Monday, April 27, 2026
Monday, April 27, 2026

ನಾವು ಪಡೆದ ಶಿಕ್ಷಣದಿಂದ ಗೌರವ ಹೆಚ್ಚುತ್ತದೆ- ಹೆಚ್.ಕೆ.ಕೃಷ್ಣಮೂರ್ತಿ

Date:

“ ಜೀವನದಲ್ಲಿ ವಿದ್ಯಾರ್ಥಿಗಳು ತಮ್ಮ ಮನಸ್ಸಿನಲ್ಲೇನಿದೆ ಅದನ್ನು ಸಾಧಿಸಬೇಕು. ನಾವು ಪಡೆದ ಶಿಕ್ಷಣದಿಂದ ಸಮಾಜದಲ್ಲಿ ಗೌರವ, ಸಂಪತ್ತು ದೊರಕುತ್ತದೆ. ನನ್ನ ಜೀವನದಲ್ಲಿ ಈ ವಿದ್ಯಾಸಂಸ್ಥೆ ನೀಡಿದ ಶಿಕ್ಷಣದಿಂದ ನಾನು ಉನ್ನತ ಹುದ್ದೆ ಅಲಂಕರಿಸಲು ಸಹಕಾರಿಯಾಯಿತು. ನಾನು ಊರಿಗೆ ಬಂದಾಗೆಲ್ಲಾ ಇದೇ ರಸ್ತೆಯಲ್ಲಿ ಹೋಗುತ್ತೇನೆ. ನನಗೆ ಶಿಕ್ಷಣ ನೀಡಿದ ಈ ಕಾಲೇಜನ್ನು ಸ್ಮರಿಸುತ್ತೇನೆ. ನಮ್ಮ ಗುರಿಗಳನ್ನು ನಾವೇ ಸಾಧಿಸಬೇಕು. ಇಲ್ಲಿರುವ ಉತ್ತಮ ಗ್ರಂಥಾಲಯ ನಾನು KAS ಪರೀಕ್ಷೆಯಲ್ಲಿ ತೇರ್ಗಡೆ ಹೊಂದಲು ಸಹಕಾರಿಯಾಯಿತು. ನಾನು ಈ ಗ್ರಂಥಾಲಯದಲ್ಲಿ ದೇಶದ ಮಹಾ ನಾಯಕರುಗಳಾದ ಸ್ವಾಮಿ ವಿವೇಕಾನಂದ, ಮಹಾತ್ಮ ಗಾಂಧೀಜಿ, ಭಗತ್ ಸಿಂಗ್ ಇವರ ಜೀವನದ ಕಥೆಗಳನ್ನು ಓದಿ, ಅವರ ನಡವಳಿಕೆಗಳು ನನಗೆ ಜೀವನದಲ್ಲಿ ಮಾರ್ಗದರ್ಶನವಾಯಿತು. ನಿಮ್ಮನ್ನು ನೀವೇ ಪ್ರೀತಿಸಿ, ಬದುಕನ್ನು ಕಟ್ಟಲು ಪ್ರಯತ್ನಿಸಿ, ನಿಮ್ಮ ಬದುಕನ್ನು ರೂಪಿಸಿಕೊಳ್ಳಿ. ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಕನಸನ್ನು ಕಟ್ಟಿಕೊಂಡು, ಕನಸು ನನಸಾಗಲು ಶ್ರಮಿಸಬೇಕು ಆಗ ಮಾತ್ರ ಬದುಕು ಸಾರ್ಥಕವಾಗುತ್ತದೆ. ನನ್ನ ಪ್ರಾಥಮಿಕ ಶಿಕ್ಷಣ ಮುಗಿದ ನಂತರ ತಾಳಗುಪ್ಪದ ನಾಲಂದ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣವನ್ನು ಮುಗಿಸಿ, ಈ ಕಾಲೇಜಿನಲ್ಲಿ ಪದವಿ ಶಿಕ್ಷಣವನ್ನು ಪೂರೈಸಿ, ಕೆಲವು ಕಾಲ ಉಪನ್ಯಾಸಕರಾಗಿ ಸೇವೆ ಸಲ್ಲಿಸಿರುವುದು ನನಗೆ ಸಿಕ್ಕ ಒಂದು ಸದಾವಕಾಶ. ದಿನಾಲೂ ನಾಲಂದ ಪ್ರೌಢಶಾಲೆಗೆ ಮನೆಯಿಂದ ನಡೆದುಕೊಂಡೇ ಶಾಲೆಗೆ ಬರುತ್ತಿದ್ದೆ. ನಾನೇನು ಪ್ರತೀಭಾವಂತ ವಿದ್ಯಾರ್ಥಿಯಾಗಿರಲಿಲ್ಲ. ಆದರೆ ಬದುಕನ್ನು ಕಟ್ಟಿಕೊಳ್ಳಬೇಕೆಂಬ ಆದರ್ಶದಿಂದ ಪ್ರಯತ್ನಿಸಿದೆ ಅದು ಉನ್ನತ ಹುದ್ದೆಗೆ ಹೋಗಲು ಸಾಧ್ಯವಾಯಿತು” ಎಂದು ಕೃಷ್ಣಮೂರ್ತಿ ಹೆಚ್.ಕೆ. KAS, ಜಂಟಿ ಕಾರ್ಯದರ್ಶಿ, ನಗರಾಭಿವೃದ್ಧಿ ಇಲಾಖೆ, ಕರ್ನಾಟಕ ಸರ್ಕಾರ ಇವರು ಎಲ್.ಬಿ. ಮತ್ತು ಎಸ್.ಬಿ.ಎಸ್. ಕಾಲೇಜಿನ 2025-26ನೇ ಸಾಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆ ಮುಕ್ತಾಯ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಶ್ರೀಯುತರನ್ನು ಎಂ.ಡಿ.ಎಫ್ ಪರವಾಗಿ ಸನ್ಮಾನಿಸಲಾಯಿತು.
ಕ್ರೀಡಾ ಮತ್ತು ಸಾಂಸ್ಕೃತಿಕ ವೇದಿಕೆಯ ಕಾರ್ಯಕ್ರಮದಲ್ಲಿ ಮೊದಲು ಕಾಲೇಜಿನ ಪ್ರಾಂಶುಪಾಲರಾದ ಡಾ. ಲಕ್ಷ್ಮೀಶ ಎ.ಎಸ್. ರವರು ಅತಿಥಿಗಳ ಪರಿಚಯ ಮಾಡಿ ಎಲ್ಲರನ್ನೂ ಸ್ವಾಗತಿಸಿದರು. ವಿದ್ಯಾರ್ಥಿ ವೇದಿಕೆಯ ವರದಿಯನ್ನು ಸಾಂಸ್ಕೃತಿಕ ವೇದಿಕೆ ಸಂಚಾಲಕರಾದ ಡಾ. ನಿರಂಜನಮೂರ್ತಿ ಟಿ., ವಾರ್ಷಿಕ ಕ್ರೀಡಾ ಚಟುವಟಿಕೆಗಳನ್ನು ಭರತ್ ರಾಜ್, ದೈಹಿಕ ನಿರ್ದೇಶಕರು ಇವರು ವಾಚಿಸಿದರು. ಎಂ.ಡಿ.ಎಫ್.ನ ಪ್ರಧಾನ ಕಾರ್ಯದರ್ಶಿ ಡಾ. ಹೆಚ್.ಎಂ. ಶಿವಕುಮಾರ್ ಇವರು ಕಾಲೇಜು ನಡೆದು ಬಂದ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂ.ಡಿ.ಎಫ್.ನ ಅಧ್ಯಕ್ಷರಾದ ಬಿ.ಆರ್. ಜಯಂತ್ ಇವರು ವಹಿಸಿದ್ದರು. ವೇದಿಕೆಯಲ್ಲಿ ಕೆ. ವೆಂಕಟೇಶ್, ಕೋಶಾಧ್ಯಕ್ಷರು, ಮ.ಅ.ಪ್ರ., ವಿದ್ಯಾರ್ಥಿ ವೇದಿಕೆಯ ಪ್ರತಿನಿಧಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ಕು. ಅದಿತಿ ಭಟ್ ವಂದಿಸಿದರು. ಕು. ರಮ್ಯಾ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ : ಪ್ರತಿಭಾ ಪುರಸ್ಕಾರ ಕಾರ್ಯಕ್ರಮ

ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ (ರಿ.), ಶಿವಮೊಗ್ಗ ಜಿಲ್ಲಾ ಘಟಕದ ೨ನೇ...

B.Y. Raghavendra ಕಳೆದ ರಾತ್ರಿ ಜಿಲ್ಲೆಯಾದ್ಯಂತ ಸುರಿದ ಮಳೆ:ವಿವಿಧೆಡೆ ಹಾನಿ, ತಕ್ಷಣ ಕ್ರಮಕೈಗೊಳ್ಳಿ-ಸಂಸದ ರಾಘವೇಂದ್ರ

B.Y. Raghavendra ಶಿವಮೊಗ್ಗ ಜಿಲ್ಲೆಯಾದ್ಯಂತ ಕಳೆದ ರಾತ್ರಿ ಸುರಿದ ಭಾರೀ ಮಳೆ...

Kuvempu University ಡಿವಿಎಸ್ ಕಾಲೇಜಿಗೆ “ಕಾಲೇಜು ಕ್ರೀಡಾಕೂಟ-26 “ಸಮಗ್ರ ಪ್ರಶಸ್ತಿ

Kuvempu University ಶಿವಮೊಗ್ಗ ನಗರದ ನೆಹರು ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 38ನೇ ಅಂತರ...

CM Siddharamaiah ಒಳಮೀಸಲಾತಿ ಹಂಚಿಕೆ: ಎಲ್ಲಾ ಉಪಜಾತಿಗಳಿಗೂ ಅರ್ಹ ಪ್ರಾತಿನಿಧ್ಯ ನೀಡಲಾಗಿದೆ- ಸಿದ್ಧರಾಮಯ್ಯ.

CM Siddharamaiah ಒಳಮೀಸಲಾತಿ ಹಂಚಿಕೆ ಸಂಬಂಧ ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ...