ದೇಶಕ್ಕಾಗಿ ಹೋರಾಟ ಮಾಡಿದ ಮಹನೀಯರ ಬಗ್ಗೆ ಮಕ್ಕಳಲ್ಲಿ ಜಾಗೃತಿ ಮೂಡಬೇಕು. ನಮ್ಮ ದೇಶದ ಸ್ವಾತಂತ್ರ ಹೇಗೆ ಸಿಕ್ಕಿತು ಎಂಬ ಅರಿವು ಮಕ್ಕಳಲ್ಲಿ ಬರಬೇಕು ಎಂದು ಕದಳಿ ವನಿತಾ ಸಮಾಜದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ನುಡಿದರು.
ಸ್ವತಂತ್ರ ದಿನಾಚರಣೆ ಪ್ರಯುಕ್ತ ನಗರದ ವೀರಶೈವ ಕಲ್ಯಾಣ ಮಂದಿರದಲ್ಲಿ ನಗರದ ಪ್ರೌಢಶಾಲಾ ಮಕ್ಕಳಿಗೆ ದೇಶಭಕ್ತಿ ಗೀತೆ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾಗಿ ವೀರಶೈವ ಕಲ್ಯಾಣ ಮಂದಿರದ ಖಜಾಂಚಿ ಶ್ರೀ ಹೆಚ್. ಎಲ್. ರವಿಯವರು ಆಗಮಿಸಿ. ಮಕ್ಕಳಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ. ಹಾಗೂ ನಮ್ಮ ದೇಶದ ಇತಿಹಾಸದ ಬಗ್ಗೆ ತಿಳಿಸಿದರು ಉಪಾಧ್ಯಕ್ಷೆ ತ್ರಿವೇಣಿ ಗುರು ಶಾಂತಪ್ಪ, ಕಾರ್ಯದರ್ಶಿ ಗೀತಾ ಬಸವ ಕುಮಾರ್, ಖಜಾಂಚಿ ಲಲಿತಾ ಜಿಬಿ, ಸಹಕಾರ್ಯದರ್ಶಿ ಗಾಯಿತ್ರಿ ಮೃತ್ಯುಂಜಯ, ನಿರ್ದೇಶಕರುಗಳಾದ ಅನಸೂಯ ಗಂಗಾಧರಪ್ಪ, ಸಚಿತಾ ಪ್ರಸಾದ್, ಅನ್ನಪೂರ್ಣ ಹಾಲೇಶ್, ಮಾಜಿ ಅಧ್ಯಕ್ಷರು ಗಳಾದ ಶಾಂತ ಆನಂದ್, ಮಣಿ ಎನ್ ಶೆಟ್ಟಿ ಬಸವರಾಜ್ ಅರುಣಾಚಲಶೇಖರ್ ಹಾಗೂ ಸದಸ್ಯರು ಉಪಸ್ಥಿತರಿದ್ದರು
