Shri Kshetra Dharmasthala Rural Development ದಾವಣಗೆರೆ.ಜು. 24. ಆರ್ಥಿಕ ಶಿಸ್ತು ಮಹಿಳೆಯರಲ್ಲಿ ತುಸು ಹೆಚ್ಚು, ಅನವಶ್ಯಕ ವೆಚ್ಚಗಳ ಬಗ್ಗೆ ಅವರು ಯೋಚಿಸುತ್ತಾರೆ ಎಂದು ಹಿರಿಯ ಪತ್ರಕರ್ತ ಡಾ. ಎಚ್ ಬಿ ಮಂಜುನಾಥ ಅಭಿಪ್ರಾಯ ಪಟ್ಟರು.
Shri Kshetra Dharmasthala Rural Development ಅವರಿಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾ ಟ್ರಸ್ಟ್ ವತಿಯಿಂದ ನಗರದ ಶ್ರೀ ಚೌಡೇಶ್ವರಿ ದೇವಸ್ಥಾನ ಸಮುದಾಯ ಭವನದಲ್ಲಿ ಏರ್ಪಾಡಾಗಿದ್ದ ಸಾಮೂಹಿಕ ಶ್ರೀ ಅಷ್ಟಲಕ್ಷ್ಮಿ ಪೂಜಾ ಧಾರ್ಮಿಕ ಸಭಾ ಉಪನ್ಯಾಸ ನೀಡುತ್ತಾ ಸಂಪತ್ತಿನೊಂದಿಗೆ ಜ್ಞಾನವೂ ಇದ್ದಲ್ಲಿ ಸದ್ವಿನಿಯೋಗ ಸಾಧ್ಯ, ಮಹಿಳೆಯರಲ್ಲಿ ಆರ್ಥಿಕ ಶಿಸ್ತು ಹೆಚ್ಚು ಎಂದು ಹಿರಿಯ ಪತ್ರಕರ್ತ ಎಚ್ಪಿ ಮಂಜುನಾಥ ಹೇಳಿದರು. ಸಂಪತ್ತು ಧನಲಕ್ಷ್ಮಿಯಿಂದ ಬಂದರೆ ಜ್ಞಾನ ವಿದ್ಯಾಲಕ್ಷ್ಮಿ ಇಂದ ಬರಬೇಕು, ಇವು ಕೇವಲ ಪೂಜೆ ಇಂದಷ್ಟೇ ಬರುವುದಲ್ಲ, ಪರಿಶ್ರಮವೂ ಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಮಹಿಳೆಯರ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಮೂಲಕ ಸ್ತ್ರೀಯರ ಸ್ವಾವಲಂಬನೆಗೆ ಹೆಚ್ಚಿನ ಪ್ರೋತ್ಸಾಹ ಮಾಡಿಕೊಡುತ್ತಿರುವುದು ಪ್ರಶಂಸಾರ್ಹ ಹಾಗೂ ಅನುಕರಣೀಯ ಎಂದರು. ಅಷ್ಟಲಕ್ಷ್ಮಿಯರ ಸಾಂಕೇತಿಕ ವಿಶೇಷತೆಗಳನ್ನು ಸ್ವಾರಸ್ಯಕರವಾಗಿ ವಿವರಿಸಿದರು.
ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕ ಸಮರ್ಥ್ ಶಾಮನೂರು ಸಭಾ ಕಾರ್ಯಕ್ರಮ ಉದ್ಘಾಟಿಸಿ ಶುಭ ಕೋರುತ್ತಾ ಮಹಿಳೆಯರ ಆರ್ಥಿಕ ಸ್ವಾವಲಂಬನೆಯು ದೇಶದ ಅಭಿವೃದ್ಧಿಗೆ ಪೂರಕ ಎಂದರು.
Shri Kshetra Dharmasthala Rural Development ಯೋಜನಾ ಟ್ರಸ್ಟಿನ ಜಿಲ್ಲಾ ನಿರ್ದೇಶಕ ಎಂ ಲಕ್ಷ್ಮಣ್ ಪ್ರಾಸ್ತಾವಿಕ ನುಡಿಗಳ ನಾಡಿದರು. ಮುಖ್ಯ ಅತಿಥಿಗಳಾಗಿ ಯುಬಿಡಿಟಿ ಕಾಲೇಜಿನ ಪ್ರಾಚಾರ್ಯ ಡಿ ಪಿ ನಾಗರಾಜ್, ಜಿಲ್ಲಾ ಜನಜಾಗೃತಿ ವೇದಿಕೆ ಉಪಾಧ್ಯಕ್ಷ ಅಣಬೇರು ಮಂಜಣ್ಣ, ಸದಸ್ಯ ಹಾಲೇಶ್, ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಶಾರದಾ ಮಾತನಾಡಿದ ನಂತರ ಸಾನ್ನಿಧ್ಯ ವಹಿಸಿದ್ದ ಆವರಗೊಳ್ಳ ಪುರವರ್ಗ ಹಿರೇಮಠದ ಶ್ರೀ ಓಂಕಾರ ಶಿವಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ ಅಷ್ಟಲಕ್ಷ್ಮಿಯರ ಪೂಜೆ ಎಂದರೆ ಅಂತಃಸತ್ವವನ್ನು ಗೌರವಿಸುವುದು, ಭಾವ ಶುದ್ಧಿ, ಮನಃಶುದ್ಧಿ ಇದ್ದಲ್ಲಿ ದೇವರು ಒಲಿಯುತ್ತಾರೆ ವಾಸಿಸುತ್ತಾರೆ ಎಂದರು. ಶಶಿಕಲಾ ನಿರೂಪಿಸಿದರೆ ಟ್ರಸ್ಟಿನ ಯೋಜನಾಧಿಕಾರಿ ನವೀನ್ ಸ್ವಾಗತ ಕೋರಿದರು, ತಿಮ್ಮಪ್ಪ ವಂದನೆ ಸಲ್ಲಿಸಿದರು. ಅಶಕ್ತರಿಗೆ ಗಾಲಿ ಕುರ್ಚಿ ಹಾಗೂ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವೇತನ ವಿತರಿಸಲಾಯಿತು.
