University of Agricultural Shivamogga ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ, ವಿಸ್ತರಣಾ ನಿರ್ದೇಶನಾಲಯದ, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಶಿವಮೊಗ್ಗದಡಿಯಲ್ಲಿ ದಿನಾಂಕ 30.06.2026 ಮಂಗಳವಾರ ದಂದು ” ಶುಂಠಿ ಬೆಳೆಯ ಸಮಗ್ರ ಕೃಷಿ ” ಕುರಿತ ತರಬೇತಿ ಕಾರ್ಯಕ್ರಮವನ್ನು ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಯಲ್ಲಿ ಆಯೋಜಿಸಲಾಗಿತ್ತು. ಈ ಸದರಿ ತರಬೇತಿಗೆ ರೈತರು ಭಾಗವಹಿಸಿ ತರಬೇತಿಯ ಲಾಭವನ್ನು ಪಡೆದುಕೊಂಡರು.
ಈ ತರಬೇತಿಯಲ್ಲಿ ಡಾ. ರಾಮಕೃಷ್ಣ ಹೆಗಡೆ, ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ರೈತರ ತರಬೇತಿ ಸಂಸ್ಥೆ, ಇರುವಕ್ಕಿ ಇವರು ರೈತರನ್ನು ಸ್ವಾಗತಿಸಿ, ತರಬೇತಿ ಕಾರ್ಯಕ್ರಮದ ಉದ್ಘಾಟನೆ ಮಾಡಿ ರೈತರನುದ್ದೇಶಿಸಿ ಮಾತನಾಡಿ ಈ ತರಬೇತಿಯಿಂದ ಇನ್ನು ಹೆಚ್ಚಿನ ಲಾಭವನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು.
University of Agricultural Shivamogga ಈ ತರಬೇತಿ ಕಾರ್ಯಕ್ರಮಕ್ಕೆ ಸಂಪನ್ಮೂಲ ವ್ಯಕ್ತಿಗಳಾಗಿ ಡಾ. ರವಿ ಸಿ.ಎಸ್. , ಸಹ ಪ್ರಾಧ್ಯಾಪಕರು (ತೋಟಗಾರಿಕೆ) “ಶುಂಠಿ ಬೆಳೆಯ ತಳಿಗಳು ಮತ್ತು ಆಧುನಿಕ ಕೃಷಿ ತಾಂತ್ರಿಕ ಪದ್ಧತಿಗಳು”, ಡಾ. ನಿರಂಜನ ಕೆ. ಎಸ್. , ಸಹಾಯಕ ಪ್ರಾಧ್ಯಾಪಕರು (ಮಣ್ಣುವಿಜ್ಞಾನ) “ಶುಂಠಿ ಬೆಳೆಯಲ್ಲಿ ಗೊಬ್ಬರ ಮತ್ತು ಪೋಷಕಾಂಶಗಳ ಸಮಗ್ರ ನಿರ್ವಹಣೆ” ಡಾ. ನರಸಿಂಹ ಮೂರ್ತಿ ಹೆಚ್. ಬಿ. , ಸಹಾಯಕ ಪ್ರಾಧ್ಯಾಪಕರು (ಸಸ್ಯರೋಗಶಾಸ್ತ್ರ) “ಶುಂಠಿ ಬೆಳೆಯಲ್ಲಿ ರೋಗಗಳು ಮತ್ತು ನಿರ್ವಹಣಾ ಕ್ರಮಗಳು”, ಶ್ರೀ ಶಿವರಾಜ ಸಹಾಯಕ ತೋಟಗಾರಿಕೆ ಅಧಿಕಾರಿ (ಆನಂದಪುರ) ” ತೋಟಗಾರಿಕೆ ಇಲಾಖೆಯ ವಿವಿಧ ಸೌಲಭ್ಯಗಳು” ಕೊನೆಯದಾಗಿ ಡಾ. ಕೃಷ್ಣ ರೆಡ್ಡಿ ಪಿ. , ಸಹಾಯಕ ಪ್ರಾಧ್ಯಾಪಕರು (ಕೀಟಶಾಸ್ತ್ರ), ರೈತ ತರಬೇತಿ ಸಂಸ್ಥೆ “ಶುಂಠಿ ಬೆಳೆಯಲ್ಲಿ ಕೀಟಗಳು ಮತ್ತು ನಿರ್ವಹಣಾ ಕ್ರಮಗಳು” ಇವರು ರೈತರೊಂದಿಗೆ ಈ ಎಲ್ಲಾ ವಿಷಯದ ಕುರಿತು ಸಂವಾದಿಸಿ ವಂದಿಸಿದರು.
