Saturday, May 16, 2026
Saturday, May 16, 2026
Home Blog Page 119

Rotary Club Shivamogga ಕೌಶಲ್ಯ ಕಲಿಕೆಗೆ ಆದ್ಯತೆ ನೀಡಿ.ಉದ್ಯಮದಲ್ಲಿ ಯಶಸ್ಸು ಸಾಧ್ಯ- ನಿವೇದಿತಾ ವಿಕಾಸ್

0

Rotary Club Shivamogga ಜೀವನದಲ್ಲಿ ಕೌಶಲ್ಯಗಳ ಕಲಿಕೆಗೆ ಆದ್ಯತೆ ನೀಡುವುದರಿಂದ ಉದ್ಯಮದಲ್ಲಿ ಯಶಸ್ಸು ಗಳಿಸಲು ಸಾಧ್ಯವಿದೆ ಎಂದು ಜೆಸಿಐ ತರಬೇತುದಾರರಾದ ನಿವೇದಿತಾ ವಿಕಾಸ್ ಹೇಳಿದರು.

ರೋಟರಿ ಕ್ಲಬ್ ಶಿವಮೊಗ್ಗ ಪೂರ್ವ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿ, ಮಾರುಕಟ್ಟೆಯಲ್ಲಿ ಅತ್ಯಂತ ಪೈಪೋಟಿ ಇದ್ದು, ಉದ್ಯಮದಲ್ಲಿ ಯಶಸ್ವಿಯಾಗಲು ಕೌಶಲ್ಯಗಳು ಅತ್ಯಂತ ಮುಖ್ಯ. ಪರಿಣಾಮಕಾರಿಯಾಗಿ ಕೌಶಲ್ಯಗಳನ್ನು ಅಳವಡಿಸಿಕೊಳ್ಳುವುದರಿಂದ ಉದ್ಯಮಕ್ಕೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಪ್ರತಿಯೊಬ್ಬ ವ್ಯಕ್ತಿ ಯಾವುದೇ ವೃತ್ತಿಯಲ್ಲಿ ಸೇವೆ ಸಲ್ಲಿಸುವುದಕ್ಕಿಂತ ಮುಂಚೆ ತನ್ನ ಕೌಶಲ್ಯ ತಿಳಿದುಕೊಂಡು ತನ್ನ ವೃತ್ತಿಯನ್ನು ಪ್ರಾರಂಭಿಸಬೇಕು. ನಿಮ್ಮ ಇಷ್ಟದ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಪೂರಕವಾಗಿ ಮಾಹಿತಿಗಳನ್ನು ಅಧ್ಯಯನ ನಡೆಸಬೇಕು ಎಂದರು.

ರೋಟರಿ ಶಿವಮೊಗ್ಗ ಪೂರ್ವ ಅಧ್ಯಕ್ಷ ಡಿ.ಕಿಶೋರ್‌ಕುಮಾರ್ ಮಾತನಾಡಿ, ರೋಟರಿ ಕ್ಲಬ್ ವತಿಯಿಂದ ಯುವಜನರಿಗೆ ಪ್ರೋತ್ಸಾಹಿಸುವ ದೃಷ್ಟಿಯಿಂದ ಹಾಗೂ ಉದ್ಯಮ ನಡೆಸಲು ಪೂರಕವಾಗಿ ಅನುಕೂಲವಾಗುವಂತೆ ಮಾರ್ಗದರ್ಶನಕ್ಕಾಗಿ ವಿಶೇಷ ಉಪನ್ಯಾಸ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸಿಕೊಂಡು ಬರುತ್ತಿದ್ದೇವೆ ಎಂದು ಹೇಳಿದರು.

ರೋಟರಿ ಶಿವಮೊಗ್ಗ ಪೂರ್ವ ಕಾರ್ಯದರ್ಶಿ ಡಾ. ಧನಂಜಯ ರಾಂಪುರ ಮಾತನಾಡಿ, ಯಾವುದೇ ವೃತ್ತಿ ಪ್ರಾರಂಭ ಮಾಡುವುದಕ್ಕಿಂತ ಮುಂಚೆ ಎಸ್ ಡಬ್ಲ್ಯೂ ಒ ಟಿ ವಿಶ್ಲೇಷಣೆ ಅರ್ಥ ಮಾಡಿಕೊಂಡು ವ್ಯವಹಾರ ನಡೆಸಬೇಕು ಎಂದು ತಿಳಿಸಿದರು.

Rotary Club Shivamogga ಕಾರ್ಯಕ್ರಮದಲ್ಲಿ ನಿಯೋಜಿತ ಜಿಲ್ಲಾ ಗವರ್ನರ್ ವಸಂತ್ ಹೋಬಳಿದಾರ್, ಶ್ರೀಕಾಂತ್, ಮಹೇಶ್, ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಪರಮೇಶ್ವರ್ ಶಿಗ್ಗಾವ್, ಚಂದ್ರಹಾಸ ಪಿ.ರಾಯ್ಕರ್, ಬಿ.ಗಂಗಪ್ಪ, ಶ್ರೀನಿವಾಸ್ ಗೌಡ, ಮಾಜಿ ಅಧ್ಯಕ್ಷ ಅರುಣ್ ದೀಕ್ಷಿತ್, ರೋಟರಿ ಸದಸ್ಯರು ಹಾಜರಿದ್ದರು.

Sahitya Akademi “ಸ್ವಾತಂತ್ರ್ಯದ ಓಟ” ಕಾದಂಬರಿಯ ನಾಟಕ ರೂಪದಲ್ಲಿ ಅಭಿನಯಿಸಲು ಕಲಾವಿದರಿಂದ ಅರ್ಜಿ ಆಹ್ವಾನ

0

ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಬೊಳುವಾರು ಮೊಹಮ್ಮದ್ ಕುಂಞ ಅವರ ಸ್ವಾತಂತ್ರ್ಯದ ಓಟ ಕಾದಂಬರಿಯನ್ನು ನಾಟಕ ರೂಪದಲ್ಲಿ ರಂಗಾಯಣ, ಶಿವಮೊಗ್ಗ ನಿರ್ಮಾಣ ಮಾಡಿ ರಾಜ್ಯಾದ್ಯಂತ ಪ್ರದರ್ಶಿಸುವ ಯೋಜನೆ ಹಮ್ಮಿಕೊಂಡಿದ್ದು, ಈ ಯೋಜನೆಗೆ 2026 ರ ಫೆಬ್ರವರಿಯಿಂದ 2026 ರ ಜೂನ್‌ವರೆಗೆ ಐದು ತಿಂಗಳ ಅವಧಿಗೆ ರೆಪರ್ಟರಿ ಕಲಾವಿದರಲ್ಲದೇ 15 ಜನ ಆಸಕ್ತ ಹಾಗೂ ಅನುಭವಿ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸುವ ಕೊನೆಯ ದಿನಾಂಕವನ್ನು ಜ. 28 ರವರೆಗೆ ವಿಸ್ತರಿಸಲಾಗಿದೆ.
ಕಲಾವಿದರ ವಯಸ್ಸು ಕನಿಷ್ಟ 20 ರಿಂದ ಗರಿಷ್ಟ 40 ಇರಬೇಕು. ಆಯ್ಕೆಯಾದ ಕಲಾವಿದರಿಗೆ ಮಾಹೆಯಾನ ರೂ.22 ಸಾವಿರ ಗೌರವ ಸಂಭಾವನೆ, ಊಟ, ಉಪಹಾರ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗುವುದು. ಯೋಜನೆಯು 5 ತಿಂಗಳ ಅವಧಿಯಾಗಿದ್ದು ಅರ್ಜಿ ಸಲ್ಲಿಸಲು ಜ.28 ಕಡೆಯ ದಿನವಾಗಿರುತ್ತದೆ. ಅರ್ಜಿಯನ್ನು ಆಡಳಿತಾಧಿಕಾರಿಗಳು, ರಂಗಾಯಣ, ಹೆಲಿಪ್ಯಾಡ್ ಹಿಂಭಾಗ, ಅಶೋಕನಗರ, ಶಿವಮೊಗ್ಗ 577201 ಇಲ್ಲಿಗೆ ಖುದ್ದಾಗಿ, ಅಂಚೆ ಮೂಲಕ ಅಥವಾ ಇ-ಮೇಲ್ admin.rangayanashivamogga@gmail.com ಮೂಲಕ ಕಳುಹಿಸಬಹುದಾಗಿದೆ.
Sahitya Akademi ಹೆಚ್ಚಿನ ಮಾಹಿತಿಗೆ ರಂಗಾಯಣ, ಶಿವಮೊಗ್ಗ ಕಚೇರಿ, ದೂರವಾಣಿ ಸಂಖ್ಯೆ : 08182-256353, 7975229166 ನ್ನು ಸಂಪರ್ಕಿಸಬಹುದಾಗಿದೆ. ಅರ್ಜಿಯೊಂದಿಗೆ ತಮ್ಮ ಇತ್ತೀಚಿನ ಭಾವಚಿತ್ರ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ರಂಗಭೂಮಿ ಅನುಭವದ ವಿವರ, ಆಧಾರ್ ಕಾರ್ಡ್ ಪ್ರತಿಯನ್ನು ಲಗತ್ತಿಸಬೇಕೆಂದು ರಂಗಾಯಣ ಆಡಳಿತಾಧಿಕಾರಿ ಡಾ.ಶೈಲಜಾ ಎ ಸಿ ತಿಳಿಸಿದ್ದಾರೆ.

Purandara Dasa ನೆನೆ ಪುರಂದರ ದಾಸರ…

0

ಲೇ: ಎನ್.ಜಯಭೀಮ ಜೊಯ್ಸ್.ಶಿವಮೊಗ್ಗ.

Purandara Dasa ಪುರಂದರದಾಸರು
ಮೊದಲ ಹೆಸರು
ಶ್ರೀನಿವಾಸನಾಯಕರು
ತಿರುಪತಿ ತಿಮ್ಮಪ್ಪನ
ದಯದಿಂದ
ಹುಟ್ಟಿದವರು.
ತಂದೆ ವರದಪ್ಪನಾಯಕರು
ದೊಡ್ಡ ಚಿನ್ನಬೆಳ್ಳಿ ವ್ಯಾಪಾರಸ್ಥರು
ಮಗನೂ ತಂದೆಯ ವ್ಯವಹಾರ
ಮುಂದುವರೆಸಿದನು.
ನವಕೋಟಿ ನಾರಾಯಣ ಎಂದು
ಕರೆಸಿಕೊಂಡನು.
ಸರಸ್ವತೀದೇವಿ ಸಾಧ್ವಿ
ಕೈಹಿಡಿದವಳು
ಸಂಪತ್ತು ಗಳಿಕೆಯಲ್ಲೇ
ತಲ್ಲೀನನಾದವನು
ಸಂಸಾರದ ಜಂಜಾಟ ತಲೆಗೆ
ಹಚ್ಚಿಕೊಳ್ಳದವನು.
ಜಿಪುಣಾಗ್ರೇಸ ಚಕ್ರವರ್ತಿ
ಎಂದು ಕರೆಸಿಕೊಂಡವನು.
ಪರೀಕ್ಷೆ ಮಾಡಲೆಂದೇ ವಿಠ್ಠಲನೇ
ವೇಷ ಮರೆಸಿಕೊಂಡು
ನಾಯಕನ ಬಳಿ ಬಂದನು.
ಮಗನ ಉಪನಯನಕ್ಕೆಂದು
ಹಣ ಯಾಚಿಸಿದನು.
ಪರೀಕ್ಷೆಯಲಿ ಪಾಸಾದವರು
ನಾಯಕರ ಪತ್ನಿ ಸರಸ್ವತಮ್ಮ
ನವರು
ವಿಠ್ಠಲನ ಕೃಪಾಂಕದ
ದಯೆಯಿಂದ ಪಾಸಾದರು
ನಾಯಕರು.
ಹೆಂಡತಿಯಿಂದ ಜ್ಞಾನೋದಯ
ವಾಯಿತೆಂದು
ಹಾಡಿ ಹೊಗಳಿದರು.
ಹೆಂಡತಿಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ
ಹಿಡಿಸಿದಳಯ್ಯ ಎಂದು
ಕೊಂಡಾಡಿದರು.
ಧನಕನಕಾದಿ ಸಂಪತ್ತೆಲ್ಲವನ್ನು
ನಾರಾಯಣನ ಪಾದಕ್ಕೆ
ಸಮರ್ಪಿಸಿದರು.
ಕೃಷ್ಣಾರ್ಪಣ
ಎಂದರು.
Purandara Dasa ತಾವು ಭಕ್ತಿಯೆಂಬೋ ಸಂಪತ್ತಿಗೆ
ಒಡೆಯರಾದರು.
ತಾಳ ತಂಬೂರಿ ಹಿಡಿದು
ವಿಜಯನಗರಕ್ಕೆ ಹೊರಟರು.
ವ್ಯಾಸರಾಯ ಗುರುಗಳಿಗೆ
ಅಡ್ಡಬಿದ್ದು ಶರಣೆಂದರು.
ಗುರುಗಳು ಆಶೀರ್ವದಿಸಿ
ದಾಸ ದೀಕ್ಷೆ ಬೋಧಿಸಿದರು
ಪುರಂದರವಿಠಲ ಅಂಕಿತ
ಪ್ರದಾನ ಮಾಡಿದರು.
ಶ್ರೀನಿವಾಸ ನಾಯಕರು
ತುಂಗಭದ್ರೆಯಲಿ ಮುಳುಗಿ
ಪುರಂದರದಾಸರಾಗಿ ಬಂದರು.
ಇವರು ಆಡಿದ ಮಾತೆಲ್ಲಾ
ಹಾಡಾಯಿತು.
ಕೇಳುವವರಿಗೆ ಬುದ್ಧಿಮಾತಾಯಿತು.
ಹಂಪಿಯನ್ನೇ ಕಾರ್ಯಕ್ಷೇತ್ರ
ಮಾಡಿಕೊಂಡರು.
ಯಂತ್ರೋದ್ಧಾರಕ ಪ್ರಾಣದೇವರ
ಪೂಜೆಮಾಡಿದರು
ತೀರ್ಥಕ್ಷೇತ್ರಗಳ ಯಾತ್ರೆ
ಮಾಡಿದರು.
ನಾಲ್ಕುಲಕ್ಷಕ್ಕೂ ಹೆಚ್ಚು
ಹಾಡು ಬರೆದರು.
ಸಂಗೀತಕ್ಷೇತ್ರದ ಸಾಧನೆಗೆ
ಸಂಗೀತಪಿತಾಮಹರೆಂದು
ಕರೆಸಿಕೊಂಡರು.
ಪುಷ್ಯ ಅಮಾವಾಸ್ಯೆಯಂದು
ಹರಿಪಾದ ಸೇರಿದರು.
ಇದನ್ನು ಆರಾಧನಾ ದಿನವನ್ನಾಗಿ
ಆಚರಿಸುವರು.
ಭಕ್ತಿಯಿಂದ ನಮನ
ಸಲ್ಲಿಸಿದವರಿಗೆ
ಹರಸುವರು
ಪುರಂದರದಾಸರು.

Bhadravati Assembly constituency ಮತದಾರರ ಪಟ್ಟಿ ತೀವ್ರ ಪರಿಷ್ಕರಣೆ( SIR) ಭದ್ರಾವತಿ ವಿಧಾನ ಸಭಾಕ್ಷೇತ್ರದ ಪ್ರಗತಿ ಕ್ಷಿಪ್ರ ಗತಿ ಮಾಡಲು ಸೂಚನೆ

0

Bhadravati Assembly constituency ಮಾನ್ಯ ಜಿಲ್ಲಾಧಿಕಾರಿಗಳು ಶಿವಮೊಗ್ಗ ಹಾಗೂ ಉಪ ವಿಭಾಗ ಅಧಿಕಾರಿಗಳು ಶಿವಮೊಗ್ಗ ರವರು ಚುನಾವಣೆ SIR 2002 ರ ಮತದಾರರ ಪಟ್ಟಿಯೊಂದಿಗೆ 2025 ರ ಮತದಾರರ ಪಟ್ಟಿಯನ್ನು Mapping & Progeny ಕಾರ್ಯ ಕುರಿತು 112-ಭದ್ರಾವತಿ ವಿಧಾನಸಭಾ ಕ್ಷೇತ್ರದ ಪ್ರಗತಿ ಕಡಿಮೆ ಇರುವ ಎಲ್ಲಾ BLO ರವರುಗಳೊಂದಿಗೆ ಸಭೆ ನಡೆಸಿ, ಮುಂದಿನ ಒಂದು ವಾರದೊಳಗಾಗಿ ಹೆಚ್ಚಿನ ಪ್ರಗತಿ ಸಾಧಿಸಲು ಸೂಚಿಸಿರುತ್ತಾರೆ. ಒಂದು ವಾರದೊಳಗೆ ಪ್ರಗತಿ ಸಾಧಿಸದಿದ್ದಲ್ಲಿ ಸಂಬಂಧಪಟ್ಟ BLO ರವರುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿರುತ್ತಾರೆ.

S. N. Channabasappa ಶಿವಮೊಗ್ಗ ವಿದ್ಯಾನಗರಸರ್ಕಾರಿ ಶಾಲೆಯ ಸಮಸ್ಯೆಗಳ ಇತ್ಯರ್ಥಕ್ಕೆ ಶಾಸಕ ಚೆನ್ನಿ ಸೂಚನೆ

0

S. N. Channabasappa ಶಿವಮೊಗ್ಗ ನಗರದ 14ನೇ ವಾರ್ಡ್ ವ್ಯಾಪ್ತಿಯ ವಿದ್ಯಾನಗರ ಬಡಾವಣೆಯಲ್ಲಿ ನಡೆಯುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ಅವರು ಇಂದು ಪರಿಶೀಲಿಸಿದರು.

ಬಡಾವಣೆಯ ಪ್ರವೇಶ ದ್ವಾರದಲ್ಲಿ ನೂತನವಾಗಿ ನಿರ್ಮಾಣವಾಗುತ್ತಿರುವ ಮಹಾದ್ವಾರದ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿದ ಅವರು, ಕೆಲಸದ ವೇಗ ಹಾಗೂ ಗುಣಮಟ್ಟದ ಬಗ್ಗೆ ಮಾಹಿತಿ ಪಡೆದರು. ಬಳಿಕ ಸ್ಥಳೀಯ ಉದ್ಯಾನವನಕ್ಕೆ ಭೇಟಿ ನೀಡಿ, ಉದ್ಯಾನವನದ ನಿರ್ವಹಣೆ ಹಾಗೂ ಸ್ವಚ್ಛತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳದಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಸಾರ್ವಜನಿಕ ಗ್ರಂಥಾಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಓದುಗರಿಗೆ ಪುಸ್ತಕಗಳ ಲಭ್ಯತೆಯ ಬಗ್ಗೆ ಚರ್ಚಿಸಿದರು.

S. N. Channabasappa ವಿಶೇಷವಾಗಿ ವಿದ್ಯಾನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿದ ಅವರು, ಶಾಲೆಯ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆದು ಕೂಡಲೇ ಬಗೆಹರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ನಗರಾಧ್ಯಕ್ಷರಾದ ಶ್ರೀ ಮೋಹನ್ ರೆಡ್ಡಿ, ವಾರ್ಡ್ ನ ಅಧ್ಯಕ್ಷರಾದ ಶ್ರೀ ರಾಜು, ಪ್ರಮುಖರಾದ ಶ್ರೀ ಮೋಹನ್, ಶ್ರೀ ಲಕ್ಷ್ಮಣ್ ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Department Of School Education ಶಾಲಾ ಮಕ್ಕಳಿಗೆ ನೀರು ಕುಡಿಯುವಂತೆ “ನೀರಿನ ಗಂಟೆ” ಬಾರಿಸುವ ವ್ಯವಸ್ಥೆ ಕಡ್ಡಾಯ: ಸರ್ಕಾರದ ಆದೇಶ

0

Department Of School Education ಮಕ್ಕಳಿಗೆ ನೀರು ಕುಡಿಯುವಂತೆ ಜ್ಞಾಪಿಸಲು ಶಾಲೆಗಳಲ್ಲಿ ‘ನೀರಿನ ಗಂಟೆ’ (ವಾಟರ್‌ ಬೆಲ್‌) ಬಾರಿಸುವುದನ್ನು ಕಡ್ಡಾಯಗೊಳಿಸಿ, ಶಾಲಾ ಶಿಕ್ಷಣ ಇಲಾಖೆಯು ಸುತ್ತೋಲೆ ಹೊರಡಿಸಿದೆ.

ಆರೋಗ್ಯ, ಬೆಳವಣಿಗೆ ದೃಷ್ಟಿಯಿಂದ ಮಕ್ಕಳು ನಿತ್ಯವೂ ನಿಗದಿತ ಪ್ರಮಾಣದಲ್ಲಿ ನೀರು ಕುಡಿಯಬೇಕು. ಆದರೆ, ಮಕ್ಕಳಿಗೆ ಈ ಕುರಿತು ಸೂಕ್ತ ಅರಿವು ಇರುವುದಿಲ್ಲ. ಅದಕ್ಕಾಗಿ ಶಾಲಾ ಅವಧಿಯಲ್ಲಿ ಮಕ್ಕಳು ನಿಯಮಿತವಾಗಿ ನೀರು ಕುಡಿಯುವುದನ್ನು ನೆನಪಿಸಬೇಕಾದುದು ಶಿಕ್ಷಕರು ಮತ್ತು ಸಿಬ್ಬಂದಿಯ ಜವಾಬ್ದಾರಿಯೂ ಆಗಿದೆ.

Department Of School Education ಮಧ್ಯಾಹ್ನದ ಬಿಸಿಯೂಟ, ಆಟದ ಸಮಯದಲ್ಲಿ ನೀರು ಲಭ್ಯ ಇರುವಂತೆ ನೋಡಿಕೊಳ್ಳಬೇಕು. ಎಲ್‌ಕೆಜಿ, ಯುಕೆಜಿ ಒಳಗೊಂಡಂತೆ ಎಲ್ಲ ಹಂತದಲ್ಲೂ ಸರ್ಕಾರಿ, ಅನುದಾನಿತ ಹಾಗೂ ಖಾಸಗಿ ಶಾಲೆಗಳು ಈ ನಿಯಮ ಪಾಲಿಸಬೇಕು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

Shikaripur ಶಿಕಾರಿಪುರದಲ್ಲಿ ಸೈಬರ್ ಜಾಗೃತಿ‌ ಕಾರ್ಯಕ್ರಮ.

0

Shikaripur ಶಿವಮೊಗ್ಗ ಜಿಲ್ಲಾ ಪೊಲೀಸ್ ಸೈಬರ್ ಜಾಗೃತಿ ಅಭಿಯಾನ ನಡೆಯಿತು. ದಿನಾಂಕ: 17-01-2026 ರಂದು ಬೆಳಗ್ಗೆ ಸೈಬರ್ ಕ್ರೈಂ ಪೊಲೀಸ್ ಠಾಣೆ ಶಿವಮೊಗ್ಗದ ಪೊಲೀಸ್ ಸಿಬ್ಬಂದಿಗಳು ಸರ್ಕಾರಿ ಬಾಲಕಿಯರ ಪದವಿ ವೂರ್ವ ಕಾಲೇಜು ಶಿಕಾರಿಪುರದಲ್ಲಿ, ಸೈಬರ್ ಕ್ರೈಂ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ವಿಧ್ಯಾರ್ಥಿಗಳಿಗೆ ಸೈಬರ್ ಕ್ರೈಂ ಕುರಿತು ಜಾಗೃತಿ ಮೂಡಿಸಿದರು..

Bhadravati VISL ಭದ್ರಾವತಿ ವಿಐಎಸ್ಎಲ್ ಸಂಸ್ಥಾಪಕರ ದಿನಾಚರಣೆ.

0

Bhadravati VISL ವಿಐಎಸ್ ಎಲ್ ನಲ್ಲಿ ಸಂಸ್ಥಾಪಕರ ದಿನಾಚರಣೆ ಅತ್ಯುತ್ತಮ ಇಂಜೀನಿಯರ್, ರಾಜನೀತಿಜ್ಞ ಸರ್.ಎಮ್. ವಿಶ್ವೇಶ್ವರಾಯರವರ ಮಾರ್ಗದರ್ಶನ ಮತ್ತು ಮಹಾರಾಜರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ರವರ ನೇತೃತ್ವದಲ್ಲಿ ೧೯೧೮, ಜನವರಿ ೧೮ ರಂದು ಮೈಸೂರು ವುಡ್ ಡಿಸ್ಟಿಲೇಶನ್ ಮತ್ತು ಐರನ್ ವರ್ಕ್ಸ್ ಹೆಸರಿನಲ್ಲಿ ಭದ್ರಾವತಿಯಲ್ಲಿ ಶಂಕುಸ್ಥಾಪನೆ ನೆರವೇರಿಸಿದರು.

Bhadravati VISL ಆ ದಿನವನ್ನು ವಿಐಎಸ್ ಎಲ್ ನಲ್ಲಿ ಸಂಸ್ಥಾಪಕರ ದಿನವೆಂದು ಪ್ರತೀವರ್ಷ ಆಚರಿಸಲಾಗುವುದು. ಅದರಂತೆ ಈ ವರ್ಷವೂ ಸಹ ವಿಐಎಸ್ ಎಲ್ ಸ್ಥಾಪನೆಯ ವರ್ಷದ ಅಂಗವಾಗಿ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ದಿನಾಂಕ ೧೮.೦೧.೨೦೨೬ ರಂದು ಮಾಲಾರ್ಪಣೆ ಮಾಡುವ ಮೂಲಕ ವಿ.ಐ.ಎಸ್.ಎಲ್‌ನ ಸಮುದಾಯವು ತಮ್ಮ ಗೌರವ ವಂದನೆಗಳನ್ನು ಸಲ್ಲಿಸಿತು. ಶ್ರೀ ಅನುಪ್ ಕುಮಾರ್, ಕಾರ್ಯಪಾಲಕ ನಿರ್ದೇಶಕರು, ಶ್ರೀ ಕೆ.ಎಸ್. ಸುರೇಶ್, ಮುಖ್ಯ ಮಹಾಪ್ರಬಂಧಕರು (ಸ್ಥಾವರ), ಶ್ರೀ ಬಿ. ವಿಶ್ವನಾಥ, ಮುಖ್ಯ ಮಹಾಪ್ರಬಂಧಕರು (ಮಾನವ ಸಂಪನ್ಮೂಲ), ಶ್ರೀ ಕೆ.ಬಿ. ಮಲ್ಲಿಕಾರ್ಜುನ, ಅಧ್ಯಕ್ಷರು, ಕಾರ್ಮಿಕರ ಸಂಘ ಮತ್ತು ಶ್ರೀ ಅಜಯ್ ಸೋಂಕುವಾರ್, ಅಧ್ಯಕ್ಷರು, ಅಧಿಕಾರಿಗಳ ಸಂಘ ಇವರುಗಳು ವಿಐಎಸ್ ಎಲ್ ಆವರಣದೊಳಗಿರುವ ಸರ್. ಎಮ್. ವಿಶ್ವೇಶ್ವರಾಯರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು. ಅಧಿಕಾರಿಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಂಸ್ಥಾಪಕರಾದ ಸರ್. ಎಮ್. ವಿಶ್ವೇಶ್ವರಾಯರವರಿಗೆ ತಮ್ಮ ನಮ್ರತೆಯ ಗೌರವ ವಂದನೆಗಳನ್ನು ಸಲ್ಲಿಸಿದರು.

ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ಮಹಾಪ್ರಬಂಧಕ ಶ್ರೀ ನವೀನ್ ರಾಹುಲ್‌ರವರು ಕಾರ್ಯಕ್ರಮವನ್ನು ಆಯೋಜಿಸಿದ್ದರು.

Chess ತೀರ್ಥಹಳ್ಳಿಯ ಎ.ಹೆಚ್.ಆದ್ಯಾಗೆ ಚೆಸ್ಪಂದ್ಯಾವಳಿಯಲ್ಲಿ ಕಂಚಿನ ಪದಕ

0

Chess U -14 ರಾಷ್ಟ್ರ ಮಟ್ಟದ ಚೆಸ್ ಪಂದ್ಯಾವಳಿ ಯಲ್ಲಿ ಕರ್ನಾಟಕ ತಂಡದಿಂದ ಭಾಗವಹಿಸಿದ್ದ ತೀರ್ಥಹಳ್ಳಿಯ ಕುವರಿ ಆದ್ಯಾ ಎ ಹೆಚ್ ವೈಯುಕ್ತಿಕ ಚಿನ್ನದ ಪದಕ ಹಾಗೂ ತಂಡಕ್ಕೆ ಕಂಚಿನ ಪದಕ ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದಾರೆ.

ಇವರು ಕೊಪ್ಪ ತಾಲ್ಲೂಕು ಬಂಡಿಗಡಿ ಪ್ರೌಢಶಾಲಾ ಶಿಕ್ಷಕರಾದ ಅನಿಲ್ ರವರ ಮಗಳಾಗಿದ್ದಾರೆ.

Makar Sankranti ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಯಲ್ಲಿ ಸಂಭ್ರಮದ ಸಂಕ್ರಾಂತಿ ಆಚರಣೆ.

0

Makar Sankranti ಪ್ರತಿ ವರ್ಷದಂತೆ ಈ ವರ್ಷವೂ ಕಿರ್ಲೋಸ್ಕರ್ ಫೆರೆಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಮಾನವ ಸಂಪನ್ಮೂಲ ಮತ್ತು ಸಾಮಾನ್ಯ ಆಡಳಿತ ವಿಭಾಗದ ವತಿಯಿಂದ ಮಾನವ ಸಂಪನ್ಮೂಲ ಮತ್ತು ಆಡಳಿತ ವಿಭಾಗದ ಉದ್ಯೋಗಿಗಳು ಹಾಗೂ ಅವರ ಕುಟುಂಬದ ಸದಸ್ಯರು ಒಟ್ಟಾಗಿ ಸೇರಿ ಸಂಕ್ರಾಂತಿ ಹಬ್ಬವನ್ನು ಸಂಭ್ರಮ, ಸಡಗರ ಮತ್ತು ಸಂಪ್ರದಾಯಿಕ ವೈಭವದೊಂದಿಗೆ ಆಚರಿಸಲಾಯಿತು.

ಸಂಸ್ಥೆಯ ಕಾರ್ಖಾನೆಯ ಮುಂಭಾಗದಲ್ಲಿರುವ ಸಾಲು ಮರದ ತಿಮ್ಮಕ್ಕ ಉದ್ಯಾನವನ’ದಲ್ಲಿ ಈ ಹಬ್ಬದ ಕಾರ್ಯಕ್ರಮವನ್ನು ದಿನಾಂಕ 17-01-2026 ರಂದು ಅತ್ಯಂತ ಶಿಸ್ತುಬದ್ಧವಾಗಿ ಮತ್ತು ಹರ್ಷೋಲ್ಲಾಸದಿಂದ ಆಯೋಜಿಸಲಾಗಿತ್ತು.
ಭಾರತೀಯ ಸಂಸ್ಕೃತಿಯಲ್ಲಿ ಸಂಕ್ರಾಂತಿ ಹಬ್ಬವು ಕೃಷಿ, ಪ್ರಕೃತಿ ಮತ್ತು ಮಾನವ ಸಂಬಂಧಗಳ ಮಹತ್ವವನ್ನು ಸಾರುವ ವಿಶೇಷ ಹಬ್ಬವಾಗಿದ್ದು, ಹೊಸ ಬೆಳೆ, ಹೊಸ ಆಶಯ ಮತ್ತು ಸಮೃದ್ಧಿಯ ಸಂಕೇತವಾಗಿ ಆಚರಿಸಲಾಗುತ್ತದೆ. ಈ ಪರಂಪರೆಯನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಕಿರ್ಲೋಸ್ಕರ್ ಸಂಸ್ಥೆಯು ಪ್ರತಿವರ್ಷವೂ ಕುಟುಂಬ ಸದಸ್ಯರು ಸೇರಿ ಈ ಹಬ್ಬವನ್ನು ಆಚರಿಸುವ ಮೂಲಕ ಸಂಸ್ಕ್ರತಿ ಮತ್ತು ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುತ್ತಿದೆ.

ಈ ಸಂಭ್ರಮಾಚರಣೆಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ಆರ್.ವಿ. ಗುಮಾಸ್ತೆ ಹಾಗೂ ಶ್ರೀಮತಿ ಕಮಲಾ ಗುಮಾಸ್ತೆ ಅವರು ಉಪಸ್ಥಿತರಿದ್ದು, ಉದ್ಯೋಗಿಗಳು ಮತ್ತು ಅವರ ಕುಟುಂಬದವರೊಂದಿಗೆ ಆತ್ಮೀಯವಾಗಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದರು. ಆಡಳಿತ ಮಂಡಳಿಯ ಎಕ್ಸಿಕ್ಯೂಟಿವ್ ಡೈರೆಕ್ಟರ್ ಶ್ರೀ ಆರ್.ಎಸ್. ಶ್ರೀವತ್ಸನ್ ಅವರು ತಮ್ಮ ಕುಟುಂಬದೊಂದಿಗೆ ಆಗಮಿಸಿ ಕಾರ್ಯಕ್ರಮಕ್ಕೆ ವಿಶೇಷ ಘನತೆ ನೀಡಿದರು. ಜೊತೆಗೆ ಸಿಒಒ ಶ್ರೀ ಸಿ. ರಮೇಶ್ ಮತ್ತು ಕುಟುಂಬ, ಶ್ರೀ ಎಂ.ಜಿ. ನಾಗರಾಜ್ ಮತ್ತು ಕುಟುಂಬ, ಶ್ರೀ ಜಿ.ಎಸ್. ಕೃಷ್ಣಮೂರ್ತಿ ಮತ್ತು ಕುಟುಂಬ ಅವರುಗಳ ಉಪಸ್ಥಿತಿಯು ಕಾರ್ಯಕ್ರಮದ ವೈಭವವನ್ನು ಇನ್ನಷ್ಟು ಹೆಚ್ಚಿಸಿತು.

Makar Sankranti ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರಾದ ಶ್ರೀ ಶಿವಯ್ಯ ಸ್ವಾಮಿ ಅವರ ಮಾರ್ಗದರ್ಶನ ಮತ್ತು ಮುಂದಾಳತ್ವದಲ್ಲಿ ಈ ಕಾರ್ಯಕ್ರಮವನ್ನು ಸುಸೂತ್ರವಾಗಿ ಆಯೋಜಿಸಲಾಗಿತ್ತು. ಹಬ್ಬದ ಮಹತ್ವವನ್ನು ಸಾರುವಂತೆ ಪರಂಪರೆಯ ಉಡುಪು, ಸಾಂಪ್ರದಾಯಿಕ ಅಲಂಕಾರ ಮತ್ತು ಹಬ್ಬದ ವಾತಾವರಣವನ್ನು ನಿರ್ಮಿಸಲಾಗಿದ್ದು, ಉದ್ಯಾನವನವು ಸಂಪೂರ್ಣವಾಗಿ ಹಬ್ಬದ ಕಳೆಗಟ್ಟಿತ್ತು.
ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಎಳ್ಳು-ಬೆಲ್ಲ ಹಂಚಿಕೆ ನಡೆಯಿತು. ‘ಎಳ್ಳು ಬೆಲ್ಲ ಉಂಡು ಒಳ್ಳೆ ಮಾತಾಡು’ ಎಂಬ ಸಂಪ್ರದಾಯದಂತೆ ಎಲ್ಲರೂ ಪರಸ್ಪರ ಎಳ್ಳು-ಬೆಲ್ಲ ಹಂಚಿಕೊಂಡು ಸೌಹಾರ್ದತೆ ಮತ್ತು ಸಹಬಾಳ್ವೆಯ ಸಂದೇಶವನ್ನು ಸಾರಿದರು. ಬಳಿಕ ಸಾಂಪ್ರದಾಯಿಕ ಹಬ್ಬದ ಭೋಜನವನ್ನು ಒಟ್ಟಾಗಿ ಆಸ್ವಾದಿಸುವ ಮೂಲಕ ಉದ್ಯೋಗಿಗಳು ಮತ್ತು ಕುಟುಂಬದ ಸದಸ್ಯರು ಸಂತಸದಿಂದ ಕಾಲ ಕಳೆಯಲಾಯಿತು.

ಈ ಸಂಕ್ರಾಂತಿ ಸಂಭ್ರಮಾಚರಣೆಯು ಕೇವಲ ಹಬ್ಬದ ಆಚರಣೆಯಷ್ಟೇ ಅಲ್ಲದೆ, ಸಂಸ್ಥೆಯೊಳಗಿನ ಮಾನವೀಯ ಸಂಬಂಧ, ಕುಟುಂಬ ವಾತಾವರಣ ಮತ್ತು ಸಂಸ್ಥೆಯ ಸಾಮಾಜಿಕ
ಮೌಲ್ಯಗಳನ್ನು ಪ್ರತಿಬಿಂಬಿಸುವ ಕಾರ್ಯಕ್ರಮವಾಗಿತ್ತು. ಇಂತಹ ಕಾರ್ಯಕ್ರಮಗಳು ಉದ್ಯೋಗಿಗಳ ಮನೋಬಲವನ್ನು ಹೆಚ್ಚಿಸುವುದರ ಜೊತೆಗೆ ಸಂಸ್ಥೆಯೊಂದಿಗಿನ ಆತ್ಮೀಯತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ.

ಒಟ್ಟಾರೆ, ಕಿರ್ಲೋಸ್ಕರ್ ಫೆರೆಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಸಂಕ್ರಾಂತಿ ಸಡಗರವು ಸಂಪ್ರದಾಯ, ಸಂಸ್ಕೃತಿ ಮತ್ತು ಒಗ್ಗಟ್ಟಿನ ಸುಂದರ ಸಂಗಮವಾಗಿ ಯಶಸ್ವಿಯಾಗಿ ನೆರವೇರಿತು.

ವರದಿ
ಮುರುಳೀಧರ್ ನಾಡಿಗೇರ್