Wednesday, May 13, 2026
Wednesday, May 13, 2026

ಶಿರಾಳಕೊಪ್ಪದಲ್ಲಿ ತೃಪ್ತಿ ಹೆಲ್ತ್‌ಕೇರ್‌ನಿಂದ ಯಶಸ್ವಿಯಾಗಿ ನಡೆದ ತಪಾಸಣೆ ಶಿಬಿರ

Date:

ಶಿರಾಳಕೊಪ್ಪದ ಮೆಡಿಲೆನ್ಸ್ ಡಯೋಗ್ನೋಸ್ಟಿಕ್ಸ್ ಮತ್ತು ಶಿವಮೊಗ್ಗದ ತೃಪ್ತಿ ಹೆಲ್ತ್ ಕೇರ್ ಆಶ್ರಯದಲ್ಲಿ ಉಚಿತ ಮೂತ್ರ ರೋಗ, ಮೂತ್ರಕೋಶ ತಪಾಸಣೆ ಮತ್ತು ಮಾಹಿತಿ ಕಾರ್ಯಕ್ರಮವು ಮೆಡಿಲೆನ್ಸ್ ಡಯೋಗ್ನೋಸ್ಟಿಕ್ಸ್ ಆವರಣದಲ್ಲಿ ಯಶಸ್ವಿಯಾಗಿ ನಡೆಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮೂತ್ರ ರೋಗದ ತಜ್ಞ ಡಾ. ಚಂದ್ರ ಶೇಖರ್ ಅವರು, ಆರೋಗ್ಯವೇ ಭಾಗ್ಯ, ಆರೋಗ್ಯವಿಲ್ಲದಿದ್ದರೆ ಏನನ್ನೂ ಸಾಧಿಸಲು ಸಾಧ್ಯವಿಲ್ಲ ಆದ್ದರಿಂದ ಪ್ರತಿಯೊಬ್ಬರು ಆರೋಗ್ಯದ ಕಡೆ ಹೆಚ್ಚು ಗಮನ ಕೊಡಬೇಕು ಎಂದರು.

ಶಿವಮೊಗ್ಗದ ದುರ್ಗೀಗುಡಿ ಯಲ್ಲಿರುವ ನಮ್ಮ ಸೆಂಟರ್‌ನಲ್ಲಿ ಆರ್ಥಿಕವಾಗಿ ಸಂಕಷ್ಠದಲ್ಲಿರುವವರಿಗೆ ಉಚಿತವಾಗಿ ಮೂತ್ರ ರೋಗ, ಬಿ.ಪಿ. ಕಿಡ್ನಿ, ಮಧುಮೇಹ ಮತ್ತಿತರ ತಪಾಸಣೆಗಳನ್ನು ನಡೆಸಲಾಗುತ್ತಿದ್ದು, ರೋಗಿಗಳು ಇದರ ಸದುಪಯೋಗ ಪಡೆಯಲು ತಿಳಿಸಿದರು.

ತಪಾಸಣೆಯಲ್ಲಿ ೫೬ಕ್ಕೂ ಹೆಚ್ಚು ಜನರು ಇದರ ಪ್ರಯೋಜನ ಪಡೆದರು. ಈ ಪೈಕಿ 17 ಜನರಿಗೆ ತೊಂದರೆಗಳಿದ್ದು, ಅದರಲ್ಲಿ ೮ಜನರಿಗೆ ಶಸ್ತ್ರ ಚಿಕಿತ್ಸೆಗೆ ಅವರು ಸೂಚಿಸಿದರು. ಹೆಲ್ತ್ ಕೇರ್‌ನ ಸುಶ್ಮಾ, ರಕ್ಷಿತಾ ಮತ್ತು ಮಾರ್ಕೇಟಿಂಗ್ ಎಕ್ಸಿಕ್ಯೂಟಿವ್ ಸುನಿಲ್ ಇದ್ದರು.

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

Karnataka Sanga ಕರ್ನಾಟಕ ಸಂಘದಲ್ಲಿ ಇಬ್ಬರು ಹಿರಿಯ ಮಹನೀಯರಿಗೆ ಜೀವಮಾನ ಸಾಧನೆ ಪ್ರಶಸ್ತಿ ಪ್ರದಾನ

Karnataka Sanga ಶಿವಮೊಗ್ಗ ಕರ್ನಾಟಕ ಸಂಘದಲ್ಲಿ ದಿನಾಂಕ 15 ಮೇ 2026ರ...

ಬೆಂಗಳೂರು ಉಪನಗರ ರೈಲು ಯೋಜನೆ: 𝟭𝟱𝟯 𝗠𝗲𝘁𝗿𝗼 𝗖𝗼𝗮𝗰𝗵 ಗಳ ಖರೀದಿಗೆ 𝗜𝗖𝗙 ಜೊತೆ ಒಪ್ಪಂದ, ₹𝟭,𝟱𝟭𝟯.𝟳𝟱 ಕೋಟಿ ಮೊತ್ತದ ಕಾರ್ಯಾದೇಶ

ಬೆಂಗಳೂರು ನಗರದ ಸಂಚಾರ ದಟ್ಟಣೆಗೆ ಮುಕ್ತಿ ನೀಡಲಿರುವ ಬಹುನಿರೀಕ್ಷಿತ ಬೆಂಗಳೂರು ಉಪನಗರ...