Saturday, July 4, 2026
Saturday, July 4, 2026

Indian Medical Association ಕೃತಕಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಗಳ ಪೂರಕ ಬಳಕೆಯಿಂದ ರೋಗಿಗಳ ಹಾಗೂ ಸಮಾಜದ ಆರೋಗ್ಯ ಉತ್ತಮಪಡಿಸಬಹುದು: ಪ್ರೊ.ಸಿ.ಎನ್.ಶ್ರೀನಿವಾಸ್

Date:

Indian Medical Association ವೈದ್ಯಕೀಯ ಕ್ಷೇತ್ರದಲ್ಲಿ ಕೃತಕ ಬುದ್ಧಿಮತ್ತೆ (ಎಐ) ಹಾಗೂ ತಂತ್ರಜ್ಞಾನದ ಬೆಳವಣಿಗೆ ವೇಗವಾಗಿ ಸಾಗುತ್ತಿದೆ ಎಂದು ಯುನಿಸ್ಕ್ಯಾನ್ಸ್ ಲ್ಯಾಬ್ ಗ್ರೂಪ್ ಟೆಕ್ನಿಕಲ್ ಅಡ್ವೈಸರ್ ಪ್ರೊ. ಡಾ. ಸಿ.ಎನ್.ಶ್ರೀನಿವಾಸ್ ಹೇಳಿದರು.
ಭಾರತೀಯ ವೈದ್ಯಕೀಯ ಸಂಘ ( ಐಎಂಎ ) ಶಿವಮೊಗ್ಗ ಶಾಖೆ ವತಿಯಿಂದ ಐಎಂಎ ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವೈದ್ಯರ ದಿನಾಚರಣೆಯಲ್ಲಿ ಮಾತನಾಡಿ, ನಿತ್ಯ ಜೀವನದಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆ (ಎಐ & ಎಂಎಲ್ ) ಅನಿವಾರ್ಯ ಆಗುತ್ತಿರುವ ಈ ಸಮಯದಲ್ಲಿ ಹೇಗೆ ವೈದ್ಯಕೀಯ ವಿಜ್ಞಾನ ಅವುಗಳನ್ನು ಪೂರಕವಾಗಿ ಉಪಯೋಗಿಸಿಕೊಂಡು ರೋಗಿಗಳ ಹಾಗೂ ಸಮಾಜದ ಆರೋಗ್ಯವನ್ನು ಉತ್ತಮಪಡಿಸಬಹುದು ಎಂದು ತಿಳಿಸಿದರು.
ವೈದ್ಯರು ಎಐ ಹಾಗೂ ತಂತ್ರಜ್ಞಾನದ ಉಪಯೋಗ ಮತ್ತು ಮಾನವೀಯ ಸೇವೆ ಮಹತ್ವ ಅರಿತುಕೊಳ್ಳಬೇಕು. ತಂತ್ರಜ್ಞಾನದ ಬಳಕೆಯಿಂದ ಸೇವೆ ಒದಗಿಸುವುದು ಮತ್ತಷ್ಟು ಅನುಕೂಲವಾಗಲಿದೆ ಎಂದು ಹೇಳಿದರು.
Indian Medical Association ಐಎಂಎ ಶಿವಮೊಗ್ಗ ಅಧ್ಯಕ್ಷ ಡಾ. ಕೆ.ಆರ್.ರವೀಶ್ ಮಾತನಾಡಿ, ತಂತ್ರಜ್ಞಾನದ ಬಳಕೆಯು ಆರೋಗ್ಯ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆಗಳನ್ನು ತಂದಿದ್ದು, ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ತಿಳಿಸಿದರು.
ವೈದ್ಯರ ದಿನದ ಅಂಗವಾಗಿ ವೈದ್ಯಕೀಯ ಕ್ಷೇತ್ರಕ್ಕೆ ದೀರ್ಘಕಾಲದ ಸೇವೆ ಸಲ್ಲಿಸಿರುವ ಹಿರಿಯ ವೈದ್ಯರಾದ ಡಾ. ಎಸ್. ಲಚ್ಯಪ್ಪ, ಡಾ. ಬಿ. ಪಿ. ವಿಶ್ವನಾಥನ್, ಡಾ. ಎನ್. ಆರ್. ಶ್ರೀಮತಿ, ಡಾ. ಗೀತಾ ಸುಶೀಲ್ ಕುಮಾರ್ ಹಾಗೂ ಡಾ. ಸುಶೀಲ್ ಕುಮಾರ್ ಬಿ. ವಿ. ಅವರನ್ನು ಸನ್ಮಾನಿಸಲಾಯಿತು. ವೈದ್ಯರ ನಿಸ್ವಾರ್ಥ ಸೇವೆಯನ್ನು ಸ್ಮರಿಸಿ, ಸಮಾಜದ ಆರೋಗ್ಯ ರಕ್ಷಣೆಯಲ್ಲಿ ವೈದ್ಯರ ಪಾತ್ರವನ್ನು ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಐಎಂಎ ಸದಸ್ಯರು ಹಾಗೂ ಕುಟುಂಬದವರು ಭಾಗವಹಿಸಿದ್ದರು.
ಐಎಂಎ ಶಿವಮೊಗ್ಗ ಶಾಖೆ ಕಾರ್ಯದರ್ಶಿ ಡಾ. ಕೆ.ಎಸ್.ಶುಭ್ರತಾ, ಖಜಾಂಚಿ ಡಾ. ಎಚ್.ಎಲ್.ಶಶಿಧರ, ಮಹಿಳಾ ಘಟಕದ ಅಧ್ಯಕ್ಷೆ ಡಾ. ಕೌಸ್ತುಭಾ ಅರುಣ್, ಕಾರ್ಯದರ್ಶಿ ಡಾ. ಶ್ವೇತಾ ಬಾದಾಮಿ, ಡಾ. ವಿಜಯಲಕ್ಷ್ಮೀ ರವೀಶ್, ಡಾ. ಅಭಿಲಾಶ್ ರಮೇಶ್ ಇತರರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Shivamogga News ಸೇವಾ ತೆರಿಗೆ: ಹತ್ತುವರ್ಷಗಳು.ಒಂದು ಅವಲೋಕನ.ಲೇ: ಆರ್.ಮನೋಹರ್.

Shivamogga News ಜುಲೈ 1, 2017 ರಂದು ಮಧ್ಯರಾತ್ರಿ ಹಳೆಯ ಸಂಸತ್ತಿನ...