B.Y. Raghavendra ಗೃಹ ವ್ಯವಹಾರಗಳ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಯನ ತಂಡದ ಸದಸ್ಯರಾಗಿ ಸಂಸದ ಬಿ.ವೈ.ರಾಘವೇಂದ್ರ ಪ್ರವಾಸ ಸಿಕ್ಕಿಂ ರಾಜ್ಯ ಕೈಗೊಂಡಿದ್ದರು.
ಸಿಕ್ಕಿಂನ ನಾಥು ಲಾ ಪಾಸ್ ಹಾಗೂ ತ್ಸೋಂಗೋ ಸರೋವರಕ್ಕೆ ಭೇಟಿ ನೀಡಿದ್ದರು.
14,000 ಅಡಿಗೂ ಹೆಚ್ಚಿನ ಎತ್ತರದಲ್ಲಿರುವ ನಾಥು ಲಾ ಪಾಸ್, ಭಾರತದ ಭದ್ರತೆಯ ದೃಷ್ಟಿಯಿಂದ ಅತ್ಯಂತ ಮಹತ್ವದ ಗಡಿ ಪ್ರದೇಶಗಳಲ್ಲಿ ಒಂದಾಗಿದೆ. ಹಿಮಾಲಯದ ಮಡಿಲಿನಲ್ಲಿರುವ ತ್ಸೋಂಗೋ ಸರೋವರ ತನ್ನ ಅದ್ಭುತ ನೈಸರ್ಗಿಕ ಸೌಂದರ್ಯದಿಂದ ಸಿಕ್ಕಿಂನ ಹೆಮ್ಮೆಯ ತಾಣವಾಗಿ ಕಂಗೊಳಿಸುತ್ತದೆ.
ಈ ಸಂದರ್ಭದಲ್ಲಿ ಭಾರತೀಯ ಸೇನೆಯ ಅಧಿಕಾರಿಗಳು ಹಾಗೂ ಯೋಧರೊಂದಿಗೆ ಸಂವಾದ ನಡೆಸಿ, ಗಡಿಭಾಗದ ಭದ್ರತಾ ವ್ಯವಸ್ಥೆ ಹಾಗೂ ಪ್ರತಿಕೂಲ ಹವಾಮಾನದಲ್ಲೂ ದೇಶದ ಗಡಿಯನ್ನು ಅಚಲವಾಗಿ ಕಾಪಾಡುವ ಅವರ ಸೇವೆ ಮತ್ತು ಸವಾಲುಗಳ ಕುರಿತು ಅಧ್ಯಯನ ತಂಡ ಮಾಹಿತಿ ಪಡೆಯಿತು.
B.Y. Raghavendra ತಮ್ಮ ಜೀವವನ್ನೇ ಪಣಕ್ಕಿಟ್ಟು ದೇಶದ ಗಡಿಯನ್ನು ಕಾಯುತ್ತಿರುವ ಭಾರತೀಯ ಸೇನೆಯ ಪ್ರತಿಯೊಬ್ಬ ಯೋಧನಿಗೂ ಹೃತ್ಪೂರ್ವಕ ಕೃತಜ್ಞತೆಗಳು. ಅವರ ಶೌರ್ಯ, ತ್ಯಾಗ ಮತ್ತು ಅಚಲ ಸೇವಾಭಾವವೇ ನಮ್ಮ ರಾಷ್ಟ್ರದ ಭದ್ರತೆಯ ನಿಜವಾದ ಶಕ್ತಿ ಎಂದು ಅಧ್ಯಯನ ತಂಡದ ಪ್ರವಾಸ ಪೂರೈಸಿದ ನಂತರ ಬಿ.ವೈ.ರಾಘವೇಂದ್ರ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು.
