Saturday, February 14, 2026
Saturday, February 14, 2026
Home Blog Page 120

Ranaji Trophy Shivamogga ರಣಜಿ ಕ್ರಿಕೆಟ್, ಕರ್ನಾಟಕದ ಎದುರು ಏಗುತ್ತಿರುವ ಗೋವಾ 6 ವಿಕೆಟ್ ನಷ್ಟಕ್ಕೆ 171 ರನ್

0

Ranaji Trophy Shivamogga ಶಿವಮೊಗ್ಗದ ಕೆಎಸ್ ಸಿ ಎ ಸ್ಟೇಡಿಯಂ ನಲ್ಲಿ ನಡೆಯುತ್ತಿರುವ ಗೋವಾ– ಕರ್ನಾಟಕ ರಣಜಿ ಕ್ರಿಕೆಟ್ ಪಂದ್ಯ ಇನ್ನೂ ಕುತೂಹಲ ಬಿಟ್ಟುಕೊಟ್ಟಿಲ್ಲ.
ಕರ್ನಾಟಕದ 371 ರನ್ ಗೆ ಉತ್ತರವಾಗಿ ಗೋವಾ ಆರು ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ.
ಅರ್ಜುನ್ ತೆಂಡುಲ್ಕರ್ ಅಜೇಯ 45 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ.
ಅವರ ಬ್ಯಾಟಿಂಗ್ ನಲ್ಲಿ
ಐದು ಬೌಂಡರಿ ಒಂದು ಸಿಕ್ಸರ್ ಸೇರಿದೆ.ಜೊತೆಗೆ ಮೋಹಿತ್ ಅವರು 24 ರನ್ ಮಾಡಿ ಬೆಂಬಲ ನೀಡಿದ್ದಾರೆ. ಇದರಲ್ಲಿ ಎರಡು ಬೌಂಡರಿಗಳಿವೆ.

ಗೋವಾ ಪರಮಂಥನ ಕುಟ್ಕರ್ 17ಬಾಲ್ ಗಳಲ್ಲಿ 9ರನ್ 1ಬೌಂಡರಿ
ಮೂಲಕ ಅಭಿಷೇಕ್ ಶೆಟ್ಟಿ ಗೆ ವಿಕೆಟ್

ಸುಯಶ್ ಪ್ರಭು ದೇಸಾಯಿ42 ಬಾಲ್ ಗಳಲ್ಲಿ12ರನ್ 1ಬೌಂಡರಿ ಮೂಲಕ ವಿದ್ವತ್ ಕಾವೇರಪ್ಪಗೆ ವಿಕೆಟ್

ಅಭಿನವ್ ತೇಜ್ ರಾಣಾ 40ಬಾಲ್ ಗಳಲ್ಲಿ 18ರನ್ 4ಬೌಂಡರಿ ವಿದ್ವತ್ ಕಾವೇರಪ್ಪಗೆ ವಿಕೆಟ್

Ranaji Trophy Shivamogga ಸ್ನೇಹಲ್ 15ಬಾಲ್ ಗಳಲ್ಲಿ 10ರನ್ ಒಂದು ಬೌಂಡರಿ ಅಭಿಷೇಕ್ ಶೆಟ್ಟಿ ಗೆ ವಿಕೆಟ್

ಮಂದ ಬೆಳಕಿನ ಕಾರಣ ಪಂದ್ಯ ಇವತ್ತಿಗೆ ನಿಲ್ಲಿಸಲಾಗಿದೆ.
ಮತ್ತೆ ನಾಳೆ ಪಂದ್ಯ ಮುಂದುವರೆಯಲಿದೆ.

S.N.Chennabasappa ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡಕ್ಕೆ ಶಾಸಕರ ಅನುದಾನದಿಂದ ₹ 20 ಲಕ್ಷ – ಎಸ್.ಎನ್.ಚನ್ನಬಸಪ್ಪ

0

S.N.Chennabasappa ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಟ್ಟಡ ನಿರ್ಮಿಸಲು ನಿವೇಶನಕ್ಕೆ ಶಾಸಕರ ಅನುದಾನದಿಂದ 20 ಲಕ್ಷ ರೂ. ದೇಣಿಗೆ ನೀಡಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.

ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಸಭಾಂಗಣದಲ್ಲಿ ಶಿವಮೊಗ್ಗ ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ 2024-25ನೇ ಸರ್ವ ಸದಸ್ಯರ ಮಹಾಸಭೆ, ಪ್ರತಿಭಾ ಪುರಸ್ಕಾರ, ಹಿರಿಯ ನಾಗರಿಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಘಟನೆಯು ಸಂಸ್ಥೆಗೆ ಬಲ ನೀಡುತ್ತದೆ. ಸಂಸ್ಥೆಯಲ್ಲಿನ ಸದಸ್ಯರು ಸಕ್ರಿಯರಾಗಿ ಸಮಾಜಮುಖಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಭದ್ರಾವತಿ ನಗರಸಭೆ ಸದಸ್ಯ ಬಿ.ಕೆ.ಮೋಹನ್ ಮಾತನಾಡಿ, ಸಂಘ ಸಂಸ್ಥೆಗಳು ಸದೃಢವಾಗಿರಲು ಸದಸ್ಯರ ಸಹಕಾರ ಬೇಕು. ನಾವು ಯಾವುದೇ ಹೋರಾಟ ಮಾಡಲು ಸಮಾಜ ಮುಖ್ಯ. ಎಲ್ಲರೂ ಪಕ್ಷಭೇದ ಮರೆತು ಸಮಾಜಕ್ಕಾಗಿ ಪ್ರಾಮಾಣಿಕವಾಗಿ ಶ್ರಮಿಸಬೇಕು ಎಂದು ತಿಳಿಸಿದರು.

ಶ್ರೀ ಬಸವೇಶ್ವರ ವೀರಶೈವ ಸಮಾಜ ಅಧ್ಯಕ್ಷ ಎಸ್.ಎಸ್.ಜ್ಯೋತಿಪ್ರಕಾಶ್ ಮಾತನಾಡಿ, ನಮ್ಮ ಸಮಾಜದ ಎಲ್ಲ ಒಳಪಂಗಡಗಳು ಒಟ್ಟಾಗಬೇಕು. ಗಾಣಿಗ ಸಮಾಜ ತುಂಬಾ ಬಲಿಷ್ಠವಾಗಬೇಕು. ನಮ್ಮ ಸಮಾಜದ 8 ಶಾಸಕರು, ಇಬ್ಬರು ಸಂಸದರು ಹಾಗೂ ಸಚಿವರು ಇದ್ದಾರೆ. ನಮ್ಮ ಸಮಾಜವನ್ನು ಒಗ್ಗೂಡಿಸುವ ಕೆಲಸ ಎಲ್ಲರಿಂದ ಆಗಬೇಕು ಎಂದು ಹೇಳಿದರು.
ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜಿ.ವಿಜಯಕುಮಾರ್ ಮಾತನಾಡಿ, ಸಂಘ ಸ್ಥಾಪನೆಯಾಗಿ 16 ವರ್ಷ ಆಗಿದ್ದು, ಈಗ ಭವನ ನಿರ್ಮಾಣ ಮಾಡಲು ಉದ್ದೇಶಿಸಿದ್ದು, ಎಲ್ಲರೂ ಅನುದಾನ ನೀಡಬೇಕು. ಇದರಿಂದ ಸಂಘದ ಸದಸ್ಯರು ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ತಿಳಿಸಿದರು.

S.N.Chennabasappa ಬಿ.ಕೆ.ಜಗನ್ನಾಥ್ ಅವರು ಎಸ್‌ಎಸ್‌ಎಲ್‌ಸಿ, ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಿದರು.
ಜಿಲ್ಲಾ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ಕಾರ್ಯದರ್ಶಿ ಕಿರಣ್‌ಕುಮಾರ್, ಎನ್.ಬಿ.ರಾಜಶೇಖರ್, ಪ್ರೊ. ಎ.ಎಸ್.ಚಂದ್ರಶೇಖರ್, ಭಾರತಿ ಚಂದ್ರಶೇಖರ್, ವಾಗೀಶ್ ಹಾಗೂ ಸಂಘದ ನಿರ್ದೇಶಕರು, ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು. ವಿವಿಧ ತಾಲೂಕುಗಳ ಅಧ್ಯಕ್ಷರು. ಕಾರ್ಯದರ್ಶಿಗಳು ಸದಸ್ಯರುಗಳು ಉಪಸ್ಥಿತರಿದ್ದರು.

Railway Department Shivamogga ಶಿವಮೊಗ್ಗ – ಭದ್ರಾವತಿ ನಡುವಣ ರೈಲ್ವೆ ಲೆವೆಲ್ ಕ್ರಾಸಿಂಗ್ ಪರಿಶೀಲನೆ ನಿಮಿತ್ತ ಪರ್ಯಾಯ ಮಾರ್ಗಸೂಚಿ ಆದೇಶ

0

Railway Department Shivamogga ಶಿವಮೊಗ್ಗ ಜಿಲ್ಲೆ ಶಿವಮೊಗ್ಗ – ಭದ್ರಾವತಿ ನಡುವೆ ಬರುವ ಎಲ್‌ಸಿ.ನಂ: 42,46 ಮತ್ತು 47 ಗಳನ್ನು ಮುಚ್ಚಲು ಅದಕ್ಕಾಗಿ ಎಲ್‌ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಅ.28 ರಿಂದ ನ.03 ರವರೆಗೆ ವಿವಿಧ ದಿನಗಳಂದು ವಾಹನಗಳು ಮತ್ತು ಸಾರ್ವಜನಿಕರು ತಾತ್ಕಾಲಿಕವಾಗಿ ಸಮೀಪದ ಬದಲಿ ಮಾರ್ಗಗಳಲ್ಲಿ ಸಂಚರಿಸುವಂತೆ ಜಿಲ್ಲಾಧಿಕಾರಿಗಳು ಸೂಚಿಸಿ ಆದೇಶ ನೀಡಿರುತ್ತಾರೆ.

ಎಲ್‌ಸಿ 43- ಯಲವಟ್ಟಿ ರಸ್ತೆ ಅ. 28ರ ಬೆ.8 ರಿಂದ ಅ.29 ರ ಸಂಜೆ 6ರವರೆಗೆ ಎಲ್.ಸಿ.46 ಮುಖಾಂತರ -ಹೊಸೊಡಿ ರಸ್ತೆ, ಯಲವಟ್ಟಿ ರಸ್ತೆ ಸಂಪರ್ಕ ಬದಲಿ ಮಾರ್ಗ.
ಎಲ್‌ಸಿ 46- ಚಿತ್ರದುರ್ಗ ರಸ್ತೆ-ಅ.30ರ ಬೆ.8 ರಿಂದ ಅ.31 ರ ಸಂಜೆ 6 ರವರೆಗೆ ಹೊಸದಾಗಿ ನಿರ್ಮಿಸಿದ ಮೇಲ್ಸೇತುವೆ ಚಿತ್ರದುರ್ಗ ಸಂಪರ್ಕ ರಸ್ತೆ ಮಾರ್ಗ.
ಎಲ್‌ಸಿ 47-ಮಲ್ಲೇಶ್ವರ ನಗರ ರಸ್ತೆ -ನ.2 ರ ಬೆ. 8 ರಿಂದ ನ. 3ರ ಸಂಜೆ 6 ರವರೆಗೆ ಮಲ್ಲೇಶ್ವರ ನಗರ ರಸ್ತೆ-ಹೊನ್ನಾಳಿ ರಸ್ತೆ- ಸಂಗೊಳ್ಳಿ ರಾಯಣ್ಣ ಸರ್ಕಲ್ -ಶಂಕರಮಠ ಸಂಪರ್ಕ ಎಲ್ ಸಿ 47 ರ ಮಾರ್ಗವಿರುತ್ತದೆ.

Railway Department Shivamogga ಹಾಗೂ ಈ ಮಲ್ಲೇಶ್ವರನಗರ ರಸ್ತೆಯು ಕಚ್ಚಾಮಣ್ಣಿನ ರಸ್ತೆಯಾಗಿದ್ದು, ದ್ವಿಚಕ್ರ ವಾಹನಗಳು ಸಂಚರಿಸುವುದಕ್ಕ ಅವಕಾಶ ಕಲ್ಪಿಸಿ, ಭಾರಿ ವಾಹನಗಳ ಸಂಚಾರವನ್ನು ನಿಷೇದಿಸಿದೆ.
ಸಾರ್ವಜನಿಕರ ಹಿತದೃಷ್ಠಿಯಿಂದ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗದಂತೆ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್‌ಗಳ ತಾಂತ್ರಿಕ ಪರಿಶೀಲನೆ ಕಾಮಗಾರಿ ತ್ವರಿತಗತಿಯಿಂದ ಪೂರ್ಣಗೊಳ್ಳಬೇಕಾಗಿರುವುದರಿಂದ ಮೋಟಾರು ವಾಹನ ಕಾಯ್ದೆ 1988 ರಲಂ 115ರನ್ವಯ ಕೋಷ್ಟಕದಲ್ಲಿ ವಿವರಿಸಿದಂತೆ ತಾತ್ಕಾಲಿಕವಾಗಿ ಆಯಾ ದಿನಾಂಕಗಳಂದು ಮಾತ್ರ ಪರ್ಯಾಣ ಮಾರ್ಗಗಳಲ್ಲಿ ವಾಹನಗಳು ಸಂಚರಿಸಲು ಅವಕಾಶ ಕಲ್ಪಿಸಿ ಆದೇಶಿಸಲಾಗಿದ್ದು, ಸಾರ್ವಜನಿಕರು/ ವಾಹನ ಸವಾರರು ಈ ಬದಲಿ ಮಾರ್ಗಗಳಲ್ಲಿ ಅಯಾ ದಿನಾಂಕಗಳಂದು ಮಾತ್ರ ಸಂಚರಿಸಿ ಇಲಾಖೆಯೊಂದಿಗೆ ಸಹಕರಿಸುವಂತೆ ಕೋರಿದೆ.

Department of Industry and Commerce ಸಾಗರದಲ್ಲಿ ಅ.31 ರಂದು ಎಂಎಸ್ಎಂಇ ಗಳ ಕ್ಷಮತೆ ಹೆಚ್ಚಿಸುವ ಒಂದು ದಿನದ ಕಾರ್ಯಾಗಾರ

0

Department of Industry and Commerce ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಜಿಲ್ಲಾ ಕೈಗಾರಿಕಾ ಕೇಂದ್ರ ಮತ್ತು ಶಿವಮೊಗ್ಗ ಜಿಲ್ಲಾ ಇಂಡಸ್ಟ್ರೀಸ್ ಅಸೋಸಿಯೇಷನ್ ಇವರುಗಳ ಸಹಯೋಗದಲ್ಲಿ ಅ.31 ರಂದು ಬೆಳಗ್ಗೆ 10.30ಕ್ಕೆ ಶಿವಮೊಗ್ಗದ ಜಗದ್ಗುರು ಶ್ರೀ ಶ್ರೀ ಭಾರತೀತೀರ್ಥ ಸಭಾಮಂಟಪ, ಶ್ರೀ ಶೃಂಗೇರಿ ಶಂಕರಮಠ ಅಗ್ರಹಾರ, ಸಾಗರ ಇಲ್ಲಿ ಎಂ.ಎಸ್.ಎಂ.ಇ.ಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮತ್ತು ವೇಗಗೊಳಿಸುವ ಯೋಜನೆಯಡಿ ಝಡ್.ಇ.ಡಿ./ಲೀನ್ ಯೋಜನೆ ಕುರಿತು ಒಂದು ದಿನದ ಅರಿವು ಮೂಡಿಸುವ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮವನ್ನು ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಉದ್ಘಾಟಿಸಲಿದ್ದಾರೆ. ಶಿವಮೊಗ್ಗ ಜಿಲ್ಲಾ ಇಂಡಸ್ಟ್ರೀಸ್ ಅಸೋಸಿಯೇಶನ್ ಅಧ್ಯಕ್ಷ ಜೋಯಿಸ್ ರಾಮಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.

Department of Industry and Commerce ಸಾಗರ ಕಂದಾಯ ಇಲಾಖೆ ಉಪವಿಭಾಗಾಧಿಕಾರಿ ವಿರೇಶ್ ಕುಮಾರ್, ಸಾಗರದ ಮಲೆನಾಡು ಸಣ್ಣ ಕೈಗಾರಿಕೆ ಮಾಲೀಕರು ಮತ್ತು ಕಾರ್ಮಿಕರ ಸಂಘದ ಸಂಸ್ಥಾಪಕ ಅಧ್ಯಕ್ಷ ಶಿವಾನಂದ ಆಚಾರ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗಣೇಶ್ ಆರ್. ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರಲಿದ್ದಾರೆ.

Klive Special Article ಶರಣೆಂಬೆ ಶಿಲ್ಪಕಲೆಗೆ ಅರಳಗುಪ್ಪೆ ಕೇಶವ ದೇಗುಲ ಬೇಲೂರಿನಷ್ಟೇ ಕಲ್ಲರಳಿ ಹೂವಾಗಿ

0

ಲೇ: ದಿಲೀಪ್ ನಾಡಿಗ್. ಶಿವಮೊಗ್ಗ.

Klive Special Article ಸೋಮನಾಥಪುರ, ಬೇಲೂರು ಹಳೆಬೀಡಿನ ದೇವಾಲಯಗಳು ಇದಕ್ಕೆ ಸಾಕ್ಷಿಯಾಗಿ ನಿಂತಿವೆ. ಬೇಲೂರು ಹಳೇಬೀಡಿನ ದೇವಾಲಯಗಳ ಸೂಕ್ಷ್ಮ ಕಲಾ ಶ್ರೀಮಂತಿಕೆಯನ್ನೇ ತಮ್ಮಲ್ಲೂ ಅಡಗಿಸಿಕೊಂಡ ನೂರಾರು ದೇವಾಲಯಗಳು ಕರ್ನಾಟಕದಲ್ಲಿವೆ. ಆದರೆ ಅವುಗಳಲ್ಲಿ ಬಹಳಷ್ಟು ದೇವಾಲಯಗಳು ಹೆಚ್ಚಿನ ಪ್ರವಾಸಿಗರ ಗಮನಕ್ಕೆ ಬಾರದೆ ಎಲೆಮರೆಯ ಕಾಯಿಯಂತಿವೆ. ಇಂಥ ಶಿಲ್ಪಕಲಾವೈಭವವನ್ನು ತನ್ನಲ್ಲಿ ಅಡಗಿಸಿಕೊಂಡಿರುವ ಹೆಚ್ಚು ಜನರ ಗಮನಕ್ಕೆ ಬಾರದ ತಾಣವೇ ತುರುವೇಕೆರೆ, ಬಾಣಸಂದ್ರ ಬಳಿ ಇರುವ ತಿಪಟೂರು ತಾಲೂಕಿಗೆ ಸೇರಿದ ಅರಳುಗುಪ್ಪೆ. ಅರಳುಗುಪ್ಪೆಯಲ್ಲಿರುವ ಕೇಶವ ದೇವಾಲಯ ಬೇಲೂರು ದೇವಾಲಯಗಳಷ್ಟು ದೊಡ್ಡದಲ್ಲದಿದ್ದರೂ ಶಿಲ್ಪಕಲಾವೈಭವದಲ್ಲಿ ಬೇಲೂರಿಗೇನೂ ಕಡಿಮೆ ಇಲ್ಲ. ಅರಳುಗುಪ್ಪೆ ಒಂದು ಪುಟ್ಟ ಗ್ರಾಮ. ಇಲ್ಲಿ 13 ನೇ ಶತಮಾನದಲ್ಲಿ ಹೊಯ್ಸಳ ಶೈಲಿಯಲ್ಲಿ ನಿರ್ಮಿಸಿದ ಸುಂದರ ದೇವಾಲಯವಿದೆ. ಹೊನ್ನೋಜನನೆಂಬ ಶಿಲ್ಪಿ ಈ ದೇವಾಲಯ ನಿರ್ಮಾಣದ ರೂವಾರಿ ಎನ್ನುತ್ತದೆ ಇತಿಹಾಸ. ಈ ದೇವಾಲಯದ ಒಂದೊಂದೂ ಭಿತ್ತಿಯೂ ಸೂಕ್ಷ್ಮ ಕುಸುರಿ ಕೆತ್ತನೆಗಳಿಂದ ಕಣ್ಮನ ಸೆಳೆಯುತ್ತವೆ. ವಿಷ್ಣುವಿನ ದಶಾವತಾರದ ಕೆತ್ತನೆಗಳು ಇಲ್ಲಿವೆ. ಪುರಾತತ್ವ ಸರ್ವೇಕ್ಷಣಾ ಇಲಾಖೆ ಈ ದೇವಾಲಯವನ್ನು ಪ್ರಮುಖ ರಾಷ್ಟ್ರೀಯ ಸ್ಮಾರಕವೆಂದು ಘೋಷಿಸಿದ್ದರೂ ಸೂಕ್ತ, ಸಂರಕ್ಷಣೆ ಇಲ್ಲದ ಕಾರಣ ಸುಂದರ ವಿಗ್ರಹಗಳ ಮುಖಗಳು ವಿರೂಪಗೊಂಡಿವೆ. ಇಲ್ಲಿಯೂ ಸಹ ಮತಾಂಧರು ಅತ್ಯಂತ ಮನೋಹರವಾದ ಶಿಲ್ಪಗಳ ಮುಖವನ್ನು ಕಲ್ಲಿನಿಂದ ಜಜ್ಜಿ ಹಾಳು ಮಾಡಿದ್ದಾರೆ. Klive Special Article ಹಿಂಬದಿಯಲ್ಲಿರುವ ಗೋಪುರಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಸೋಮನಾಥಪುರದಲ್ಲಿಯೇ ನಾವಿದ್ದೇವೇನೋ ಎಂಬ ಭ್ರಮೆ ಮೂಡುತ್ತದೆ. ಏಕಕೂಟದ ಈ ದೇವಾಲಯಕ್ಕೆ ಪೂರ್ವದಿಂದ ಪ್ರವೇಶದ್ವಾರವಿದೆ. ನಕ್ಷತ್ರಾಕಾರದ ಜಗಲಿಯ ಮೇಲೆ ನಿಂತಿರುವ ದೇವಾಲಯದಲ್ಲಿ ಎಲ್ಲ ದೇವಾಲಯಗಳಂತೆ ಇಲ್ಲಿಯೂ ಗರ್ಭಗುಡಿ, ಸುಕನಾಸಿ, ನವರಂಗಗಳಿವೆ. ದೇವಾಲಯದ ಒಳ ಭಾಗದಲ್ಲಿ 9 ಸೂಕ್ಷ್ಮ ಕೆತ್ತನೆಯಿಂದ ಕೂಡಿದ ಕಂಬಗಳಿದ್ದು, ತೂಗಾಡುವ ಹೂಮೊಗ್ಗನ್ನು ಶಿಲ್ಪಿ ಅತ್ಯಂತ ಕಲಾತ್ಮಕವಾಗಿ ಕೆತ್ತಿದ್ದಾನೆ. ಗರ್ಭಗುಡಿಯಲ್ಲಿ ಅತ್ಯಂತ ಮನಮೋಹಕವಾದ ಕೇಶವನ ವಿಗ್ರಹವಿದೆ. ರಾಮಾಯಣದ ಕಥಾನಕಗಳನ್ನು ಶಿಲ್ಪಿ ಪೂರ್ವದ ಭಿತ್ತಿಯಲ್ಲಿ ಕೆತ್ತಿದ್ದಾನೆ. ಇಲ್ಲಿರುವ ಪಟ್ಟಿಕೆಗಳಲ್ಲಿ ಕಾಲ್ಪನಿಕ ಮೃಗ,(ಶರಭ) ಮಕರ, ಹಂಸ, ಆನೆ, ಕುದುರೆಗಳ ಶಿಲ್ಪಗಳಿವೆ. ಇಂದು ಸರಕು ಸಾಗಣೆಗೆ ಅತ್ಯಗತ್ಯ ಹಾಗೂ ಅವಶ್ಯಕವಾದ ಲಾರಿಯ ಕಲ್ಪನೆ ನಮ್ಮ ಪೂರ್ವಕರಿಗೆ ಬಹಳ ಹಿಂದೆಯೇ ಇತ್ತೆಂಬುದು ಇಲ್ಲಿನ ಭಿತ್ತಿಯಲ್ಲಿರುವ ಕುದುರೆಗಳು ಎಳೆಯುತ್ತಿರುವ ನಾಲ್ಕು ಚಕ್ರದ ಉದ್ದದ ಸರಕು ಸಾಗಣೆ ಶಿಲ್ಪದಿಂದ ವೇದ್ಯವಾಗುತ್ತದೆ.
ಕರ್ನಾಟಕದ ಹೃದಯಭಾಗದಲ್ಲಿ ಅರಳುಗುಪ್ಪೆ ಎಂಬ ಸಣ್ಣ ಗ್ರಾಮವು ಶ್ರೀಮಂತ ಇತಿಹಾಸ, ಅದ್ಭುತ ವಾಸ್ತುಶಿಲ್ಪ, ನೈಸರ್ಗಿಕತೆಗೆ ಹೆಸರುವಾಸಿಯಾಗಿದೆ. ಸೌಂದರ್ಯ ಮತ್ತು ಕುತೂಹಲಕಾರಿ ಸಂಗತಿಗಳನ್ನು ಹೊಂದಿರುವ ಅರಳುಗುಪ್ಪೆಯನ್ನು ರಸ್ತೆಯ ಮೂಲಕ ಸುಲಭವಾಗಿ ತಲುಪಬಹುದು. ತುಮಕೂರಿನಿಂದ ಸುಮಾರು 25 ದೂರದಲ್ಲಿರುವ ಅರಳುಗುಪ್ಪೆ ತಲುಪಲು ನೀವು ಬಸ್ಸು ಅಥವಾ ಕಾರಿನಲ್ಲಿ ತಲುಪಬಹುದು. ಸಮೀಪದ ರೈಲು ನಿಲ್ದಾಣವೆಂದರೆ ತುಮಕೂರು ರೈಲು ನಿಲ್ದಾಣ, ಇದು ಅರಳುಗುಪ್ಪೆಯಿಂದ ಸುಮಾರು 24 ಕಿಮೀ ದೂರದಲ್ಲಿದೆ.

ಅರಳುಗುಪ್ಪೆಯು ಕರ್ನಾಟಕವನ್ನು ಆಳಿದ ಹೊಯ್ಸಳ ಸಾಮ್ರಾಜ್ಯದ ಹಿಂದಿನ ಶ್ರೀಮಂತ ಇತಿಹಾಸವನ್ನು ಹೊಂದಿದೆ.11 ರಿಂದ 14 ನೇ ಶತಮಾನದಲ್ಲಿ ನಿರ್ಮಿಸಲಾದ ಹಲವಾರು ಪ್ರಾಚೀನ ದೇವಾಲಯಗಳಿಗೆ ಈ ಗ್ರಾಮವು ನೆಲೆಯಾಗಿದೆ. ಚೆನ್ನಕೇಶವ ದೇವಸ್ಥಾನ, ವೀರನಾರಾಯಣ ದೇವಸ್ಥಾನ ಮತ್ತು ಕಲ್ಲೇಶ್ವರ ದೇವಸ್ಥಾನ ಸೇರಿದಂತೆ
ಚೆನ್ನಕೇಶವ ದೇವಾಲಯವು ಹೊಯ್ಸಳ ವಾಸ್ತುಶೈಲಿಗೆ ಒಂದು ಅದ್ಭುತ ಉದಾಹರಣೆಯಾಗಿದೆ ಮತ್ತು ಇದು ಅತ್ಯಂತ ಒಂದಾಗಿದೆ. ಅರಳುಗುಪ್ಪೆಯಲ್ಲಿರುವ ಜನಪ್ರಿಯ ದೇವಾಲಯಗಳು. ಈ ದೇವಾಲಯವು ವಿಷ್ಣುವಿಗೆ ಸಮರ್ಪಿತವಾಗಿದೆ ಮತ್ತು ಇದನ್ನು ಹೊಯ್ಸಳ ರಾಜ ವಿಷ್ಣುವರ್ಧನನ ಆಳ್ವಿಕೆಯಲ್ಲಿ ನಿರ್ಮಿಸಲಾಗಿದೆ. ದೇವಾಲಯದ ಸಂಕೀರ್ಣವು ಮುಖ್ಯ ದೇವಾಲಯ, ಮಂಟಪ ಮತ್ತು ಮೆಟ್ಟಿಲು ಬಾವಿಯನ್ನು ಒಳಗೊಂಡಿದೆ. ಮುಖ್ಯ ದೇಗುಲದ ಮನೆಗಳು ಭಗವಾನ್ ವಿಷ್ಣುವಿನ ಸುಂದರವಾದ ವಿಗ್ರಹ, ಅವನ ಪತ್ನಿಯರಾದ ಶ್ರೀದೇವಿ ಮತ್ತು ಭೂದೇವಿಯಿಂದ ಸುತ್ತುವರಿದಿದೆ. ನ ಹೊರಗಿನ ಗೋಡೆಗಳು ದೇವಾಲಯವು ಸಂಕೀರ್ಣವಾದ ಕೆತ್ತನೆಗಳಿಂದ ಅಲಂಕರಿಸಲ್ಪಟ್ಟಿದೆ, ಇದು ವಿವಿಧ ದೇವರುಗಳು, ದೇವತೆಗಳು ಮತ್ತು ಪುರಾಣಗಳನ್ನು ಚಿತ್ರಿಸುತ್ತದೆ ಜೀವಿಗಳು. ಚೆನ್ನಕೇಶವ ದೇವಾಲಯದ ವಿಶಿಷ್ಟ ಲಕ್ಷಣವೆಂದರೆ ಮೆಟ್ಟಿಲು ಬಾವಿ ದೇವಾಲಯದ ಸಂಕೀರ್ಣದಲ್ಲಿದೆ. ಬಾವಿಯು ಹಂತಗಳ ಸರಣಿಯನ್ನು ಒಳಗೊಂಡಿದೆ, ಇದನ್ನು ಧಾರ್ಮಿಕ ಕ್ರಿಯೆಗಳಿಗೆ ಬಳಸಲಾಗುತ್ತಿತ್ತು ಉದ್ದೇಶಗಳು. ಬಾವಿಯಲ್ಲಿನ ನೀರು ಗುಪ್ತಗಾಮಿನಿ ನದಿಯಿಂದ ಹರಿದು ಬರುತ್ತಿದೆ ಎಂದು ಹೇಳಲಾಗುತ್ತದೆ. ಈ ದೇವಾಲಯವು ತನ್ನ ವಾರ್ಷಿಕ ಉತ್ಸವಕ್ಕೆ ಹೆಸರುವಾಸಿಯಾಗಿದೆ, ಇದು ಫೆಬ್ರವರಿ ತಿಂಗಳಲ್ಲಿ ನಡೆಯುತ್ತದೆ. ಇದನ್ನು “ಚೆನ್ನಕೇಶವ ಬ್ರಹ್ಮೋತ್ಸವ” ಎಂದು ಕರೆಯುತ್ತಾರೆ,‌ಇದು ಹೊಯ್ಸಳರ ಕಾಲದಿಂದಲೂ ನಡೆದುಕೊಂಡು ಬಂದಿದೆ. ಒಟ್ಟಿನಲ್ಲಿ ಅರಳಗುಪ್ಪೆ ಚೆನ್ನಕೇಶವ ದೇವಾಲಯವು ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಮತ್ತು ವಾಸ್ತುಶಿಲ್ಪದ ಪರಂಪರೆಗೆ ಸಾಕ್ಷಿಯಾಗಿದೆ.

ಅರಳಗುಪ್ಪೆಯ ಚೆನ್ನಕೇಶವ ದೇವಾಲಯ (ಹೊಯ್ಸಳ ವಾಸ್ತುಶಿಲ್ಪ)

ಅರಳಗುಪ್ಪೆಯ ಚೆನ್ನಕೇಶವ ದೇವಾಲಯವು ಸರಳವಾಗಿದ್ದರೂ ಅತ್ಯಂತ ನಯವಾದ ಹೋಯ್ಸಳ ವಾಸ್ತುಶಿಲ್ಪದ ಉದಾಹರಣೆಯಾಗಿದೆ. ದೇವಾಲಯದ ವಿನ್ಯಾಸವು 16 ನಕ್ಷತ್ರಾಕಾರದ ರೂಪದಲ್ಲಿದ್ದು, ಮೇಲ್ಭಾಗದಲ್ಲಿ ಸುಂದರವಾದ ಶಿಖರವಿದೆ. ಮೇಲಿನ ಕಲಶ ಈಗ ಕಾಣೆಯಾಗಿದೆ.

ಇದು ಏಕಕೂಟ ದೇವಾಲಯ, ಅಂದರೆ ಒಂದೇ ಗರ್ಭಗುಡಿ ಮತ್ತು ಒಂದು ಗೋಪುರ ಹೊಂದಿದೆ. ದೇವಾಲಯದ ಜಗತಿ (ಎತ್ತರದ ವೇದಿಕೆ) ಮೇಲಿನ ನಿರ್ಮಿತವಾಗಿದೆ. ಗೋಡೆಗಳು ಎರಡು (ಸೂರು) ವಿನ್ಯಾಸದಲ್ಲಿ ಕೆತ್ತಲ್ಪಟ್ಟಿದ್ದು, ಮಧ್ಯಭಾಗದಲ್ಲಿ ಸಣ್ಣ ಗೋಪುರಾಕೃತಿಯ ಶಿಲ್ಪಗಳು ಮತ್ತು ದೇವತೆಗಳ ಚಿತ್ರಗಳಿವೆ.

ಆಧಾರಭಾಗದಲ್ಲಿ ಆರು ಹಂತದ ಅಲಂಕಾರಗಳು ಇವೆ — ಮೇಲಿನಿಂದ ಹಂಸಗಳು, ಮಕರಗಳು, ರಾಮಾಯಣ ಮತ್ತು ಕೃಷ್ಣನ ಕಥೆಗಳು, ಎಲೆಗಳ ವಿನ್ಯಾಸಗಳು, ಕುದುರೆಗಳು ಮತ್ತು ಆನೆಗಳು ಕ್ರಮವಾಗಿ ಕೆತ್ತಲ್ಪಟ್ಟಿವೆ.

ಗರ್ಭಗುಡಿಯಲ್ಲಿ ಕೇಶವ (ಕೃಷ್ಣ) ದೇವರ ಮೂರ್ತಿ ಸ್ಥಾಪಿಸಲ್ಪಟ್ಟಿದೆ.

ಅರಳಗುಪ್ಪೆ ಶಾಸನಗಳು.

ಆಧಾರ: Epigraphia Carnatica, Vol. XII – Tiptur Taluk

No. 55 – ವೀರಗಲ್ಲು, ಚವುಕ್ತಮಠದ ಹಿಂದೆ (c. 880 CE)

ಸ್ಥಳ: ಅರಳಗುಪ್ಪೆ ಗ್ರಾಮ, ತಿಪಟೂರು ತಾಲ್ಲೂಕು

ಕಾಲಮಾನ: ಕ್ರಿ.ಶ. ಸುಮಾರು 880

ರಾಜ್ಯಭಾರ: ಗಂಗ ವಂಶದ ರಾಜ ಸತ್ಯವಾಕ್ಯ ರಾಚಮಲ್ಲ ಪೆರ್ಮ್ಮಾನಡಿ (Rachamalla II)

ವಿವರ:
ಈ ಶಾಸನವು ದೊರಬ್ಬೆಯ ಮಗ ಮಲ್ಲುಗ ಎಂಬ ವೀರನ ಸ್ಮಾರಕವಾಗಿದೆ. ನಣ್ಣಿಯ ಗಂಗನ ದಂಡು ಬೆಳ್ಗೆರೆ ಮತ್ತು ಕುಂದೂರ ಮೇಲೆ ದಾಳಿ ಮಾಡಿದಾಗ, ಮಲ್ಲುಗನು ಹೋರಾಡಿ ದೋಚಲ್ಪಟ್ಟ ಆಕಳನ್ನು ಬಿಡುಗಡೆ ಮಾಡಿದನು. ಯುದ್ಧದಲ್ಲಿ ಆತ ವೀರಮರಣ ಹೊಂದಿ ದೇವಲೋಕವನ್ನು ಪಡೆದನೆಂದು ಶಾಸನ ಉಲ್ಲೇಖಿಸುತ್ತದೆ.

ವೀರಗಲ್ಲು (Hero Stone)
ಸ್ಥಳೀಯ ವೀರರ ಸಾಹಸ ಮತ್ತು ಪಶು ರಕ್ಷಣೆಗೆ ಸಂಬಂಧಿಸಿದ ಹೋರಾಟದ ಪ್ರಸ್ತಾವನೆ.

No. 56 – ವೀರಗಲ್ಲು, ಚವುಕ್ತಮಠದ ಹಿಂದೆ (c. 961 CE)

ಕಾಲಮಾನ: ಕ್ರಿ.ಶ. ಸುಮಾರು 961

ಈ ಶಾಸನದಲ್ಲಿ ಮಣಲ್ದೂರು ರಾಜವಂದುಕ ಎಂಬಾತನು ಬೆಳ್ಗೆರೆಯ ಮೇಲಿನ ತನ್ನ ಹಕ್ಕಿಗಾಗಿ ಬಂದಾಗ, ಧೈರ್ಯಶಾಲಿ ಚೇಟ್ಟಿಗ ಅವನನ್ನು ಸಂಹರಿಸಿದನೆಂದು ಉಲ್ಲೇಖಿಸಲಾಗಿದೆ.
ಈ ವೀರಗಲ್ಲನ್ನು ನಾಗವರ್ಮನೆಂಬ ಶಿಲ್ಪಿಯು ಕೆತ್ತಿದ್ದು ಚೇಟ್ಟಿಮಯ್ಯನ ಮಗ ಸ್ಥಾಪಿಸಿದ್ದಾನೆ.

ವೀರಗಲ್ಲು (Hero Stone)
ಸ್ಥಳೀಯ ವೀರಚೇಟ್ಟಿಗನ ಯುದ್ಧಸಾಹಸಕ್ಕೆ ಸಮರ್ಪಿತ ಶಾಸನವಿದೆ.

No. 57 – ಕೆರೆಯ ಹೊಳೆ ಶಾಸನ (c. 1091 CE)

ಕಾಲಮಾನ: ಚಾಲುಕ್ಯ ವಿಕ್ರಮ ಸಂವತ್ಸರ 16ನೇ ವರ್ಷ – ಕ್ರಿ.ಶ. 1091

ರಾಜ್ಯಭಾರ: ಹೋಯ್ಸಳ ರಾಜ ವಿನಯಾದಿತ್ಯ ಆಳ್ವಿಕೆ.

ವಿವರ:

ಈ ಶಾಸನದಲ್ಲಿ ದೋರಗೌಂಡ ಮತ್ತು ಜಕ್ಕಮಾರ ಎಂಬವರು ಅರಳಗುಪ್ಪೆಯಲ್ಲಿ ಹೊಸ ಕಲ್ಲಿನ ಕೆರೆಯನ್ನು ನಿರ್ಮಿಸಿ, ಅದಕ್ಕೆ ಕಾಲುವೆ ನಿರ್ಮಿಸಿದರೆಂದು ಉಲ್ಲೇಖಿಸಲಾಗಿದೆ. ಅವರು ಮಹಾದೇವ ದೇವರಿಗೆ ಧಾರ್ಮಿಕ ದಾನಗಳನ್ನು ನೀಡಿದರು.
ಶಾಸನವನ್ನು ಸೇನಬೋವ (ಶಾನುಭೋಗ) ಮುದ್ದಯ್ಯನೆಂಬುವವನು ಬರೆದಿದ್ದಾನೆ.

ಶಾಸನಗಳಿಂದ ಧಾರ್ಮಿಕ ಮತ್ತು ಸಾರ್ವಜನಿಕರಿಗೆ, ಕೃಷಿಗೆ ಉಪಯೋಗವಾಗುವಂತಹ ಕಾರ್ಯಗಳು ನಡೆದಿರುವ ಬಗ್ಗೆ ತಿಳಿಯಬಹುದು.

ವೈಶಿಷ್ಟ್ಯ: ಹೋಯ್ಸಳ ಕಾಲದ ಕೆರೆ ನಿರ್ಮಾಣ ಹಾಗೂ ದೇವದಾನಗಳ ದಾಖಲೆಗಳಿವೆ.

ಈ ಮೂರು ಶಾಸನಗಳು ಗಂಗ ಹಾಗೂ ಹೋಯ್ಸಳ ರಾಜವಂಶಗಳ ಕಾಲದವುಗಳಾಗಿವೆ. ಅವುಗಳಿಂದ ಅರಳಗುಪ್ಪೆ ಪ್ರದೇಶದ ವೀರಶೌರ್ಯ, ಆಡಳಿತ, ಸಾರ್ವಜನಿಕ ನಿರ್ಮಾಣ ಕಾರ್ಯಗಳು ಮತ್ತು ಧಾರ್ಮಿಕ ಚಟುವಟಿಕೆಗಳ ಕುರಿತು ಅಮೂಲ್ಯ ಮಾಹಿತಿಗಳನ್ನು ಕುರಿತ ಶಾಸನಗಳಾಗಿವೆ.

ಕಾಲಿದ್ದಾಗ ಕಾಶಿನೋಡಬೇಕು, ಕಣ್ಣಿದ್ದಾಗ ಕರ್ನಾಟಕದ ಶಿಲ್ಪಕಲೆ ನೋಡಬೇಕು.

ಕನ್ನಡ ನಾಡಿನ ಹೆಮ್ಮೆಯ ಅರಸರು.

ಶಾತವಾಹನ, ರಾಷ್ಟ್ರಕೂಟ,ಗಂಗ, ಕದಂಬ, ಹೊಯ್ಸಳ, ಚಾಲುಕ್ಯ, ಸಾಂತರು, ಸೇವುಣರು, ಪಾಂಡರು, ಚೇರರು, ಚೋಳರು, ಕೆಳದಿ, ಗೇರುಸೊಪ್ಪೆ, ಸೋಂದಾ, ಬೀಳಗಿ.

ನಮ್ಮ‌ ಇತಿಹಾಸ, ಭವ್ಯ ಇತಿಹಾಸ

, #ನಮ್ಮ‌ ಪರಂಪರೆ, ಶ್ರೇಷ್ಠ ಪರಂಪರೆ,

ನಮ್ಮ ಕರ್ನಾಟಕ‌,

ಶ್ರೇಷ್ಠ ಕರ್ನಾಟಕ.

ನಮ್ಮ‌ಶಿಲ್ಪಿಗಳು, ದೇವಶಿಲ್ಪಿಗಳು.

ದಿಲೀಪ್ ನಾಡಿಗ್
6361124316
9448148710

Shimoga Badminton Premier League ಶಿವಮೊಗ್ಗ ಸ್ಮ್ಯಾಶರ್ಸ್ ಪ್ರಿಮೀಯರ್ ಲೀಗ್ ಸೀಸನ್-2 ನಲ್ಲಿ ಆರ್.ಆರ್.ಸ್ಮ್ಯಾಶರ್ಸ್ ಚಾಂಪಿಯನ್ಸ್

0

Shimoga Badminton Premier League ಶಿವಮೊಗ್ಗ ನಗರದಲ್ಲಿ ಆಯೋಜಿಸಿದ್ದ ಪ್ರತಿಷ್ಠಿತ ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಆರ್ ಆರ್ ಸ್ಮಾಶರ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ರನ್ನರ್ ಅಪ್ ಆಗಿ ಶಿವಮೊಗ್ಗ ಕಾನ್‌ಕ್ವರರ್ಸ್ ತಂಡ ಸ್ಥಾನ ಪಡೆದಿದೆ.

ಶಿವಮೊಗ್ಗ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ ಸೀಸನ್ 2ರಲ್ಲಿ ಪ್ರಮುಖ ಎಂಟು ತಂಡಗಳು ಭಾಗವಹಿಸಿದ್ದವು. ಬೆಳಗ್ಗೆಯಿಂದ ರಾತ್ರಿ 11ರವರೆಗೂ ಕಠಿಣ ಪೈಪೋಟಿಯ ಪಂದ್ಯಗಳು ನಡೆದವು. ಪಂದ್ಯಾವಳಿ ತುಂಬಾ ಯಶಸ್ವಿಯಾಗಲು ಅನೇಕರ ಪರಿಶ್ರಮ ಇದೆ.

ಆರ್ ಆರ್ ಸ್ಮಾಶರ್ಸ್ ತಂಡದ ಮಾಲೀಕ ರಮೇಶ್ ಹಾಗೂ ಶಶಾಂಕ್ ಮಾತನಾಡಿ, ಈ ತರಹದ ಪಂದ್ಯಾವಳಿಗಳಿಂದ ಸ್ಥಳೀಯ ಮಟ್ಟದಲ್ಲಿ ಅನೇಕ ಪ್ರತಿಭಾವಂತ ಕ್ರೀಡಾಪಟುಗಳಿಗೆ ವೇದಿಕೆ ಸಿಗುತ್ತದೆ. ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಲು ನೆರವಾಗುತ್ತದೆ ಎಂದು ತಿಳಿಸಿದರು.

Shimoga Badminton Premier League ವಾಸವಿ ಕಾಫಿ ಪಾಂಡುರಂಗ, ಎಸ್‌ಪಿಎಎಸ್ ಕ್ಯಾಟರ್ಸ್ ಮಾಲೀಕ ಚಂದ್ರು, ವಿಸ್ಮಯ ವೆಲ್ನೆಟ್ ಸೆಂಟರ್ ಮಾಲೀಕ ಸೋಮಶೇಖರ್, ಮಾಸ್ಟರ್ ಕನ್ಸಿಸ್ಟೆನ್ಸಿ ಸರ್ವಿಸ್ ಮಾಲೀಕ ಅಮಿತ್, ಬ್ಯಾಂಬೋ ಗಾರ್ಡನ್ ಮಾಲೀಕರಾದ ಪ್ರಶಾಂತ, ರಾವ್ ಅರೆನ ಮಾಲೀಕ ಅರುಣ್ ಮತ್ತು ಆಯೋಜಕ ದೀಪಕ್, ಜೆಕೆಜಿ ಬುಲ್ಸ್ ಮಾಲೀಕ ಗೋಕುಲ್, ಆರ್‌ವಿಡಿ ರಾಕೆಟ್ ರಾಕರ್ಸ್ ಮಾಲೀಕ ರಘುನಂಧನ್ ಹಾಗೂ ರಾಕೇಶ್, ಭದ್ರ ಬ್ಲಾಕ್ ಪಾಂಥರ್ಸ್ ಮಾಲೀಕ ಲೋಕೇಶ್, ಬ್ಯಾಡ್ಮಿಂಟನ್ ವಾರಿಯರ್ಸ್ನ ಮಾಲೀಕ ರಘು, ಟೀಮ್ ಸ್ಮಾಶ್ ಇಟ್ ಮಾಲೀಕ ಪ್ರಶಾಂತ್, ಗುತ್ತಿ ಸ್ಟೈಕರ್ಸ್ ಮಾಲೀಕ ಸಚಿನ್, ಶಿವಮೊಗ್ಗ ಕಾನ್ಕರಸ್ ಮಾಲೀಕ ದರ್ಶನ್ ಹಾಗೂ ಭರತ್ ರೆಡ್ಡಿ ಉಪಸ್ಥಿತರಿದ್ದರು.

ಜಿಲ್ಲೆಯ ಎಲ್ಲಾ ಪತ್ರಿಕಾ ವಿತರಕರು ಇ ಶ್ರಮ ಕಾರ್ಡ್ ಪಡೆಯಿರಿ- ಕೆ.ಶಂಭುಲಿಂಗ

0

ಶಿವಮೊಗ್ಗ ಜಿಲ್ಲಾ ಪತ್ರಿಕಾ ವಿತರಕರ ಒಕ್ಕೂಟದ ಕಚೇರಿಯಲ್ಲಿ ಶಿವಮೊಗ್ಗ ಹಾಸನ ಚಿಕ್ಕಮಂಗಳೂರು ಹಾಗೂ ತಾಲೂಕು ಪತ್ರಿಕಾ ವಿತರಕರ ಪದಾಧಿಕಾರಿಗಳಿಂದ ರಾಜ್ಯಾಧ್ಯಕ್ಷರಾದ ಶಂಭುಲಿಂಗ ಕೆ ರವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.

ಈ ವಿಶೇಷ ಸಭೆಯಲ್ಲಿ ರಾಜ್ಯಾಧ್ಯಕ್ಷರಾದ ಕೆ ಶಂಭುಲಿಂಗ ರವರ ನೇತೃತ್ವದಲ್ಲಿ ಪತ್ರಿಕಾ ವಿತರಕರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ, ಹೋರಾಟದ ರೂಪುರೇಷೆಗಳ ಬಗ್ಗೆ, ಸಭೆ ಯಲ್ಲಿ ಮಾತನಾಡಿದ ಶಂಭುಲಿಂಗ ರವರು ಜಿಲ್ಲೆಯ ಎಲ್ಲಾ ಪತ್ರಿಕಾ ವಿತರಕರು ಕಡ್ಡಾಯವಾಗಿ ಈ ಶ್ರಮ ಕಾರ್ಡನ್ನು ಮಾಡಿಸಿಕೊಳ್ಳುವಂತೆ ಕರೆ ನೀಡಿದರು.

ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿಗೆ, ಸರ್ಕಾರದಿಂದ ಪಡೆಯಬೇಕಾಗಿರುವ ಸೌಲಭ್ಯಗಳ ಬಗ್ಗೆ, ಸಭೆಯಲ್ಲಿ ಮಾಹಿತಿ ನೀಡಿ ಸಂಘಟನೆಯನ್ನು ಬಲಪಡಿಸುವ ಬಗ್ಗೆ ಚರ್ಚೆ ಮಾಡಿದರು.

ಈ ವೇಳೆ ಶಿವಮೊಗ್ಗ ಜಿಲ್ಲಾ ಅಧ್ಯಕ್ಷ ಎನ್, ಮಾಲತೇಶ್ ರವರು ಮಾತನಾಡಿ ಪತ್ರಿಕಾ ವಿತರಕರಿಗೆ ಸಿಗಬೇಕಾದ ಸೌಲಭ್ಯಗಳು ಸೇರಿದಂತೆ ಅಗತ್ಯ ಬೇಡಿಕೆಗಳ ಬಗ್ಗೆ ರಾಜ್ಯಮಟ್ಟದಲ್ಲಿ ಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸಭೆಅಧ್ಯಕ್ಷರ ನೇತೃತ್ವದಲ್ಲಿ ನಡೆಯುವ ಸಭೆ ಸಮಾರಂಭಗಳಲ್ಲಿ ಜಿಲ್ಲೆಯ ಏಳು ತಾಲೂಕುಗಳಿಂದಲೂ ಕೂಡ ಪತ್ರಿಕಾ ವಿತರಕರನ್ನು ಸಂಘಟಿಸಿ ರಾಜ್ಯಾಧ್ಯಕ್ಷರ ಕೈ ಬಲಪಡಿಸಲು ಸಿದ್ದರಿದ್ದೇವೆ ಎಂದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಕ್ತರ್ ಆಹ್ಮದ್ (ನಾಜೀರ್ ರವರು ಸಭೆಗೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಪತ್ರಿಕಾ ವಿತರಕರ ಮುಖಂಡರನ್ನು ಸ್ವಾಗತಿಸಿದರು.

ಶಿವಮೊಗ್ಗ ಜಿಲ್ಲಾ ಗೌರವಾಧ್ಯಕ್ಷ ಹುಲಗಿ ಕೃಷ್ಣರವರು ವಂದನಾರ್ಪಣೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಪತ್ರಿಕಾ ವಿತರಕರು, ಚಿಕ್ಕಮಂಗಳೂರು ಜಿಲ್ಲೆಯ ಪತ್ರಿಕಾ ವಿತರಕರು, ಮತ್ತು ಹಾಸನ ಜಿಲ್ಲೆಯ ಪತ್ರಿಕಾ ವಿತರಕ ಮುಖಂಡರು ಕೂಡ ಭಾಗವಹಿಸಿದ್ದರು.

ಸಭೆಯಲ್ಲಿ ಶಿವಮೊಗ್ಗ ಜಿಲ್ಲೆಯ ಉಪಾಧ್ಯಕ್ಷರಾದ ರಾಮು,ಜಿ, ನಾಗಭೂಷಣ್ ಭದ್ರಾವತಿ ಪರಶುರಾಮ್ ,ರಾವ್ ತಾಲೂಕು ಅಧ್ಯಕ್ಷರಾದ ಮಲ್ಲಿಕಾರ್ಜುನ್, ಮಧು, ಸೋಮಶೇಖರ್, ರಾಜಾವರ್ಮಾ ಜೈನ್, ದುರ್ಘೋಜಿ, ಪಾರ್ಥ ಬನ್, ಪ್ರಶಾಂತ್, ಶಿಕಾರಿಪುರದ ತಾಲೂಕು ಅಧ್ಯಕ್ಷ ಗಜೇಂದ್ರ, ಎಚ್ಎಫ್ ಯಾವಗಲ್ ಹನುಮಂತಪ್ಪ ಅಜಿದ್ ಉಲ್ಲಾ ಸೇರಿದಂತೆ ಹಲವು ಪತ್ರಿಕಾ ವಿತರಕರು ಸಭೆಯಲ್ಲಿ ಭಾಗವಹಿಸಿದ್ದರು.

S.N.Chennabasappa ರಾಗಿಗುಡ್ಡ ದೇವಸ್ಥಾನ ಪುನರ್ನಿರ್ಮಾಣ ಮತ್ತು ಪ್ರತಿಷ್ಠಾಪನಾ ಕಾರ್ಯ ಪರಿಶೀಲಿಸಿದ ಶಾಸಕ ಚೆನ್ನಿ

0

S.N.Chennabasappa ಮತಾಂಧರ ಆಕ್ರಮಣದಿಂದ ಹಾನಿಗೊಳಗಾಗಿದ್ದ ರಾಗಿಗುಡ್ಡದ ದೇವಸ್ಥಾನದ ಪುನರ್ನಿರ್ಮಾಣ ಮತ್ತು ಪ್ರತಿಷ್ಠಾಪನಾ ಕಾರ್ಯವು ಅಂತಿಮ ಹಂತ ತಲುಪಿದ್ದು, ಇದೆ ನವಂಬರ್ 3 ರಂದು ನಡೆಯಲಿರುವ ವಿಗ್ರಹದ ಪ್ರತಿಷ್ಠಾಪನಾ ಮಹೋತ್ಸವ ಹಾಗೂ ನೂತನ ಕಟ್ಟಡದ ಲೋಕಾರ್ಪಣ ಸಮಾರಂಭದ ಅಂಗವಾಗಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಪರಿಶೀಲಿಸಲು ಇಂದು ಶಾಸಕರಾದ ಎಸ್ ಎನ್ ಚನ್ನಬಸಪ್ಪ ಅವರು ದೇವಸ್ಥಾನಕ್ಕೆ ಭೇಟಿ ನೀಡಿ, ನಡೆಯುತ್ತಿರುವ ಅಂತಿಮ ಕಾಮಗಾರಿಗಳ ಪ್ರಗತಿಯನ್ನು ವೀಕ್ಷಿಸಿದರು.

S.N.Chennabasappa ಭೇಟಿಯ ಸಂದರ್ಭದಲ್ಲಿ ಸ್ಥಳೀಯ ಪ್ರಮುಖರು, ಕಾರ್ಯಕರ್ತರು ಹಾಗೂ ಸ್ಥಳೀಯ ನಿವಾಸಿಗಳು ಉಪಸ್ಥಿತರಿದ್ದರು.

University of Agricultural and Horticultural Sciences ನವೆಂಬರ್ 7 ರಿಂದ 10 ವರೆಗೆ ಕೃಷಿ- ತೋಟಗಾರಿಕೆ ಮೇಳ-2025 ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಕಾರ್ಯಕ್ರಮ

0

University of Agricultural and Horticultural Sciences ಕೆಳದಿ ಶಿವಪ್ಪನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಹಾಗೂ ಕೃಷಿ ಸಂಬಂಧಿತ ಅಭಿವೃದ್ಧಿ ಇಲಾಖೆಗಳ ಸಹಯೋಗದೊಂದಿಗೆ ನ.07 ರಿಂದ 10ರವರೆಗೆ ಕೃಷಿ ಮಹಾವಿದ್ಯಾಲಯ, ನವಿಲೆ ಆವರಣ, ಶಿವಮೊಗ್ಗ ಇಲ್ಲಿ ಕೃಷಿ -ತೋಟಗಾರಿಕೆ ಮೇಳ-2025ವನ್ನು “ಸಹಕಾರ ಕೃಷಿಯಿಂದ ಸುಸ್ಥಿರ ಕೃಷಿ” ಎಂಬ ಘೋಷವಾಕ್ಯದೊಂದಿಗೆ ಆಯೋಜಿಸಿದೆ.
ಆಯುಕ್ತರು ಹಾಗೂ ನಿರ್ದೇಶಕರು, ಕೃಷಿ ಇಲಾಖೆ ಬೆಂಗಳೂರು, ಬೆಂಗಳೂರು ತೋಟಗಾರಿಕೆ ಇಲಾಖೆ, ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ, ಮೀನುಗಾರಿಕೆ ಇಲಾಖೆ, ನಿರ್ದೇಶಕರು ರೇಷ್ಮೆ ಇಲಾಖೆ, ಕೃಷಿ ಮಾರುಕಟ್ಟೆ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ನಿರ್ದೇಶಕರುಗಳು, ಬೆಂಗಳೂರು ಅರಣ್ಯ ಇಲಾಖೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಹಾಗೂ ಕೆ.ಶಿ.ನಾ.ಕೃ ಮತ್ತು ತೋ ವಿ.ವಿಶ್ವವಿದ್ಯಾಲಯದ ಗೌರವಾನ್ವಿತ ಕುಲಪತಿಗಳು, ವ್ಯವಸ್ಥಾನಾ ಮಂಡಳಿ ಸದಸ್ಯರು ಹಾಗೂ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿರಲಿದ್ದಾರೆ.
University of Agricultural and Horticultural Sciences ಈ ಮೇಳದಲ್ಲಿ ತಾಂತ್ರಿಕ ಸಮಾವೇಶಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದ್ದು, ರೈತರು, ರೈತ ಮಹಿಳೆಯರು, ಕೃಷಿ ಕಾರ್ಮಿಕರು, ನಾಗರೀಕರು, ವಿದ್ಯಾರ್ಥಿಗಳು, ವಿಸ್ತರಣಾ ಕಾರ್ಯಕರ್ತರು ಹಾಗೂ ಗ್ರಾಮೀಣ ಅಭಿವೃದ್ಧಿಗೆ ಸಂಬಂಧಿಸಿದ ಎಲ್ಲಾ ಅಧಿಕಾರಿಗಳು ಭಾಗವಹಿಸುವಂತೆ ಕೋರಲಾಗಿದೆ.

Sri Shivaganga Yoga Center ಶಿವಮೊಗ್ಗ ಜಿಲ್ಲೆ ಭವಿಷ್ಯದಲ್ಲಿ ಭಾರತದ ಯೋಗಜಿಲ್ಲೆಯಾಗಿ ಹೊರಹೊಮ್ಮಲಿದೆ- ಯೋಗಿ ದೇವರಾಜ್ ಗುರೂಜಿ

0

Sri Shivaganga Yoga Center ಶಿವಮೊಗ್ಗ ಜಿಲ್ಲೆಯ ಎಲ್ಲ ತಾಲೂಕು ಹಾಗೂ ಶಿವಮೊಗ್ಗ ನಗರದಲ್ಲಿ ನಡೆಯುತ್ತಿರುವ ಯೋಗ ಚಟುವಟಿಕೆಗಳನ್ನು ಗಮನಿಸಿದರೆ ಭವಿಷ್ಯದಲ್ಲಿ ಶಿವಮೊಗ್ಗ ಜಿಲ್ಲೆಯು ಭಾರತದಲ್ಲಿ ಯೋಗ ಜಿಲ್ಲೆಯಾಗಿ ಗುರುತಿಸಿಕೊಳ್ಳಲಿದೆ ಎಂದು ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಹಾಲಿಸ್ಟಿಕ್, ಆರೋಗ್ಯ ಸಂಸ್ಥೆ ಅಧ್ಯಕ್ಷ, ಯುಎಸ್‌ಎ ಫ್ಲೋರಿಡಾದ ಯೋಗ ಯುನಿವರ್ಸಿಟಿ ಆಫ್ ದ ಅಮೆರಿಕಾಸ್ ಉಪಕುಲಪತಿ ಡಾ. ಯೋಗಿ ದೇವರಾಜ್ ಗುರೂಜಿ ಹೇಳಿದರು.

ಕಲ್ಲಹಳ್ಳಿ ವಿನೋಬನಗರದ ಶ್ರೀ ಶಿವಗಂಗಾ ಯೋಗ ಕೇಂದ್ರದಲ್ಲಿ ಯೋಗ ಪ್ರಶಿಕ್ಷಣಾರ್ಥಿಗಳ ತರಬೇತಿ ಮತ್ತು ಪುನಶ್ಚೇತನ ಶಿಬಿರದಲ್ಲಿ ಉಪನ್ಯಾಸ ನೀಡಿದ ಅವರು, ಡಿಸೆಂಬರ್ 6 ಮತ್ತು 7ರಂದು ಬೆಂಗಳೂರಿನಲ್ಲಿ ನಡೆಯಲಿರುವ ವಿಶ್ವ ಯೋಗ ಶೃಂಗ ಸಭೆ 2025ರಲ್ಲಿ ಶಿವಮೊಗ್ಗ ಜಿಲ್ಲೆಯ ಯೋಗಾಸಕ್ತರು ಪಾಲ್ಗೊಳ್ಳಬೇಕು ಎಂದು ತಿಳಿಸಿದರು.

ಯೋಗ ಸಂಸ್ಥೆಗಳ ನಡುವೆ ಸಾಮರಸ್ಯ ಹೊಂದಾಣಿಕೆಯಿಂದ ಯೋಗವನ್ನು ಮನ ಮನೆಗಳಿಗೆ ತಲುಪಿಸಿ ಆರೋಗ್ಯವಂತ ಸಮಾಜ ನಿರ್ಮಿಸಲಾಗುತ್ತಿದೆ. ಶಿವಮೊಗ್ಗ ಯೋಗ ಜಿಲ್ಲೆಯಾಗಿ ಮಾರ್ಪಡಿಸಿ ಶಾಂತಿ ಸಹಬಾಳ್ವೆ ನಡೆಸಲು ಪೂರಕ ವಾತಾವರಣ ನಿರ್ಮಿಸಲಾಗುತ್ತಿದೆ. ಎಲ್ಲ ಯೋಗ ಸಂಸ್ಥೆಯವರು ಈ ದೆಸೆಯಲ್ಲಿ ಪ್ರಯತ್ನ ನಡೆಸಬೇಕು ಎಂದು ತಿಳಿಸಿದರು.

ಶ್ರೀ ಶಿವಗಂಗಾ ಯೋಗ ಕೇಂದ್ರದ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅವರು ಯೋಗ ಕ್ಷೇತ್ರಕ್ಕೆ ಸಲ್ಲಿಸಿರುವ ಸೇವೆಯನ್ನು ಪರಿಗಣಿಸಿ ಯೋಗ ಯೂನಿವರ್ಸಿಟಿ ಆಫ್ ದಿ ಅಮೆರಿಕಾಸ್ ನಿಂದ ಗೌರವ ಡಾಕ್ಟರೇಟ್ ಪದವಿ ಪ್ರಧಾನ ಮಾಡಲಿದೆ ಎಂದರು.

Sri Shivaganga Yoga Center ಡಾ. ದಕ್ಷಿಣಮೂರ್ತಿ ಅವರು ಆಕ್ಯೂಪ್ರೆಷರ್ ಮತ್ತು ಹೋಲಿಸ್ಟಿಕ್ ಹೆಲ್ತ್ ಮೂಲಕ ಅನೇಕ ದೈಹಿಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವನ್ನು ತಿಳಿಸಿದರು. ಡಾ. ವಿ.ಬಿ.ನಾಗೇಶ್ ಅವರು ವಿಶ್ವ ಯೋಗ ಶೃಂಗಸಭೆ 2025ರ ವಿವರ ನೀಡಿದರು.

ಇದೇ ಸಂದರ್ಭದಲ್ಲಿ ಎಲ್ಲಾ ಯೋಗ ಶಿಕ್ಷಕರಿಗೆ ಗೌರವ ಸಮರ್ಪಣೆ ಮಾಡಲಾಯಿತು. ಡಾ. ಲಕ್ಷ್ಮೀ ನಾಗರಾಜ್, ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ, ಕೈಗಾರಿಕೋದ್ಯಮಿ ಹಾಲಪ್ಪ, ಜಿ.ವಿಜಯಕುಮಾರ್, ವಿಜಯ ಬಾಯರ್, ಜಗದೀಶ್, ಜಿ ಎಸ್ ಓಂಕಾರ ಇದ್ದರು.