ವೈದ್ಯರ ಸೇವೆ ತುಂಬಾ ಪವಿತ್ರವಾದದ್ದು ಹಾಗೂ ಅವಿಸ್ಮರಣೀಯ ಸಕಾಲದಲ್ಲಿ ಚಿಕಿತ್ಸೆ ಸಿಗದೆ , ಸಾಕಷ್ಟು ಜನ ಸಾವನ್ನಪ್ಪುವ ಪ್ರಕರಣಗಳನ್ನು ನಾವು ನೋಡುತ್ತಾ ಬಂದಿದ್ದೇವೆ ಎಂದ ಅವರು ವೈದ್ಯರ ಸೇವೆಯನ್ನು ನಾವು ಗೌರವಿಸಬೇಕು ಎಂದು ಕದಳಿ ವನಿತಾ ಸಮಾಜದ ಅಧ್ಯಕ್ಷರಾದ ವಾಗ್ದೇವಿ ಬಸವರಾಜ್ ಅವರು ಅಭಿಮತ ವ್ಯಕ್ತಪಡಿಸಿದರು. ಅವರು ವೀರಶೈವ ಕಲ್ಯಾಣ ಮಂದಿರದಲ್ಲಿ ಹಮ್ಮಿಕೊಳ್ಳಲಾದ ವೈದ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು ಶಿವಮೊಗ್ಗ ನಗರದಲ್ಲಿ ಸಾಕಷ್ಟು ಜನ ವೈದ್ಯರು ತಮ್ಮ ವೃತ್ತಿಯೊಂದಿಗೆ ಸಮಾಜ ಮುಖಿ ಸೇವೆ ಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ವೈದ್ಯರುಗಳನ್ನು ಗುರುತಿಸಿ ಗೌರವಿಸುವ ಕೆಲಸವನ್ನು ನಮ್ಮ ಕದಳಿ ವನಿತಾ ಸಮಾಜ ಮಾಡುತ್ತಿದೆ ಎಂದು ನುಡಿದರು. ಇದೇ ಸಂದರ್ಭದಲ್ಲಿ ಹೃದಯ ತಜ್ಞರಾದ ಡಾಕ್ಟರ್ ವಿಜೇತ. ಲ್ಯಾಪ್ರೋಸ್ಕೋಪಿಕ್ ತಜ್ಞರಾದ ಡಾಕ್ಟರ್ ವಿವೇಕ. ಚರ್ಮರೋಗ ತಜ್ಞರಾದ ಡಾಕ್ಟರ್ ಶೃತಿ. ಮಕ್ಕಳ ತಜ್ಞರಾದ ಡಾಕ್ಟರ್ ವಿಶ್ವನಾಥ್
ಡಾಕ್ಟರ್ ಮೇಘನಾ. ಡಾಕ್ಟರ್ ರಕ್ಷಾ ಇವರನ್ನು ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಉಪಾಧ್ಯಕ್ಷರಾದ ತ್ರಿವೇಣಿ ಗುರು ಶಾಂತಪ್ಪ. ಕಾರ್ಯದರ್ಶಿ ಗೀತಾ ಬಸವರಾಜ್.. ಖಜಾಂಚಿ ಲಲಿತಾ ಬಸವನಗೌಡ . ಗಾಯತ್ರಿ ಮೃತ್ಯುಂಜಯ. ಅನುಸೂಯ ಗಂಗಾಧರ್. ಸಚಿತಾ ಪ್ರಸಾದ್ ವಿಜಯ ಜವಳಿ. ಅನ್ನಪೂರ್ಣ ಹಾಲೇಶ್ ಮತ್ತು ಕಾರ್ಯಕಾರಿ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು
ವೈದ್ಯರ ಸೇವೆಯನ್ನ ನಾವು ಗೌರವಿಸಬೇಕು : ವಾಗ್ದೇವಿ ಬಸವರಾಜ್
Date:
