Tuesday, August 25, 2026
Tuesday, August 25, 2026

Shivaganga Yoga Center ಪ್ರತಿಯೊಬ್ಬರಿಗೂ ಧ್ಯಾನ ಮತ್ತು ಯೊಇಗ್ದ ಅವಶ್ಯಕತೆ ಇದೆ- ಎಸ್.ಎಸ್.ಜ್ಯೋತಿಪ್ರಕಾಶ್

Date:

Shivaganga Yoga Center ಶಿವಮೊಗ್ಗದ ವಿನೋಬನಗರ -ಕಾಶಿಪುರದ ಕಲ್ಲಳ್ಳಿ ಶ್ರೀ ಶಿವಗಂಗಾ ಯೋಗ ಕೇಂದ್ರದ ಪಿರಮಿಡ್ ನಲ್ಲಿ ಶ್ರೀ ಹಾಲಯ್ಯ ವಿರಕ್ತ ಮಠ ರವರ ನೇತೃತ್ವದಲ್ಲಿ ಜರುಗಿದ ಧ್ಯಾನ ಕಾರ್ಯಕ್ರಮದಲ್ಲಿ ರಾಘವ ಶಾಖೆಯ ಯೋಗ ಅಭ್ಯಾಸಿಗಳೊಂದಿಗೆ ಭಾಗವಹಿಸಿ ಯೋಗ ಕೇಂದ್ರದ ಟ್ರಸ್ಟಿ ಎಸ್.ಎಸ್. ಜ್ಯೋತಿಪ್ರಕಾಶ್ ರವರು ಮಾತನಾಡಿದರು.

ಅನುಭವ ಪಡೆದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸುತ್ತಾ ಪ್ರಸ್ತುತ ಸನ್ನಿವೇಶದಲ್ಲಿ ಪ್ರತಿಯೊಬ್ಬರಿಗೂ ಧ್ಯಾನ ಮತ್ತು ಯೋಗದ ಅವಶ್ಯಕತೆ ಇದೆ. ಮಕ್ಕಳು ವಿದ್ಯಾರ್ಥಿಗಳು ವೃತ್ತಿಪರರು ವ್ಯಾಪಾರಸ್ಥರು ಕೈಗಾರಿಕೋದ್ಯಮಿಗಳು ತಮ್ಮ ಕೆಲಸ ಕಾರ್ಯದ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಂಡು ತಮ್ಮ ಕ್ಷೇತ್ರದಲ್ಲಿ ಯಶಸ್ವಿಯಾಗಲು ಮನಸು ಶಾಂತಿಯಿಂದ ಉಲ್ಲಾಸದಿಂದ ಇರುವುದು ಬಹು ಮುಖ್ಯ. ದಿನನಿತ್ಯವೂ ಧ್ಯಾನ ಯೋಗ ದಲ್ಲಿ ಮನಸ್ಸನ್ನು ತೊಡಗಿಸಿಕೊಳ್ಳಲು ಸ್ವಲ್ಪ ಸಮಯ ಮೀಸಲಾಗಿಡಬೇಕು ಮತ್ತು ಮಕ್ಕಳಿರುವಾಗಲೇ ಈ ಅಭ್ಯಾಸವನ್ನು ರೂಡಿಸುವುದು ಪೋಷಕರ ಕರ್ತವ್ಯ ಎಂದರು.

ಶ್ರೀ ಹಾಲಯ್ಯ ವಿರಕ್ತಮಠ ರವರುಮಾತನಾಡುತ್ತಾ ನೂರಕ್ಕೂ ಹೆಚ್ಚು ಧ್ಯಾನ ಪದ್ಧತಿಗಳಿವೆ, ಆನಪಾನಸತಿ ಧ್ಯಾನದ ಸರಳ ವಿಧಾನವನ್ನು ತಿಳಿಸಿ, ಯೋಗಾಚಾರ್ಯ ಶ್ರೀ ಸಿ. ವಿ.ರುದ್ರಾರಾರಾಧ್ಯರ ನೇತೃತ್ವದಲ್ಲಿ ನಿರ್ಮಾಣವಾಗಿರುವ ಪಿರಮಿಡ್ ಧ್ಯಾನಕ್ಕೆ ಪೂರಕವಾಗಿದೆ ಎಂದು ತಿಳಿಸಿದರು.

Shivaganga Yoga Center ಇದೆ ಸಂದರ್ಭದಲ್ಲಿ ಯೋಗ ಶಿಬಿರದಲ್ಲಿ ಜಿ ವಿಜಯಕುಮಾರ್. ಯೋಗ ಶಿಕ್ಷಕರಾದ ವಿಜಯ ಕೃಷ್ಣ. ಎಚ್ ಕೆ ಹರೀಶ್. ದೀಪಕ್. ಸುಜಾತಾ ಮಧುಕೇಶ್ವರ್. ಗಾಯಿತ್ರಿ. ಶ್ರೀನಿವಾಸ್. ಕಾಟನ್ ಜಗದೀಶ್. ಆನಂದ್. ಸುಬ್ರಮಣಿ. ನರಸೋಜಿ ರಾವ್. ಶಂಕರ್ ಹಾಗೂ ಶಿವಗಂಗಾ ಯುವ ಕೇಂದ್ರದ ಯೋಗ ಶಿಬಿರಾರ್ಥಿಗಳು ಉಪಸ್ಥಿತರಿದರು ಶಿಬಿರಾರ್ಥಿಗಳಿಂದ ಒಂದು ಗಂಟೆಗೂ ಹೆಚ್ಚು ಕಾಲ ಧ್ಯಾನ ಮಾಡಲಾಯಿತು‌

LEAVE A REPLY

Please enter your comment!
Please enter your name here

NEWSLETTER - Sign Up for Free E-News

Popular

More like this
Related

S.N. Channabasappa ಸಾಧಕರನ್ನು ಸನ್ಮಾನಿಸುವ ಕಾರ್ಯ ಶ್ಲಾಘನೀಯ- ಶಾಸಕ ಎಸ್.ಎನ್.ಚನ್ನಬಸಪ್ಪ

S.N. Channabasappa ಪ್ರತಿಭಾ ಪುರಸ್ಕಾರದಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ವಿದ್ಯಾರ್ಥಿಗಳಲ್ಲಿ ಸ್ಪರ್ಧಾ ಮನೋಭಾವ...

ಶಿವಮೊಗ್ಗ ಜಿಲ್ಲಾ ವ್ಯಾಪ್ತಿಯಲ್ಲಿ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗೆ ನೇಮಕಾತಿ ಪ್ರಕಟಣೆ

ಅಂಗನವಾಡಿ ಕಂ ಕ್ರಷ್ ಕೇಂದ್ರಗಳ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಹುದ್ದೆಗೆ ಅರ್ಜಿ...