Wednesday, September 9, 2026
Wednesday, September 9, 2026

ಜುಲೈ 25 ರಂದು”ಬಾಡದಲ್ಲಿ ಮೂಡಿಬಂದ ಕನಕರ ಹೆಜ್ಜೆ ಗುರುತುಗಳು,”ಸ್ಲೈಡ್ಸ್ ಶೋ

Date:

ಸಂಶೋಧನೆ ಮತ್ತು ಅಧ್ಯಯನ ವೇದಿಕೆ, ಶಿವಮೊಗ್ಗ , ಶ್ರೀಗಂಧ ಸಂಸ್ಥೆ ,ಕರ್ನಾಟಕ ಸಂಘ ಇವರ ಸಂಯುಕ್ತ ಆಶ್ರಯದಲ್ಲಿ ಇದೇ ಜುಲೈ 25 ರ ಶನಿವಾರ “ಬಾಡದ ಮಣ್ಣಿನಲ್ಲಿ ಮೂಡಿದ ಕನಕರ ಹೆಜ್ಜೆ ಗುರುತುಗಳು” ಕುರಿತ ವಿಶೇಷ ಸಾಕ್ಷ್ಯ ದೃಶ್ಯಾವಳಿ ಪ್ರದರ್ಶನ ಏರ್ಪಾಡಾಗಿದೆ.
ಸಂಜೆ 5-3೦ ಕ್ಕೆ ಕರ್ನಾಟಕ ಸಂಘ ಭವನದಲ್ಲಿ ಈ ವಿನೂತನ ಕಾರ್ಯಕ್ರಮ ಶಿವಮೊಗ್ಗದ ಇತಿಹಾಸ ಪ್ರಿಯರಿಗೆ ಜ್ಞಾನದ ರಸದೌತಣ ನೀಡಲಿದೆ.

ಸಾಕ್ಷ್ಯ ದೃಶ್ಯಾವಳಿ ಪ್ರದರ್ಶನವನ್ನು (ಸ್ಲೈಡ್ಸ್ ಶೋ) ಇತಿಹಾಸ ಸಂಶೋಧನೆಯ ಹಿರಿಯ ವಿದ್ವಾಂಸ , ವೇದಿಕೆಯ ಅಧ್ಯಕ್ಷ ಡಾ.ಶಾಂತಾರಾಮ ಸಾಮಕ ಅವರು ಸೋದಾಹರಣವಾಗಿ ಪ್ರಸ್ತುತ ಪಡಿಸುವರು.
ಶಿವಮೊಗ್ಗದವರಿಗೆ ಚಿರಪರಿಚಿತರಾಗಿರುವ. ಡಾ.ಶಾಂತಾರಾಮ ಸಾಮಕ ಅವರು ಕರ್ನಾಟಕ ಸರ್ಕಾರದ ಆದೇಶದ ಮೇರೆ ಬಾಡ ಗ್ರಾಮದಲ್ಲಿ
ಈ ಸಂಶೋಧನೆ ಆರಂಭಿಸಿ, ಕನಕದಾಸರ ಅರಮನೆಯನ್ನ ಸ್ಥಳವನ್ನ ಉತ್ಖನನಮಾಡಿ ಯಶಸ್ವಿಯಾಗಿದ್ದಾರೆ.

ಶಿವಮೊಗ್ಗ ಜನತೆಗೆ ಇದೊಂದು ಅಪೂರ್ವ ಮತ್ತು ಹೆಮ್ಮೆಪಡುವ ಸಂಗತಿಯಾಗಿದೆ.

ಪುಟ್ಟ ಸಮಾರಂಭದಲ್ಲಿ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಶ್ರೀ ನಾದಮಾಯಾನಂದ ನಾಥ ಸ್ವಾಮೀಜಿ ದಿವ್ಯ ಸಾನಿಧ್ಯವಹಿಸುವರು.
ಶ್ರೀಗಂಧ ಸಂಸ್ಥೆಯ ಅಧ್ಯಕ್ಷರಾದ ,ಮಾಜಿ ಉಪ ಮುಖ್ಯಮಂತ್ರಿ
ಕೆ.ಎಸ್.ಈಶ್ವರಪ್ಪನವರು , ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಶಂಕರನಾರಾಯಣ ಶಾಸ್ತ್ರಿ, ಕಾರ್ಯದರ್ಶಿ ವಿನಯ್‌ ಉಪಸ್ಥಿತರಿವರು.
ವೇದಿಕೆಯ ಕಾರ್ಯದರ್ಶಿ ದಿಲೀಪ್ ನಾಡಿಗ್ ಮಲೆನಾಡು ಇತಿಹಾಸ ಸಂಶೋಧನಾ ಕ್ಷೇತ್ರದಲ್ಲಿ ವೇದಿಕೆ ಕೈಗೊಂಡಿರುವ ಚಟುವಟಿಕೆಗಳ ಪರಿಚಯಮಾಡಿಕೊಡುವರು.
ಎಲ್ಲರಿಗೂ ಕರ್ನಾಟಕ ಸಂಘದ ಕಾರ್ಯದರ್ಶಿ ವಿನಯ್ ಮತ್ತು ಶ್ರೀಗಂಧ ಸಂಸ್ಥೆಯ ಉಮೇಶ್ ಆರಾಧ್ಯ ಸುಸ್ವಾಗತ ಕೋರಿದ್ದಾರೆ.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...