ಶಿವಮೊಗ್ಗ ನಗರದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆ, ಪತಂಜಲಿ ಶ್ರೀ ಕನಕದಾಸರ ಅಧ್ಯಯನ ಕೇಂದ್ರ, ಪತಂಜಲಿ ಕರ್ನಾಟಕ ಜನಪದ ಕಲಾಕೇಂದ್ರದ ವತಿಯಿಂದ ಶ್ರೀ ಕನಕದಾಸರ ಜಯಂತ್ಯೋತ್ಸವದ ಈ ಸಂದರ್ಭದಲ್ಲಿ ಶ್ರೀಮತಿ ದಾಕ್ಷಾಯಿಣಿ ಮತ್ತು ರಮೇಶ್ಬಾಬು ಎಸ್.ಆರ್. ಇವರ ಸಹಕಾರ ಮತ್ತು ಸಮಾಜ ಸೇವಾ ಕ್ಷೇತ್ರದಲ್ಲಿ ಇವರನ್ನು ಗುರುತಿಸಿ ಕನಕಶ್ರೀ ಚೇತನಾ ಪತಂಜಲಿ ರತ್ನ ರಾಜ್ಯಮಟ್ಟದ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಗೌರವಾಧ್ಯಕ್ಷ ಎಂ. ಈಶ್ವರಪ್ಪ ನವುಲೆ, ಪತಂಜಲಿ ಜೆ. ನಾಗರಾಜ್, ಬಾಲಪ್ಪ, ಭವಾನಿ ಶಂಕರ್ ರಾವ್, ಪರಿಸರ ರಮೇಶ್ ಮತ್ತು ಸಂಸ್ಥೇಯ ಸದಸ್ಯರು ಇದ್ದರು. ಈ ಸಂದರ್ಭ ದಲ್ಲಿ ವಿವಿಧ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಸನ್ಮಾನಿಸಲಾಯಿತು.
ಪತಂಜಲಿ ಕರ್ನಾಟಕ ಜನಪದ ಕಲಾಕೇಂದ್ರದ ವತಿಯಿಂದ ಶ್ರೀ ಕನಕದಾಸರ ಜಯಂತ್ಯೋತ್ಸವ
Date:
