Friday, February 13, 2026
Friday, February 13, 2026
Home Blog Page 110

Kannada Rajyotsava 2025 ಎಪ್ಪತ್ತು ಜನ ಸಾಧಕರಿಗೆ ಸರ್ಕಾರದಿಂದ ರಾಜ್ಯೋತ್ಸವ ಸನ್ಮಾನ.

0

Kannada Rajyotsava 2025 70ನೇ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶಿವರಾಜ್ ಎಸ್.ತಂಗಡಗಿ ಅವರು ವಿವಿಧ ಕ್ಷೇತ್ರದಲ್ಲಿ ಆಯ್ಕೆಯಾಗಿರುವ 70 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದರು.

Gangadharendra Saraswati Swamiji ಸೊರಬದಲ್ಲಿ ಭಗವದ್ಗೀತಾ ಅಭಿಯಾನ ಸಮಿತಿ ಸಭೆಯಲ್ಲಿ ಶ್ರೀ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ.

0

Gangadharendra Saraswati Swamiji ಸೊರಬ ತಾಲ್ಲೂಕು ಭಗವದ್ಗೀತಾ ಅಭಿಯಾನ ೨೦೨೫ ರ ಸಮಿತಿಯವರು ಹಾಗೂ ಪ್ರಶಿಕ್ಷಣ ಮಾತೆಯರು, ಸರ್ವ ಸಮಾಜದವರು , ಸಂಘ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನಾ ಸಭೆ ಉದ್ಘಾಟಿಸಿ ಆಶೀರ್ವಚನ ನೀಡಿದರು.
ಈ ಸಭೆಗೆ ಸಕಾಲದಲ್ಲಿ ಆಗಮಿಸಿ ಸಹಕರಿಸಿದ ಸರ್ವರಿಗೂ ಹಾಗೂ ಪ್ರಶಿಕ್ಷಣ ತರಬೇತಿ ಮಾತೆಯರಿಗೂ, ಸಮಿತಿ ಪದಾಧಿಕಾರಿಗಳು ಮತ್ತು Gangadharendra Saraswati Swamiji ಸದಸ್ಯರುಗಳಿಗೂ, ಎಲ್ಲ ಸಮಾಜದ ಬಂಧು – ಭಗಿನೀಯರಿಗೂ, ಸ್ಥಳ ಅವಕಾಶ ನೀಡಿ ಸಹಕರಿಸಿದ ಟೌನ್ ವೀರಶೈವ ಸಮಿತಿಯವರಿಗೂ, ಪತ್ರಕರ್ತರಿಗೂ ಅನಂತ ಧನ್ಯವಾದಗಳು. ಇನ್ನು ಮುಂದೆ ಇನ್ನೂ ಹೆಚ್ಚಿನ ಸಹಕಾರ ನೀಡಿ ಶ್ರೀ ಕೃಷ್ಣ ಪರಮಾತ್ಮನ ಹಾಗೂ ಶ್ರೀ ಗುರುಗಳ ಕೃಪೆಗೆ ಪಾತ್ರರಾಗಲು ಕೋರುತ್ತೇವೆ ಎಂದು ಅಭಿಯಾನ ಸಮಿತಿಯವರು ವಂದನೆ ಸಲ್ಲಿಸಿದ್ದಾರೆ.

Thirthahalli News ನವೆಂಬರ್ 4 . ಆರಗದಲ್ಲಿ ಪುರಂದರ ಕೀರ್ತನೋತ್ಸವ. ಪೂರ್ವಭಾವಿ ಸಭೆಯಲ್ಲಿ ವಿವಿಧ ಜವಾಬ್ದಾರಿ ಹಂಚಿಕೆ.

0

Thirthahalli News ನವೆಂಬರ್ ೪ ರಂದು ಮಂಗಳವಾರ ತೀರ್ಥಹಳ್ಳಿ ತಾಲ್ಲೂಕಿನ ಆರಗ ಸಹಕಾರ ಸಂಘದ ಭವನದಲ್ಲಿ ಪುರಂದರ ದಾಸರ ಕೀರ್ತನೋತ್ಸವ ಕಾರ್ಯಕ್ರಮ ನಡೆಯಲಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ೩೫ ನೆಯ ವರ್ಷದ ವಾರ್ಷಿಕೋತ್ಸವ ಅಂಗವಾಗಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಪುರಂದರ ದಾಸರ ಕೀರ್ತನೆಗಳನ್ನು ಹಾಡುವ, ವಿಶ್ಲೇಷಣೆ ಮಾಡುವ ಈ ಕಾರ್ಯಕ್ರಮ ಇಡೀ ದಿನ ನಡೆಯಲಿದೆ.
ಕಾರ್ಯಕ್ರಮ ಸಿದ್ದತೆಗಾಗಿ ಪೂರ್ವಭಾವಿ ಸಭೆ ನವೆಂಬರ್ ೧ ರಂದು ಸಂಜೆ ಆರಗದಲ್ಲಿ ನಡೆಯಿತು. ಪೂಜ್ಯ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ, ಮಾಜಿ ಸಚಿವರು, ಶಾಸಕರಾದ ಆರಗ ಜ್ಞಾನೇಂದ್ರ, ಮುಖಂಡರಾದ ಆರ್. ಮದನ್, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ಸಿರಿಬೈಲು ಧರ್ಮೇಶ್, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ, ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿರ್ದೇಶಕ ಕೊಳಿಗೆ ವಾಸಪ್ಪಗೌಡ, ಒಕ್ಕಲಿಗರ ಸಂಘದ ತಾಲ್ಲೂಕು ಅಧ್ಯಕ್ಷರಾದ ಕೃಷ್ಣಮೂರ್ತಿ, ಚಂದ್ರಶೇಖರ ನಲ್ಲಿಗದ್ದೆ, ಎಸ್. ಎನ್. ಮಂಜುನಾಥ, ವಿಷ್ಣುಮೂರ್ತಿ ದಾವಣಿಬೈಲು, ಯಡೂರು ರಾಜಾರಾಮ್, ಸಹನಾ ಉಪೇಂದ್ರ, ಡಾ. ಪ್ರೇಮಚಂದ್ರ, ಶಾಂತಕುಮಾರ್, ರಾಜಶೇಖರ ಬೀಸು, ಮಂಜುನಾಥ ಎಸ್. ಎನ್, ಆರಗ, ಭಾರತಿ ಸುರೇಶ್, ಪ್ರಕಾಶ ಭಟ್, ಸಿ. ಬಿ. ಈಶ್ವರ್, ಎಸ್. ವಿ. ಗುರುರಾಜ್, ಜಗದೀಶ್, ಹರಿಣಾಕ್ಷಿ, ಸುರೇಶ್, ನಟರಾಜ್, ಕೇಶವಮೂರ್ತಿ, ಚಂದ್ರಪ್ಪ ಕೆ. ಆರ್., ಅಮೀಶ್,ತಾ. ಕಸಾಪ ಅಧ್ಯಕ್ಷರಾದ ಟಿ. ಕೆ. ರಮೇಶ್ ಶೆಟ್ಟಿ, ಡಾ. ಶ್ರೀಪತಿ ಹಳಗುಂದ, ರಾಜಾರಾಮ್ ಯಡೂರು, ಅಂಬಳಿಕೆ ಗಿರೀಶ್ ಸೇರಿದಂತೆ ಹಲವರು ಭಾಗವಹಿಸಿ ವಿವಿಧ ಜವಾಬ್ದಾರಿಗಳನ್ನು ಹಂಚಿಕೆ ಮಾಡಲಾಯಿತು.
ನವೆಂಬರ್ ೪ ರಂದು ಬೆಳಿಗ್ಗೆ ಸುಮಾರು ೯-೩೦ ರ ಹೊತ್ತಿಗೆ ಪೂಜ್ಯರು ತೀರ್ಥಹಳ್ಳಿಗೆ ಆಗಮಿಸಲಿದ್ದಾರೆ. ಅಲ್ಲಿಂದ ಆರಗದ ವರೆಗೆ ದ್ವಿಚಕ್ರ, ನಾಲ್ಕು ಚಕ್ರ ವಾಹನಗಳ ಜೊತೆಯಲ್ಲಿ ಮೆರವಣಿಗೆ, ಆರಗ ಗೇಟ್ ನಿಂದ ಪೂರ್ಣ ಕುಂಭ, ಮಂಗಳವಾದ್ಯ ಗಳೊಂದಿಗೆ ಮೆರವಣಿಗೆ ನಡೆಯಲಿದೆ.
Thirthahalli News ಉದ್ಘಾಟನೆ, ಕೀರ್ತನೋತ್ಸವದ ಕೀರ್ತನ ಗೋಷ್ಠಿ ನಡೆಯಲಿದೆ. ಸಂಜೆ ಕೀರ್ತನೆಗಳನ್ನು ಹಾಡುತ್ತಲೆ ನಮಗೆ ಅರ್ಥವಾಗದ ಒಳಾರ್ಥಗಳನ್ನು ತಿಳಿಸಿ ಕೊಡಲಿದ್ದಾರೆ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನಮಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಡಾ. ನಿರ್ಮಲಾನಂದ ಮಹಾಸ್ವಾಮಿಗಳು.
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಅವರೊಂದಿಗೆ ನಮ್ಮ ಜಿಲ್ಲೆಯ ಪೂಜ್ಯರ ಜೊತೆಯಲ್ಲಿ ಶ್ರೀ ಮಠದ ಪೂಜ್ಯ ಸ್ವಾಮೀಜಿಗಳು ಭಾಗವಹಿಸಲಿದ್ದಾರೆ.
ಕಳೆದ ಒಂದು ವಾರ ಗಳಿಂದ ಶಿವಮೊಗ್ಗ ಶಾಖಾ ಮಠದ ಪೂಜ್ಯರಾದ ಶ್ರೀ ಶ್ರೀ ನಾದಮಯಾನಂದನಾಥ ಸ್ವಾಮೀಜಿ ಅವರು ಆಮಂತ್ರಣ ವಿತರಿಸಿ ಆಹ್ವಾನಿಸಿದ್ದಾರೆ.
ಕಾರ್ಯಕ್ರಮಕ್ಕೆ ಬರುವ ಎಲ್ಲರಿಗೂ ಊಟ, ದೂರದಿಂದ ಬರುವ ಎಲ್ಲರಿಗೂ ವಸತಿ ವ್ಯವಸ್ಥೆ, ಯಶಸ್ವಿಯಾಗಿ ಕಾರ್ಯಕ್ರಮ ನಡೆಯಲು ವಿವಿಧ ಸಮಿತಿಗಳು, ಅವುಗಳ ಜವಾಬ್ದಾರಿ, ಖರ್ಚು ವೆಚ್ಚ ನಿರ್ವಹಿಸಲು ಸ್ವಾಗತ ಸಮಿತಿ. ವ್ಯವಸ್ಥೆ ನಿರ್ವಹಣೆ ಮಾಡಲು ವಿವಿಧ ಸಮಿತಿಗಳು ಅವುಗಳ ಜವಾಬ್ದಾರಿ ಕುರಿತು ಚರ್ಚೆಮಾಡಿ ತೀರ್ಮಾನ ಮಾಡಲಾಯಿತು. ಕೀರ್ತನೋತ್ಸವ ನವೆಂಬರ್ ೪ ನೇ ಮಂಗಳವಾರ ಬೆಳಿಗ್ಗೆ ಯಿಂದ ಸಂಜೆವರೆಗೆ ನಡೆಯಲಿದೆ.
ಎಲ್ಲರೂ ಭಾಗವಹಿಸಲು ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಕೋರಿದ್ದಾರೆ.

VISL Bhadravati ಭದ್ರಾವತಿ ಸೈಲ್- ವಿಐಎಸ್ಎಲ್ ನಲ್ಲಿ ಶೈಕ್ಷಣಿಕ ಸಂಸ್ಥೆಗಳೊಂದಿಗೆ ಕೈಗಾರಿಕೆಗಳ ಕುರಿತು ಸಂವಹನ ಕಾರ್ಯಕ್ರಮ

0

VISL Bhadravati ಅಕ್ಟೋಬರ್ ೩೧, ೨೦೨೫ರಂದು ಕೊಲ್ಲಾಪುರದ ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ೩೨ ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಷನ್ ಎಂಜಿನಿಯರಿಂಗ್ ವಿದ್ಯಾರ್ಥಿಗಳೊಂದಿಗೆ ಕೈಗಾರಿಕೆಗಳ ಕುರಿತು ಸಂವಹನ ಕಾರ್ಯಕ್ರಮದ ಭಾಗವಾಗಿ ಪ್ರೈಮರಿ ಮಿಲ್, ಬಾರ್ ಮಿಲ್, ಹೀಟ್ ಟ್ರೀಟ್‌ಮೆಂಟ್ ಶಾಪ್, ಫೋರ್ಜ್ ಪ್ಲಾಂಟ್ ಮತ್ತು ಮಿಶಿನ್ ಶಾಪ್ ಭೇಟಿನೀಡಿ ತಂತ್ರಜ್ಞರಿಂದ ಮಾಹಿತಿ ಪಡೆದು ನಂತರ ಮಾನವ ಸಂಪನ್ಮೂಲ ಇಲಾಖೆಯ ಅಧಿಕಾರಿಗಳೊಂದಿಗೆ ಸಂವಹನವನ್ನು ನಡೆಸಿದರು.

VISL Bhadravati ಸಂಜಯ್ ಘೋಡಾವತ್ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಮತ್ತು ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಿಗೆ ಒದಗಿಸಿದ ಅವಕಾಶಕ್ಕಾಗಿ ಸೈಲ್ ವಿಐಎಸ್ಎಲ್‌ ಗೆ ಧನ್ಯವಾದ ಅರ್ಪಿಸಿದರು

Karnataka Rajyotsava 2025 ಕರ್ನಾಟಕದ ಸಾಧಕರ ಸಾಧನೆಯನ್ನ ಸ್ಮರಿಸಿ ಭದ್ರಾವತಿ ವಿಐಎಸ್ಎಲ್ ನಲ್ಲಿ ಸಂಭ್ರಮದ ರಾಜ್ಯೋತ್ಸವ.

0

Karnataka Rajyotsava 2025 ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕು ಕಾರ್ಖಾನೆಯಲ್ಲಿ ನವೆಂಬರ್ ೧, ೨೦೨೫ ರಂದು ಕರ್ನಾಟಕ ರಾಜ್ಯೋತ್ಸವವನ್ನು ಕಂಪನಿಯ ಆವರಣದೊಳಗಿರುವ ಫ್ಯಾಕ್ಟರಿ ಮೀಟಿಂಗ್ ಹಾಲ್‌ನಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾರ್ಯಪಾಲಕ ನಿರ್ದೇಶಕರಾದ ಶ್ರೀ ಬಿ.ಎಲ್. ಚಂದ್ವಾನಿ, ಮುಖ್ಯ ಮಹಾಪ್ರಬಂಧಕ (ವರ್ಕ್ಸ್) ಶ್ರೀ ಕೆ.ಎಸ್. ಸುರೇಶ್, ಮಹಾಪ್ರಬಂಧಕರು (ಸಾರ್ವಜನಿಕ ಸಂಪರ್ಕ) ಶ್ರೀ ಎಲ್. ಪ್ರವೀಣ್ ಕುಮಾರ್, ವಿಐಎಸ್‌ಎಲ್ ಕಾರ್ಮಿಕ ಸಂಘದ ಅಧ್ಯಕ್ಷರಾದ ಶ್ರೀ ಜೆ. ಜಗದೀಶ್, ವಿಐಎಸ್‌ಎಲ್ ಅಧಿಕಾರಿಗಳ ಸಂಘದ ಪ್ರಧಾನ ಕಾರ್ಯದರ್ಶಿಯವರಾದ ಶ್ರೀ ಆರ್. ಹರೀಶ್‌ರವರು ಜ್ಯೋತಿ ಬೆಳಗಿಸಿ ತಾಯಿ ಭುವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ತಮ್ಮ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Karnataka Rajyotsava 2025 ಈ ಸಂದರ್ಭದಲ್ಲಿ ಕನಾಟಕ ರಾಜ್ಯ ಮತ್ತು ಸಾಧಕರ ಸಾಧನೆಯನ್ನು ಸಂಕ್ಷಿಪ್ತವಾಗಿ ವಿವರಿಸಲಾಯಿತು. ಕನ್ನಡ ನಾಡು ನುಡಿಯ ಕುರಿತಾದ ರಸಪ್ರಶ್ನೆ ಕಾರ್ಯಕ್ರಮ, ಈ ಸಂದರ್ಭದಲ್ಲಿ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಬಿ.ಎಲ್. ಚಂದ್ವಾನಿ, ಕಾರ್ಯಪಾಲಕ ನಿರ್ದೇಶಕರು ನೆರೆದ ಸಭೀಕರನ್ನುದ್ದೇಶಿ ಮಾತನಾಡಿ, ಕನ್ನಡ ನಾಡು, ನುಡಿ ಸಂಸ್ಕೃತಿಯಬಗ್ಗೆ ಪ್ರಶಂಸಿಸಿ ತಮ್ಮ ಮನದಾಳದ ಇಂಗಿತವನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೆಳಗೆ ತಿಳಿಸಿದ ಕಲಾವಿದರು ವಿವಿಧ ಪ್ರಾಕಾರದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೀಡುವ ಮೂಲಕ ಸಭೀಕರ ಮನಸೂರೆಗೊಂಡರು.

ಕಲಾವಿದರು
ಸಾAಸ್ಕೃತಿಕ ಕಾರ್ಯಕ್ರಮಗಳು
ಮಂಜುಶ್ರೀ & ತ್ರಿವೇಣಿ
ಡಿ.ಎಸ್. ಕರ್ಕಿ ರಚಿಸಿರುವ – ಹಚ್ಚೇವು ಕನ್ನಡದ ದೀಪ
ಮಂಜುಶ್ರೀ
ನಾಡಗೀತೆ ನೂರರ ಸಂಭ್ರಮ
ಮAಜುಶ್ರೀ, ಪ್ರೇಮಾಭಾಯಿ,
ಅಮಿತ & ತ್ರಿವೇಣಿ
ರಾಷ್ಟçಕವಿ ಕುವೆಂಪು ವಿರಚಿತ – ನಾಡಗೀತೆ
ಕುಸುಮ, ರಮ್ಯ, ಅಮೃತ, ಪ್ರೇಮಾಭಾಯಿ & ರಕ್ಷಿತ
ಕನ್ನಡ ಭಾಷೆಯ ಕುರಿತಾದ – ಕಿರು ನಾಟಕ
ತ್ರಿವೇಣಿ
ಹೆಚ್.ಎಸ್. ವೆಂಕಟೇಶ್‌ಮೂರ್ತಿ ರಚಿಸಿರುವ ‘ಹೇಗೆ ನಿನ್ನ ಹುಡುಕಲಿ’
ಕೆ. ಲಕ್ಷö್ಮಣ
ಡಾ| ಕೆ.ಎಸ್.ನಿಸಾರ್ ಅಹಮದ್ ರಚಿತ – ಜೋಗದ ಸಿರಿ ಬೆಳಕಿನಲ್ಲಿ
ಚಂದ್ರಾವತಿ
ನುಡಿ ನಮನ- ಹೆಚ್.ಎಸ್. ವೆಂಕಟೇಶ್‌ಮೂರ್ತಿ ಮತ್ತು ಎಸ್.ಎಲ್.ಬೈರಪ್ಪ
ರಮ್ಯ & ರಕ್ಷಿತ
ಕನ್ನಡ, ಕನ್ನಡ, ಕನ್ನಡವೆನ್ನುಲಿ ಕನ್ನಡ ನಾಡಿನ ಓ ಕಂದ
ಯೋಗೇಶ್ವರಿ
ಕನ್ನಡ ನಾಡು ಚಂದ, ಕನ್ನಡ ಭಾಷೆ ಅಂದ
ಜಗದೀಶ್ ಬಡಿಗೇರ್
ಕನ್ನಡವೇ ನಮ್ಮಮ್ಮ ಅವಳಿಗೆ ಕೈ ಮುಗಿಯಮ್ಮ
ಡಾ|| ಸುಷ್ಮಾ, ಅಪರ್ಣ
ನಾಗರತ್ನ ಡಿ.ಆರ್, ದಿವ್ಯಾ

  • ನಾಟಕ – ಕನ್ನಡ ಭಾಷೆ ಬೆಳವಣಿಗೆ, ಮೈಸೂರು ಸಂಸ್ಥಾನದ ಕೊಡುಗೆ ರಾಜ್ಯೋತ್ಸವದ ಆಚರಣೆ
    ವಸಂತ್ ಬಿ.ಎಸ್
    ಕರುನಾಡ ತಾಯಿ ಸದಾ ಚಿನ್ಮಯಿ
    ದೀಪಕ್
    ಅಂದವೋ ಅಂದವು ಕನ್ನಡ ನಾಡು
    ಫ್ರಾನ್ಸಿಸ್. ಎ.ಜೆ
    ಈ ಕನ್ನಡ ಮಣ್ಣನು ಮರಿಬೇಡ ಓ ಅಭಿಮಾನಿ
    ನಿಶಿತ್ ಮೌರ್ಯ
    ಏನಾಗಲಿ ಮುಂದೆ ಸಾಗು ನೀ
    ಶೋಭ ಕೆ.ಎಸ್
    ರಸಪ್ರಶ್ನೆ ಕಾರ್ಯಕ್ರಮ
    ಮಂಜುನಾಥ.ಆರ್
    ಕಾರ್ಯಕ್ರಮದ ನಿರೂಪಣೆ

ಈ ಕಾರ್ಯಕ್ರಮದಲ್ಲಿ ಹಿರಿಯ ಅಧಿಕಾರಿಗಳಾದ ಶ್ರೀ ಮುತ್ತಣ್ಣ ಸುಬ್ಬರಾವ್, ಮಹಾಪ್ರಬಂಧಕರು (ಪರಿಸರ ನಿರ್ವಹಣಾ ಇಲಾಖೆ), ಶ್ರೀಮತಿ ಶೋಭ ಶಿವಶಂಕರನ್, ಮಹಾಪ್ರಬಂಧಕರು (ಹಣಕಾಸು ಮತ್ತು ಲೆಕ್ಖ), ಶ್ರೀ ರಘುನಾಥ್ ಅಷ್ಟಪುತ್ರೆ, ಮಹಾಪ್ರಬಂಧಕರು (ವಿಜಿಲೆನ್ಸ್), ವಿಐಎಸ್‌ಎಲ್ ಕಾರ್ಮಿಕ ಸಂಘದ ಮತ್ತು ಅಧಿಕಾರಿಗಳ ಸಂಘದ ಅಧ್ಯಕ್ಷರು, ಪದಾದಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರುಗಳು, ಕಾರ್ಮಿಕರು, ಗುತ್ತಿಗೆ ಕಾರ್ಮಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮವನು ವಿಐಎಸ್‌ಎಲ್‌ನ ಸಾರ್ವಜನಿಕ ಸಂಪರ್ಕ ಇಲಾಖೆ ಆಯೋಜಿಸಿತ್ತು.

Karnataka Rajyotsava ಕನ್ನಡ ಕೇವಲ ಭಾಷೆಯಲ್ಲ. ಭಾವನೆಗಳ ಬೆಸುಗೆ-ರೋ.ಕೆ.ಬಿ.ರವಿಶಂಕರ್

0

Karnataka Rajyotsava ೭೦ನೇ ಕನ್ನಡ ರಾಜ್ಯೋತ್ಸವವನ್ನು ರೋಟರಿ ಶಿವಮೊಗ್ಗ ಪೂರ್ವ ಆಂಗ್ಲ ಪ್ರೌಢ ಶಾಲೆಯಲಿ,್ಲ ಅತ್ಯಂತ ಸಂಭ್ರಮದಿಂದ ಆಚರಿಸಲಾಯಿತು.

ಈ ಸಮಾರಂಭವನ್ನು ಉದ್ಘಾಟಿಸಿದ ವ್ಯವಸ್ಥಾಪಕ ಟ್ರಸ್ಟಿ ಶ್ರೀ ಕೆ ಬಿ ರವಿಶಂಕರ್ ಅವರು ಮಾತನಾಡುತ್ತಾ ರಾಜ್ಯೋತ್ಸವ ಎನ್ನುವುದು ಒಂದು ನಾಡಹಬ್ಬವಾಗಿದ್ದು ಕರ್ನಾಟಕ ಏಕೀಕರಣಕ್ಕೆ ಶ್ರಮಿಸಿದ ಶ್ರೀ ಆಲೂರು ವೆಂಕಟರಾಯರು, ಹುಯಲಗೊಳ ನಾರಾಯಣರು, ಬಿ ಎಮ್ ಶ್ರೀಕಂಠಯ್ಯ ಮುಂತಾದ ಮಹಾನೀಯರನ್ನು ಸ್ಮರಿಸುತ್ತಾ ಕರ್ನಾಟಕ ಸರ್ಕಾರವು ನಾಡು ನುಡಿಗಾಗಿ ಶ್ರಮಿಸಿರುವ ೭೦ ಜನ ಸಾಧಕರಿಗೆ ರಾಜ್ಯೊತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.

ಈ ಸಂದರ್ಭದಲ್ಲಿ ಶಿವಮೊಗ್ಗ ಜಿಲ್ಲೆಯ ಸಮಾಜವಾದಿ ಚಿಂತಕ ಶ್ರೀ ಕೊಣಂದೂರು ನಿಂಗಪ್ಪ ಜಾನಪದ ಕಲಾವಿದ ಶ್ರೀ ಠಾಕಪ್ಪ ಕಣ್ಣೂರು ಮತ್ತು ಪ್ರೋ. ರಾಜೇಂದ್ರ ಚೆನ್ನಿ, ಇವರುಗಳಿಗೆ ರಾಜ್ಯೊತ್ಸವ ಪ್ರಶಸ್ತಿ ಲಭಿಸಿದ್ದು ಈ ಪ್ರಶಸ್ತಿಗಳು ಇಡೀ ಜಿಲ್ಲೆಗೆ ಸಂದ ಪ್ರಶಸ್ತಿ ಎಂದರೆ ತಪ್ಪಾಗಲಾರದು ಎಂದು ತಿಳಿಸುತ್ತಾ ಕನ್ನಡ ಕೇವಲ ಭಾಷೆಯಲ್ಲ ಭಾವನೆಗಳ ಬೆಸುಗೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ರೊ. ಎಸ್ ಸಿ ರಾಮಚಂದ್ರ ಇವರು ಮಾತನಾಡುತ್ತಾ ಕನ್ನಡನಾಡಿನಲ್ಲಿ ಕರ್ನಾಟಕವನ್ನು ಆಳಿದ ಅತ್ಯಂತ ಪ್ರಾಚೀನ ರಾಜ ಮನೆತನದಲ್ಲಿ ಕದಂಬ ಗಂಗರು, ರಾಷ್ಟಕೂಟರು, ಚಾಲುಕ್ಯರು, ಶಾತವಾಹನರು, ಹೊಯ್ಸಳರು ಮತ್ತು ಮೈಸೂರಿನ ವಡೆಯರ್ ಮನೆತನದವರು ಹೀಗೆ ಹಲವಾರು ರಾಜಮನೆತನದವರು ಕರ್ನಾಟಕದ ಕಲೆ ಸಾಹಿತ್ಯ ಮತ್ತು ಸಂಸೃತಿಗೆ ಅಪಾರ ಕೊಡುಗೆಯನ್ನು ನೀಡುತ್ತಾರೆ ಈ ಎಲ್ಲಾ ರಾಜ ಮನೆತನಗಳು ಕನ್ನಡ, ಕನ್ನಡದ ಭಾಷೆ, ಮತ್ತು ನಾಡಿನ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದರು, ಈ ಎಲ್ಲಾ ರಾಜಮನೆತನಗಳು ಕಲೆ ಮತ್ತು ಸಂಗೀತದ ಜೊತೆಗೆ ಸಾಹಿತ್ಯಕ್ಕೆ ಆದ್ಯತೆಯನ್ನು ಕೊಟ್ಟಿರುವ ಕಾರಣದಿಂದಲೇ ಪಂಪ ರನ್ನ ಜನ್ನ ಪೊನ್ನ ಮುಂತಾದ ಮಹಾಕವಿಗಳಿಗೆ ಆಶ್ರಯದಾತರಾಗಿದ್ದು ಕಾವ್ಯದ ರಚನೆಗೆ ಇವರುಗಳು Karnataka Rajyotsava ಪ್ರೇರಣೆಯಾಗಿದ್ದರೂ ಎಂದರೆ ಅತಿಶಯೋಕ್ತಿಯಲ್ಲ, ಪ್ರಾಚೀನ ಕನ್ನಡ ಸಾಹಿತ್ಯ , ನಡುಗನ್ನಡ ಮತ್ತು ಆದುನಿಕ ಕನ್ನಡದ ಶ್ರೀಮಂತ ಪರಂಪರೆಯ ಕಾರಣದಿಂದಾಗಿಯೇ ಕನ್ನಡಕ್ಕೆ ೮ ಜ್ಣಾನ ಪೀಠಪ್ರಶಸ್ತಿಗಳು ಅಭಿಸಿರುತ್ತವೆಂದು ತಿಳಿಸಿದರು. ರಾಜ್ಯೊತ್ಸವದ ಸಂದರ್ಭದಲ್ಲಿ ಮಾತ್ರ ಕನ್ನಡ ಅಭಿಮಾನ ತೋರದೆ ಪ್ರತಿ ದಿನವೂ ಕರ್ನಾಟಕದ ರಾಜ್ಯ ಭಾಷೆಯಾದ ಕನ್ನಡವನ್ನು ಉಳಿಸಿ ಬೆಳೆಸುವುದನ್ನು ರೂಢಿಸಿಕೊಳ್ಳಬೇಕೆಂದು ಕರೆನೀಡಿದರು.
ಈ ಸಮಾರಂಭದಲ್ಲಿ ರೊ. ವಿಜಯಕುಮಾರ್, ರೊ. ಮಂಜುನಾಥ ಎನ್ ಬಿ ರೊ. ಮನೋಹರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ನಾಡುನುಡಿ ಬಗ್ಗೆ ಶ್ರಮಿಸಿದವರನ್ನು ಶ್ಲಾ಼ಘಿಸಿದರು. ಕರ‍್ಯಕ್ರಮದಲ್ಲಿ ೮ನೇ ಮತ್ತು ೯ನೇ ತರಗತಿ ಮಕ್ಕಳು ರಾಜ್ಯೋತ್ಸವಕ್ಕೆ ಸಂಬಂಧಿಸಿದ ನೃತ್ಯವನ್ನು ಪ್ರದರ್ಶಿಸಿ ರಾಜ್ಯೋತ್ಸವದ ಮೆರಗನ್ನು ಹೆಚ್ಚಿಸಿರುತ್ತಾರೆ.
ಸಮಾರಂಭದಲ್ಲಿ ರೋಟರಿ ಶಾಲೆಯ ಪ್ರಾಂಶುಪಾಲರಾದ ಶ್ರೀ ಸರ‍್ಯನಾರಾಯಣ ಇವರು ಉಪಸ್ಥಿತಿರಿದ್ದು, ಪ್ರಸ್ತಾವಿಕವಾಗಿ ಶ್ರೀಮತಿ ಪ್ರತಿಮಾ ಅವರು ಮಾತನಾಡಿದ್ದು , ಕಾರ್ಯಕ್ರಮವನ್ನು ಶ್ರೀಮತಿ ಕಾವ್ಯರವರು ನಿರೂಪಿಸಿದ್ದು, ಶ್ರೀಮತಿ ಸುಜಾತ ರವರ ವಂದನಾರ‍್ಪಣೆಯೊಂದಿಗೆ ಕಾರ‍್ಯಕ್ರಮವನ್ನು ಮುಕ್ತಾಯಗೊಳಿಸಿದರು

Shimoga News ಮುಟ್ಟಿನ ಸಮಯದ ರಜೆ ನಿರ್ಧಾರಮಾಡಿ ಕ್ರಮ ಜಾರಿಗೊಳಿಸಿದ ಸರ್ಕಾರದ ನಿರ್ಧಾರ ಸ್ವಾಗತಾರ್ಹ- ಡಾ.ಟಿ.ನೇತ್ರಾವತಿ.

0

Shimoga News ರಾಜ್ಯ ಸರ್ಕಾರ ಮುಟ್ಟಿನ ರಜೆ ನಿರ್ಧಾರ ತೆಗೆದುಕೊಂಡಿರುವುದು ಕೃತಜ್ಞತೆಯ ಹೆಜ್ಜೆಯಾಗಿದೆ ಎಂದು ಜಿಲ್ಲಾ ಒಕ್ಕಲಿಗರ ಸಂಘದ ಕಾರ್ಯದರ್ಶಿ ಡಾ. ಟಿ .ನೇತ್ರಾವತಿ ಹೇಳಿದ್ದಾರೆ.

ಸರ್ಕಾರದ ನಿರ್ಧಾರ ನಿಜಕ್ಕೂ ಸ್ವಾಗತ ಈಗಾಗಲೇ ಈ ಆದೇಶಕ್ಕೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ ಸರ್ಕಾರಕ್ಕೆ ಅಭಿನಂದನೆಗಳು ಎಂದು ಹೇಳಿದ್ದಾರೆ.
ರಾಜ್ಯದ ಎಲ್ಲಾ ವಲಯಗಳ ಮಹಿಳಾ ಉದ್ಯೋಗಿಗಳಿಗೆ ತಿಂಗಳಲ್ಲಿ ಒಂದು ದಿನ ವೇತನ ಸಹಿತ ರಜೆ ನೀಡುವ ನಿರ್ಧಾರ ನಿಜಕ್ಕೂ ಪ್ರಗತಿಪರ ಹೆಜ್ಜೆಯಾಗಿದೆ ಮುಟ್ಟಿನ ಸಮಯದಲ್ಲಿ ಮಹಿಳೆಯರು ಅನುಭವಿಸುವ ನೋವು ಸಂಕಟ ಹೆಣ್ಣಿಗೆ ಗೊತ್ತು ಇದಕ್ಕೆ ವಿಶ್ರಾಂತಿಯ ಅಗತ್ಯವಿದ್ದು, ಸರ್ಕಾರದ ಈ ನಿರ್ಧಾರದಿಂದ ಮಹಿಳೆಯರಲ್ಲಿ ಸಮಾಧಾನ ತಂದಿದೆ, ಹತ್ತಾರು ಒತ್ತಡಗಳಿಂದ ಹೈರಾಣಗಿ ದುಡಿಯುವ ಮಹಿಳೆಯರು ಈ ನಿರ್ಧಾರ ಕೃತಜ್ಞತೆ ಹೆಜ್ಜೆ ಎಂದಿದ್ದಾರೆ.
Shimoga News ನಮ್ಮ ಮಹಿಳೆಯರು ಈ ರಜವನ್ನು ದುರುಪಯೋಗಪಡಿಸಿಕೊಳ್ಳದಿರಲಿ, ಮತ್ತು ಸರ್ಕಾರದ ಈ ಆದೇಶ ಪರಿಣಾಮಕಾರವಾಗಿ ಅನುಷ್ಠಾನಕ್ಕೆ ಬರ ಬೇಕು. ಎಲ್ಲಾ ಇಲಾಖೆಯ ಮುಖ್ಯಸ್ಥರುಗಳು ಈ ನಿರ್ಧಾರವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಸೂಚನೆ ನೀಡಲಿ. ದುಡಿಯುವ ಮಹಿಳೆಯರಿಗೆ ಇದು ಅನುಕೂಲವಾಗಿದೆ.
ಈ ಆದೇಶ ಅಸಂಘಟಿತ ವಲಯಕ್ಕೂ ಅನ್ವಯವಾಗಲಿ
ಎಂದು ನೇತ್ರಾವತಿ ತಿಳಿಸಿದ್ದಾರೆ.

Yogesh H C ಮನುಕುಲದ ಮಾನವೀಯ ಸೇವೆಗಳಿಗೆ ಶಿವಮೊಗ್ಗ ನಾಗರೀಕರ ಸ್ಪಂದನ ಶ್ಲಾಘನೀಯ- ಹೆಚ್.ಸಿ.ಯೋಗೇಶ್.

0

Yogesh H C ನೂರು ಜನ ರಕ್ತಧಾನಿಗಳೊಂದಿಗೆ 75 ನೆ ಬಾರಿ ರಕ್ತದಾನ ಮಾಡಿ. ಕೃತಜ್ಞತೆ ಸಲ್ಲಿಸಿದ ಹೆಚ್ ಸಿ ಯೋಗೇಶ್
ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನ ಇಂತಹ ಪವಿತ್ರ ಕಾರ್ಯದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಿ ರಕ್ತದಾನ ಮಾಡಿ ಸಮಾಜಮುಖಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡ ರಕ್ತದಾನಿಗಳಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು ಮನುಕುಲದ ಮಾನವೀಯ ಸೇವೆಗಳಿಗೆ ಶಿವಮೊಗ್ಗ ನಗರದ ಸಾರ್ವಜನಿಕರು ಸದಾ ನಮ್ಮ ಜೊತೆ ಕೈಜೋಡಿಸುತ್ತಾರೆ ಎನ್ನುವುದಕ್ಕೆ ಇವತ್ತಿನ ರಕ್ತದಾನ ಶಿಬಿರವೇ ಸಾಕ್ಷಿ . ರಕ್ತದಾನಿಗಳು ಸಮಾಜದಲ್ಲಿ ನಿಜವಾದ ಹೀರೋಗಳು ನಮ್ಮ ಕರೆಗೆ ಸ್ಪಂದಿಸಿ. ನೂರು ಜನರು ರಕ್ತದಾನ ಮಾಡುವುದರ ಮುಖಾಂತರ ಪವಿತ್ರ ದಾನಿಗಳಾಗಿದ್ದಾರೆ ಎಂದು ನುಡಿದ ಅವರು ಮುಂಬರುವ ದಿನಗಳಲ್ಲಿ ಇನ್ನೂ ಹಲವಾರು ಮನುಕುಲದ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು ಇದೇ ಸಂದರ್ಭದಲ್ಲಿ ಎಲ್ಲಾ ರಕ್ತದಾನಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಉಡುಗೊರೆ ಗಳನ್ನು ನೀಡಿ . ಗೌರವಿಸಿದರು ಇದೇ ಸಂದರ್ಭದಲ್ಲಿ ನೂರಕ್ಕೂ ಹೆಚ್ಚು ಬಾರಿ ರಕ್ತದಾನ ಮಾಡಿದ ರಕ್ತದಾನಗಳಿಗೆ ಸನ್ಮಾನಿಸಿ ಶುಭ ಹಾರೈಸಿದರು
Yogesh H C ಕಾರ್ಯಕ್ರಮದಲ್ಲಿ ಶಿವಮೊಗ್ಗ ನಗರ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷರಾದ ಎಂ ಬಿ ಶಿವಕುಮಾರ ಕಾಶಿ ವಿಶ್ವನಾಥ. ಗ್ಯಾರೆಂಟಿ ಸಮಿತಿಯ ಸದಸ್ಯರಾದ ಎಚ್ ಎಮ್ ಮಧು.
ಕೆ .ದೇವೇಂದ್ರಪ್ಪ ಸ್ವಯಂ ಪ್ರೇರಿತ ರಕ್ತದಾನಿಗಳ ಸೇವಾ ಸಂಸ್ಥೆಯ ಅಧ್ಯಕ್ಷರಾದ ಧರಣೇಂದ್ರ ದಿನಕರ್. ಮಾಜಿ ಅಧ್ಯಕ್ಷರಾದ ಜಿ ವಿಜಯಕುಮಾರ್. ರೆಡ್ ಕ್ರಾಸ್ ಸಭಾಪತಿ ಎಸ್ ಪಿ ದಿನೇಶ್
ಗೌರವ ಕಾರ್ಯದರ್ಶಿ. ಡಾ ದಿನೇಶ್. ಕಾಂಗ್ರೆಸ್ ಮುಖಂಡರಾದ .ಎಸ್ ಚಿನ್ನಪ್ಪ ಹಾಗೂ ಹಲವಾರು ಜನ ಕಾಂಗ್ರೆಸ್ ಮುಖಂಡರು ಯೋಗೀಶ್ ಅಭಿಮಾನಿ ಬಳಗದವರು ರಕ್ತದಾನಿಗಳು ಈ ಶಿಬಿರದಲ್ಲಿ ಪಾಲ್ಗೊಂಡಿದ್ದರು

Dr. Dhananjaya Sarji ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ ಮಹಾ ಸಮರ್ಪಣೆ ಕಾರ್ಯಕ್ರಮಕ್ಕೆ ಸರ್ವರೀತಿಯ ಸಹಕಾರ ನೀಡುತ್ತೇನೆ. ಒಟ್ಟಾಗಿ ಯಶಸ್ವಿಗೊಳಿಸೋಣ- ಡಾ.ಧನಂಜಯ ಸರ್ಜಿ.

0

Dr. Dhananjaya Sarji ಶಿವಮೊಗ್ಗದಲ್ಲಿ ನವೆಂಬರ್ 30 ರಂದು ರಾಜ್ಯಮಟ್ಟದ ಭಗವದ್ಗೀತಾ ಅಭಿಯಾನ- 25 ,ಮಹಾಸಮರ್ಪಣೆ
ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಅಭಿಯಾನದ ಅಧ್ಯಕ್ಷ ಅಶೋಕ ಜಿ.ಭಟ್ ಅವರು ಕಾರ್ಯಕ್ರಮಕ್ಕೆ ವಿಧಾನಪರಿಷತ್ತಿನ ಸದಸ್ಯ ಡಾ.ಧನಂಜಯ ಸರ್ಜಿ ಅವರನ್ನ ಭೇಟಿಮಾಡಿದರು.
ಮೊದಲಿಗೆ ಶ್ರೀಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು ಆಶೀರ್ವಾದಪೂರ್ವಕ ಕಳಿಸಿದ್ದ ಶಾಲು ಮತ್ತು ಪುಷ್ಪಹಾರವನ್ನ ಅಶೋಕಭಟ್ ಅವರು ಶಾಸಕ ಡಾ.ಧನಂಜಯ ಸರ್ಜಿ ಅವರಿಗೆ ಭಗವದ್ಗೀತಾ ಅಭಿಯಾನ ಸಮಿತಿ ಪರವಾಗಿ ಅರ್ಪಿಸಿದರು.

ಪೂರ್ವಸಿದ್ಧತೆ ಕುರಿತು
ಸವಿವರವಾಗಿ ಡಾ.ಧನಂಜಯ ಸರ್ಜಿ ಅವರೊಡನೆ ಅಶೋಕ ಭಟ್ ಅವರು ಚರ್ಚಿಸಿದರು.
ನವೆಂಬರ್ 30 ರಂದು ರಾಜ್ಯಮಟ್ಟದ ಕಾರ್ಯಕ್ರಮದಲ್ಲಿ
ಇಪ್ಪತ್ತು ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ.
ಅದರಲ್ಲಿ ಈಗಾಗಲೇ ಗುರುತಿಸಿರುವ ಗುಂಪುಗಳಿಂದ ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಸಾಮೂಹಿಕ ಪಠಣವನ್ನ ಅಂದು ಏರ್ಪಡಿಸಲಾಗಿದೆ.
ಹತ್ತುಸಾವಿರ ಶಾಲಾಮಕ್ಕಳು ಈ ಪಠಣದಲ್ಲಿ ತಮ್ಮ ದನಿಸೇರಿಸಲಿದ್ದಾರೆ.
ಶಿವಮೊಗ್ಗ ಜಿಲ್ಲೆಯ ಬಹುಪಾಲು ಶಾಲಾಮಕ್ಕಳು ಇದರಲ್ಲಿ
ಪಾಲ್ಗೊಳ್ಳಲಿದ್ದಾರೆ.
ಭಗವದ್ಗೀತಾ ಅಭಿಮಾನಿಗಳೂ ಕೂಡ ರಾಜ್ಯ ಎಲ್ಲಾಕಡೆಯಿಂದ ಆಗಮಿಸಿ ಈ ಕಾರ್ಯಕ್ರಮಕ್ಕೆ ಸಾಕ್ಷಿಯಾಗಲಿದ್ದಾರೆ.
ಎಂದು ಅಶೋಕ ಜಿ ಭಟ್ ವಿವರ ಮಾಹಿತಿಯನ್ನ
ಡಾ. ಸರ್ಜಿಯವರ ಗಮನಕ್ಕೆ ತಂದರು.

Dr. Dhananjaya Sarji ಭಗವದ್ಗೀತೆಯ ಹನ್ನೊಂದನೇ ಅಧ್ಯಾಯದ ಮಹಾ ಸಮರ್ಪಣೆ ಶಿವಮೊಗ್ಗದ ಅಲ್ಲಮಪ್ರಭು ಮೈದಾನದಲ್ಲಿ ನಡೆಯುತ್ತಿರುವುದು ಹೆಮ್ಮೆಯ ಸಂಗತಿ.
ಅಪಾರ ಸಂಖ್ಯೆಯಲ್ಲಿ ಶಾಲಾಮಕ್ಕಳು ಆಗಮಿಸುತ್ತಿರುವುದರಿಂದ ಅವರ ಬಸ್ ಪ್ರಯಾಣದ ಬಗ್ಗೆ ಸೂಕ್ತ ಸುರಕ್ಷತೆ ,ಭದ್ರತೆ ಬಗ್ಗೆ ಆದ್ಯ ಗಮನ ನೀಡಬೇಕು. ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡವರಿಗೆ ಶುಚಿಯಾದ ಆಹಾರ, ಕುಡಿಯುವ ನೀರು , ಪೆಂಡಾಲ್, ವೇದಿಕೆ, ಆಸನಗಳ ವ್ಯವಸ್ಥೆ ಬಗ್ಗೆ
ಸೂಕ್ತ ಜಾಗೃತಿವಹಿಸಬೇಕು.
ಎಂದು ಕೂಲಂಕಷವಾಗಿ ಚರ್ಚಿಸಿದರು.
ಈ ಕಾರ್ಯಕ್ರಮ ರಾಜ್ಯಮಟ್ಟದಾದ್ದರಿಂದ
ತಾವು ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಎಂದು ಶಾಸಕ ಡಾ.ಧನಂಜಯ ಸರ್ಜಿ ದೀರ್ಘವಾಗಿ ಮಾತುಕತೆಯಲ್ಲಿ ತಮ್ಮ
ಕಾಳಜಿ ಹಂಚಿಕೊಂಡರು.

ಚರ್ಚೆಯಲ್ಲಿ ಅಭಿಯಾನದ ಕಾರ್ಯದರ್ಶಿ ಟಿ.ಜೆ.ಲಕ್ಷ್ಮೀನಾರಾಯಣ, ನಿಕಟಪೂರ್ವ ಅಧ್ಯಕ್ಷ ಲಕ್ಷ್ಮೀನಾರಾಯಣ ಕಾಶಿ
ನಿವೃತ್ತ ತಹಶೀಲ್ದಾರ್
ಕೆ.ಜಿ.ಮಂಜುನಾಥ ಶರ್ಮ ಹಾಗೂ ಕೆಲೈವ್ ನ್ಯೂಸ್ ಪ್ರಧಾನ ಸಂಪಾದಕ ಡಾ.ಸುಧೀಂದ್ರ. ಉಪಸ್ಥಿತರಿದ್ದರು.

CM Siddharamaiah ಮುಖ್ಯಮಂತ್ರಿಗಳನ್ನ ಭೇಟಿ ಮಾಡಿದ ಒಳ ಮೀಸಲಾತಿ ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ

0

CM Siddharamaiah ಒಳ ಮೀಸಲಾತಿ ಕುರಿತು ಅಲೆಮಾರಿ ಒಕ್ಕೂಟದ ಪದಾಧಿಕಾರಿಗಳ ನಿಯೋಗ ವಿಧಾನ ಸೌಧದ ಸಮಿತಿ ಕೊಠಡಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮನವಿ ಅರ್ಪಿಸಲಾಯಿತು.

ಈ ಸಂದರ್ಭದಲ್ಲಿ, ಸಮಾಜ ಕಲ್ಯಾಣ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ, ಮುಖ್ಯಮಂತ್ರಿಗಳರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಮಾಜಿ ಸಚಿವರಾದ ಎಚ್. ಆಂಜನೇಯ, ವಿವಿಧೆಡೆಗಳಿಂದ ಆಗಮಿಸಿದ್ದ ಅಲೆಮಾರಿ ಸಮುದಾಯಗಳ ಮುಖಂಡರುಗಳು ಉಪಸ್ಥಿತರಿದ್ದರು.