Wednesday, July 1, 2026
Wednesday, July 1, 2026

ಲೆಕ್ಕ ಪರಿಶೋಧಕ ವೃತ್ತಿಯು ಒಂದು ಪವಿತ್ರ ವೃತ್ತಿ-ಕೆ.ಎಂ.ನಾಗರಾಜ್

Date:

ವೃತ್ತಿಯ ಜೊತೆಗೆ ಸಮಾಜಮುಖಿ ಆಗಿ ಸೇವೆ ಸಲ್ಲಿಸುತ್ತಿರುವ ಚಾರ್ಟೆಡ್ ಅಕೌಂಟೆಂಟ್ ಅಕೌಂಟೆಂಟ್ ನಾಗರಾಜ್ ಕೆಎಂ ರವರಿಗೆ.. ರೋಟರಿ ಶಿವಮೊಗ್ಗ ಪೂರ್ವ ಸಂಸ್ಥೆ ವತಿಯಿಂದ. ಆತ್ಮೀಯ ವಾಗಿ ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ 2026 27ನೇ ಸಾಲಿನ ಡಿಕೆ ಶೇಷಗಿರಿ ಅವರು ಮಾತನಾಡುತ್ತ ಲೆಕ್ಕ ಪರಿಶೋಧಕ ವೃತ್ತಿಯು ಒಂದು ಪವಿತ್ರ ವೃತ್ತಿ ಯಾಗಿದ್ದು ಆರ್ಥಿಕ ವಂಚನೆಗಳನ್ನು ತಡೆಗಟ್ಟಿ ದೇಶದ ಬೊಕ್ಕಸಕ್ಕೆ ಆದಾಯ ತರುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನುಡಿದರು. ಸನ್ಮಾನ ಸ್ವೀಕರಿಸಿದ ಕೆ ಎಂ ನಾಗರಾಜ್ ರವರು ಮಾತನಾಡುತ್ತಾ ಜಿಎಸ್‌ಟಿ. ಅನುಷ್ಠಾನಗೊಂಡ ನಂತರದಲ್ಲಿ ಲೆಕ್ಕ ಪರಿಶೋಧಕರ ವೃತ್ತಿಯು ಸಾಕಷ್ಟು ಬದಲಾವಣೆಯಾಗುತ್ತಾ ಸುಧಾರಣೆಯನ್ನು ಕಂಡಿದೆ ಈ ಸಂದರ್ಭದಲ್ಲಿ ನಮ್ಮನ್ನ ಗುರುತಿಸಿ ಗೌರವಿಸಿದ ರೋಟರಿ ಸಂಸ್ಥೆಗೆ ಸದಾ ಚಿರಋಣಿಯಾಗಿರುತ್ತೇನೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಮಾಜಿ ಸಹಾಯಕ ಗೌರ್ನರ್ಜಿ ವಿಜಯಕುಮಾರ್ ಮಾತನಾಡುತ್ತಾ ಲೆಕ್ಕ ಪರಿಶೋಧಕರ ವೃತ್ತಿಯು ಸರ್ಕಾರದ ಖಜಾನೆ ಹೆಚ್ಚಾಗಲು ಒಂದು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನುಡಿದರು. ಕಾರ್ಯಕ್ರಮದಲ್ಲಿ. ಕಾರ್ಯದರ್ಶಿ ಆರ್ ಮನೋಹರ್, ಮಾಜಿ ಅಧ್ಯಕ್ಷರಾದ ಸತೀಶ್ ಚಂದ್ರ ನಿರ್ದೇಶಕರಾದ ಸಿ ಕೆ ವಿಜಯಕುಮಾರ್, ಸಂತೋಷ್ ಕುಮಾರ್, ಡಾಕ್ಟರ್ ಅವಿನಾಶ್, ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related