Thursday, September 10, 2026
Thursday, September 10, 2026

ಚಾರಣದಿಂದ ದೇಶದ ವಿವಿಧ ಜನರನಾಡಿ ಮಿಡಿತದ ಅರಿವು- ವೇಣುಗೋಪಾಲ್

Date:

ಜೀವನ ಎಂದರೆ ನಮ್ಮ ಕುಟುಂಬ ಮಾತ್ರವಲ್ಲ, ದೇಶದ ಎಲ್ಲಾ ಪ್ರದೇಶದ ಅರಿವು ಮೂಡಿಸಿಕೊಳ್ಳಲು ಪ್ರವಾಸದಿಂದ ಮಾತ್ರ ಸಾದ್ಯ ಎಂದು ವೇಣುಗೋಪಾಲ್ ರವರು ರೋಟರಿ ಜ್ಯೂಬಿಲಿ ವಾರದ ಸಭೆಯ ಮುಖ್ಯ ಅತಿಥಿಗಳಾಗಿ ಆಗಮಿಸಿ ಮಾತನಾಡುತ್ತಿದ್ದರು.
ಅತ್ಯಂತ ಕಡಿಮೆ ಖರ್ಚಿನಲ್ಲಿ ಯೂತ್ ಹಾಸ್ಟೆಲ್ಸ್ ಮೂಲಕ ಚಾರಣ ಮಾಡಿ, ದೇಶದ ಎಲ್ಲಾ ಮೂಲೆಗಳನ್ನು ಸುತ್ತಿ ಅಲ್ಲಿಯ ಜನರ ನಾಡಿ ಮಿಡಿತ ಅರಿತುಕೊಳ್ಳಲು ಸಾದ್ಯವಾಗಿದೆ.
ನಾವು ನಮ್ಮ ಕುಟುಂಬ ಎಂದು ಇದ್ದರೆ ಸಾಲದು, ಜೀವನದಲ್ಲಿ ಎಲ್ಲಾತರಹದ ಜನರ ಸಂಪರ್ಕಹೊಂದಿ, ಅವರ ಬವಣೆ, ಅಲ್ಲಿಯ ಪರಿವರ್ಣ ಆಸ್ವಾದಿಸಿ, ಅನುಭವಿಸಿದಾಗ ಮಾತ್ರ ಸಾರ್ಥಕತೆ ದೊರೆಯುತ್ತದೆ. ಪ್ರವಾಸದಲ್ಲಿ ಎಲ್ಲಾ ವಿದದ್ದಲ್ಲಿ ಪರಿವೀಕ್ಷಿಸಬೇಕು, ಈಶಾನ್ಯ ರಾಜ್ಯದ ಜನ ಜೀವನ ಅತ್ಯಂತ ಕಷ್ಟಕರ, ಆರ್ಥಿಕ ಮುಗ್ಗಟ್ಟು ಆದರೂ ಅವರು ಜೀವನದಲ್ಲಿ ಉತ್ತಮ ನಡುವಳಿಕೆ, ನಿಯತ್ತು, ನ್ಯಾಯ, ಕಾನೂನು ಪಾರಿಪಾಲನೆಗಳನ್ನು ನೋಡಿ ನಾವು ಕಲಿಯಬೇಕು.
ಛತ್ತಿಸ್ ಘಡದಲ್ಲಿ ಪ್ರವಾಸದಲ್ಲಿ ನೋಡಿದ ದೃಷ್ಯ, ಕಾಡಿನಲಗಲಿ ಮರದಿಂದ ಹೂ ಬೀಳುತ್ತಿದ್ದವು, ಅವುಗಳನ್ನು ಆರಿಸಿ ಕೊಳ್ಳಲು ಹಲವರಿ ಇದ್ದರು. ಟ್ಯಾಕ್ಸಿ ಚಾಲಕ ಈ ಹೂವಿನಲ್ಲಿ ಸಿಹಿ ಇರುತ್ತದೆ, ಅದರಿಂದ ಸ್ಥಳಿಯ ಸಿಹಿ ಪದಾರ್ಥ ತಯಾರು ಮಾಡುತ್ತಾರೆ ಎಂದರು. ನಾನು ಅದರ ರುಚಿ ನೋಡಿದೆ, ಜೇನಿಗಿಂತ ಸಿಹಿ. ಅದರ ಸವಿ ಸವಿಯಲು ಕಾಡಿನಲ್ಲಿರುವ ಎಲ್ಲಾ ಪ್ರಾಣಿ ಪಕ್ಷಿಗಳು ಬರುವುದನ್ನು ನೋಡುವುದೇ ಒಂದು ಸುಂದರ ಅನುಭವ ಎಂದು ವರ್ಣಿಸಿದರು.
ಚಾರಣದಲ್ಲಿ ಹೊಸಬರ ಪರಿಚಯ ವಾಗುತ್ತದೆ, ಇದರಿಂದ ವ್ಯಾಪಾರ ವ್ಯವಹಾರ ವೃದ್ಧಿಮಾಡಿಕೊಳ್ಳಬಹುದು ಹಾಗೂ ಎಲ್ಲಾ ತರಹದ ಉದ್ಯೋಗಿಗಳ ಪರಿಚಯವಾಗುತ್ತದೆ. ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡುತ್ತಾರೆ ಇದರಿಂದ ಹಲವಾರು ವಿಸ್ಮಯ ಪ್ರದೇಶ ನೋಡ ಬಹುದು. ಕೇರಳದಲ್ಲಿ ಸಮುದ್ರ ಮಟ್ಟಕ್ಕಿಂತ ಕೆಳಗಿನ ಪ್ರದೇಶದಲ್ಲಿ ತಾವರೆ ಹೂವಿನ ವಿಶೇಷತೆ ಅರಿಯಲ್ಲು ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ, ಹಿಮಾಲಯದ ಬೆಟ್ಟ ಗುಡ್ಡದಲ್ಲಿ ನಡೆದಾಡುವುದರಿಂದ ಎಲ್ಲರಲ್ಲಿಯೂ ಆತ್ಮ ಸ್ಥರ್ಯಹೊರಹೊಮ್ಮುತ್ತದೆ ಹಾಗೂ ದೃಡ ಸಂಕಲ್ಪ, ಮನಃಶಾಂತಿ ಹುಮ್ಮಸ್ಸು ಸದಾ ತಮ್ಮೊಂದಿಗೆ ಇರುತ್ತದೆ ಎಂದರು.
ಅಧ್ಯಕ್ಷ ಬಿ.ಎಸ್‌.ಅಶ್ವಥ್ ಸ್ವಾಗತಿಸಿದರು, ಎಸ್.ಎಸ್.ವಾಗೇಶ್ ಪ್ರಾಸ್ಥಾವಿಕ ನುಡಿ ನುಡಿದರು, ವಿನಯ್ ವಂದಿಸಿದರು. ಪ್ರವೀಣ್, ಲಕ್ಷ್ಮೀನಾರಾಯಣ್, ಉಮಾದೇವಿ, ವೆಂಕಟೇಶ್ ನಾಯ್ಕ್, ಉಮೇಶ್, ರಾಜಶೇಖರ್ ಮುಂತಾದವರು ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Madhu Bangarappa ಸರ್ಕಾರದ ಸೇವೆಗಳನ್ನ ಜನರ ಮನೆಬಾಗಿಲಿಗೆ ತಲುಪಿಸುವ ಉದ್ದೇಶದಿಂದ “ಪ್ರಜಾಸೇವೆ “ಜಾರಿಗೆ: ಮಧು ಬಂಗಾರಪ್ಪ

Madhu Bangarappa ಜನಸಾಮಾನ್ಯರ ದಿನನಿತ್ಯದ ಸಮಸ್ಯೆ-ಸವಾಲುಗಳಿಗೆ, ದುಃಖ ದುಮ್ಮಾನಗಳಿಗೆ ತ್ವರಿತವಾಗಿ ಸ್ಪಂದಿಸಿ,...

S.N. Channabasappa ಸಮಾಜಮುಖಿಯಾಗಿ ಕ್ರಿಯಾಶೀಲವಾಗಿರುವ ಆರ್ಯವೈಶ್ಯ ಶ್ರೀರಾಮಸಹಕಾರ ಸಂಘದ ಕಾರ್ಯ ಶ್ಲಾಘನೀಯ : ಎಸ್.ಎನ್.ಚನ್ನಬಸಪ್ಪ

S.N. Channabasappa "ಸಮಾಜದ ಉದಯೋನ್ಮುಖ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವುದು ಹಾಗೂ...

B.Y. Raghavendra ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬಕ್ಕೆ ಸಂಸದ ಬಿ.ವೈ. ರಾಘವೇಂದ್ರ ಅಸಮಾಧಾನ

B.Y. Raghavendra ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನಡೆಯುತ್ತಿರುವ ವಿವಿಧ ರಾಷ್ಟ್ರೀಯ ಹೆದ್ದಾರಿ...