ಸಂತ ನಾಮದೇವ ಸಿಂಪಿ ಸಮಾಜವು ಶರಾವತಿ ನಗರದ ಶ್ರೀ ವಿಠ್ಠಲ ರಖುಮಾಯಿ ಮಂದಿರದಲ್ಲಿ ದಿನಾಂಕ 25-07-2026 ರ ಶನಿವಾರ “ಆಷಾಢ ಏಕಾದಶಿ” ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆಯಲಿವೆ.
ಅಂದು ಬೆಳಿಗ್ಗೆ ದೇವರಿಗೆ ಅಭಿಷೇಕ, ವಿಶೇಷ ಪೂಜೆಯೊಂದಿಗೆ ಭಜನ್, 9-30ಕ್ಕೆ ಮಹಾಮಂಗಳಾರತಿ ನಡೆಯಲಿದೆ. ಮಧ್ಯಾಹ್ನ 1-00 ರವರೆಗೆ ಪೂಜಾ ಕಾರ್ಯಕ್ರಮಗಳು ನಿರಂತರವಾಗಿ ನಡೆಯಲಿವೆ. ಸಂಜೆ 5-00 ರಿಂದ 7.30 ಘಂಟೆಯವರೆಗೆ ಭಜನೆ, ಸತ್ಸಂಗ, ಸಂತವಾಣಿ, ಪಲ್ಲಕ್ಕಿ ಉತ್ಸವ 8.00 ಘಂಟೆಗೆ ಮಹಾಮಂಗಳಾರತಿ, ನಂತರ ಪ್ರಸಾದ ವಿನಿಯೋಗ ಇರುತ್ತದೆ.
ಸಮಾಜ ಬಾಂಧವರು ಹಾಗೂ ಭಕ್ತ ಮಹಾಶಯರು ಈ ಎಲ್ಲಾ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ದೇವರ ದರ್ಶನ, ಪ್ರಸಾದ ಪಡೆದು ಪುನೀತರಾಗುವಂತೆ ಶ್ರೀ ನಾಮದೇವ ಸಿಂಪಿ ಸಮಾಜದ ಅಧ್ಯಕ್ಷ ರಘುನಾಥ್ಧಾವಸ್ಕರ್ಅವರು ತಿಳಿಸಿದ್ದಾರೆ.
ಶಿವಮೊಗ್ಗ ಶರಾವತಿ ನಗರದ ಶ್ರೀವಿಠ್ಠಲ ದೇಗುಲದಲ್ಲಿ ಆಷಾಢ ಏಕಾದಶಿ
Date:
