದ್ಧೆ, ಅಭಿಮಾನ ಹೊಂದಿದ್ದರು. ಅವರು ಸಾಮಾನ್ಯವಾದ ಶಿಲ್ಪಿ ಮತ್ತು ಸ್ಥಪತಿ ಗಿಲ್ಡುಗಳು (guilds) — ಅಂದರೆ ಒಂದೇ ಶಿಲ್ಪಕಲಾ ಸಂಘಗಳು — ಬಳಸುತ್ತಿದ್ದರು.

ನಂತರದ ಕಾಲದಲ್ಲಿ, ವಿಶೇಷವಾಗಿ ಹೊಯ್ಸಳರ ಕಾಲದಲ್ಲಿ, ದೇವಾಲಯಕ್ಕೆ ಮೂರು ಬದಿಯ ಉಪಮಂದಿರಗಳು ಮತ್ತು ಶಿವನ ವಾಹನವಾದ ನಂದಿಗೆ (ನಂದಿ-ಶಾಲೆ) ಒಂದು ಪ್ರತ್ಯೇಕ ಕಟ್ಟಡ ಸೇರಿಸಲಾಯಿತು ಎಂದು ಕಲಾ ವಿಮರ್ಶಕ ಟಕೆಯೋ ಕಾಮಿಯಾ ಮತ್ತು ಸರ್ಮಾ ಇಬ್ಬರೂ ಹೇಳಿದ್ದಾರೆ.

ದೇವಾಲಯದ ವಿನ್ಯಾಸ ಮತ್ತು ಶಿಲ್ಪಕಲಾ ವೈಶಿಷ್ಟ್ಯಗಳು ಗಮನಿಸಿದರೆ
ಗರ್ಭಗೃಹ (sanctum) ಚೌಕಾಕಾರದ ಪಿರಮಿಡ್ ಆಕಾರದ ಯೋಜನೆಯಾಗಿದೆ.
ಇದರ ಹೊರಭಾಗ ಸರಳವಾದರೂ ಸುಂದರ ಸ್ತಂಭಗಳನ್ನು ಹೊಂದಿದೆ.

ಗರ್ಭಗೃಹ ಮತ್ತು ಮುಂಭಾಗದ ಮುಖಮಂಟಪದ ನಡುವಣ ಭಾಗವನ್ನು ಅಂತರಾಳ ಎಂದೂ ಕರೆಯುತ್ತಾರೆ.

ಮುಖ್ಯ ಸಭಾಭಾಗವಾದ ಮಹಾಮಂಟಪ ಅಥವಾ ನವರಂಗ ಅತ್ಯಂತ ಕಲಾತ್ಮಕವಾಗಿ ವಿನ್ಯಾಸಗೊಂಡಿದೆ.
ಗರ್ಭಗೃಹದ ಮೇಲಿನ ಶಿಖರ ಮತ್ತು ಸುಕನಾಸಿ (ಮುಂಭಾಗದ ಗೋಪುರ ಭಾಗ) ನಂತರದ ದುರಸ್ತಿ ಕಾಲದವು, ಆದರೆ ದೇವಾಲಯದ ನೆಲಭಾಗದ ಅಧಿಷ್ಠಾನ ಮೂಲದಾಗಿದೆ.
ಮುಖ್ಯ ಬಾಗಿಲಿನ ದ್ವಾರಶಾಖೆ ಮತ್ತು ಲಲಾಟ (ಲಿಂಟೆಲ್) ಅತ್ಯುತ್ತಮ ಶಿಲ್ಪಗಳನ್ನು ಹೊಂದಿವೆ.

ಬಾಗಿಲಿನ ಎರಡೂ ಬದಿಗಳಲ್ಲಿ ಕುಳಿತಿರುವ ದ್ವಾರಪಾಲಕರು,
ಸುತ್ತುವರಿದ ಲತೆ-ಬಳ್ಳಿಗಳ ಅಲಂಕಾರಗಳು,
ಅವುಗಳಲ್ಲಿ ಯಕ್ಷರು ಮತ್ತು ಯಕ್ಷಿಣಿಯರು (ಸೌಮ್ಯ ಆತ್ಮಶಕ್ತಿಗಳು) ಚಿತ್ರಿಸಲಾಗಿದೆ.

ಬಾಗಿಲಿನ ಮೇಲ್ಭಾಗದಲ್ಲಿ ಗಜಲಕ್ಷ್ಮಿ ದೇವಿಯ ಶಿಲ್ಪವಿದ್ದು, ಆಕೆಯ ಎರಡೂ ಬದಿಯಿಂದ ಆನೆಗಳು ನೀರು ಎರೆಯುತ್ತಿವೆ.
ಈ ಗಜಲಕ್ಷ್ಮಿಯ ಶಿಲ್ಪವು ಶ್ರವಣಬೆಳಗೊಳದ ವಿಂಧ್ಯಗಿರಿಯ “ಅಖಂಡ ಬಾಗಿಲು”ಯ ಶಿಲ್ಪಕ್ಕೆ ಪ್ರೇರಣೆಯಾಗಿರಬಹುದೆನಿಸುತ್ತದೆ.
ಮಹಾಮಂಟಪದ ಮೇಲ್ಭಾಗದ ಅಷ್ಟದಿಕ್ಕುಗಳ ರಕ್ಷಕ ದೇವತೆಗಳ (ಅಷ್ಟ-ದಿಕ್ಪಾಲಕರು) ಚಿತ್ರಪಟಗಳು ಅತ್ಯಂತ ನಾಜೂಕು ಕಲಾಕೌಶಲ ತೋರಿಸುತ್ತವೆ.
ಅವುಗಳಲ್ಲಿ ಚತುರ್ಭುಜ ನಟರಾಜ ಶಿಲ್ಪ, ಹಾಗು ನಾಲ್ಕು ದಂತಗಳ ಆನೆ ಮೇಲೆ ಇಂದ್ರನು ಮತ್ತು ಸಚಿಯು ಕುಳಿತಿರುವ ದೃಶ್ಯ ವಿಶಿಷ್ಟ ಕಲಾತ್ಮಕತೆಯ ದೃಶ್ಯಕಾವ್ಯವಾಗಿದೆ.
ಅರಳಗುಪ್ಪೆಯ ಕಲ್ಲೇಶ್ವರ ದೇವಾಲಯವು ನೊಳಂಬ–ಗಂಗ ಕಾಲದ ಶೈವ ಪರಂಪರೆಯ ಅದ್ಭುತ ಶಿಲ್ಪಕಲೆಯ ಉದಾಹರಣೆಯಾಗಿದೆ..

ಆಧಾರ:
Sarma, I.K. (1992) [1992]. Temples of the Gangas of Karnataka. New Delhi:

Archaeological Survey of India. ISBN 0-19-560686-8.
Kamiya, Takeyo. “Architecture of Indian subcontinent”. Indian Architecture. Gerard da Cunha. Archived from the original on 8 February 2012. Retrieved 27 December 2012.

ನಮ್ಮ ದೇವಾಲಯ, ನಮ್ಮ ಹೆಮ್ಮೆ,

ನಮ್ಮ ಪರಂಪರೆ ಶ್ರೇಷ್ಠ ಪರಂಪರೆ,

ನಮ್ಮ ಇತಿಹಾಸ ಭವ್ಯ ಇತಿಹಾಸ.

ದಿಲೀಪ್ ನಾಡಿಗ್
6361124316
9448148710

ಕಾರ್ಯದರ್ಶಿ
ಮಲೆನಾಡು ಇತಿಹಾಸ ಸಂಶೋಧನಾ ಮತ್ತು ಅಧ್ಯಯನ ವೇದಿಕೆ, (ರಿ), ಶಿವಮೊಗ್ಗ

ಅನ್ನ ದಾಸೋಹದ ಪರಿಕಲ್ಪನೆ ನೊಂದವರ ,ಹಸಿದವರ ಆಧಾರ ಸ್ಥಂಭ: ಡಾ.ಸಣ್ಣರಾಮ

0

ಅನ್ನ ದಾಸೋಹ ಪರಿಕಲ್ಪನೆಯು ಶಿವಶರಣರು ಹುಟ್ಟು ಹಾಕಿದ್ದು ಎಂದು ಕುವೆಂಪು ವಿ ವಿ ಯ ವಿಶ್ರಾಂತ ಪ್ರಾಧ್ಯಾಪಕರಾದ ಡಾ. ಸಣ್ಣರಾಮ ಹೇಳಿದರು. ಶಿವಮೊಗ್ಗ ನಗರದ ಬಿ ಹೆಚ್ ರಸ್ತೆಯಲ್ಲಿರುವ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಕೇಂದ್ರ ಕಾರ್ಯಾಲಯದಲ್ಲಿ ಅನ್ನ ದಾಸೋಹ ಕೇಂದ್ರ ವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಂದು ಪ್ರಾರಂಭವಾದ ಈ ಪರಿಕಲ್ಪನೆಯು ನೊಂದವರ, ಹಸಿದವರ ಬದುಕಿಗೆ ಆಧಾರ ಸ್ತಂಭವಾಯಿತು. ಅಂದು ಪ್ರಾರಂಭವಾದ ಈ ಪರಿಕಲ್ಪನೆಯನ್ನು ಮಠಮಾನ್ಯಗಳು ಇಂದಿಗೂ ಮುಂದುವರಿಸಿಕೊಂಡು ಬರುತ್ತಿರುವುದು ಮೆಚ್ಚುತಕ್ಕ ಸಂಗತಿಯಾಗಿದೆ ಎಂದು ಹೇಳಿದರು.
ಡಿಎಸ್‌ಎಸ್ ಕಚೇರಿಯಲ್ಲಿ ಅನ್ನದಾಸೋಹ ಕೇಂದ್ರವನ್ನು ತೆರೆದು ಮಧ್ಯಾಹ್ನದ ಹಸಿವಿಗೆ ಅನ್ನ ನೀಡುವ ವ್ಯವಸ್ಥೆಯನ್ನು ಸಮಿತಿಯು ರೂಪಿಸಿರುವುದು ಸ್ವಾಗತಾರ್ಹವಾದ ಸಂಗತಿಯಾಗಿದೆಯಲ್ಲದೆ ಹಸಿದವರು ಹೊಟ್ಟೆಗೆ ಇಡಿ ಅನ್ನವನ್ನು ನೀಡುವ ಉದ್ದೇಶ ಅತ್ಯಂತ ಮೆಚ್ಚು ತಕ್ಕಂತಹ ಸಂಗತಿಯಾಗಿದೆ ಎಂದು ಡಾ. ಸಣ್ಣರಾಮ ರವರು ಹೇಳಿದರು.
ವೇದಿಕೆಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಡಾ. ಶ್ರೀನಿವಾಸ್ ಕರಿಯಣ್ಣ, ನಿವೃತ್ತ ಎಸ್ ಇ ಅಣ್ಣಪ್ಪ, ಲೋಕೇಶ್ ತಿಮ್ಮಲಾಪುರ ಶಿವಲಿಂಗಪ್ಪ ಮಾರಶೆಟ್ಟಿಹಳ್ಳಿ, ಯಡವಾಲ ಹನುಮಂತಪ್ಪ, ಜಿಲ್ಲಾ ಸಂಚಾಲಕ ಎಂ ಏಳುಕೋಟಿ, ಚಿಕ್ಕಮರಡಿ ರಮೇಶ್, ಹರಿಗೆ ರವಿ, ತಮ್ಮಯ್ಯ ಭದ್ರಾವತಿ, ಕೃಷ್ಣ ಬೊಮ್ಮನಕಟ್ಟೆ, ಹಸ್ವಿ ಬಸವರಾಜ್ ಮೊದಲಾದವರು ಉಪಸ್ಥಿತರಿದ್ದರು. ಸಭೆಯ ಅಧ್ಯಕ್ಷತೆಯನ್ನು ಪ್ರೊ. ಬಿ. ಕೃಷ್ಣಪ್ಪನವರು ಸ್ಥಾಪಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರಾದ ಎಂ ಗುರುಮೂರ್ತಿ ಶಿವಮೊಗ್ಗ ರವರು ವಹಿಸಿದ್ದರು.

Karnataka Financiers Association ಹಣಕಾಸು ಲೇವಾದೇವಿಯಲ್ಲಿ ಫೈನಾನ್ಸ್ ಸಂಸ್ಥೆಗಳು ಬದಲಾಗಿರುವ ಕಾನೂನು ಅರಿತಿರಬೇಕು : ಡಿ.ಎಸ್.ಅರುಣ್

0

ದೇಶದ ಆರ್ಥಿಕತೆಗೆ ಫೈನಾನ್ಸಿಯರ‍್ಸ್ ಕೊಡುಗೆ ಅಪಾರ. ಇತ್ತೀಚೆಗೆ ಫೈನಾನ್ಸ್ ನಿರ್ವಹಣೆ ಕಾನೂನಿನಲ್ಲಿ ಸಾಕಷ್ಟು ಬದಲಾವಣೆ ಆಗಿದ್ದು, ಕಾನೂನಿನ ನಿಯಮಗಳನ್ನು ಪಾಲಿಸಿ ವ್ಯವಹಾರ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಡಿ.ಎಸ್.ಅರುಣ್ ಹೇಳಿದರು.
Karnataka Financiers Association ಶಿವಮೊಗ್ಗ ನಗರದ ಕಂಟ್ರಿ ಕ್ಲಬ್‌ನಲ್ಲಿ ಅಖಿಲ ಕರ್ನಾಟಕ ಫೈನಾನ್ಸಿಯರ‍್ಸ್ ಅಸೋಸಿಯೇಷನ್ ಹಾಗೂ ಶಿವಮೊಗ್ಗ ಫೈನಾನ್ಸಿಯರ‍್ಸ್ ಅಸೋಸಿಯೇಷನ್ ಘಟಕದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ಫೈನಾನ್ಸಿಯರ್ ಸೆಮಿನಾರ್, ತೆರಿಗೆ, ಕಾನೂನು, ಲೇವಾದೇವಿ, ಚಿಟ್ಸ್ ಬಗ್ಗೆ ಮಾಹಿತಿ ಕಾರ್ಯಾಗಾರ, ಹಿರಿಯ ಲೇವಾದೇವಿಗಾರರಿಗೆ ಸನ್ಮಾನ ಮತ್ತು ಸನ್ಮಾನ ಪತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಬದಲಾಗುತ್ತಿರುವ ಕಾನೂನುಗಳ ಬಗ್ಗೆ ನಿರಂತರವಾಗಿ ಮಾಹಿತಿ ಹೊಂದಿರಬೇಕು. ಅದಕ್ಕೆ ಅನುಗುಣವಾಗಿ ಲೇವಾದೇವಿ ವ್ಯವಹಾರಗಳನ್ನು ಮಾಡಬೇಕು. ಹಣಕಾಸು ಸಂಘ ಸಂಸ್ಥೆಗಳಿಂದ ಸಾಲ ತೆಗೆದುಕೊಳ್ಳುವವರು ಸರಿಯಾದ ಉದ್ದೇಶಗಳಿಗೆ ಬಳಸಿಕೊಂಡು ಸಕಾಲದಲ್ಲಿ ಮರುಪಾವತಿ ಮಾಡಬೇಕು. ಇಂತಹ ಫೈನಾನ್ಸ್ ಸಂಸ್ಥೆಗಳು ಇಲ್ಲದಿದ್ದರೆ ಆರ್ಥಿಕ ವ್ಯವಹಾರ ತುಂಬಾ ಸಮಸ್ಯೆ ಆಗುತ್ತದೆ ಎಂದು ತಿಳಿಸಿದರು.
ಪೊಲೀಸ್ ಹೆಚ್ಚುವರಿ ಅಧೀಕ್ಷಕ ರಮೇಶ್ ಮಾತನಾಡಿ, ಪರವಾನಗಿ ಪಡೆಯದೆ ಲೇವಾದೇವಿ ಮಾಡಬೇಡಿ, ಕಾನೂನುಗಳನ್ನು ಪಾಲಿಸಬೇಕು. ಸಾಲ ತೆಗೆದುಕೊಂಡವರಿಗೆ ತೊಂದರೆ ಕೊಡಬೇಡಿ, ಸಾಲ ಕೊಡುವಾಗ ಮರುಪಾವತಿ ಶಕ್ತಿ ಇದೆಯೇ ಎಂಬುದನ್ನು ಗಮನಿಸಿ ವ್ಯವಹಾರ ನಡೆಸಬೇಕು ಎಂದು ಹೇಳಿದರು.
ಸಹಕಾರಿ ಸಂಘಗಳ ಉಪವಿಭಾಗ ಸಹಾಯಕ ನಿಬಂಧಕ ಶ್ರೀನಿವಾಸ್ ಮಾತನಾಡಿ, ಕಾಲಕಾಲಕ್ಕೆ ಪರವಾನಗಿ ನವೀಕರಿಸಿ ಪುಸ್ತಕ ತಪಾಸಣೆ ಮಾಡಬೇಕು. ಖಾಲಿ ದಾಖಲಾತಿಗಳನ್ನು ತೆಗೆದುಕೊಳ್ಳಬೇಡಿ, ಅಧಿಕ ಬಡ್ಡಿ ಪಡೆಯಬೇಡಿ, ಸಾಲ ತೆಗೆದುಕೊಂಡವರು ಸರಿಯಾದ ರೀತಿಯಲ್ಲಿ ಪಾವತಿ ಮಾಡಬೇಕು ಎಂದರು.
Karnataka Financiers Association ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ಅಧ್ಯಕ್ಷ ಸಿ.ಕೆ.ಮೂರ್ತಿ ಮಾತನಾಡಿ, ಪ್ರತಿ ವರ್ಷ ವಿವಿಧ ಜಿಲ್ಲೆಗಳಲ್ಲಿ ಇಂತಹ ಕಾರ್ಯಾಗಾರಗಳು ಹಮ್ಮಿಕೊಳ್ಳುವುದರ ಮೂಲಕ ಸಂಘಟನೆ ಬಲಪಡಿಸಲಾಗುತ್ತದೆ. ಇನ್ನೂ ಹೆಚ್ಚಿನ ಹೊಸ ಸದಸ್ಯರು ಸಂಸ್ಥೆಗೆ ಸೇರ್ಪಡೆಯಾಗಬೇಕು ಎಂದು ತಿಳಿಸಿದರು.
ಅಖಿಲ ಕರ್ನಾಟಕ ಫೈನಾನ್ಸಿಯರ್ ಅಸೋಸಿಯೇಷನ್ ರಾಜ್ಯ ಸಂಘಟನಾ ಕಾರ್ಯದರ್ಶಿ, ಜಿಲ್ಲಾ ಫೈನಾನ್ಸಿಯರ್ ಘಟಕದ ಅಧ್ಯಕ್ಷ ಜಿ.ವಿಜಯಕುಮಾರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಆರ್.ಪ್ರಸನ್ನಕುಮಾರ್, ರಾಜ್ಯ ಕಾರ್ಯಾಧ್ಯಕ್ಷ ಬಿ.ಶಿವರಾಮ್, ಟಿ.ಎಸ್.ಬದರಿನಾಥ್, ವಿವಿಧ ಜಿಲ್ಲೆಗಳಿಂದ. ಫೈನಾನ್ಸಿಯರ್ಸ್, ಕರ್ನಾಟಕ ಫೈನಾನ್ಸಿಯಸ್ ಅಸೋಸಿಯೇಷನ್ ರಾಜ್ಯ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

Ramesh Pandit ಚಿತ್ರ ನಿರ್ದೇಶಕ ರಮೇಶ್ ಬೇಗಾರ್, ಹೀಗಿರುತ್ತೆ ನೋಡಿ ನಟ ರಮೇಶ್ ಪಂಡಿತ್ ಲುಕ್

0

Ramesh Pandit ರಂಗಭೂಮಿ, ಕಿರುತೆರೆ ಮತ್ತು ಚಲನಚಿತ್ರ ಕ್ಷೇತ್ರದ ದೈತ್ಯ ಪ್ರತಿಭೆ ರಮೇಶ್ ಪಂಡಿತ್. ಇಂದವರ ಜನ್ಮದಿನ. ಈ ಪ್ರಯುಕ್ತ ಶುಭಾಶಯಗಳೊಂದಿಗೆ ನಮ್ಮ ನೂತನ ಚಲನಚಿತ್ರ ದಲ್ಲಿ ಪಂಡಿತ್ ಅವರ ಪಾತ್ರದ ನೋಟವನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ.

ಯಾವ ಪಾತ್ರಕ್ಕಾದರೂ ಜೀವತುಂಬಬಲ್ಲ Ramesh Pandit ಅವರ ಸ್ನೇಹ ನನಗೆ ದೊರಕಿದ್ದು 2008 ರಲ್ಲಿ ಜೀ ಕನ್ನಡ ವಾಹಿನಿಗೆ ನಾನು ನಿರ್ದೇಶಿಸಿದ್ದ ಏಕೆ ಹೀಗೆ ನಮ್ಮ ನಡುವೆ ಸೀರಿಯಲ್ ಮೂಲಕ. ಅದರಲ್ಲಿ ಜಬರ್ದಸ್ತ್ ನೆಗೆಟಿವ್ ಲೀಡ್ ರೋಲ್ ಮಾಡಿದ್ದ ಪಂಡಿತ್ ಜೀ ನನ್ನ ಮಲೆನಾಡ ಸೊಗಡಿನ ಸಂಭಾಷಣೆ ಸ್ವಾದವನ್ನು ಸಂಭ್ರಮಿಸುತ್ತಿದ್ದರು. ಟ್ರಾಕ್ ಬರವಣಿಗೆ ಹಂಚಿಕೊಳ್ಳಲು ಆರಂಭಿಸಿದ ಮೇಲೆ ನನ್ನ ಟ್ರಾಕ್ ನ ಸಂಭಾಷಣೆ ನೀವು ಬರೆಯುವುದಾದರೆ ಮಾತ್ರ ಶೃಂಗೇರಿ ಗೆ ಬರುತ್ತೇನೆ ಎಂದು ಪ್ರೀತಿಯ ತಾಕೀತು ಮಾಡುತ್ತಿದ್ದ ಸಿಂಪಲ್ ಸ್ಟಾರ್ ಇವರು.

ಬಿ ಜಯಶ್ರೀ ಅವರ ಚಿತ್ರಪಟ ರಾಮಾಯಣ ನಾಟಕ ದಲ್ಲಿ ಪಂಡಿತ್ ರ ರಾವಣ ನ ನೋಡಿ ದಿಗ್ಭ್ರಮೆಗೊಂಡವನು ನಾನು.

ಆಕಾಶದ ಎತ್ತರದ ನಗು, ಭೂಮಿ ತೂಕ ದ ಸ್ನೇಹಮಯಿ ವ್ಯಕ್ತಿತ್ವ, ಅಮೋಘ ಸಹಕಾರ, ಸೆಟ್ ನಲ್ಲಿ ಸದಾ ಹಾಸ್ಯ, ಚಿನಕುರಳಿ ಪನ್ ಮತ್ತು ಪಂಚ್ ರಮೇಶ್ ಅವರ ಹೆಚ್ಚುಗಾರಿಕೆ. ಕಳೆದ ವರ್ಷ ಇವರೊಂದಿಗೆ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸಿದ್ದು ಕೂಡಾ ಕಾಕತಾಳಿಯವಾದರೂ ಖುಷಿ ಕೊಟ್ಟ ಸಂಗತಿ.

Ramesh Pandit ನಮ್ಮ ಹೊಸ ಸಿನಿಮಾ ದಲ್ಲಿ ಖಳನಾಯಕನಿಗೆ ಹೊರತಾಗಿ ಒಂದು ವಿಶೇಷ ಹಾಗೂ ಗಟ್ಟಿ ಪಾತ್ರದಲ್ಲಿ ನಟಿಸಿದ್ದಾರೆ.

ಹೀಗಿರತ್ತೆ ನೋಡಿ ರಮೇಶ್ ಪಂಡಿತ್ ಲುಕ್ ಎಂದು ನಿರ್ದೇಶಕ ರಮೇಶ್ ಬೇಗಾರ್ ಕೆ ಲೈವ್ ನ್ಯೂಸ್ ಗೆ ‌ತಮ್ಮ ಪೋಸ್ಟ್ ಹಂಚಿಕೊಂಡಿದ್ದಾರೆ.